Author: roovari

ಪುತ್ತೂರು : ಪುತ್ತೂರು ಶಿವಸದನದ ಹಿರಿಯರು ಬಹು ದಿನಗಳಿಂದ ನಿರೀಕ್ಷಿಸುತ್ತಿದ್ದ ಯಕ್ಷಗಾನ ತಾಳಮದ್ದಳೆ ಸಂಭ್ರಮವನ್ನು ಮಂಗಳೂರಿನ ಪ್ರಖ್ಯಾತ ‘ಯಕ್ಷ ಮಂಜುಳಾ’ ಕದ್ರಿ ಮಹಿಳಾ ಬಳಗ ಇವರ ತಂಡದಿಂದ ‘ದಕ್ಷ ಯಜ್ಞ’ ತಾಳಮದ್ದಲೆಯು ಅಮೋಘವಾಗಿ ದಿನಾಂಕ 18 ಜುಲೈ 2025ರಂದು ಶಿವ ಸದನದಲ್ಲಿ ಪ್ರದರ್ಶಿಸಲ್ಪಟ್ಟಿತು. ಇದರಲ್ಲಿ ಭಾಗವಹಿಸಿದ ಕಲಾವಿದರೆಲ್ಲರೂ ಮೇರು ವ್ಯಕ್ತಿತ್ವದವರು. ಪ್ರಧಾನ ಸಂಚಾಲಕರಾಗಿರುವ ಶ್ರೀಮತಿ ಪೂರ್ಣಿಮಾ ಪ್ರಭಾಕರ್ ರಾವ್ ಪೇಜಾವರ ಹಾಗೂ ಇವರ ಪತಿ ಶ್ರೀ ಪ್ರಭಾಕರ್ ರಾವ್ ಪೇಜಾವರ ಯಕ್ಷ ಮಂಜುಳಾದ ಗೌರವಾಧ್ಯಕ್ಷರಾಗಿ ತುಂಬಾ ಸಮಯದಿಂದ ಯಕ್ಷಗಾನದಲ್ಲಿ ಅಭಿರುಚಿ ಹೊಂದಿ ಯಕ್ಷಗಾನದ ಮೇಲಿನ ಅಭಿಮಾನದಿಂದ ಈ ಸಂಸ್ಥೆಯನ್ನು ಹುಟ್ಟು ಹಾಕಿ ದಂಪತಿಗಳು ಪ್ರೋತ್ಸಾಹ ನೀಡುತ್ತಾ ಬರುತ್ತಿರುವರು. ಈ ತಂಡದ ನಿರ್ದೇಶಕರಾಗಿ ಶ್ರೀ ಅಲೆವೂರಾಯರು ಪ್ರಸಿದ್ಧ ಸ್ತ್ರೀ ವೇಷಧಾರಿಯೂ ಹೌದು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಬಸವಕಲ್ಯಾಣ ಪ್ರಶಸ್ತಿ ಪಡೆದು ಅನೇಕ ಸಂಘಗಳನ್ನು ರಚಿಸಿ ‘ಸರಯೂ’ ಬಾಲ ಯಕ್ಷ ವೃಂದ ರಚಿಸಿ ಯಕ್ಷಗಾನ ಕಲೆಯ ಪರಿಚಯವನ್ನು ಅನೇಕ ಮಕ್ಕಳಿಗೆ ಪರಿಚಯಿಸಿ ದಾರಿದೀಪವಾಗಿದ್ದಾರೆ. ಇಂಜಿನಿಯರಿಂಗ್…

Read More

ಪುತ್ತೂರು : ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಸರಣಿ ಕಾರ್ಯಕ್ರಮ ನೃತ್ಯಾಂತರಂಗದ 132ನೇ ಸರಣಿಯಲ್ಲಿ ದಿನಾಂಕ 06 ಜುಲೈ 2025ರಂದು ಶಶಿಶಂಕರ ಸಭಾಂಗಣದಲ್ಲಿ ಉಡುಪಿಯ ಕುಮಾರಿ ಶ್ರೇಷ್ಠ ದೇವಾಡಿಗ ಇವರಿಂದ ಭರತನಾಟ್ಯ ಕಾರ್ಯಕ್ರಮ ಬಹಳಷ್ಟು ಆಕರ್ಷಕವಾಗಿ ನಡೆಯಿತು. ಉತ್ತಮ ಅಂಗಶುದ್ಧ ಹಾಗೂ ಹಿತಮಿತ ಅಭಿನಯದಿಂದ ಜನರ ಮೆಚ್ಚುಗೆ ಪಡೆದ ಶ್ರೇಷ್ಠ ದೇವಾಡಿಗ ಉಡುಪಿಯ ಡಾ. ಮಂಜರಿಚಂದ್ರರವರ ಶಿಷ್ಯೆ. ಈ ನೃತ್ಯಾಂತರಂಗದಲ್ಲಿ ಅಭ್ಯಾಗತರಾದ ರಂಗಕಲಾವಿದ ಶ್ರೀ ಸದಾಶಿವ ಶಿವಗಿರಿಯವರು ನೃತ್ಯ ಸಂಸ್ಥೆಯ ಸಾಂಸ್ಕೃತಿಕ ಚಟುವಟಿಕೆಯ ಬಗ್ಗೆ ಹಾಗೂ ಮಕ್ಕಳಲ್ಲಿ ಲಲಿತ ಕಲೆಗಳ ಸತ್ಪರಿಣಾಮಗಳ ಬಗ್ಗೆ ಸವಿವರವಾಗಿ ಹೇಳಿದರು. ಕುಮಾರಿ ಅಕ್ಷರಿ ಕೆ. ಇವರು ನಿರೂಪಣೆಗೈದರೆ, ವಿದ್ವಾನ್ ದೀಪಕ್ ಕುಮಾರ್ ಕಾರ್ಯಕ್ರಮ ಆಯೋಜಿಸಿದ್ದರು. ವಿದುಷಿ ಸುಮಂಗಲ ಗಿರೀಶ್ ಅಭಿಪ್ರಾಯ ತಿಳಿಸಿ, ಶೌರೀಕೃಷ್ಣ ಪ್ರಾರ್ಥನೆ, ಕುಮಾರಿ ನಯೋಮಿ ಪಂಚಾಂಗ ವಾಚನ, ಕುಮಾರಿ ಪ್ರಾರ್ಥನಾ ಎಂ. ಮತ್ತು ಬಿಂದು ಕಲಾವಿದರ ಪರಿಚಯ, ವಿದ್ವಾನ್ ಗಿರೀಶ್ ಕುಮಾರ್ ಶಂಖ ನಾದ ಮತ್ತು ಕುಮಾರಿ ಪ್ರಣಮ್ಯ ಪಾಲೆಚ್ಚಾರು ವಿಷಯ ಮಂಡನೆ…

Read More

ಮೈಸೂರು : ಪರಿವರ್ತನ ರಂಗ ಸಮಾಜ (ರಿ.) ಇದರ 25ನೇ ವರ್ಷಾಚರಣೆಯ ಸಂದರ್ಭದಲ್ಲಿ ಪ್ರಸ್ತುತಪಡಿಸುವ ತಂಡದ 30ನೇ ನಾಟಕ ರವೀಂದ್ರ ಭಟ್ ಇವರ ಕೃತಿ ಆಧಾರಿತ ‘ಮೂರನೇ ಕಿವಿ’ ನಾಟಕ ಪ್ರದರ್ಶನವನ್ನು ದಿನಾಂಕ 27 ಜುಲೈ 2025ರಂದು ಸಂಜೆ 6-30 ಗಂಟೆಗೆ ರಮಾಗೋವಿಂದ ರಂಗಮಂದಿರದಲ್ಲಿ ಆಯೋಜಿಸಲಾಗಿದೆ. ಪ್ರೊ. ಎಸ್.ಆರ್. ರಮೇಶ್ ಇವರು ರಂಗಪಠ್ಯ, ವಿನ್ಯಾಸ ಮತ್ತು ನಿರ್ದೇಶನ ಮಾಡಿರುತ್ತಾರೆ.

Read More

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ವಿವಿಧ ಪ್ರಕಾರಗಳಲ್ಲಿ ಪುರಸ್ಕಾರಗಳನ್ನು ನೀಡಲು ಒಟ್ಟು 54 ದತ್ತಿ ಪುರಸ್ಕಾರಗಳಿದ್ದು, ಇವುಗಳಿಗೆ 2024ರ ಜನವರಿ 1ರಿಂದ ಡಿಸಂಬರ್ 31ರೊಳಗೆ ಪ್ರಕಟವಾದ ಪುಸ್ತಕಗಳನ್ನು ಕಳುಹಿಸಲು ಆಹ್ವಾನಿಸಲಾಗಿತ್ತು. ಇದಕ್ಕೆ ಜುಲೈ 20ರಂದು ಕೊನೆಯ ದಿನವಾಗಿತ್ತು. ಆದರೆ ದೇಶ-ವಿದೇಶಗಳಿಂದ ಅನೇಕ ಬರಹಗಾರರು ಕೊನೆಯ ದಿನಾಂಕವನ್ನು ವಿಸ್ತರಿಸುವಂತೆ ಕೋರಿಕೊಂಡಿದ್ದಾರೆ. ಈ ಸಾರ್ವಜನಿಕ ಒತ್ತಾಯವನ್ನು ಪರಿಗಣಿಸಿ ಕೊನೆಯ ದಿನಾಂಕವನ್ನು ಆಗಸ್ಟ್ 20ರ ಬುಧವಾರಕ್ಕೆ ವಿಸ್ತರಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ತಿಳಿಸಿದ್ದಾರೆ. ಕಾದಂಬರಿ, ಕಥಾ ಸಂಕಲನ, ಅನುವಾದ, ಸಂಶೋಧನೆ, ಮಕ್ಕಳ ಸಾಹಿತ್ಯ, ವೈಚಾರಿಕ ಬರಹಗಳು, ವೈದ್ಯಕೀಯ ಸಾಹಿತ್ಯ, ಇತಿಹಾಸ, ಜಾನಪದ, ಮನೋವಿಜ್ಞಾನ, ಸಿನಿಮಾ ಸಾಹಿತ್ಯ, ಕೃಷಿಗೆ ಸಂಬಂಧಿಸಿದ ಕೃತಿಗಳು, ಪ್ರವಾಸ ಸಾಹಿತ್ಯ ಮಹಿಳೆಯರಿಗೆ ಸಂಬಂಧಿಸಿದ ಮಹಿಳೆಯರು ರಚಿಸಿದ ಕೃತಿಗಳು, ನಾಟಕ, ಪ್ರಬಂಧ, ಸಂಪಾದನೆ, ಜೈನ ಸಾಹಿತ್ಯದ ಕುರಿತ ಸಂಶೋಧನೆ ಮೊದಲಾದ ಕ್ಷೇತ್ರಗಳಿಗೆ ರಚಿತವಾದ ಕೃತಿಗಳಿಗೆ ದತ್ತಿ ಪುರಸ್ಕಾರಗಳು ಇರುತ್ತವೆ. ಪುಸ್ತಕ ದತ್ತಿ ಪ್ರಶಸ್ತಿಗೆ ಪುಸ್ತಕ…

Read More

ಮೈಸೂರು : ಮೈಸೂರು ವಿಜ್ಞಾನ ನಾಟಕೋತ್ಸವ ಟ್ರಸ್ಟ್ (ರಿ.) ಇದರ ವತಿಯಿಂದ 8ನೇ ಆವೃತ್ತಿಯ ‘ವಿಜ್ಞಾನ ನಾಟಕೋತ್ಸವ’ವನ್ನು ದಿನಾಂಕ 24 ಜುಲೈ 2025ರಿಂದ 27 ಜುಲೈ 2025ರವರೆಗೆ ಪ್ರತಿದಿನ ಸಂಜೆ 6-30 ಗಂಟೆಗೆ ಮೈಸೂರಿನ ರಮಾಗೋವಿಂದ ರಂಗಮಂದಿರದಲ್ಲಿ ಆಯೋಜಿಸಲಾಗಿದೆ. ದಿನಾಂಕ 24 ಜುಲೈ 2025ರಂದು ಸಂಜೆ 5-00 ಗಂಟೆಗೆ ‘ವಿಜ್ಞಾನ ನಾಟಕೋತ್ಸವ’ದ ಉದ್ಘಾಟನೆ ನಡೆಯಲಿದ್ದು, ಬಳಿಕ ಬೆಂಗಳೂರಿನ ರಿದ್ಧಿ ತಂಡದವರಿಂದ ನೀಲಾಂಜನ್ ಚೌಧರಿ ಇವರ ನಿರ್ದೇಶನದಲ್ಲಿ ‘ಟ್ರಯಲ್ ಆಫ್ ಅಬ್ದುಸ್ ಸಲಾಮ್’, ದಿನಾಂಕ 25 ಜುಲೈ 2025ರಂದು ಮೈಸೂರಿನ ಅರಿವು ರಂಗ ತಂಡದವರಿಂದ ಪ್ರವೀಣ್ ಬೆಳ್ಳಿ ಇವರ ನಿರ್ದೇಶನದಲ್ಲಿ ‘ಹಸಿವು’, ದಿನಾಂಕ 26 ಜುಲೈ 2025ರಂದು ಮೈಸೂರಿನ ಕಲಾಸುರುಚಿ ತಂಡದವರಿಂದ ಪ್ರೊ. ಎಚ್.ಎಸ್. ಉಮೇಶ್ ಇವರ ನಿರ್ದೇಶನದಲ್ಲಿ ‘ರಾಮನ್ – ಬೆಳಕು, ಶಬ್ದ, ಸಿಡಿಲು’ ಮತ್ತು ದಿನಾಂಕ 27 ಜುಲೈ 2025ರಂದು ಮೈಸೂರಿನ ಪರಿವರ್ತನ ರಂಗಸಮಾಜ ತಂಡದವರಿಂದ ಪ್ರೊ. ಎಸ್.ಆರ್. ರಮೇಶ್ ಇವರ ನಿರ್ದೇಶನದಲ್ಲಿ ‘ಮೂರನೇ ಕಿವಿ’ ನಾಟಕ ಪ್ರದರ್ಶನಗೊಳ್ಳಲಿದೆ.

Read More

ಶಾಂತಿನಾಥ ದೇಸಾಯಿ ಅವರು ಲೇಖಕ, ವಿಮರ್ಶಕ ಮತ್ತು ಕಾದಂಬರಿ ಲೋಕಕ್ಕೆ ಒಂದು ಹೊಸ ಮಾರ್ಗವನ್ನು ತಂದವರು. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ 22 ಜುಲೈ 1929ರಂದು ಇವರು ಜನಿಸಿದರು. ಹಳಿಯಾಳ ಒಂದು ಕಾಡು ಪ್ರದೇಶ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಲ್ಲಿ ಮುಗಿಸುವುದರೊಂದಿಗೆ ಒಬ್ಬ ಉತ್ತಮ ವಿದ್ಯಾರ್ಥಿಯಾಗಿ ಎಲ್ಲರ ಗಮನ ಸೆಳೆದ ಇವರು ಮೆಟ್ರಿಕ್ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದು ತೇರ್ಗಡೆ ಹೊಂದುವ ಉದ್ದೇಶದಿಂದ ಧಾರವಾಡದ ಶಾಲೆಗೆ ಸೇರಿದರು. ಸಾಹಿತಿ ಗಂಗಾಧರ ಚಿತ್ತಾಲರ ಪ್ರಭಾವಕ್ಕೆ ಒಳಗಾಗಿ ಚಿಂತನಶೀಲತೆಯ ಜೊತೆಗೆ ವಿದ್ಯಾರ್ಜನೆಯಲ್ಲಿಯೂ ಅತಿಯಾದ ಆಸಕ್ತಿಯನ್ನು ಪಡೆದುಕೊಂಡರು. ಇದೇ ಸಂದರ್ಭದಲ್ಲಿ ಧಾರವಾಡಕ್ಕೆ ಬಂದ ಚಿಂತನಕಾರ ಮಾನವೇಂದ್ರರಾಯರ ಮಾನವತವಾದದ ಬಗ್ಗೆಯೂ ಆಕರ್ಷಿತರಾದರು. ಉತ್ತಮ ವಿದ್ಯಾರ್ಥಿಯಾದ ಇವರು ಆಂಗ್ಲ ಭಾಷಾ ಅಧ್ಯಾಪಕರ ಗಮನ ಸೆಳೆದ ಪರಿಣಾಮವಾಗಿ ಇಂಗ್ಲಿಷ್ ಭಾಷೆಯಲ್ಲಿ ವಿಶೇಷ ಅಧ್ಯಯನಕ್ಕಾಗಿ ಮುಂಬೈಯ ಪ್ರಸಿದ್ಧವಾದ ವಿಲ್ಸನ್ ಕಾಲೇಜಿಗೆ ಸೇರಿದರು.  ಮುಂದೆ ಪಿ. ಎಚ್. ಡಿ. ಪದವಿಯನ್ನು ಪಡೆದುಕೊಂಡರು. ಬ್ರಿಟಿಷ್ ಕೌನ್ಸಿಲ್ ಪ್ರಣೀತ ಇಂಗ್ಲೆಂಡಿಗೆ ಹೋಗುವ ಒಂದು ಉತ್ತಮ ಅವಕಾಶ…

Read More

ಬೆಂಗಳೂರು : ‘ರಂಗಸ್ಥಳ ಯಕ್ಷಮಿತ್ರ ಕೂಟ’ದ ರಜತ ಪರ್ವ ೨೦೨೫ ರ ಅಂಗವಾಗಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸಹಯೋಗದೊಂದಿಗೆ ಸುವರ್ಣ ಸಂಭ್ರಮವನ್ನು ಆಚರಿಸುತ್ತಿರುವ ಕೋಟದ ಸಾಲಿಗ್ರಾಮ ಮಕ್ಕಳ ಮೇಳದ ಸರಣಿ ಕಾರ್ಯಕ್ರಮವಾಗಿ ಹಾರಾಡಿ ಮತ್ತು ಮಟಪಾಡಿ ಯಕ್ಷಗಾನ ಶೈಲಿಗಳ ಪ್ರಾತ್ಯಕ್ಷಿಕೆ ಕಾರ್ಯಕ್ರಮವು ದಿನಾಂಕ 22 ಜುಲೈ 2025ರಂದು ಬೆಂಗಳೂರಿನ ನಾಗರಬಾವಿಯ ಶ್ರೀಗಂಧ ಕಾವಲು, ಶ್ರೀ ವೇಣುಗೋಪಾಲಕೃಷ್ಣ ಸಮುದಾಯ ಭವನದಲ್ಲಿ ನಡೆಯಿತು. ಮಕ್ಕಳ ಮೇಳದ ಸ್ಥಾಪಕ ನಿರ್ದೇಶಕರಾದ ಎಚ್. ಶ್ರೀಧರ ಹಂದೆಯವರ ನಿರ್ದೇಶನದಲ್ಲಿ ಸುಜಯೀಂದ್ರ ಹಂದೆ ಮತ್ತು ಬಳಗದವರು ಹಾರಾಡಿ ತಿಟ್ಟಿನ ಗತ್ತುಗಾರಿಕೆಯ ಹೆಜ್ಜೆ ಮತ್ತು ಮಟಪಾಡಿ ಶೈಲಿಯ ಲಾಲಿತ್ಯ ಪೂರ್ಣವಾದ ಕುಣಿತಗಳನ್ನು ಅಭಿನಯಿಸಿ ತೋರಿಸಿದರು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಹಾರಾಡಿ ರಾಮ ಗಾಣಿಗ, ಕುಷ್ಟ (ಕೃಷ್ಣ) ಗಾಣಿಗ, ಹಾರಾಡಿ ನಾರಾಯಣ ಗಾಣಿಗ, ಮಟಪಾಡಿ ವೀರಭದ್ರ ನಾಯಕ್ ಮೊದಲಾದ ಹಿರಿಯ ಕಲಾವಿದರ ನೆನಪು ಮೂಡಿಸುವಂತೆ ಒಡ್ಡೋಲಗ, ಯುದ್ಧ ಕುಣಿತ, ಹಸ್ತಾಭಿನಯ, ವಿವಿಧ ಪ್ರಸಂಗಗಳ ಪದ್ಯ ಪ್ರಸ್ತುತಿಯೊಂದಿಗೆ ಹಾರಾಡಿ ಮತ್ತು ಮಟಪಾಡಿ ಶೈಲಿಗಳ ನೃತ್ತ,…

Read More

ಮಂಗಳೂರು: “ಕೊಂಕಣಿಯ ವೀರಮಹಿಳೆ’ ನಾಮಾಂಕಿತ ಸಾಹಿತಿ, ಪ್ರಕಾಶಕಿ, ಕುಲಶೇಖರ ನಿವಾಸಿ ಸಿಂಪ್ರೊಜಾ ಫಿಲೋಮಿನ ಗ್ಲೇಡಿಸ್ ಸಿಕ್ವೇರಾ ಇವರು ದಿನಾಂಕ 21 ಜುಲೈ 2025ರಂದು ಉಳ್ಳಾಲದ ಸೊಮೇಶ್ವರದಲ್ಲಿರುವ “ಪಶ್ಚಿಮ್ ವೃದ್ಧಾಶ್ರಮದಲ್ಲಿ ನಿಧನ ಹೊಂದಿದರು. ಇವರಿಗೆ 80ವರ್ಷ ವಯಸ್ಸಾಗಿತ್ತು. ಮೃತರು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಕೊಂಕಣಿ ಸಾಹಿತ್ಯ ಕ್ಷೇತ್ರದಲ್ಲಿ ನಿರಂತರ ಕಾರ್ಯ ನಿರ್ವಹಿಸಿದ ಇವರು, ಕಥೆ, ಕಾದಂಬರಿ, ಕವನ, ಲೇಖನಗಳ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದರು. ಪ್ರಕಾಶಕಿಯಾಗಿ ಹಲವಾರು ಪುಸ್ತಕಗಳನ್ನು ಪ್ರಕಟಿಸಿರುವ ಇವರು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರಾಗಿದ್ದರು ಇವರಿಗೆ 2004ರಲ್ಲಿ ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಸಂದೇಶ ಹಾಗೂ ದಾಯ್ಜಿ ದುಬೈ ಪುರಸ್ಕಾರ ಅಭಿಸಿದೆ.

Read More

ಮಂಗಳೂರು : ಕಲ್ಕೂರ ಪ್ರತಿಷ್ಠಾನದ ವತಿಯಿಂದ ಇತ್ತೀಚೆಗೆ ನಿಧನರಾದ ಪಾತಾಳ ವೆಂಕಟರಮಣ ಭಟ್ಟ ಹಾಗೂ ಬಣ್ಣದ ವೇಷಧಾರಿ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್ ಇವರಿಗೆ ನುಡಿ ನಮನ ಕಾರ್ಯಕ್ರಮವು ದಿನಾಂಕ 21 ಜುಲೈ 2025ರಂದು ನಡೆಯಿತು. ಕಾರ್ಯಕ್ರಮದಲ್ಲಿ ದಿವಂಗತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಮಾತನಾಡಿ “ಯಕ್ಷ ಶಾಂತಲೆಯಾಗಿ ಯಕ್ಷಗಾನ ರಂಗಸ್ಥಳದಲ್ಲಿ ಮೆರೆದ ಪಾತಾಳರು ಉಭಯ ತಿಟ್ಟುಗಳಲ್ಲೂ ಪಾರಮ್ಯವನ್ನು ಮೆರೆದು ಸ್ತ್ರೀ ಪಾತ್ರಗಳಿಗೆ ಹೊಸ ಆಯಾಮವನ್ನು ನೀಡಿದ ಅಪ್ರತಿಮ ಕಲಾವಿದರು, ಅದೇ ತೆರನಾಗಿ ಪರಂಪರೆಯ ದೈತ್ಯ ವೇಷಗಳಿಗೆ ಜೀವ ತುಂಬಿದ ಬಣ್ಣದ ವೇಷಧಾರಿ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್ ಓರ್ವ ಅಪರೂಪದ ಕಲಾವಿದ” ಎಂದು ನುಡಿದರು. ಪ್ರತಿಷ್ಠಾನದ ಅಧ್ಯಕ್ಷರಾದ ಎಸ್. ಪ್ರದೀಪ ಕುಮಾರ ಕಲ್ಕೂರ ಪಾತಾಳ ವೆಂಕಟರಮಣ ಭಟ್ಟರನ್ನು ಸ್ಮರಿಸುತ್ತಾ “ಬೇಲೂರು ಶಿಲಾಬಾಲಿಕೆಯರ ಭಂಗಿಗಳನ್ನು ಅಭ್ಯಸಿಸಿ ರಂಗಸ್ಥಳದಲ್ಲಿ ಯಕ್ಷಗಾನ ಕಲೆಗೆ ಅನುಸಾರವಾಗಿ ಬಳಸಿಕೊಂಡ ಹಿರಿಮೆ ಪಾತಾಳರದ್ದು, ತನ್ನ ವೃತ್ತಿಜೀವನದ ಗಳಿಕೆಯ ಬಹುಪಾಲನ್ನು ಯಕ್ಷಗಾನ ಕಲಾವಿದರಿಗೆ ಸಮರ್ಪಿಸಿದ ಉದಾರ ಹೃದಯವಂತ ಎಂದರು,…

Read More

ಬೆಂಗಳೂರು : ಬೆಂಗಳೂರಿನ ತಾಯಿಬೇರು ಸಾಮಾಜಿಕ ಮತ್ತು ಸಾಂಸ್ಕೃತಿಕ ಯುವ ವೇದಿಕೆಯು ಕೊಡಮಾಡುವ ಪ್ರತಿಷ್ಠಿತ “ಗಡಿನಾಡ ಸಾಹಿತ್ಯ ಭೂಷಣ ಪ್ರಶಸ್ತಿ”ಗೆ ಕಾಸರಗೋಡಿನ ಪತ್ರಕರ್ತ, ಲೇಖಕ, ಸಂಘಟಕ ರವಿ ನಾಯ್ಕಾಪು ಇವರನ್ನು ಆಯ್ಕೆ ಮಾಡಲಾಗಿದೆ. ತಾಯಿಬೇರು ಸಾಮಾಜಿಕ ಮತ್ತು ಸಾಂಸ್ಕೃತಿಕ ಯುವ ವೇದಿಕೆ ಹಾಗೂ ಅಖಿಲ ಕರ್ನಾಟಕ ಸಾಹಿತಿ ಕಲಾವಿದರ ಒಕ್ಕೂಟಗಳ ನೇತೃತ್ವದಲ್ಲಿ ದಿನಾಂಕ 27 ಜುಲೈ 2025ರಂದು ಬೆಂಗಳೂರಿನ ಗೆಜ್ಜೆನಾದ ಸ್ಟುಡಿಯೋ ಸಭಾಂಗಣದಲ್ಲಿ ನಡೆಯಲಿರುವ ಕನ್ನಡ ಸಂಸ್ಕೃತಿ ಸಮಾರಂಭದಲ್ಲಿ ಪ್ರಶಸ್ತಿ ವಿತರಣೆ ನಡೆಯಲಿದೆಯೆಂದು ವೇದಿಕೆಯು ತಿಳಿಸಿದೆ. ಪ್ರಶಸ್ತಿಯು ರೂಪಾಯಿ 10 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿದೆ. ಕಳೆದ 25 ವರ್ಷಗಳಿಂದ ಕಾಸರಗೋಡಿನಲ್ಲಿ ಪತ್ರಿಕಾ ರಂಗದಲ್ಲಿ ಸಕ್ರಿಯರಾಗಿರುವ ರವಿ ನಾಯ್ಕಾಪು ಇವರ ಸಾಹಿತ್ಯ ವಲಯದ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ‘ದಾನಗಂಗೆ’, ‘ಸ್ನೇಹಗಂಗೆ’, ‘ಗಾನಗಂಗೆ’, ‘ಸಾವಿರದ ಸಾಧಕ’, ‘ಸಮಾಜ ಸಂಪದ’ ಎಂಬೀ ಕೃತಿಗಳನ್ನು ರಚಿಸಿರುವ ರವಿ ಅವರ “ಸ್ನೇಹಗಂಗೆ” ಕೃತಿಯ ಸಂಕ್ಷಿಪ್ತ ರೂಪವು ಮಂಗಳೂರು ವಿಶ್ವವಿದ್ಯಾನಿಲಯದ ಬಿ. ಸಿ.…

Read More