Author: roovari

ಉಡುಪಿ : ತುಳುಕೂಟ ಉಡುಪಿ (ರಿ.) ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಭಾಗಿತ್ವದಲ್ಲಿ ದಿನಾಂಕ 05 ಜನವರಿ 2025ರಿಂದ 10 ಜನವರಿ 2025ರವೆರೆಗೆ ನಡೆದ 23ನೇ ವರ್ಷದ ಕೆಮ್ತೂರು ತುಳು ನಾಟಕ ಸ್ಪರ್ಧೆ -2025ರ ಪ್ರಶಸ್ತಿ ವಿಜೇತರು. ಎಲ್ಲಾ ವಿಜೇತರಿಗೂ ದೃಢಪತ್ರಿಕೆ ಮತ್ತು ಶಾಶ್ವತ ಫಲಕ ನೀಡಲಾಗುವುದು. ಶ್ರೇಷ್ಠ ನಾಟಕ – ಪ್ರಥಮ : ನಗದು ರೂ.20,000/-, ನಾಟಕ : ‘ಈದಿ’, ತಂಡ: ಸುಮನಸಾ ಕೊಡವೂರು (ರಿ.) ಉಡುಪಿ. ದ್ವಿತೀಯ : ನಗದು ರೂ.15,000/-, ನಾಟಕ : ‘ದಿ ಫೈಯರ್’, ತಂಡ : ಭೂಮಿಗೀತ ಸಾಂಸ್ಕೃತಿಕ ವೇದಿಕೆ, ಪಟ್ಲ ತೃತೀಯ : ನಗದು ರೂ.10,000/-, ನಾಟಕ : ‘ಸೋಕ್ರಟಿಸ್’, ತಂಡ: ರಂಗ ಮಿಲನ, ಮುಂಬಯಿ. ಶ್ರೇಷ್ಠ ನಿರ್ದೇಶನ – ಪ್ರಥಮ : ನಗದು ರೂ.1000/-, ವಿದ್ದು ಉಚ್ಚಿಲ್, ನಾಟಕ : ‘ಈದಿ’, ತಂಡ : ಸುಮನಸಾ ಕೊಡವೂರು (ರಿ). ಉಡುಪಿ. ದ್ವಿತೀಯ : ಸಂತೋಷ್ ನಾಯಕ್ ಪಟ್ಲ, ನಾಟಕ :…

Read More

ಉಪ್ಪಿನಕುದ್ರು : ಉಪ್ಪಿನಕುದ್ರು ಶ್ರೀ ದೇವಣ್ಣ ಪದ್ಮನಾಭ ಕಾಮತ್ ಮೆಮೋರಿಯಲ್ ಯಕ್ಷಗಾನ ಗೊಂಬೆಯಾಟ ಟ್ರಸ್ಟ್ (ರಿ.) ಮತ್ತು ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿ ಉಪ್ಪಿನಕುದ್ರು ಇವರ ಜಂಟಿ ಆಶ್ರಯದಲ್ಲಿ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ 10ನೇ ವಾರ್ಷಿಕೋತ್ಸವ ಸಮಾರಂಭವನ್ನು ದಿನಾಂಕ 19 ಜನವರಿ 2025ರಂದು ಅಪರಾಹ್ನ 2-00 ಗಂಟೆಗೆ ಉಪ್ಪಿನಕುದ್ರು ಗೊಂಬೆ ಮನೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸಮಾರಂಭವನ್ನು ಕನ್ನಡ ಸಾಹಿತ್ಯ ಪರಿಷತ್ತು ಇದರ ಮಾಜಿ ಅಧ್ಯಕ್ಷರಾದ ಡಾ. ಹರಿಕೃಷ್ಣ ಪುನರೂರು ಇವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಪ್ರೊ. ಎಂ.ಎಲ್. ಸಾಮಗ ಇವರು ಉದ್ಘಾಟನೆ ಮಾಡಲಿರುವರು. ಇದೇ ಸಂದರ್ಭದಲ್ಲಿ ಬಹುಮುಖ ಪ್ರತಿಭೆ ಶ್ರೀ ಓಂ ಗಣೇಶ್ ಉಪ್ಪುಂದ ಇವರಿಗೆ ‘ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ -2025’ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಗುವುದು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಮಹಿಳೆಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ವಿದ್ಯಾರ್ಥಿಗಳಿಂದ…

Read More

ಪುತ್ತೂರು : ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಸರಣಿ ಕಾರ್ಯಕ್ರಮ ‘ನೃತ್ಯಾಂತರಂಗದ 118’ನೇ ಸರಣಿಯಲ್ಲಿ ಸಂಸ್ಥೆಯ ಗ್ರಾಮೀಣ ಶಾಖೆಯಾದ ಕೊಕ್ಕಡದ ಐವರು ವಿದ್ಯಾರ್ಥಿಗಳಾದ ಚಿರಂತನ, ಹೃದ್ಯ, ಅರ್ಚನಾ, ವರ್ಷಾ ಮತ್ತು ಶ್ರೀಹಿತ ಇವರು ದಿನಾಂಕ 22 ಡಿಸೆಂಬರ್ 2024ರಂದು ದರ್ಬೆಯ ಶಶಿಶಂಕರ ಸಭಾಂಗಣದಲ್ಲಿ ಭರತನಾಟ್ಯ ಕಾರ್ಯಕ್ರಮವನ್ನು ನೀಡಿ ಜನರ ಮೆಚ್ಚುಗೆ ಪಡೆದರು. ಈ ಕಾರ್ಯಕ್ರಮದ ಅಭ್ಯಾಗತರಾದ ಸಂಗೀತ ಗುರು ಶ್ರೀಮತಿ ಪದ್ಮಾವತಿ ಬಾಳ್ತಿಲ್ಲಾಯರು ಮಕ್ಕಳಿಗೆಲ್ಲ ಶುಭ ಹಾರೈಸಿದರು. ಕಾರ್ಯಕ್ರಮದ ಹಿಮ್ಮೇಳದಲ್ಲಿ ನಟುವಾಂಗದಲ್ಲಿ ಗುರು ದೀಪಕ್ ಕುಮಾರ್, ಹಾಡುಗಾರಿಕೆಯಲ್ಲಿ ವಿದುಷಿ ಪ್ರೀತಿಕಲಾ, ಮೃದಂಗದಲ್ಲಿ ವಿದ್ವಾನ್ ಶ್ಯಾಮ್ ಭಟ್ ಸುಳ್ಯ ಮತ್ತು ಕೊಳಲಿನಲ್ಲಿ ವಿದ್ವಾನ್ ಕೃಷ್ಣಗೋಪಾಲ್ ಪುಂಜಾಲಕಟ್ಟೆ ಕಾರ್ಯಕ್ರಮಕ್ಕೆ ಮೆರಗು ನೀಡಿದರು. ಶ್ರೀಮತಿ ಶಶಿಪ್ರಭಾ ಮತ್ತು ವಿದ್ವಾನ್ ಗಿರೀಶ್ ಕುಮಾರ್ ಸಹಕರಿಸಿದ್ದರು.

Read More

ಉಡುಪಿ : ರಾಗ ಧನ ಉಡುಪಿ (ರಿ.) ಮತ್ತು ಸರಿಗಮ ಭಾರತಿ ಸಂಗೀತ ವಿದ್ಯಾಲಯ (ರಿ.) ಪರ್ಕಳ ಇವುಗಳ ಜಂಟಿ ಆಶ್ರಯದಲ್ಲಿ ರಾಗರತ್ನಮಾಲಿಕೆ – 33ನೇ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯು ದಿನಾಂಕ 19 ಜನವರಿ 2025ರಂದು ಅಪರಾಹ್ನ ಗಂಟೆ 2-15ಕ್ಕೆ ಪರ್ಕಳ ಕುಕ್ಕುದಕಟ್ಟೆ ಸರಿಗಮ ಭಾರತಿ ಸಂಗೀತ ವಿದ್ಯಾಲಯದ ಸಭಾಂಗಣ ನಡೆಯಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಉದ್ಯಾವರ ಜಯಂತಿ ಮಾಧವ ಆಚಾರ್ಯ ಉಡುಪಿ ಇವರ ಸಹಕಾರದೊಂದಿಗೆ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಮೊದಲಿಗೆ ಅಥರ್ವ ದೀಪರಾಜ ಹೆಗ್ಡೆಯವರಿಂದ ಹಾಡುಗಾರಿಕೆ, ಅನುಶ್ರೀ ಮಳಿ ಇವರಿಂದ ವಯೊಲಿನ್, ಅದ್ವೈತ ಕೃಷ್ಣ ಬಿ. ಇವರಿಂದ ಮೃದಂಗ ವಾದನ ನಡೆಯಲಿದೆ. ಅಪರಾಹ್ನ 3-30 ಗಂಟೆಗೆ ಶ್ರೀಮತಿ ಶುಭಾ ಶಿವಕುಮಾರ್ ಅಳಿಕೆ ಇವರ ಹಾಡುಗಾರಿಕೆಗೆ ವಯೊಲಿನ್‌ನಲ್ಲಿ ವಿಶ್ವಾಸ್ ಕೃಷ್ಣ ಮಂಗಳೂರು, ಮೃದಂಗದಲ್ಲಿ ಶ್ರೀ ಪನ್ನಗ ಶರ್ಮನ್ ಶೃಂಗೇರಿ ಸಹಕರಿಸಲಿದ್ದಾರೆ ಎಂದು ರಾಗ ಧನ ಸಂಸ್ಥೆಯ ಕಾರ್ಯದರ್ಶಿ ಉಮಾಶಂಕರಿ ತಿಳಿಸಿದ್ದಾರೆ.

Read More

ಪುತ್ತೂರು : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆ ಕೇಪು ಇಲ್ಲಿ ದಿನಾಂಕ 06 ಜನವರಿ 2025ರಂದು ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ.) ಮಂಗಳೂರು ವಿಟ್ಲ ಘಟಕದ ಸಹಯೋಗದಲ್ಲಿ ಉಚಿತ ಯಕ್ಷ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ರಂಗ ಪ್ರವೇಶ ಕಾರ್ಯಕ್ರಮ ನಡೆಯಿತು. ಯಕ್ಷ ಗುರುಗಳಾದ ಗಣೇಶ ಆಚಾರ್ಯರವರ ನಿರ್ದೇಶನದಲ್ಲಿ ಮಕ್ಕಳ ಯಕ್ಷಗಾನ ಪ್ರದರ್ಶನ ಅತ್ಯುತ್ತಮವಾಗಿ ಮೂಡಿಬಂದು, ಕಿಕ್ಕರಿದು ತುಂಬಿದ ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾಯಿತು. ಈ ಕಾರ್ಯಕ್ರಮದ ವೇದಿಕೆಯ ಅಧ್ಯಕ್ಷತೆಯನ್ನು ಕೇಪು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಪುರುಷೋತ್ತಮ ಗೌಡ ಕಲ್ಲಂಗಳ ವಹಿಸಿದ್ದರು. ವೇದಿಕೆಯಲ್ಲಿ ಪಟ್ಲ ಪೌಂಡೇಶನ್ ವಿಟ್ಲ ಘಟಕದ ಅಧ್ಯಕ್ಷರಾದ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಕಾರ್ಯದರ್ಶಿಯಾದ ಪೂವಪ್ಪ ಶೆಟ್ಟಿ ಅಳಿಕೆ, ಮುಖ್ಯ ಅತಿಥಿಯವರಾದ ಹಿರಿಯ ವಿದ್ಯಾರ್ಥಿ ಮೋಹನ್ ಮೈರ, ನಿರ್ಮಲ ಕೆ.ಎನ್., ನಿವೃತ್ತ ಬ್ಯಾಂಕ್ ಪ್ರಬಂಧಕರು ಬ್ಯಾಂಕ್ ಆಫ್ ಬರೋಡ, ಪಂಚಾಯತ್ ಸದಸ್ಯರಾದ ಜಗಜೀವನ್ ರಾಮ್ ಶೆಟ್ಟಿ, ವಿನೋದ್ ಶೆಟ್ಟಿ ಚೆಲ್ಲಡ್ಕ, ಶ್ರೀ…

Read More

ಸುಳ್ಯ : ತರುಣ ಸಮಾಜ ಸುಳ್ಯ ತಾಲೂಕು ವತಿಯಿಂದ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ ಮತ್ತು ಭಾಲಾವಲೀಕಾರ್ / ರಾಜಾಪುರ ಸಾರಸ್ವತ ಸಮಾಜ (ರಿ.) ಸುಳ್ಯ ತಾಲೂಕು ಇದರ ಸಹಯೋಗದಲ್ಲಿ ‘ಸನ್ಮಾನ ಮತ್ತು ಪುಸ್ತಕ ಬಿಡುಗಡೆ’ ಸಮಾರಂಭವನ್ನು ದಿನಾಂಕ 14 ಜನವರಿ 2025ರಂದು ಅಪರಾಹ್ನ 2-30 ಗಂಟೆಗೆ ಸುಳ್ಯ ಕೇರ್ಪಳದ ಶ್ರೀ ದುರ್ಗಾಪರಮೇಶ್ವರಿ ಕಲಾ ಮಂದಿರದಲ್ಲಿ ಆಯೋಜಿಸಲಾಗಿದೆ. ಈ ಸಮಾರಂಭದಲ್ಲಿ ಚಿಂತಕರು ಸಾಹಿತಿಗಳಾದ ಶ್ರೀ ಲಕ್ಷ್ಮೀಶ ತೋಳ್ಪಾಡಿ ಇವರನ್ನು ಸನ್ಮಾನಿಸಲಾಗುವುದು. ಶ್ರೀ ಅಣ್ಣ ವಿನಾಯಚಂದ್ರ ಇವರ ಬಗ್ಗೆ ರಚಿತವಾದ ‘ಕೊಳಲ ಕೈ ಹಿಡಿದು’ ಎಂಬ ಕೃತಿಯನ್ನು ಗಿರೀಶ್ ಭಾರದ್ವಾಜ್ ಇವರು ಲೋಕಾರ್ಪಣೆಗೊಳಿಸಲಿರುವರು. ಬೆಂಗಳೂರಿನ ಡಾ. ದೀಪಾ ಫಡ್ಕೆ ಕೃತಿ ಪರಿಚಯ ಮಾಡಲಿದ್ದು, ಕೃತಿಯ ಲೇಖಕರಾದ ಶ್ರೀ ಅರವಿಂದ ಚೊಕ್ಕಾಡಿಯವರು ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದಾರೆ. ಶ್ರೀ ಲಕ್ಷ್ಮೀಶ ತೋಳ್ಪಾಡಿ ಕುಮಾರಧಾರೆ ನದಿಯ ಪಕ್ಕದ ಶಾಂತಿಗೋಡಿನಲ್ಲಿ ನಮ್ಮ ಬಿಂಬವನ್ನು ಪ್ರತಿಬಿಂಬಿಸುವ ಆ ನದಿಯ ಹಾಗೆ ಅನುಭಾವದಲ್ಲಿ ತನ್ನ ಬದುಕನ್ನು ಬಿಂಬಿಸಿಕೊಂಡು…

Read More

ಮೂಡುಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ಮೂಡುಬಿದಿರೆ ಇದರ ಆಳ್ವಾಸ್ ತುಳು ಸಂಸ್ಕೃತಿ ಅಧ್ಯಯನ ಕೇಂದ್ರದ ವತಿಯಿಂದ ದಿನಾಂಕ 11 ಜನವರಿ 2025ರಂದು ‘ತುಳು ವಿಚಾರಗೋಷ್ಠಿ’ಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ಧನಂಜಯ ಮೂಡುಬಿದಿರೆ ಇವರು ಮಾತನಾಡಿ “ತುಳುವಿನ ಬಗ್ಗೆ ಹಿಂಜರಿಕೆಯ ಕಾಲವೊಂದಿತ್ತು. ಇಂದು ತುಳುವಿನ ಬಗ್ಗೆ ಗೌರವ ಪ್ರಾಪ್ತವಾದ ಕಾಲ. ಅಪೂರ್ವ ದಾಖಲೀಕರಣಕ್ಕೆ ಸೂಕ್ಷ್ಮ ಅಧ್ಯಯನಕ್ಕೆ ವಿಪುಲ ಅವಕಾಶವಿದೆ. ತುಳುವಿನಲ್ಲಿ ಬಹು ಭಾಷಿಕ ವೈವಿಧ್ಯ ಮತ್ತು ಸಾಂಸ್ಕೃತಿಕ ವೈವಿಧ್ಯವನ್ನು ಕುತೂಹಲ ಮತ್ತು ಗೌರವದಿಂದ ನೋಡುವ ಮನೋಭಾವ ಲೇಖಕನಿಗೆ ಅಗತ್ಯ” ಎಂದು ನುಡಿದರು. ಸಂಯೋಜಕ ಡಾ. ಯೋಗೀಶ ಕೈರೋಡಿ ಪ್ರಸ್ತಾವನೆಗೈದರು. ವಿದ್ಯಾರ್ಥಿಗಳಾದ ಹೃಷಿಕೇಶ್, ತೇಜಸ್, ಅರ್ಚನಾ, ಸಂಚನಾ, ಶ್ರೇಯಸ್, ಪ್ರಿಥ್ವಿಜಾ, ಅನೂಷ ಕ್ರಮವಾಗಿ ನಾಗಬನ, ಅಜಿಲ ಸೀಮೆ, ಕೊರಗ ತನಿಯ, ತುಳುವರ ಆರಾಧನೆ, ಕೋಟಿ, ಚೆನ್ನಯ ಅವಳಿ ಆರಾಧನೆ, ಆಚರಣಾ ಪದ್ದತಿಯ ಬಗ್ಗೆ ವಿಚಾರ ಮಂಡಿಸಿದರು. ಪ್ರಾಂಶುಪಾಲ ಡಾ. ಕುರಿಯನ್, ಉಪನ್ಯಾಸಕರಾದ ಡಾ. ಜ್ಯೋತಿ ರೈ,…

Read More

ಮಂಗಳೂರು: ಸಂಗೀತ ಕ್ಷೇತ್ರದ ಯುವ ಪ್ರತಿಭೆ, ದೇಶ ವಿದೇಶಗಳಲ್ಲಿ ಖ್ಯಾತಿ ಗಳಿಸಿದ ಯುವ ಗಾಯಕಿ ಸೂರ್ಯಗಾಯತ್ರಿ ಅವರ ಹಾಡುಗಾರಿಕೆ ರಾಮಂ ಭಜೇ ಜ. 12ರಂದು ಸಂಜೆ 6 ಗಂಟೆಗೆ ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ. ಹನುಮಾನ್ ಚಾಲಿಸ್ ಸೇರಿದಂತೆ ಹತ್ತು ಹಲವು ಹಾಡುಗಳು, ಕರ್ನಾಟಕ ಸಂಗೀತವನ್ನು ವಿಶ್ವದ ಶ್ರೇಷ್ಠ ವೇದಿಕೆಯಲ್ಲಿ ಪ್ರಸ್ತುತ ಪಡಿಸಿದ, ಸಾಮಾಜಿಕ ಜಾಲ ತಾಣದಲ್ಲಿ ವೀಕ್ಷಣೆಯಿಂದಲೇ ಖ್ಯಾತಿ ಪಡೆದ ಬಾಲ ಪ್ರತಿಭೆ ಸೂರ್ಯಗಾಯತ್ರಿ ಅವರು ‘ಮ್ಯೂಸಿಕಲ್ ಸೆಲೆಬ್ರೇಷನ್ ಆಫ್ ರಾಮ’ ಎಂಬ ಪರಿಕಲ್ಪನೆಯೊಂದಿಗೆ ‘ರಾಮಂ ಭಜೇ’ ಎಂಬ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಸಂಗೀತಾಸಕ್ತರಿಗೆ ಉಚಿತ ಕಾರ್ಯಕ್ರಮವಾಗಿದ್ದು, 15 ನಿಮಿಷದ ಮೊದಲು ಆಸೀನರಾಗಬೇಕಾಗಿ ಸಂಘಟಕರಾದ ಸಂಗೀತ ಭಾರತಿ ಪ್ರತಿಷ್ಠಾನ ಪ್ರಕರಣೆಯಲ್ಲಿ ವಿನಂತಿಸಿದೆ. ಏಮ್ ಫಾರ್ ಸೇವಾ ಸಂಸ್ಥೆಯು 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮೊತ್ತ ಮೊದಲ ಬಾರಿಗೆ ಮಂಗಳೂರಿನಲ್ಲಿ ಸಂಗೀತಾಸಕ್ತರಿಗೆ ಹೊಸ ರೀತಿಯ ಸಂಗೀತಾನುಭವ ನೀಡಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಿದೆ. ಸೂರ್ಯಗಾಯತ್ರಿ ಅವರು ನಾನಾ ಹಾಡುಗಳ ಮೂಲಕ ರಾಮಾರಾಧನೆಯನ್ನು…

Read More

‘ನಿರ್ವಾಣಂ’ ಮಲೆಯಾಳ ರಂಗಭೂಮಿಯಲ್ಲಿ ನಾಟಕಕಾರರು ಮತ್ತು ನಿರ್ದೇಶಕರಾಗಿ ಬಹಳಷ್ಟು ಕಾಲ ದುಡಿದು ಹೆಸರು ಮಾಡಿದ ತಯ್ಯುಳ್ಳತಿಲ್ ರಾಜನ್ 1982ರಲ್ಲೇ ಬರೆದ ಒಂದು ಪ್ರಭಾವಶಾಲಿ ನಾಟಕ. ‘ರೋಗ, ವಾರ್ಧಕ್ಯ ಮತ್ತು ಸಾವುಗಳಿಗೆ ಪರಿಹಾರ ಹುಡುಕುತ್ತ ಸಿದ್ಧಾರ್ಥನು ಮಾಡಿದ ಪಯಣವು ನಾಟಕಕಾರರಿಗೊಂದು ಸವಾಲೆಸೆಯಬಲ್ಲ ವಸ್ತುವಾಗಿದೆ’ ಎಂಬ ಮಲೆಯಾಳದ ಖ್ಯಾತ ನಾಟಕಕಾರ ಜಿ. ಶಂಕರ ಪಿಳ್ಳೆಯವರ ಮಾತುಗಳಿಂದ ಸ್ಫೂರ್ತಿ ಹೊಂದಿ ಅವರು ಬರೆದ ನಾಟಕ ಇದು. ಮೂಲ ಮಲೆಯಾಳದಲ್ಲಿರುವ 29 ಪುಟಗಳ ಈ ನಾಟಕವನ್ನು ಕೇರಳದ ಕೋಝಿಕ್ಕೋಡು ಜಿಲ್ಲೆಯ ವಡಗರದಲ್ಲಿರುವ ಟಿ.ಕೆ. ವಿಜಯ ರಾಘವನ್ ಮತ್ತು ಕೆ.ಪಿ. ಸುನಿಲ್ ಕುಮಾರ್ ಎಂಬವರು ಆಸಕ್ತಿ ವಹಿಸಿ ಐದು ಭಾಷೆಗಳಿಗೆ (ಹಿಂದಿ : ಡಾ. ಹೀನಾ, ಕನ್ನಡ :ಡಾ. ನಾ.ದಾ. ಶೆಟ್ಟಿ, ತಮಿಳು : ಡಾ. ಎಂ. ರಘುರಾಮ್, ಸಂಸ್ಕೃತ : ಎ.ಅ. ಅಮ್ಮಿಣಿ ವರ್ಗೀಸ್, ಇಂಗ್ಲೀಷ್ : ಕೆ.ಪಿ. ಸುನಿಲ್ ಕುಮಾರ್) ಅನುವಾದ ಮಾಡಿಸಿ Nirvana : Hexalingual Edition – A Play by Thayyullathil…

Read More

ಮಂಗಳೂರು: 7ನೇ ವರ್ಷದ ಮಂಗಳೂರು ಸಾಹಿತ್ಯ ಉತ್ಸವದ ಉದ್ಘಾಟನಾ ಕಾರ್ಯಕ್ರಮವನ್ನು ಮಂಗಳೂರಿನ ಟಿ.ಎಂ.ಎ. ಪೈ ಸಭಾಂಗಣದಲ್ಲಿ ದಿನಾಂಕ 11 ಜನವರಿ 2024ರಂದು ವಿಜೃಂಭಣೆಯಿದ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಖ್ಯಾತ ಲೇಖಕ ಎಸ್.ಎಲ್. ಭೈರಪ್ಪ ಮತ್ತು ಮಿಥಿಕ್ ಸೊಸೈಟಿಯ ಗೌರವ ಕಾರ್ಯದರ್ಶಿ ಡಾ. ರವಿ ಮುಖ್ಯ ಅತಿಥಿಗಳಾಗಿ ವೇದಿಕೆಯನ್ನು ಅಲಂಕರಿಸಿದರು. ಭಾರತ್ ಫೌಂಡೇಶನ್ ಟ್ರಸ್ಟ್ ಇದರ ಪ್ರತಿನಿಧಿ ಸುನಿಲ್ ಕುಲ್ಕರ್ಣಿ ಸ್ವಾಗತ ಭಾಷಣ ನೆರವೇರಿಸಿದರು. ದೀಪ ಬೆಳಗುವ ಮೂಲಕ ಉತ್ಸವವನ್ನು ಪ್ರಾರಂಭಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದ ದಿವಂಗತ ನಾರ್ಬರ್ಟ್ ಡಿ’ಸೋಜ ಅವರಿಗೆ ನುಡಿನಮನ ಸಲ್ಲಿಸಲಾಯಿತು. ಎಸ್.ಎಲ್. ಭೈರಪ್ಪ ಅವರು 2007ರಲ್ಲಿ ಮೊದಲ ಬಾರಿಗೆ ಈ ಉತ್ಸವದಲ್ಲಿ ಭಾಗಿಯಾಗಿದ್ದ ನೆನಪಿನ ಕುರಿತಾಗಿ ಮಾತನಾಡುತ್ತಾ “ದಕ್ಷಿಣ ಕನ್ನಡ ಜಿಲ್ಲೆಯು ಎಲ್ಲಾ ಕ್ಷೇತ್ರಗಳಲ್ಲಿ ದೇಶಕ್ಕೆ ಮಾದರಿಯಾಗಿದೆ. ಉತ್ಸವದಲ್ಲಿ ದೇಶದಾದ್ಯಂತದ ಸಾಧಕರನ್ನು ಆಹ್ವಾನಿಸಿ, ವಿವಿಧ ವೇದಿಕೆಗಳ ಮೂಲಕ ಚರ್ಚೆಗಳನ್ನು ಏರ್ಪಡಿಸುತ್ತಿರುವುದು ಪ್ರಶಂಸನೀಯ. ಉತ್ಸವದಲ್ಲಿ ಚರ್ಚಿಸಲ್ಪಟ್ಟ ವಿಷಯಗಳು ಬೇಕಾದವರಿಗೆ ತಲುಪುತ್ತಿವೆಯೆ? ನೀವು ನಿರೀಕ್ಷಿಸಿರುವ…

Read More