Author: roovari

ಕೋಣಾಜೆ : ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಿದ್ಯಾರ್ಥಿ ಪರಿಷತ್ ಸಂಘಟಿಸಿದ ‘ಸಂಭ್ರಮ – 2025’ ಅಂತರ್ ವಿಭಾಗೀಯ ಮಟ್ಟದ ಸಾಂಸ್ಕ್ರತಿಕ ಸ್ವರ್ಧೆಯು ದಿನಾಂಕ 11 ಜೂನ್ 2025ರಂದು ಮಂಗಳೂರಿನ ಕೋಣಾಜೆಯಲ್ಲಿರುವ ಮಂಗಳ ಗಂಗೋತ್ರಿಯ ಮಂಗಳ ಸಭಾಂಗಣದಲ್ಲಿ ನಡೆಯಿತು. ಈ ಸಮಾರಂಭದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿದ ಪ್ರಖ್ಯಾತ ಜಾದೂಗಾರ ಕುದ್ರೋಳಿ ಗಣೇಶ್ ಇವರು ಮಾತನಾಡಿ “ವಿದ್ಯಾರ್ಥಿಗಳಿಗೆ ಓದಿನ ಜೊತೆ ಜೊತೆಗೆ ವಿವಿಧ ಕಲೆಗಳ ಅಭಿವ್ಯಕ್ತಿಗೆ ಅವಕಾಶ ನೀಡುವ ವಿಶ್ವವಿದ್ಯಾನಿಲಯದ ಕ್ರಮ ಶ್ಲಾಘನೀಯವಾದದ್ದು. ಕಲೆ ಮತ್ತು ಕಲಾಭಿರುಚಿ ಉತ್ತಮ ನಾಗರೀಕರನ್ನು ಬೆಳೆಸುತ್ತದೆ, ಕಲೆಯಲ್ಲಿ ತೊಡಗಿಸಿಕೊಂಡಿರುವ ವಿದ್ಯಾರ್ಥಿಗಳು ಮುಂದೆ ತಾವು ಮಾಡಬೇಕಾಗಿರುವ ಉದ್ಯೋಗ – ವ್ಯಾಪಾರಗಳಲ್ಲಿ ಉನ್ನತಿಯಲ್ಲಿ ಸಾಧಿಸುತ್ತಾರೆ” ಎಂದು ಅಭಿಪ್ರಾಯಪಟ್ಟರು. ಮಂಗಳೂರು ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿಗಳಾದ ಪ್ರೊ. ಪಿ.ಎಲ್. ಧರ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. “ವಿದ್ಯಾರ್ಥಿಗಳಿಗೆ ಭೋಧಿಸುವ ಉಪನ್ಯಾಸಕರು ಒಂದು ರೀತಿಯಿಂದ ಜಾದೂಗಾರರಿದ್ದಂತೆ. ತಮ್ಮ ಜ್ಞಾನದಿಂದ ಅವರು ವಿದ್ಯಾರ್ಥಿಗಳ ವ್ಯಕ್ತಿತ್ವ ಬೆಳೆಸುವ ಜಾದೂ ಮಾಡುತ್ತಾರೆ. ಜ್ಞಾನದ ಕೇಂದ್ರವಾದ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಖುಶಿ ಖುಶಿಯಾಗಿ ಸಂಭ್ರಮದಂತಹ…

Read More

ಮಂಗಳೂರು : ಕೊಂಕಣಿಯಲ್ಲಿ ಮಕ್ಕಳ ಸಾಹಿತ್ಯವನ್ನು ಸಮೃದ್ಧಗೊಳಿಸುವ ಮಹತ್ವದ ಪ್ರಯತ್ನವಾಗಿ, ಮಾಂಡ್ ಸೊಭಾಣ್, ತನ್ನ ’ಮಿಟಾಕಣ್’ ಸಾಹಿತ್ಯ ಅಕಾಡೆಮಿ ಮೂಲಕ 2025 ಜೂನ್ 28 ಮತ್ತು 29 ರಂದು ಕಲಾಂಗಣದಲ್ಲಿ ಮಕ್ಕಳ ಕಥೆಗಳ ಅನುವಾದ ಕಾರ್ಯಗಾರವನ್ನು ಆಯೋಜಿಸಿದೆ. ಈ ಕಾರ್ಯಾಗಾರವು, ಮಕ್ಕಳ ಕಥೆಗಳ ಕೊರತೆಯನ್ನು ಗಮನಿಸಿ ಬೇರೆ ಭಾಷೆಗಳಿಂದ ಪ್ರಸಿದ್ಧ ಮಕ್ಕಳ ಕಥೆಗಳನ್ನು ಅನುವಾದಿಸಿ, ಕೊಂಕಣಿ ಸಾಹಿತ್ಯ ಸಂಪತ್ತನ್ನು ವಿಸ್ತರಿಸುವ ಒಂದು ಪ್ರಯತ್ನವಾಗಿದೆ. ಕಾರ್ಯಾಗಾರದಲ್ಲಿ ಖ್ಯಾತ ಲೇಖಕರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದು, ಭಾಗವಹಿಸುವವರಿಗೆ ಅನುವಾದದ ತಾಂತ್ರಿಕತೆ ಮತ್ತು ರಚನಾತ್ಮಕತೆ ಬಗ್ಗೆ ಮಾಹಿತಿ ನೀಡಲಿದ್ದಾರೆ. ಭಾಗವಹಿಸುವವರು ಯಾವುದೇ ಭಾಷೆಯ ಎರಡು ಕಥೆಗಳನ್ನು ತರಬೇಕು ಹಾಗೂ ಕಾರ್ಯಾಗಾರದಲ್ಲಿ ಅನುವಾದಗೊಂಡ ಆಯ್ದ ಕಥೆಗಳನ್ನು ಮಾಂಡ್ ಸೊಭಾಣ್ ಪುಸ್ತಕ ರೂಪದಲ್ಲಿ ಪ್ರಕಟಿಸಲಿದೆ. ಈ ಕಾರ್ಯಾಗಾರಕ್ಕೆ ನೋಂದಣಿ ಶುಲ್ಕವಿರುವುದಿಲ್ಲ. ಆದರೆ ಭಾಗವಹಿಸಲು ಕನಿಷ್ಟ ವಯಸ್ಸು 18 ವರ್ಷ ಆಗಿರಬೇಕು. ಊಟ ಮತ್ತು ವಸತಿ ವ್ಯವಸ್ಥೆ ಒದಗಿಸಲಾಗುವುದು. ಹೆಸರು ನೋಂದಾಯಿಸಲು ಫೋ: 8105226626, ಕಲಾಂಗಣ್, ಮಕಾಳೆ, ಶಕ್ತಿನಗರ, ಮಂಗಳೂರು-16

Read More

ಕುಂದಾಪುರ : ತೆಂಕು ಹಾಗೂ ಬಡಗುತಿಟ್ಟಿನ ಮೇರು ಕಲಾವಿದ ಕೋಡಿ ಕುಷ್ಟ ಗಾಣಿಗ (78) ದಿನಾಂಕ 12 ಜೂನ್ 2025ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ ಪತ್ನಿ, ಪುತ್ರಿ, ಮೂವರು ಪುತ್ರರು ಇದ್ದಾರೆ. ಆರಂಭದಲ್ಲಿ ಬಡಗಿನ ಅಮೃತೇಶ್ವರಿ, ಮಾರಣಕಟ್ಟೆ ಮೇಳಗಳಲ್ಲಿ ತಿರುಗಾಟ ನಡೆಸಿದ ಬಳಿಕ ಕಲ್ಲಾಡಿ ವಿಠಲ ಶೆಟ್ಟರ ಕಲಾವಿಹಾರ ಮೇಳದ ಮೂಲಕ ತೆಂಕುತಿಟ್ಟಿಗೆ ಪ್ರವೇಶ ಮಾಡಿ, ಆನಂತರ ರಾಜರಾಜೇಶ್ವರಿ ಮೇಳದಲ್ಲಿ ಕಲಾ ವ್ಯವಸಾಯ ನಡೆಸಿದ್ದರು. ಬಡಗು ತಿಟ್ಟಿನ ಹಲವು ಮೇಳಗಳಲ್ಲಿ ಸೇವೆ ಸಲ್ಲಿಸಿ ಕಟೀಲು ಮೇಳದಲ್ಲಿ ಎರಡು ದಶಕ ಕಾಲ ತಿರುಗಾಟ ನಡೆಸಿ ಕಟೀಲು ಕ್ಷೇತ್ರ ಮಹಾತ್ಮೆಯ ನಂದಿನಿ ಪಾತ್ರದ ಮೂಲಕ ಜನಮನ ಸೂರೆಗೊಂಡಿದ್ದರು. ದೇವಿ ಮಹಾತ್ಮೆಯ ದೇವಿ ಪಾತ್ರಕ್ಕೆ ಜೀವ ತುಂಬಿದವರು. ಈ ಕಲಾ ಸೇವೆಗೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಉಡುಪಿ ಕಲಾರಂಗ, ಹಾರಾಡಿ ರಾಮ ಗಾಣಿಗ, ಯಕ್ಷಧ್ರುವ ಪಟ್ಲ ಪ್ರತಿಷ್ಠಾನ, ಡಾ. ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರಶಸ್ತಿ, ಶ್ರೀಕ್ಷೇತ್ರ ಕೋಡಿ ಪ್ರಶಸ್ತಿಗಳು ಸಂದಿದೆ.

Read More

ಬಂಟ್ವಾಳ : ತುಳು ಕೂಟ ಬಂಟ್ವಾಳ ಇದರ ಆಶ್ರಯದಲ್ಲಿ ‘ತುಳುವೆರೆನ ತುಳುನಾಡ ಸಂತೆ’ ತುಳು ಸಾಹಿತ್ಯ ಸಾಂಸ್ಕೃತಿಕ ರಂಗ ಕಾರ್ಯಕ್ರಮವನ್ನು ದಿನಾಂಕ 20, 21 ಮತ್ತು 22 ಜೂನ್ 2025ರಂದು ಬಿ.ಸಿ. ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ವಿಚಾರ ಗೋಷ್ಠಿಗಳು, ಬಹುಭಾಷಾ ಕವಿಗೋಷ್ಠಿ, ಸ್ಪರ್ಧೆಗಳು, ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ರಂಗಿನಲ್ಲಿ ತುಳು ಪದ ರಂಗಿತ, ಯಕ್ಷ ನೃತ್ಯ ರೂಪಕ, ತುಳು ನಾಟಕ, ಹಾಸ್ಯ, ಮಿಮಿಕ್ರಿ ಮತ್ತು ಪ್ರಹಸನ ಪ್ರದರ್ಶನಗೊಳ್ಳಲಿದೆ.

Read More

ಬೆಂಗಳೂರು : ಪ್ರವರ ಥಿಯೇಟರ್ ಪ್ರಸ್ತುತಪಡಿಸುವ ಹನು ರಾಮಸಂಜೀವ ಇವರ ನಿರ್ದೇಶನದಲ್ಲಿ ‘Beg Borrow ಅಳಿಯ’ ಕನ್ನಡ ಹಾಸ್ಯ ನಾಟಕ ಪ್ರದರ್ಶನವನ್ನು ದಿನಾಂಕ 14 ಜೂನ್ 2025ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ಆಯೋಜಿಸಲಾಗಿದೆ. ಕಳೆದ ಏಳು ವರ್ಷಗಳಿಂದ ಅಪಾರ ಮೆಚ್ಚುಗೆ ಪಡೆದಿರುವ ಈ ಕನ್ನಡ ಹಾಸ್ಯ ನಾಟಕವನ್ನು ಎಂ.ಎಸ್. ನರಸಿಂಹ ಮೂರ್ತಿ ಇವರು ರಚಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 9686869676 ಸಂಖ್ಯೆಯನ್ನು ಸಂಪರ್ಕಿಸಿರಿ. ಸಾರಾಂಶ: “Beg Borrow ಅಳಿಯ” ಹಾಸ್ಯ ನಾಟಕವು ವಸುದೈವ ಕುಟುಂಬಕಂ ತತ್ವದ ಮೇಲೆ ರೂಪಗೊಂಡಿದೆ. ಅವಿಭಕ್ತ ಕುಟುಂಬದ ಮಹತ್ವ ಮತ್ತು ಇತ್ತೀಚಿನ ದಿನಗಳಲ್ಲಿ ವರಾನ್ವೇಷಣೆ ನಡೆಯುವ ಪರಿ, ಮನೆಯವರ ಬೇಡಿಕೆಗಳೇನು, ಬೇಡಿಕೆಗೆ ಕಾರಣಗಳೇನು ಎಂಬುದನ್ನು ಅತ್ಯಂತ ಮನರಂಜನಾತ್ಮಕ ಪ್ರಸ್ತುತ ಪಡಿಸುತ್ತದೆ ಈ ನಾಟಕ. ಇಂತಹ ಒಂದು ವರಾನ್ವೇಷಣೆಯ ಸಂದರ್ಭದಲ್ಲಿ ಬರುವ ವಿಭಿನ್ನ ಪಾತ್ರಗಳು ಮತ್ತು ಅಲ್ಲಿ ನಡೆಯುವ ಹಾಸ್ಯಮಯ ಸನ್ನಿವೇಶಗಳು ಮತ್ತು ಅದರ ತಿರುವುಗಳು ಪ್ರೇಕ್ಷಕರನ್ನು ಹಾಸ್ಯದ ಹೊನಲಿನಲ್ಲಿ ತೇಲಾಡಿಸುತ್ತದೆ.

Read More

ಉಡುಪಿ : ಬೆಂಗಳೂರಿನ ಸ್ಪಂದನಾ ಸೇವಾ ಸಂಸ್ಥೆಯಿಂದ ಉಡುಪಿ ಜಿಲ್ಲೆಯ ಪತ್ರಕರ್ತರ ಸಾಧನೆ ಗುರುತಿಸಿ ಕೊಡಲ್ಪಡುವ ‘ಯಶೋ ಮಾಧ್ಯಮ- 2025’ ಪ್ರಶಸ್ತಿಗೆ ಉಡುಪಿಯ ಸಂಯುಕ್ತ ಕರ್ನಾಟಕ ಪತ್ರಿಕೆಯ ವರದಿಗಾರರಾದ ಕಿರಣ್ ಮಂಜನಬೈಲು ಇವರು ಆಯ್ಕೆಯಾಗಿದ್ದಾರೆ. ದಿನಾಂಕ 14 ಜೂನ್ 2025ರ ಶನಿವಾರ ಬೆಳಿಗ್ಗೆ 10-00 ಗಂಟೆಗೆ ಕಲ್ಯಾಣಪುರದ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನೀಡುವ ಉಚಿತ ನೋಟ್ ಪುಸ್ತಕ ವಿತರಣಾ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನಿಸಲಾಗುವುದು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ವಹಿಸಲಿದ್ದು, ಕರ್ನಾಟಕ ರಾಜ್ಯ ಕ್ರಷರ್ ಮತ್ತು ಕ್ವಾರಿ ಮಾಲೀಕರ ಸಂಘಗಳ ಒಕ್ಕೂಟ (ರಿ.) ಇದರ ರಾಜ್ಯಾಧ್ಯಕ್ಷರಾದ ರವೀಂದ್ರ ಶೆಟ್ಟಿ ಬಜಗೋಳಿಯವರು ದೀಪ ಪ್ರಜ್ವಲಿಸಲಿರುವರು. ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕೆ. ಅನಂತಪದ್ಮನಾಭ ಕಿಣಿ, ಸ್ಕೌಟ್ ಅಂಡ್ ಗೈಡ್ಸ್ ಉಡುಪಿ ಜಿಲ್ಲಾ ಸಂಸ್ಥೆಯ ಸ್ಕೌಟ್ ಆಯುಕ್ತರಾದ ಜನಾರ್ದನ್ ಕೊಡವೂರು, ಉಡುಪಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ನ ಹಫೀಜ್, ಉದ್ಯಾನ ವಿನ್ಯಾಸಕರಾದ ಯು. ಲೋಕೇಶ್…

Read More

ಬೆಂಗಳೂರು : ಜನಪದರು ಸಾಂಸ್ಕೃತಿಕ ವೇದಿಕೆ (ರಿ.) ಇವರ ವತಿಯಿಂದ ಪ್ರತಿ ತಿಂಗಳ 2ನೇ ಶನಿವಾರ ನಡೆಯುವ ಸರಣಿ ರಂಗಮಾಲೆ – 95ರಲ್ಲಿ ಯಕ್ಷಗಾನ ಮತ್ತು ನಾಟಕ ಪ್ರದರ್ಶನವನ್ನು ದಿನಾಂಕ 14 ಮತ್ತು 15 ಜೂನ್ 2025ರಂದು ಬೆಂಗಳೂರಿನ ನಿಂಬೆಕಾಯಿಪುರದ ಶ್ರೀ ಅಭಯಾಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿರುವ ಜನಪದರು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 14 ಜೂನ್ 2025ರಂದು ಸಂಜೆ 7-00 ಗಂಟೆಗೆ ಮಂಜುನಾಥ್ ಎಲ್. ಬಡಿಗೇರ ಇವರ ನಿರ್ದೇಶನದಲ್ಲಿ ದೊಡ್ಡಬ್ಯಾಡರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳಿಂದ ಮೂಡಲಪಾಯ ಯಕ್ಷಗಾನ ಪ್ರಸಂಗ ‘ಕರ್ಣ ಅರ್ಜುನರ ಕಾಳಗ’ ಪ್ರದರ್ಶನಗೊಳ್ಳಲಿದೆ. ದಿನಾಂಕ 15 ಜೂನ್ 2025ರಂದು ಸಂಜೆ 6-30 ಗಂಟೆಗೆ ಮಂಗಳೂರಿನ ಆಯನ ನಾಟಕದ ಮನೆ ಪ್ರಸ್ತುತ ಪಡಿಸುವ ‘ಅಶ್ವತ್ಥಾಮ’ NOT OUT ಕನ್ನಡ ನಾಟಕ ಪ್ರದರ್ಶನಗೊಳ್ಳಲಿದೆ. ರಂಗದಲ್ಲಿ ಚಂದ್ರಹಾಸ್ ಉಳ್ಳಾಲ್, ಪ್ರಭಾಕರ್ ಕಾಪಿಕಾಡ್ ಮತ್ತು ಡಾ. ದಿನೇಶ್ ನಾಯಕ್ ನಟಿಸಲಿದ್ದು, ಮೋಹನಚಂದ್ರ ಇವರು ನಿರ್ದೇಶನ ಮಾಡಲಿದ್ದಾರೆ. ನಾಟಕದ ಬಗ್ಗೆ : ಮಹಾಭಾರತದ ಹಲವಾರು ದುರಂತ…

Read More

ಬೆಂಗಳೂರು : ಕನ್ನಡ ಸಂಶೋಧನ ಅಕಾಡೆಮಿ (ನೋಂ.) ಇದರ ವತಿಯಿಂದ 2025ನೇ ಸಾಲಿನ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತರಾದ ಬಾನು ಮುಷ್ತಾಕ್ ಅವರ ‘ಕಥನ ಸಾಹಿತ್ಯದ ತಾತ್ವಿಕತೆ’ ಎಂಬ ವಿಷಯದ ಬಗ್ಗೆ ಸಂಶೋಧನ ಲೇಖನಗಳಿಗೆ ಆಹ್ವಾನಿಸಲಾಗಿದೆ. 1. ಪಿ.ಎಚ್.ಡಿ. ಸಂಶೋಧನಾರ್ಥಿಗಳು, ಅಧ್ಯಾಪಕರು, ಸ್ನಾತಕೋತ್ತರ ವಿದ್ಯಾರ್ಥಿಗಳು ಬರೆದು ಲೇಖನಗಳನ್ನು ಕಳುಹಿಸಿಕೊಡಬಹುದಾಗಿದೆ. 2. ಸಂಶೋಧನ ಲೇಖನವು ಕನ್ನಡ ಭಾಷೆಯಲ್ಲಿದ್ದು, 2000 ಪದಗಳ ಮಿತಿಯಲ್ಲಿರಬೇಕು. 3. ಸಂಶೋಧನ ಲೇಖನವು ಸ್ವಂತ ರಚನೆಯಾಗಿದ್ದು, ಕೃತಿ ಚೌರ್ಯ ಮಾಡಿರಬಾರದು. 4. ಸಂಶೋಧನ ಲೇಖನವು ಈ ಹಿಂದೆ ಯಾವುದೇ ಪತ್ರಿಕೆ ಮತ್ತು ಪುಸ್ತಕಗಳಲ್ಲಿ ಪ್ರಕಟವಾಗಿರಬಾರದು. 5. ಸಂಶೋಧನ ಲೇಖನವು ಶೀರ್ಷಿಕೆ, ವಿಷಯದ ವ್ಯಾಪ್ತಿ, ಪರಿಕಲ್ಪನೆ, ವಿಶ್ಲೇಷಣೆ, ವ್ಯಾಖ್ಯಾನ, ಸಮಾರೋಪ, ಫಲಿತಗಳಿಂದ ಕೂಡಿರಬೇಕು. 6. ಸಂಶೋಧನ ಲೇಖನದ ಕೊನೆಯಲ್ಲಿ ಅಡಿಟಿಪ್ಪಣಿಗಳು ಮತ್ತು ಪರಾಮರ್ಶನ ಗ್ರಂಥಗಳ ಮಾಹಿತಿ ಇರಬೇಕು. 7. ಕನ್ನಡ ನುಡಿ ವಿನ್ಯಾಸದಲ್ಲಿ 14 ಫಾಂಟ್ ಅಳತೆಯಲ್ಲಿ ಅಕ್ಷರ ದೋಷಗಳನ್ನು ತಿದ್ದುಪಡಿ ಮಾಡಿದ ವರ್ಡ್ ಫೈಲ್‌ನಲ್ಲಿ ಕಳುಹಿಸಿಕೊಡಬೇಕು. ೫. ಸಂಶೋಧನ ಲೇಖನದಲ್ಲಿ…

Read More

ಧಾರವಾಡ : ಭಾರತೀಯ ಸಂಗೀತ ವಿದ್ಯಾಲಯ ಧಾರವಾಡ ಮತ್ತು ಡಾ. ಅಣ್ಣಾಜಿರಾವ್ ಸಿರೂರ್ ರಂಗಮಂದಿರ ಪ್ರತಿಷ್ಠಾನ ಧಾರವಾಡ ಪ್ರಸ್ತುತ ಪಡಿಸುವ ಧಾರವಾಡ ಸಂಗೀತ ಕಛೇರಿಯನ್ನು ದಿನಾಂಕ 15 ಜೂನ್ 2025ರಂದು ಸಂಜೆ 5-15 ಗಂಟೆಗೆ ಧಾರವಾಡದ ಕೆ.ಸಿ.ಡಿ. ಕ್ಯಾಂಪಸ್ ಸೃಜನಾ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ತೇಜಸ್ವಿನಿ ಶ್ರೀಹರಿ ಮತ್ತು ಧಾರವಾಡದ ಪಂಡಿತ್ ಕೈವಲ್ಯ ಕುಮಾರ್ ಗುರವ್ ಇವರ ಹಾಡುಗಾರಿಕೆಗೆ ಶ್ರೀಧರ್ ಮಾಂಡ್ರೆ ಮತ್ತು ಶ್ರೀಹರಿ ದಿಗ್ಗಾವಿ ತಬಲಾ ಹಾಗೂ ಗುರುಪ್ರಸಾದ್ ಹೆಗ್ಡೆ ಮತ್ತು ಬಸವರಾಜ್ ಹಿರೇಮಠ ಇವರ ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ.

Read More

ಪುತ್ತೂರು : ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯ, ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಕೇಂದ್ರ ವಿವೇಕಾನಂದ ಸಂಶೋಧನಾ ಕೇಂದ್ರ ಮತ್ತು ಐಕ್ಯೂಎಸಿ ಘಟಕದ ಸಹಯೋಗದಲ್ಲಿ ಹದಿನೇಳನೇ ಆವೃತ್ತಿಯ ವಿವೇಕಸ್ಮೃತಿ ಉಪನ್ಯಾಸ ಮಾಲಿಕೆ ದಿನಾಂಕ 12 ಜೂನ್ 2025ರಂದು ನಡೆಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಮನಮೋಹನ್ ಎಂ. ಸಮಾಜದಲ್ಲಿ ಇರುವ ಸ್ಥಾನಮಾನಗಳನ್ನು ತ್ಯಜಿಸಿ, ಶ್ರೀಮಂತಿಕೆಯನ್ನು ಬಿಟ್ಟು ಹೊರಬಂದಾಗ ಜೀವನದ ಅನುಭವ ಸಿಗುತ್ತದೆ. ಆತ್ಮ ಸಾಕ್ಷಾತ್ಕಾರವಾದಾಗ ನಿರ್ಧಾರಗಳು ಗಟ್ಟಿಯಾಗುತ್ತದೆ. ಭ್ರಮೆಗಳಿಂದ ಹೊರಬಂದಾಗ, ಬಂಧಗಳನ್ನು ತ್ಯಜಿಸಿದಾಗ ನಾವು ಭಯಮುಕ್ತರಾಗುವ ಮೂಲಕ ಆತ್ಮ ಸಾಕ್ಷಾತ್ಕಾರವಾಗುತ್ತದೆ ಎಂಬುದನ್ನು ಸ್ವಾಮಿ ವಿವೇಕಾನಂದರು ನಿರೂಪಿಸಿ ತೋರಿಸಿದ್ದಾರೆ. ಅವರ ಕವನಗಳಲ್ಲಿ ಈ ಬಗ್ಗೆ ಉಲ್ಲೇಖವಿದೆ” ಎಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಶ್ರೀಧರ್ ನಾಯ್ಕ್ ಮಾತನಾಡಿ “ವಿವೇಕಾನಂದರ ಕಾವ್ಯಾತ್ಮಕ ವಿಶ್ಲೇಷಣೆಗಳಲ್ಲಿರುವಂತೆ ನಾವೆಲ್ಲರೂ ಕರ್ತವ್ಯತತ್ಪರರಾಗಬೇಕಿದೆ” ಎಂದರು. ಕಾರ್ಯಕ್ರಮದಲ್ಲಿ ಕಾಲೇಜಿನ ಐಕ್ಯೂಎಸಿ…

Read More