Author: roovari

ಕೂಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಹಮ್ಮಿಕೊಂಡಿರುವ ‘ಬಲೆ ತುಳು ಸಾಹಿತ್ಯ ಓದುಗ’ ಅಭಿಯಾನದ ಎರಡನೇ ಕಾರ್ಯಕ್ರಮ ದಿನಾಂಕ 09 ಜನವರಿ 2025 ರಂದು ಮಂಗಳೂರಿನ ಉರ್ವಸ್ಟೋರ್ ನಲ್ಲಿರುವ ತುಳುಭವನದ ತುಳು ಸಾಹಿತ್ಯ ಆಕಾಡಮಿಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ತುಳು ಸಾಹಿತಿ ಹಾಗೂ ನಾಟಕಗಾರ ಪರಮಾನಂದ ಸಾಲ್ಯಾನ್ ಮಾತನಾಡಿ “ವಿದ್ಯಾರ್ಥಿಗಳಲ್ಲಿ ತುಳು ಸಾಹಿತ್ಯದ ಬಗ್ಗೆ ಅಭಿರುಚಿ ಮೂಡಿಸಲು ಇಂತಹ ಅಭಿಯಾನ ಸೂಕ್ತ. ತುಳು ಬದುಕಿನ ನಂಬಿಕೆಯ ಜತೆಗೆ ಜಿಜ್ಞಾಸೆಯನ್ನು ಸಮಚಿತ್ತದಿಂದ ಕಾಣುವ ಪ್ರಜ್ಞಾವಂತಿಕೆ ಓದಿನ ಮೂಲಕ ಮೂಡಲಿದೆ” ಎಂದರು. ಇದೇ ಸಂದರ್ಭದಲ್ಲಿ ಅಕಾಡೆಮಿಯ ತ್ರೈಮಾಸಿಕ ಪತ್ರಿಕೆ ‘ಮದಿಪು’ ಸಂಚಿಕೆಯನ್ನು ಲೋಕಾರ್ಪಣೆಗೊಳಿಸಿದ ಮಂಗಳೂರು ಪ್ರೆಸ್ ಕ್ಲಬ್ ಇದರ ಅಧ್ಯಕ್ಷರಾದ ಪಿ. ಬಿ. ಹರೀಶ್ ರೈ ಮಾತನಾಡಿ “ಪ್ರತಿ ಸಂದರ್ಭದಲ್ಲಿಯೂ ಅಕಾಡಮಿಗಳು ಸರಕಾರದತ್ತ ನಿರೀಕ್ಷೆ ಮಾಡುವುದಕ್ಕಿಂತ ಸ್ವಯಂ ಸಂಪನ್ಮೂಲ ಕ್ರೂಡೀಕರಿಸಿ ಜನಸಹಭಾಗಿತ್ವದಲ್ಲಿ ಕಾರ್ಯಕ್ರಮ ರೂಪಿಸುವುದು ಅಗತ್ಯ” ಎಂದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಇವರ ಅಧ್ಯಕ್ಷತೆಯಲ್ಲಿ…

Read More

ಬೆಂಗಳೂರು : ನಾಟಕ ಬೆಂಗಳೂರು 25 ರಂಗಭೂಮಿ ಸಂಭ್ರಮದ ಪ್ರಯುಕ್ತ ವಿಜಯನಗರ ಬಿಂಬ (ರಿ.) ಪ್ರಸ್ತುತ ಪಡಿಸುವ ಬರ್ಟೋಲ್ಟ್ ಬ್ರೆಕ್ಟ್ ಇವರು ರಚಿಸಿರುವ ಡಾ. ಎಸ್.ವಿ. ಕಶ್ಯಪ್ ಇವರ ನಿರ್ದೇಶನದಲ್ಲಿ ‘ಮದರ್ ಕರೇಜ್’ ನಾಟಕ ಪ್ರದರ್ಶನವನ್ನು ದಿನಾಂಕ 21 ಜನವರಿ 2025ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ನಾಟಕವನ್ನು ಲಿಂಗದೇವರು ಹಳೆಮನೆ ಇವರು ಕನ್ನಡಕ್ಕೆ ಅನುವಾದಿಸಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಪ್ರಸ್ತುತಗೊಳ್ಳಲಿದೆ.

Read More

ಮಂಗಳೂರು : ನವಭಾರತ ಎಜುಕೇಶನ್ ಸೊಸೈಟಿ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ನವಭಾರತ ಯಕ್ಷಗಾನ ಅಕಾಡೆಮಿಯ ‘ದಶಮಾನೋತ್ಸವ ಸಮಾರಂಭವು ದಿನಾಂಕ 11 ಜನವರಿ 2025ರಂದು ಮಂಗಳೂರಿನ ಮಣ್ಣಗುಡ್ಡೆ ಸಂಘನಿಕೇತನದ ‘ಸುಜ್ಞಾನ’ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಪಿ. ವಾಮನ ಶೆಣೈಯವರು ಮಾತನಾಡಿ “ನಮ್ಮ ಭಾರತೀಯ ಸಂಸ್ಕೃತಿಗಳನ್ನು ಯಕ್ಷಗಾನ ಪ್ರತಿಪಾದಿಸುತ್ತಿದೆ. ದೈಹಿಕ ಶ್ರಮದ ಮೂಲಕ, ಅದರಲ್ಲಿನ ಲಾಸ್ಯದ ಮೂಲಕ, ನಾಟ್ಯದ ಮೂಲಕ ಭಿನ್ನಭಿನ್ನ ಪರಂಪರೆಯನ್ನು ಒಂದೇ ಸುತ್ತಿನಡಿ ತಂದು ಅದು ಬೆಳಗುತ್ತದೆ. ಶಿಕ್ಷಣದ ಪ್ರತಿಯೊಂದು ರೆಂಬೆಗಳೂ ತುಂಬಿಕೊಂಡಿರಬೇಕಾದರೆ ಈ ರೀತಿಯ ಸಾಂಸ್ಕೃತಿಕ ಪುನರುತ್ಥಾನ ಈ ವಿಶಿಷ್ಠ ಕಲೆಯಲ್ಲಿದೆ. ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಉದಿಸಿದ ನವಭಾರತ ಎಜ್ಯುಕೇಶನ್ ಸೊಸೈಟಿಯಲಿ ಯಕ್ಷಗಾನ ಅಕಾಡೆಮಿಯನ್ನು ನಡೆಸುತ್ತಾ ಇದೀಗ ಹತ್ತರ ಸಂಭ್ರಮದಲ್ಲಿದೆ. ನಗರದ ಬೇರೆ ಬೇರೆ ಶಾಲೆಗಳಿಂದ ಇಲ್ಲಿ ಯಕ್ಷ ಶಿಕ್ಷಣಕ್ಕಾಗಿ ಬರುವ ವಿದ್ಯಾರ್ಥಿಗಳಿಗೆ ನಾವು ಮುಕ್ತವಾಗಿ ಶಿಕ್ಷಣ ನೀಡುತ್ತಿದ್ದೇವೆ. ಈ ಪ್ರಕ್ರಿಯೆಗಾಗಿ ನಾವೆಲ್ಲರೂ ಕೈಜೋಡಿಸಿ ಸಹಯೋಗಿಗಳಾಗೋಣ ಎಂದು ಕರೆ ನೀಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶ್ರೀ…

Read More

ಉಡುಪಿ :ಉಡುಪಿ ತುಳು ಕೂಟದ ಆಶ್ರಯದಲ್ಲಿ ನಡೆಯುವ ‘ಎಸ್. ಯು. ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿ’ಗೆ ತುಳು ಕಾದಂಬರಿಗಳ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ. ಹಸ್ತಪ್ರತಿಗಳು ಈವರೆಗೆ ಯಾವುದೇ ಬಹುಮಾನಕ್ಕೆ ಆಯ್ಕೆಯಾಗಿರಬಾರದು ಹಾಗೂ ಮುದ್ರಿತವಾಗಿರಬಾರದು. ಮುದ್ರಿಸುವಾಗ ಕೌನ್ 1/8 ಆಕಾರದಲ್ಲಿ 120 ಪುಟಗಳನ್ನು ಮೀರದಷ್ಟು ದೀರ್ಘವಾಗಿರಬೇಕು. ಹಸ್ತಪ್ರತಿಗಳು ಸುಂದರವಾದ ಕೈಬರಹ, ಬೆರಳಚ್ಚು ಅಥವಾ ಕಂಪ್ಯೂಟರ್ ಮುದ್ರಿತ (ಡಿ. ಟಿ. ಪಿ.) ರೂಪದಲ್ಲಿ ಇರಬಹುದು. ಹಸ್ತ ಪ್ರತಿಯನ್ನು 31 ಜನವರಿ 2025ರ ಒಳಗೆ ತಲುಪಿಸಬೇಕು. ಹೆಚ್ಚಿನ ಮಾಹಿತಿಗೆ ಕಾದಂಬರಿ ಸ್ಪರ್ಧೆಯ ಸಂಚಾಲಕಿ ಶಿಲ್ಪಾ ಜೋಷಿ – 7892194150 ಇವರನ್ನು ಸಂಪರ್ಕಿಸುವಂತೆ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದ್ದಾರೆ.

Read More

ಬೆಂಗಳೂರು : ಪ್ರಾಮಾಣಿಕ ಮನಸುಗಳ ಸಂಗಮವಾದ ಜನಸಿರಿ ತಂಡ (ರಿ.) ಇದರ ವತಿಯಿಂದ ಕರುನಾಡ ಕವಿಗಳಿಂದ ಏಕಕಾಲದಲ್ಲಿ 21 ನಿಮಿಷದೊಳಗೆ ರೈತರ ಬಗ್ಗೆ ಕವನ ರಚಿಸುವ ‘ರಾಜ್ಯಮಟ್ಟದ ಕವಿಗಳ ಕಲರವ 2025’ ಕಾರ್ಯಕ್ರಮವನ್ನು ದಿನಾಂಕ 09 ಫೆಬ್ರವರಿ 2025ರಂದು ಬೆಂಗಳೂರಿನ ಸರ್ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಭಾಗವಹಿಸುವ ಕವಿಗಳಿಗೆ ನಿಯಮಾವಳಿಗಳು : * ರೈತರನ್ನು ಕುರಿತು ಕವನ ರಚಿಸಬೇಕು. * ನಿಗದಿಪಡಿಸಿದ ಸಮಯಕ್ಕಿಂತ ಅರ್ಧ ಗಂಟೆ ಮೊದಲೇ ಸಭಾಂಗಣದಲ್ಲಿ ಹಾಜರಿರಬೇಕು. * ಜನಸಿರಿ ಸಂಸ್ಥೆ ನೀಡುವ ಬರವಣಿಗೆ ಪ್ರತಿಯಲ್ಲಿರುವ ಸೂಚನೆಗಳನ್ನು ಪಾಲಿಸುತ್ತಾ ಅದರಲ್ಲಿಯೇ ಕವನ ರಚಿಸಬೇಕು. * ನಕಲು ಮಾಡಿ ಬರೆಯುವ ಹಾಗಿಲ್ಲ. ಪ್ರಾಮಾಣಿಕ ಮನಸ್ಸಿನೊಂದಿಗೆ ಭಾಗವಹಿಸಬೇಕು. * ಲಘು ಉಪಹಾರದ ವ್ಯವಸ್ಥೆ ಇರುತ್ತದೆ. * ಭಾಗವಹಿಸುವ ಕವಿಗಳಿಗೆ ಪ್ರಶಸ್ತಿ ಪತ್ರದೊಂದಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಗುವುದು. * ಭಾಗವಹಿಸಲು ಇಚ್ಚಿಸುವ ಕವಿಗಳು ಪೂರ್ಣ ವಿಳಾಸದೊಂದಿಗೆ ಮೊದಲೇ ಹೆಸರು ನೋಂದಾಯಿಸಿಕೊಳ್ಳಬೇಕಾದ ದೂರವಾಣಿ ಸಂಖ್ಯೆ- ಜನಸಿರಿ : 9206199955. * ಕವಿಗಳು…

Read More

ಮಂಗಳೂರು : ಮಂಗಳೂರಿನ ಟಿ. ಎಂ. ಎ. ಪೈ ಇಂಟನ್ಯಾಷನಲ್ ಕನ್ವೆನ್ಶನ್ ಸೆಂಟರ್ ನಲ್ಲಿ ನಡೆದ ಮಂಗಳೂರು ಸಾಹಿತ್ಯ ಉತ್ಸವದ 7ನೇ ಆವೃತ್ತಿಯ ಅಂಗವಾಗಿ ‘ತುಳು ಸಾಹಿತ್ಯ ಆಳ- ಅಗಲ-ಆವಿಷ್ಕಾರಗಳು’ ವಿಷಯದಲ್ಲಿ ಚರ್ಚೆಯು ದಿನಾಂಕ 11 ಜನವರಿ 2025 ರಂದು ಟಿ. ಎಂ. ಎ. ಪೈ ಇಂಟನ್ಯಾಷನಲ್ ಕನ್ವೆನ್ಷನ್ ಸೆಂಟರ್ ಇಲ್ಲಿನ ಹರಟೆ ಕಟ್ಟೆ ನಡೆಯಿತು. ವಿಚಾರಗೋಷ್ಠಿಯಲ್ಲಿ ಭಾಗವಹಿಸಿದ ಡಾ. ತುಕಾರಾಂ ಪೂಜಾರಿ ಹಾಗೂ ಶಶಿರಾಜ್ ಕಾವೂರು ಮಾತನಾಡಿ “ತುಳು ಭಾಷೆ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಸಾಹಿತ್ಯ ಭಂಡಾರವನ್ನು ಹೊಂದಿದೆ. ಆದರೂ ಬಹುತೇಕ ಸಾಹಿತ್ಯ ಮತ್ತು ವರದಿಗಳು ಕನ್ನಡ ಅಥವಾ ಇಂಗ್ಲಿಷ್‌ನಲ್ಲಿ ಮಾತ್ರ ಪ್ರಕಟಗೊಳ್ಳುತ್ತಿವೆ. ನಮ್ಮ ತಾಯ್ನುಡಿಯಾದ ತುಳುವಿನಲ್ಲಿ ಸಾಹಿತ್ಯ, ಸಂಶೋಧನೆ, ಮತ್ತು ಪತ್ರಿಕೋದ್ಯಮಕ್ಕೆ ಹೆಚ್ಚಿನ ಒತ್ತಡ ಹಾಕಬೇಕಾಗಿದೆ. ತುಳು ಭಾಷೆಯ ಬೆಳವಣಿಗೆಯನ್ನು ಉತ್ತೇಜಿಸಲು ಮತ್ತು ಅದರ ಸಮೃದ್ಧ ಪರಂಪರೆಯನ್ನು ಮುಂದಿನ ಪೀಳಿಗೆಗಳಿಗೆ ಕೊಂಡೊಯ್ಯಲು, ತುಳುವಿನಲ್ಲಿ ಪ್ರಕಟಣೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಅಗತ್ಯವಿದೆ. ತುಳು ಭಾಷೆಯ ಸಂಸ್ಕೃತಿ ಮತ್ತು ಪರಂಪರೆಯನ್ನು…

Read More

ಕನಕಪುರ : ರಾಷ್ಟ್ರಪ್ರಶಸ್ತಿ ಪುರಸ್ಕೃತ ಮಕ್ಕಳ ಸಂಸ್ಥೆ ‘ರಂಗಕಹಳೆ’ ಬೆಂಗಳೂರು ಇದರ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದೊಂದಿಗೆ ‘23ನೇ ಕುವೆಂಪು ನಾಟಕೋತ್ಸವ 2024-25’ವನ್ನು ದಿನಾಂಕ 18 ಜನವರಿ 2025 ಮತ್ತು 19 ಜನವರಿ 2025ರಂದು ಪ್ರತಿದಿನ ಸಂಜೆ 6-00 ಗಂಟೆಗೆ ಕನಕಪುರದ ಡಾ. ಬಿ.ಆರ್. ಅಂಬೇಡ್ಕರ್ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 18 ಜನವರಿ 2025ರಂದು ‘ಬೊಮ್ಮನ ಹಳ್ಳಿಯ ಕಿಂದರಿ ಜೋಗಿ’ ಮತ್ತು ‘ಮೋಡಣ್ಣನ ತಮ್ಮ’ ಎಂಬ ನಾಟಕ ಪ್ರದರ್ಶನ ಹಾಗೂ ಶ್ರೀ ಕುವೆಂಪು ಗೀತೆ ಗಾಯನ ಮತ್ತು ನೃತ್ಯ ಪ್ರದರ್ಶನ ನಡೆಯಲಿದೆ. ದಿನಾಂಕ 19 ಜನವರಿ 2025ರಂದು ಬಾಲಕ ಕುವೆಂಪು ಕಿರುಚಿತ್ರ ಹಾಗೂ ‘ಶೂದ್ರತಪಸ್ವಿ’ ಮತ್ತು ‘ಯಮನ ಸೋಲು’ ನಾಟಕ ಪ್ರದರ್ಶನಗೊಳ್ಳಲಿದೆ.

Read More

ಮಂಗಳೂರು : ಮಂಗಳೂರಿನ ಟಿ. ಎಂ. ಎ. ಪೈ ಇಂಟನ್ಯಾಷನಲ್ ಕನ್ವೆನ್ಶನ್ ಸೆಂಟರ್ ನಲ್ಲಿ ನಡೆದ ಮಂಗಳೂರು ಸಾಹಿತ್ಯ ಉತ್ಸವದ 7ನೇ ಆವೃತ್ತಿಯ ಅಂಗವಾಗಿ ‘ಪತ್ರಿಕೋದ್ಯಮ ಮತ್ತು ಸಾಹಿತ್ಯ – ಒಂದು ಹರಟೆ’ ವಿಷಯದಲ್ಲಿ ಚರ್ಚೆಯು ದಿನಾಂಕ 11 ಜನವರಿ 2025 ರಂದು ಸಭಾಂಗಣದ ಎರಡನೇ ಸಭಾಸದನದಲ್ಲಿ ನಡೆಯಿತು. ಮೇಲಿನ ವಿಷಯದಲ್ಲಿ  ಜೋಗಿ ಗಿರೀಶ್ ರಾವ್ ಹತ್ವಾರ್ ಹಾಗೂ ರವಿ ಹೆಗಡೆ ಚರ್ಚೆ ಮಾಡಿದರು. ಜೋಗಿ ಗಿರೀಶ್ ರಾವ್ ಹತ್ವಾರ್ : ಕನ್ನಡ ಬರಹಗಾರರು ಮತ್ತು ಪತ್ರಕರ್ತರು ಕನ್ನಡ ನವ ಸಾಹಿತ್ಯ ಬರಹಗಾರರಲ್ಲಿ ಒಬ್ಬರಾದ ಇವರು ಅನೇಕ ಕನ್ನಡ ನಿಯತಕಾಲಿಗರು ಮತ್ತು ದಿನ ಪತ್ರಿಕೆಯಲ್ಲಿ ಸಣ್ಣ ಕಥೆ , ಕಾದಂಬರಿ ಹಾಗು ಅಂಕಣಗಳನ್ನು ಬರೆದಿದ್ದಾರೆ . ರವಿ ಹೆಗಡೆ ; ಅವರು ಕನ್ನಡ ಪ್ರಭಾ ಪತ್ರಿಕೆಯಲ್ಲಿ ಮುಖ್ಯ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಹಾಗೆ ಏಷಿಯಾನೆಟ್ ಸುವರ್ಣ ನ್ಯೂಸ್ ನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಕಾಲಚಕ್ರದೊಂದಿಗೆ ಸಾಕಷ್ಟು ಬದಲಾವಣೆಗಳು…

Read More

ಮಂಗಳೂರು : ಮಂಗಳೂರಿನ ಟಿ. ಎಂ. ಎ. ಪೈ ಇಂಟನ್ಯಾಷನಲ್ ಕನ್ವೆನ್ಶನ್ ಸೆಂಟರ್ ನಲ್ಲಿ ನಡೆದ ಮಂಗಳೂರು ಸಾಹಿತ್ಯ ಉತ್ಸವದ 7ನೇ ಆವೃತ್ತಿಯ ಅಂಗವಾಗಿ ‘ಗೊಂದಲಿಗರ ಪದಗಳು, ಹಾಡು ಮತ್ತು ಕಥೆಯನ್ನು’ ಧಾರವಾಡದ ಪ್ರಸಿದ್ಧ ಜಾನಪದ ಗಾಯಕರಾದ ವಿಠಲ್ ಗೊಂದಲೆ ಮತ್ತು ಭಲಾರಾಮ ಪ್ರಸ್ತುತಪಡಿಸಿದರು. ದಿನಾಂಕ 11 ಜನವರಿ 2025ರಂದು ಅವರು ತಮ್ಮ ಗಾಯನದ ಮೂಲಕ ಧಾರವಾಡದ ಸಾಂಸ್ಕೃತಿಕ ಪರಂಪರೆಯನ್ನು ಪ್ರೇಕ್ಷಕರಿಗೆ ಪರಿಚಯಿಸಿದರು. ಈ ಕಾರ್ಯಕ್ರಮವನ್ನು ನಿರ್ವಹಿಸಿದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್‌ ಇದರ ಸಂವಹನ ಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾದ ಶ್ರೀರಾಜ್ ಗುಡಿ ಮಾತನಾಡಿ “ಗೀತೆಗಳ ಸಾಂಸ್ಕೃತಿಕ ಪರಿಪೂರ್ಣತೆ ಹಾಗೂ ಈಗಿನ ಕಾಲದಲ್ಲಿ ನುಡಿಸಂಪ್ರದಾಯಗಳ ಸಂರಕ್ಷಣೆ ಅತ್ಯಗತ್ಯ. ಕುಟುಂಬದ ಆರಾಧ್ಯ ದೇವತೆ ದೇವಿಯಾಗಿರುವ ಸಂದರ್ಭದಲ್ಲಿ ವಿಶೇಷ ಸಂದರ್ಭಗಳಲ್ಲಿ , ಈ ಹಾಡುಗಳನ್ನು ಹಾಡುವ ಸಂಪ್ರದಾಯವಿದೆ. ಇವು ನಂಬಿಕೆಯನ್ನು ಮಾತ್ರವಲ್ಲ, ಸಮಾಜದ ಜೊತೆಗಿನ ನಿಕಟ ಸಂಬಂಧವನ್ನು ಪ್ರತಿಬಿಂಬಿಸುತ್ತವೆ. ಇವರು ಕೇವಲ ವೇದಿಕೆ ಪ್ರದರ್ಶನಕ್ಕಾಗಿ ಅಲ್ಲ, ಅವರ ಶ್ರೀಮಂತ ಜಾನಪದ ಪರಂಪರೆಯ ಉಳಿವಿಗಾಗಿ…

Read More

‘ಸಂಸ’ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಕನ್ನಡದ ಖ್ಯಾತ ಸಾಹಿತಿಗಳಲ್ಲಿ ಒಬ್ಬರು ಎ. ಎನ್. ಸಾಮಿ ವೆಂಕಟಾದ್ರಿ ಅಯ್ಯರ್. ಎಲ್ಲರೂ ಪ್ರೀತಿಯಿಂದ ಕರೆಯುತ್ತಿದ್ದದ್ದು ‘ಸಾಮಿ’ ಎಂದು. ಇವರು ತಮ್ಮ ಹೆಸರನ್ನು ‘ಸಾಮಿ’ , ‘ಸಾಮಿ ವೆಂಕಟಾದ್ರಿ’ ‘ಎ.ಎನ್. ಸಾಮಿ ವೆಂಕಟಾದ್ರಿ ಅಯ್ಯರ್’ ಹೀಗೆ ಬೇರೆ ಬೇರೆ ರೀತಿಯಲ್ಲಿ ಬರೆಯುತ್ತಿದ್ದರು. 1898 ಜನವರಿ 13ರಂದು ಮೈಸೂರು ಸಂಸ್ಥಾನದ ಯಳಂದೂರು ತಾಲೂಕಿನ ಅಗರ ಎಂಬ ಗ್ರಾಮದ ನರಸಿಂಹ ಪಂಡಿತ ಮತ್ತು ಗೌರಮ್ಮ ದಂಪತಿಯ ಮೂರು ಮಂದಿ ಮಕ್ಕಳಲ್ಲಿ ಕೊನೆಯವರು. ಇವರ ಕಾವ್ಯನಾಮ ಸಂಸ ಆಗಿದ್ದು ಒಂದು ವಿಶೇಷ ಸನ್ನಿವೇಶ. ಸಾಹಿತ್ಯ ಕ್ಷೇತ್ರದಲ್ಲಿ ಸಂಸರು ಗುರುತಿಸಿಕೊಂಡದ್ದು 1925ರಲ್ಲಿ ಪ್ರಕಟವಾದ ಇವರ ವಿಗಡ ವಿಕ್ರಮರಾಯ ನಾಟಕದಿಂದ. ‘ಕಂಸ’ ಎಂಬ ಕಾವ್ಯನಾಮದಿಂದ ಈ ನಾಟಕಕ್ಕೆ ಪ್ರಕಟಣೆ ನೀಡಿದರೂ ಮುದ್ರಣ ಮಾಡುವಾಗ ಅದು “ಸಂಸ” ಎಂದು ತಪ್ಪಾಗಿ ಮುದ್ರಣಗೊಂಡರೂ ಮುಂದೆ ಅವರ ಕಾವ್ಯನಾಮವಾಗಿಯೇ ಉಳಿದುಕೊಂಡಿತು. ಪ್ರೌಢಶಾಲೆಯ ವಿದ್ಯಾಭ್ಯಾಸವನ್ನು ಪೂರ್ತಿಗೊಳಿಸದೆ ನಿಲ್ಲಿಸಿದ ಸಂಸರು ಮಹಾರಾಜ ಕಾಲೇಜಿನಲ್ಲಿ ಕನ್ನಡ ಪಂಡಿತರಾಗಿದ್ದ ಕರಿಬಸಪ್ಪ ಶಾಸ್ತ್ರಿಗಳ ಗರಡಿಯಲ್ಲಿ…

Read More