Subscribe to Updates
Get the latest creative news from FooBar about art, design and business.
Author: roovari
ಧರ್ಮಸ್ಥಳ : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ಸಹಪ್ರಾಧ್ಯಾಪಕರಾದ ಡಾ.ಸುಬ್ರಹ್ಮಣ್ಯ ಭಟ್ ಇವರು ಬರೆದ ‘ ಅಮ್ಮನ ಕತೆಗಳು’ ಕಥಾಸಂಕಲನದ ಲೋಕರ್ಪಣೆಯನ್ನು ದಿನಾಂಕ 10-04-2024 ರಂದು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ತಮ್ಮ ಅಮೃತಹಸ್ತದಿಂದ ನೆರವೇರಿಸಿದರು. ಎಸ್.ಡಿ.ಯಂ. ಸಂಸ್ಥೆಗಳ ಕಾರ್ಯದರ್ಶಿಗಳಾದ ಶ್ರೀ ಡಿ. ಹರ್ಷೇಂದ್ರ ಕುಮಾರ್ ಅವರು ಉಪನ್ಯಾಸಕರು ತಮ್ಮ ಶೈಕ್ಷಣಿಕ ಜವಾಬ್ದಾರಿಗಳನ್ನು ನಿಭಾಯಿಸಿಕೊಂಡು ಬಿಡುವಿನ ಸಮಯವನ್ನು ಔಚಿತ್ಯಪೂರ್ಣವಾಗಿ ಬಳಸಿ ಸದಭಿರುಚಿಯ ಹವ್ಯಾಸಗಳನ್ನು ಬೆಳೆಸಿಕೊಂಡಿರುವುದನ್ನು ಗುರುತಿಸಿ ಪ್ರಶಂಸಿಸಿದರು. ಈ ಸಂದರ್ಭದಲ್ಲಿ ಕೃತಿಕರ್ತ ಡಾ.ಸುಬ್ರಹ್ಮಣ್ಯ ಭಟ್, ಕಾಲೇಜಿನ ಪ್ರಾಚಾರ್ಯರಾದ ಡಾ.ಅಶೋಕ್ ಕುಮಾರ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಡಾಟಾ ಸೈನ್ಸ್ ವಿಭಾಗ ಮುಖ್ಯಸ್ಥೆ ವೀಣಾ ಭಟ್, ಸಹಪ್ರಾಧ್ಯಾಪಕರಾದ ಡಾ.ಅಂತೀಶ್ ಆರ್. ಹಾಗೂ ಎಲೆಕ್ಟ್ರಿಕಲ್ ವಿಭಾಗದ ಉಪಪ್ರಾಧ್ಯಾಪಕ ಡಾ. ಸತ್ಯನಾರಾಯಣ ಪಿ. ಉಪಸ್ಥಿತರಿದ್ದರು. ಪುಸ್ತಕದ ಪ್ರತಿಗಾಗಿ ಅಂಬಾರಿ ಪ್ರಕಾಶನ, ಕುಮಾರವ್ಯಾಸ ರಸ್ತೆ, ಕುವೆಂಪು ನಗರ ಮೈಸೂರು ಇವರನ್ನು ಸಂಪರ್ಕಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ –…
ಪುತ್ತೂರು : ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿ ಸಂಘದ ವತಿಯಂದ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ʼಫಿಲೋ ಫೋರ್ಟೆ – 2024ʼ ದಿನಾಂಕ 23-04-2024 ರಂದು ಕಾಲೇಜಿನ ಬೆಳ್ಳಿ ಹಬ್ಬ ಸಭಾಂಗಣದಲ್ಲಿ ನಡೆಯಿತು. ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪ್ರಾಂಶುಪಾಲರಾದ ವಂದನೀಯ ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊರವರು ಮಾತನಾಡಿ “ವಿದ್ಯಾರ್ಥಿಗಳ ಸುಪ್ತ ಪ್ರತಿಭೆಗಳ ಅನಾವರಣಕ್ಕಾಗಿ ವಿದ್ಯಾರ್ಥಿ ಸಂಘದ ವತಿಯಿಂದ ಇಂತಹ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇಂತಹ ವೇದಿಕೆಯು ಉದಯೋನ್ಮುಖ ಕಲಾವಿದರಿಗೆ ಅತಿ ಅಗತ್ಯ. ಹೆಚ್ಚಿನ ಸಂದರ್ಭಗಳಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಹಾಗೂ ನಿಯೋಜಿತ ಕಾರ್ಯಗಳೇ ಮುಂತಾದ ಒತ್ತಡಗಳಿದ್ದು ಈ ದಿನ ಯಾವುದೇ ಒತ್ತಡಗಳಿಗೊಳಗಾಗದೆ ಸಂತೋಷದಿಂದ ಕಳೆಯುವಂತಾಗಬೇಕು.” ಎಂದು ಹೇಳಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿದ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಆಭಿನಂದಿಸಿದರು. ವೇದಿಕೆಯಲ್ಲಿ ಕಾಲೇಜಿನ ಉಪ-ಪ್ರಾಂಶುಪಾಲರುಗಳಾದ ಡಾ. ಕೃಷ್ಣ ಕುಮಾರ್ ಪಿ. ಎಸ್., ಡಾ. ವಿಜಯ ಕುಮಾರ್ ಎಂ., ಹಾಗೂ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಬಿಪಿನ್, ಸಮೃದ್ಧಿ ಶೆಣೈ ಮತ್ತು ರಕ್ಷಾ ಉಪಸ್ಥಿತರಿದ್ದರು. ಕಾಲೇಜಿನ…
ಕೊಪ್ಪಳ : ಮೇ ಸಾಹಿತ್ಯ ಮೇಳ ಈ ವರ್ಷ ದಿನಾಂಕ 25-05-2024 ಮತ್ತು 26-05-2024ರಂದು ಕೊಪ್ಪಳದಲ್ಲಿ ನಡೆಯಲಿದ್ದು, ಅದಕ್ಕೆ ಪೂರಕವಾಗಿ ಮುಕ್ತ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, 35 ವರ್ಷದೊಳಗಿನವರು ಭಾಗವಹಿಸಬಹುದು. 1) ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಮತ್ತು ಮಹಿಳೆಯರ ಅಭಿವೃದ್ಧಿಯಲ್ಲಿ ಸಂವಿಧಾನದ ಪಾತ್ರ. 2) ಸಂವಿಧಾನ ರೂಪಿಸಿದ ಭಾರತದ ಪ್ರಜಾಪ್ರಭುತ್ವದ ಸ್ವರೂಪ ಮತ್ತು ವಾಸ್ತವ ಸ್ಥಿತಿ 3) ಸಂವಿಧಾನ ಪೀಠಿಕೆಯ ಆದರ್ಶಗಳ ವಾಸ್ತವ ಅವಲೋಕನ ಈ ಮೂರು ವಿಷಯಗಳ ಕುರಿತು 500 ಶಬ್ದಗಳಿಗೆ ಮೀರದಂತೆ ಪ್ರಬಂಧ ಬರೆಯಬೇಕಿದೆ. ವಾಟ್ಸಪ್ ಇಲ್ಲವೇ ಇ-ಮೇಲ್ [email protected], [email protected], [email protected], [email protected] ಮೂಲಕ ದಿನಾಂಕ 15-05-2024ರೊಳಗೆ ತಲುಪುವಂತೆ ಕಳಿಸಬೇಕು. ಆಯ್ಕೆಯಾದ ಪ್ರಬಂಧಗಳಿಗೆ ನಗದು ಬಹುಮಾನವಿರುತ್ತದೆ. ದಿನಾಂಕ 25-05-2024ರಂದು ನಡೆಯುವ ಕಾರ್ಯಕ್ರಮಮದಲ್ಲಿ ಬಹುಮಾನ ವಿತರಿಸಲಾಗುವುದು. ಪ್ರಥಮ ಬಹುಮಾನ ರೂ.2,500/- ದ್ವಿತೀಯ ಬಹುಮಾನ ರೂ.2,000/-, ತೃತೀಯ ಬಹುಮಾನ ರೂ.1,500/- ಹಾಗೂ ಭಾಗವಹಿಸಿದವರಿಗೆಲ್ಲರಿಗೂ ಸರ್ಟಿಫಿಕೇಟ್ ಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಶರಣಪ್ಪ ಬಾಚಲಾಪುರ್ 94480 25074, ಸಿರಾಜ್ ಬಿಸರಳ್ಳಿ…
ಬೆಂಗಳೂರು : ವಿಜಯನಗರ ಬಿಂಬ ರಂಗಶಿಕ್ಷಣ ಕೇಂದ್ರ ಮಕ್ಕಳ ವಿಭಾಗ ಚಿಣ್ಣರ ಚಾವಡಿ -2024 ಅರ್ಪಿಸುವ ‘ಪ್ರಶ್ನಾರ್ಥ’ ಪುಟಾಣಿ ಮಕ್ಕಳ ಚೊಟಾಣಿ ಪತ್ರಿಕಾಗೋಷ್ಠಿಯ ಮೀಡಿಯಾ ಹಬ್ಬದ ಕಾರ್ಯಕ್ರಮವು ದಿನಾಂಕ 27-04-2024ರಂದು ಕಲಾಗ್ರಾಮದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಕಾರ್ಯಕ್ರಮಕ್ಕೆ ಮೆರುಗು ಕೊಟ್ಟವರು ಸುವರ್ಣ ವಾಹಿನಿಯ ಅಜಿತ್ ಹನುಮಕ್ಕನವರ್. ಪುಟಾಣಿ ಪತ್ರಕರ್ತರಿಂದ ಬಾಲ್ಯ, ವಿದ್ಯೆ, ಸಾಂಸಾರಿಕ, ವೃತ್ತಿ, ವೃತ್ತಿಯಲ್ಲಿನ ಇರಿಸುಮರಿಸು, ಸಂದಿಗ್ಧತೆ, ಸವಾಲು ಹೀಗೆ ಹತ್ತು ಹಲವು ಪ್ರಶ್ನೆಗಳ ಬಾಣ ಅಜಿತ್ ಅವರಿಗೆ. ಅಷ್ಟೇ ಸಂಯಮದಿಂದ ಚಾಚೂ ತಪ್ಪದೆ ಮಕ್ಕಳಲ್ಲಿ ಮಕ್ಕಳಾಗಿ ಮನವರಿಕೆಯ ಉತ್ತರ ಅವರ ವೃತ್ತಿಯಲ್ಲಿನ ಅನುಭವಕ್ಕೆ ಹಿಡಿದ ಕನ್ನಡಿ. ಪತ್ರಕರ್ತರ ಅನುಭವ ಮತ್ತು ಸವಾಲುಗಳಿಗೆ ಉತ್ತರ ನೀಡುವಾಗ ಇದ್ದ ಪ್ರೌಡಿಮೆ ಮತ್ತು ಅಲ್ಲಲ್ಲಿ ಹಾಸ್ಯಮಯವಾಗಿಯೆ ಉತ್ತರಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಕೆಲವರು ಕೇಳುವುದುಂಟು ! ಕೇವಲ 15 ದಿನದಲ್ಲಿ ಮಕ್ಕಳಿಗೆ ಏನು ಹೇಳಿ ಕೊಡುತ್ತಾರೆ ? ಇಂತಹ ಶಿಬಿರದಿಂದ ಏನು ಪ್ರಯೋಜನ? ಇಂತೆಲ್ಲಾ ಪ್ರಶ್ನೆಗಳಿಗೆ ಖಂಡಿತವಾಗಿಯೂ ಉತ್ತರ ಇಂತಹ ಕಾರ್ಯಕ್ರಮ. ಮಕ್ಕಳಿಗೆ…
ತೆಕ್ಕಟ್ಟೆ : ಯಶಸ್ವೀ ಕಲಾವೃಂದ ಕೊಮೆ-ತೆಕ್ಕಟ್ಟೆ, ಧಮನಿ ಹಾಗೂ ದಿಮ್ಸಾಲ್ ಸಂಸ್ಥೆಗಳ ಸಹಯೋಗದಲ್ಲಿ ನಡೆಯುತ್ತಿರುವ ‘ರಜಾರಂಗು-24’ ಮಕ್ಕಳ ಬೇಸಿಗೆ ಶಿಬಿರದ 17ನೇ ದಿನದ ಕಾರ್ಯಕ್ರಮವು ದಿನಾಂಕ 27-04-2024ರಂದು ಕುಂದಾಪುರ ಕೋಡಿಯ ಲೈಟ್ ಹೌಸ್ ಬಳಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಕಡಲ ವೀರ ತಂಡದ ಮತ್ಸ್ಯೋದ್ಯಮಿ ಗೋಪಾಲ್ ಕೋಡಿ “ಮರಳು ಶಿಲ್ಪ ವಿಭಿನ್ನ ಕಲೆ. ಸುಂದರ ಸಮುದ್ರ ಸನಿಹದಲ್ಲಿ ಅರಳುವ, ಉರಿ ಬಿಸಿಲಲ್ಲಿದ್ದರೂ ಬಿಸಿಲನ್ನು ನೆನಪಿಸದ ರೀತಿಯಲ್ಲಿ ತನ್ಮಯತೆಗೊಳಪಡಿಸುವ, ಎಷ್ಟೇ ಬಿಸಿಲಿದ್ದರೂ ಗೋಚರಿಸದಂತೆ ತಮ್ಮನ್ನು ಕಲಾ ಲೋಕಕ್ಕೆ ಕೊಂಡೊಯ್ಯುವ ಕಲೆಯಾಗಿದೆ. ಮರಳನ್ನು ಗುಡ್ಡೆ ಮಾಡಿ ಮತ್ಸ್ಯವನ್ನು ಬಿಡಿಸುತ್ತಿದ್ದಂತೆಯೇ ಮಕ್ಕಳು ಹೇಳದೇ ಕೇಳದೇ ತಮ್ಮೊಳಗಿನ ಕಲ್ಪನೆಯನ್ನು ಮರಳ ರಾಶಿಯಲ್ಲಿ ತಮಗೆ ತೋಚಿದಂತೆ ಬಿಡಿಸುತ್ತಾ ಬಿಡಿಸುತ್ತಾ, ಆಮೆ, ಮೀನು, ಹಾವು, ಮಡಿಕೆ ಹೀಗೆ ಹಲವನ್ನು ಮರಳಿಂದ ಅರಳಿಸಿದ ಮಕ್ಕಳ ಉತ್ಸಾಹ ನಿಜಕ್ಕೂ ನಮ್ಮಂತಹ ಹಿರಿಯರಿಗೂ ಸ್ಪೂರ್ತಿ ತರುತ್ತದೆ” ಎಂದು ಅಭಿಪ್ರಾಯಪಟ್ಟರು. ಮರಳು ಶಿಲ್ಪ ರಚನಾಕಾರ ರವಿ ಹಿರೇಬೆಟ್ಟು, ರಂಗ ನಿರ್ದೇಶಕ ನಾಗೇಶ ಕೆದೂರು, ಅಶೋಕ್…
ಕುಂದಾಪುರ : ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆಯ ಶ್ವೇತಯಾನ-1999 ಇದರ 24ನೆಯ ಕಾರ್ಯಕ್ರಮದಲ್ಲಿ ‘ನವರಸ ಯಕ್ಷಗಾಯನ’ವು ದಿನಾಂಕ 27-04-2024ರಂದು ‘ಗೌರೀಶ’ ಕೊಡ್ಲಬೈಲು ಶಿರಿಯಾರದಲ್ಲಿ ನಡೆಯಿತು. ಈ ಕಾರ್ಯಕ್ರಮದ ಪ್ರಾಯೋಜಕರಾದ ಶಿರಿಯಾರದ ಕೊಡ್ಲಬೈಲಿನ ರಾಘವೇಂದ್ರ ಭಟ್ ಇವರು ರಜತ್ ಭಟ್ ಹಾಗೂ ಸ್ತುತಿಯವರಿಗೆ ಅಭಿನಂದನೆಯನ್ನು ಸಲ್ಲಿಸಿ ಮಾತನಾಡಿ “ಕಲಾ ಚಟುವಟಿಕೆಗಳನ್ನು ಕರಾವಳಿ ಭಾಗದಲ್ಲಿ ನಿರಂತರವಾಗಿ ನೆರವೇರಿಸಿಕೊಂಡು ಬಂದ ಸಂಸ್ಥೆ. 25ನೇ ವರ್ಷದ ಸಂದರ್ಭದಲ್ಲಿ ವಾರಕ್ಕೆರಡೆಂಬಂತೆ ವರ್ಷಪೂರ್ತಿ ಕಾರ್ಯಕ್ರಮ ಮಾಡುವುದು ಸಾಹಸವೇ ಅಹುದು. 24ನೇ ಶ್ವೇತಯಾನದ ಕಾರ್ಯಕ್ರಮವಾಗಿ ಇಂದು ‘ನವರಸ ಯಕ್ಷಗಾಯನ’ ಯಶಸ್ವೀ ಕಲಾವೃಂದ ನಮ್ಮೂರಿನಲ್ಲಿ ನೆರವೇರಿಸಿಕೊಂಡಿದೆ. ಯಶಸ್ಸನ್ನೇ ಕಾಣುತ್ತಿರುವ ಸಂಸ್ಥೆಯ ವಿದ್ಯಾರ್ಥಿ ನಮ್ಮ ಮಗ ರಜತ್ ಎಂದು ಹೇಳುವಲ್ಲಿ ಹೆಮ್ಮೆಯಾಗುತ್ತಿದೆ” ಎಂದು ಅಭಿಪ್ರಾಯಪಟ್ಟರು. “ಪ್ರತಿಭೆಗಳಿಗೆ ಅವಕಾಶ ಕೊಡುವ ಕಾಯಕದಲ್ಲಿ ಸಾರ್ವಜನಿಕರೂ ಭಾಗಿಯಾಗಬೇಕಾದರೆ ಅವಕಾಶ ಕಲ್ಪಿಸಿಕೊಡಬೇಕು. ಸಂಸ್ಥೆಯ ರಜತ ಸಂಭ್ರಮವನ್ನು ಸಮಾಜವೂ ಆಚರಿಸಿಕೊಂಡ ಹೆಮ್ಮೆ ನಮಗೆ” ಎಂದು ಶಕುಂತಲಾ ಮಾತನ್ನಾಡಿದರು. ವಿಷ್ಣುಮೂರ್ತಿ, ಮಂಜುಳಾ, ಭಾಗವತ ಚಂದ್ರಯ್ಯ ಆಚಾರ್, ದರ್ಶನ್ ಗೌಡ, ಕಾರ್ಯದರ್ಶಿ ವೆಂಕಟೇಶ ವೈದ್ಯ…
ಮೈಸೂರು : ಬ್ರಹ್ಮರ್ಷಿ ಕಶ್ಯಪ ಶಿಲ್ಪಕಲಾ ಶಾಲಾ ವತಿಯಿಂದ ಅರುಣ್ ಯೋಗಿರಾಜ್ ಪ್ರಸ್ತುತ ಪಡಿಸುವ ಬೇಸಿಗೆ ಶಿಬಿರವನ್ನು ದಿನಾಂಕ 02-05-2024ರಿಂದ 16-02-2024ರವರೆಗೆ ಪ್ರತಿದಿನ 9-30 ಗಂಟೆಯಿಂದ 12-30ರವರೆಗೆ ಮೈಸೂರಿನ ಬ್ರಹ್ಮರ್ಷಿ ಕಶ್ಯಪ ಶಿಲ್ಪಕಲಾ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಶಿಬಿರವು 6ರಿಂದ 15 ವರ್ಷದ ಮಕ್ಕಳಿಗಾಗಿ ಸೋಮವಾರದಿಂದ ಶನಿವಾರದ ತನಕ ನಡೆಯಲಿದೆ.
ಕವಿತೆಯೆಂದರೆ ಹಾಗೆ ನಿಶ್ಶಬ್ದಕ್ಕೂ ಧ್ವನಿ ನೀಡುವ ಭೋರ್ಗರೆಯುವ ಕಡಲು, ಭವದ ಸಾಯುಜ್ಯಕ್ಕೆ ಉರಿವ ಹಣತೆ ಎನ್ನುವ ಕವಯಿತ್ರಿ ಜಯಶ್ರೀ ಬಿ. ಕದ್ರಿಯವರ ಕವಿತೆಗಳಲ್ಲಿ ಅವರು ತಮ್ಮ ಭಟ್ಟಿಯಿಳಿಸಿದ ಭಾವಗಳಿಗೆ ಅಕ್ಷರಗಳ ರೂಪು ಕೊಡುತ್ತಾರಾದರೂ ತಮ್ಮ ಸುತ್ತ ಮುತ್ತ ಕಾಣುವ ಮನಸ್ಸು ಒಲ್ಲದ ವಿಚಾರಗಳ ವಿರುದ್ಧ ಪ್ರತಿಭಟನೆ ವ್ಯಕ್ತ ಪಡಿಸುವಾಗಲೂ ಮೃದುವಾಗಿ ನೆಲಕ್ಕೆ ಬೀಳುವ ಪಾರಿಜಾತದಂತೆ ಪಿಸುಗುಟ್ಟುವ ಧ್ವನಿಯಲ್ಲಿ ಮಾತನಾಡುತ್ತಾರೆ. Unheard melodies are sweeter ಅನ್ನುವಂತೆ ಕೇಳಿಸದ ಸದ್ದುಗಳು, ಮೌನದಾಚೆಯ ಶಬ್ದಗಳು ಮತ್ತು ನಿಶ್ಶಬ್ದಗಳ (ಅಂದರೆ ಸಾಮಾನ್ಯರ ಬಾಹ್ಯೇಂದ್ರಿಯಗಳ ಅರಿವಿಗೆ ಬಾರದ ವಿಚಾರಗಳ) ಬಗ್ಗೆ ಹೆಚ್ಚು ಒಲವಿರುವ ಕವಯಿತ್ರಿ ಈಕೆ. ‘ಶಕುಂತಲೆ’, ‘ಅಡುಗೆ’, ‘ಮರೀಚಿಕೆ’, ‘ವಿಮರ್ಶೆ’ ಮೊದಲಾದ ಅವರ ಅನೇಕ ಕವಿತೆಗಳು ಸ್ತ್ರೀ ಸಂವೇದನೆಯ ಕವಿತೆಗಳು. ಅಲ್ಲಿ ಪುರುಷ ಪ್ರಧಾನ ಸಮಾಜದಲ್ಲಿ ಸ್ತ್ರೀಯರಿಗಾಗುವ ಅನ್ಯಾಯಗಳ ವಿರುದ್ಧ ಏರು ಧ್ವನಿಯಲ್ಲಿ ಏನೂ ಹೇಳದೆ ಬಹಳ ಸೂಚ್ಯವಾಗಿ ಹೆಣ್ಣಿನ ಸಂಕಷ್ಟಗಳನ್ನು ಹೇಳುವ ಅವರು ತಮ್ಮ ಸದ್ದಿಲ್ಲದ ಸಂಯಮದ ಮೂಲಕ ಓದುಗರ ಗಮನ ಸೆಳೆಯುತ್ತಾರೆ. ಬೆಳಕಿನ…
ಮಂಗಳೂರು : ಕೊಂಕಣಿಯ ಪ್ರಮುಖ ಸಾಂಸ್ಕೃತಿಕ ಸಂಘಟನೆ ಮಾಂಡ್ ಸೊಭಾಣ್ ಕೊಂಕಣಿಯನ್ನು ಉಳಿಸಿ, ಬೆಳೆಸಿ, ಶೃಂಗರಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ತನ್ನ ಧ್ಯೇಯವನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಮಕ್ಕಳ ಪ್ರತಿಭಾ ಶಿಬಿರಗಳನ್ನು ಆಯೋಜಿಸುತ್ತಾ ಬಂದಿದ್ದು ಈ ಸಾಲಿನ ನವದಿನಗಳ ವೋಪ್ (ಒಪ್ಪ) ಶಿಬಿರದ ಉದ್ಘಾಟನೆ 27-04-24 ರಂದು ಮಂಗಳೂರಿನ ಶಕ್ತಿನಗರದ ಕಲಾಂಗಣದಲ್ಲಿ ನೆರವೇರಿತು. ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮೈಸೂರು ಇವರಿಂದ ಈ ಶಿಬಿರಕ್ಕೆ ಮಾನ್ಯತೆ ದೊರೆತ ಈ ಶಿಬಿರವನ್ನು ಗಾಯಕ ಮತ್ತು ಸಂಗೀತಗಾರ ರಿತೇಶ್ ಒಝೇರಿಯೊ ಮಣ್ಣಿನ ಮೂರ್ತಿಗೆ ಚಿನ್ನದ ಬಣ್ಣ ಬಳಿದು ವಿಶಿಷ್ಟ ರೀತಿಯಲ್ಲಿ ಉದ್ಘಾಟಿಸಿದರು. ಪ್ರಸಿದ್ಧ ನಾಟಕಕಾರ ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ ಮುಖ್ಯ ಅತಿಥಿಯಾಗಿದ್ದರು. ಶಿಬಿರದ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಿಕೊಡಲಾಯಿತು. ಅಧ್ಯಕ್ಷ ಲುವಿ ಪಿಂಟೊ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅರುಣ್ ರಾಜ್ ರೊಡ್ರಿಗಸ್ ಪ್ರಸ್ತಾವಿಕವಾಗಿ ಮಾತನಾಡಿ, ಶಿಬಿರ ವ್ಯವಸ್ಥಾಪಕ ವಿಕ್ಟರ್ ಮತಾಯಸ್ ಶಿಬಿರದಲ್ಲಿ ನಡೆಯುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿ, ಕೇರನ್ ಮಾಡ್ತಾ…
ಮಂಗಳೂರು : ಡಾ. ಮಾಲತಿ ಶೆಟ್ಟಿ ಮಾಣೂರು ಸಾರಥ್ಯದ ಅಮೃತ ಪ್ರಕಾಶನ ಪತ್ರಿಕೆ ವತಿಯಿಂದ ನಡೆದ 40ನೆಯ ಸರಣಿ ಕೃತಿ, ವೀಣಾ ರಾವ್ ವಿಟ್ಲ ಇವರ ‘ತಿರುವು’ ಕಥಾ ಸಂಕಲನದ ಲೋಕಾರ್ಪಣಾ ಸಮಾರಂಭವು ದಿನಾಂಕ 29-04-2024 ರಂದು ಮಂಗಳೂರು ಪತ್ರಿಕಾ ಭವನದಲ್ಲಿ ನಡೆಯಿತು. ಕನ್ನಡ ಸಾಹಿತ್ಯ ಪರಿಷತನ ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ಇವರ ಅಧ್ಯಕ್ಷತೆಯಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರು ಹಾಗೂ ಸಾಹಿತಿಗಳಾದ ಕೆ. ರವೀಂದ್ರ ರೈ ಲೋಕಾರ್ಪಣೆಗೊಳಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಗರಿ ಎಂಟರ್ಪ್ರೈಸಸ್ ಮಾಲಿಕರಾದ ಉದ್ಯಮಿ ಅಗರಿ ರಾಘವೇಂದ್ರ ರಾವ್ ಭಾಗವಹಿಸಿದರು. ಡಾ. ಅರುಣಾ ನಾಗರಾಜ್ ಕೃತಿ ಪರಿಚಯಿಸಿ, ಅಮೃತ ಪ್ರಕಾಶ ಪತ್ರಿಕೆ ವ್ಯವಸ್ಥಾಪಕ ಸಂಪಾದಕಿ ಡಾ ಮಾಲತಿ ಶೆಟ್ಟಿ ಸ್ವಾಗತಿಸಿ, ಕವಿಯತ್ರಿ ಹಾಗೂ ಶಿಕ್ಷಕಿಯಾದ ಸುರೇಖಾ ಯಾಳವಾರ ಕಾರ್ಯಕ್ರಮ ನಿರೂಪಿಸಿದರು.