Author: roovari

ಕೋಟ : ರಸರಂಗ ಕೋಟ ಹಾಗೂ ಯಶಸ್ವೀ ಕಲಾವೃಂದ ಜಂಟಿಯಾಗಿ ಆಯೋಜಿಸಿಕೊಂಡಿರುವ ಶ್ವೇತಯಾನ 22 ಕಾರ್ಯಕ್ರಮವು ಮಣೂರು ಮಹಾಲಿಂಗೇಶ್ವರ ದೇಗುಲದ ಆಡಳಿತ ಮಂಡಳಿ ಸಹಯೋಗದೊಂದಿಗೆ ದಿನಾಂಕ 23-04-2024ರಂದು ಜಾತ್ರಾ ಮಹೋತ್ಸವದ ಸಂದರ್ಭ ನಡೆಯಿತು. ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವಿಷ್ಣುಮೂರ್ತಿ ಮೈಯ್ಯರು ಮಾತನಾಡಿ “ಬೇರೆ ಬೇರೆ ಕಡೆಗಳಲ್ಲಿ ಸಾಂಸ್ಕೃತಿಕ ಕಲಾ ಪ್ರಕಾರವನ್ನು ವಾರಕ್ಕೆರಡರಂತೆ ಪ್ರಸ್ತುತ ಪಡಿಸಿ ಸಮಾಜದಲ್ಲಿ ಮಕ್ಕಳಿಂದ ಹಿಡಿದು ವೃದ್ದರವರೆಗೂ ಸಾಂಸ್ಕೃತಿಕ ಪ್ರಜ್ಞೆಯನ್ನು ಮೂಡಿಸುವ ಕಾಯಕ ದೊಡ್ಡದು. ಒತ್ತಡದ ಮನಸ್ಸುಗಳಿಗೆ ರಸದೌತಣವನ್ನು ನೀಡುವ ಸಾಂಸ್ಕೃತಿಕ ವಾತಾವರಣ ಇಂದಿನ ಕಾಲಘಟ್ಟಕ್ಕೆ ಅತ್ಯಗತ್ಯ. ರಸರಂಗ, ಯಶಸ್ವೀ ಕಲಾವೃಂದ ಅವಿರತ ಪ್ರಯತ್ನದಿಂದ ಸಾಂಸ್ಕೃತಿಕವಾಗಿ ಗೆದ್ದಿದೆ” ಎಂದು ಅಭಿಪ್ರಾಯಪಟ್ಟರು. ರಸರಂಗದ ಸುಧಾ ಕದ್ರಿಕಟ್ಟು ಮಾತನಾಡಿ “ಹನುಮ ಜಯಂತಿಯ ಕಾರ್ಯಕ್ರಮವನ್ನು ತಾಳಮದ್ದಳೆಯಾಗಿ ಆಚರಿಸಬೇಕೆಂದಾಗ ಮಣೂರು ಮಹಾಲಿಂಗೇಶ್ವರ ದೇಗುಲದ ಆಡಳಿತ ಮಂಡಳಿ ನೆರವಾಗಿ ಅದ್ಭುತ ಕಾರ್ಯಕ್ರಮವನ್ನು ಆಯೋಜಿಸಿಕೊಂಡರು. ಅಪಾರ ಜನಸ್ತೋಮದ ನಡುವೆ ಗೆದ್ದ ಕಾರ್ಯಕ್ರಮವಾಯಿತು” ಎಂದು ಹೇಳಿದರು. ರಾಜೇಂದ್ರ ಉರಾಳ್ ಉಪಸ್ಥಿತರಿದ್ದರು. ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ…

Read More

ಪುತ್ತೂರು : ಸಂತ ಫಿಲೋಮಿನಾ ಕಾಲೇಜಿನ ಇಂಗ್ಲೀಷ್ ವಿಭಾಗ, ಕನ್ನಡ ಸಂಘ, ಯಕ್ಷಕಲಾ ಕೇಂದ್ರ ಹಾಗೂ ಎನ್.ಎಸ್. ಕಿಲ್ಲೆ ಪ್ರತಿಷ್ಠಾನಗಳ ಸಂಯುಕ್ತ ಆಶ್ರಯದಲ್ಲಿ ‘ಇಂಗ್ಲೀಷ್ ಭಾಷಾ ದಿನ’ವನ್ನು ದಿನಾಂಕ 24-04-2024ರಂದು ಆಚರಿಸಿಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ವಂದನೀಯ ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊರವರು ‘ಕನ್ನಡ ಹಾಗೂ ಇಂಗ್ಲೀಷ್ ಭಾಷೆಯ ಮೂಲಗಳು ಬೇರೆಯಾಗಿದೆ. ಆದರೂ ಈ ಆಧುನಿಕ ಯುಗದಲ್ಲಿ ಒಂದು ಭಾಷೆಯ ಪದಗಳು ನಮಗರಿವಿಲ್ಲದಂತೆ ಇನ್ನೊಂದು ಭಾಷೆಯಲ್ಲಿ ಸೇರಿಕೊಂಡಿವೆ. ಈ ಭಾಷಾ ಸಂಬಂಧವು ಪ್ರತಿ ಭಾಷೆಯನ್ನು ಶ್ರೀಮಂತಗೊಳಿಸುವುದಲ್ಲದೆ, ಮಾತನಾಡುವವರ ನಡುವೆ ಸಂಭಾಷಣೆಯನ್ನು ಸುಗಮಗೊಳಿಸುತ್ತದೆ. ಮಾತುಗಾರಿಕೆಯೇ ಜೀವಾಳವಾಗಿರುವ ತಾಳಮದ್ದಳೆ ಒಂದು ಸುಂದರ ಕಲಾಪ್ರಕಾರವಾಗಿದೆ. ಇಲ್ಲಿ ಕಲಾವಿದರ ಭಾಷಾ ಜ್ಞಾನಕ್ಕೆ ಮಹತ್ವವಿದೆ. ಇಂದಿನ ದ್ವಿಭಾಷಾ ಯಕ್ಷಗಾನ ತಾಳಮದ್ದಳೆಯಲ್ಲಿ ಕಲಾವಿದರು ಎರಡು ಭಾಷೆಗಳಲ್ಲಿ ನಿರರ್ಗಳವಾಗಿ ಸಂಭಾಷಿಸಬೇಕಾಗಿದೆ. ದ್ವಿಬಾಷಾ ಯಕ್ಷಗಾನ ತಾಳಮದ್ದಳೆಯನ್ನು ಆಯೋಜಿಸುವ ನೂತನ ಪ್ರಯೋಗದ ಮೂಲಕ ಇಂಗ್ಲೀಷ್ ಭಾಷಾ ದಿನಾಚರಣೆಯು ಅರ್ಥಪೂರ್ಣವಾಗಿ ನಡೆಯುತ್ತಿದೆ. ಎಂದು ಹೇಳಿದರು. ಈ ಸಂದರ್ಭದಲ್ಲಿ ಕನ್ನಡ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ…

Read More

ಬೆಂಗಳೂರು : ಹಿರಿಯ ಪತ್ರಕರ್ತ, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾಗಿದ್ದ ಅರ್ಜುನ್‌ದೇವ್ ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದು, ದಿನಾಂಕ 24-04-2024ರಂದು ಬೆಳಗ್ಗೆ ಬೆಂಗಳೂರಿನ ಕೆಂಗೇರಿ ಉಪನಗರದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ ಹುಟ್ಟೂರು ಚೌಡದೇವನಹಳ್ಳಿಯಲ್ಲಿ ಸಂಜೆ ಮೃತದೇಹದ ಅಂತ್ಯಸಂಸ್ಕಾರ ನೆರವೇರಿತು. ಮೂಲತಃ ಕೋಲಾರ ಜಿಲ್ಲೆಯ ಚೌಡದೇವನಹಳ್ಳಿಯವರಾದ ಅವರು 80 ದಶಕದಲ್ಲಿ ಪತ್ರಿಕೋದ್ಯಮಕ್ಕೆ ಪ್ರವೇಶಿಸಿದ್ದರು. ಪ್ರಜಾವಾಣಿ, ತಾಯಿನಾಡು, ಸಂಯುಕ್ತ ಕರ್ನಾಟಕ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಸಲ್ಲಿಸಿದ್ದ ಸೇವೆ ಅನನ್ಯವಾದದ್ದು. ಅವರು ಸೂರ್ಯೋದಯ ಪತ್ರಿಕೆಯ ಸಂಪಾದಕರಾಗಿ ಕೆಲಸ ಮಾಡಿದ್ದರು. ಪತ್ರಕರ್ತರ ಸಂಘಟನೆಯಲ್ಲಿ ಅವರಿಗಿದ್ದ ಬದ್ಧತೆ, ಸಮಾಜಮುಖಿಯಾಗಿ ತೊಡಗಿಸಿಕೊಳ್ಳುವ ಪರಿ ನಿಜಕ್ಕೂ ಶ್ಲಾಘನೀಯ. ಕರ್ನಾಟಕ ಪತ್ರಕರ್ತರ ಅಕಾಡೆಮಿ (ಈಗಿನ ಮಾಧ್ಯಮ ಅಕಾಡೆಮಿ)ಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಅವರು ರಾಜ್ಯೋತ್ಸವ ಪ್ರಶಸ್ತಿ ಸೇರಿ ಹಲವು ಗೌರವಗಳಿಗೆ ಪಾತ್ರರಾಗಿದ್ದರು.

Read More

ಭಯವಿರಲು ಬಾಳಿಗದು ಭದ್ರತೆಯ ಸಂಕೇತ ಜಯವ ಸಾಧಿಸುವಲ್ಲಿ ಊರುಗೋಲು ನಯವಿನಯ ಭಕ್ತಿಯಲಿ ಮನವಿರಿಸುವಂಥವಗೆ ಹಯವೇಗ ಯಶಕಿಹುದು ಧೀರ ತಮ್ಮ ll 180 ll ಗೋಗೀತೆ, ಮುಕ್ತಕ ಸಂಕಲನಗಳು, ತುಷಾರ ಬಿಂದುಗಳ ಮೂಲಕ ಪರಿಚಿತರಾದ ಡಾ. ಸುರೇಶ ನೆಗಳಗುಳಿ ಅವರು ಈ ಧೀರತಮ್ಮನ ಕಬ್ಬ ಎಂಬ 222 ಮುಕ್ತಕಗಳ (2021) ಮೂಲಕ ಸದಾಚಾರ ಸಂಪನ್ನತೆಯ ಸ್ವರೂಪದರ್ಶನ ಮಾಡಿಕೊಟ್ಟಿದ್ದಾರೆ. ಭಯವೆಂಬುದು ಹೇಡಿತನದ ಲಕ್ಷಣ ಎಂದು ಮಹಾಕವಿಗಳು ಕೂಡ ಹೇಳಿರುವಾಗ ಆ ಪದದ ಸಾಂಸ್ಕೃತಿಕ ಮುಖವನ್ನು ಮೇಲಿನ ಮುಕ್ತಕದಲ್ಲಿ ಪರಿಚಯಿಸುತ್ತ, ಭಯ ಭದ್ರತೆಯನ್ನು ನಿರ್ಮಿಸುತ್ತದೆ. ಯಶಸ್ಸಿನ ಹಾದಿಯನ್ನು ಸುಗಮಗೊಳಿಸುತ್ತದೆ, ಜೊತೆಗೆ ನಯವಿನಯವನ್ನೂ ಬೆರೆಸಿಕೊಂಡರೆ ಯಶಸ್ಸಿನ ಹಾದಿ ಸುಗಮವಾಗಿಸುತ್ತದೆ ಎನ್ನುತ್ತಾರೆ. ಧೀರತಮ್ಮನ ಕಗ್ಗ ಕವಿಯ ತಾತ್ವಿಕ ನಿಲುವು, ವೃತ್ತಿ ಪ್ರವೃತ್ತಿಗಳು ಬೆರೆತ ಕವಿಯೊಬ್ಬನ ಅಂತರಂಗವನ್ನು ಪ್ರತಿನಿಧಿಸುತ್ತದೆ. ನೆಗಳಗುಳಿ ಸಾವಿರಾರು ವಿದ್ಯಾರ್ಥಿವೈದ್ಯ ಶಿಷ್ಯರಿಗೆ ಮಾರ್ಗದರ್ಶಕನಾಗಿ, ಅಲೋಪತಿ ಮತ್ತು ಆಯುರ್ವೇದ ವೈದ್ಯ ಪದ್ಧತಿಗಳಲ್ಲಿ ಪ್ರಾವೀಣ್ಯ ಹೊಂದಿ ಅನೇಕ ರೋಗಿಗಳಿಗೆ ಆರೋಗ್ಯದ ಭಾಗ್ಯ ಹಂಚಿದವರು. ಅದಕ್ಕೇ ತಾನು ಕಲಿತ ಹಾಗೂ ಬಳಸಿದ…

Read More

ಕುಶಾಲನಗರ : ಕುಶಾಲನಗರದ ರಥಬೀದಿಯಲ್ಲಿರುವ ದ್ರಾವಿಡ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘ (ರಿ.) ಇದರ ವಾರ್ಷಿಕ ‘ಶ್ರೀ ರಾಮ ನವಮಿ’ ಕಾರ್ಯಕ್ರಮದ ಅಂಗವಾಗಿ ನಡೆದ ‘ರಾಮೋತ್ಸವ’ದಲ್ಲಿ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ಸದಸ್ಯರಿಂದ ಪಾರ್ತಿಸುಬ್ಬ ವಿರಚಿತ ‘ಪಾದುಕಾ ಪ್ರದಾನ’ ತಾಳಮದ್ದಳೆಯು ದಿನಾಂಕ 23-04-2024ರಂದು ನಡೆಯಿತು. ಹಿಮ್ಮೇಳದಲ್ಲಿ ಸುಬ್ರಾಯ ಸಂಪಾಜೆ, ಲಕ್ಷ್ಮೀಶ ಬೇಂಗ್ರೋಡಿ, ಮುರಳೀಧರ ಕಲ್ಲೂರಾಯ ಸಹಕರಿಸಿದರು. ಮುಮ್ಮೇಳದಲ್ಲಿ ಶುಭಾ ಜೆ.ಸಿ. ಅಡಿಗ (ಭರತ), ಕಿಶೋರಿ ದುಗ್ಗಪ್ಪ ನಡುಗಲ್ಲು (ಶ್ರೀ ರಾಮ), ಹರಿಣಾಕ್ಷಿ ಜೆ. ಶೆಟ್ಟಿ (ವಸಿಷ್ಠ ಮತ್ತು ಲಕ್ಷ್ಮಣ) ಸಹಕರಿಸಿದರು. ನಿರ್ದೇಶಕ ಭಾಸ್ಕರ್ ಬಾರ್ಯ ಸ್ವಾಗತಿಸಿ, ರಾಜಶೇಖರ್ ವಂದಿಸಿದರು. ಮಡಿಕೇರಿ ಆಕಾಶವಾಣಿ ಉದ್ಘೋಷಕ ಸುಬ್ರಾಯ ಸಂಪಾಜೆ ಸ೦ಯೋಜಿಸಿದ್ದರು.

Read More

ಮಂಗಳೂರು : ಭರತಾಂಜಲಿ (ರಿ.) ಕೊಟ್ಟಾರ ಇವರ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡಿರುವ ‘ನೃತ್ಯ ಮಾಧುರ್ಯ’ ಕಾರ್ಯಕ್ರಮವು ಶ್ರೀ ಕ್ಷೇತ್ರ ಗಣೇಶಪುರ ಮಹಾಗಣಪತಿ ದೇವಳದಲ್ಲಿ ದಿನಾಂಕ 22-04-2024ರಂದು ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಕ್ಷೇತ್ರ ಗಣೇಶಪುರ ಮಹಾಗಣಪತಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಧರ್ಮೇಂದ್ರ ಗಣೇಶಪುರ ಮಾತನಾಡುತ್ತಾ “ನಾಟ್ಯ ಕಲೆಯು ಭಾರತೀಯ ಕಲಾ ಪ್ರಕಾರದ ಶ್ರೀಮಂತ ಕಲೆ. ಇದರ ಅಭ್ಯಾಸದಿಂದ ಮಕ್ಕಳ ಮನಸ್ಸು ಪ್ರಫುಲ್ಲಗೊಂಡು ಏಕಾಗ್ರತೆ, ಬುದ್ಧಿಮತ್ತೆ, ದೇಹ ಸೌಂದರ್ಯ ಪ್ರಕಟಗೊಳ್ಳಲು ಸಹಕಾರಿಯಾಗಬಲ್ಲದು. ಮಕ್ಕಳ ಬೆಳವಣಿಗೆಯಲ್ಲಿ ಹೆತ್ತವರ ಪಾತ್ರ ಅತಿ ಮುಖ್ಯ. ಮಕ್ಕಳಿಗೆ ಭಾರತೀಯ ಸಂಸ್ಕೃತಿಯ ಮೌಲ್ಯಗಳ ಬಗ್ಗೆ, ನಮ್ಮ ಪುರಾಣ ಪುರುಷರ ಬಗ್ಗೆ ಅರಿವು ಮೂಡಿಸಿದಾಗ ಅವರು ಈ ದೇಶದ ಅಸ್ತಿಯಾಗಬಲ್ಲರು” ಎಂದು ಅಭಿಪ್ರಾಯಪಟ್ಟ ಇವರು ಕಳೆದ 29 ವರ್ಷಗಳಿಂದ ಈ ಪ್ರದೇಶದ ಮಕ್ಕಳಿಗೆ ಸಾಂಸ್ಕೃತಿಕ ಪ್ರಜ್ಞೆಯನ್ನು ಪ್ರಾಮಾಣಿಕವಾಗಿ ನೀಡುತ್ತಿರುವ ಭರತಾಂಜಲಿ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು. ವ್ಯವಸ್ಥಾಪನಾ ಸಮಿತಿಯ ವಾದಿರಾಜ ರಾವ್,…

Read More

ಸುಬ್ರಹ್ಮಣ್ಯ : ಸುಬ್ರಹ್ಮಣ್ಯದ ಶ್ರೀಸುಬ್ರಹ್ಮಣ್ಯ ಮಠ ಎಜುಕೇಶನ್ ಸೊಸೈಟಿ ಆಡಳಿತಕ್ಕೊಳಪಟ್ಟ ಬಿಳಿನೆಲೆ ಶ್ರೀವೇದವ್ಯಾಸ ವಿದ್ಯಾಲಯದಲ್ಲಿ ಯಕ್ಷಗಾನ ನಾಟ್ಯ ತರಬೇತಿ ಪಡೆದ ವಿದ್ಯಾರ್ಥಿಗಳ ರಂಗ ಪ್ರವೇಶ ಹಾಗೂ ಗುರು ವಂದನಾ ಕಾರ್ಯಕ್ರಮ ದಿನಾಂಕ 09-04-2024 ರಂದು ನಡೆಯಿತು. ಕಾರ್ಯಕ್ರಮದಲ್ಲಿ ದಿಕ್ಕೂಚಿ ಭಾಷಣ ಮಾಡಿದ ಯಕ್ಷಗಾನ ಕಲಾವಿದ ಮತ್ತು ರಾಮಕುಂಜೇಶ್ವರ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣರಾಜ ಕುಂಬ್ಳೆ “ಯಕ್ಷರಂಗ ಎಂಬುದು ಒಂದು ವಿಶಿಷ್ಟವಾದ ಪರಿಕಲ್ಪನೆ. ರಂಗಸ್ಥಳದಲ್ಲಿ ಭಾಗವಹಿಸುವಿಕೆ ಒಂದು ಪುಳಕ ತರುತ್ತದೆ. ಎಳವೆಯಲ್ಲಿಯೇ ಯಕ್ಷಗಾನ ಅಭಿರುಚಿ ಬೆಳೆಯುವುದರಿಂದ ಭವಿಷ್ಯದಲ್ಲಿ ಮಕ್ಕಳು ಸುಸಂಸ್ಕೃತರಾಗಲು ಅಡಿಗಲ್ಲಾಗುತ್ತದೆ.” ಎಂದು ಹೇಳಿದರು. ಶ್ರೀಕೃಷ್ಣ ಶರ್ಮ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶ್ರೀ ಸುಬ್ರಹ್ಮಣ್ಯ ಮಠಎಜುಕೇಶನ್ ಸೊಸೈಟಿ ಸಂಚಾಲಕ ಸುದರ್ಶನ ಜೋಯಿಸ ಕಾರ್ಯಕ್ರಮ ಉದ್ಘಾಟಿಸಿದರು. ನಾಟ್ಯ ಗುರು ಈಶ್ವರ ಪ್ರಸಾದ್ ನಿಡ್ಲೆ ಅತಿಥಿಯಾಗಿ ಭಾಗವಹಿಸಿದರು. ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಸತ್ಯಶಂಕರ ಭಟ್, ವೇದವ್ಯಾಸ ವಿದ್ಯಾಲಯದ ಮುಖ್ಯ ಗುರು ಪ್ರಶಾಂತ್ ಬಿ., ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೇಶವ ಗೌಡ ಬಿಳಿನೆಲೆ,…

Read More

ಮಂಗಳೂರು : ಕೊಲ್ಯದ ಸಂತ ಜೋಸೆಪ್ ಜೋಯ್ ಲ್ಯಾಂಡ್ ಶಾಲೆ ಮತ್ತು ಚಿತ್ತಾರ ಪ್ರತಿಷ್ಠಾನ ಪಿಲಾರು ಇದರ ವತಿಯಿಂದ 19ನೇ ವರ್ಷದ ವಿವಿಧ ಶಾಲಾ ಮಕ್ಕಳಿಗಾಗಿ ಉಚಿತ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭವು ದಿನಾಂಕ 15-04-2024ರಂದು ಜರಗಿತು. ಈ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಕೊಲ್ಯದ ಸಂತ ಜೋಸೆಪ್ ಜೋಯ್ ಲ್ಯಾಂಡ್ ಶಾಲೆಯ ಮುಖ್ಯ‌ ಶಿಕ್ಷಕಿ ಶ್ರೀಮತಿ ವೀಣಾ ಭಟ್ “ಮಕ್ಕಳ ಕ್ರಿಯಾತ್ಮಕ ಚಟುವಟಿಕೆ ಹಾಗೂ ತಮ್ಮಲ್ಲಿರುವ ಪ್ರತಿಭೆಗಳನ್ನು ಗುರುತಿಸಲು ಇಂತಹ ಶಿಬಿರಗಳು ಬಹಳ ಸಹಕಾರಿ” ಎಂದು ಅಭಿಪ್ರಾಯಪಟ್ಟರು. ದೈಹಿಕ ಶಿಕ್ಷಕರಾದ ಶ್ರೀಯುತ ನಾಗಪ್ಪ ಪನೋಲಿಬೈಲ್ ಹಾಗೂ ಶಿಬಿರದ ನಿರ್ದೇಶಕರಾದ ಶ್ರೀಯತ ನವೀನ್ ಪಿಲಾರು ಉಪಸ್ಥಿತರಿದ್ದರು. ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ರಂಗ ನಿರ್ದೇಶಕರಾದ ಶ್ರೀ ಜಗನ್ ಪವಾರ್ ಇವರು ರಂಗ ತರಬೇತಿ ಬಗ್ಗೆ, ಕುಂಬಳೆ ಶಾಲೆಯ ಶಿಕ್ಷಕರಾದ ಶ್ರೀ ರಾಜು ಕಿದೂರು ಪ್ರಾಣಿ ಪಕ್ಷಿಗಳ ಬಗ್ಗೆ, ತೊಕ್ಕೊಟ್ಟು ಶಾಲೆಯ ಚಿತ್ರಕಲಾ ಶಿಕ್ಷಕರಾದ ಶ್ರೀ ಚಂದ್ರಾಡ್ಕಾರ್ ಮತ್ತು ಚಿತ್ರ ಕಲಾವಿದ ಶ್ರೀ…

Read More

ಉಡುಪಿ : ಯು. ಶ್ರೀಧರ್ ಅವರು ಬರೆದ ‘ಉಡುಪಿ ಪರ್ಯಾಯವೂ, ಮಟ್ಟಿ (ವಾದಿರಾಜ) ಗುಳ್ಳವೂ ಮತ್ತು ಇತರ ಆಯ್ದ ಲೇಖನಗಳು’ ಕೃತಿ ದಿನಾಂಕ 21-04-2024 ರಂದು ಯಕ್ಷಗಾನ ಕಲಾರಂಗದ ನೂತನ ಕಟ್ಟಡದಲ್ಲಿ ಲೋಕಾರ್ಪಣೆಗೊಂಡಿತು. ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಸೋದೆ ವಾದಿರಾಜ ಮಠಾಧೀಶರಾದ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು “ಯು. ಶ್ರೀಧರರು ಇಳಿ ವಯಸ್ಸಿನಲ್ಲೂ ಮಾಡುತ್ತಿರುವ ಸಾಹಿತ್ಯ ಮತ್ತು ಸಾಮಾಜಿಕ ಕೆಲಸಗಳು ಅಭಿನಂದನಾರ್ಹ.” ಎಂದರು. ವರ್ಷದ ಹಿಂದೆ ಗತಿಸಿದ ತಮ್ಮ ಪತ್ನಿ ಸುಗುಣಾಳ ನೆನಪಿಗೆ ಈ ಕೃತಿಯನ್ನು ಸಮರ್ಪಿಸಿದ ಲೇಖಕರು ಮಾರಾಟದಿಂದ ಬಂದ ಹಣವನ್ನು ವಿದ್ಯಾಪೋಷಕ್ ಗೆ ನೀಡುವುದಾಗಿ ಹೇಳಿದರು. ಇದು ಈ ಲೇಖಕರ ಹತ್ತನೆಯ ಕೃತಿಯಾಗಿದೆ. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್, ನಾರಾಯಣ ಎಂ. ಹೆಗಡೆ, ಡಾ. ವಿರೂಪಾಕ್ಷ ದೇವರಮನೆ, ಎಚ್. ಎನ್. ವೆಂಕಟೇಶ್, ಯು. ಹರಿಶ್ಚಂದ್ರ, ರವಿ .ಎಂ ಅಮೀನ್ ಉಪಸ್ಥಿತರಿದ್ದರು.

Read More

ಉಡುಪಿ : ಪಲಿಮಾರು ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ತಮ್ಮ ಗುರುಗಳಾದ ಶ್ರೀ ವಿದ್ಯಾಮಾನ್ಯ ಶ್ರೀಪಾದರ ಹೆಸರಿನಲ್ಲಿ ಪ್ರತೀವರ್ಷ ಕೊಡಮಾಡುವ ‘ಶ್ರೀ ವಿದ್ಯಾಮಾನ್ಯ ಯಕ್ಷಕಲಾ’ ಪ್ರಶಸ್ತಿಯನ್ನು ಬಡಗುತಿಟ್ಟಿನ ಶ್ರೇಷ್ಠ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆಯವರಿಗೆ ದಿನಾಂಕ 23-04-2024 ರಂದು ಪಲಿಮಾರಿನಲ್ಲಿ ನಡೆದ ಹನುಮ ಜಯಂತಿಯ ಸಂದರ್ಭದಲ್ಲಿ ಪ್ರದಾನ ಮಾಡಿದರು. ಈ ಪ್ರಶಸ್ತಿಯು 50,000/- ನಗದು ಪುರಸ್ಕಾರಗಳನ್ನೊಳಗೊಂಡಿದೆ. ಕಾರ್ಯಕ್ರಮದಲ್ಲಿ ಶ್ರೀ ಕಾಣಿಯೂರು, ಶ್ರೀ ಸೋದೆ, ಶ್ರೀ ಭೀಮನಕಟ್ಟೆ ಹಾಗೂ ಪಲಿಮಾರು ಕಿರಿಯ ಶ್ರೀಪಾದಂಗಳವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಪಲಿಮಾರು ಶ್ರೀಗಳು “ಎರಡು ದಶಕಗಳ ಹಿಂದೆ ಕೊಂಡದಕುಳಿಯವರು ನಿರ್ವಹಿಸಿದ ಹನುಮಂತನ ಪಾತ್ರ ಇಂದಿಗೂ ನನ್ನ ಮನಸ್ಸಿನಲ್ಲಿ ಹಸಿರಾಗಿದೆ. ಇಂತಹ ಶ್ರೇಷ್ಠ ಕಲಾವಿದ ಇನ್ನಷ್ಟು ಸಮಯ ರಂಗದಲ್ಲಿ ಪಾತ್ರನಿರ್ವಹಿಸುವಂತಾಗಲಿ.” ಎಂದು ತಮ್ಮ ಅನುಗ್ರಹ ಸಂದೇಶದಲ್ಲಿ ನುಡಿದರು. ಪ್ರಶಸ್ತಿ ಸ್ವೀಕರಿಸಿದ ಕೊಂಡದಕುಳಿಯವರು ಮಾತನಾಡಿ “ಈ ದಿನ ನನ್ನ ಪಾಲಿಗೆ ಸಂತಸದ ಕ್ಷಣ. ಕಲಾವಿದನಾದವನು ಅಧ್ಯಯನಶೀಲನಾಗಿರಬೇಕು. ಕಲಾವಿದರು ತಪಸ್ವಿಗಳು ಎಂದು ಪೇಜಾವರ ವಿಶ್ವೇಶ ತೀರ್ಥರು ಹೇಳಿದ್ದರು. ಶ್ರದ್ಧೆ…

Read More