Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಕಲ್ಲಚ್ಚು ಪ್ರಕಾಶನ ಹಾಗೂ ಡಯಟ್ ಮಂಗಳೂರು ಆಶ್ರಯದಲ್ಲಿ ಸಾಹಿತಿ ಮನೋಜ್ ಕುಮಾರ್ ಶಿಬಾರ್ಲ ಇವರ ‘ಕಾಲು ಸಾವಿರ’ ಚುಟುಕುಗಳ ಕೃತಿ ಲೋಕರ್ಪಣಾ ಸಮಾರಂಭವು ದಿನಾಂಕ 22 ಏಪ್ರಿಲ್ 2025ರ ಮಂಗಳವಾರದಂದು ಮಂಗಳೂರಿನ ಜೈಲ್ ರಸ್ತೆಯಲ್ಲಿರುವ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್) ಇಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳಿಸಿದ ಸಂಘಟಕ ಹಾಗೂ ಸಾಹಿತಿ ಶಾಂತಾರಾಮ ಶೆಟ್ಟಿ ಮಾತನಾಡಿ “ಸಾಹಿತಿಯಾದವರು ಪದಗಳ ಬಳಕೆಯ ಬಗ್ಗೆ ಎಚ್ಚರ ವಹಿಸಬೇಕು. ತಪ್ಪುಗಳು ನಡೆದಲ್ಲಿ ಸಾಹಿತ್ಯವೇ ಅನರ್ಥವಾಗುತ್ತದೆ. ಬರೆಯುವ ಸಾಹಿತ್ಯದಲ್ಲಿ ಸಾಲುಗಳಿಗಿಂತ ಸೋಲ್(ಆತ್ಮ) ಮುಖ್ಯವಾಗಿದೆ. ಬರೆದದ್ದೆಲ್ಲ ಕವನವಾಗಲು ಸಾಧ್ಯವಿಲ್ಲ. ಬರವಣಿಗೆಗೆ ಸ್ವಜ್ಞಾನ ಅನುಭವ ಅಗತ್ಯ. ಸಾಹಿತ್ಯ ಬರೆಯುವ ಮೊದಲು ಓದುವ ಹವ್ಯಾಸ ಹೊಂದಿರಬೇಕು. ಹತ್ತು ಕೃತಿಗಳನ್ನು ಓದಿ ಅರ್ಥೈಸಿದ ಬಳಿಕ ಒಂದು ಕೃತಿ ಬರೆಯುವ ಪ್ರಯತ್ನ ಮಾಡಬೇಕು. ಓದುಗನನ್ನು ಮನದಟ್ಟು ಮಾಡುವಂತೆ ಬರೆಯುವುದೇ ಸಾಹಿತ್ಯ. ಪ್ರತೀ ಸಾಲಿನಲ್ಲೂ ಹೊಸತನದೊಂದಿಗೆ ಭಿನ್ನ ಅರ್ಥ ಹಾಗೂ ಸಂದೇಶ ನೀಡುವ ನಿಟ್ಟಿನಲ್ಲಿ ಸಾಹಿತಿಗಳು ಪ್ರಯತ್ನಿಸಬೇಕಾಗಿದೆ” ಎಂದರು. ಜಿಲ್ಲಾ ಶಿಕ್ಷಣ…
ಮಂಗಳೂರು : ಕೆನರಾ ಕಾಲೇಜು ಹಾಗೂ ಅಖಿಲ ಭಾರತೀಯ ಸಾಹಿತ್ಯ ಷರಿಷದ್ ಮಂಗಳೂರು ತಾಲೂಕು ಆಯೋಜಿಸಿದ ಉಪನ್ಯಾಸಕಿ ಶ್ರೀಮತಿ ಶೈಲಜಾ ಪುದುಕೋಳಿಯವರ ‘ಕನವರಿಕೆ’ ಕೃತಿ ಲೋಕಾರ್ಪಣಾ ಸಮಾರಂಭವು ದಿನಾಂಕ 21 ಏಪ್ರಿಲ್ 2025ರಂದು ಮಂಗಳೂರಿನ ಕೆನರಾ ಪದವಿ ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಪುಸ್ತಕ ಲೋಕಾರ್ಪಣೆಗೊಳಿಸಿದ ಕೆನರಾ ಕಾಲೇಜಿನ ಪ್ರಾಂಶುಪಾಲೆ ಡಾ. ಪ್ರೇಮಲತಾ ವಿ. ಮಾತನಾಡಿ “ಭಾಷಾ ಪ್ರಾಧ್ಯಾಪಕರ ಪಾಠ ಪ್ರವಚನಗಳನ್ನು ಕೇಳುವುದೇ ಖುಷಿಯ ವಿಷಯ,. ಅವರ ಭಾಷಾ ಪ್ರೌಢಿಮೆ, ಪದಗಳ ಜೋಡಣೆ ಬಹಳ ಅಥ೯ಪೂಣ೯ ಹಾಗೂ ಸುಂದರ” ಎಂದರು ಕೆನರಾ ಪ. ಪೂ. ಕಾಲೇಜಿನ ಕನ್ನಡ ಉಪನ್ಯಾಸಕರಾದ ಶ್ರೀ ರಘು ಇಡ್ಕಿದು ಕೃತಿ ಪರಿಚಯ ಮಾಡಿದರು. ಅಮೃತ ಪತ್ರಿಕೆಯ ಸಂಪಾದಕರಾದ ಶ್ರೀಮತಿ ಮಾಲತಿ ಶೆಟ್ಟಿ ಮಾಣೂರು ಅವರು ಕಾಯ೯ಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿ ಕೆನರಾ ಕಾಲೇಜಿನ ಆಡಳಿತಾಧಿಕಾರಿ ಶ್ರೀಮತಿ ದೀಪ್ತಿ ನಾಯಕ್, ಕೆನರಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಶ್ರೀಮತಿ ವಾಣಿ ಯು, ಲೇಖಕಿ ಶ್ರೀಮತಿ ಶೈಲಜಾ ಪುದುಕೋಳಿ ಉಪಸ್ಥಿತರಿದ್ದರು.…
ಉಡುಪಿ : ಯಕ್ಷ ಶಿಕ್ಷಣ ಟ್ರಸ್ಟ್ (ರಿ.), ಉಡುಪಿ ಸಂಸ್ಥೆಯು ಯಕ್ಷಗಾನ ಕಲಾರಂಗದ ಐವೈಸಿಯಲ್ಲಿ ಆಯೋಜಿಸಿದ್ದ ನಾಲ್ಕು ದಿನಗಳ ಮುಖವರ್ಣಿಕೆ ಶಿಬಿರದ ಸಮಾರೋಪ ಸಮಾರಂಭವು ದಿನಾಂಕ 18 ಏಪ್ರಿಲ್ 2025 ರಂದು ನಡೆಯಿತು. ಗುರು ಸಂಜೀವ ಸುವರ್ಣರ ನೇತೃತ್ವದಲ್ಲಿ ಯಕ್ಷಗಾನ ಗುರುಗಳಾದ ನರಸಿಂಹ ತುಂಗ ಮತ್ತು ಪ್ರಸಾಧನ ತಜ್ಞ ಮಿಥುನ್ ನಾಯಕ್ ಮಕ್ಕಳಿಗೆ ಮಾರ್ಗದರ್ಶನ ನೀಡಿದರು. ಸಮಾರೋಪ ಸಮಾರಂಭದಲ್ಲಿ ನಿವೃತ್ತ ಪ್ರಾಂಶುಪಾಲರಾದ ಎ. ರಘುಪತಿ ಭಟ್ ಅಭ್ಯಾಗತರಾಗಿ ಭಾಗವಹಿಸಿದ್ದರು. ಯು. ಎಸ್. ರಾಜಗೋಪಾಲ ಆಚಾರ್ಯ, ವಿಜಯ ಕುಮಾರ್ ಮುದ್ರಾಡಿ, ನಾರಾಯಣ ಎಂ. ಹೆಗಡೆ, ಅನಂತರಾಜ್ ಉಪಾಧ್ಯ, ಕಿಶೋರ್ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿ, ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರ್ವಹಿಸಿ, ಸಂಯೋಜಕ ನಿರಂಜನ್ ಭಟ್ ವಂದಿಸಿದರು. ಶಿಬಿರಾರ್ಥಿಗಳ ಪರವಾಗಿ ಸೃಷ್ಟಿ ಮತ್ತು ಆರುಷ್ ತಮ್ಮ ಅನುಭವಗಳನ್ನು ಹಂಚಿಕೊಂಡರು. ಈ ನಾಲ್ಕು ದಿನಗಳಲ್ಲಿ ಮಕ್ಕಳು ಸ್ವತಂತ್ರವಾಗಿ ವಿವಿಧ ವೇಷಗಳ ಮುಖವರ್ಣಿಕೆ, ಕಸೆ, ಗೆಜ್ಜೆ ಮತ್ತು ವೇಷಭೂಷಣ ಕಟ್ಟಿಕೊಳ್ಳುವುದನ್ನು ಕಲಿತುಕೊಂಡರು.…
ಸುಳ್ಯ : ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ಆಶ್ರಯದಲ್ಲಿ ನಡೆದ ಡಾ. ಜೀವನ್ ರಾಂ ಸುಳ್ಯ ನಿರ್ದೇಶನದ 34 ನೇ ವರ್ಷದ ರಾಜ್ಯಮಟ್ಟದ ಅಭಿನಯ ಪ್ರಧಾನ ಚಿಣ್ಣರಮೇಳದ ಸಮಾರೋಪ ಸಮಾರಂಭ ದಿನಾಂಕ 19 ಏಪ್ರಿಲ್ 2025ರಂದು ಸುಳ್ಯದ ರಂಗಮನೆಯಲ್ಲಿ ನಡೆಯಿತು. ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿದ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿರುವ ಎಂ. ಕೃಷ್ಣಪ್ಪ ಮಕ್ಕಳ ಏಳೂ ನಾಟಕಗಳನ್ನು ವೀಕ್ಷಿಸಿ ಮಾತನಾಡಿ ” ಅಭಿನಯ ಕಲೆ ಪ್ರತಿಯೊಬ್ಬರ ಬದುಕಿನಲ್ಲೂ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಯಾವುದೇ ಸಂದರ್ಭದಲ್ಲೂ ಸಂವಹನಕ್ಕೆ ಪ್ರತಿಯೊಬ್ಬರಲ್ಲೂ ಅಭಿನಯ ಬೇಕೇ ಬೇಕು. ಇದು ಶೈಕ್ಷಣಿಕವಾಗಿಯೂ ಪೂರಕ. ರಂಗಮನೆಯ ಸಾಂಸ್ಕೃತಿಕ ಕಲಾ ವಾತಾವರಣ ಬೇರೆಲ್ಲೂ ನೋಡ ಸಿಗದು. ಮನೆಯೇ ರಂಗಮಂದಿರವಾದ ರೀತಿ ನಿಜಕ್ಕೂ ಆಶ್ಚರ್ಯ , ಜೀವನ್ ರಾಂ ಅಪರೂಪದ ರಂಗ ಸಾಧಕ ” ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಯೋಗ, ಯಕ್ಷಗಾನ, ನಾಟಕ, ಸಂಗೀತ, ಚಿತ್ರಕಲೆ ಇತ್ಯಾದಿಗಳಲ್ಲಿ ಸಾಧನೆಗೈಯ್ಯುತ್ತಿರುವ ಬಹುಮುಖ ಪ್ರತಿಭೆಯಾದ ಹಾರ್ದಿಕ ಕೆರೆಕ್ಕೋಡಿ ಇವಳಿಗೆ 2025ನೇ ಸಾಲಿನ ರಂಗಮನೆಯ ಪ್ರತಿಭಾ ಪುರಸ್ಕಾರ…
ಮಂಗಳೂರು : ಆನೆಗುಂದಿ ಗುರುಸೇವಾ ಪರಿಷತ್ ಮಹಾಮಂಡಲ,ಮಂಗಳೂರು ಶಾಖೆಯು ಆಯೋಜಿಸಿರುವ “ಜ್ಞಾನ ವಿಕಾಸ ಸಂಸ್ಕಾರ ಶಿಬಿರ -2025 ಇದರ ಉದ್ಘಾಟನಾ ಸಮಾರಂಭವು ದಿನಾಂಕ 21 ಏಪ್ರಿಲ್ 2025ರಂದು ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಪಟ್ಟೆ ಲಿಂಗಪ್ಪಾಚಾರ್ಯ ಕಲ್ಯಾಣ ಮಂಟಪದಲ್ಲಿ ನಡೆಯಿತು. ಕಾರ್ಯಕ್ರಮವನ್ನ ಉದ್ಘಾಟಿಸಿದ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಡಳಿತಾಧಿಕಾರಿ ಕೆ.ಉಮೇಶ್ ಆಚಾರ್ಯ ಮಾತನಾಡಿ “ಇಂದಿನ ಯುವ ಪೀಳಿಗೆಯಲ್ಲಿ ನಶಿಸುತ್ತಿರುವ ಸಂಸ್ಕೃತಿ ಹಾಗೂ ಸಂಪ್ರದಾಯಗಳ ಜ್ಞಾನವು ಚಿಗುರಿಕೊಳ್ಳಲು ಜ್ಞಾನ ವಿಕಾಸ ಸಂಸ್ಕಾರ ಶಿಬಿರವು ಮಾರ್ಗದರ್ಶಕವಾಗಲಿ” ಎಂದು ಹಾರೈಸಿದರು. ಇನ್ನೋರ್ವ ಅತಿಥಿ ವಿಶ್ವಕರ್ಮ ಸಹಕಾರ ಬ್ಯಾಂಕ್ ಇದರ ಅಧ್ಯಕ್ಷರಾದ ಡಾ. ಎಸ್. ಆರ್. ಹರೀಶ್ ಆಚಾರ್ಯ ಮಾತನಾಡಿ “ನಮ್ಮೊಳಗಿರುವ ಮೂರನೇ ದೃಷ್ಟಿಯನ್ನು ತೆರೆಯುವ ಪ್ರಯತ್ನ ಇಂದು ಆಗಬೇಕಾದ ಅನಿವಾರ್ಯತೆ ಬಂದೊದಗಿದೆ, ಕುಂಟಿತಗೊಳ್ಳುತ್ತಿರುವ ಮಕ್ಕಳ ಯೋಚನಾ ಸಾಮರ್ಥ್ಯವನ್ನು ಉದ್ದೀಪನಗೊಳಿಸುವ ಕೆಲಸ ಇಂತಹ ಶಿಬಿರಗಳಿಂದ ಆಗಬೇಕು” ಎಂದು ಹಾರೈಸಿದರು. ವೇದಿಕೆಯಲ್ಲಿ ಸಮಾಜ ಸೇವಕ ಪುಂಡರೀಕಾಕ್ಷ ಆಚಾರ್ಯ, ಗುರು ಸೇವಾ ಪರಿಷತ್ ಇದರ ಅಧ್ಯಕ್ಷರಾದ ಶೇಖರ…
ಮಂಗಳೂರು : ಮಂಗಳೂರಿನ ಕೂಳೂರಿನಲ್ಲಿರುವ ಯೆನೆಪೊಯ ಇನ್ಸಿಟ್ಯೂಟ್ ಆಫ್ ಆರ್ಟ್ಸ್ ಸೈನ್ಸ್ ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್ ಇಲ್ಲಿನ ಸಹಾಯಕ ಪ್ರಾಧ್ಯಾಪಕ ನಿಯಾಝ್ ಪಡೀಲ್ ರಚಿಸಿದ ಕನ್ನಡ ಕಾದಂಬರಿಯ ಬ್ಯಾರಿ ಅನುವಾದಿತ ‘ಯತೀಮ್’ ಕೃತಿಯ ಲೋಕರ್ಪಣಾ ಸಮಾರಂಭವು ದಿನಾಂಕ 23 ಏಪ್ರಿಲ್ 2025ರ ಬುಧವಾರದಂದು ಕಾಲೇಜಿನ ವೈ. ಎಂ. ಕೆ. ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳಿಸಿದ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾದ ಯು. ಎಚ್. ಉಮರ್ ಮಾತನಾಡಿ “ಸಾಧನೆಗೆ ಯಾವುದೂ ಕೂಡ ಅಡ್ಡಿಯಾಗಬಾರದು. ಬದುಕಿನಲ್ಲಿ ಸಾಧಿಸುವ ಗುರಿಯೊಂದೇ ಮುಖ್ಯ. ಅನಕ್ಷರಸ್ಥ ಕೂಡ ತನ್ನದೇ ಆದ ಕ್ಷೇತ್ರದಲ್ಲಿ ಸಾಧಿಸಿ ತೋರಿಸಿದ ಉದಾಹರಣೆ ಇದೆ. ಸಾಧಿಸುವ ಮೊದಲು ತನ್ನಲ್ಲಿರುವ ಕೀಳರಿಮೆಯನ್ನು ದೂರ ಮಾಡಬೇಕು. ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿ ಕೂಡ ಸ್ಪಷ್ಟ ಗುರಿಯೊಂದಿಗೆ ಕೀಳರಿಮೆ ದೂರ ಮಾಡಿ ಸಾಧಿಸಿ ತೋರಿಸಬೇಕು. ಭಾಷೆಯು ಕೇವಲ ಸಂವಹನ ಕಲೆಯಲ್ಲ. ಅದರಲ್ಲಿ ಸಂಸ್ಕೃತಿ, ಸಂಸ್ಕಾರ, ಸಂವೇದನೆ ಇರುತ್ತದೆ. ಈ ನಿಟ್ಟಿನಲ್ಲೂ ಅಧ್ಯಯನ ಆಗಬೇಕಿದೆ. ಬ್ಯಾರಿ ಅಕಾಡಮಿಯು ಸಂಶೋಧನೆಗೆ ಹೆಚ್ಚು ಆದ್ಯತೆ…
ಬೆಂಗಳೂರಿನ ಕಾರಂಜಿ ಆಂಜನೇಯನ ದೈವಸನ್ನಿಧಿಯಲ್ಲಿ ಅನಾವರಣಗೊಂಡ ಪುರಾಣಕಾಲದ ಒಂದೊಂದು ದಿವ್ಯ ಕಥೆಯೂ ನಾಟಕದ ದೃಶ್ಯಗಳಂತೆ ಚೇತೋಹಾರಿಯಾಗಿ ಚಲಿಸಿ ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿತು. ಭಕ್ತಿಭಾವ ಕೆನೆಗಟ್ಟಿದ ‘ನವವಿಧ ಭಕ್ತಿ’ಯ ಕಥಾನಕಗಳು ಪೂರಕ ಸಂಗೀತ ಸಾಂಗತ್ಯದಲ್ಲಿ ಅರಳುತ್ತ ಕಥಾಪ್ರಸಂಗವನ್ನು ಕಣ್ಮನ ತಣಿಸುವ ನೃತ್ಯಧಾರೆಯಲ್ಲಿ ನಿರೂಪಿಸಿದ್ದು ವಿಶಿಷ್ಟವಾಗಿತ್ತು. ವಿಶ್ವಪ್ರಸಿದ್ಧ ಹಿರಿಯ ನೃತ್ಯಗುರು ಕೇಂದ್ರ ಪ್ರಶಸ್ತಿ ಪುರಸ್ಕೃತೆ ವಿದುಷಿ. ರಾಧಾ ಶ್ರೀಧರ್ ಪರಿಕಲ್ಪನೆ-ನೃತ್ಯ ಸಂಯೋಜನೆ ಮತ್ತು ತರಬೇತಿಯಲ್ಲಿ ಪ್ರದರ್ಶಿತವಾದ ಸುಮನೋಹರ ನೃತ್ಯರೂಪಕ ಎರಡು ಗಂಟೆಗಳ ಕಾಲ ತಲ್ಲೀನಗೊಳಿಸಿತು. ವಿದುಷಿ ದ್ವಾರಕಿ ಕೃಷ್ಣಸ್ವಾಮಿಯವರ ಸಾಹಿತ್ಯ-ಸಂಗೀತ ಸಹಕಾರ, ಗಾಯಕ ಡಿ. ಶ್ರೀವತ್ಸ ಸಂಗೀತ ನೀಡುವುದರೊಂದಿಗೆ ಭಾವಪೂರ್ಣವಾಗಿ ಹಾಡಿದ್ದರು. ‘’ನವವಿಧ ಭಕ್ತಿ’’- ನೃತ್ಯರೂಪಕ, ಭಕ್ತಿಯ ಪ್ರಖರಶಕ್ತಿಯನ್ನು ಸಾಕ್ಷಾತ್ಕರಿಸುವ ಉಜ್ವಲ ಸಂದೇಶದ ದಿವ್ಯಾನುಭೂತಿಗೆ ಕಾರಣವಾಯಿತೆಂದರೆ ಅತಿಶಯೋಕ್ತಿಯಲ್ಲ. ಸನಾತನ ಧಾರ್ಮಿಕ ಪರಂಪರೆಯಲ್ಲಿನ ಒಂಭತ್ತು ಬಗೆಯ ಭಕ್ತಿಯ ಮುಖಗಳನ್ನು ವಿವಿಧ ಪುರಾಣ ನಿದರ್ಶನಗಳ ಮೂಲಕ ದೃಶ್ಯಾತ್ಮಕವಾಗಿ ವರ್ಣರಂಜಕವಾಗಿ ಪ್ರಸ್ತುತಗೊಳಿಸಲಾಯಿತು. ಮೋಕ್ಷ ಸಾಧನಗಳಾದ ನವವಿಧ ಭಕ್ತಿಗಳಾದ -ಶ್ರವಣಂ, ಕೀರ್ತನಂ. ಸ್ಮರಣಂ, ಪಾದಸೇವನಂ, ಅರ್ಚನಂ, ವಂದನಂ, ದಾಸ್ಯಂ, ಸಖ್ಯಂ, ಅರ್ಪಣಂ…
ಮಂಗಳೂರು : ಕರ್ನಾಟಕ ಬ್ಯಾರೀಸ್ ಸೋಶಿಯಲ್ ಮತ್ತು ಕಲ್ಚರಲ್ ಫೋರಂ ವತಿಯಿಂದ ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆಯುವ ಬ್ಯಾರೀಸ್ ಫೆಸ್ಟಿವಲ್-2025 (ಬ್ಯಾರಿ ಬಹುಭಾಷಾ ಸೌಹಾರ್ದ ಉತ್ಸವ)ಕ್ಕೆ ದಿನಾಂಕ 19 ಏಪ್ರಿಲ್ 2025ರ ಶನಿವಾರ ಚಾಲನೆ ನೀಡಲಾಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ “ಸೌಹಾರ್ದ ಸಮ್ಮಿಲನದ ಕಲ್ಪನೆಯಡಿ ಈ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ. ಇದರಲ್ಲಿ ಸಮಾಜದ ಸರ್ವರೂ ಪಾಲ್ಗೊಳ್ಳಬೇಕು. ದ. ಕ. ಜಿಲ್ಲೆಯಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ” ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಉತ್ಸವ ಸಮಿತಿಯ ಅಧ್ಯಕ್ಷ, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಜಿ. ಎ. ಬಾವ ಬ್ಯಾರೀಸ್ ಫೆಸ್ಟಿವಲ್ ಒಂದು ಜನಾಂಗಕ್ಕೆ ಸೀಮಿತವಾಗಿಲ್ಲ. ಇದರಲ್ಲಿ ಸಮಾಜದ ಎಲ್ಲಾ ವರ್ಗದ ಜನರಿಗೂ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ” ಎಂದರು ಉತ್ಸವದ ಅಂಗವಾಗಿ ಮೆಹಂದಿ ಸ್ಪರ್ಧೆಗಳು, ವಿವಿಧ ಗೋಷ್ಠಿಗಳು, ಯುವ ಸಮೂಹಕ್ಕೆ ಭವಿಷ್ಯದ ಕುರಿತಾಗಿ ಮಾರ್ಗದರ್ಶನ ಮತ್ತು ದಫ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಹುಸೈನ್ ಕಾಟಿಪಳ್ಳ ಬಳಗದಿಂದ ಬಹುಭಾಷಾ…
ಬಂಟ್ವಾಳ : ಬಿ. ವಿ. ಕಾರಂತ ರಂಗಭೂಮಿಕಾ ಟ್ರಸ್ಟ್ (ರಿ.) ಮಂಚಿ ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದ.ಕ. ಇದರ ಸಹಯೋಗದಲ್ಲಿ ಆಯೋಜಿಸುವ ಬಿ. ವಿ. ಕಾರಂತ ನೆನಪಿನ ಮಂಚಿ ನಾಟಕೋತ್ಸವ ‘ರಂಗಭೂಮಿಕಾ-2025’ ದಿನಾಂಕ 26 ಏಪ್ರಿಲ್ 2025 ರಿಂದ 28 ಏಪ್ರಿಲ್ 2025ರ ವರೆಗೆ ಪ್ರತಿದಿನ ಸಂಜೆ ಘಂಟೆ 6.00ರಿಂದ ಕುಕ್ಕಾಜೆ-ಮಂಚಿಯ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದ ಆವರಣದಲ್ಲಿ ನಡೆಯಲಿದೆ. 26 ಏಪ್ರಿಲ್ 2025 ರ ಶನಿವಾರದಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಜಿ ಸದಸ್ಯರಾದ ಶ್ರೀ ಪಿಯುಸ್ ಎಲ್. ರೊಡ್ರಿಗಸ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ರಾಜೇಶ್ ನಾಯ್ಕ ಉಳಿಪಾಡಿಗುತ್ತು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ನಿವೃತ್ತ ಮುಖ್ಯೋಪಾಧ್ಯಾಯರು, ‘ಅಭಿರುಚಿ’ ಜೋಡುಮಾರ್ಗ ಇಲ್ಲಿನ ಶ್ರೀ ಮಹಾಬಲೇಶ್ವರ ಹೆಬ್ಬಾರ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದ.ಕ. ಇದರ ಸಹಾಯಕ ನಿರ್ದೇಶಕರಾದ ಶ್ರೀ ರಾಜೇಶ್ ಭಾಗವಹಿಸಲಿದ್ದಾರೆ. ಸಭಾಕಾರ್ಯಕ್ರಮದ ಬಳಿಕ ಮಂದಾರ,…
ಬೆಳ್ಳಿಪ್ಪಾಡಿ : ನಿವೃತ್ತ ಅಧ್ಯಾಪಕ ಬಿ. ಹುಕ್ರಪ್ಪ ಗೌಡ ಬೆಳ್ಳಿಪ್ಪಾಡಿ ಅವರ ‘ಶ್ರೀರಾಮಾಂಜನೇಯ’ ನೂತನ ಗೃಹಪ್ರವೇಶೋತ್ಸವದ ಸುಸಂದರ್ಭದಲ್ಲಿ ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಸದಸ್ಯರಿಂದ “ ಶಕ್ರಜಿತು “ ಯಕ್ಷಗಾನ ತಾಳಮದ್ದಳೆ ದಿನಾಂಕ ದಿನಾಂಕ 16 ಏಪ್ರಿಲ್ 2025ರಂದು ನಡೆಸಲ್ಪಟ್ಟಿತು. ಸಂಘದ ಹಿರಿಯ ಭಾಗವತ ಗುರುಗಳಾದ ವಿಶ್ವವಿನೋದ ಬನಾರಿಯವರ ಸಂಯೋಜನೆಯಲ್ಲಿ ಮುನ್ನಡೆದ ಈ ತಾಳಮದ್ದಳೆಯ ಭಾಗವತರಾಗಿ ಮೋಹನ ಮೆನಸಿನಕಾನ, ಕುಮಾರಿ ವಿದ್ಯಾಶ್ರೀ ಆಚಾರ್ಯ ಈಶ್ವರ ಮಂಗಲ , ಅಂಕುಶ್ ಎಣ್ಣೆಮಜಲು ಅವರು ಕಾಣಿಸಿಕೊಂಡರು. ಚೆಂಡೆ ಮದ್ದಳೆ ವಾದನದಲ್ಲಿ ಶ್ರೀಧರ ಆಚಾರ್ಯ ಈಶ್ವರ ಮಂಗಲ, ಅಪ್ಪಯ್ಯ ಮಣಿಯಾಣಿ ಮಂಡೆಕೋಲು, ವಿಷ್ಣು ಶರಣ ಬನಾರಿ, ಬಿ. ಎಚ್. ಕೃಷ್ಣ ಪ್ರಸಾದ ಬೆಳ್ಳಿಪ್ಪಾಡಿ ಅವರು ಸಹಕರಿಸಿದರು. ಅರ್ಥಧಾರಿಗಳಾಗಿ ಬೆಳ್ಳಿಪ್ಪಾಡಿ ಸದಾಶಿವ ರೈ, ಐತಪ್ಪ ಗೌಡ ಮುದಿಯಾರು, ಯಂ. ಬಾಲಕೃಷ್ಣ ಗೌಡ ದೇಲಂಪಾಡಿ, ಯಂ. ರಮಾನಂದ ರೈ ದೇಲಂಪಾಡಿ, ಡಿ. ರಾಮಣ್ಣ ಮಾಸ್ತರ್ ದೇಲಂಪಾಡಿ, ನಾರಾಯಣ ದೇಲಂಪಾಡಿ, ರಾಮನಾಯ್ಕ ಬಸಿರಡ್ಕ, ಶಾಂತಾಕುಮಾರಿ…