Subscribe to Updates
Get the latest creative news from FooBar about art, design and business.
Author: roovari
ರಾಮನಗರ : ಕರ್ನಾಟಕ ಜಾನಪದ ಪರಿಷತ್ತು 2026ರ ಸಾಲಿನ ಜಾನಪದ ಲೋಕ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟಿಸಿದ್ದು, 08 ಫೆಬ್ರವರಿ 2026ರಂದು ಜಾನಪದ ಲೋಕದಲ್ಲಿ ನಡೆಯುವ ಜಾನಪದ ಲೋಕೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮೈಸೂರು ಜಾನಪದ ವಿದ್ವಾಂಸ ಪ್ರೊ. ಹಿ.ಶಿ. ರಾಮಚಂದ್ರೇಗೌಡ, ದಕ್ಷಿಣ ಕನ್ನಡ ಜಿಲ್ಲೆ ಜಾನಪದ ವಿದ್ವಾಂಸ ಡಾ. ಕೆ. ಚಿನ್ನಪ್ಪಗೌಡ, ತುಮಕೂರು ಜಿಲ್ಲೆ ಕಾಡುಗೊಲ್ಲರ ಗಣಿ ವಾದನ ಕಲಾವಿದ ಚಿಕ್ಕಣ್ಣ, ಬೆಂಗಳೂರಿನ ಜನಪದ ಛಾಯಾಗ್ರಾಹಕ ಡಾ. ಸಿರಿಗಂಧ ವಿ. ಶ್ರೀನಿವಾಸಮೂರ್ತಿ, ಚಾಮರಾಜನಗರ ಜಿಲ್ಲೆಯ ಜೋಗುಳಪದ ಹಾಡುಗಾರರಾದ ಚಿನ್ನಮ್ಮ ಮಂಡ್ಯದ ಪೂಜಾ, ಮರಗಾಲು ಕುಣಿತ ಕಲಾವಿದ ಕೆ.ಪಿ. ದೇವರಾಜು, ಬೆಂಗಳೂರು ದಕ್ಷಿಣದ ಪೂಜಾ ಕುಣಿತ ಕಲಾವಿದ ಶಿವಮಾದಯ್ಯ, ಮೂಡಲಪಾಯ ಯಕ್ಷಗಾನ ಕಲಾವಿದರಾದ ಭೈರಪ್ಪ (ಗಂಗಣ್ಣ), ರಾಯಚೂರಿನ ತತ್ವಪದ ಕಲಾವಿದೆ ನಾರಾಯಣಪ್ಪ ಮಾಡಶಿರಾವಾರ, ಬೆಂಗಳೂರಿನ ತಂಬೂರಿ ಕಲಾವಿದ ಸಿದ್ದರಾಜು ಎಂ. ಇವರುಗಳು ಜಾನಪದ ಲೋಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಧಾರವಾಡದ ಸಾಹಸ ಕಲಾವಿದ ಮುತ್ತಪ್ಪ ಬಸವಂತಪ್ಪ ದಾತನಾಳ, ಕೇರಳ ಕಾಸರಗೋಡಿನ ಯಕ್ಷಗಾನ…
ಅಂದು – ಬೆಂಗಳೂರಿನ ದೊಡ್ದ ಕಲ್ಲಸಂದ್ರದ ಕುಮಾರನ್ಸ್ ಶಾಲೆಯ ‘ಮೀನಾಕ್ಷಿ ರಂಗಮಂಚ’ದ ಮೇಲೆ ಕೋಪಾವಿಷ್ಟಳಾಗಿ ಸಿಡಿದೆದ್ದ ದ್ರೌಪದಿಯ ವೀರಾವೇಶದ ಕಟುನುಡಿಗಳು, ಹೆಂಡತಿಗೆ ಅಪಮಾನವಾಗುತ್ತಿದ್ದರೂ ತೆಪ್ಪನೆ ಕುಳಿತ ನಿರಭಿಮಾನಿ ಗಂಡಂದಿರ ಷಂಡತ್ವವನ್ನು ಚುಚ್ಚಿ ಪ್ರಶ್ನಿಸಿದ ಆತ್ಮಾಭಿಮಾನಿಯೊಬ್ಬಳ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ಗುಡುಗಿದ ಪುಟ್ಟ ನಟಿ- ನರ್ತಕಿ ‘ಆದ್ಯ’ಳನ್ನು ಕಂಡು ಇಡೀ ಸಭಾಸದನದ ವೀಕ್ಷಕ ಸಮಸ್ತರೂ ಬೆರಗಾಗಿದ್ದರು ! ಪ್ರಸ್ತುತಿಯ ಪ್ರಾರಂಭದಿಂದ ಅಂತ್ಯದವರೆಗೂ ರಂಗದ ಮೇಲೆ ಲೀಲಾಜಾಲವಾಗಿ, ಮನಮೋಹಕವಾಗಿ ನಾಟ್ಯವಾಡುತ್ತ ಕಲಾರಸಿಕರನ್ನು ಮೋಡಿ ಮಾಡಿದ ಬಾಲ ಗಂಧರ್ವೆಯಂತೆ ಶೋಭಿಸಿದ ಪುಟಾಣಿ ‘ಆದ್ಯ’ ನಿಜಕ್ಕೂ ಚೋದ್ಯವೆನಿಸಿದಳು. ಹತ್ತು ವರ್ಷದ ಬಾಲಪ್ರತಿಭೆಗೆ ಇದ್ದ ಅದಮ್ಯ ಆತ್ಮವಿಶ್ವಾಸ, ಹದವರಿತ ಹೆಜ್ಜೆಗಳ ಮೇಲಿನ ಹತೋಟಿ, ಸೊಗಸಾದ ಅಭಿನಯ ಕೌಶಲ್ಯ ಮತ್ತು ರಂಗಪ್ರಜ್ಞೆ ನೋಡುಗರ ಮೇಲೆ ಉಂಟುಮಾಡಿದ ಪರಿಣಾಮ ನಿಜಕ್ಕೂ ಸ್ಮರಣೀಯ. ಇಷ್ಟು ಚಿಕ್ಕವಯಸ್ಸಿಗೆ ನೃತ್ಯದ ವಿವಿಧ ಆಯಾಮಗಳನ್ನು ಅರಿತು ಅಷ್ಟೇ ಸುಲಲಿತವಾಗಿ ನಿರೂಪಿಸಿದ ಉದಯೋನ್ಮುಖ ನೃತ್ಯಕಲಾವಿದೆ ‘ಆದ್ಯ’ಳ ಮೊದಲ ಹೆಜ್ಜೆಯ ವಿದ್ಯುಕ್ತ ‘ಆದ್ಯೋತ್ಸವ’ ಯಶಸ್ವಿಯಾಗಿ ನೆರವೇರಿತು. ‘ನಾಟ್ಯ ಸಿಂಚನ…
ಮಂಗಳೂರು : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ಕೇಂದ್ರ ಮಹಿಳಾ ಘಟಕದ ನವಮ ವಾರ್ಷಿಕೋತ್ಸವವು ದಿನಾಂಕ 02 ಫೆಬ್ರವರಿ 2026ರಂದು ಪಾವಂಜೆ ದೇವಸ್ಥಾನದ ಆವರಣದಲ್ಲಿ ನಡೆಯಿತು. ಸುರತ್ಕಲ್ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಅಶೋಕ್ ಶೆಟ್ಟಿ ತಡಂಬೈಲ್ ಅಧ್ಯಕ್ಷತೆ ವಹಿಸಿದ್ದು, “ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಪಟ್ಲಗುತ್ತು ಸತೀಶ್ ಶೆಟ್ಟಿಯವರು ಆಸಕ್ತ ಕಲಾವಿದರ ಬದುಕಿಗೆ ಶಕ್ತಿ ತುಂಬಿದ್ದಾರೆ. ಕಲಾವಿದರ ವೈಯಕ್ತಿಕ ಬದುಕಿನ ಸತ್ಯವನ್ನು ಶೋಧಿಸಿದ ಪಟ್ಲರವರು ಆ ಕಾರಣಕ್ಕಾಗಿಯೇ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಿಸಿ ಕಲಾವಿದರಿಗೆ ಆಸರೆಯಾದರು. ಟ್ರಸ್ಟ್ ಮೂಲಕ ನಿರಂತರ ಕಾರ್ಯಯೋಜನೆಗಳನ್ನು ಕೈಗೊಳ್ಳುತ್ತಿರುವ ಪಟ್ಲರ ಸಾಧನೆ ಶ್ಲಾಘನೆಗೆ ಪಾತ್ರವಾಗಿದೆ” ಎಂದು ತಿಳಿಸಿದರು. ಪಟ್ಲ ಸತೀಶ್ ಶೆಟ್ಟಿ ಮಾತನಾಡಿ, “ಕೇಂದ್ರೀಯ ಮಹಿಳಾ ಘಟಕ ಒಂಬತ್ತು ವರ್ಷಗಳಿಂದ ಕಲಾ ಸೇವೆ ಮಾಡುತ್ತಾ ಬಂದಿರುತ್ತದೆ. ಕೇಂದ್ರೀಯ ಘಟಕ ಎಲ್ಲ ಕಡೆ ವಿಸ್ತರಣೆಯಾಗಲಿ” ಎಂದರು. ಇದೇ ಸಂದರ್ಭದಲ್ಲಿ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಇವರನ್ನು ಮಹಿಳಾ ಘಟಕದ ವತಿಯಿಂದ…
ಪಾರ್ಟಿ-ಕಂಪೆನಿಗಳೆಂದು ಸದಾ ಸ್ನೇಹಿತರೊಂದಿಗೆ ಬಿಡುವಿನ ಸಮಯವನ್ನು ಕಳೆಯುವ ಇಂದಿನ ಯುವಜನತೆ ಕೆಲವೊಮ್ಮೆ ‘ಸೋಲೋಟ್ರಿಪ್’ ಎಂದು ದೂರ ಪ್ರವಾಸ ಹೋಗುವುದೂ ಇದೆ. ಇವತ್ತಿನ ಕಾಲದಲ್ಲಿ ಸೋಲೋಟ್ರಿಪ್ ಅಂದರೆ ಸ್ನೇಹಿತರನ್ನು ಬಿಟ್ಟು ಒಬ್ಬರೇ ವಿಮಾನ-ರೈಲು-ಬಸ್ಸು-ಕಾರುಗಳಲ್ಲಿ ತಿಂಗಳಿಗೆ ಮೊದಲೇ ಬುಕ್ ಮಾಡಿ ಇಳಿದುಕೊಳ್ಳಲು ಹೋಟೆಲ್ ವ್ಯವಸ್ಥೆಯನ್ನೂ ಮೊದಲೇ ಮಾಡಿಕೊಂಡು ಹೋಗುವುದು. ಕೆಲವರು ನೂರಾರು ಕಿ.ಮೀ.ಗಳಷ್ಟು ದೂರದ ಬೈಕ್ ಸವಾರಿಯ ಸಾಹಸಕ್ಕೆ ಕೈ ಹಾಕುವುದೂ ಇದೆ. ಆದರೆ ಖ್ಯಾತ ಲೇಖಕ ಶಶಿಧರ ಹಾಲಾಡಿಯವರು ತಮ್ಮ ಹೊಸ ಕೃತಿ ‘ನನ್ನ Solo ಟ್ರಿಪ್’ನಲ್ಲಿ ಹೇಳುತ್ತಿರುವುದು ಇಂಥ ಪ್ರವಾಸಗಳ ಬಗ್ಗೆ ಅಲ್ಲ. ಇದು ಅವರು ಎಳೆಯ ಹುಡುಗ ಹಾಗೂ ಯುವಕರಾಗಿದ್ದ ಕಾಲದಲ್ಲಿ-ಅಂದರೆ 1970-80ರ ದಶಕಗಳಲ್ಲಿ – ಅವರ ಊರಾದ ಹಾಲಾಡಿಯ ಸುತ್ತುಮುತ್ತ, ಸಹ್ಯಾದ್ರಿ ಪ್ರದೇಶ, ವೃತ್ತಿಜೀವನ ಆರಂಭಿಸಿದ ಅರಸೀಕೆರೆಯ ಸುತ್ತುಮುತ್ತಲಿದ್ದ ಕಾಡು-ಗುಡ್ಡ-ಬೆಟ್ಟಗಳಿಗೆ ಕಾಲ್ನಡಿಗೆಯಲ್ಲಿ ಮತ್ತು ಸೈಕಲ್ ಸವಾರಿಯ ಮೂಲಕ ಏಕಾಂಗಿಯಾಗಿ ಮಾಡಿದ ಪ್ರವಾಸಗಳ ಬಗ್ಗೆ. ಆಗ ಇವತ್ತು ಎಲ್ಲೆಡೆ ಸಾಮಾನ್ಯವಾಗಿ ಬಿಟ್ಟಿರುವ ರಸ್ತೆಗಳು ಮತ್ತು ವಾಹನ ಸಂಪರ್ಕಗಳು ಏನೂ ಇರಲಿಲ್ಲ.…
ಮಂಗಳೂರು : ಹರಿಕಥಾ ಪರಿಷತ್ ಮಂಗಳೂರು ಇದರ ವತಿಯಿಂದ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದ ಶ್ರೀ ಮಂಗಳಾ ಕಲಾ ವೇದಿಕೆಯಲ್ಲಿ ದಿನಾಂಕ 31 ಜನವರಿ 2026ರಂದು 16ನೇ ವಾರ್ಷಿಕೋತ್ಸವ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಮಂಗಳಾದೇವಿ ದೇವಸ್ಥಾನದ ಆನುವಂಶಿಕ ಮೊಕ್ತೇಸರ ಎಂ. ಅರುಣ್ ಐತಾಳ್ “ಸಾಂಸ್ಕೃತಿಕವಾಗಿ ನಮ್ಮಲ್ಲಿರುವ ಅನೇಕ ಕಲಾಪ್ರಕಾರಗಳ ಮಧ್ಯೆ ಅಧ್ಯಾತ್ಮ ಚಿಂತನೆಯ ಹರಿಕಥಾ ಕಲೆಯ ಶ್ರವಣಕ್ಕೆ ಕೇಳುಗರಲ್ಲಿ ಆಸಕ್ತಿ ಹಾಗೂ ಶ್ರದ್ಧೆ ಹೆಚ್ಚಾಗಬೇಕಿದೆ. ಮನೋರಂಜನೆ ಬೇರೆ ಮನೋವಿಕಾಸದ ವಿಚಾರಗಳು ಬೇರೆ. ಆದರೆ ಹರಿಕಥಾ ಕಲೆ ಆನಂದದೊಂದಿಗೆ ಅರಿವನ್ನು ನೀಡುವ ವಿಶಿಷ್ಟ ಕಲೆ. ಹಾಗಾಗಿ ಈ ಕಲೆಗೆ ಪ್ರೋತ್ಸಾಹ ಅಗತ್ಯ” ಎಂದರು. ಶ್ರೀ ರಾಮಕೃಷ್ಣ ಮಠದ ಸ್ವಾಮಿ ಯುಗೇಶಾನಂದಜೀ ಆಶೀರ್ವಚನ ನೀಡಿ, “ಕಣ್ಣಿಗೆ ಕಾಣದಂತಹ ಭಗವಂತನನ್ನು ನಮ್ಮೊಳಗೆ ಅರಸುವ ಆನಂದದಾಯಕ ಮಾಧ್ಯಮ ಹರಿಕಥೆ, ಹಾಗಾಗಿ ಈ ಕಲೆಯ ಬೆಳವಣಿಗೆಗೆ ಶ್ರಮಿಸುತ್ತಿರುವ ಹರಿಕಥಾ ಪರಿಷತ್ತಿಗೆ ಪ್ರೋತ್ಸಾಹ ನೀಡುವ ಜವಾಬ್ದಾರಿ ನಮ್ಮದು” ಎಂದರು. ಹರಿಕಥಾ ಪರಿಷತ್ ಅಧ್ಯಕ್ಷ ಕೆ. ಮಹಾಬಲ…
ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪುರುಷ ಸಾಹಿತಿಗಳಿಗೆ ಮೀಸಲಾಗಿರುವ ದಿ. ಬಿ.ಎಸ್. ಗೋಪಾಲಕೃಷ್ಣ ದತ್ತಿ ಪ್ರಶಸ್ತಿಗೆ ಜಿಲ್ಲೆಯ ಹಿರಿಯ ಸಾಹಿತಿ ಮತ್ತು ವೈದ್ಯ ಡಾ. ಕೆ.ಬಿ. ಸೂರ್ಯಕುಮಾರ್ ಅವರ ‘ವೈದ್ಯ ಕಂಡ ವಿಸ್ಮಯ’ ವಿಭಿನ್ನ ವಿಶ್ವದ ಇಣುಕು ನೋಟ ಕೃತಿ ಆಯ್ಕೆಯಾಗಿದೆ. ಜಿಲ್ಲೆಯ ಶಕ್ತಿ ಪತ್ರಿಕೆಯ ಸ್ಥಾಪಕ ಸಂಪಾದಕ ಬಿ.ಎಸ್. ಗೋಪಾಲಕೃಷ್ಣರ ಹೆಸರಿನಲ್ಲಿ ಅವರ ಪುತ್ರರು ಸ್ಥಾಪಿಸಿರುವ ಈ ದತ್ತಿಯ ದ್ವಿತೀಯ ಪ್ರಶಸ್ತಿ ಇದಾಗಿದ್ದು, ಈ ದತ್ತಿ ಪ್ರಶಸ್ತಿಯ ಆಯ್ಕೆಗಾಗಿ ಜಿಲ್ಲೆಯ ಪುರುಷ ಬರಹಗಾರರು ಸಲ್ಲಿಸಿದ್ದ ಕೃತಿಗಳನ್ನು ಜಿಲ್ಲೆಯ ಹಿರಿಯ ಮೂರು ಸಾಹಿತಿಗಳು ಪ್ರತ್ಯೇಕವಾಗಿ ಪರಿಶೀಲಿಸಿ ನೀಡಿದ ಅಂಕಗಳನ್ನು ಜಿಲ್ಲಾ ಸಮಿತಿ ಒಟ್ಟು ಗೂಡಿಸಿ ಅತಿ ಹೆಚ್ಚು ಅಂಕ ಪಡೆದ ‘ವೈದ್ಯ ಕಂಡ ವಿಸ್ಮಯ’ ವಿಭಿನ್ನ ವಿಶ್ವದ ಇಣುಕು ನೋಟ ಕೃತಿಯನ್ನು ಆಯ್ಕೆ ಮಾಡಿದೆ. ಡಾ. ಕೆ.ಬಿ. ಸೂರ್ಯಕುಮಾರ್ ಅವರು ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ 18 ವರ್ಷಗಳ ಕಾಲ ವೈದ್ಯಕೀಯ ವಿಭಾಗ ಮತ್ತು ವಿಧಿವಿಜ್ಞಾನ ಪರಿಣಿತರಾಗಿ ಕೆಲಸ…
ಮಂಗಳೂರು : ಸೌರಭ ಸಂಗೀತ ನೃತ್ಯ ಕಲಾ ಪರಿಷತ್ (ರಿ.) ಮಂಗಳೂರು ಪ್ರಸ್ತುತ ಪಡಿಸುವ ‘ಮಾರ್ಗಂ ಮಾಧುರ್ಯಂ’ ಭರತನೃತ್ಯ ಸಮೂಹ ಪ್ರಸ್ತುತಿಯನ್ನು ದಿನಾಂಕ 08 ಫೆಬ್ರವರಿ 2026ರಂದು ಸಂಜೆ 5-30 ಗಂಟೆಗೆ ಮಂಗಳೂರಿನ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಮಂಗಳೂರಿನ ನೃತ್ಯ ಭಾರತಿ (ರಿ.) ನಿರ್ದೇಶಕರಾದ ವಿದುಷಿ ಗೀತಾ ಸರಳಾಯ, ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ನಿರ್ದೇಶಕರಾದ ನಿತ್ಯಾನಂದ ರಾವ್ ಮತ್ತು ರೂವಾರಿ ಡಿಜಿಟಲ್ ಪತ್ರಿಕೆಯ ಪ್ರಧಾನ ಸಂಪಾದಕಿ ಶ್ರೀಮತಿ ರತ್ನಾವತಿ ಜೆ. ಬೈಕಾಡಿ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳಿಂದ ಸಮೂಹ ಭರತನೃತ್ಯ ಪ್ರದರ್ಶನ ಹಾಗೂ ದಶಾವತಾರ ನೃತ್ಯರೂಪಕದ ನಟುವಾಂಗ ಮತ್ತು ನಿರ್ದೇಶನ ಗುರು ಡಾ. ಶ್ರೀವಿದ್ಯಾ, ಹಾಡುಗಾರಿಕೆ ವಿದ್ವಾನ್ ವಿನೀತ್ ಪುರವಂಕರ, ಮೃದಂಗದಲ್ಲಿ ವಿದ್ವಾನ್ ರಾಜೀವ್ ಗೋಪಾಲ್, ವೇಣು ವಾದನದಲ್ಲಿ ವಿದ್ವಾನ್ ಮುರಳೀಧರ್ ಸಹಕರಿಸಲಿದ್ದಾರೆ.
ಮುಲ್ಕಿ : ಕಿಲ್ಪಾಡಿಯ ಆದಿ ಕಿಲ್ಪಾಡಿ ಬಬ್ಬಸ್ವಾಮಿ ಯುವಕ ಮಂಡಲ ಮತ್ತು ಮಹಿಳಾ ಮಂಡಲ ಮತ್ತು ದ.ಕ. ಕನ್ನಡ ಸಾಹಿತ್ಯ ಪರಿಷತ್ತು ಮುಲ್ಕಿ ತಾಲೂಕು ಘಟಕದ ಜಂಟಿ ಆಶ್ರಯದಲ್ಲಿ ಕವಿ ಹಾಗೂ ಲೇಖಕ ಶಂಕರ್ ಪಡಂಗ ಕಿಲ್ಪಾಡಿ ಇವರ ‘ಕಾಣೆಯಾದಳು ಹುಡುಗಿ ಹಗಲುಗನಸಿನಲ್ಲಿ’ ಕವನ ಸಂಕಲನ ಬಿಡುಗಡೆ ಹಾಗೂ ಕವಿಗೋಷ್ಠಿಯು ದಿನಾಂಕ 08 ಫೆಬ್ರವರಿ 2026ರಂದು ಮಧ್ಯಾಹ್ನ 2-00 ಗಂಟೆಗೆ ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ಬಿಲ್ಲವ ಸಮಾಜ ಸಂಘದ ಅಧ್ಯಕ್ಷರಾದ ವಾಮನ ನಡಿಕುದ್ರು ವಹಿಸಲಿದ್ದು, ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜೀ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಉದ್ಘಾಟಿಸಲಿದ್ದಾರೆ. ಕುಂಜಾರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ಶ್ರೀಕಾಂತ ಭಟ್ ಪರೆಂಕಿಲ ಆಶೀರ್ವಚನ ನೀಡಲಿದ್ದು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಹಳೆಯಂಗಡಿ ಪ್ರಿಯದರ್ಶಿನಿ ಕೋ ಆಪರೇಟಿವ್ ಆ ಸೊಸೈಟಿ ಅಧ್ಯಕ್ಷ ವಸಂತ ಬೆರ್ನಾಡ್, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಗಿರೀಶ್, ಉದ್ಯಮಿ…
ಬೆಂಗಳೂರು : ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಇವರು ಕೊಡಮಾಡುವ 2026ನೇ ಸಾಲಿನ ‘ಡಾ. ಜಿ.ಶಂ. ಪರಮಶಿವಯ್ಯ ಪ್ರಶಸ್ತಿ’ಗೆ ಜಾನಪದ ವಿದ್ವಾಂಸರಾದ ಡಾ. ಕೆ. ಚಿನ್ನಪ್ಪ ಗೌಡ ಇವರು ಆಯ್ಕೆಯಾಗಿದ್ದಾರೆ. ರಾಮ ನಗರದ ಜಾನಪದ ಲೋಕದಲ್ಲಿ ದಿನಾಂಕ 7 ಮತ್ತು 8 ಫೆಬ್ರವರಿ 2026ರಂದು ಕರ್ನಾಟಕ ಜಾನಪದ ಪರಿಷತ್ತು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆಯಲಿರುವ ‘ವಿದ್ಯಾರ್ಥಿ ಲೋಕೋತ್ಸವ’ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ನಡೆಯಲಿದೆ. ಕರ್ನಾಟಕ ಜಾನಪದ ಪರಿಷತ್ತು ಡಾ. ಕೆ. ಚಿನ್ನಪ್ಪ ಗೌಡರು ಜಾನಪದ ಕ್ಷೇತ್ರದಲ್ಲಿ ಸಲ್ಲಿಸಿರುವ ಸಾಧನೆಯನ್ನು ಗುರುತಿಸಿ ಈ ಪ್ರತಿಷ್ಠಿತ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಿದೆ. ಈ ಪ್ರಶಸ್ತಿಯು ರೂ.25,000/- ನಗದು, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಜಾನಪದ ಪರಿಷತ್ತುವಿನ ಇತರ ಪ್ರಶಸ್ತಿಗಳಾದ ‘ನಾಡೋಜ ಎಚ್.ಎಲ್. ನಾಗೇಗೌಡ ಜಾನಪದ ಲೋಕಶ್ರೀ ಪ್ರಶಸ್ತಿ’ಗೆ ಜಾನಪದ ವಿದ್ವಾಂಸ ಹಿ.ಶಿ. ರಾಮೇಚಂದ್ರೇ ಗೌಡ, ‘ನಾಡೋಜ ಡಾ. ಜಿ. ನಾರಾಯಣ ಜಾನಪದ ಲೋಕ ಪ್ರಶಸ್ತಿ’ಗೆ ವಾದನ ಕಲಾವಿದರಾದ…
ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘ ಬೋಳುವಾರು ಪುತ್ತೂರು ಇದರ ವತಿಯಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಾಜಗೋಪುರದಲ್ಲಿ ತಿಂಗಳ ಸರಣಿ ತಾಳಮದ್ದಲೆಯು ದಿನಾಂಕ 2 ಫೆಬ್ರವರಿ 2026ರಂದು ‘ಪಾರ್ಥ ಸಾರಥ್ಯ’ ಪ್ರಸಂಗದೊಂದಿಗೆ ನಡೆಯಿತು. ಹಿಮ್ಮೇಳದಲ್ಲಿ ಆನಂದ ಸವಣೂರು, ನಿತೀಶ್ ಎಂಕಣ್ಣ ಮೂಲೆ, ಮುರಳೀಧರ ಕಲ್ಲೂರಾಯ, ಅಚ್ಯುತ ಪಾಂಗಣ್ಣಾಯ, ಶರಣ್ಯ ನೆತ್ತರಕೆರೆ, ಅನಿಷ್ ಕೃಷ್ಣ ಪುಣಚ, ಶಿವಪ್ರಸಾದ್ ನಾಕೂರು ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ಕೃಷ್ಣ (ದಿವಾಕರ್ ಗೇರುಕಟ್ಟೆ), ಅರ್ಜುನ (ಭಾಸ್ಕರ್ ಬಾರ್ಯ), ಕೌರವ (ಗುಡ್ಡಪ್ಪ ಬಲ್ಯ), ಬಲರಾಮ (ಮಾಂಬಾಡಿ ವೇಣುಗೋಪಾಲ್ ಭಟ್) ಸಹಕರಿಸಿದರು.