Author: roovari

ಮಂಗಳೂರು : ಚಿಣ್ಣರ ಚಾವಡಿ ವಾಮಂಜೂರು ಇದರ ಆಶ್ರಯದಲ್ಲಿ ‘ಜೋಕುಲಾಟಿಕೆ’ ಚಿಣ್ಣರ ಸಂತಸ ಕಲಿಕಾ ಶಿಬಿರವು ದಿನಾಂಕ 25-05-2024ರಂದು ಜೈ ಶಂಕರ್ ಮಿತ್ರ ಮಂಡಳಿ ತಿರುವೈಲ್ ವಾಮಂಜೂರು ಇಲ್ಲಿ ಆರಂಭಗೊಂಡಿತು. ಶಿಬಿರವನ್ನು ಉದ್ಘಾಟಿಸಿದ ಜೈ ಶಂಕರ್ ಮಿತ್ರ ಮಂಡಳಿ ತಿರುವೈಲ್ ವಾಮಂಜೂರು ಇದರ ಗೌರವಾಧ್ಯಕ್ಷ ಮತ್ತು ರೈತ ಮುಖಂಡರಾಗಿರುವ ಲಿಂಗಪ್ಪ ಸಾಲಿಯನ್ ಮಾತನಾಡಿ “ಮಕ್ಕಳು ಈ ಸಮಾಜದ ಆಸ್ತಿಗಳು ಸಮಾಜದ ಭವಿಷ್ಯ ಮಕ್ಕಳಲ್ಲಿ ಅಡಗಿದೆ. ಅಂತಹ ಮಕ್ಕಳು ತಮ್ಮ ಪ್ರತಿಭೆಯನ್ನು ಬೆಳಗಿಸಿದರೆ ಮಾತ್ರ ಭವಿಷ್ಯದಲ್ಲಿ ಸಾಮಾಜಿಕ ಪ್ರಗತಿ ಸಾಧ್ಯ. ಇಂತಹ ಶಿಬಿರಗಳು ಮಕ್ಕಳ ಪ್ರತಿಭೆಯನ್ನು ಬೆಳಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಇಂಥ ಶಿಬಿರಗಳ ಮಹತ್ವವನ್ನು ಮಕ್ಕಳ ಹೆತ್ತವರು ಅರಿತುಕೊಳ್ಳುವುದರೊಂದಿಗೆ ತಮ್ಮ ಮಕ್ಕಳೊಳಗೆ ಇರುವ ಪ್ರತಿಭೆಯನ್ನು ಬೆಳೆಸುವುದರಲ್ಲಿ ಹೆತ್ತವರು ಮುಂದಾಗಬೇಕು.” ಎಂದರು. ಜೈ ಶಂಕರ್ ಮಿತ್ರ ಮಂಡಳಿಯ ಮಾಜಿ ಅಧ್ಯಕ್ಷರಾದ ರಘು ಸಾಲಿಯನ್ ಮಾತನಾಡಿ “ಮಕ್ಕಳು ಪರಿಸರದ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ಸಾಮಾನ್ಯ ಜ್ಞಾನವನ್ನು ತಮ್ಮೊಳಗೆ ಹೆಚ್ಚಿಸಿಕೊಳ್ಳಬೇಕು. ಇದರೊಂದಿಗೆ ಮಕ್ಕಳು ಪರಿಸರದ ಜೊತೆ ಬೆರೆತು…

Read More

ಕುಂದಾಪುರ : ಕಲೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಬೈಂದೂರಿನಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಸಂಸ್ಥೆ ಸುರಭಿ (ರಿ.) ಬೈಂದೂರು. ಈ ಸಂಸ್ಥೆಯ ಮೂಲಕ ಬೆಂಗಳೂರಿನಲ್ಲಿ ಪ್ರಥಮ ಭಾರಿಗೆ ದಿನಾಂಕ 09-06-2024 ಮತ್ತು 10-06-2024ರಂದು ಸಂಜೆ 7-30ಕ್ಕೆ ಕುಂದಾಪ್ರ ಕನ್ನಡ ಭಾಷೆಯ ನಾಟಕ ‘ಮಕ್ಕಳ ರಾಮಾಯಣ’ ಪ್ರದರ್ಶನಗೊಳ್ಳಲಿದೆ. ಬಿ.ಆರ್. ವೆಂಕಟರಮಣ ಐತಾಳ್ ಅವರು ರಚಿಸಿರುವ ನಾಟಕವನ್ನು, ಗಣೇಶ್ ಮಂದರ್ತಿ ಕುಂದಾಪುರ ಕನ್ನಡಕ್ಕೆ ಅನುವಾದಿಸಿ ನಿರ್ದೇಶನ ಮಾಡಿದ್ದಾರೆ. ಸುರಭಿ ಬೈಂದೂರು ಸಂಸ್ಥೆಯ ಬಾಲ ಕಲಾವಿದರು ನಾಟಕದಲ್ಲಿ ಅಭಿನಯಿಸಿದ್ದಾರೆ. ಈಗಾಗಲೇ ಹಲವು ಪ್ರದರ್ಶನಗಳನ್ನು ಕಂಡಿರುವ ಕುಂದಾಪುರ ಕನ್ನಡದ ಈ ನಾಟಕ ರಂಗಾಸಕ್ತರ ಮೆಚ್ಚುಗೆಗೂ ಪಾತ್ರವಾಗಿದೆ. ರಂಗಾಸ್ಥೆ (ರಿ.) ಬೆಂಗಳೂರು ನೇತೃತ್ವದಲ್ಲಿ ನಾಗರಬಾವಿಯ ಕಲಾಗ್ರಾಮದಲ್ಲಿ ಈ ನಾಟಕ ಪ್ರದರ್ಶನ ನಡೆಯಲಿದ್ದು, ಟಿಕೆಟ್ ದರ ರೂ.200 ನಿಗದಿಪಡಿಲಾಗಿದೆ. ‘ಬುಕ್ ಮೈ ಶೋ’ ಮೂಲಕ ಆನ್ ಲೈನ್ ನಲ್ಲಿ ಅಥವಾ ಸಂಘಟಕರನ್ನು ಸಂಪರ್ಕಿಸಿ ಟಿಕೆಟ್ ಬುಕ್ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 8310775855 ಸಂಪರ್ಕಿಸಬಹುದಾಗಿದೆ. ಸುರಭಿ ಸಂಸ್ಥೆಯು ಸಂಗೀತ,…

Read More

ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ಅತ್ಯಂತ ಪ್ರಾಚೀನ, ಸಾಂಪ್ರದಾಯಿಕ ಹಾಗೂ ಮಂಗಳಕರ ವಾದ್ಯವೆಂದು ಖ್ಯಾತಿ ಪಡೆದ ನಾದಸ್ವರ ವಾದ್ಯವು ಹಲವಾರು ಕಾರಣಗಳಿಂದ ಕೇವಲ ಕೆಲವೇ ಕೆಲವು ದೇವಾಲಯಗಳ ಧಾರ್ಮಿಕ ಕಾರ್ಯಾಚರಣೆಯಲ್ಲಿ ಮಾತ್ರ ಕಂಡು ಬರುತ್ತಿರುವುದು ಅತ್ಯಂತ ಬೇಸರದ ಸಂಗತಿ. ಹಲವಾರು ಭರವಸೆ ಮೂಡಿಸುವ ಉತ್ತಮ ಕಲಾವಿದರು ನಾದಸ್ವರ ವಾದನದಲ್ಲಿ ಕಾಣಿಸಿಕೊಳ್ಳುತ್ತಿದ್ದರೂ ಇಂತಹವರು ಕಲಾ ರಸಿಕರ ಸಮ್ಮುಖದಲ್ಲಿ ಕಾರ್ಯಕ್ರಮ ನೀಡುವಲ್ಲಿ ಅವಕಾಶಗಳಿಂದ ವಂಚಿತರಾಗಿರುವುದು ನಮಗೆಲ್ಲ ತಿಳಿದ ವಿಷಯವೇ ಆಗಿದೆ. ಶ್ರೀ ನರಸಿಂಹ ಉತ್ಸವದ ಸಂದರ್ಭ ಶ್ರೀ ಸುಬ್ರಮಣ್ಯ ಮಠದ ಯತಿಗಳಾದ ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿಯವರು ಸಭಾ ಕಛೇರಿ ರೀತಿಯಲ್ಲೇ ವಿದ್ವಾನ್ ನಾಗೇಶ್ ಎ. ಬಪ್ಪನಾಡು ಇವರ ನಾದಸ್ವರ ವಾದನ ಕಾರ್ಯಕ್ರಮವನ್ನು ವ್ಯವಸ್ಥೆಗೊಳಿಸಿದುದು ಅತ್ಯಂತ ಶ್ಲಾಘನೀಯ ವಿಷಯ. ಸಾಂಪ್ರದಾಯಿಕವಾಗಿ ಗುರುಕುಲ ಮಾದರಿಯಲ್ಲಿ ಸಂಗೀತಭ್ಯಾಸ ಮಾಡಿದ ನಾಗೇಶ್ ಎ. ಬಪ್ಪನಾಡು ಅವರದ್ದು ಪಂಡಿತ-ಪಾಮರರೆಲ್ಲರನ್ನು ಆಕರ್ಷಿಸುವ ಸುಂದರ ಶೈಲಿ. ರಾಗಗಳ ಗಾಂಭೀರ್ಯಕ್ಕೆ ಒಂದಿನಿತೂ ತೊಂದರೆಯಾಗದಂತೆ ನುಡಿಸುವುದು ಇವರ ಪ್ರಸ್ತುತಿಯ ವಿಶೇಷತೆ. ಸಭಾ ಕಛೇರಿಗಳಿಗೆ ನಾದಸ್ವರವನ್ನು…

Read More

ಕೊಪ್ಪಳ : ಇಲ್ಲಿನ ಶಿವಶಾಂತವೀರ ಮಂಗಲ ಭವನದಲ್ಲಿ 1858ರ ಸ್ವಾತಂತ್ರ್ಯ ಹೋರಾಟ ಕೊಪ್ಪಳ ಹುತಾತ್ಮರ ವೇದಿಕೆಯಲ್ಲಿ, ಗದಗಿನ ಲಡಾಯಿ ಪ್ರಕಾಶನ, ಹೊನ್ನಾವರ ತಾಲ್ಲೂಕು ಕವಲಕ್ಕಿಯ ಕವಿ ಪ್ರಕಾಶನ, ಧಾರವಾಡದ ಚಿತ್ತಾರ ಕಲಾ ಬಳಗ ಹಾಗೂ ಕೊಪ್ಪಳದ ಮೇ ಸಾಹಿತ್ಯ ಬಳಗದ ಸಹಯೋಗದಲ್ಲಿ ಆಯೋಜಿಸಿರುವ ಎರಡು ದಿನಗಳ ಮೇ ಸಾಹಿತ್ಯ ಮೇಳವು ಇಂದು ದಿನಾಂಕ 25-05-2024ರಂದು ಪ್ರಾರಂಭಗೊಂಡಿತು. ಈ ಬಾರಿ “ಸಂವಿಧಾನ ಭಾರತ ಧರ್ಮಕಾರಣ” ಎಂಬ ಆಶಯವಾಕ್ಯದೊಂದಿಗೆ ಮೇಳ ನಡೆಯುತ್ತಿದೆ. ಸಮಾಜದ ವಿವಿಧ ಅಲೆಮಾರಿ ಸಮುದಾಯಗಳಿಗೆ ಸೇರಿದ ಜನಸಾಮಾನ್ಯರಾದ ಬಸಮ್ಮ, ಜಂಬವ್ವ, ದುರ್ಗವ್ವ, ಶೋಭಾ ಮಠ, ಫಕೀರಜ್ಜ ಮತ್ತು ಮಕ್ಕಳು ಸಂವಿಧಾನದ ಪ್ರಸ್ತಾವನೆಯನ್ನು ಅತಿಥಿಗಳಿಗೆ ಸಲ್ಲಿಸಿ, ರಮೇಶ ಗಬ್ಬೂರ ನೇತೃತ್ವದಲ್ಲಿ ಎಲ್ಲರೂ ಸಂವಿಧಾನ ರಕ್ಷಣೆಯ ಪ್ರತಿಜ್ಞೆ ಸ್ವೀಕರಿಸುವ ಮೂಲಕ ಮೇಳಕ್ಕೆ ಚಾಲನೆ ದೊರೆಯಿತು. ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಅಧ್ಯಕ್ಷತೆ ವಹಿಸುವರು,ನವದೆಹಲಿಯ ರೈತ ಹೋರಾಟಗಾರ ರಾಕೇಶ್ ಟಿಕಾಯತ್,ಪಣಜಿಯ ಕೊಂಕಣಿ ಕವಿ,ಹೋರಾಟಗಾರ,ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ದಾಮೋದರ್ ಮೌಜೋ,ತೆಲಂಗಾಣದ ಕವಿ,ಹೋರಾಟಗಾರ್ತಿ ದಿಕ್ಸೂಚಿ ಮಾತುಗಳನ್ನಾಡಿದರು. ಬಸವರಾಜ ಹೂಗಾರ…

Read More

ಮಂಗಳೂರು : ವಿಶ್ರಾಂತ ಪ್ರಾಧ್ಯಾಪಕ, ಸಾಹಿತಿ ಮತ್ತು ಅರ್ಥಧಾರಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿಯವರಿಗೆ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ‘ಬಿಲ್ವಶ್ರೀ’ ಸಭಾಂಗಣದಲ್ಲಿ ಕ್ಷೇತ್ರದ ಪತ್ತನಾಜೆ ಉತ್ಸವ ಸಂದರ್ಭ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾ ಸಂಘವು ಏರ್ಪಡಿಸಿದ ಹುಟ್ಟೂರ ಸಮ್ಮಾನ ಕಾರ್ಯಕ್ರಮವು ದಿನಾಂಕ 24-05-2024ರಂದು ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಯಕ್ಷಗಾನ ಅರ್ಥಧಾರಿ ಮತ್ತು ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಇವರು ಮಾತನಾಡುತ್ತಾ “ವ್ಯಕ್ತಿಯೊಬ್ಬ ದೊಡ್ಡ ಶಕ್ತಿಯಾಗುವುದು ತನ್ನ ಸಾಧನೆಯ ಬಲದಿಂದ. ಭಾಸ್ಕರ ರೈ ಕುಕ್ಕುವಳ್ಳಿಯವರು ಕೇವಲ ಯಕ್ಷಗಾನಕ್ಕಾಗಿ ಸೀಮಿತರಾದವರಲ್ಲ. ಅವರು ಶಿಕ್ಷಣ ಸಂಪನ್ಮೂಲ ವ್ಯಕ್ತಿಯಾಗಿ, ಕವಿ – ಸಾಹಿತಿಯಾಗಿ, ಸಾಂಸ್ಕೃತಿಕ ಸಂಘಟಕರಾಗಿ ವಿಶೇಷ ಸಾಧನೆ ಮಾಡಿದ ಸಾಹಸಿ. ಕನ್ನಡ ಮತ್ತು ತುಳು ಭಾಷೆಗಳಲ್ಲಿ ಸುಮಾರು 30 ಕೃತಿಗಳನ್ನು ಹೊರ ತಂದ ಪ್ರಬುದ್ಧ ಲೇಖಕ. ದೇಶ ವಿದೇಶಗಳ ಪ್ರಮುಖ ಕಾರ್ಯಕ್ರಮಗಳಲ್ಲಿ ಕರಾವಳಿಯ ಸಾಂಸ್ಕೃತಿಕ ಹರಿಕಾರರಾಗಿ ಭಾಗವಹಿಸಿ ಹಲವು ಪ್ರಶಸ್ತಿಗಳಿಗೆ ಭಾಜನರಾದ ಭಾಸ್ಕರ ರೈ ಅವರು ನಿರಂತರ ಕ್ರಿಯಾಶೀಲರಾಗಿರುವ…

Read More

ಕೋಟ: ಕರ್ನಾಟಕ ರಾಜ್ಯ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಹಾಗೂ ಕುಂದಗನ್ನಡದ ಆಶುಕವಿಯಾದ ಸಾಲಿಗ್ರಾಮ ಕಾರ್ತಟ್ಟು ನಿವಾಸಿ ಕಮಲಾ ನಾಯರಿ ಅಸೌಖ್ಯದಿಂದ ದಿನಾಂಕ 24-05-2024ನೇ ಶುಕ್ರವಾರ ನಿಧನ ಹೊಂದಿದರು. ಅವರಿಗೆ 94ವರ್ಷ ವಯಸ್ಸಾಗಿತ್ತು. ಮೃತರು ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ನೂರಾರು ಕುಂದಗನ್ನಡದ ಜಾನಪದ ಕಥೆಗಳು ಹಾಗೂ ಹಾಡುಗಳನ್ನು ಅಕ್ಷರ ಜ್ಞಾನ ಇಲ್ಲದ ಇವರು ಆಡುಮಾತಿನಲ್ಲಿ ಕಂಠಪಾಠದ ಮೂಲಕ ಕಟ್ಟಿಕೊಟ್ಟಿದ್ದರು. ಇವರ 130 ಕುಂದಗನ್ನಡದ ಕಥೆಗಳಿಗೆ ಬರಹರೂಪವನ್ನು ನೀಡಿ ಪುಸ್ತಕ ರೂಪದಲ್ಲಿ ಹೊರತರುವ ಕಾರ್ಯವನ್ನು ಹಿರಿಯ ಸಂಶೋಧಕಿ ಡಾ. ಗಾಯತ್ರಿ ನಾವಡ ಅವರು ಮಾಡಿದ್ದು, ಶೀಘ್ರದಲ್ಲೇ ಬಿಡುಗಡೆಯಾಗಲಿತ್ತು. ಸಾಹಿತ್ಯ ಕ್ಷೇತ್ರದಲ್ಲಿ ಇವರು ಮಾಡಿದ ಸಾಧನೆಯನ್ನು ಗುರುತಿಸಿ ರಾಜ್ಯ ಜಾನಪದ ಅಕಾಡೆಮಿ ಪ್ರಶಸ್ತಿ, ಉಡುಪಿ ಜಿಲ್ಲಾ ಕ. ಸಾ. ಪ. ಪುರಸ್ಕಾರ, ಗಿಳಿಯಾರು ಜನಸೇವಾ ಟ್ರಸ್ಟ್‌ನ ಕುಂದಾಪ್ರ ಕನ್ನಡ ದಿನಾಚರಣೆ ಪುರಸ್ಕಾರ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಸಂದಿದೆ.

Read More

ಮೂಡುಬಿದಿರೆ : ಶಿವರಾಮ ಕಾರಂತ ಪ್ರತಿಷ್ಠಾನದ ವತಿಯಿಂದ ಕೊಡಮಾಡುವ ‘ಶಿವರಾಮ ಕಾರಂತ ಪ್ರಶಸ್ತಿ’ ಮತ್ತು ‘ಶಿವರಾಮ ಕಾರಂತ ಪುರಸ್ಕಾರ’ ಪ್ರದಾನ ಸಮಾರಂಭವು ದಿನಾಂಕ 29-05-2024ರಂದು ಸಂಜೆ 5-00 ಗಂಟೆಗೆ ಮೂಡುಬಿದಿರೆಯ ಸ್ವರಾಜ್ಯ ಮೈದಾನ ಕನ್ನಡ ಭವನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಮೂಡುಬಿದಿರೆಯ ಶಿವರಾಮ ಕಾರಂತ ಪ್ರತಿಷ್ಠಾನದ ಅಧ್ಯಕ್ಷೆ ಶ್ರೀಮತಿ ಜಯಶ್ರೀ ಅಮರನಾಥ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಪುತ್ತೂರಿನ ಶ್ರೀ ಲಕ್ಷ್ಮೀಶ ತೋಳ್ಪಾಡಿಯವರು ಉದ್ಘಾಟನೆ ಮಾಡಲಿದ್ದಾರೆ. ಖ್ಯಾತ ಜಾನಪದ ವಿದ್ವಾಂಸರು ಸೃಜನಶೀಲ ಲೇಖಕರು ಆಗಿರುವ ಮೈಸೂರಿನ ಪ್ರೊ. ಕೃಷ್ಣಮೂರ್ತಿ ಹನೂರ, ಖ್ಯಾತ ಕವಿಗಳು ಬರಹಗಾರರು ಆಗಿರುವ ಬೆಂಗಳೂರಿನ ಡಾ. ಚಿನ್ನಸ್ವಾಮಿ ಮೂಡ್ನಾಕೂಡು, ಕನ್ನಡದ ಕೀಲಿಮಣೆ ವಿನ್ಯಾಸ ಸಂಶೋಧಿಸಿ ಕನ್ನಡ ಭಾಷೆಗೆ ವಿಶಿಷ್ಟ ಕೊಡುಗೆ ನೀಡಿದ ಉಡುಪಿಯ ಶ್ರೀ ಕೆ.ಪಿ. ರಾವ್ ಇವರುಗಳಿಗೆ ಹಾಗೂ ಸಂಸ್ಕೃತಿಯನ್ನು ಕಟ್ಟುವ ಕಾಯಕದಲ್ಲಿ ಅರ್ಪಣಾ ಭಾವದಿಂದ 75 ವರ್ಷಗಳ ಕಾಲ ಬದ್ಧತೆಯಿಂದ ಕೆಲಸ ಮಾಡುತ್ತಿರುವ ಹೆಗ್ಗೋಡಿನ ನೀನಾಸಂ ಸಂಸ್ಥೆಗೆ ‘ಶಿವರಾಮ ಕಾರಂತ ಪ್ರಶಸ್ತಿ’ಯನ್ನು ಮತ್ತು ‘ಶಿವರಾಮ ಕಾರಂತ ಪುರಸ್ಕಾರ’ವನ್ನು…

Read More

ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮವು ದಿನಾಂಕ 27-05-2024ರಂದು ಸಂಜೆ ಗಂಟೆ 6.25ಕ್ಕೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಈ ದಿನದ ಸರಣಿ ಕಾರ್ಯಕ್ರಮದಲ್ಲಿ ಕುಮಾರಿ ಕೀರ್ತನ ಯು. ಭಟ್ ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ. ಕು. ಕೀರ್ತನಾ ಯು. ಭಟ್ ಉಡುಪಿ ಸಮೀಪದ ಕೊರಂಗ್ರಪಾಡಿ ನಿವಾಸಿಯಾದ ಉದಯ ಭಟ್ ಹಾಗೂ ಜ್ಯೋತಿ ಯು. ಭಟ್ ಇವರ ಸುಪುತ್ರಿಯಾದ ಕೀರ್ತನಾ ಯು. ಭಟ್ ಪ್ರಸ್ತುತ ಎಂ.ಬಿ.ಎ. ಪದವಿಯನ್ನು ಪೂರ್ಣಪ್ರಜ್ಞಾ ಸಂಸ್ಥೆಯಲ್ಲಿ ನಡೆಸುತ್ತಿದಾಳೆ. ಬಾಲ್ಯದಿಂದಲೇ ಭರತನಾಟ್ಯ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ ಇವಳು ತನ್ನ 3ನೇ ತರಗತಿ ಇರುವಾಗಲೇ ಭರತನಾಟ್ಯ ಕ್ಷೇತ್ರಕ್ಕೆ ಕಾಲಿಟ್ಟವಳು. ತನ್ನ ನೆಚ್ಚಿನ ಗುರುಗಳಾದ ಸುಧೀರ್ ರಾವ್ ಕೊಡವೂರು ಹಾಗೂ ಮಾನಸಿ ಸುಧೀರ್ ಇವರ ಬಳಿ ಭರತನಾಟ್ಯವನ್ನು ಕಲಿತು ಇಂದಿಗೆ 13 ವರ್ಷವನ್ನು ಪೂರ್ಣಗೊಳಿಸಿದ್ದು,…

Read More

‘ಮೊದಲು ಹಿರಿಯ ಸಾಹಿತಿಗಳು ಬರೆದ ಒಳ್ಳೆಯ ಕೃತಿಗಳನ್ನು ಓದಿ. ಅನಂತರ ಬರೆಯಿರಿ’ ಎಂದು ನಾವು ತರುಣ ಬರಹಗಾರರಿಗೆ ಯಾವಾಗಲೂ ಸಲಹೆ ನೀಡುತ್ತಿರುತ್ತೇವೆ. ಇವತ್ತು ನಾವು ನೋಡುತ್ತಿರುವ ಅನೇಕ ತರುಣ ಲೇಖಕರಲ್ಲಿ ಒಂದು ರೀತಿಯ ಅಪಕ್ವತೆ, ಯಾಂತ್ರಿಕತೆ ಮತ್ತು ಅನುಭವದ ಕೊರತೆಯಿಂದ ಉಂಟಾಗುವ ಚರ್ವಿತ-ಚರ್ವಣಗಳನ್ನು ನಾವು ಕಾಣುತ್ತಿರುವುದು ಸುಳ್ಳಲ್ಲ. ಆದರೆ ಸಲಹೆಗಳನ್ನು ಬರೇ ಬಾಯಿ ಮಾತಿನಲ್ಲಿ ಹೇಳಿದರೆ ಸಾಕಾಗುವುದಿಲ್ಲ. ಇದನ್ನು ಮನಗಂಡ ಪ್ರಬುದ್ಧ ವಿಮರ್ಶಕ ನರೇಂದ್ರ ಪೈಯವರು ಜಾಗತಿಕ ಸಾಹಿತ್ಯದಲ್ಲಿ ಬಹಳಷ್ಟು ಹೆಸರು ಮಾಡಿ ಶ್ರೇಷ್ಠ ಲೇಖಕರು ಅನ್ನಿಸಿಕೊಂಡ ಹದಿನಾಲ್ಕು ಮಂದಿ ಲೇಖಕರ ಹದಿನಾರು ಕೃತಿಗಳನ್ನು ಓದಿ ತಮ್ಮ ಸೂಕ್ಷ್ಮ ಅವಲೋಕನದ ಮೂಲಕ ಅವುಗಳನ್ನು ವಿಶ್ಲೇಷಣೆ ಮತ್ತು ವಿಮರ್ಶೆಗೆ ಒಳಪಡಿಸಿ ‘ಸಾವಿರದ ಒಂದು ಪುಸ್ತಕ’ ಎಂಬ 180 ಪುಟಗಳ ಒಂದು ಕೃತಿಯನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಸಮರ್ಪಿಸಿದ್ದಾರೆ. ಈ ಶೀರ್ಷಿಕೆಯನ್ನು ಮೊದಲು ನೋಡಿದಾಗ ನನಗೆ ಥಟ್ಟನೆ ಅರೇಬಿಯನ್ ನೈಟ್ಸ್ ನ ‘ಸಾವಿರದ ಒಂದು ರಾತ್ರಿ’ಯು ನೆನಪಾಯಿತು. ಅದರಲ್ಲಿ ಕ್ರೂರಿಯಾದ ರಾಜನ ಮನಃಪರಿವರ್ತನೆ ಮಾಡಲು…

Read More

ಪುತ್ತೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ ಇದರ ವತಿಯಿಂದ ಶ್ರೀ ಜನಾರ್ದನದುರ್ಗ ಇವರ ‘ಶಾಂತೇಶ್ವರನ ವಚನಗಳು’ ಕೃತಿ ಲೋಕಾರ್ಪಣೆ ಹಾಗೂ ಕವಿಗೋಷ್ಠಿಯು ದಿನಾಂಕ 27-05-2024ರಂದು ಮಧ್ಯಾಹ್ನ 2-30 ಗಂಟೆಗೆ ಪುತ್ತೂರಿನ ಜೈನ ಭವನ ರಸ್ತೆಯ ಅನುರಾಗ ವಠಾರದಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಪುತ್ತೂರು ತಾಲೂಕು ಕ.ಸಾ.ಪ.ದ ಅಧ್ಯಕ್ಷರಾದ ಶ್ರೀ ಉಮೇಶ್ ನಾಯಕ್ ಇವರ ಅಧ್ಯಕ್ಷತೆಯಲ್ಲಿ ವಿಶ್ರಾಂತ ಪ್ರಾಂಶುಪಾಲರಾದ ಪ್ರೊ. ಝೇವಿಯರ್ ಡಿ’ಸೋಜ ಇವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಲಿದ್ದಾರೆ. ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಲೋಕೇಶ್ ಎಸ್.ಆರ್. ಇವರು ಕೃತಿ ಲೋಕಾರ್ಪಣೆ ಮಾಡಲಿದ್ದು, ಹಿರಿಯ ಸಾಹಿತಿಯಾದ ಡಾ. ವರದರಾಜ ಚಂದ್ರಗಿರಿ ಕೃತಿ ಪರಿಚಯ ಹಾಗೂ ಬೆಟ್ಟಂಪಾಡಿ ಕಾಲೇಜಿನ ಗ್ರಂಥಪಾಲಕರಾದ ಶ್ರೀ ರಾಮ ಕೆ. ಇವರು ಕೃತಿಕಾರರ ಪರಿಚಯ ಮಾಡಲಿರುವರು. ಇದೇ ಸಂದರ್ಭದಲ್ಲಿ ಸಾಹಿತಿ ಶ್ರೀ ಪಿ.ಎಸ್. ನಾರಾಯಣ ಭಟ್ ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಹಾಗೂ ವಿಶೇಷ ಕಾರ್ಯಕ್ರಮವಾಗಿ ಶ್ರೀಮತಿ ನಂದಿನಿ ವಿನಾಯಕ್ ಇವರಿಂದ…

Read More