Author: roovari

ಮಂಗಳೂರು : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇದರ ಎಕ್ಕಾರು ಕಟೀಲು ಘಟಕದ ಮೇಲ್ವಿಚಾರಣೆಯಲ್ಲಿ 2025-26ನೇ ಸಾಲಿನ “ಯಕ್ಷ ಶಿಕ್ಷಣ” ಯೋಜನೆಯ ಉಚಿತ ಯಕ್ಷಗಾನ ತರಬೇತಿ ಕಾರ್ಯಕ್ರಮವು ದಿನಾಂಕ 28 ಜೂನ್ 2025ರಂದು ಮಧ್ಯಾಹ್ನ 12-00 ಗಂಟೆಗೆ ಮಂಗಳೂರಿನ ನೆಲ್ಲಿತೀರ್ಥ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವೇದಿಕೆಯಲ್ಲಿ ಉದ್ಘಾಟನೆಗೊಂಡಿತು. ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮಕ್ಕೆ ಆಗಮಿಸಿದಂತಹ ಅತಿಥಿಗಳನ್ನು ಪ್ರಾಂಶುಪಾಲರಾದ ಸುಪ್ರೀತಾ ಕೆ. ಮೇಡಂ ಇವರು ಸ್ವಾಗತಿಸಿದರು. ನಂತರ ಯಕ್ಷಧ್ರುವ ಯಕ್ಷ ಶಿಕ್ಷಣದ ಪ್ರಧಾನ ಸಂಚಾಲಕರಾದ ವಾಸುದೇವ ಐತಾಳ್ ಇವರು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನಡೆದು ಬಂದ ಹಾದಿ ಹಾಗೂ ವಿದ್ಯಾರ್ಥಿಗಳಲ್ಲಿ ಯಕ್ಷಗಾನ ಯಾವ ರೀತಿಯಾಗಿ ಭಾಷಾ ಪ್ರೌಢಿಮೆ ಮತ್ತು ನಾಟ್ಯವನ್ನು ಕಲಿಸುವುದರೊಂದಿಗೆ ವಿಶಿಷ್ಟವಾದ ವ್ಯಕ್ತಿತ್ವವನ್ನು ರೂಪುಗೊಳಿಸುತ್ತದೆ ಎಂಬುದನ್ನು ತಿಳಿಸಿದರು. ಬಳಿಕ ದೀಪ ಬೆಳಗಿಸುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಯಿತು. ಉದ್ಘಾಟನಾ ಕಾರ್ಯಕ್ರಮದ ನಂತರ ಉದ್ಘಾಟಕರಾಗಿ ಯಕ್ಷಧ್ರುವ ಫೌಂಡೇಶನ್ ಎಕ್ಕಾರು ಕಟೀಲು ಘಟಕದ ಸಂಚಾಲಕರಾದ ಸತೀಶ್ ಶೆಟ್ಟಿ ಇವರು ಯಕ್ಷ…

Read More

ಧಾರವಾಡ : ಹಿರಿಯರಂಗ ಸಂಸ್ಥೆ ಅಭಿನಯ ಭಾರತಿ (ರಿ.) ಧಾರವಾಡ ಇವರು ದಿನಾಂಕ 06 ಮತ್ತು 07 ಜುಲೈ 2025ರಂದು ಧಾರವಾಡದ ಕರ್ಣಾಟಕ ಕಾಲೇಜ್ ಆವರಣದಲ್ಲಿರುವ ಸೃಜನ ಡಾ. ಅಣ್ಣಾಜಿ ರಾವ್ ಶಿರೂರ್ ರಂಗ ಮಂದಿರದಲ್ಲಿ ಸ್ತ್ರೀ ಸಂವೇದನೆಯ ವಿವಿಧ ಆಯಾಮಗಳನ್ನು ತೋರುವ ಮೂರು ಏಕವ್ಯಕ್ತಿ ಮಹಿಳಾ ರಂಗ ಪ್ರಯೋಗಗಳನ್ನು ಏರ್ಪಡಿಸಿದೆ. ದಿನಾಂಕ 06 ಜುಲೈ 2025ರಂದು ಸಂಜೆ 6-00 ಗಂಟೆಗೆ ಸುಪ್ರಸಿದ್ಧ ಹಿರಿಯ ರಂಗ ನಟಿ ಶ್ರೀಮತಿ ಉಮಾಶ್ರೀ ಅವರ ಮನೋಜ್ಞ ಅಭಿನಯದ ‘ಶರ್ಮಿಷ್ಠೆ’ ಎಂಬ ರಂಗ ಪ್ರಯೋಗವು ಸ್ತ್ರೀವಾದದ ನೆಲೆಯಲ್ಲಿ ಪುರುಷ ಪ್ರಧಾನ ಸಮಾಜದ ದಬ್ಬಾಳಿಕೆಯನ್ನು ಎತ್ತಿ ತೋರುತ್ತದೆ. ಇಂದಿನ ಸಾಮಾಜಿಕ ಚೌಕಟ್ಟಿನೊಳಗೆ ಬೇರೂರಿರುವ ಅಸಮಾನತೆಯು ಅಸುರ ಗುರು ಶುಕ್ರಾಚಾರ್ಯರ ಮಗಳು ದೇವಯಾನಿಯನ್ನು ರಾಣಿ ಪದವಿವೆಗೇರಿಸಿದರೆ, ಶರ್ಮಿಷ್ಠೆಯನ್ನು ಆಳಿನಂತೆ ನಡೆಸಿಕೊಳ್ಳಲಾಗುತ್ತದೆ. ಶರ್ಮಿಷ್ಠೆಯ ಮಗ ಪುರು ತಂದೆ ಯಯಾತಿಗಾಗಿ ತನ್ನ ತಾರುಣ್ಯವನ್ನು ತ್ಯಾಗ ಮಾಡಿ ಉದಾತ್ತತೆಯನ್ನು ಮೆರೆಯುತ್ತಾನೆ. ಭವಿಷ್ಯದಲ್ಲಿ ರಾಜತ್ವವನ್ನು ಪುನ: ಪಡೆದು, ಶರ್ಮಿಷ್ಠೆಯ ಮೌನಕ್ರಾಂತಿಯು ತನ್ನ ಅಸ್ಮಿತೆಯನ್ನು ಸಾರುವ…

Read More

ಮಂಗಳೂರು : ಮಿಟಾಕಣ್ ಅಕಾಡೆಮಿ ಮೂಲಕ ಶಕ್ತಿನಗರದ ಕಲಾಂಗಣದಲ್ಲಿ ದಿನಾಂಕ 28 ಮತ್ತು 29 ಜೂನ್ 2025ರಂದು ಆಯೋಜಿಸಿದ ಎರಡು ದಿನಗಳ ವಸತಿಯುತ ಅನುವಾದ ಕಾರ್ಯಾಗಾರವು ನಡೆಯಿತು. ಸಮಾರೋಪದಲ್ಲಿ ಮಾತನಾಡಿದ ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಪಿಂಟೊ “ಮಾಂಡ್ ಸೊಭಾಣ್ ಈ ಸಾಲಿನಲ್ಲಿ ಮಕ್ಕಳ ವರ್ಷವನ್ನು ಆಚರಿಸುತ್ತಿದೆ. ಜನವರಿಯಲ್ಲಿ 9 ವರ್ಷದ ಬಾಲೆಯಿಂದ ಸಂಗೀತ ಸುಧೆ, ಫೆಬ್ರವರಿಯಲ್ಲಿ 70 ಮಕ್ಕಳಿಂದ ಸುರಾಂಗಾಣಿಂ ಗಾಯನ ಕಾರ್ಯಕ್ರಮ, ಮೇಯಲ್ಲಿ 61 ಮಕ್ಕಳಿಗೆ ರಜಾ ಶಿಬಿರ ತರಬೇತಿ, ವರ್ಷವಿಡೀ ಸುರ್ ಸೊಭಾಣ್ ಹಿಂದೂಸ್ತಾನಿ ಮತ್ತು ಕೊಂಕಣಿ ಗಾಯನಕ್ಕೆ 100 ಮಕ್ಕಳಿಗೆ ತರಬೇತಿ, ಈಗ ಮಕ್ಕಳಿಗಾಗಿ ಕಥಾನುವಾದ ಕಾರ್ಯಾಗಾರ ಮತ್ತು ಅನುವಾದಗೊಂಡ ಕಥೆಗಳ ಪುಸ್ತಕ ಪ್ರಕಟಣೆ ಹಾಗೂ ನವೆಂಬರದಲ್ಲಿ ಮಕ್ಕಳ ಸಾಹಿತ್ಯೋತ್ಸವ ನಡೆಯಲಿದೆ’’ ಎಂದು ಹೇಳಿದರು. ಗುರಿಕಾರ ಎರಿಕ್ ಒಝೇರಿಯೊ ಪ್ರಮಾಣ ಪತ್ರ ವಿತರಿಸಿದರು. ಖಜಾಂಚಿ ಎಲ್ರೊನ್ ರೊಡ್ರಿಗಸ್ ಉಪಸ್ಥಿತರಿದ್ದರು. ಮುನ್ನಾದಿನ ವಿವಿಧ ಭಾಷೆಗಳ ಹೆಸರುಗಳನ್ನು ಬರೆದ ಬಿದಿರಿನ ತುಂಡಿನಿಂದ ಕೊಂಕಣಿ ಪತಾಕೆ ಹೊರತೆಗೆಯುವ ಮುಖಾಂತರ ವಕೀಲೆ…

Read More

ಬೆಂಗಳೂರು : ರಂಗರಥ – ಭಾರತೀಯ ಪ್ರದರ್ಶನ ಕಲಾ ಸಂಸ್ಥೆ (ರಿ.) ಪ್ರಸ್ತುತ ಪಡಿಸುವ ‘ಅಭಿನಯ ಕಾರ್ಯಾಗಾರ’ವು ದಿನಾಂಕ 07 ಜುಲೈ 2025ರಿಂದ 24 ಜುಲೈ 2025ರವರೆಗೆ ಪ್ರತಿದಿನ ಬೆಳಿಗ್ಗೆ 6-30ರಿಂದ 9-30 ಗಂಟೆ ತನಕ ಬೆಂಗಳೂರಿನ ಜೆ.ಪಿ. ನಗರದಲ್ಲಿ ನಡೆಯಲಿದೆ. ಕುಮಾರಿ ಶ್ವೇತಾ ಶ್ರೀನಿವಾಸ್ ಮತ್ತು ಆಸಿಫ್ ಕ್ಷತ್ರಿಯ ಇವರುಗಳು ಈ ಕಾರ್ಯಾಗಾರವನ್ನು ನಡೆಸಿಕೊಡಲಿದ್ದು, ಹೆಚ್ಚಿನ ಮಾಹಿತಿ ಹಾಗೂ ನೋಂದಾವಣೆಗಾಗಿ 8050157443 ಮತ್ತು 9448276776 ಸಂಖ್ಯೆಯನ್ನು ಸಂಪರ್ಕಿಸಿರಿ. ಶ್ವೇತಾ ಶ್ರೀನಿವಾಸ್ (ನಿರ್ದೇಶಕರು) : ಶ್ವೇತಾ ಶ್ರೀನಿವಾಸ್ ಅವರು ಕನ್ನಡ ರಂಗಭೂಮಿಯ ಒಬ್ಬ ಚಿರಪರಿಚಿತ ಪ್ರತಿಭಾನ್ವಿತ ನಟಿ. ಬಾಲ್ಯದಿಂದಲೂ ರಂಗಭೂಮಿಯ ಒಡನಾಟ ಹೊಂದಿರುವ ಇವರು, ನಟನೆಯ ಜೊತೆಗೆ ಸೃಜನಶೀಲ ವಸ್ತ್ರ ವಿನ್ಯಾಸ ಮತ್ತು ನೃತ್ಯ ಸಂಯೋಜನೆಗೆ ದೇಶಾದ್ಯಂತ ಹೆಸರಾದವರು. ಇದಕ್ಕಾಗಿ ಇವರು ಹಲವು ರಾಜ್ಯ ಮತ್ತು ರಾಷ್ಟ್ರಪ್ರಶಸ್ತಿಗಳನ್ನು ಪಡೆದಿದ್ದಾರೆ. ನೀನಾಸಂ ಪದವೀಧರರಾದ ಇವರು, 60ಕ್ಕೂ ಹೆಚ್ಚು ಪ್ರಮುಖ ನಾಟಕಗಳಲ್ಲಿ ಪ್ರಮುಖ ಪಾತ್ರಗಳನ್ನು ವಹಿಸಿದ್ದಲ್ಲದೇ ಅನೇಕ ಚಲನಚಿತ್ರಗಳಲ್ಲಿ ಮತ್ತು ಧಾರಾವಾಹಿಗಳಲ್ಲಿ ನಟಿಸಿ ಮನೆಮಾತಾಗಿದ್ದಾರೆ.…

Read More

ಮಂಗಳೂರು : ಒಡಿಯೂರು ಶ್ರೀಗಳ ಜನ್ಮ ದಿನೋತ್ಸವ ಸಮಿತಿ ವತಿಯಿಂದ ಶ್ರೀಗಳವರ ಜನ್ಮದಿನೋತ್ಸವ – ಶ್ರೀ ಒಡಿಯೂರು ಗ್ರಾಮೋತ್ಸವ 2025 ಅಂಗವಾಗಿ ದಿನಾಂಕ 06 ಮತ್ತು 07 ಆಗಸ್ಟ್ 2025ರಂದು ಒಡಿಯೂರು ಸಂಸ್ಥಾನದ ರಾಜಾಂಗಣದಲ್ಲಿ ‘ವರ್ತಮಾನದ ತಲ್ಲಣಗಳು’ ಎಂಬ ವಿಷಯದಲ್ಲಿ ಅಂತರ್ ಕಾಲೇಜು ವಿದ್ಯಾರ್ಥಿಗಳ ಕಿರು ನಾಟಕ ಸ್ಪರ್ಧೆ ಆಯೋಜಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ಪದವಿ ಪೂರ್ವ, ಡಿಪ್ಲೊಮಾ, ವೃತ್ತಿಪರ ಕೋರ್ಸ್, ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು 10 ನಿಮಿಷದ, ಕನ್ನಡ ಅಥವಾ ತುಳು ಭಾಷೆಯ ಈ ಕಿರು ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ವಿದ್ಯಾಸಂಸ್ಥೆಯ ಮೂಲಕ ಹೆಸರು ನೋಂದಣಿ ಮಾಡಬೇಕಾಗಿದ್ದು, ಒಂದು ಸಂಸ್ಥೆಯ ಗರಿಷ್ಠ 2 ತಂಡಗಳಿಗೆ ಭಾಗವಹಿಸಲು ಅವಕಾಶವಿದೆ. ಸ್ಪರ್ಧೆಗೆ ನೋಂದಣಿ ಮಾಡಲು 08 ಜುಲೈ 2025 ಕೊನೆಯ ದಿನಾಂಕವಾಗಿದ್ದು, ವಿಜೇತ ತಂಡಕ್ಕೆ ಪ್ರಥಮ ಬಹುಮಾನ ರೂ.50 ಸಾವಿರ, ದ್ವಿತೀಯ ರೂ.30 ಸಾವಿರ ಹಾಗೂ ತೃತೀಯ ರೂ.20 ಸಾವಿರ ನಗದು ಹಾಗೂ ಟ್ರೋಫಿ, ಪ್ರಸಂಸಾ…

Read More

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕ ಮತ್ತು ನೆಲ್ಲಿಕಾರು ಜಿನದತ್ತ ಶೆಟ್ಟಿ ವಸಂತಮ್ಮ ಪ್ರತಿಷ್ಠಾನ ಇದರ ಸಹಯೋಗದಲ್ಲಿ ‘ಸಾಹಿತ್ಯ ಕೃತಿ ಅವಲೋಕನ’ ಕಾರ್ಯಕ್ರಮವನ್ನು ದಿನಾಂಕ 05 ಜುಲೈ 2025ರಂದು ಸಂಜೆ 4-00 ಗಂಟೆಗೆ ಮಂಗಳೂರಿನ ಶಾರದಾ ವಿದ್ಯಾ ಸಂಸ್ಥೆಯ ಧ್ಯಾನ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಶಾರದ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಡಾ. ಎಂ.ಬಿ. ಪುರಾಣಿಕ್ ಇವರು ಉದ್ಘಾಟನೆ ಮಾಡಲಿದ್ದು, ಕ.ಸಾ.ಪ. ಮಂಗಳೂರು ತಾಲೂಕು ಘಟಕದ ಅಧ್ಯಕ್ಷರಾದ ಡಾ. ಮಂಜುನಾಥ ಎಸ್. ರೇವಣಕರ್ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಗಣೇಶ್ ಪ್ರಸಾದ್ ಜೀಯವರ ‘ಕಾಂತೆ ಕವಿತೆ’ ಕೃತಿಯನ್ನು ಖ್ಯಾತ ಸಾಹಿತಿ ಪ್ರೊ. ಭುವನೇಶ್ವರಿ ಹೆಗಡೆ ಮತ್ತು ಡಾ. ಮೀನಾಕ್ಷಿ ರಾಮಚಂದ್ರರ ‘ಮಾತು ಎಂಬ ವಿಸ್ಮಯ’ ಎಂಬ ಕೃತಿಯನ್ನು ಸ್ವರೂಪ ಅಧ್ಯಯನ ಕೇಂದ್ರದ ಶ್ರೀಮತಿ ಸುಮಂಗಲಾ ಕೃಷ್ಣಾಪುರ ಇವರು ಅವಲೋಕನ ಮಾಡಲಿದ್ದಾರೆ.

Read More

ಮಂಗಳೂರು : ಮಂಗಳೂರಿನ ಸ್ವರಾಲಯ ಸಾಧನಾ ಫೌಂಡೇಶನ್ ಮತ್ತು ಕಲಾ ಶಾಲೆ ವತಿಯಿಂದ 94ನೇ ಸರಣಿಯ ‘ಸ್ವರಾಲಯ ಸಾಧನಾ ಶಿಬಿರ’ವು ದಿನಾಂಕ 22 ಜೂನ್ 2025ರಂದು ಬೋಳಾರದ ಪಾಲೆಮಾರ್ ಗಾರ್ಡನ್ ನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಮಾತನಾಡಿ “ಜೀವನದಲ್ಲಿ ಎಲ್ಲರೂ ಒಂದಲ್ಲ ಒಂದು ರೀತಿಯ ಒತ್ತಡವನ್ನು ಅನುಭವಿಸುತ್ತಾರೆ. ಅನೇಕರಿಗೆ ಈ ಒತ್ತಡವನ್ನು ನಿಭಾಯಿಸುವುದೇ ದೊಡ್ಡ ಸಮಸ್ಯೆ. ಆದರೆ ಯಾವುದೇ ರೀತಿಯ ಒತ್ತಡ ಇರಲಿ, ಅದನ್ನು ನಿಯಂತ್ರಿಸಲು ಸಂಗೀತದಷ್ಟು ಅತ್ಯುತ್ತಮವಾದ ಔಷಧ ಬೇರೆ ಇಲ್ಲ. ಸಂಗೀತ ಕ್ಯಾಂಪ್ ನಡೆಸುವುದೆಂದರೆ ಆರೋಗ್ಯ ಕ್ಯಾಂಪ್ ನಡೆಸಿದಂತೆ. ಅನೇಕ ರೋಗಗಳಿಗೆ ಇದೇ ಕ್ಯಾಂಪ್ ನಲ್ಲಿ ಔಷಧ ಸಿಗುತ್ತದೆ. ಆದ್ದರಿಂದ ನಿತ್ಯ ಸಂಗೀತ ಆಲಿಸುವ ಮೂಲಕ ಆರೋಗ್ಯ ಜೀವನ ನಡೆಸಬಹುದು. ಕೇವಲ ಮನುಷ್ಯರು ಮಾತ್ರ ಸಂಗೀತ ಅಲಿಸುವುದಲ್ಲ, ಮರ ಗಿಡಗಳು ಕೂಡಾ ಸಂಗೀತವನ್ನು ಆಲಿಸುತ್ತದೆ” ಎಂದು ಹೇಳಿದರು. ಮಂಗಳೂರು ಸ್ಟಾರ್ಟ್ ಸಿಟಿ ಜಿ.ಎಂ. ಅರುಣ್ ಪ್ರಭಾ ಮಾತನಾಡಿ,…

Read More

ಮೈಸೂರು : ನಟನ ರಂಗಶಾಲೆಯ ತಂಡ ಪ್ರಸ್ತುತ ಪಡಿಸುವ ಎ.ಎನ್. ಸ್ವಾಮಿ ವೆಂಕಟಾದ್ರಿ ಅಯ್ಯರ್ (ಸಂಸ) ರಚಿಸಿರುವ ‘ವಿಗಡ ವಿಕ್ರಮರಾಯ’ ನಾಟಕ ಪ್ರದರ್ಶನವನ್ನು ದಿನಾಂಕ 06 ಜುಲೈ 2025ರಂದು ಸಂಜೆ 6-30 ಗಂಟೆಗೆ ಮೈಸೂರಿನ ರಾಮಕೃಷ್ಣ ನಗರ, ನಟನ ರಂಗಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಕನ್ನಡ ನಾಡು ಕಂಡ ಅತ್ಯಂತ ಶ್ರೇಷ್ಠ ನಾಟಕಕಾರರಲ್ಲಿ ಪ್ರಮುಖರೆನಿಸಿದ ‘ಸಂಸ’ರ ವಿಶಿಷ್ಟ ನಾಟಕವಿದು. ಮೈಸೂರು ಸಂಸ್ಥಾನದ ಆಳ್ವಿಕೆಯಲ್ಲಿ ಕಂಡುಬಂದ ಘಟನಾವಳಿಗಳನ್ನು ಬಹು ಆಕರ್ಷಕ ಭಾಷೆಯಿಂದ ಅಪರೂಪದ ಸಂವಿಧಾನ ದೃಶ್ಯ ಕೌಶಲ್ಯ, ರೋಮಾಂಚಗೊಳಿಸುವ ನಾಟಕೀಯ ಗುಣಗಳಿಂದಾಗಿ ವೀಕ್ಷಕರ ವಿಮರ್ಶಕರ ಇಷ್ಟದ ನಾಟಕ. ಈ ನಾಟಕಕ್ಕೆ ಚೇತನ್ ಸಿಂಗಾನಲ್ಲೂರು ಸಂಗೀತ, ದಿಶಾ ರಮೇಶ್ ಬೆಳಕು ಹಾಗೂ ಮೇಘ ಸಮೀರ ವಿನ್ಯಾಸ ಮತ್ತು ನಿರ್ದೇಶನ ಮಾಡಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 7259537777, 9480468327 ಮತ್ತು 9845595505 ಸಂಪರ್ಕಿಸಿರಿ.

Read More

ಮಂಗಳೂರು : ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಮಂಗಳೂರು ಇದರ 17ನೇ ವಾರ್ಷಿಕೋತ್ಸವವನ್ನು ದಿನಾಂಕ 07 ಜುಲೈ 2025ರಂದು ಸಂಜೆ 6-00 ಗಂಟೆಗೆ ಮಂಗಳೂರಿನ ಸಂತ ಅಲೋಶಿಯಸ್ (ಪರಿಗಣಿತ) ವಿಶ್ವ ವಿದ್ಯಾಲಯದ ಎಲ್.ಸಿ.ಆರ್.ಐ. ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಹೆಗ್ಗೋಡಿನ ಜನಮನದಾಟ ಪ್ರಸ್ತುತ ಪಡಿಸುವ ಗಣೇಶ್ ಎಂ. ಹೆಗ್ಗೋಡು ಇವರ ನಿರ್ದೇಶನದಲ್ಲಿ ಪೂರ್ಣ ಚಂದ್ರ ತೇಜಸ್ವಿಯವರ ಕಥೆಯಾಧಾರಿತ ‘ಮಾಯಾ ಮೃಗ’ ಮತ್ತು ಬೂಕರ್ ವಿಜೇತೆ ಬಾನು ಮುಷ್ತಾಕ್ ಇವರ ಕಥೆಯಾಧಾರಿತ ‘ಎದೆಯ ಹಣತೆ’ ಎಂಬ ಕನ್ನಡ ನಾಟಕಗಳ ಪ್ರದರ್ಶನ ನಡೆಯಲಿದೆ. ಇದೇ ಸಂದರ್ಭದಲ್ಲಿ ಹಿರಿಯ ರಂಗನಟ ಲಕ್ಷ್ಮಣ ಕುಮಾರ್ ಮಲ್ಲೂರು ಇವರಿಗೆ ‘ರಂಗ ಭಾಸ್ಕರ ಪ್ರಶಸ್ತಿ ಪ್ರದಾನ ಮಾಡಲಾಗುವುದು.

Read More

ಕೋಣಾಜೆ : ಮಂಗಳೂರು ವಿಶ್ವವಿದ್ಯಾನಿಲಯದ ಡಾ. ಪಿ. ದಯಾನಂದ ಪೈ ಮತ್ತು ಶ್ರೀ‌ ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ಡಾ. ಬನಾರಿ, ಪ್ರೊ. ಸಾಮಗ, ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ ಇವರಿಗೆ 2024-25ನೇ ಸಾಲಿನ ‘ಯಕ್ಷಮಂಗಳ ಪ್ರಶಸ್ತಿ’ ಹಾಗೂ ಅಶೋಕ ಹಾಸ್ಯಗಾರ ಇವರ ‘ದಶರೂಪಕಗಳ ದಶಾವತಾರ’ ಕೃತಿಗೆ ‘ಯಕ್ಷಮಂಗಳ ಕೃತಿ ಪ್ರಶಸ್ತಿ’ ಪ್ರಧಾನ ಸಮಾರಂಭವು ದಿನಾಂಕ 27 ಜೂನ್ 2025ರಂದು ಮಂಗಳೂರು ವಿ.ವಿ.ಯ ಡಾ. ಯು.ಆರ್. ರಾವ್ ಸಭಾಂಗಣದಲ್ಲಿ ನಡೆಯಿತು. ಈ ಸಮಾರಂಭವನ್ನು ಉದ್ಘಾಟಿಸಿದ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ “ಯಕ್ಷಗಾನ ಕಲೆಗೆ ವಿಶೇಷ ಉತ್ತೇಜನವಿದೆ. ಮೂಡಲಪಾಯ ಕಲೆಗಳು ಹೊಸ ತಲೆಮಾರಿನ ನಿರ್ಲಕ್ಷ್ಯದಿಂದ ಹಿನ್ನಡೆ ಅನುಭವಿಸುತ್ತಿದೆ. ಆದರೆ ಯಕ್ಷಗಾನ ಸುಯೋಗವೆಂದರೆ ಇಂಜಿನಿಯರ್, ಡಾಕ್ಟರ್, ಶಿಕ್ಷಕರು ಮೊದಲಾದ ವಿವಿಧ ಕ್ಷೇತ್ರಗಳ ಆಸಕ್ತರ ಮೂಲಕ ಸಮೃದ್ಧವಾಗಿ ಬೆಳೆಯುತ್ತಿದೆ. ವಿದ್ಯಾವಂತರು ಸೃಜನಶೀಲತೆಗೆ ಒತ್ತು ಕೊಡುವಂತೆ ಪರಂಪರೆಯನ್ನೂ ಉಳಿಸಿಕೊಳ್ಳಬೇಕು” ಎಂದು ಹೇಳಿದರು. ಪ್ರೊ. ಕೆ. ಚಿನ್ನಪ್ಪ ಗೌಡರವರು…

Read More