Author: roovari

ಸುರತ್ಕಲ್: ಹಿಂದೂ ವಿದ್ಯಾದಾಯಿನಿ ಸಂಘ ಸುರತ್ಕಲ್‌ ಇದರ ಆಡಳಿತಕ್ಕೊಳಪಟ್ಟ ಗೋವಿಂದ ದಾಸ ಕಾಲೇಜಿನ ಗ್ರಂಥಾಲಯ ವಿಭಾಗವು, ಆಂತರಿಕ ಗುಣಮಟ್ಟ ಖಾತರಿ ಕೋಶದ ಸಹಭಾಗಿತ್ವದಲ್ಲಿ ನಡೆಸುತ್ತಿರುವ ‘ಪುಸ್ತಕ ಪ್ರೀತಿ ಪರಿಚಯ’ ಸರಣಿ ಕಾರ್ಯಕ್ರಮ ದಿನಾಂಕ 12 ಮಾರ್ಚ್ 2025ರಂದು ನಡೆಯಿತು. ಕಾರ್ಯಕ್ರಮದಲ್ಲಿ ತೃತೀಯ ಬಿ. ಎ. ವಿದ್ಯಾರ್ಥಿನಿ ಧನುಶ್ರೀ ಇವರು ಕುಂ. ವೀರಭದ್ರಪ್ಪ ಬರೆದ ಚಾಪ್ಲಿನ್ (ಜೀವನ ಮತ್ತು ಸಾಧನೆ) ಎಂಬ ಪುಸ್ತಕವನ್ನು ಪರಿಚಯಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಹರೀಶ ಆಚಾರ್ಯ ಪಿ. ಇವರು ಧನುಶ್ರೀ ಇವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಆಶಾಲತಾ ಪಿ., ಪ್ರಾಧ್ಯಾಪಕರುಗಳಾದ ಡಾ.ಸುಧಾ ಯು., ಡಾ. ವಿಜಯಲಕ್ಷ್ಮೀ, ಡಾ. ಸಂತೋಷ್ ಆಳ್ವ, ಕಿಟ್ಟು, ಹಾಗೂ ಗ್ರಂಥಪಾಲಕಿ ಡಾ. ಸುಜಾತಾ ಬಿ., ಉಪಸ್ಥಿತರಿದ್ದರು. ತೃತೀಯ ಬಿ.ಎ. ವಿದ್ಯಾರ್ಥಿನಿ ಮೇಘ ಸ್ವಾಗತಿಸಿ, ವಂದಿಸಿದರು.

Read More

ಬೆಂಗಳೂರು : ರಂಗಶಾಲ ಅರ್ಪಿಸುತ್ತಿರುವ ವಿನಯ್ ನೀನಾಸಂ ವಿನ್ಯಾಸ ಮತ್ತು ನಿರ್ದೇಶನದಲ್ಲಿ ‘ಮಿಸ್ ಅಂಡರ್ ಸ್ಟ್ಯಾಂಡಿಂಗ್’ ಹಾಸ್ಯ ನಾಟಕ ಪ್ರದರ್ಶನವನ್ನು ದಿನಾಂಕ 14, 15 ಮತ್ತು 16 ಮಾರ್ಚ್ 2025ರಂದು ಸಂಜೆ 6-00 ಗಂಟೆಗೆ ಬೆಂಗಳೂರು ವಿಜಯನಗರ ಹೊಸ ಹಳ್ಳಿ ವಿಜಯನಗರ ಮೆಟ್ರೋ ಹತ್ತಿರ 14 ನೇ ಮುಖ್ಯ ರಸ್ತೆ ಮೂರನೇ ಮಹಡಿಯಲ್ಲಿರುವ ರಂಗಶಾಲದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ನಾಟಕವನ್ನು ಅಕ್ಷರ ಕೆ.ವಿ. ರಚಿಸಿರರು, ಸಂಗೀತ ರಾಜೇಶ್ ಹಳೆಮನೆ ಇವರು ನೀಡಿದ್ದು, ಸುರೇಶ್ ಇವರು ನಿರ್ವಹಣೆ ಹಾಗೂ ಜಯಂತ್ ಇವರು ಬೆಳಕಿನ ವಿನ್ಯಾಸ ಮಾಡಿರುತ್ತಾರೆ.

Read More

ಗದಗ : ಗದಗ ಇಲ್ಲಿನ ಸಾಹಿತಿ, ಕಲಾಪೋಷಕ, ಕಾಳಮಂಜಿ ವೆಂಕಟಗಿರಿಯಪ್ಪ ಶ್ರೀನಿವಾಸ್ (ಕಾ.ವೆಂ.ಶ್ರೀ) ನಿಧನರಾಗಿದ್ದಾರೆ. ಇವರಿಗೆ 52 ವರ್ಷ ವಯಸ್ಸಾಗಿತ್ತು. ಆರೋಗ್ಯ ಸಮಸ್ಯೆಯಿಂದಾಗಿ ಗದಗ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ದಿನಾಂಕ 10 ಮಾರ್ಚ್ 2025ರ ಸೋಮವಾರ ಮಧ್ಯಾಹ್ನ ನಿಧನರಾಗಿದ್ದಾರೆ. ಕಲೆ, ಸಂಸ್ಕೃತಿ ಉಳಿವಿಗಾಗಿ ಕಾವೆಂಶ್ರೀ ಇವರು 1996ರಲ್ಲಿ ‘ಕಲಾ ಚೇತನ’ ಸಂಸ್ಥೆ ಸ್ಥಾಪಿಸಿದರು. ಕಲಾ ಚೇತನ ಸಂಸ್ಥೆಯ ಮೂಲಕ ಅಂತರಾಷ್ಟ್ರೀಯ ಕಲಾವಿದರ ಕಾರ್ಯಕ್ರಮ ಆಯೋಜಿಸುತ್ತಿದ್ದರು. ಶಿವಮೊಗ್ಗ ಜಿಲ್ಲೆಯ ಕಾಳಮಂಜಿ ಮೂಲದ ಕಾ. ವೆಂ. ಶ್ರೀನಿವಾಸ್ ಅವರು ಗದಗ ನಗರದಲ್ಲಿ ಕಳೆದ 34 ವರ್ಷದಿಂದ ವಾಸವಾಗಿದ್ದರು. ಕಲೆ, ಸಾಹಿತ್ಯ ಆಸಕ್ತಿ ಬೆಳೆಸಿಕೊಂಡಿದ್ದ ಶ್ರೀನಿವಾಸ್ ಅವರು ಅನೇಕ ಪತ್ರಿಕೆಗಳಲ್ಲಿ ಕಲೆ, ಸಾಹಿತ್ಯದ ಬಗ್ಗೆ ಲೇಖನ ಬರೆದಿದ್ದರು. ಕಾವೆಂಶ್ರೀ ಅವರು ಹೋಟೆಲ್ ಉದ್ಯಮದ ಜೊತೆಗೆ ಕಲಾ ಸೇವೆಯಲ್ಲೂ ಸಹ ತೊಡಗಿದ್ದರು. ಕಾವೆಂಶ್ರೀ ಅವರು ಯಾವುದೇ ಫಲಾಪೇಕ್ಷೆ ಇಲ್ಲದೆ ಕಲಾಸೇವೆ ನಡೆಸುತ್ತಾ ಬಂದಿದ್ದರು. ಇವರ ಕಲಾಚೇತನ ಸಾಂಸ್ಕೃತಿಕ ಅಕಾಡೆಮಿ 25 ವರ್ಷಗಳನ್ನು ಪೂರೈಸಿದೆ.…

Read More

ಗದಗ : ಆಕಾಶವಾಣಿ ದೂರದರ್ಶನ ಕಲಾವಿದೆ ವಿದುಷಿ ಡಾ. ಸುಮಾ ಬಸವರಾಜ ಹಡಪದ ಬೆಳ್ಳಿಗಟ್ಟಿ ಧಾರವಾಡ ಇವರನ್ನು ರಜತ ಮಹೋತ್ಸವ ಸಂಭ್ರಮ ಹೊಸ್ತಿಲಲ್ಲಿ ಇರುವ ಡಾ. ಪಂ. ಪುಟ್ಟರಾಜ ಸೇವಾ ಸಮಿತಿ (ರಿ.) ಗದಗ ಸಂಸ್ಥೆಯ ರಾಜ್ಯ ಸಂಚಾಲಕಿಯಾಗಿ ನೇಮಕ ಮಾಡಲಾಗಿದೆ ಎಂದು ಸಂಸ್ಥಾಪಕ ವೇ. ಚನ್ನವೀರಸ್ವಾಮಿ ಹಿರೇಮಠ ಕಡಣಿ ಗದಗ ಇವರು ತಿಳಿಸಿದ್ದಾರೆ. ಡಾ. ಸುಮಾ ಹಡಪದ ವೀರೇಶ್ವರ ಪುಣ್ಯಾಶ್ರಮದ ಪರಂಪರೆಯ ಪ್ರಶಿಷ್ಯರು. ಇವರ ತಂದೆ ಮಹಾಲಿಂಗರಾಜ ಬುವ ಪುಟ್ಟರಾಜ ಗವಾಯಿಗಳ ಶ್ರೇಷ್ಠ ಶಿಷ್ಯರಲ್ಲಿ ಒಬ್ಬರು. ತಂದೆಯೇ ಗುರುವಾಗಿ ಸ್ವೀಕರಿಸಿ ಬಾಲ ಪ್ರತಿಭೆಯಾಗಿ ತಂದೆಯ ಪ್ರಿಯ ಶಿಷ್ಯಳಾಗಿ ಅಪಾರ ಸಂಗೀತ ಜ್ಞಾನ ಸಂಪಾಡಿಸಿಕೊಂಡಿದ್ದಾರೆ. ಸಂಗೀತದಲ್ಲಿ ವಿದ್ವತ್ ಪದವೀಧರೆ, ಆಕಾಶವಾಣಿ, ದೂರದರ್ಶನ ಮಾನ್ಯತೆ ಪಡೆದ ಕಲಾವಿದೆ. ಪ್ರಸ್ತುತ ಹಳಿಯಾಳದಲ್ಲಿ ಪ್ರಾಥಮಿಕ ಶಾಲೆಯ ವಿಷಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಸಂಗೀತದ ಜರ್ನಿಯನ್ನು ಆಕಾಶವಾಣಿ ಧಾರವಾಡ ಪ್ರಸಾರ ಮಾಡಿದೆ. ಪತಿ ಬಸವರಾಜ ಸಂಗೀತ ಪ್ರೇಮಿ, ಹವ್ಯಾಸಿ ಗಾಯಕ, ಶಿಕ್ಷಕ ಉತ್ತರ ಕನ್ನಡ ಜಿಲ್ಲೆ…

Read More

ಶಿವಮೊಗ್ಗ : ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಸಮಿತಿ ಶಿವಮೊಗ್ಗ ಇವರ ವತಿಯಿಂದ ‘ದತ್ತಿನಿಧಿ ಕಾರ್ಯಕ್ರಮ’ವನ್ನು ದಿನಾಂಕ 13, 14 ಮತ್ತು 16 ಮಾರ್ಚ್ 2025ರಂದು ಹಮ್ಮಿಕೊಳ್ಳಲಾಗಿದೆ. ದಿನಾಂಕ 13 ಮಾರ್ಚ್ 2025ರಂದು ಬೆಳಿಗ್ಗೆ 11-00 ಗಂಟೆಗೆ ವಿಶ್ವವಿದ್ಯಾನಿಲಯ ಶ್ರೀಮದ್ ರಂಭಾಪುರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಜ್ಞಾನಸಹ್ಯಾದ್ರಿ ಶಂಕರಘಟ್ಟ ಇವರ ಸಂಯುಕ್ತಾಶ್ರಯದಲ್ಲಿ ಜ್ಞಾನಸಹ್ಯಾದ್ರಿ ಕಾಲೇಜು ಆವರಣದಲ್ಲಿ ನಡೆಯಲಿರುವ ದತ್ತಿನಿಧಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಡಾ. ಧರ್ಮೆಗೌಡ ಹೆಚ್.ಎಂ. ಇವರು ವಹಿಸಲಿರುವರು. ‘ಕುವೆಂಪು ಸಾಹಿತ್ಯ ವಿದ್ಯಾರ್ಥಿ ಪ್ರಜ್ಞೆ’ ಮತ್ತು ‘ವಚನ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ’ ಎಂಬ ವಿಷಯದ ಬಗ್ಗೆ ಸಾಹಿತಿ ಡಾ. ಹೆಚ್.ಟಿ. ಕೃಷ್ಣಮೂರ್ತಿ ಮತ್ತು ಕನ್ನಡ ಶಿಕ್ಷಕರಾದ ಡಾ. ಭಾಗ್ಯಲಕ್ಷ್ಮಿ ಬಿ.ಎಸ್. ಇವರು ಉಪನ್ಯಾಸ ನೀಡಲಿದ್ದಾರೆ. ದಿನಾಂಕ 14 ಮಾರ್ಚ್ 2025ರಂದು ಸಂಜೆ 6-00 ಗಂಟೆಗೆ ಶಿವಮೊಗ್ಗ ವಿದ್ಯಾನಗರದ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಸಭಾಂಗಣದಲ್ಲಿ ನಡೆಯಲಿರುವ ದತ್ತಿನಿಧಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಿನ್ಸಿಪಾಲರಾದ ಡಾ. ಟಿ. ಅವಿನಾಶ್ ಇವರು…

Read More

ಬೆಂಗಳೂರು : ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದಿನಾಂಕ 11 ಮಾರ್ಚ್ 2025 ರಂದು ಮ. ರಾಮಮೂರ್ತಿಯವರ 108ನೆಯ ಜನ್ಮದಿನೋತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀಯುತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ಮಾತನಾಡಿ “ಬೆಂಗಳೂರು ಕನ್ನಡ ಸಮಾರಂಭಗಳಲ್ಲಿ ನಾವು ಉಪಯೋಗಿಸುವ ಕನ್ನಡ ಭಾವುಟವನ್ನು ಸೃಷ್ಟಿಸಿದ ಮಹನೀಯರು ಮ. ರಾಮಮೂರ್ತಿ. ಅವರು ಕನ್ನಡ ಬಾವುಟವನ್ನು ಮಾತ್ರ ರೂಪಿಸಲಿಲ್ಲ ಅದನ್ನು ಎತ್ತಿ ಹಿಡಿದು ಕನ್ನಡಿಗರು ಗೌರವದಿಂದ ಬಾಳುವ ಹಾಗೆ ತಮ್ಮ ಕೊನೆಯ ಉಸಿರಿರುವವರೆಗೂ ಕನ್ನಡ ನಾಡು ನುಡಿಗಾಗಿ ಶ್ರಮಿಸಿದರು. 1960ರ ದಶಕದಲ್ಲಿ ಕನ್ನಡದ ವಾತಾವರಣವನ್ನು ಮೂಡಿಸಲು, ಕನ್ನಡಿಗರನ್ನು ಎಚ್ಚರಿಸಲು ಹುಟ್ಟಿಕೊಂಡದ್ದೇ ಕನ್ನಡ ಚಳವಳಿ. ಈ ಹೋರಾಟದ ಮುಂಚೂಣಿಯಲ್ಲಿದ್ದವರು ಮ. ರಾಮಮೂರ್ತಿ. ಬೆಂಗಳೂರಿನ ಗಾಂಧಿನಗರದಲ್ಲಿದ್ದ ಆರ್ಯ ವಿದ್ಯಾಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ ಮೇರು ಬರಹಗಾರ ದೇವುಡು ನರಸಿಂಹ ಶಾಸ್ತ್ರಿಗಳು ಬಾಲಕ ರಾಮಮೂರ್ತಿಯವರಲ್ಲಿ ಕನ್ನಡ ಪ್ರೇಮವನ್ನು ಬಿತ್ತಿದರು. ಇದರಿಂದ ಪ್ರೇರಿತರಾಗಿ ಮ. ರಾಮಮೂರ್ತಿಯವರು ಬರೆದ ಮೊದಲ ಕಥೆ ‘ಗುರುದಕ್ಷಿಣಿ’. ತಂದೆಯವರು ಪ್ರಕಟಿಸುತ್ತಿದ್ದ ‘ವೀರಕೇಸರಿ’…

Read More

ಧಾರವಾಡ : ಭಾರತೀಯ ಸಂಗೀತಲೋಕದ ನವೋನ್ವೇಷ, ಸ್ವರಯೋಗಿನಿ ಖ್ಯಾತಿಯ ಪದ್ಮವಿಭೂಷಣ ಡಾ. ಪ್ರಭಾ ಅತ್ರೆ ಸಂಸ್ಮರಣೆಯಲ್ಲಿ ಸಂಗೀತ ಹಾಗೂ ಭರತನಾಟ್ಯಗಳ ವಿಶೇಷ ಕಾರ್ಯಕ್ರಮವನ್ನು ಧಾರವಾಡದಲ್ಲಿ ದಿನಾಂಕ 15 ಮಾರ್ಚ್ 2025 ಶನಿವಾರದಂದು ಸಂಜೆ 5-30 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಧಾರವಾಡದ ಸೃಜನಾ ರಂಗಮಂದಿರದಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಧಾರವಾಡದ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ (ರಿ.) ಹಾಗೂ ಪುಣೆಯ ‘ಸ್ವರಮಯಿ’ ಸಂಸ್ಥೆಗಳು ಜಂಟಿಯಾಗಿ ಹಮ್ಮಿಕೊಂಡಿವೆ. ಈ ಸಂಗೀತ-ನೃತ್ಯೋತ್ಸವ ಕಾರ್ಯಕ್ರಮದಲ್ಲಿ ಡಾ. ಪ್ರಭಾ ಅತ್ರೆಯವರಿಂದ ರಚಿತ ‘ಬಂದಿಶ್’ಗಳು ಪ್ರಸ್ತುತಗೊಳ್ಳಲಿವೆ. ಸುಮಾರು ಎಂಟು ದಶಕಗಳ ಕಾಲ ಡಾ. ಪ್ರಭಾ ಅತ್ರೆಯವರು ಕೇವಲ ಸಂಗೀತ ಕ್ಷೇತ್ರವಷ್ಟೇ ಅಲ್ಲ ಶಿಕ್ಷಣ, ಸಾಹಿತ್ಯ, ಸಮಾಜಸೇವೆ ಇನ್ನೂ ಅನೇಕ ಕ್ಷೇತ್ರಗಳಿಗೆ ಅಪೂರ್ವ ಕೊಡುಗೆಯನ್ನು ಸಲ್ಲಿಸಿದ ಬಹುಮುಖ ಪ್ರತಿಭೆ. ಸ್ವತಃ ವಿದ್ಯಾರ್ಥಿನಿಯಾಗಿ, ಚಿಂತಕಿಯಾಗಿ ಉಳಿದವರಿಗೆ ಮಾದರಿಯಾಗುವಂಥ ವ್ಯಕ್ತಿತ್ವ ಡಾ. ಪ್ರಭಾ ಅತ್ರೆಯವರದು. ಇಂಥ ದಿಗ್ಗಜೆಯ ಸಂಸ್ಮರಣೆಯಲ್ಲಿ ವಿಶೇಷ ಕಾರ್ಯಕ್ರಮವೊಂದು ಧಾರವಾಡದಲ್ಲಿ ನಡೀತಾ ಇದೆ. ಕೇಂದ್ರ ಸಂಗೀತ ನಾಟಕ ಅಕ್ಯಾಡೆಮಿ ಪುರಸ್ಕೃತ ಕಲಾವಿದೆ, ಹಿರಿಯ…

Read More

ದಾವಣಗೆರೆ : ವೃತ್ತಿ ರಂಗಭೂಮಿ ರಂಗಾಯಣ ದಾವಣಗೆರೆ ಇದರ ವತಿಯಿಂದ ಕನ್ನಡ, ತೆಲುಗು ಮತ್ತು ತಮಿಳು ನಾಟಕಗಳ ಹಬ್ಬ ‘ರಾಷ್ಟ್ರೀಯ ವೃತ್ತಿ ರಂಗೋತ್ಸವ-2025’ವನ್ನು ದಿನಾಂಕ 15 ಮಾರ್ಚ್ 2025ರಿಂದ 17 ಮಾರ್ಚ್ 2025ರವರೆಗೆ ದಾವಣಗೆರೆಯ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ. ವಿಚಾರ ಸಂಕಿರಣ, ರಂಗ ಸಂವಾದ, ರಂಗ ಗೌರವ, ರಂಗ ಗೀತೆಗಳ ಗಾಯನ, ನಾಟಕಗಳ ಪ್ರದರ್ಶನ, ರಂಗ ದಾಖಲೆಗಳ ಪ್ರದರ್ಶನ ಮತ್ತು ಚಿತ್ರಕಲಾ ಪ್ರದರ್ಶನ ನಡೆಯಲಿದೆ. ದಿನಾಂಕ 15 ಮಾರ್ಚ್ 2025ರಂದು ಬೆಳಿಗ್ಗೆ 10-30 ಗಂಟೆಗೆ ಪದ್ಮಶ್ರೀ ಚಿಂದೋಡಿ ಲೀಲಾ ರಂಗವೇದಿಕೆಯಲ್ಲಿ ದಾವಣಗೆರೆಯ ಪ್ರತಿಮಾ ಸಭಾದ ಗೌರವಾಧ್ಯಕ್ಷರಾದ ಪ್ರೊ. ಎಸ್. ಹಾಲಪ್ಪ ಇವರು ವಿಚಾರ ಸಂಕಿರಣದ ಉದ್ಘಾಟನೆ ಮಾಡಲಿದ್ದು, ‘ಪರಂಪರೆಯ ಕಣ್ಮರೆ : ಬದಲಾಗುತ್ತಿರುವ ವ್ಯಕ್ತಿ ರಂಗ ಸ್ವರೂಪ’ ಎಂಬ ವಿಷಯದ ಬಗ್ಗೆ ಡಾ. ವಿಶ್ವನಾಥ ಹಾಗೂ ‘ವೃತ್ತಿಪರತೆ ಮತ್ತು ಆಧುನಿಕ ರಂಗಚಿಂತನೆಗಳು’ ಎಂಬ ವಿಷಯದ ಬಗ್ಗೆ ಮಹ್ಮದಲಿ ಆರ್. ಹೊಸೂರ ಇವರು ವಿಷಯ ಮಂಡನೆ ಮಾಡಲಿದ್ದಾರೆ. 11-30 ಗಂಟೆಗೆ ದಾವಣಗೆರೆ ವಿಶ್ವವಿದ್ಯಾಲಯದ…

Read More

ಮುಂಬಯಿ : ಮೈಸೂರು ಅಸೋಸಿಯೇಷನ್ ಮುಂಬಯಿ ಇದರ ನೂರರ ನಲಿವು ಸಂಭ್ರಮಾಚರಣೆ ಪ್ರಯುಕ್ತ ‘ನೇಸರು ಜಾಗತಿಕ ಏಕಾಂಕ ನಾಟಕ ರಚನಾ ಸ್ಪರ್ಧೆ – 2025’ಯನ್ನು ಏರ್ಪಡಿಸಲಾಗಿದೆ. ಮೈಸೂರು ಅಸೋಸಿಯೇಷನ್ ಮುಂಬೈ ಒಂದು ಪ್ರತಿಷ್ಠಿತ ಕನ್ನಡ ಸಂಸ್ಥೆಯಾಗಿದ್ದು, ತನ್ನ ಶತಕವನ್ನು ಪೂರೈಸುವತ್ತ ಮುಂದುವರಿಯುತ್ತಿದೆ. ಈ ಮೊದಲೂ ಕೂಡಾ ಕನ್ನಡ ಕವನ, ಕಥೆ ಹಾಗೂ ಏಕಾಂಕ ನಾಟಕ ಸ್ಪರ್ಧೆಯನ್ನು ಆಯೋಜಿಸುತ್ತಲೇ ಬಂದಿದೆ. ಇದರ ಮುಂದುವರಿದ ಭಾಗವಾಗಿ ‘ಶತಮಾನೋತ್ಸವ ವಿಶೇಷ’ ಜಾಗತಿಕ ಏಕಾಂಕ ನಾಟಕ ರಚನಾ ಸ್ಪರ್ಧೆಯ ಘೋಷಣೆಯನ್ನು ಈ ಮೂಲಕ ಮಾಡಲಾಗುತ್ತಿದೆ. ಈ ಸ್ಪರ್ಧೆಯಲ್ಲಿ ಭಾರತದಾದ್ಯಂತ ಆಸಕ್ತರೆಲ್ಲರೂ ಭಾಗವಹಿಸಬಹುದು. ಇಲ್ಲಿ ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ. ಆಸಕ್ತರು ಯಾವುದೇ ವಿಷಯದ ಕುರಿತು ಏಕಾಂಕ ನಾಟಕವನ್ನು ರಚಿಸಬಹುದು. ಏಕಾಂಕ ನಾಟಕ ರಚನಾ ಸ್ಪರ್ಧೆಯ ಪ್ರಥಮ ಬಹುಮಾನ – 50,000/-, ದ್ವಿತೀಯ ಬಹುಮಾನ – ರೂ. 30,000/- ಮತ್ತು ತೃತೀಯ ಬಹುಮಾನ – ರೂ. 20,000/- ಆಗಿರುತ್ತದೆ. ಸ್ಪರ್ಧೆಯ ನಿಯಮಾವಳಿಗಳು: > ಏಕಾಂಕ ನಾಟಕ ಕನ್ನಡದಲ್ಲಿದ್ದು ಸ್ವರಚಿತವಾಗಿರಬೇಕು, ಅನುವಾದ…

Read More

ಕಾಸರಗೋಡು : ದೇಲಂಪಾಡಿ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಮಂದಿರದ ಕೀರಿಕ್ಕಾಡು ಸ್ಮಾರಕ ಅಧ್ಯಯನ ಕೇಂದ್ರ ಸಭಾಭವನದಲ್ಲಿ ದಿನಾಂಕ 08 ಮಾರ್ಚ್ 2025 ಶನಿವಾರ ವಿಶೇಷ ಕಲಾರಾಧನಾ ಕಾರ್ಯಕ್ರಮಗಳು ನೆರವೇರಿತು. ನವನೀತ ಭಟ್‌ ಕೊಡಪಾಲ ಮತ್ತು ಮನೆಯವರ ವತಿಯಿಂದ ಸೇವಾರೂಪವಾಗಿ ನಡೆಸಲ್ಪಟ್ಟ ಈ ಕಾರ್ಯಕ್ರಮದ ಮೊದಲಿಗೆ ಸ್ಥಳ ಸಾನ್ನಿಧ್ಯ ಶ್ರೀ ದೇವರಿಗೆ ಪೂಜಾರ್ಚನೆ ಸಲ್ಲಿಸಲಾಯಿತು. ಗೋಪಾಲಯ್ಯ ಕೋಟಿಗದ್ದೆ, ಶಾಂತಾಕುಮಾರಿ ದೇಲಂಪಾಡಿ, ಪೂರ್ಣಿಮ ಬನಾರಿ ಇವರ ಸಂಯೋಜನೆಯಲ್ಲಿ ‘ಭಗವದ್ಗೀತೆ’ ಪಾರಾಯಣ ಸಂಪನ್ನಗೊಂಡಿತು. ಅನಂತರ ಸಂಘದ ಹಿರಿಯ ಭಾಗವತ ವಿಶ್ವವಿನೋದ ಬನಾರಿಯವರ ಮಾರ್ಗದರ್ಶನದಲ್ಲಿ ‘ಧರ್ಮ ಜಿಜ್ಞಾಸೆ’ ಮತ್ತು ‘ಸಮರ ಸಂಘರ್ಷ’ ಯಕ್ಷಗಾನ ತಾಳಮದ್ದಳೆ ನೆರವೇರಿತು. ಹಲಸಿನ ಹಳ್ಳಿ ನರಸಿಂಹ ಶಾಸ್ತ್ರಿಯವರ ಪ್ರಸಂಗ ಸಾಹಿತ್ಯವನ್ನೊಳಗೊಂಡ ಈ ಅಧ್ಯಯನ ಶೀಲ ಕಥಾ ಭಾಗದ ಪ್ರಸ್ತುತಿಯಲ್ಲಿ ಭಾಗವತರಾಗಿ ಮೋಹನ ಮೆಣಸಿನಕಾನ ಮತ್ತು ಉದಯೋನ್ಮುಖ ಪ್ರತಿಭೆ ಕುಮಾರಿ ವಿದ್ಯಾಶ್ರೀ ಆಚಾರ್ಯ ಈಶ್ವರಮಂಗಲ ಇವರು ಕಾಣಿಸಿಕೊಂಡರು. ಚೆಂಡೆಮದ್ದಳೆಯಲ್ಲಿ ಶ್ರೀಧರ ಆಚಾರ್ಯ ಈಶ್ವರಮಂಗಲ, ಅಪ್ಪಯ್ಯ ಮಣಿಯಾಣಿ ಮಂಡೆಕ್ಕೋಲು, ವಿಷ್ಣುಶರಣ ಬನಾರಿ, ಬಿ.ಎಚ್‌. ಕೃಷ್ಣಪ್ರಸಾದ…

Read More