Subscribe to Updates
Get the latest creative news from FooBar about art, design and business.
Author: roovari
ಸಾಲಿಗ್ರಾಮ : ಆದಿತ್ಯ ಟ್ರಸ್ಟ್ ಕ್ಯಾದಗಿ (ರಿ.) ಅರ್ಪಿಸುವ ‘ಪುಷ್ಪಕ ಯಾನ’ ಏಕವ್ಯಕ್ತಿ ನವರಸಾಭಿವ್ಯಕ್ತಿ ಕಾರ್ಯಕ್ರಮವು ದಿನಾಂಕ 5 ಸೆಪ್ಟೆಂಬರ್ 2024ರಂದು ಸಾಲಿಗ್ರಾಮ ಗುಂಡ್ಮಿಯ ಸದಾನಂದ ರಂಗ ಮಂಟಪದಲ್ಲಿ ಪ್ರಸ್ತುತಗೊಳ್ಳಲಿದೆ. ಈ ಕಾರ್ಯಕ್ರಮವು ಪುರಾಣ ಕಥೆಯನ್ನು ರಂಜನಾತ್ಮಕವಾಗಿ ಹೇಳುವ ಹೊಸ ಪ್ರಯತ್ನ ಇದಾಗಿದೆ. ಯಕ್ಷಹಾಸ್ಯ ಕಲಾವಿದ ಮಹಾಬಲೇಶ್ವರ ಭಟ್ ಕ್ಯಾದಗಿ ಇವರ ಪರಿಕಲ್ಪನೆ ನಿರ್ದೇಶನ ಮತ್ತು ಅಭಿನಯಕ್ಕೆ ಗಾನ ಸಾರಥಿ ವಿದ್ವಾನ್ ಗಣಪತಿ ಭಟ್ ಇವರು ಸಹಕರಿಸಲಿದ್ದಾರೆ.
ಉಡುಪಿ : ರಂಜನಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಉಡುಪಿಯ ಯಕ್ಷಗಾನ ಕಲಾರಂಗ ಇನ್ಫೋಸಿಸ್ ಹಾಲ್ ಇಲ್ಲಿ ಹಮ್ಮಿಕೊಂಡಿರುವ 9 ದಿನಗಳ ವಾರ್ಷಿಕ ಸಂಗೀತೋತ್ಸವವನ್ನು ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಡಿಪಾರ್ಟ್ ಮೆಂಟ್ ಆಫ್ ಸೋಶಿಯಲ್ ಸೈನ್ಸ್ ಡೀನ್ ಡಾ. ಬಿಂದಾ ಪರಾಂಜಪೆ ಇವರು ದಿನಾಂಕ 01 ಸೆಪ್ಟೆಂಬರ್ 2024ರಂದು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಗಂಗಾಧರ ರಾವ್, ಕಾರ್ಯದರ್ಶಿ ಮುರಳಿ ಕಡೆಕಾರ್ ಅವರನ್ನು ಗೌರವಿಸಲಾಯಿತು. ಈ ಸಂಗೀತೋತ್ಸವದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕಲಾವಿದರಿಂದ ಗುಣಮಟ್ಟದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮೊದಲ ದಿನದ ಕಾರ್ಯಕ್ರಮದಲ್ಲಿ ನಾಗೇಶ್ ಬಪ್ಪನಾಡು ಮತ್ತು ತಂಡದವರಿಂದ ನಾಗಸ್ವರ ವಾದನ, ವಿದ್ವಾಂಸರಾದ ಡಾ. ಬಿಂದಾ ಪರಾಂಜಪೆ ಇವರಿಂದ ‘ಕಲಾಕ್ಷೇತ್ರಕ್ಕೆ ದೇವದಾಸಿಯರ ಕೊಡುಗೆ’ ಎಂಬ ವಿಷಯದ ಕುರಿತು ಉಪನ್ಯಾಸ ನಡೆಯಿತು. ರಮಣ ಬಾಲಚಂದ್ರನ್ ಅವರು ವೀಣಾ ವಾದನದ ಮೂಲಕ ಮೊದಲ ದಿನದ ಪ್ರಧಾನ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ರಂಜನಿ ಮೆಮೋರಿಯಲ್ ಟ್ರಸ್ಟಿನ ಮುಖ್ಯಸ್ಥ ಪ್ರೊ. ಅರವಿಂದ ಹೆಬ್ಬಾರ್…
ಪುತ್ತೂರು : ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು, ಜಿಲ್ಲಾ ಕನ್ನಡ ಲೇಖಕರ ಸಂಘ ಕಾಸರಗೋಡು, ಕನ್ನಡ ಸಂಘ ಮತ್ತು ಐ.ಕ್ಯೂ.ಎ.ಸಿ. ಇದರ ಸಹಯೋಗದಲ್ಲಿ ಕೃತಿ ಲೋಕಾರ್ಪಣೆ ಮತ್ತು ಸ್ವರಚಿತ ಕವನ ವಾಚನ ಸಮಾರಂಭವನ್ನು ದಿನಾಂಕ 05 ಸೆಪ್ಟೆಂಬರ್ 2024ರಂದು ಇಳಿಹಗಲು 2-00 ಗಂಟೆಗೆ ಸುವರ್ಣ ಮಹೋತ್ಸವ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ. ಶ್ರೀಪತಿ ಕಲ್ಲೂರಾಯ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಪಿ. ಶ್ರೀಕೃಷ್ಣ ಭಟ್ ಇವರು ಕೃತಿ ಲೋಕಾರ್ಪಣೆ ಮಾಡಲಿರುವರು. ಪ್ರಾಧ್ಯಾಪಕರಾದ ಡಾ. ರಾಧಾಕೃಷ್ಣ ಬೆಳ್ಳೂರು ಇವರು ಕೃತಿ ಪರಿಚಯ ಮಾಡಲಿದ್ದು, ಸಭಾ ಕಾರ್ಯಕ್ರಮದ ಬಳಿಕ ಸ್ವರಚಿತ ಕವನ ವಾಚನ ನಡೆಯಲಿದೆ.
ಸುರತ್ಕಲ್ : ಗೋವಿಂದದಾಸ ಕಾಲೇಜಿನ ಗ್ರಂಥಾಲಯ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಖಾತರಿಕೋಶದ ಸಹಭಾಗಿತ್ವದಲ್ಲಿ ನಡೆಸುತ್ತಿರುವ ಪುಸ್ತಕ ಪ್ರೀತಿ ಪರಿಚಯ ಸರಣಿ ಕಾರ್ಯಕ್ರಮ ದಿನಾಂಕ 28 ಆಗಸ್ಟ್ 2024 ರಂದು ಕಾಲೇಜಿನ ಗ್ರಂಥಾಲಯದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ದ್ವಿತೀಯ ಬಿ. ಎ. ವಿದ್ಯಾರ್ಥಿನಿ ಮುಂಜುಳಾ ಇವರು ಮಹೇಶ್ ಆರ್. ನಾಯಕ್ ಬರೆದಿರುವ ‘ಜಪಾನೀ ಪ್ಲೇಟ್’ ಎಂಬ ಕಥಾ ಸಂಕಲನವನ್ನು ಪರಿಚಯಿಸಿ “ಮಾನವೀಯ ಸಂಬಂಧಗಳ ಕುರಿತು ವಿವಿಧ ನೆಲೆಗಳಲ್ಲಿ ಕಥೆಗಳು ವ್ಯಾಖ್ಯಾನ ಮಾಡುತ್ತಿವೆ. ಆಧುನಿಕ ಬದುಕಿನ ವಿವಿಧ ಸ್ತರಗಳನ್ನು ಈ ಪುಸ್ತಕದ ಕಥೆಗಳು ನಿರೂಪಿಸುತ್ತವೆ.” ಎಂದರು. ಮಂಜುಳಾ ಅವರಿಗೆ ಮಹೇಶ್ ಆರ್. ನಾಯಕ್ ಸ್ಮರಣಿಕೆ ನೀಡಿ ಗೌರವಿಸಿದರು ಬಳಿಕ ಮಾತನಾಡಿದ ಅವರು “ಪುಸ್ತಕ ಪ್ರೀತಿ ವಿದ್ಯಾರ್ಥಿಗಳಲ್ಲಿ ಪುಸ್ತಕ ಅಭಿರುಚಿ ಮೂಡಿಸುವ ವಿಶಿಷ್ಟ ಕಾರ್ಯಕ್ರಮವಾಗಿದೆ.” ಎಂದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಪಿ. ಕೃಷ್ಣಮೂರ್ತಿ ಇವರು ಮಹೇಶ್ ಆರ್. ನಾಯಕ್ ಇವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಆಂತರಿಕ ಗುಣಮಟ್ಟ ಖಾತರಿಕೋಶದ ಸಂಯೋಜಕರಾದ ಪ್ರೊ. ಹರೀಶ್ ಆಚಾರ್ಯ, ಪ್ರಾಧ್ಯಾಪಕರುಗಳಾದ…
ಕಾಸರಗೋಡು : ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠ ಕಾಸರಗೋಡು ಇಲ್ಲಿನ ಸ್ವಾಮೀಜಿಯವರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಚತುರ್ಥ ಚಾತುರ್ಮಾಸ್ಯದ ಅಂಗವಾಗಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕರ್ನಾಟಕದ ಪ್ರತಿಷ್ಟಿತ ನೃತ್ಯ ಗುರುಗಳು ಹಾಗೂ ನೃತ್ಯಕಲಾವಿದರ ಒಗ್ಗೂಡುವಿಕೆಯ ‘ನಾಟ್ಯದಾಸೋಹಂ’ ಭರತನಾಟ್ಯ ಕಾರ್ಯಕ್ರಮ ದಿನಾಂಕ 29 ಆಗಸ್ಟ್ 2024ರ ಗುರುವಾರದಂದು ನಡೆಯಿತು. ಹರಿದಾಸರ ರಚನೆಯನ್ನು ಆಧರಿಸಿದ ವಿಶೇಷ ಆಯೋಜನೆಯ ಪ್ರದರ್ಶನ ಇದಾಗಿದ್ದು, ಶ್ರೀಪಾದರಾಯರು,ವ್ಯಾಸತೀರ್ಥರು, ವಾದಿರಾಜರು, ರಾಘವೇಂದ್ರ ಸ್ವಾಮಿ, ಪುರಂದರದಾಸರು, ಕನಕದಾಸರು, ವಿಜಯದಾಸರು ಹಾಗೂ ಜಗನ್ನಾಥದಾಸರುಗಳ ಕೃತಿಯನ್ನು ಆಯ್ಕೆ ಮಾಡಿಕೊಂಡು ಅವರ ಕಾಲಘಟ್ಟಕ್ಕೇ ಅನುಕ್ರಮವಾಗಿಯೇ ಇಲ್ಲಿ ಪ್ರದರ್ಶಿಸಲಾಯಿತು. ನೃತ್ಯ ಪ್ರದರ್ಶನದಲ್ಲಿ ಕಲಾವಿದರುಗಳಾಗಿ ಕರ್ನಾಟಕ ಕಲಾಶ್ರೀ ಶ್ರೀಮತಿ ವಿದುಷಿ ಶಾರದಾಮಣಿಶೇಖರ್, ಕರ್ನಾಟಕ ಕಲಾಶ್ರೀ ರಾಜಶ್ರೀ ಉಳ್ಳಾಲ, ವಿದ್ಯಾಶ್ರೀ ರಾಧಾಕೃಷ್ಣ, ಮುಂಜುಳಾ ಸುಬ್ರಹ್ಮಣ್ಯ, ಸಾಗರ್ ತುಮಕೂರು, ರಾಧಿಕಾ ಶೆಟ್ಟಿ, ಉನ್ನತ್ ಜೈನ್ ಹಾಸನ ಹಾಗೂ ಮಂಜರೀ ಚಂದ್ರ ಪುಷ್ಪರಾಜ್ ಇವರುಗಳು ಭಾಗವಹಿಸಿದ್ದರು. ಮಂಗಳೂರಿನ ‘ನೃತ್ಯಾಂಗನ್’ ಸಂಸ್ಥೆಯ ನಿರ್ದೇಶಕಿಯಾದಂತಹ ರಾಧಿಕಾ ಶೆಟ್ಟಿಯವರ ಪರಿಕಲ್ಪನೆಯಲ್ಲಿ ಮೂಡಿಬಂದ…
ಉಡುಪಿ : ಬಂಟರ ಯಾನೆ ನಾಡವರ ಮಾತೃ ಸಂಘ, ಮಂಗಳೂರು ಇದರ ಉಡುಪಿ ತಾಲೂಕು ಸಮಿತಿ ವತಿಯಿಂದ ಜಾನಪದ, ರಂಗಭೂಮಿ, ಸಾಂಸ್ಕೃತಿ, ಧಾರ್ಮಿಕ ಮೊದಲಾದ ಹತ್ತು ಹಲವಾರು ಕ್ಷೇತ್ರಗಳಲ್ಲಿ ಸಕ್ರೀಯರಾಗಿ ವಿವಿಧ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಖ್ಯಾತರಾಗಿರುವ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರಿಗೆ ‘ಬಂಟಕುಲ ರತ್ನ’ ಬಿರುದು ಹಾಗೂ ಸನ್ಮಾನ ಸಮಾರಂಭವು 01 ಸೆಪ್ಟೆಂಬರ್ 2024ರ ಭಾನುವಾರದಂದು ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ನಡೆಯಿತು. ಸಮಿತಿಯ ವತಿಯಿಂದ ಆಯೋಜಿಸಲಾದ ‘ಕಲಾಧರ ಯಕ್ಷರಂಗ ಬಳಗ ಜಲವಳ್ಳಿ’ ಇವರಿಂದ ಬಡಗುತಿಟ್ಟು ಯಕ್ಷಗಾನ ‘ಜ್ವಾಲಾ ಪ್ರತಾಪ’ ಪ್ರಸಂಗದ ಪ್ರದರ್ಶನದ ಸಂದರ್ಭದಲ್ಲಿ ಈ ಸನ್ಮಾನ ನಡೆಯಿತು. ಈ ಸಂದರ್ಭದಲ್ಲಿ ಮಂಗಳೂರಿನ ಬಂಟರ ಯಾನೆ ನಾಡವರ ಮಾತೃ ಸಂಘದ ಉಡುಪಿ ತಾಲೂಕು ಸಮಿತಿಯ ಸಂಚಾಲಕರಾದ ಶಿವಪ್ರಸಾದ್ ಹೆಗ್ಡೆ, ಉಪ ಸಂಚಾಲಕ ದಿನೇಶ್ ಹೆಗ್ಡೆ, ನಿಕಟ ಪೂರ್ವ ಸಂಚಾಲಕ ಜಯರಾಜ್ ಹೆಗ್ಡೆ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಭುಜಂಗ ಶೆಟ್ಟಿ, ಮಿಥುನ್ ಹೆಗ್ಡೆ, ಸುಭಾಸ್…
ವಯನಾಡು : ಕೇರಳ ನೃತ್ಯ ಕಲಾವಿದರ ಒಕ್ಕೂಟ (ರಿ) ವಯನಾಡು ಇದರ ನೇತೃತ್ವದಲ್ಲಿ ಗುರುವಾಯೂರ್ ದೇವಸ್ಥಾನದ ಮೇಲ್ಪತ್ತೂರು ಸಭಾದಲ್ಲಿ ದಿನಾಂಕ 4 ಸೆಪ್ಟೆಂಬರ್ 2024ರಂದು ಸಂಜೆ ಗಂಟೆ 8-30ಕ್ಕೆ ವಿದ್ವಾನ್ ಮಂಜುನಾಥ ಎನ್. ಪುತ್ತೂರು ಇವರಿಂದ ಭರತನಾಟ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದರ ಜೊತೆಗೆ ವಯನಾಡಿನ ನೃತ್ಯ ಕಲಾವಿದರ ನೃತ್ಯ ಪ್ರದರ್ಶನ ಮತ್ತು ವಿಶೇಷವಾಗಿ ‘ಶ್ರೀ ರಾಮ ಕಥಾಮೃತ’ ಪರಿಕಲ್ಪನೆಯನ್ನು ಒಕ್ಕೂಟವು ಪ್ರದರ್ಶಿಸಲಿದೆ. ಇದರ ನೃತ್ಯ ಸಂಯೋಜನೆಯನ್ನು ವಿದ್ವಾನ್ ಮಂಜುನಾಥ ಎನ್. ಪುತ್ತೂರು ಹಾಗೂ ನೃತ್ಯದ ಪರಿಕಲ್ಪನೆ ಮತ್ತು ಕಥಾ ವಿನ್ಯಾಸವನ್ನು ಕೋಲ್ಕತ್ತಾದ ಯುವ ನೃತ್ಯ ಕಲಾವಿದ ಶ್ರೀ ಎನ್ ದೇಬಾಶಿಷ್ ಮಾಡಿದ್ದಾರೆ.
ಧಾರವಾಡ : ಧಾರವಾಡದ ಮನೋಹರ ಗ್ರಂಥ ಮಾಲೆಯ ಅಟ್ಟದಲ್ಲಿ ರಂಗಾಸಕ್ತರೊಂದಿಗೆ ದಿನಾಂಕ 01 ಆಗಸ್ಟ್ 2024ರಂದು ಸಂವಾದ ಕಾರ್ಯಕ್ರಮ ನಡೆಯಿತು. ಈ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಖ್ಯಾತ ಚಲನಚಿತ್ರ ನಟ, ರಂಗಕರ್ಮಿ ಶ್ರೀ ಮಂಡ್ಯ ರಮೇಶ “ಯಾವುದೇ ಸಂದರ್ಭದಲ್ಲೂ ಅವಸರದ ಪ್ರತಿಕ್ರಿಯೆ ಸಂಘರ್ಷಕ್ಕೆ ಎಡೆಮಾಡುತ್ತೆ. ನಾಟಕಕಾರರಾದ ಜಡಭರತ, ಶ್ರೀರಂಗರು, ಬೇಂದ್ರೆ ಮೊದಲಾದವರು ಬರೆದ ನಾಟಕಗಳು ಬಂಡಾಯದ ಪ್ರತೀಕಗಳೇ. ‘ಕದಡಿದ ನೀರು’ ನಾಟಕದ ಹುಚ್ಚ ರಾಚ್ಯಾ ತಿಳುವಳಿಕೆಯ ಮಾತುಗಳನ್ನೇ ಹೇಳುತ್ತಾನೆ. ಎಡ ಬಲ ವಿಚಾರಧಾರೆಯ ಅತೀರೇಕಗಳೇ ನೈಜ ರಂಗಭೂಮಿಯ ಸೊಗಡನ್ನು ಕುಂದಿಸಿವೆ. ವೃತ್ತಿರಂಗಭೂಮಿಯ ವೃತ್ತಿಪರತೆ, ಹವ್ಯಾಸಿ ರಂಗಭೂಮಿಯ ವಿಚಾರಪರತೆ, ರೆಪರ್ಟರಿಯ ಶಿಸ್ತು ಇವೆಲ್ಲವೂ ನನ್ನನ್ನು ರಂಗಕರ್ಮಿಯನ್ನಾಗಿಸಿವೆ. ಪ್ರೀತಿ, ವಿಶ್ವಾಸದಿಂದ ಯುವಪೀಳಿಗೆಯನ್ನು ರಂಗಭೂಮಿಯ ಕಡೆ ಸೆಳೆಯುವ ಮೂಲಕ ನನ್ನ ನಟನ ರಂಗ ರೆಪರ್ಟರಿಯನ್ನು ಕಳೆದ 22 ವರ್ಷಗಳಿಂದ ನಡೆಸಿಕೊಂಡು ಬಂದಿದ್ದೇನೆ. ಚಲನಚಿತ್ರ, ಕಿರುತೆರೆ ಮೊದಲಾದವುಗಳಲ್ಲಿ ರಂಗಭೂಮಿಯೇ ನನ್ನ ಮೊದಲ ಆದ್ಯತೆ. ಹವ್ಯಾಸಿ ರಂಗಭೂಮಿ ಸಶಕ್ತವಾಗಬೇಕು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಸಂವಾದವನ್ನು ಹಿರಿಯ ರಂಗಕರ್ಮಿ ಡಾ.…
ಶ್ರಾವಣದ ಸಂಜೆ. ಧೋ ಎಂದು ಸುರಿದ ಮಳೆ ಕೆಲವೇ ನಿಮಿಷಗಳಲ್ಲಿ ಗತಿ ಬದಲಿಸಿ ಸೋನೆಯಾಗಿ ಜಿನುಗತೊಡಗಿತ್ತು. ಅಷ್ಟರಲ್ಲಿ ಮೋಡ ಕಪ್ಪಿಟ್ಟು ಮತ್ತೊಂದು ಜಲಧಾರೆಗೆ ಸಿದ್ಧತೆ ನಡೆಸಿತ್ತು. ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನ ಫಾದರ್ ಎಲ್.ಎಫ್.ರಸ್ಕಿನ್ಹ ಸಭಾಂಗಣದಲ್ಲಿ ಮೋಹಕ ಆಲಾಪವು ‘ಜೋಡ್’ನಲ್ಲಿ ಲಯವನ್ನು ಸಂಧಿಸಿ ‘ಜಾಲಾ’ದತ್ತ ಜಾರಿತ್ತು. ತಾಳದ ಜಾಡು ಹಿಡಿಯಲು ಸಜ್ಜಾಗಿದ್ದ ಶ್ರೋತೃಗಳು ರಸಯಾತ್ರೆಗೆ ಮನಸನ್ನು ಶ್ರುತಿಗೊಳಿಸುತ್ತಿದ್ದರು. ಮಂಗಳೂರಿನಲ್ಲಿ ದಿನಾಂಕ 25 ಆಗಸ್ಟ್ 2024ರಂದು ನಡೆದ ‘ರಿಮ್ಜಿಮ್’ ಸಂಗೀತ ಕಾರ್ಯಕ್ರಮ ಸಂಗೀತ ಪ್ರೇಮಿಗಳ ಮನಸೂರೆಗೊಂಡಿತು. ಮುಂಬೈಯ ಸತ್ಯೇಂದ್ರಸಿಂಗ್ ಅವರ ಸಂತೂರ್ ವಾದನ ಮತ್ತು ಧಾರವಾಡದ ಸುಜಯೀಂದ್ರ ಅವರ ಗಾಯನ ಮಳೆ ರಾಗಗಳ ರಸ ಉಣಿಸಿತು. ಮಂಗಳೂರಿನ ಸಂಗೀತ ಭಾರತಿ ಪ್ರತಿಷ್ಠಾನ ಆಯೋಜಿಸಿದ್ದ ವಾದನ ಮತ್ತು ಗಾಯನ ಕಾರ್ಯಕ್ರಮ ‘ರಿಮ್ಜಿಮ್’ ತಣ್ಣಗಿನ ಸಂಜೆಯಲ್ಲಿ ಮಳೆರಾಗಗಳ ಬಿಸುಪು ನೀಡಿ ರಸಿಕರನ್ನು ಪುಳಕಗೊಳಿಸಿತು. ಸಂತೂರ್ನಲ್ಲಿ ಮುಂಬೈಯ ಸತ್ಯೇಂದ್ರ ಸಿಂಗ್ ಅವರು ‘ರಾಗ್ ಮೇಫ್’ ನುಡಿಸಿ ಕೋಮಲ ಶುದ್ಧ ಸ್ವರಗಳ ಲಾಲಿತ್ಯ ಪರಿಚಯಿಸಿದರು. ಗಾಯನ ಪ್ರಸ್ತುತಪಡಿಸಿದ ಹುಬ್ಬಳ್ಳಿಯ…
ಧಾರವಾಡ: ಧಾರವಾಡದ ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯು 2024ನೇ ಸಾಲಿನ ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿಗೆ ಅಪ್ರಕಟಿತ ಕಥಾಸಂಕಲನಗಳ ಹಸ್ತಪ್ರತಿಗಳನ್ನು ಆಹ್ವಾನಿಸಿದೆ. ಈ ಪ್ರಶಸ್ತಿಯು ರೂಪಾಯಿ 20,000 ನಗದು, ಪ್ರಶಸ್ತಿ ಫಲಕ ಮತ್ತು ಸನ್ಮಾನವನ್ನು ಒಳಗೊಂಡಿರುತ್ತದೆ. ಆಸಕ್ತ ಲೇಖಕ/ಲೇಖಕಿಯರು ನಿಯಮಗಳಿಗನುಗುಣವಾಗಿ ಹಸ್ತಪ್ರತಿಗಳನ್ನು ಕಳುಹಿಸಲು ಸೂಚಿಸಲಾಗಿದೆ. ನಿಯಮಗಳು * ಈ ಕಥಾ ಪ್ರಶಸ್ತಿಗೆ ಮುಕ್ತ ಪ್ರವೇಶವಿದ್ದು, ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ. * ಲಿಂಗ, ವಯೋಮಿತಿ, ಜಾತಿ, ಧರ್ಮ, ಪ್ರದೇಶ ಸೇರಿದಂತೆ ಯಾವುದೇ ಕೃತಕ ಮಾನದಂಡಗಳಿರುವುದಿಲ್ಲ. ಗುಣಮಟ್ಟವೊಂದೇ ಆಯ್ಕೆಯ ಮಾನದಂಡ. * ಕಥೆಗಳು ಈ ಮೊದಲು ಪುಸ್ತಕ ರೂಪದಲ್ಲಿ ಪ್ರಕಟವಾಗಿರಬಾರದು. ಪತ್ರಿಕೆ ಮತ್ತು ವಿಶೇಷಾಂಕಗಳಲ್ಲಿ (ಪ್ರಿಂಟ್ ಅಥವಾ ಡಿಜಿಟಲ್ ಮೀಡಿಯಾ) ಪ್ರಕಟವಾದ ಕಥೆಗಳನ್ನು ಕಳುಹಿಸಬಹುದು. * ಕನಿಷ್ಠ 5 ಮತ್ತು ಗರಿಷ್ಠ 20 ಅಪ್ರಕಟಿತ ಕಥೆಗಳನ್ನು ಕಳುಹಿಸಬಹುದು. * ಕಥೆಗಳನ್ನು ಎ-4 ಅಳತೆಯ ಕಾಗದದಲ್ಲಿ 12ಫಾಂಟ್ ಅಳತೆಯಲ್ಲಿ ತಪ್ಪಿಲ್ಲದಂತೆ ಬೆರಳಚ್ಚು ಮಾಡಿ ಕಳುಹಿಸಬೇಕು. * ಹಸ್ತಪ್ರತಿಗಳು ಕನಿಷ್ಠ 80 ಪುಟ ಮತ್ತು ಗರಿಷ್ಠ 120…