Author: roovari

ತೆಕ್ಕಟ್ಟೆ: ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆಯ ಸಂಯೋಜನೆಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇದರ ಸಹಯೋಗದದೊಂದಿಗೆ ‘ಸಿನ್ಸ್ 1999 ಶ್ವೇತಯಾನ – 101’ ನೇ ಕಾರ್ಯಕ್ರಮದ ಅಂಗವಾಗಿ ಮೈಸೂರಿನ ‘ನಿರ್ದಿಗಂತ’ ತಂಡದಿಂದ ‘ತಿಂಡಿಗೆ ಬಂದ ತುಂಡೇರಾಯ’ ನಾಟಕದ ಪ್ರದರ್ಶನವು ದಿನಾಂಕ 21 ಜನವರಿ 2025ರಂದು ತೆಕ್ಕಟ್ಟೆಯ ಹಯಗ್ರೀವದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ರಂಗ ಸಾಹಿತಿಗಳಾದ ಅಭಿಲಾಷ ಸೋಮಯಾಜಿ ಮಾತನಾಡಿ “ನಾಟಕ ರಂಗಭೂಮಿಯ ವಿಶಿಷ್ಟವಾದ ಕಾರ್ಯದಿಂದಲೇ ರಂಗಕ್ಷೇತ್ರದ ಶಿಸ್ತು ಮತ್ತು ಮೌಲ್ಯ ವೃದ್ಧಿಯಾಗಿದೆ. ‘ನಿರ್ದಿಗಂತ’ ನಾಟಕ ತಂಡದಿಂದ ಹೊಸ ಹೊಸ ಕಲ್ಪನೆಯೊಂದಿಗೆ ಹೊಸ ಹೊಸ ಆವಿಷ್ಕಾರ ನಡೆಯುತ್ತಲೇ ಇದೆ. ರಂಗಭೂಮಿಯ ಪರಿಕಲ್ಪನೆಗಳು ಪ್ರತೀ ನಿರ್ದೇಶಕರಿಂದಲೂ ಬೇರೆ ಬೇರೆ ರೀತಿಯ ಆಯಾಮ ಹೊಂದಿ ವಿಭಿನ್ನವಾಗಿ ರಂಗದಲ್ಲಿ ಬಿತ್ತರಗೊಂಡು ಬುದ್ಧಿಗೆ ಕೆಲಸ ಕೊಡುವಂತಿರುತ್ತದೆ ಹಾಗೂ ಇನ್ನಷ್ಟು ಹುಡುಕಾಟಕ್ಕೆ ಆಸ್ಪದ ನೀಡುತ್ತದೆ” ಎಂದರು. ‘ರಸರಂಗ’ದ ಸುಧಾ ಕದ್ರಿಕಟ್ಟು, ನಿವೃತ್ತ ಜೀವ ವಿಮಾ ಅಧಿಕಾರಿಗಳಾದ ಸತ್ಯನಾರಾಯಣ ಅರಸ್, ಗುರುರಾಜ ಹೆಬ್ಬಾರ್ ಹಂಗಳೂರು, ದೈಹಿಕ ಶಿಕ್ಷಕರರಾದ ಉಮೇಶ್…

Read More

ಉಡುಪಿ : ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಉಡುಪಿ ಇದರ ವತಿಯಿಂದ ಪ್ರತಿಷ್ಠಿತ ಆಳ್ವಾಸ್ ಶಿಕ್ಷಣ ಸಂಸ್ಥೆ ಮೂಡುಬಿದ್ರೆ ಇದರ ವಿದ್ಯಾರ್ಥಿಗಳು ನಟಿಸಿರುವ ಹಿರಿಯ ಸಾಹಿತಿ ವೈದೇಹಿ ಇವರ ರಚನೆಯ ‘ನಾಯಿಮರಿ’ ನಾಟಕವು ದಿನಾಂಕ 30 ಜನವರಿ 2025 ಗುರುವಾರ ಉಡುಪಿಯ ಯಕ್ಷಗಾನ ಕಲಾರಂಗದ ಐ.ವೈ.ಸಿ. ಹವಾನಿಯಂತ್ರಿತ ಸಭಾಂಗಣದಲ್ಲಿ ಪ್ರದರ್ಶನಗೊಳ್ಳಲಿದೆ. ರಂಗ ಮಾಂತ್ರಿಕ ಜೀವನ ರಾಂ ಸುಳ್ಯ ಇವರ ನಿರ್ದೇಶನದ ಶ್ರೇಷ್ಠ ನಾಟಕಗಳಲ್ಲಿ ‘ನಾಯಿಮರಿ’ ನಾಟಕವು ಒಂದು. ಅದ್ಭುತ ಪರಿಕಲ್ಪನೆಯ ಈ ನಾಟಕ ಹಲವು ಪ್ರದರ್ಶನಗಳನ್ನು ಕಂಡಿರುತ್ತದೆ. ಚುರುಕು ನಟನೆ, ರಂಗ ಚಲನೆಗಳು, ರಂಗ ವಿನ್ಯಾಸ, ವಸ್ತ್ರ ವಿನ್ಯಾಸ, ರಂಗ ಪರಿಕರಗಳು ಹಾಗೂ ಬೆಳಕು ಎಲ್ಲವೂ ಈ ನಾಟಕದ ಯಶಸ್ಸಿಗೆ ಕಾರಣ. ಪ್ರತಿಯೊಬ್ಬ ಮಕ್ಕಳು, ಹಿರಿಯರು, ಕುಟುಂಬ ಸಮೇತರಾಗಿ ನೋಡಲೇಬೇಕಾದ ನಾಟಕ. ‘ನಾಯಿಮರಿ’ ನಾಟಕದಲ್ಲಿ ಬರುವ ನಾಯಿಮರಿ ಪಾತ್ರ, ಮಂಗಾಣಿ ಪಾತ್ರ ಹಾಗೂ ಎಲ್ಲಾ ಪಾತ್ರಗಳು ಅದ್ಭುತ.

Read More

ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ.) ಮತ್ತು ನಾಗರಿಕ ಸಲಹಾ ಸಮಿತಿ (ರಿ.) ಸುರತ್ಕಲ್ ಈ ಸಂಸ್ಥೆಗಳು ಜಂಟಿಯಾಗಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಪ್ರಸ್ತುತ ಪಡಿಸುವ ‘ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ’ಯನ್ನು ದಿನಾಂಕ 26 ಜನವರಿ 2025ರಂದು ಸಂಜೆ 5-30 ಗಂಟೆಗೆ ಸುರತ್ಕಲ್ಲಿನ ಅನುಪಲ್ಲವಿಯ ಶ್ರೀ ವಿಶ್ವೇಶ ತೀರ್ಥ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಮಂಗಳೂರಿನ ಕೃಷ್ಣಶ್ರೀ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗುವ ಈ ಸಂಗೀತ ಕಛೇರಿಯಲ್ಲಿ ಯುವ ಕಲಾ ಮಣಿ ವಿದ್ವಾನ್ ಅನೀಶ್ ವಿ. ಭಟ್ ಇವ ಶಿಷ್ಯ ಬೆಂಗಳೂರಿನ ಪ್ರದ್ಯುಮ್ನ ಭಟ್ ಇವರ ಹಾಡುಗಾರಿಕೆಗೆ ಪುತ್ತೂರಿನ ತನ್ಮಯೀ ಉಪ್ಪಂಗಳ ಮಯಲಿನ್ ಮತ್ತು ಮಂಗಳೂರಿನ ಯುವ ಕಲಾ ಮಣಿ ಕೃಷ್ಣ ಪವನ್ ಕುಮಾರ್ ಮೃದಂಗದಲ್ಲಿ ಸಾಥ್ ನೀಡಲಿದ್ದಾರೆ. ಮಣಿ ಕೃಷ್ಣಸ್ವಾಮಿ ಆಕಾಡೆಮಿಯ ಕಾರ್ಯದರ್ಶಿಯಾದ ಪಿ. ನಿತ್ಯಾನಂದ ರಾವ್ ಹಾಗೂ ಸುರತ್ಕಲ್ ನಾಗರಿಕ ಸಲಹಾ ಸಮಿತಿ ಅಧ್ಯಕ್ಷರಾದ ಡಾ. ಕೆ. ರಾಜಮೋಹನ್ ರಾವ್ ತಮಗೆಲ್ಲರಿಗೂ ಆದರದ ಸ್ವಾಗತ ಬಯಸಿದ್ದಾರೆ.

Read More

ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನೂತನವಾಗಿ ಪ್ರಾರಂಭಿಸಿರುವ ‘ಶ್ರೀಮತಿ ವಿಜಯ ವಿಷ್ಣು ಭಟ್ ದತ್ತಿ ಪ್ರಶಸ್ತಿ’ಗೆ ಕೊಡಗು ಜಿಲ್ಲೆಯ ಮಹಿಳಾ ಲೇಖಕಿಯರು ಪ್ರಕಟಿಸಿದ ಕನ್ನಡ ಭಾಷೆಯ ಕೃತಿಗಳನ್ನು ಆಹ್ವಾನಿಸಲಾಗಿದೆ. 2024-25ನೇ ಸಾಲಿನ ಪ್ರಶಸ್ತಿ ಪುರಸ್ಕಾರ ಪಡೆಯಲು ಆಸಕ್ತ ಮಹಿಳಾ ಲೇಖಕಿಯರು ತಾವು ರಚಿಸಿದ ಸೃಜನಶೀಲ ನಮಾಜಮುಖಿ ಕಥೆ, ಕಾದಂಬರಿ, ಕವನ ಸಂಕಲನ ಕೃತಿಗಳ ನಾಲ್ಕು ಪ್ರತಿಗಳನ್ನು ಅರ್ಜಿಯೊಂದಿಗೆ ಕಳುಹಿಸಬೇಕು. 2019ರ ನಂತರ ಪ್ರಕಟಿತ ಪುಸ್ತಕಗಳನ್ನು ಮಾತ್ರ ಕಳುಹಿಸಬೇಕು. ಸ್ಪರ್ಧೆಗೆ ಪುಸ್ತಕ ಕಳಿಸುವ ಲೇಖಕಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿರಬೇಕು. ಓರ್ವ ಲೇಖಕಿ ಒಂದು ಕೃತಿಯನ್ನು ಮಾತ್ರ ಕಳುಹಿಸಬೇಕು. ಲಕೋಟೆಯ ಮೇಲೆ ‘ಶ್ರೀಮತಿ ವಿಜಯ ವಿಷ್ಣು ಭಟ್ ದತ್ತಿ ಪ್ರಶಸ್ತಿಗೆ’ ಎಂದು ಬರೆಯತಕ್ಕದ್ದು. ಕೊಡಗು ಜಿಲ್ಲೆಯ ಲೇಖಕಿಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು. ಕಳುಹಿಸಬೇಕಾದ ವಿಳಾಸ : ಅಧ್ಯಕ್ಷರು, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಅಂಬೇಡ್ಕರ್ ಭವನದ ಬಳಿ, ಸುದರ್ಶನ ವೃತ್ತ, ಮಡಿಕೇರಿ. ಮೊಬೈಲ್ ಸಂಖ್ಯೆ : 94483…

Read More

ಮಂಗಳೂರು : ಸೌರಭ ಸಂಗೀತ ನೃತ್ಯ ಕಲಾ ಪರಿಷತ್ (ರಿ.) ಮಂಗಳೂರು ಪ್ರಸ್ತುತ ಪಡಿಸುವ ರಾಷ್ಟ್ರಕವಿ ಕುವೆಂಪು ರಚಿಸಿರುವ ‘ಶ್ರೀ ರಾಮಾಯಣ ದರ್ಶನಂ’ ನೃತ್ಯ ರೂಪಕದ ಪ್ರದರ್ಶನವನ್ನು ದಿನಾಂಕ 25 ಜನವರಿ 2025ರಂದು ಸಂಜೆ 5-30 ಗಂಟೆಗೆ ಮಂಗಳೂರಿನ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಂಶುಪಾಲರಾದ ಡಾ. ಗಣಪತಿ ಗೌಡ ಎಸ್., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ರಾಜೇಶ್ ಜಿ., ಯಾದವ ಸಭಾ ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀ ಎ.ಕೆ. ಮನಿಯಾಣಿ ಮತ್ತು ಕೊಲ್ಯ ನಾಟ್ಯ ನಿಕೇತನದ ವಿದುಷಿ ರಾಜಶ್ರೀ ಉಳ್ಳಾಲ್ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಿಂದ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಹಿರಿಯ ಪ್ರಾಧ್ಯಾಪಕರಾದ ಡಾ. ಮೋಹನ್ ಕುಂತಾರ್ ಇವರ ಪರಿಕಲ್ಪನೆಯ ವಿದುಷಿ ಶ್ರೀವಿದ್ಯಾ ಇವರ ನಿರ್ದೇಶನದಲ್ಲಿ ನೃತ್ಯ ರೂಪಕ ಪ್ರಸ್ತುತಗೊಳ್ಳಲಿದೆ.

Read More

ಮಂಗಳೂರು : ನವೋದಯ ಮಹಿಳಾ ಮಂಡಳಿ ಹಾಗೂ ನವೋದಯ ಅಂಗನವಾಡಿ ಕೇಂದ್ರ ಇದರ 40ನೇ ವರ್ಷದ ಸಾಧನಾ ಸಂಭ್ರಮ ಕಾರ್ಯಕ್ರಮವು ದಿನಾಂಕ 13 ಜನವರಿ 2025ರಂದು ಕದ್ರಿ ದೇವಸ್ಥಾನದ ಮಲ್ಲಿಕಾ ಕಲಾವೃಂದದ ವೇದಿಕೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ದ.ಕ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀಮತಿ ಶೋಭಾ ಬಿ. ಜಿ. ಮಾತನಾಡಿ “ಮಹಿಳಾ ಸಬಲೀಕರಣದ ಕಾರ್ಯದಲ್ಲಿ ನವೋದಯ ಮಹಿಳಾ ಮಂಡಳಿ ಹಾಗೂ ಅಂಗನವಾಡಿ ಕೇಂದ್ರದ ಕಾರ್ಯ ಮಾದರಿಯಾಗಿದೆ.” ಎಂದು ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಸಾಹಿತ್ಯ, ಯಕ್ಷಗಾನ, ರಂಗಭೂಮಿ, ಮಾಧ್ಯಮ ಹಾಗೂ ವಿವಿಧ ಕಲಾರಂಗದಲ್ಲಿ ಸಾಧನೆಗೈದ ತುಳು ಜಾನಪದ ವಿದ್ವಾಂಸ ಕದ್ರಿ ನವನೀತ ಶೆಟ್ಟಿ ಇವರಿಗೆ ‘ಕದ್ರದ ಬೊಳ್ಳಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಾಗೂ 94 ವರ್ಷ ಪ್ರಾಯದ ನಾಟಿ ವೈದ್ಯೆ ಯಮುನಾ ಬೈದೆತಿ, ಪ್ರತಿಭಾನ್ವಿತ ಹಳೆ ವಿದ್ಯಾರ್ಥಿಗಳಾದ ರಘುರಾಜ್ ಕದ್ರಿ, ಜೀವನ್ ಆಚಾರ್ಯ, ಅಪೇಕ್ಷ ವೈ. ಜೋಗಿ, ರಜಿತ್ ಕದ್ರಿ, ಮೊದಲಾದ ಸಾಧಕ ವಿದ್ಯಾರ್ಥಿಗಳನ್ನು ಹಾಗೂ…

Read More

ಪುತ್ತೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ ನೇತೃತ್ವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಮತ್ತು ಗ್ರಾಮ ಪಂಚಾಯತ್ ಕೆಯ್ಯೂರು ಸಹಕಾರದೊಂದಿಗೆ, ಕೆ.ಪಿ.ಎಸ್. ಸ್ಕೂಲ್ (ಪ್ರಾಥಮಿಕ) ಕೆಯ್ಯೂರು ಆಶ್ರಯದಲ್ಲಿ ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಸಂಯೋಜನೆಯಲ್ಲಿ, ಹೊರನಾಡ ಕನ್ನಡಿಗ ಮಿತ್ರಂಪಾಡಿ ಜಯರಾಮ್ ರೈ ಅಬುದಾಬಿಯವರ ಪೋಷಕತ್ವದಲ್ಲಿ ಯುವ ಜನತೆಯನ್ನು ಸಾಹಿತ್ಯ ಲೋಕದತ್ತ ಬರಮಾಡಿಕೊಳ್ಳುವ ಹಾಗೂ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಎಂಬ ಅಭಿಯಾನದಂಗವಾಗಿ ನಡೆಸುವ ‘ಗ್ರಾಮ ಸಾಹಿತ್ಯ ಸಂಭ್ರಮ’ ಸರಣಿ ಕಾರ್ಯಕ್ರಮ -20 ದಿನಾಂಕ 25 ಜನವರಿ 2025ರಂದು ಬೆಳಿಗ್ಗೆ 9-30 ಗಂಟೆಗೆ ಕೆಯ್ಯೂರು ಕೆ.ಪಿ.ಎಸ್. ಸ್ಕೂಲ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಕೆ.ಪಿ.ಎಸ್. ಸ್ಕೂಲ್ ಕೆಯ್ಯೂರು ಇದರ 8ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಯಶ್ವಿತಾ ಸಿ.ಎಚ್. ಇವರು ಗ್ರಾಮ ಸಾಹಿತ್ಯ ಸಂಭ್ರಮ ಇದರ ಸರ್ವಾಧ್ಯಕ್ಷತೆ ವಹಿಸಲಿರುವರು. ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಇವರ ಅಧ್ಯಕ್ಷತೆಯಲ್ಲಿ…

Read More

ಉಡುಪಿ : ಭಾವನಾ ಫೌಂಡೇಶನ್ ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ವತಿಯಿಂದ ಮಧುರಂ ವೈಟ್ ಲೋಟಸ್ ಹೋಟೆಲಿನ ಸಹಯೋಗದೊಂದಿಗೆ ಸಂಯೋಜಿಸಿದ ‘ಬೃಂದಾವನದಿಂದ ಉಡುಪಿಯೆಡೆಗೆ’ ಮಥುರಾ ಸಾಂಝಿ ಕಲಾಕೃತಿಗಳ ಪ್ರದರ್ಶನವು ದಿನಾಂಕ 22 ಜನವರಿ 2025ರಂದು ಬಡಗುಪೇಟೆಯಲ್ಲಿ ಉದ್ಘಾಟನೆಗೊಂಡಿತು. ಈ ಕಲಾ ಪ್ರದರ್ಶನವನ್ನು ಉದ್ಘಾಟಿಸಿದ ಆರ್ಕಿಟೆಕ್ಟ್ ಶ್ರೀಜಾ ಜಯಕುಮಾರ್ ಇವರು ಮಾತನಾಡಿ “ಭಾರತೀಯ ಕಲೆಯಲ್ಲಿಯೇ ಶ್ರೇಷ್ಠವಾದ ಹಾಗೂ ರಾಧೆಯ ಪ್ರೀತಿಯೊಂದಿಗೆ ಬೆಸೆದಿರುವ ಸಾಂಝಿ ಕಲೆಯನ್ನು ಉಡುಪಿಯ ಕಲಾ ರಸಿಕರಿಗೆ ಉಣಬಡಿಸುತ್ತಿರುವ ಭಾಸ ಗ್ಯಾಲರಿಯ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಇಂದಿನ ಕಟ್ಟಡಗಳ ಒಳಾಂಗಣ ವಿನ್ಯಾಸದಲ್ಲಿ ಈ ತೆರನಾದ ಕಲೆಗಳ ಮಹತ್ವ ಉಡುಪಿಯ ಕಲಾಪ್ರಿಯರಲ್ಲಿ ಒಂದು ಹೊಸ ಸಂಚಲನವನ್ನೇ ಸೃಷ್ಟಿಸಬಹುದು. ನಾವೆಲ್ಲ ಸೇರಿಕೊಂಡು ಈ ದೇಶೀಯ ಕಲೆಗೆ ಪ್ರೋತ್ಸಾಹಿಸೋಣ” ಎಂಬುದಾಗಿ ಆಶಿಸಿದರು. ರಾಷ್ಟ್ರಪ್ರಶಸ್ತಿ ಪುರಸ್ಕತ ಕಲಾವಿದರಾದ ಶ್ರೀ ರಾಮ್ ಸೋನಿಯವರು ಸಾಂಝಿ ಕಲೆಯ ಬೆಳವಣಿಗೆ ಹಾಗೂ ತಮ್ಮ ಕಲಾಕೃತಿಗಳಲ್ಲಿ ಕಂಡುಕೊಳ್ಳುತ್ತಿರುವ ನವೀನ ಪ್ರಯೋಗಗಳ ಬಗೆಗೆ ವಿವರಿಸಿದರು. ಚಿನ್ನದ ಲೇಪದೊಂದಿಗೆ ಸಾಂಝಿ ಕಲೆಯ ನಿರ್ಮಾಣ…

Read More

ಗಂಗಾವತಿ : ಅಖಿಲ ಭಾರತ ಸಾಹಿತ್ಯ ಪರಿಷತ್ತಿನ ರಾಜ್ಯ ಅಧಿವೇಶನವನ್ನು ಮೇ ತಿಂಗಳಲ್ಲಿ ದಾವಣಗೇರಿಯಲ್ಲಿ ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ‘ಸಾಹಿತ್ಯದಲ್ಲಿ ಸ್ವತ್ವ’ ಎಂಬ ವಿಷಯದ ಕವಿಗೋಷ್ಠಿ ಹಮ್ಮಿಕೊಂಡಿದ್ದು, ಕವಿತೆಗಳನ್ನು ಆಹ್ವಾನಿಸಿದೆ. ಈ ಕುರಿತು ಪರಿಷತ್ ವಿಭಾಗೀಯ ಪ್ರಮುಖ ಅಶೋಕ ರಾಯ್ಕ‌ರ್, ನಾಗಪ್ಪ ಬಡಿಗೇರಿ ತಿಳಿಸಿದ್ದಾರೆ. ಸಾಹಿತ್ಯವೂ ಸೇರಿದಂತೆ ಕಲೆ, ಶಿಕ್ಷಣ, ನಡೆ-ನುಡಿ, ಉಡುಗೆ-ತೊಡುಗೆ, ಪರಿಸರ, ಆಚರಣೆ, ವಾಣಿಜ್ಯ ಇತ್ಯಾದಿ ನಮ್ಮ ರಾಷ್ಟ್ರಜೀವನದ ವಿವಿಧ ರಂಗಗಳಲ್ಲಿ ಸ್ವಾತಂತ್ರ್ಯ ಕಳೆದುಕೊಂಡಾಗ ನಷ್ಟಗೊಂಡ ಸ್ವತ್ವವನ್ನು ಮತ್ತೆ ಗಳಿಕೊಳ್ಳಬೇಕಿತ್ತಷ್ಟೆ. ಸ್ವತ್ವವನ್ನು ಕಳಕೊಂಡರೆ ಸ್ವಾತಂತ್ರ್ಯವನ್ನು ಕಳಕೊಂಡಂತೆ. ಸ್ವಾತಂತ್ರ್ಯವನ್ನು ಗಳಿಸಿಕೊಳ್ಳುವುದೆಂದರೆ ಸ್ವತ್ವವನ್ನು ಪಡಕೊಳ್ಳುವುದೆಂದೇ ಅರ್ಥ, ಎಲ್ಲಾ ರಂಗಗಳಲ್ಲೂ ಸ್ವತ್ವದ ಅಭಿವ್ಯಕ್ತಿ ಸಾಧ್ಯವಾದಾಗ ಗಳಿಸಿಕೊಂಡ ಸ್ವಾತಂತ್ರ್ಯ ಪೂರ್ಣವಾಯಿತೆಂದುಕೊಳ್ಳಬಹುದು. ಎಲ್ಲಾ ರಂಗಗಳಲ್ಲಿ ನಾವು ಕಳೆದುಕೊಂಡ ನಮ್ಮತನವನ್ನು ಮತ್ತೆ ಪಡೆಯುವ ಸಾಧ್ಯತೆಗಳನ್ನು, ಅವು ಪಡೆಯಬೇಕಾದ ಅಭಿವ್ಯಕ್ತಿಯ ಬಗೆಯನ್ನು ಇತ್ಯಾದಿ ಹತ್ತು ಹಲವು ಆಯಾಮಗಳಲ್ಲಿ ಕೆಲವನ್ನಾದರೂ ಸ್ಪರ್ಶಿಸಿ ಉತ್ಕೃಷ್ಟ ಕಾವ್ಯಗುಣವುಳ್ಳ ಸ್ವರಚಿತ ಕವಿತೆಗೆ ಈ ಕವಿಗೋಷ್ಠಿಯಲ್ಲಿ ವಾಚನಕ್ಕೆ ಅವಕಾಶವಿದೆ. ಕವಿತೆಗಳು ಹದಿನಾರರಿಂದ ಇಪ್ಪತ್ತೆರಡು ಸಾಲುಗಳ ಮಿತಿಯಲ್ಲಿ…

Read More

ಮಂಗಳೂರು : ಕುಳಾಯಿ ಹೊಸಬೆಟ್ಟು ಇಲ್ಲಿರುವ ಶ್ರೀ ಶಾರದಾ ನಾಟ್ಯಾಲಯದ ವತಿಯಿಂದ ಲಲಿತ ಕಲಾ ಸಂಘ ಗೋವಿಂದ ದಾಸ ಕಾಲೇಜು ಸುರತ್ಕಲ್ ಇವರ ಸಹಯೋಗದೊಂದಿಗೆ ವಿದುಷಿ ಶೀಲಾ ದಿವಾಕರ್ ಇವರಿಗೆ ‘ಗಾನ ಶಾರದೆಗೆ ನಮನ’ ಗುರುವಿ ಗೊಂದು ನಾಟ್ಯ ನಮನ ಕಾರ್ಯಕ್ರಮವನ್ನು ದಿನಾಂಕ 26 ಜನವರಿ 2025ರಂದು ಸಂಜೆ 5-30 ಗಂಟೆಗೆ ಸುರತ್ಕಲ್ಲಿನ ಗೋವಿಂದ ದಾಸ ಕಾಲೇಜಿನ ರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೃಷ್ಣಮೂರ್ತಿ ಪಿ. ಇವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮದಲ್ಲಿ ವಿದ್ವಾನ್ ಶ್ರೀ ಕೆ. ಮುರಳೀಧರ್ ಇವರಿಂದ ನುಡಿ ನಮನ ನಡೆಯಲಿದೆ. ಶ್ರೀಮತಿ ಕಲಾವತಿ ಕೆ., ಶ್ರೀಮತಿ ಸಂಧ್ಯಾ ಗಣೇಶ್, ಕುಮಾರಿ ಪೂಜಾ ಆಚಾರ್ಯ, ಕುಮಾರಿ ದೀಕ್ಷಾ ಮತ್ತು ಕುಮಾರಿ ಲಹರಿ ಇವರ ಗೀತ ನಮನಕ್ಕೆ ಹರೀಶ್ ಮುಲ್ಕಿ ರಿದಂ ಪ್ಯಾಡ್, ವಿಜಯ್ ಕುಳಾಯಿ ಕೀ ಬೋರ್ಡ್ ಮತ್ತು ದರ್ಶನ್ ಮುಲ್ಕಿ ತಬಲಾ ಸಾಥ್ ನೀಡಲಿದ್ದಾರೆ. ವಿದುಷಿ ಶ್ರೀಮತಿ ಪ್ರಣತಿ ಸತೀಶ್, ಶ್ರೀಮತಿ ಅಪೂರ್ವ…

Read More