Author: roovari

ಕೊಪ್ಪಳ : ಮುಜುಮದಾರ ಫೌಂಡೇಶನ್ ಮತ್ತು ತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಡಾ. ಪಂಚಾಕ್ಷರಿ ಹಿರೇಮಠ ಇವರ ‘ನುಡಿ ನಮನ’ ಕಾರ್ಯಕ್ರಮವು ದಿನಾಂಕ 25 ಮಾರ್ಚ್ 2025ರ ಮಂಗಳವಾರದಂದು ಕೊಪ್ಪಳದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಕೊಪ್ಪಳದ ಹಿರಿಯ ಸಾಹಿತಿ ಎಚ್. ಎಸ್. ಪಾಟೀಲ್ ಮಾತನಾಡಿ “ನಮ್ಮ ಭಾಗದ ಸಾಹಿತಿಗಳ ಪುಸ್ತಕಗಳನ್ನು ಓದಿ ಅವರನ್ನು ನಾವು ಗೌರವಿಸಬೇಕು. ನಮ್ಮ ದೇಶದಲ್ಲಿ ಬದುಕಿದ್ದಾಗ ಅವರ ಬಗ್ಗೆ ಆಲೋಚನೆ ಮಾಡುವುದಿಲ್ಲ, ಅವರು ಮರಣ ಹೊಂದಿದ ನಂತರ ಅವರ ಕುರಿತು ಹೆಚ್ಚು ಚರ್ಚೆ ಮಾಡುತ್ತೇವೆ. ಈ ರೀತಿ ಪದ್ಧತಿ ಹೋಗಬೇಕು. ಪಂಚಾಕ್ಷರಿ ಹಿರೇಮಠ ಅವರು 1947 ಆಗಸ್ಟ್ 15 ರಂದು ಕೊಪ್ಪಳ ಕೋಟೆಯ ಮೇಲೆ ತ್ರಿವರ್ಣ ದ್ವಜ ಹಾರಿಸಿದ್ದರು. ಆಗ ಅವರು 7 ನೇ ತರಗತಿ ಓದುತ್ತಿದ್ದರು. ಇವರು ಧಾರವಾಡದಲ್ಲಿ ಪಾಟೀಲ್ ಪುಟ್ಟಪ್ಪ ಅವರ ಪ್ರಪಂಚ ಪತ್ರಿಕೆಯಲ್ಲಿ ಕೆಲಸ ಮಾಡಿದ್ದಾರೆ. ಇವರು ಕಥೆ, ಕಾದಂಬರಿ, ಕಥಾ ಸಂಕಲನ, ಅನುವಾದ ಹೀಗೆ 250ಕ್ಕೂ ಮಿಕ್ಕಿ…

Read More

ಬೆಂಗಳೂರು : ವಿಜಯನಗರ ಬಿಂಬ ಕಳೆದ 29 ವರ್ಷಗಳಿಂದ ರಂಗಭೂಮಿಯಲ್ಲಿ ತನ್ನದೇ ಛಾಪು ಮೂಡಿಸಿದೆ. ಇದೀಗ ಬರ್ಟೋಲ್ಟ್ ಬ್ರೆಕ್ಟ್ ನ ಮಹತ್ವದ ನಾಟಕ ‘ಮದರ್ ಕರೇಜ್’ ಇದರ ಪ್ರದರ್ಶನವನ್ನು ದಿನಾಂಕ 28 ಮಾರ್ಚ್ 2025ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಏರ್ಪಡಿಸಿದೆ. 20ನೇ ಶತಮಾನದ ಅತ್ಯುತ್ಕೃಷ್ಟ ನಾಟಕ ಎಂದೇ ಹೆಸರಾಗಿರುವ ‘ಮದರ್ ಕರೇಜ್’ – ಯುದ್ಧ ಮತ್ತು ಮನುಷ್ಯ ಸಂಬಂಧಗಳ ಮೇಲೆ ಅದರ ಪರಿಣಾಮವನ್ನು ಹೇಳುವ ಕಥೆ. ಯುದ್ಧ ಪ್ರೀತಿ ಇದ್ದ ಹಾಗೆ ಅದು ಮುಂದುವರೆಯಲು ತನ್ನದೇ ಆದ ಮಾರ್ಗವನ್ನು ಹುಡುಕುತ್ತದೆ ಎಂದು ಹೇಳುತ್ತಲೇ ಬ್ರೆಕ್ಟ್ ನಮ್ಮನ್ನು ಆ ನಿಟ್ಟಿನಲ್ಲಿ ಯೋಚಿಸುವ ಹಾಗೆ ಮಾಡುತ್ತಾನೆ. ಇದು ಯುದ್ಧ ವಿರೋಧಿ ನಾಟಕವಾದರೂ ಇದರಲ್ಲಿ ಬರುವ ಬಹುಪಾಲು ಪಾತ್ರಗಳು ಯುದ್ಧ ನಡೆಯಬೇಕು ಎಂದೇ ಹೇಳುತ್ತಾರೆ. 1630ರ ಸುಮಾರಿಗೆ ಯುರೋಪ್ನಲ್ಲಿ ನಡೆದ 30 ವರ್ಷಗಳ ಧಾರ್ಮಿಕ ಯುದ್ಧ ನಾಟಕದ ಹಿನ್ನೆಲೆಯಾಗಿದೆ. ಪ್ರೊಟೆಸ್ಟೆಂಟ್ ಮತ್ತು ಕ್ಯಾಥಲಿಕ್ ಗಳ ನಡುವೆ ನಡೆಯುವ ಈ ಯುದ್ಧದಿಂದ ಕಂಗಾಲಾಗಿರುವ…

Read More

ಕೊಪ್ಪ : ಶ್ರೀ ಆದಿ ಶಂಕರಾಚಾರ್ಯ ಶಾರದಾ ಶ್ರೀಲಕ್ಷ್ಮೀನೃಸಿಂಹ ಪೀಠಮ್ ಹರಿಹರಪುರ ಕೊಪ್ಪ ಇದರ ವತಿಯಿಂದ ಹೊಸೂರು ಸಾಗರದ ಶ್ರೀ ಭಾರತೀ ಕಲಾ ಪ್ರತಿಷ್ಠಾನ (ರಿ.) ಇದರ ಶ್ರೀ ವರದಾಂಬ ಕಲಾ ತಂಡ ಇವರಿಂದ ಆಲೆಟ್ಟಿ ರಾಮಣ್ಣ ಶಗ್ರಿತ್ತಾಯ ವಿರಚಿತ ‘ತರಣಿಸೇನ ಕಾಳಗ’ ಎಂಬ ಪ್ರಸಂಗದ ತಾಳಮದ್ದಲೆಯನ್ನು ದಿನಾಂಕ 29 ಮಾರ್ಚ್ 2025ರಂದು ಸಂಜೆ 4-30 ಗಂಟೆಗೆ ಕೊಪ್ಪ ತಾಲೂಕು ಹರಿಹರಪುರದ ಶ್ರೀ ಮಠದಲ್ಲಿ ಹಮ್ಮಿಕೊಳ್ಳಲಾಗಿದೆ. ಹಿಮ್ಮೇಳದಲ್ಲಿ ಶಿವಶಂಕರ ಭಟ್ ಮತ್ವಾನೆ ಭಾಗವತರಾಗಿ, ಗಣೇಶ ಭಟ್ ಹೊನ್ನೇಕುಡಿಗೆ ಮದ್ದಲೆಯಲ್ಲಿ ಮತ್ತು ಜನಾರ್ದನ ಮಂಡಗಾರು ಚಂಡೆಯಲ್ಲಿ ಹಾಗೂ ಮುಮ್ಮೇಳದಲ್ಲಿ ಶಾರದಾ ಅರುಣ ಇವರು ಶ್ರೀರಾಮನಾಗಿ, ವರದಾ ಮಧುಸೂದನ ಐತಾಳ್ ಇವರು ವಿಭೀಷಣ, ಸ್ಮಿತಾ ಗಿರೀಶ್ ಇವರು ರಾವಣ ಮತ್ತು ಸಾಧ್ವಿ ಗಣೇಶ್ ಇವರು ತರಣಿಸೇನನಾಗಿ ಸಹಕರಿಸಲಿದ್ದಾರೆ.

Read More

ಮಂಗಳೂರು : ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ ಇದರ ಆಶ್ರಯದಲ್ಲಿ ವಿಶ್ವಕರ್ಮ ಕಲಾ ಪರಿಷತ್ ಮಂಗಳೂರು ಹಮ್ಮಿಕೊಂಡಿರುವ ‘ಸಮರ್ಪಣಂ ಕಲೋತ್ಸವ 2025’ವನ್ನು ದಿನಾಂಕ 03 ಏಪ್ರಿಲ್ 2025ರಂದು ಪೂರ್ವಾಹ್ನ 10-00 ಗಂಟೆಗೆ ಮಂಗಳೂರಿನ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿದೆ. ಬೆಳಿಗ್ಗೆ 10-00 ಗಂಟೆಗೆ ವಿಶ್ವಕರ್ಮ ಕಲಾ ಪರಿಷತ್ ಸದಸ್ಯರಿಂದ ಸಾಂಸ್ಕೃತಿಕ ಸೌರಭ ಪ್ರಸ್ತುತಗೊಳ್ಳಲಿದೆ. ‘ಸಮರ್ಪಣಂ ಕಲೋತ್ಸವ’ದ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮಜ್ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಪೀಠಾಧೀಶ್ವರ ಪರಮ ಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು ದೀಪ ಪ್ರಜ್ವಲನೆ ಮಾಡಿ ನೆರವೇರಿಸಲಿರುವರು. ಇದೇ ಸಂದರ್ಭದಲ್ಲಿ ಪ್ರಾಚೀನ ವಿಶ್ವಬ್ರಾಹ್ಮಣ ಪರಂಪರೆಯ ಸಮರ್ಥ ರಾಯಭಾರಿ ಸಂಶೋಧಕ ಲೇಖಕ ಮೇರು ವಿದ್ವಾಂಸ ಡಾ. ಜಿ. ಜ್ಞಾನಾನಂದ ಇವರಿಗೆ ‘ಭೌವನ ವಿಶ್ವಕರ್ಮ ಕಲಾ ಪ್ರಶಸ್ತಿ’ ಪ್ರದಾನ ಹಾಗೂ ಗೌರವಾಭಿನಂದನೆ ನಡೆಯಲಿದೆ. ಬೆಂಗಳೂರಿನ ಶ್ರೀ ಭ್ರಮರಿ ಕ್ರಿಯೇಷನ್ಸ್ ಪ್ರೈವೇಟ್ ಲಿ. ಇದರ ವ್ಯವಸ್ಥಾಪಕ ನಿರ್ದೇಶಕರಾದ ಹರೀಶ್ಚಂದ್ರ ಎನ್. ಆಚಾರ್ಯ ಇವರು ಕಲೋತ್ಸವಕ್ಕೆ ಚಾಲನೆ ನೀಡಲಿದ್ದು, ಮಂಗಳೂರಿನ…

Read More

ಹೊಸದುರ್ಗ : ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಕಾಸರಗೋಡು ಆಯೋಜಿಸುವ ಹೊಸದುರ್ಗ ತಾಲೂಕು ದ್ವಿತೀಯ ಸಾಹಿತ್ಯ ಸಮ್ಮೇಳನ ದತ್ತಿ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮವು ದಿನಾಂಕ 30 ಮಾರ್ಚ್ 2025ರ ಆದಿತ್ಯವಾರ ಅಪರಾಹ್ನ ಘಂಟೆ 2.30ಕ್ಕೆ ಹೊಸದುರ್ಗದ ‘ಧ್ವನಿ’ ಸಾರ್ವಜನಿಕ ಗ್ರಂಥಾಲಯ ಕೀಕಾನ ಇಲ್ಲಿ ನಡೆಯಲಿದೆ. ಕ. ಸಾ. ಪ. ಕೇರಳ ಗಡಿನಾಡ ಘಟಕ ಕಾಸರಗೋಡು ಇದರ ಅಧ್ಯಕ್ಷರಾದ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ‘ಕನ್ನಡಕ್ಕೆ ಹೊಸಮರ್ಗದ ಕೊಡುಗೆ’ ಎಂಬ ವಿಷಯದಲ್ಲಿ ನಿವೃತ್ತ ಜಿಲ್ಲಾ ಶಿಕ್ಷಣ ಉಪನಿರ್ದೇಶಕರಾದ ಶ್ರೀ ನಂದಿಕೇಶನ್ ಎನ್. ಉಪನ್ಯಾಸ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಸಿ. ಸುಬ್ರಾಯ, ಬೇಕಲ ಉಪಜಿಲ್ಲಾ ಶಿಕ್ಷಣಾಧಿಕಾರಿಗಳಾದ ಶ್ರೀ ಅರವಿಂದ ಕೆ., ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿಗಳಾದ ಶ್ರೀ ರಾಜಗೋಪಾಲ ಕೆ. ಹಾಗೂ ಕನ್ನಡ ಸಂಘ ಹೊಸದುರ್ಗ ಇದರ ಅಧ್ಯಕ್ಷರಾದ ಶ್ರೀ ಹೆಚ್. ಎಸ್. ಭಟ್ ಭಾಗವಹಿಸಲಿದ್ದಾರೆ. ಕ.ಸಾ.ಪ. ಕೇರಳ…

Read More

ಬೆಂಗಳೂರು : ಕರ್ನಾಟಕ ಲಲಿತಕಲಾ ಅಕಾಡೆಮಿಯ 60 ವರ್ಷದ ಇತಿಹಾಸದಲ್ಲಿ ಪ್ರಪ್ರಥಮವಾಗಿ ಚಿತ್ರ ಕಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಈ ಮುಖಾಂತರ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಮುಕ್ತ ಅವಕಾಶವನ್ನು ಕಲ್ಪಿಸಲಾಗಿದೆ. ಕರ್ನಾಟಕದ ಕಲಾ ಶಾಲೆಗಳಲ್ಲಿ ಯಾವುದೇ ಹಂತದಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಪೂರ್ವ ಸಿದ್ಧತೆಗಾಗಿ ತಮಗೆ ದಿನಾಂಕ 30 ಏಪ್ರಿಲ್ 2025ರವರೆಗೆ ಕಾಲಾವಕಾಶವನ್ನು ನೀಡಲಾಗುವುದು. ಭಾಗವಹಿಸಲು ಇಚ್ಚಿಸುವ ವಿದ್ಯಾರ್ಥಿಗಳು ತಾವು ರಚಿಸಿರುವ ಕಲಾಕೃತಿಗಳ 2 ಛಾಯಾಚಿತ್ರಗಳನ್ನು ಹಾಗೂ ತಾವು ಅಭ್ಯಾಸ ಮಾಡುತ್ತಿರುವ ಚಿತ್ರ ಕಲಾ ಶಾಲೆಯ ಪ್ರಾಂಶುಪಾಲರಿಂದ ದೃಢೀಕರಣ ಪತ್ರದೊಂದಿಗೆ ಅರ್ಜಿ ಕಳುಹಿಸಿ ಕೊಡಲು ಕೋರಿದೆ. ಅರ್ಜಿಗಳನ್ನು ಗೂಗಲ್ ಭಾರ್ಮ್ ನಲ್ಲಿ ಭರ್ತಿಮಾಡಿ ಅಕಾಡೆಮಿ ಕೋರಿರುವ ಅಗತ್ಯ ದಾಖಲೆಗಳನ್ನು ಅನ್‌ಲೈನ್ ಮುಖಾಂತರ ಗೂಗಲ್‌ನಲ್ಲಿ ಲಗತ್ತಿಸುವುದು. (ವೆಬ್‌ಸೈಟ್: www.lalitkala.karnataka.gov.in) ಹೆಚ್ಚಿನ ವಿವರಗಳಿಗಾಗಿ ದೂ: 08022480297 ಆಯ್ಕೆಯ ಪ್ರಕ್ತಿಯೆ ಹೀಗಿರುತ್ತದೆ. ಸ್ಪರ್ಧೆಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸುಂದರ ಪ್ರಕೃತಿಯು ಮಡಿಲಲ್ಲಿ ಚಿತ್ರ ಕಲಾ ಶಿಬಿರವನ್ನು ಏರ್ಪಡಿಸಲಾಗುವುದು. ಶಿಬಿರದಲ್ಲಿ ಅತ್ಯುತ್ತಮ ಚಿತ್ರ…

Read More

ಇದು ಕಗ್ಗತ್ತಲ ಖಂಡದ (?) ಸೋತವರ ಇತಿಹಾಸ, ಒಂದು ಮೇರು ರೂಪಕ ನಾಟಕದ ಹೆಸರು – ದಿ ಫೈಯರ್. ಮೂಲ ಕಥೆ – ಎಡುವರ್ಡೊ ಗೇಲಿಯಾನೋ (ಲ್ಯಾಟಿನ್ ಅಮೆರಿಕ). ಕನ್ನಡಕ್ಕೆ – ಕೆ.ಪಿ. ಸುರೇಶ. ವಿನ್ಯಾಸ ಮತ್ತು ನಿರ್ದೇಶನ – ಸಂತೋಷ್ ನಾಯಕ್ ಪಟ್ಲ. ಪ್ರಸ್ತುತಿ – ಭೂಮಿಗೀತ ಸಾಂಸ್ಕೃತಿಕ ವೇದಿಕೆ, ಪಟ್ಲ. ಯಾವುದು ನಾಟಕ ಅಲ್ಲವೋ ಅದೇ ನಿಜವಾದ ನಾಟಕ ಎಂದವರು ಹಿಂದಿ ಕವಿ ಮತ್ತು ನಾಟಕಕಾರ ಪ್ರೇಮಚಂದ್ ! ನಾಟಕಕ್ಕೆ ಸಿನೆಮಾಗಿಂತ ಹೆಚ್ಚು ಸಾಧ್ಯತೆಗಳಿವೆ ಎಂದವರು ಖ್ಯಾತ ನಿರ್ದೇಶಕ ಶಂಕರನಾಗ್ ! ಈ ಮಾತುಗಳು ನಿಮಗೆ ಸರಿಯಾಗಿ ಕನ್ವಿನ್ಸ್ ಆಗಬೇಕಾದರೆ ಈ ನಾಟಕವನ್ನೊಮ್ಮೆ ನೀವು ನೋಡಲೇಬೇಕು. ದಿ ಫೈಯರ್ – ಇದು ಸಾರ್ವಕಾಲಿಕ ಕಥಾವಸ್ತು. ಲ್ಯಾಟಿನ್ ಅಮೇರಿಕಾದ ಮೂಲನಿವಾಸಿಗಳ ಹೋರಾಟದ ಮತ್ತು ಕ್ರಾಂತಿಯ ಕಥೆ ಇದು. ವಸಾಹತುಶಾಹಿಗಳ ವಿರುದ್ಧ ಸೆಟೆದು ನಿಂತ ಲ್ಯಾಟಿನ್ ಅಮೇರಿಕಾದ ಮೂಲನಿವಾಸಿಗಳು ಬಂದೂಕು, ಲಾಠಿ, ಬೈಬಲ್, ತಕ್ಕಡಿಗಳ ವಿರುದ್ಧ ಹೇಗೆಲ್ಲಾ ಎದೆಕೊಟ್ಟು ನಿಂತು ಹೋರಾಡಿದರು…

Read More

ಬೆಂಗಳೂರು : ‘ರಂಗವಾಹಿನಿ’ ಚಾಮರಾಜನಗರ ತಂಡವು ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಇದರ ಸಹಯೋಗದೊಂದಿಗೆ ಪ್ರಸ್ತುತಪಡಿಸುವ ‘ಬೆಲ್ಲದ ದೋಣಿ’ ನಾಟಕದ ಪ್ರದರ್ಶನವು ದಿನಾಂಕ 27ಮಾರ್ಚ್ 2025ರಂದು ಬೆಂಗಳೂರಿನ ಚಾಮರಾಜನಗರದಲ್ಲಿರುವ ಡಾ. ರಾಜ್‌ಕುಮಾರ್ ರಂಗಮಂದಿರದಲ್ಲಿ ಸಂಜೆ ಘಂಟೆ 6.30ಕ್ಕೆ ನಡೆಯಲಿದೆ. ಬೆಲ್ಲದ ದೋಣಿ : ನಾಟಕದಲ್ಲಿ ಸಮಾಜದಲ್ಲಿನ ಅನಿಷ್ಟ ಪದ್ದತಿಗಳಾದ ಜಾತಿಪದ್ದತಿ, ಜೀತಪದ್ದತಿ ಹಾಗೂ ಮೇಲು, ಕೀಳೆಂಬ ಅಸಮಾನತೆಯ ಕ್ರೂರ ವ್ಯವಸ್ಥೆಯಿಂದ ಹೊರಬರಲು ತೊಳಲಾಡುವ ಬಡ ಜೀವಗಳ ನೋವು, ಸಂಕಟ ಇದಲ್ಲದೆ ಸ್ವಾಭಿಮಾನದ ಬದುಕಿಗಾಗಿ ತವಕಿಸುವ ಆ ಬಡಜೀವಗಳು, ಆ ಬಡಜೀವಗಳ ಬಯಕೆ ಕೊನೆಗೆ ‘ಬೆಲ್ಲದದೋಣಿ’ಯಂತೆ ಕರಗಿಹೋಗುವುದನ್ನು ಈ ನಾಟಕ ವಿಭಿನ್ನವಾಗಿ ರಂಗರೂಪಕ್ಕಿಳಿಸಿದೆ. ಸ್ವಾಭಿಮಾನಿ ಬದುಕು ನಡೆಸಲು ಬುದ್ದರ ಮಾರ್ಗವನ್ನು ಅನುಸರಿಸಿ ಆ ಮಾರ್ಗದಲ್ಲಿ ಸಾಗುವ ಮಗ ಸಿದ್ದೇಶನ ಹಾದಿಯೇ ಸರಿಯಾದುದ್ದೆಂದು ಅರಿತ ತಂದೆ ಗಾವುರಯ್ಯನು ಕೊನೆಗೆ ತನ್ನ ಮಗನ ಹಾದಿಯನ್ನೆ ಅರಸಿ ಸಾಗುವನು ಆಗ ನಾಟಕಕ್ಕೆ ತೆರೆ ಬೀಳುವುದು…! ಹನೂರು ಚೆನ್ನಪ್ಪ ರಚಿಸಿರುವ ಈನಾಟಕದ ವಿನ್ಯಾಸ ಮತ್ತು ನಿರ್ದೇಶನವನ್ನು ರೂಪಸ್ ಸಂಜಯ…

Read More

ಬೆಳ್ತಂಗಡಿ : ಯತಿಶ್ರೇಷ್ಠರಾದ ಪಲಿಮಾರು ಮಠದ ಶ್ರೀ ವಿದ್ಯಾಮಾನ್ಯ ತೀರ್ಥ ಶ್ರೀಪಾದರ ಹೆಸರಿನಲ್ಲಿ ಅವರ ಕರಕಮಲ ಸಂಜಾತ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಅನುಗ್ರಹ ಪೂರ್ವಕವಾಗಿ ಕೊಡಮಾಡುವ ‘ಯಕ್ಷವಿದ್ಯಾ ಮಾನ್ಯ’ ಪ್ರಶಸ್ತಿಗೆ ತೆಂಕುತಿಟ್ಟಿನ ಶ್ರೇಷ್ಠ ಕಲಾವಿದ, ಧರ್ಮಸ್ಥಳ ಮೇಳದ ಅಗ್ರಮಾನ್ಯ ಕಲಾವಿದರಾಗಿದ್ದ ರಾಷ್ಟ್ರಪ್ರಶಸ್ತಿ ಪುರಸ್ಕೃತ ಸೂರಿಕುಮೇರು ಕೆ. ಗೋವಿಂದ ಭಟ್ ಆಯ್ಕೆಯಾಗಿದ್ದಾರೆ. ಕೂಡ್ಲು, ಇರಾ, ಸುರತ್ಕಲ್ ಮತ್ತು ದೀರ್ಘಕಾಲ ಧರ್ಮಸ್ಥಳ ಮೇಳದಲ್ಲಿ ಪ್ರಧಾನ ವೇಷಧಾರಿಯಾಗಿ ಒಟ್ಟು ಸುಮಾರು ಆರುವರೆ ದಶಕಗಳಿಗೂ ಅಧಿಕ ಕಾಲ ಯಕ್ಷ ತಿರುಗಾಟ ನಡೆಸಿ ಎಲ್ಲಾ ರೀತಿಯ ಪಾತ್ರಗಳನ್ನು ಮಾಡಿರುವ ಇವರು ಹಲವು ಪೌರಾಣಿಕ ಪಾತ್ರಗಳನ್ನು ಅಪೂರ್ವವಾಗಿ ಚಿತ್ರಿಸಿದ್ದಾರೆ. ಯಕ್ಷಗುರುಗಳಾಗಿ ನೂರಾರು ವಿದ್ಯಾರ್ಥಿಗಳನ್ನು ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ಇವರಿಗೆ 10 ಏಪ್ರಿಲ್ 2025ರಂದು ಪಲಿಮಾರು ಮೂಲಮಠದಲ್ಲಿ ನಡೆಯಲಿರುವ ಶ್ರೀ ವಿದ್ಯಾಮಾನ್ಯ ತೀರ್ಥರ ಆರಾಧನಾ ಮಹೋತ್ಸವದ ಸಂದರ್ಭ ‘ಯಕ್ಷವಿದ್ಯಾ ಮಾನ್ಯ’ ಪುರಸ್ಕಾರವನ್ನು ಪ್ರಶಸ್ತಿ ಫಲಕ ಮತ್ತು ರೂ. 50,000 ನಿಧಿಯೊಂದಿಗೆ ಪ್ರದಾನ ಮಾಡಲಾಗುವುದು ಎಂದು ಪಲಿಮಾರು ಮಠದ`…

Read More

ಉಡುಪಿ : ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು ಘಟಕ, ಐ. ಕ್ಯು. ಎಸಿ. ಹಾಗೂ ಕನ್ನಡ ವಿಭಾಗ ಎಂ. ಜಿ. ಎಂ. ಕಾಲೇಜು ಉಡುಪಿ ಇದರ ಆಶ್ರಯದಲ್ಲಿ ದಿ. ಡಾ. ಉಪ್ಪಂಗಳ ರಾಮ ಭಟ್ ನೆನಪು, ಪುಸ್ತಕ ವಿತರಣೆ ಹಾಗೂ ಪ್ರಸಿದ್ಧ ಕವಿ ಡುಂಡಿರಾಜ್ ಅವರೊಂದಿಗೆ ಮಾತುಕತೆ ಕಾರ್ಯಕ್ರಮ ದಿನಾಂಕ 22 ಮಾರ್ಚ್ 2025ರ ಶನಿವಾರ ಎಂ. ಜಿ. ಎಂ. ಕಾಲೇಜಿನ ಎ. ವಿ. ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಖ್ಯಾತ ಚುಟುಕು ಕವಿ, ಸಾಹಿತಿ ಎಚ್. ಡುಂಡಿರಾಜ್ ಮಾತನಾಡಿ “ಶಿಕ್ಷಣ ನಮಗೆ ಬದುಕಲು ದಾರಿ ತೋರಿಸಿದರೆ ಸಾಹಿತ್ಯ ಮತ್ತು ಕಲೆ ನಮ್ಮ ವ್ಯಕ್ತಿತ್ವ ವಿಕಸನಕ್ಕೆ ದಾರಿ ತೋರಿಸಿದೆ. ಕವನಗಳು ಹುಟ್ಟುವುದು ಆಕಸ್ಮಿಕವಾದರೂ ಕೂಡ, ಕವಿಯ ಭಾವನೆಗಳು ಅದರಲ್ಲಿ ಅಡಕವಾಗಿರುತ್ತವೆ. ಕವಿಗೆ ಸರಿಯಾದ ಕಾವ್ಯ ಪ್ರಜ್ಞೆಯಿದ್ದಾಗ ಮಾತ್ರ ಉತ್ತಮ ಕವನಗಳು ಹಾಗೂ ಸಾಹಿತ್ಯ ಬರಲು ಸಾಧ್ಯ. ವಿದ್ಯಾರ್ಥಿಗಳು ಓದುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಕವನಗಳನ್ನು ಬರೆಯುವ ಹವ್ಯಾಸ ಈಗಿನಿಂದಲೇ…

Read More