Author: roovari

ಬೆಂಗಳೂರು : ಯಕ್ಷಗಾನದ ಭಾಗವತರಾಗಿ ತಮ್ಮ ಸೇವೆ ಸಲ್ಲಿಸುತ್ತಿರುವ ಹಾಲಾಡಿ ರಾಘವೇಂದ್ರ ಮಯ್ಯ ಇವರು 2025ರ ಸಾಲಿನ ಕಾಳಿಂಗ ನಾವಡ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಯಕ್ಷಗಾನ, ನಾಟಕವಲ್ಲದೆ ಹಲವಾರು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಬೆಂಗಳೂರಿನ ಕಲಾಕದಂಬ ಆರ್ಟ್ ಸೆಂಟರ್ ಸಂಸ್ಥೆಯು ಯಕ್ಷಗಾನದ ಕಂಚಿನ ಕಂಠದ ಭಾಗವತರೆಂದೇ ಪ್ರಸಿದ್ಧರಾದ ಕರಾವಳಿಯ ಗಾನಕೋಗಿಲೆ ಖ್ಯಾತಿಯ ಭಾಗವತ ಕಾಳಿಂಗ ನಾವಡರ ನೆನಪಿನಲ್ಲಿ ಪ್ರತಿ ವರ್ಷ ಯಕ್ಷಗಾನ ಕ್ಷೇತ್ರದಲ್ಲಿನ ಪ್ರತಿಭಾನ್ವಿತರೋರ್ವರಿಗೆ ಕಾಳಿಂಗ ನಾವಡ ಪ್ರಶಸ್ತಿಯನ್ನು ನೀಡುತಿದೆ. ಪ್ರಶಸ್ತಿಯನ್ನು ದಿನಾಂಕ 12 ಅಕ್ಟೋಬರ್ 2025 ರಂದು ಸಂಜೆ ಬೆಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಯು ಇಪ್ಪತೈದು ಸಾವಿರ ನಗದು, ಬೆಳ್ಳಿ ಫಲಕ, ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆ ಒಳಗೊಂಡಿರುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.

Read More

ಬೆಂಗಳೂರು : ಕಲ್ಪವೃಕ್ಷ ಟ್ರಸ್ಟ್ (ರಿ.) ಇದರ ಸಹಕಾರದೊಂದಿಗೆ ಅಂತರಂಗ ಬಹಿರಂಗ ತಂಡ ಪ್ರಸ್ತುತ ಪಡಿಸುವ ‘ಅನುಗ್ರಹ’ ಪೌರಾಣಿಕ ನಾಟಕದ ಪ್ರದರ್ಶನವನ್ನು ದಿನಾಂಕ 06 ಜುಲೈ 2025ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ಬಸವನಗುಡಿಯ ವಾಡಿಯಾ ಸಭಾಂಗಣ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್)ದಲ್ಲಿ ಆಯೋಜಿಲಾಗಿದೆ. ಈ ನಾಟಕವನ್ನು ಎಚ್.ಎನ್. ರಾಮಕೃಷ್ಣಪ್ಪ ರಚಿಸಿದ್ದು, ಬಾಷ್ ರಾಘವೇಂದ್ರ ನಿರ್ದೇಶನ ಮಾಡಿದ್ದಾರೆ. ಬುಕ್ ಮೈ ಶೋನಲ್ಲಿ ಟಿಕೆಟ್ ಲಭ್ಯವಿದ್ದು, ನೇರ ಬುಕ್ಕಿಂಗ್‌ಗಾಗಿ 8660547776 ಸಂಖ್ಯೆಯನ್ನು ಸಂಪರ್ಕಿಸಬಹುದು. ಅಂತರಂಗ ಬಹಿರಂಗ ತಂಡದ 7ನೇ ನಿರ್ಮಾಣ ‘ಅನುಗ್ರಹ’ ನಾಟಕ. ಈ ಹಿಂದೆ ಸಾಮಾಜಿಕ ನಾಟಕಗಳನ್ನು ನಿರ್ಮಿಸಿ ಪ್ರೇಕ್ಷಕರ ಅಪಾರ ಮೆಚ್ಚುಗೆ ಪಡೆದಿದ್ದ ತಂಡ, ಮೊದಲ ಬಾರಿಗೆ ಪೌರಾಣಿಕ ನಾಟಕವನ್ನು ಪ್ರಸ್ತುತಪಡಿಸುತ್ತಿದೆ. ಈ ನಾಟಕವು ಏಕಲವ್ಯನ ಜೀವನಾಧಾರಿತವಾಗಿದೆ. ರಚನೆಕಾರರು ಈ ನಾಟಕದಲ್ಲಿ ನಾವು ಇಲ್ಲಿಯವರೆವಿಗೂ ಕೇಳಿರುವ ಏಕಲವ್ಯನ ಕಥೆಗಿಂತ ಭಿನ್ನವಾದ ಆಯಾಮವನ್ನು ನೀಡಿದ್ದಾರೆ. ಅದು “ಯಾವುದೇ ಗುರುವು ತನ್ನ ಶಿಷ್ಯರಿಗೆ ವಿದ್ಯೆ ಕರುಣಿಸಿದ ನಂತರ ಶಿಷ್ಯರಲ್ಲಿ ಎಂದೂ ವಿದ್ಯೆಗೇ…

Read More

ಪತ್ರಕರ್ತ, ಲೇಖಕ ಶಿವಾನಂದ ಕರ್ಕಿಯವರು ಸಿಂಗಾಪುರ, ಮಲೇಷಿಯಾ, ಥೈಲ್ಯಾಂಡ್ ನ ತಮ್ಮ ಪ್ರವಾಸಾನುಭವಗಳನ್ನು ಪ್ರಮುಖವಾಗಿ ಹೇಳಲು ಹೊರಟಿರುವ ಈ ಕೃತಿಯ ಶೀರ್ಷಿಕೆ ‘ಗಿರಗಿಟ್ಲೆ’ ಎಂದಿರುವುದೇ ಇದರ ವೈಶಿಷ್ಟ್ಯತೆಗೊಂದು ನಿದರ್ಶನ. ಶೀರ್ಷಿಕೆಯ ಅಡಿಸಾಲು ‘ವಿದೇಶದಲ್ಲೂ ನಾವು ಹೀಗೆ’. ಹಿಂಬದಿ ರಕ್ಷಾಪುಟದಲ್ಲಿ ಹಲವು ದಶಕಗಳ ಹಿಂದೆ ಮಕ್ಕಳಾಟಕ್ಕಾಗಿ ಹಲಸಿನೆಲೆಯಿಂದ ಮಾಡುತ್ತಿದ್ದ ಗಿರಗಿಟ್ಲೆಯ ಚಿತ್ರವೂ ಇದೆ. ವಿದೇಶ ಪ್ರವಾಸಾನಂತರ ಪ್ರವಾಸಾನುಭವಗಳ ಗುಂಗು ತಲೆತುಂಬ ಗಿರಕಿ ಹೊಡೆಯುತ್ತಿದ್ದುದನ್ನು ಲೇಖಕರು ಗಿರಗಿಟ್ಲೆಗೆ ಹೋಲಿಸಿದ್ದಾರೆ. ಚಿಂತಕ ಜಿ.ಎಸ್. ರಾಜೇಂದ್ರರ ಮುನ್ನುಡಿ ಹೊಂದಿರುವ ನೂರಾಎಂಟು ಪುಟಗಳ ಈ ಕೃತಿ ‘ಧ್ವನಿ ಪ್ರಕಾಶನ’ದ ಪ್ರಕಟಣೆ. ಕೊರೋನಾ ಕರಾಳತೆಯ ಫಲಾನುಭವಿಯಾಗಿ ಪಾರ್ಶ್ವವಾಯುವಿಗೆ ತುತ್ತಾಗಿ ವೈದ್ಯರಿಂದ ನಲವತ್ತೆಂಟು ಗಂಟೆ ಏನೂ ಹೇಳಲಾಗದು ಎಂದೂ, ಪ್ರಜ್ಞೆ ಬಂದರೂ ಉಸಿರಾಡುವ ಜೀವಚ್ಛವದಂತಿರಬೇಕಾಗುತ್ತದೆ ಎಂದೂ ಹೇಳಿಸಿಕೊಂಡು, ವೈದ್ಯರ ಊಹೆ ಹುಸಿಯಾಗಿಸಿ ಮರುಹುಟ್ಚು ಪಡೆದ ಕರ್ಕಿಯವರು ಮತ್ತೆ ಬೈಪಾಸ್ ಸರ್ಜರಿಗೆ ಒಳಗಾಗುತ್ತಾರೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಆಘಾತಗಳ‌ ಮೇಲೆ ಆಘಾತಗಳನ್ನೆದುರಿಸಿಯೂ ತಮ್ಮ ಮನೋಬಲದಿಂದಲೇ ಇವೆಲ್ಲಕ್ಕೂ ಸೆಡ್ಡು ಹೊಡೆದು ನವ ಜೀವನಕ್ಕೆ ಮುಖ ಮಾಡಿ…

Read More

ಕಾರ್ಕಳ : ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢ ಶಾಲೆಯಲ್ಲಿ ಈ ಶೈಕ್ಷಣಿಕ ಸಾಲಿನ ಯಕ್ಷ ಶಿಕ್ಷಣವು ದಿನಾಂಕ 30 ಜೂನ್ 2025ರಂದು ಆರಂಭಗೊಂಡಿತು. ಕಾರ್ಕಳದ ಯಕ್ಷ ಕಲಾರಂಗ (ರಿ.) ಸಂಸ್ಥೆಯು ಕಳೆದ 13 ವರ್ಷಗಳಿಂದ ಯಕ್ಷಗಾನ ಕಲೆಗಾಗಿ ತಾಲೂಕಿನ ಆಸಕ್ತಿಯ ವಿದ್ಯಾ ಸಂಸ್ಥೆಗಳಲ್ಲಿ ಉಚಿತವಾಗಿ ಯಕ್ಷ ಶಿಕ್ಷಣ ನೀಡುತ್ತಿದ್ದು, ಹದಿನಾಲ್ಕನೇ ವರ್ಷದ ಪ್ರಸಕ್ತ ಸಾಲಿನಲ್ಲಿ ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಸಹಯೋಗದೊಂದಿಗೆ ಯಕ್ಷಧ್ರುವ ಯಕ್ಷಶಿಕ್ಷಣ ಅಭಿಯಾನ ಕಾರ್ಯಕ್ರಮವು ಪೆರ್ವಾಜೆ ಹೈಸ್ಕೂಲಿನಲ್ಲಿ ಉದ್ಘಾಟನೆಗೊಂಡಿತು. ಫೌಂಡೇಶನ್ನಿನ ಕಾರ್ಕಳ ಘಟಕದ ಸಂಚಾಲಕರಾದ ಪ್ರೊ. ಪದ್ಮನಾಭ ಗೌಡರವರು ಉದ್ಘಾಟಿಸಿ “ಎಲ್ಲಿ ಕಲಾರಾಧನೆ ನಡೆಯುತ್ತದೋ ಅಲ್ಲಿ ಅರಳಿದ ಮನಸ್ಸುಗಳು ಇರುತ್ತದೆ. ಜೊತೆಗೆ ಅರಿಷ್ಡವೈರಗಳು ದೂರವಾಗುತ್ತದೆ. ಆಗ ನಾವು ದೇವತೆಗಳಿಗೆ ಸಮಾನರಾಗುತ್ತೇವೆ” ಎಂದು ಹೇಳಿದರು. ಶಾಲಾಭಿವೃದ್ದಿ ಸಮಿತಿಯ ಉಪಾದ್ಯಕ್ಷೆ ಶ್ರೀಮತಿ ವೀಣಾ ಭಂಡಾರಿ ಅಧ್ಯಕ್ಷತೆ ವಹಿಸಿ “ಯಕ್ಷಗಾನ ಸಂಸ್ಕ್ರತಿಯ ಕಲೆ, ಪರಂಪರೆಯ ಕಲೆ. ಇದನ್ನು ನಾವು ಎಳೆಯ ವಯಸ್ಸಿನ ಮಕ್ಕಳಿಗೆ ಪಾಠದ ಜೊತೆ ಜೊತೆಗೆ ತಿಳಿ ಹೇಳುವುದು…

Read More

ತೆಕ್ಕಟ್ಟೆ: ಯಶಸ್ವೀ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳ ವತಿಯಿಂದ ಯಕ್ಷಗಾನ ಕೇಂದ್ರದ ಗುರುಗಳಾದ ಕೃಷ್ಣಯ್ಯ ಆಚಾರ್ ಬಿದ್ಕಲ್‌ಕಟ್ಟೆ ಇವರಿಗೆ ಅಭಿನಂದನಾ ಸಮಾರಂಭವು ದಿನಾಂಕ 30 ಜೂನ್ 2025ರಂದು ತೆಕ್ಕಟ್ಟೆಯ ಹಯಗ್ರೀವದಲ್ಲಿ ನಡೆಯಿತು. ಸಮಾರಂಭದಲ್ಲಿ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಗುರು ಕೃಷ್ಣಯ್ಯ ಆಚಾರ್ ಬಿದ್ಕಲ್‌ಕಟ್ಟೆ “ಕಲಾವಿದನ ಬದುಕಿನಲ್ಲಿ ಶಿಷ್ಯರಾದವರು ಜನ್ಮ ದಿನವನ್ನು ಹಾರೈಸಿ, ಶ್ಲಾಘಿಸಿದರೆ ಜೀವನ ಸಾರ್ಥಕ. ಈವರೆಗೆ ಸಹಸ್ರ ಸಂಖ್ಯೆಯ ಕಲಾವಿದರನ್ನು ರಂಗಕ್ಕೆ ತರುವ ಪ್ರಯತ್ನ ಮಾಡುತ್ತಿರುವಾಗ ತೆಕ್ಕಟ್ಟೆ ಯಶಸ್ವೀ ಕಲಾವೃಂದದ ಯಕ್ಷಗಾನ ಕೇಂದ್ರ ಅದ್ದೂರಿಯಾಗಿ ಜನ್ಮ ದಿನವನ್ನು ಆಚರಿಸಿರುವುದಕ್ಕಿಂತ ಸಾರ್ಥಕತೆ ಬೇರೇನೂ ಕಾಣೆನು. ಒಂದೇ ಮನೆಯವರಂತೆ ಒಗ್ಗೂಡಿ ಈ ದಿನವನ್ನು ಹಬ್ಬವಾಗಿಸಿ ಹಾರೈಸಿದುದು ಧನ್ಯತೆಯನ್ನು ತಂದಿದೆ” ಎಂದರು. ಪ್ರಾಚಾರ್ಯ ದೇವದಾಸ್ ರಾವ್ ಕೂಡ್ಲಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೋಟ ಸುದರ್ಶನ ಉರಾಳ, ಡಾ. ಗಣೇಶ್ ಯು, ಸುಧಾ ಕದ್ರಿಕಟ್ಟು, ಗಣಪತಿ ಭಟ್, ಶಿವರಾಮ್, ಭರತ್ ಚಂದನ್ ಕೋಟೇಶ್ವರ, ರಾಹುಲ್ ಕುಂದರ್ ಕೋಡಿ, ವೆಂಕಟೇಶ ವೈದ್ಯ ಉಪಸ್ಥಿತರಿದ್ದರು.

Read More

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಏರ್ಪಡಿಸಿದ್ದ ಸಂತ ಶಿಶುನಾಳ ಶರೀಫರ ಜನ್ಮದಿನದ ಕಾರ್ಯಕ್ರಮವು ದಿನಾಂಕ 03 ಜುಲೈ 2025ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು “ಬದುಕಿನ ಹಿರಿಮೆಯನ್ನು ಅರಿತು, ಸಮಾಜದಲ್ಲಿನ ತಾರತಮ್ಯಗಳ ನಿವಾರಣೆಗೆ ಶ್ರಮಿಸಿ ಜಾತಿ ಮತಗಳ ಗಡಿದಾಟಿ ಸಂತಶ್ರೇಷ್ಟ ಎನ್ನಿಸಿ ಕೊಂಡವರು ಸಂತ ಶಿಶುನಾಳ ಶರೀಫರು. ಕಳಸದ ಗುರು ಗೋವಿಂದ ಭಟ್ಟರಿಂದ ಉಪದೇಶವನ್ನು ಪಡೆದುಕೊಂಡು ಎರಡೂ ಧರ್ಮದವರ ವಿರೋಧವನ್ನು ಎದುರಿಸಿ ಜಾತಿ, ಮತಗಳಿಗಿಂತ ‘ಮಾನವ ಧರ್ಮವೇ ಶ್ರೇಷ್ಠ’ ಎಂದು ಬೋಧಿಸಿದರು. ‘ಬೋಧ ಒಂದೇ, ಬ್ರಹ್ಮನಾದ ಒಂದೇ, ಸಾಧನೆ ಮಾಡುವ ಹಾದಿ ಒಂದೇ, ಆದಿ ಪದ ಒಂದೇ – ಶಿಶುನಾಳಧೀಶನ ಭಾಷೆ ಒಂದೇ’ ಎಂದು ಹೇಳಿ ‘ಅನೇಕತೆಯಲ್ಲಿ ಏಕತೆ’ಯನ್ನು ಸಾರಿದರು. ಸಹೋದರತ್ವವನ್ನು ಎತ್ತಿ ಹಿಡದು ಮತೀಯ ಸೌಹಾರ್ದವನ್ನು ತೋರಿಸಿದ ದಾರ್ಶನಿಕರು. ಕಳಸದ ಗುರುಗೋವಿಂದ ಭಟ್ಟರು ಹಾಗೂ ಶಿಶುನಾಳ ಶರೀಫರು. ಹಿಂದೂ ಹಾಗೂ ಇಸ್ಲಾಂ ಧರ್ಮಗಳ ಸಮಾನತೆ, ಸಮನ್ವಯ ಹಾಗೂ…

Read More

ಬೆಳಗಾವಿ : ಬೆಳಗಾವಿಯ ಘಟಪ್ರಭಾ ಕರ್ನಾಟಕ ಆರೋಗ್ಯ ಧಾಮದಲ್ಲಿ ಇಲ್ಲಿನ ಪ್ರಾಥಮಿಕ ಶಾಲಾ ಮಕ್ಕಳು ಮತ್ತು ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿಯ ಉದ್ಘಾಟನಾ ಸಮಾರಂಭವು ದಿನಾಂಕ 02 ಜುಲೈ 2025ರಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಮುಖ್ಯ ಆರೋಗ್ಯ ಅಧಿಕಾರಿ ಡಾ. ಸ್ವಾತಿ ಘನಶ್ಯಾಮ ವೈದ್ಯರು ಮಾತನಾಡಿ “ನಮ್ಮ ಸಂಸ್ಥೆಯ ಹಿರಿಯರ ಸದುದ್ದೇಶದಿಂದ ಗ್ರಾಮೀಣ ಪ್ರದೇಶದಲ್ಲಿ ತುಂಬ ಕಷ್ಟಪಟ್ಟು ಕರ್ನಾಟಕ ಆರೋಗ್ಯಧಾಮ ಆಸ್ಪತ್ರೆ ಕಟ್ಟಿ ಬೆಳೆಸಿದ್ದಾರೆ. ಗ್ರಾಮೀಣ ಬಡವರಿಗೆ ಆಧುನಿಕ ವೈದ್ಯಕೀಯ ಸೌಲಭ್ಯ ಕೈಗೆಟಕುವ ದರದಲ್ಲಿ ದೊರೆಯಬೇಕೆಂಬ ಮಹದಾಸೆಯನ್ನು ಸಾಕಾರ ಮಾಡಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ಪದ್ಮಭೂಷಣ ಡಾ. ಹರ್ಡೀಕರ ಇವರ ಪ್ರಭಾವದಿಂದ ನಮ್ಮ ಸಂಸ್ಥೆಯು ಮಹಾತ್ಮ ಗಾಂಧೀಜಿಯವರ ಆದರ್ಶದೊಂದಿಗೆ ನಡೆಯುವ ಈ ಆರೋಗ್ಯ ಧಾಮದಲ್ಲಿ ಕರಾವಳಿಯ ಗಂಡುಕಲೆಯಾದ ಯಕ್ಷಗಾನ ಕರ್ನಾಟಕದ ಎಲ್ಲಾ ಜಿಲ್ಲೆಯಲ್ಲೂ ಜನಪ್ರಿಯವಾಗಿದೆ. ಹಾಗೆ ಯಕ್ಷಗಾನ ಕಲಾವಿದೆ ಡಾ. ಪ್ರೀತಿ ಕೆ. ಮೋಹನ್ ಇವರ ಸಹಕಾರದಿಂದ ನಮ್ಮ ಆರೋಗ್ಯ ಧಾಮದಲ್ಲಿ ಇಲ್ಲಿನ ಶಾಲಾ ಮಕ್ಕಳಿಗೆ ಹಾಗೂ ನರ್ಸಿಂಗ್ ಕಾಲೇಜ್ ವಿದ್ಯಾರ್ಥಿಗಳಿಗೆ,…

Read More

ಮೈಸೂರು : ವಿಶ್ವಕರ್ಮ ಕಲಾ ಪರಿಷತ್ ಮಂಗಳೂರು ಇವರು ಮೈಸೂರಿನ ರಾಮಕೃಷ್ಣ ಇನ್ಸ್ಟಿಟ್ಯೂಟ್ ಫರ್ ಮೋರಲ್ ಅಂಡ್ ಸ್ಪಿರಿಚುವಲ್ ಎಜ್ಯುಕೇಶನ್ (ರಿಮ್ಸೆ) ಇದರ ಸಹಯೋಗದಲ್ಲಿ ದಿನಾಂಕ 28 ಜೂನ್ 2025ರಂದು ಕಲಾವಿದರು, ಶಿಲ್ಪಿಗಳು ಹಾಗೂ ಕುಶಲಕರ್ಮಿಗಳಿಗಾಗಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಒಂದು ದಿನದ ಪ್ರೇರಣಾ ಕಲಾ ಕಾರ್ಯಾಗಾರ ನಡೆಯಿತು. ಈ ಕಾರ್ಯಾಗಾರದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ತಮ್ಮ ದಿಕ್ಸೂಚಿ ಉಪನ್ಯಾಸ ನೀಡಿದ ಶಿಲ್ಪಿ ಡಾ. ಅರುಣ್ ಯೋಗಿರಾಜ್ “ಶಾಸ್ತ್ರ, ಪರಂಪರೆ, ತಪಸ್ಸು ಇವನ್ನು ಅಳವಡಿಸಿಕೊಂಡು ಮಾಡಿದ ಕಲಾಕೃತಿಗಳು ಮಾತ್ರ ಶಾಶ್ವತವಾಗಿ ಸಹೃದಯರನ್ನು ಸೆಳೆಯಲು ಸಾಧ್ಯ. ಇದಕ್ಕೆ ಉದಾಹರಣೆ ಬೇಲೂರು, ಹಳೆಬೀಡು ಮುಂತಾದ ವಿಶ್ವಪ್ರಸಿದ್ಧ ಕಲಾತಾಣಗಳು ಇಂದಿಗೂ ಕೋಟ್ಯಂತರ ಕಲಾರಸಿಕರನ್ನು ತನ್ನೆಡೆಗೆ ಸೆಳೆಯುತ್ತಿವೆ. ಇಂದು ಕಲಾವಿದರು ಎ.ಐ. ತಂತ್ರಜ್ಞಾನ, ಗ್ರಾಫಿಕ್ ಡಿಸೈನಿಂಗ್ ನಂತಹ ತಂತ್ರಜ್ಞಾನದ ಬಳಕೆಯಿಂದ ಅಸ್ತಿತ್ವದ ಸವಾಲನ್ನು ಎದುರಿಸುತ್ತಿದ್ದರೂ, ಇಂತಹ ಆಧುನಿಕ ತಂತ್ರಜ್ಞಾನಕ್ಕೆ ನಿಲುಕದ ಕಲಾ ನೈಪುಣ್ಯತೆಯನ್ನು ಸಾಧಿಸಿ ತೋರಿದಲ್ಲಿ ಮಾತ್ರ ಈ ಸವಾಲನ್ನು ಸಮರ್ಥವಾಗಿ ಎದುರಿಸಲು ಸಾಧ್ಯ. ಕಲಾಕಾರರು ಪರಂಪರೆ…

Read More

ಮಂಗಳೂರು : ವಿಬ್ರಾಂತ್ ಮಂಗಳೂರು ಇದರ ವತಿಯಿಂದ ಬೀದಿ ಛಾಯಾಗ್ರಹಣ ಕಾರ್ಯಾಗಾರವನ್ನು ದಿನಾಂಕ 06 ಜುಲೈ 2025 ಮತ್ತು 13 ಜುಲೈ 2025ರಂದು ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. ವಿವೇಕ್ ಗೌಡ ಇವರ ಮಾರ್ಗದರ್ಶನದಲ್ಲಿ ಈ ಕಾರ್ಯಾಗಾರವು ನಡೆಯಲಿದ್ದು, ಹೆಚ್ಚಿನ ಮಾಹಿತಿಗಾಗಿ 9740644511 ಮತ್ತು 7090001116 ಸಂಖ್ಯೆಯನ್ನು ಸಂಪರ್ಕಿಸಿರಿ. ವೃತ್ತಿಪರ ಛಾಯಾ ಗ್ರಾಹಕರಿಗೆ ರೂ.600/- ಶುಲ್ಕವಿದ್ದು ಹಾಗೂ ಕಾಲೇಜ್ ವಿದ್ಯಾರ್ಥಿಗಳಿಗೆ ಉಚಿತವಾಗಿರುತ್ತದೆ. Street Photography Workshop Mentor – Vivek Gowda Dates – 06- July -2024 (Sunday) & 13 – July -2025 (Sunday) Charter: 1. Introduction to Street and Travel Photography 2. Curating photos 3. A walkthrough on photography with participants 4. Attention to techniques, tips and tricks Who can attend the workshop? * Those who possess any sort of cameras including…

Read More

ಬೆಳ್ತಂಗಡಿ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇದರ ವತಿಯಿಂದ ಯಕ್ಷಧ್ರುವ – ಯಕ್ಷಶಿಕ್ಷಣ ಯಕ್ಷಗಾನ ಶಿಕ್ಷಣ ಅಭಿಯಾನದ ಪ್ರಯುಕ್ತ ಬೆಳ್ತಂಗಡಿಯ ವಾಣಿ ಶಿಕ್ಷಣ ಸಂಸ್ಥೆಯಲ್ಲಿ ಯಕ್ಷಗಾನ ನಾಟ್ಯ ತರಬೇತಿಯು ದಿನಾಂಕ 02 ಜುಲೈ 2025ರಂದು ಪ್ರಾರಂಭವಾಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಪಟ್ಲ ಫೌಂಡೇಶನ್ನಿನ ಟ್ರಸ್ಟಿಗಳಾದ ಭುಜಬಲಿ ಧರ್ಮಸ್ಥಳ ಇವರು ಮಾತನಾಡುತ್ತಾ “ವಿದ್ಯಾರ್ಥಿಗಳ ಜ್ಞಾನವನ್ನು ಹೆಚ್ಚಿಸುವಲ್ಲಿ ಪಠ್ಯಚಟುವಟಿಕೆಗಳಿಗೆ ಪೂರಕವಾಗಿ ಯಕ್ಷಗಾನ ಕಲಿಕೆಯು ಪ್ರಯೋಜನಕಾರಿಯಾಗಿದೆ. ಯಕ್ಷಗಾನವು ಆರೋಗ್ಯ ಮತ್ತು ನೆಮ್ಮದಿಯನ್ನು ಪಡೆಯಲು ಸಹಕಾರಿಯಾಗಿದೆ. ಪಟ್ಲ ಫೌಂಡೇಶನ್ ನವರ ವಿದ್ಯಾರ್ಥಿಗಳಿಗೆ ಉಚಿತವಾಗಿ ಯಕ್ಷಗಾನವನ್ನು ಕಲಿಸುವ ಯೋಜನೆ ಶ್ಲಾಘನೀಯ. ಅವರ ಪರಿಶ್ರಮವನ್ನು ಉತ್ತಮವಾಗಿ ಬಳಸಿಕೊಳ್ಳಬೇಕು. ಇದರೊಂದಿಗೆ ಪೋಷಕರಿಗೆ, ಶಿಕ್ಷಣ ಸಂಸ್ಥೆಗೆ ಕೀರ್ತಿ ತರಬೇಕು” ಎಂದು ಹೇಳಿದರು. ವಾಣಿ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಗಣೇಶ ಗೌಡ ಅಧ್ಯಕ್ಷತೆ ವಹಿಸಿದ್ದರು. ಪಟ್ಲ ಫೌಂಡೇಶನ್ ಇದರ ಯಕ್ಷಧ್ರುವ – ಯಕ್ಷಶಿಕ್ಷಣದ ಕೇಂದ್ರೀಯ ಸಂಚಾಲಕರಾದ ವಾಸುದೇವ ಐತಾಳ್ ಪಣಂಬೂರು ಮುಖ್ಯ ಅತಿಥಿಗಳಾಗಿದ್ದು, ಯಕ್ಷಧ್ರುವ ಪಟ್ಲ ಪೌಂಡೇಶನ್ ನ…

Read More