Author: roovari

ಉದ್ಯಾವರ : ನಿರಂತರ್ ಉದ್ಯಾವರ್ (ರಿ.) ಇವರ ವತಿಯಿಂದ 8ನೇ ವರ್ಷದ ಬಹುಭಾಷಾ ನಿರಂತರ್ ನಾಟಕೋತ್ಸವವನ್ನು ದಿನಾಂಕ 05ರಿಂದ 08 ಫೆಬ್ರವರಿ 2026ರವರೆಗೆ ಪ್ರತಿದಿನ ಸಂಜೆ 6-30 ಗಂಟೆಗೆ ಉದ್ಯಾವರದ ಸರಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಆಯೋಜಿಸಲಾಗಿದೆ. ದಿನಾಂಕ 05 ಫೆಬ್ರವರಿ 2026ರಂದು ಸಂತೋಷ್ ನಾಯಕ್ ಪಟ್ಲ ಇವರ ರಂಗ ಪಠ್ಯ, ವಿನ್ಯಾಸ ಮತ್ತು ನಿರ್ದೇಶನದಲ್ಲಿ ಭೂಮಿಗೀತ ಸಾಂಸ್ಕೃತಿಕ ವೇದಿಕೆ ಪಟ್ಲ ಇವರಿಂದ ‘ನೆಲ ನೀರ್ ದ ದುನಿಪು’, ದಿನಾಂಕ 06 ಫೆಬ್ರವರಿ 2026ರಂದು ಚಿದಂಬರ ರಾವ್ ಜಂಬೆ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಶಿವಮೊಗ್ಗದ ರಂಗಾಯಣದ ರೆಪರ್ಟರಿ ಕಲಾವಿದರು ಅಭಿನಯಿಸುವ ‘ನಮ್ಮೊಳಗೊಬ್ಬ ಗಾಂಧಿ’, ದಿನಾಂಕ 07 ಫೆಬ್ರವರಿ 2026ರಂದು ಡೆನಿಸ್ ಮೊಂತೇರ್ ನಿರ್ದೇಶನದಲ್ಲಿ ಮಂಗಳೂರಿನ ಅಸ್ತಿತ್ವ (ರಿ.) ತಂಡದಿಂದ ‘ಭಾಂಗಾರ್ ಮನಿಸ್’, ದಿನಾಂಕ 08 ಫೆಬ್ರವರಿ 2026ರಂದು ಅರುಣ್ ಲಾಲ್ ರಚನೆ, ರಂಗರೂಪ ಮತ್ತು ನಿರ್ದೇಶನದಲ್ಲಿ ಕೇರಳದ ಲಿಟಲ್ ಅರ್ಥ್ ಸ್ಕೂಲ್ ಆಫ್ ಥಿಯೇಟರ್ ತಂಡದವರಿಂದ ‘ಕೂಹೂ’ ನಾಟಕಗಳು…

Read More

ಧಾರವಾಡ : ರಾಷ್ಟ್ರೀಯ ಸಾಹಿತ್ಯ ಸಾಂಸ್ಕೃತಿಕ ಸ್ವಾಯತ್ತ ಸಂಸ್ಥೆಯಾದ ಧಾರವಾಡ ಕಟ್ಟೆ (ರಿ.) ಇದರ ವತಿಯಿಂದ 359ನೇ ಕಾರ್ಯಕ್ರಮ ಕನ್ನಡ ಸಾಹಿತ್ಯ ಪರಂಪರೆ ಮತ್ತು ಸಮಕಾಲೀನತೆ ಉಪನ್ಯಾಸ ಮಾಲಿಕೆಯನ್ನು ದಿನಾಂಕ 05 ಫೆಬ್ರವರಿ 2026ರಂದು ಸಂಜೆ 6-00 ಗಂಟೆಗೆ ಧಾರವಾಡದಲ್ಲಿ ಹಮ್ಮಿಕೊಳ್ಳಲಾಗಿದೆ. ಉಡುಪಿ ಹಿರೆಯಡಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಜಯಪ್ರಕಾಶ್ ಶೆಟ್ಟಿ ಎಚ್. ಮತ್ತು ಕಲಬುರುಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ಪ್ರೊ. ಬಸವರಾಜ ಡೋಣೂರ ಇವರು ‘ಯಶೋಧರ ಚರಿತೆ ಎಂಬ ಮತಿ ಮತ್ತು ಮತಲೋಕ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.

Read More

ಮಂಗಲ್ಪಾಡಿ : ‘ಕಲಾಕುಂಚ’ ಕೇರಳ ಗಡಿನಾಡ ಶಾಖೆಯ ಪ್ರಾಯೋಜಕತ್ವದಲ್ಲಿ ಮಹಾಭಾರತದ ಗಮಕ ವಾಚನ ವ್ಯಾಖ್ಯಾನದ ಸಮಾರೋಪ ಸಮಾರಂಭ ಮಂಗಲ್ಪಾಡಿಯ ಶ್ರೀ ಶಾರದಾ ಭಜನಾ ಮಂದಿರದಲ್ಲಿ ದಿನಾಂಕ 01 ಫೆಬ್ರವರಿ 2026ರಂದು ನಡೆಯಿತು. ಕಳೆದ ಎರಡೂ ಮುಕ್ಕಾಲು ವರ್ಷಗಳಿಂದ ಪ್ರತಿ ಶನಿವಾರ ಗಮಕ ವಾಚನ ವ್ಯಾಖ್ಯಾನ ಕಾರ್ಯಕ್ರಮವನ್ನು ಶ್ರೀಮತಿ ಜಯಲಕ್ಷ್ಮಿ ಕಾರಂತ್ ಹಾಗೂ ದಿವ್ಯಾ ಕಾರಂತ್ ನಡೆಸಿಕೊಂಡು ಬರುತ್ತಾ ಇದ್ದರು. ಜೊತೆಗೆ ಕೆಲವು ಸಂಧರ್ಭಗಳಲ್ಲಿ ಶ್ರೀ ಮುರಳಿ ಯಾದವ್, ಶ್ರೀ ಶಶಿರಾಜ ನೀಲಂಗಳ, ಶ್ರೀ ಗುರುಮೂರ್ತಿ, ಕುಮಾರಿ ಅನೂಷಾ, ರಾಧಾಮಣಿ ಮೀಯಪದವು, ಚಂದನ್ ಕಾರಂತ್ ಸಹಕರಿಸಿದ್ದರು. ಗಮಕ ವಾಚನ ವ್ಯಾಖ್ಯಾನದ ಸಮಾರೋಪ ಸಮಾರಂಭದಲ್ಲಿ ಹಿರಿಯರಾದ ಶ್ರೀ ರಾಮಕಾರಂತರು ಮಹಾಭಾರತದ ಕರ್ನಾಟಕ ಭಾರತ ಕಥಾಮಂಜರಿ ಗ್ರಂಥಕ್ಕೆ ಆರತಿ ಬೆಳಗಿದರು. ಶ್ರೀಮತಿ ದಿವ್ಯಾ ಕಾರಂತ ಗ್ರಂಥವನ್ನು ವೇದಿಕೆಗೆ ತಂದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲಾಕುಂಚ ಕೇರಳ ಗಡಿನಾಡ ಶಾಖೆಯ ಸಂಸ್ಥಾಪಕರಾದ ಶ್ರೀಮತಿ ಜಯಲಕ್ಷ್ಮಿ ಕಾರಂತ್ ವಹಿಸಿದರು. ಧರ್ಮತ್ತಡ್ಕ ಹೈಯರ್ ಸೆಕೆಂಡರೀ ಸ್ಕೂಲ್ ಪ್ರಾಂಶುಪಾಲರಾದ ರಾಮಚಂದ್ರ ಭಟ್…

Read More

ಗುರುವಿನ ಜ್ಞಾನ ಸಾಗರದಲ್ಲಿ ಬೆರೆತು, ಕಲಾ ಪ್ರವಾಹದಲ್ಲಿ ಈಜುತ್ತಾ, ಕಲೆಯ ಆಳವನ್ನು ಅರಿಯುವ ಪ್ರಯತ್ನ ಮಾಡುತ್ತಾ ಸಾಗುವುದೇ ಕಲಾವಿದ/ಕಲಾವಿದೆಗೆ ಇರುವ ಸವಾಲು. ಕಲೆಯ ಕೈಂಕರ್ಯವೇ ಹಾಗೇ! ಸತತ ಪ್ರಯತ್ನ, ಪರಿಶ್ರಮದ ಅನಾವರಣ ಮತ್ತು ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ, ಪ್ರಬುದ್ಧತೆಯತ್ತ ಸಾಗುವ ಪ್ರಯತ್ನ ಮಾಡುವ ಮೂಲಕ ಸಾಗುವ ಪ್ರಕ್ರಿಯೆ. ಇದು ನಿರಂತರವಾಗಿರಬೇಕು. ಇದು ಒಬ್ಬರಿಂದ ಒಬ್ಬರಿಗೆ ವಿಭಿನ್ನವಾಗಿರುತ್ತದೆ. ಕೆಲವರಿಗೆ ಅಲ್ಪಜ್ಞಾನವೇ ಅದ್ಭುತಜ್ಞಾನವೆಂದು ಅನ್ನಿಸಿಬಿಡಬಹುದು, ಅದರ ಪರಿಧಿ ಅಲ್ಪವೇ. ಪರಿಪೂರ್ಣತೆ ಎನ್ನುವುದು ದೀರ್ಘಾವಧಿಯ ಪರಿಕಲ್ಪನೆ ಎನ್ನುವುದನ್ನು ಅರಿತ ಅನೇಕ ಕಲಾವಿದರು ಇದ್ದಾರೆ. ಭರತನಾಟ್ಯದ ಮೂಲ ನೆಲೆ ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ನಡೆದ ನೃತ್ಯ ಕಾರ್ಯಕ್ರಮವನ್ನು ನೋಡುವ ಮತ್ತು ಹಲವಾರು ಅಂಶಗಳನ್ನು ಗಳಿಸಿಕೊಳ್ಳುವ ಅವಕಾಶ ನನಗೆ ಫೆಬ್ರವರಿ 1ರಂದು ದೊರಕಿತು. ನಟ್ಟುವಾಂಗದಲ್ಲಿ ನನ್ನದೇ ವಿದ್ಯಾರ್ಥಿ ಆಗಿರುವ ಉತ್ತಮ ಭರತನಾಟ್ಯ ಕಲಾವಿದ ಎನ್. ದೇಬಾಶಿಷ್ ಇವನ ಪೂರ್ಣ ಪ್ರಮಾಣದ ಮಾರ್ಗ ನೃತ್ಯವು ಪಾರ್ಥಸಾರಥಿ ಸ್ವಾಮಿ ಸಭಾ ಚೆನ್ನೈ ಇಲ್ಲಿ ನಡೆಯಿತು. ಚೆನ್ನೈನಲ್ಲಿರುವ ಸಾಧಕ ಗುರುಗಳಾದ ಕಲೈಮಾಮಣಿ…

Read More

ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ‘ಕಾವ್ಯಾಂ ವ್ಹಾಳೊ-11’ ಶೀರ್ಷಿಕೆಯಡಿ ಕವಿಗೋಷ್ಠಿಯನ್ನು ಮಂಗಳೂರಿನ ಲಾಲ್ ಬಾಗ್ ನಲ್ಲಿರುವ ಅಕಾಡೆಮಿ ಸಭಾಂಗಣದಲ್ಲಿ ದಿನಾಂಕ 07 ಫೆಬ್ರವರಿ 2026ರಂದು ಸಂಜೆ 4-00 ಗಂಟೆಗೆ ಹಮ್ಮಿಕೊಂಡಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್‌ರವರು ವಹಿಸಿಕೊಳ್ಳಲಿದ್ದಾರೆ. ಕೊಂಕಣಿಯ ಜನಪ್ರಿಯ ಗಾಯಕರಾದ ಶ್ರೀಮತಿ ಝೀನಾ ಪಿರೇರಾರವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕೊಂಕಣಿಯ ಹಿರಿಯ ಕಾರ್ಯಕರ್ತೆ ಹಾಗೂ ಹೆಸರಾಂತ ಕವಯತ್ರಿಗಳಾದ ಶ್ರೀಮತಿ ಜ್ಯೂಲಿಯೆಟ್ ಮೊರಾಸ್ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಖ್ಯಾತ ಕವಿಗಳಾದ ಶ್ರೀ ವಿನ್ಸೆಂಟ್‌ ಆಳ್ವರವರು ಕವಿಗೋಷ್ಟಿಯ ಅಧ್ಯಕ್ಷತೆಯನ್ನು ವಹಿಸಲಿದ್ದು, ಮ್ಯಾಕ್ಸಿಂ ಲುದ್ರಿಗ್ ಬೊಂದೆಲ್, ಸೀಮಾ ಕಾಮತ್, ಜಗದೀಶ್ ಭಂಡಾರಿ, ಮಾರ್ಟಿನ್ ಆರ್. ಡಿಸೋಜಾ, ಸಿ. ಸಿಲ್ವಿಯಾ ಸುವಾರಿಸ್, ವನಿತಾ ನಾಯಕ್, ರೋಶನ್ ಕ್ರಾಸ್ತಾ, ಜೊಯ್ಸ್ ಪಿಂಟೊ ಮತ್ತು ಫೆಲ್ಸಿ ಲೋಬೊ ಇವರು ತಮ್ಮ ಕವಿತೆಗಳನ್ನು ವಾಚಿಸುವರು. ಕೊಂಕಣಿ ಭಾಂದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೋರಲಾಗಿದೆ.

Read More

ಮಂಗಳೂರು : ವಿಶ್ವ ಕೊಂಕಣಿ ಕೇಂದ್ರದ ಆಶ್ರಯದಲ್ಲಿ ವಿಶ್ವ ಕೊಂಕಣಿ ನಾಟಕ ಮಹೋತ್ಸವ ಹಾಗೂ ಪ್ರತಿಷ್ಠಿತ ಡಾ. ಪಿ. ದಯಾನಂದ ಪೈ ವಿಶ್ವ ಕೊಂಕಣಿ ರಂಗಶ್ರೇಷ್ಠ ಹಾಗೂ ಅನುವಾದ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ದಿನಾಂಕ 01 ಫೆಬ್ರವರಿ 2026ರಂದು ಕೊಡಿಯಾಲ್ ಬೈಲ್ ನ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ನಡೆಯಿತು. ಕೊಂಕಣಿಯ ಹಿರಿಯ ರಂಗಕರ್ಮಿ ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ ಇವರಿಗೆ ಡಾ. ಪಿ. ದಯಾನಂದ ಪೈ ವಿಶ್ವ ಕೊಂಕಣಿ ರಂಗಶ್ರೇಷ್ಠ ಪ್ರಶಸ್ತಿ ಹಾಗೂ ಹಿರಿಯ ಕೊಂಕಣಿ ಅನುವಾದಕಿ ಮಾಯಾ ಅನಿಲ್ ಖರಂಗಟೆ ಇವರಿಗೆ ಡಾ. ಪಿ. ದಯಾನಂದ ಪೈ ವಿಶ್ವ ಕೊಂಕಣಿ ಅನುವಾದ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಪ್ರಶಸ್ತಿ ಫಲಕ ಸೇರಿದಂತೆ ತಲಾ ರೂ. ಒಂದು ಲಕ್ಷ ನಗದು ಒಳಗೊಂಡಿದೆ. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ ಅವರು, “ನಾಟಕ ರಂಗದಲ್ಲಿ ಪ್ರೇಕ್ಷಕರಿಗೆ ಮನೋರಂಜನೆ ಸಿಗುತ್ತದೆ. ಆದರೆ, ಕಲಾವಿದರು ಹಾಗೂ ಬರಹಗಾರರು ಅನೇಕ ಸವಾಲು, ಸಂಕಷ್ಟಗಳನ್ನು ಎದುರಿಸುತ್ತಾರೆ. ವಿಶ್ವ ಕೊಂಕಣಿ…

Read More

ಕುಂಭಾಶಿ : ಹೊಸ ತಲೆಮಾರಿನ ಅರ್ಥದಾರಿಗಳ ಪರಿಶೋಧದ ಅಡಿಯಲ್ಲಿ ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ ಈವರೆಗೆ 12 ತಾಳಮದ್ದಳೆಯನ್ನು ಆಯೋಜಿಸಿದ್ದು, ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಪ್ರತೀ ಸಂಕಷ್ಟಹರ ಚತುರ್ಥಿ ದಿನದಂದು ಯಕ್ಷ ನುಡಿಸಿರಿ ಬಳಗ ಸಿದ್ಧಾಪುರ ಸಹಯೋಗದೊಂದಿಗೆ ಶ್ರೀ ವಿನಾಯಕ ದೇವಸ್ಥಾನದ ಸಹಕಾರದೊಂದಿಗೆ ದಿನಾಂಕ 05 ಫೆಬ್ರವರಿ 2026ರಂದು ಸಂಜೆ 4-00 ಗಂಟೆಗೆ ಅರ್ಥಾಂಕುರ-14 ಕಾರ್ಯಕ್ರಮವನ್ನು ಆಯೋಜಿಸಿದೆ. ಪ್ರಸಿದ್ಧ ಅರ್ಥದಾರಿ ವಾಸುದೇವ ರಂಗ ಭಟ್ ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಯಾಗಿ ಪ್ರಸಿದ್ಧ ವಾಗ್ಮಿ ಪವನ್ ಕಿರಣ್‌ಕೆರೆ ಭಾಗವಹಿಸಲಿದ್ದಾರೆ. ಯುಗಳ ಸಂವಾದ ಕಾರ್ಯಕ್ರಮವಾಗಿ ಈ ಇಬ್ಬರು ಅರ್ಥದಾರಿಗಳು ಮಾತಿನ ಮಂಟಪದಲ್ಲಿ ಕಾರ್ಯಕ್ರಮ ನೆರವೇರಿಸಲಿದ್ದಾರೆ. ಭಾಗವತರಾಗಿ ಲಂಬೋದರ ಹೆಗಡೆ ನಿಟ್ಟೂರು, ಮದ್ದಳೆವಾದಕರಾಗಿ ರಾಘವೇಂದ್ರ ಹೆಗಡೆ ಯಲ್ಲಾಪುರ, ಚಂಡೆಯಲ್ಲಿ ಕುಮಾರ ಅಮೀನ್ ಕೊಕ್ಕರ್ಣಿ ಭಾಗವಹಿಸಲಿದ್ದಾರೆ. ಬಳಿಕ ಶ್ರೀಪರ್ಣ ಯಕ್ಷ ಬಳಗ ತೆಕ್ಕಟ್ಟೆ ಕಲಾವಿದರಿಂದ ‘ವರಾಹ ರೂಪಂ’ ಯಕ್ಷಗಾನ ಪ್ರದರ್ಶನಗೊಳ್ಳಲಿದ್ದು, ಭಾಗವತರಾಗಿ ಪಂಚಮಿ ವೈದ್ಯ ತೆಕ್ಕಟ್ಟೆ, ಮದ್ದಳೆವಾದಕರಾಗಿ ರಾಘವೇಂದ್ರ ಹೆಗಡೆ ಹಾಗೂ…

Read More

ಬಳ್ಳಾರಿ : ಟಿ.ಕೆ. ಗಂಗಾಧರ ಪತ್ತಾರ ಇವರ ‘ಕನ್ನಡಕೆ ಬೆಳಕಿತ್ತ ಪಶ್ಚಿಮದ ಹಣತೆಗಳು’ ಪುಸ್ತಕ ಲೋಕಾರ್ಪಣೆ ಸಮಾರಂಭವನ್ನು ದಿನಾಂಕ 08 ಫೆಬ್ರುವರಿ 2026ರಂದು ಬೆಳಗ್ಗೆ 10-00 ಗಂಟೆಗೆ ಬಳ್ಳಾರಿ ಡಾ. ರಾಜ್ ಕುಮಾರ್ ರಸ್ತೆಯಲ್ಲಿರುವ ಸಾಂಸ್ಕೃತಿಕ ಸಮುಚ್ಚಯ ಆವರಣದ ಕನ್ನಡ ಭವನದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತು ಬಳ್ಳಾರಿ ಜಿಲ್ಲಾಧ್ಯಕ್ಷರಾದ ಡಾ. ನಿಷ್ಠಿ ರುದ್ರಪ್ಪ ಇವರು ಉದ್ಘಾಟನೆ ಮಾಡಲಿದ್ದು, ಲೋಹಿಯಾ ಪ್ರಕ್ರಶನದ ಸಿ. ಚೆನ್ನಬಸವಣ್ಣ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ. ಸಿ.ಬಿ. ಚಿಲ್ಕರಾಗಿ ಕೃತಿ ಲೋಕಾರ್ಪಣೆ ಮಾಡಲಿದ್ದು, ವಿಶ್ರಾಂತ ಕಲಾ ಶಿಕ್ಷಕ ಕೆ.ಬಿ. ಸಿದ್ಧಲಿಂಗಪ್ಪ ಕೃತಿ ಪರಿಚಯ ಮಾಡಲಿದ್ದಾರೆ.

Read More

ಸುಳ್ಯ : ಸುಳ್ಯ ಪ್ರೆಸ್ ಕ್ಲಬ್, ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ತಾಲೂಕು ಘಟಕದ ಆಶ್ರಯದಲ್ಲಿ ದಿನಾಂಕ 31 ಜನವರಿ 2026ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಲೇಖಕ, ಸಂಶೋಧಕ ಡಾ. ಸುಂದರ ಕೇನಾಜೆಯವರ ‘ಮಾತಿಲ್ಲದ ಮಾತು’ ಅಂಕಣ ಬರಹಗಳ ಕೃತಿ ಬಿಡುಗಡೆ ಸಮಾರಂಭ ನಡೆಯಿತು. ಈ ಸಮಾರಂಭದಲ್ಲಿ ಕೃತಿ ಲೋಕಾರ್ಪಣೆಗೊಳಿಸಿದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಹಿರಿಯ ಸಾಹಿತಿ ಹಾಗೂ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಮಾತನಾಡಿ “ಅನ್ಯಾಯದ ವಿರುದ್ಧ ಧ್ವನಿ ಎತ್ತಿ ಸಾಮಾಜಿಕ ನ್ಯಾಯ ದೊರಕಿಸಿಕೊಡುವುದೇ ಕಲೆ ಮತ್ತು ಸಾಹಿತ್ಯದ ಮೂಲ ಧ್ಯೇಯ. ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಸಾಧ್ಯವಾಗದಿದ್ದರೆ ಸ್ವಸ್ಥ ಸಮಾಜ ಕಟ್ಟಲು ಸಾಧ್ಯವಿಲ್ಲ. ಸಮಾಜದಲ್ಲಿ ಕಂಡ ಅನ್ಯಾಯದ ವಿರುದ್ಧ ಧ್ವನಿ ಎತ್ತಿ ಅದನ್ನು ಎದುರಿಸುವ ಶಕ್ತಿಯನ್ನು ಸಾಹಿತ್ಯ ಮತ್ತು ಕಲೆಗಳು ಪ್ರದರ್ಶಿಸಬೇಕು. ವಾಸ್ತವವನ್ನು ಬಿಂಬಿಸದಿದ್ದರೆ ಅಂತಹಾ ಸಾಹಿತ್ಯ ಮತ್ತು ಕಲೆ ಅಪ್ರಸ್ತುತವಾಗುತ್ತದೆ. ಒಬ್ಬ ಸಾಹಿತಿ ಒಂದು ಪದ ಸೃಷ್ಟಿಸಿದರೆ ಅದು…

Read More

ಮಂಗಳೂರು : ನೃತ್ಯಾಂಗನ್ ಟ್ರಸ್ಟ್ ಈ ಬಾರಿ ತನ್ನ 13ನೇ ಆವೃತ್ತಿಯ ‘ಸಮರ್ಪಣ್ 2026’ ಎರಡು ದಿನಗಳ ಭಾರತೀಯ ಶಾಸ್ತ್ರೀಯ ನೃತ್ಯೋತ್ಸವನ್ನು ಮಂಗಳೂರಿನ ಡಾನ್‌ಬಾಸ್ಕೊ ಹಾಲ್‌ನಲ್ಲಿ ದಿನಾಂಕ 7 ಮತ್ತು 8 ಫೆಬ್ರವರಿ 2026ರಂದು ಪ್ರತಿದಿನ ಸಂಜೆ ಗಂಟೆ 5-45ಕ್ಕೆ ಆಯೋಜಿಸಿದೆ. ದಿನಾಂಕ 7 ಫೆಬ್ರವರಿ 2026ರಂದು ನಡೆಯುವ ಕಾರ್ಯಕ್ರಮಕ್ಕೆ ಶಾರದಾ ನಾಟ್ಯಾಲಯ ಕುಳಾಯಿ ಹೊಸಬೆಟ್ಟುವಿನ ಕಲಾ ನಿರ್ದೇಶಕಿ, ಗುರು ಭಾರತಿ ಸುರೇಶ್ ಚಾಲನೆ ನೀಡುವರು. ಅನಂತರ, ಮೈಸೂರಿನ ಶ್ರೀದುರ್ಗಾ ನೃತ್ಯ ಅಕಾಡೆಮಿಯ ಶ್ರೀವಿದ್ಯಾ ಶಶಿಧರ್ ಅವರ ಶಿಷ್ಯರಾದ ಭುವನ್ ಕುಮಾರ್ ಎಸ್, ಸ್ಪೂರ್ತಿ ಬಿ.ವಿ. ಮತ್ತು ನಿಸರ್ಗ ಎಸ್. ಭರತನಾಟ್ಯ ತ್ರಯ ಪ್ರದರ್ಶನ ನೀಡುವರು. ನಂತರ ಚೆನ್ನೈಯ ಅಶ್ವತಿ ಸುರೇಶ್ ಏಕವ್ಯಕ್ತಿ ಭರತನಾಟ್ಯ ಪ್ರದರ್ಶನ ನೀಡುವರು. ದಿನಾಂಕ 08 ಫೆಬ್ರವರಿ 2026ರಂದು ಕಲ್ಲಡ್ಕದ ಕಲಾನಿಕೇತನ ಡಾನ್ಸ್ ಫೌಂಡೇಶನ್ ಇದರ ಕಲಾ ನಿರ್ದೇಶಕಿ, ಗುರು ವಿದ್ಯಾ ಮನೋಜ್ ಚಾಲನೆ ನೀಡುವರು. ನಂತರ ಬೆಂಗಳೂರಿನ ಗೌರಿ ಮನೋಹರಿ ಎಚ್. ಹಾಗೂ ಕಿನ್ನಿಗೋಳಿ ಮೂಲದ…

Read More