Author: roovari

ಉಡುಪಿ : ರಾಧಾಕೃಷ್ಣ ನೃತ್ಯ ನಿಕೇತನ ಸಂಸ್ಥೆ ಆಯೋಜಿಸಿದ್ದ ಅದಿತಿ ಜಿ. ನಾಯಕ್ ಇವರ ‘ನೃತ್ಯಾರ್ಪಣ’ ಭರತನಾಟ್ಯ ಕಾರ್ಯಕ್ರಮವು ದಿನಾಂಕ 28 ಆಗಸ್ಟ್ 2025ರಂದು ಉಡುಪಿಯ ಐ.ವೈ.ಸಿ. ಹವಾನಿಯಂತ್ರಿತ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ಪತ್ರಕರ್ತ ಜನಾರ್ದನ್ ಕೊಡವೂರು ಇವರು ಮಾತನಾಡಿ “ಭರತನಾಟ್ಯ ಕಲೆ ದೇಶದ ಪ್ರಾಚೀನ ಕಲೆಗಳಲ್ಲಿ ಒಂದಾಗಿದ್ದು, ಇದಕ್ಕೆ ಮಕ್ಕಳು ಹೆಚ್ಚಿನ ಒತ್ತು ಕೊಡಬೇಕು. ಅಲ್ಲದೆ ಜೀವನದಲ್ಲಿ ಸಂಸ್ಕಾರವಂತರಾಗಲು ಇದೊಂದು ಆಶ್ರಯ ತಾಣ. ಹಾಗಾಗಿ ಮಕ್ಕಳು, ಯುವಕರು ನೃತ್ಯದಂತಹ ಲಲಿತ ಕಲೆಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕು” ಎಂದು ಹೇಳಿದರು. ಅತಿಥಿಯಾಗಿ ಆಗಮಿಸಿದ ಮಂಗಳೂರಿನ ಸೌರಭ ಕಲಾ ಪರಿಷತ್ತು ನಿರ್ದೇಶಕಿ ಡಾ. ವಿದ್ಯಾ “ನೃತ್ಯ ಗುರು ವೀಣಾ ಸಾಮಗ ಸಾವಿರಾರು ವಿದ್ಯಾರ್ಥಿಗಳಿಗೆ ಭರತನಾಟ್ಯ, ಕೂಚುಪುಡಿ, ಜನಪದ ಮುಂತಾದ ನೃತ್ಯ ತರಗತಿಯನ್ನು ನಡೆಸುವದರ ಮೂಲಕ ಸಂಸ್ಕಾರಯುತ ಜೀವನ ನಡೆಸಲು ದಾರಿ ಮಾಡಿ ಕೊಟ್ಟಿದ್ದಾರೆ” ಎಂದು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ವತಿಯಿಂದ ಸಂಘಟನಾ…

Read More

ವಿನಾಯಕ ಗಣಪತಿ ನಾಯಕರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕರ್ಕಿಕೋಡಿಯಲ್ಲಿ ದಿನಾಂಕ 01 ಸೆಪ್ಟೆಂಬರ್ 1950ರಂದು ಜನಿಸಿದರು. ತಂದೆ ಗಣಪತಿ ನಾಯಕ ಹಾಗೂ ತಾಯಿ ಸೀತಾದೇವಿ ನಾಯಕ. ತಮ್ಮ ವಿದ್ಯಾಭ್ಯಾಸವನ್ನು ಉತ್ತರ ಕನ್ನಡದಲ್ಲಿ ಪೂರೈಸಿದ ನಾಯಕರು ಬೋಧನಾ ವೃತ್ತಿಯನ್ನು ಆರಂಭಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಅಡ್ಯನಡ್ಕದ ಜನತಾ ಪದವಿ ಪೂರ್ವ ವಿದ್ಯಾಲಯದಲ್ಲಿ. ವಿಮರ್ಶಕರಾಗಿ ಸಾಹಿತ್ಯದಲ್ಲಿ ತೊಡಗಿಸಿಕೊಂಡಿರುವ ವಿ.ಗ. ನಾಯಕರು ನಿಯಮಿತವಾಗಿ ಪತ್ರಿಕೆಗಳಿಗೆ ಬರೆದ ಅಂಕಣಗಳ ಕೃತಿ ‘ಬಿಡುಗಡೆ’, ‘ವಾಲಗ’, ‘ಕವಿಯಿಂದ ಕಿವಿಗೆ’. ಇವರ ವ್ಯಾಪಕ ಅಧ್ಯಯನದ ಕೃತಿ ‘ಹರಿಕಾಂತ ಸಂಸ್ಕೃತಿ’ ಮೀನುಗಾರ ಕುಲದ ಬಗೆಗಿನ ಆಳವಾದ ಜ್ಞಾನವನ್ನು ನೀಡುತ್ತದೆ. ತಮ್ಮ ಬಾಲ್ಯದಿಂದಲೇ ಸಾಹಿತ್ಯಾಸಕ್ತಿ ಹೊಂದಿದ್ದ ವಿ.ಗ. ನಾಯಕರು ರಚಿಸಿರುವ ಕೃತಿಗಳು ಹಲವು. ‘ಹೊನ್ನೂರ ಜಾಜಿ’, ‘ಒಳಗೂಡಿನಲ್ಲಿ’, ‘ಗೋಲಗುಮ್ಮಟ’, ‘ನೆಲಗುಮ್ಮ’ ಇವರ ಕವನ ಸಂಗ್ರಹಗಳು. ‘ಒರೆಗಲ್ಲು’, ‘ಪ್ರತಿಸ್ಪಂದನ’, ‘ಕನ್ನಡದಲ್ಲಿ ಹನಿಗವನಗಳು’, ‘ತಾರ್ಕಣೆ’ ಇವರ ವಿಮರ್ಶಾ ಗ್ರಂಥಗಳು. ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇವರು ನಿರ್ವಹಿಸಿದ ಕಾರ್ಯಗಳು ಹಲವಾರು. ಅಡ್ಯನಡ್ಕದಲ್ಲಿ ಸ್ಮೃತಿ ಪ್ರಕಾಶನ ಮತ್ತು…

Read More

ಸುಮನಾ ಹೇರ್ಳೆ ಈಗಾಗಲೇ ತಮ್ಮ ಗಝಲ್, ಕವನ, ಆಧುನಿಕ ವಚನ ಹಾಗೂ ಮುಕ್ತಕಗಳ ಸಂಕಲನಗಳನ್ನು ಪ್ರಕಟಿಸಿ ಸಾಹಿತ್ಯ ಕ್ಷೇತ್ರದಲ್ಲಿ ಪರಿಚಿತರಾಗಿದ್ದಾರೆ. ‘ಶ್ರೀ ಗುರು ನರಸಿಂಹ ಕಾವ್ಯಧಾರೆ’ ಇತ್ತೀಚೆಗೆ ಪ್ರಕಟವಾದ ಅವರ ವಿಶಿಷ್ಟ ಕೃತಿ. ಇಲ್ಲಿ ಉಡುಪಿ ಜಿಲ್ಲೆಯ ಸಾಲಿಗ್ರಾಮದಲ್ಲಿರುವ ಗುರುನರಸಿಂಹ ದೇವಸ್ಥಾನದ ಸ್ಥಳ ಪುರಾಣವನ್ನು ವಸ್ತುವಾಗಿಟ್ಟುಕೊಂಡು ಅವರು ಛಂದೋಬದ್ಧವಾಗಿ ಚೌಪದಿಯಲ್ಲಿ ರಚಿಸಿದ 300 ಪದ್ಯಗಳಿವೆ. ಒಂದು ಮಹಾಕಾವ್ಯದ ಶೈಲಿಯಲ್ಲಿ ಆರಂಭದ ಆರು ಪದ್ಯಗಳನ್ನು ದೇವರ ಪ್ರಾರ್ಥನೆಗಾಗಿ ಅವರು ಬಳಸುತ್ತಾರೆ. ಮುಂದೆ ಸೂತಮುನಿಗಳು ಹೇಳುವ ಪರಶುರಾಮ ಕ್ಷೇತ್ರವು ಹೇಗೆ ಹುಟ್ಟಿತು ಅನ್ನುವುದರ ಕಥೆಯಿದೆ. ಅನಂತರ ಸಾಲಿಗ್ರಾಮದಲ್ಲಿ ನರಸಿಂಹನು ಬ್ರಹ್ಮ, ವಿಷ್ಣು ಮತ್ತು ಶಿವ ಸ್ವರೂಪಿಯಾಗಿ, ಸಾಲಿಗ್ರಾಮ ಶಿಲೆಯಾಗಿ ನೆಲೆಸಿರುವುದರ ಕುರಿತಾದ ವಿವರಗಳಿವೆ. ಮುಂದೆ ಕದಂಬನೆಂಬ ದೈವಸ್ವರೂಪಿ ಬಾಲಕನು ಹುಟ್ಟಿ, ಅನಂತರ ಕದಂಬ ಸಾಮ್ರಾಜ್ಯ ಸ್ಥಾಪಿಸಿ, ಶ್ರದ್ಧೆಯಿಂದ ಪರಶುರಾಮ ಕ್ಷೇತ್ರವನ್ನು ಆಳುತ್ತಾನೆ. ಅವನ ಮಗ ವಸುರಾಜನೂ ಸಮರ್ಥ ರಾಜನಾಗಿ, ಅವನ ಮಗಳು ಸುಶೀಲೆಯು ಸೂರ್ಯವಂಶದ ಹೇಮಾಂಗದನನ್ನು ಮದುವೆಯಾಗುತ್ತಾಳೆ. ಶತ್ರುಗಳ ಪಿತೂರಿಗೆ ಬಲಿಯಾಗಿ ಹೇಮಾಂಗದನು ಮರಣ…

Read More

ಧಾರವಾಡ : ಅಭಿನಯ ಭಾರತಿ ಸಂಸ್ಥೆಯು ಹಿರಿಯ ಶಿಕ್ಷಣ ತಜ್ಞ ದಿ. ವಜ್ರಕುಮಾರ ಸ್ಮರಣಾರ್ಥ ‘ವಜ್ರ ಸಿರಿ ರಂಗೋತ್ಸವ 2025’ ಮೂರು ನಾಟಕ ಪ್ರದರ್ಶನವನ್ನು ದಿನಾಂಕ 03 ಮತ್ತು 04 ಸೆಪ್ಟೆಂಬರ್ 2025ರಂದು ಧಾರವಾಡದ ಕರ್ಣಾಟಕ ಕಾಲೇಜಿನ ಆವರಣ ಸೃಜನಾ ರಂಗಮಂದಿರದಲ್ಲಿ ಆಯೋಜಿಸಿದೆ. ದಿನಾಂಕ 03 ಸೆಪ್ಟೆಂಬರ್ 2025ರಂದು ಸಂಜೆ 5-00 ಗಂಟೆಗೆ ಜೆ.ಎಸ್.ಎಸ್. ಕಾರ್ಯದರ್ಶಿ ಡಾ. ಅಜಿತ ಪ್ರಸಾದ ನಾಟಕೋತ್ಸವಕ್ಕೆ ಚಾಲನೆ ನೀಡಲಿದ್ದು, ಉದ್ಯಮಿ ಡಾ. ಸಿ.ಎಚ್.ಕೆ.ವಿ. ಪ್ರಸಾದ ಇವರು ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಂಜೆ 6-00 ಗಂಟೆಗೆ ಬೆಳಗಾವಿಯ ರಂಗಸಂಪದ ತಂಡದವರು ವಿಜಯದಾಸರ ಜೀವನ ಆಧಾರಿತ ಭಕ್ತಿ ಪ್ರಧಾನ ಹಾಗೂ ಸಂಗೀತಮಯ ನಾಟಕವಾದ ‘ಸ್ಮರಿಸಿ ಬದುಕಿರೋ’ ನಾಟಕವನ್ನು ಮನೋಜ್ಞವಾಗಿ ಪ್ರಸ್ತುತಪಡಿಸಲಿದ್ದಾರೆ. ದಿನಾಂಕ 04 ಸೆಪ್ಟೆಂಬರ್ 2025ರಂದು ಸಂಜೆ 5-00 ಗಂಟೆಗೆ ಝಕೀರ್ ನದಾಫ್ ರಚಿಸಿ, ನಿರ್ದೇಶಿಸಿದ ‘ನೆಲಮುಗಿಲು’ ಮತ್ತು 7-00 ಗಂಟೆಗೆ ‘ಹಾಲು ಬಟ್ಟಲದೊಳಗಿನ ಪಾಲು’ ನಾಟಕವನ್ನು ಸವದತ್ತಿಯ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ ರಂಗ ಆರಾಧನಾ ತಂಡ ಪ್ರಸ್ತುತ…

Read More

ಪಿ. ಕಾಳಿಂಗ ರಾವ್ ಹೆಸರು ಕೇಳಿದ ಕೂಡಲೇ ಕನ್ನಡ ಸಾರಸ್ವತ ಲೋಕಕ್ಕೆ ನೆನಪಾಗುವುದು ಹುಯಿಲಗೋಳ ನಾರಾಯಣ ರಾಯರ ರಚನೆಯ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಗೀತೆ. ಕನ್ನಡದ ಈ ನಾಡ ಭಕ್ತಿಗೀತೆಗೆ 1947ರಲ್ಲಿ ರಾಗ ಸಂಯೋಜನೆ ಮಾಡಿ ಹಾಡಿದವರು ಪಿ. ಕಾಳಿಂಗ ರಾಯರು. ಇದು ಕರ್ಣಾಟಕ ಏಕೀಕರಣಕ್ಕೆ ಕಾಳಿಂಗ ರಾಯರು ನೀಡಿದ ಅಮೂಲ್ಯ ಕೊಡುಗೆ. ಕನ್ನಡ ರಾಜ್ಯೋತ್ಸವದ ನಂತರ ಈ ಹಾಡಿಗಾಗಿ ಕರ್ನಾಟಕ ಸರಕಾರ ಕಾಳಿಂಗ ರಾಯರಿಗೆ ವಿಶೇಷ ಸನ್ಮಾನ ಮಾಡಿತು. ಪಿ. ಕಾಳಿಂಗ ರಾವ್ ಎಂದೆ ಪ್ರಸಿದ್ಧರಾದ ಪಾಂಡೇಶ್ವರ ಕಾಳಿಂಗ ರಾಯರು ಮೂಲತಃ ಉಡುಪಿ ಜಿಲ್ಲೆಯ ಬಾರ್ಕೂರಿನ ಮೂಡುಕೆರೆಯವರು. ಇವರು ಯಕ್ಷಗಾನದಲ್ಲಿ ಪ್ರಸಿದ್ಧರಾದ ನಾರಾಯಣ ರಾಯರ ಸುಪುತ್ರ. ನಾರಾಯಣ ರಾಯರನ್ನು ‘ಪಾಂಡೇಶ್ವರ ಪುಟ್ಟಯ್ಯ’ ಎಂದೇ ಕರೆಯುತ್ತಿದ್ದರು. ಭಾರತೀಯ ಭಾವಗೀತೆ ಮತ್ತು ಸುಗಮ ಸಂಗೀತ ಗಾಯಕ ಪಿ. ಕಾಳಿಂಗ ರಾವ್ ಜನಿಸಿದ್ದು 31 ಆಗಸ್ಟ್ 1914ರಲ್ಲಿ. ಕಾಳಿಂಗ ರಾಯರಿಗೆ ಸಾಹಿತ್ಯದ ರುಚಿ ಹತ್ತಿಸಿದವರು ಅವರ ಸೋದರ ಮಾವ. 5ನೇ ತರಗತಿಯಲ್ಲಿ…

Read More

ಬೆಂಗಳೂರು : ಅಭಿನಯ ತರಂಗ ಅರ್ಪಿಸುವ ‘ಚಿತ್ರಾ’ ನಾಟಕ ತಂಡದ 75 ವರ್ಷಗಳ ಸಂಭ್ರಮದ ಪ್ರಯುಕ್ತ ‘ಚಿತ್ರಾ – 75’ ಎ.ಎಸ್. ಮೂರ್ತಿಯವರ ಸ್ಮರಣಾರ್ಥ ನಾಟಕ ಸ್ಪರ್ಧೆಯನ್ನು ದಿನಾಂಕ 24ರಿಂದ 30 ಅಕ್ಟೋಬರ್ 2025ರವರೆಗೆ ಸುಚಿತ್ರ ನಾಣಿ – ಭಾನು ಅಂಗಳದಲ್ಲಿ ಹಮ್ಮಿಕೊಳ್ಳಲಾಗಿದೆ. ಎ.ಎಸ್. ಮೂರ್ತಿಯವರು ಎಸ್. ರಾಮನಾಥನ್ ಅವರೊಂದಿಗೆ 1951ರಲ್ಲಿ ಪ್ರಾರಂಭಿಸಿದ ‘ಚಿತ್ರಾ’ ತಂಡ ಈಗ 75ಕ್ಕೆ ಕಾಲಿಟ್ಟಿದೆ. ರಂಗಭೂಮಿ ಚಲನಚಿತ್ರಗಳ ಬಗ್ಗೆ ವಿಚಾರ ಸಂಕಿರಣ ಚರ್ಚೆ, ನಾಟಕದ ಓದು, ನಾಟಕ, ಸಂಗೀತ ಕಾರ್ಯಕ್ರಮಗಳನ್ನು ಈಗಲೂ ನಡೆಸುತ್ತಿದೆ. ಅಲ್ಲದೆ ಅನೇಕ ರಂಗ ನಾಟಕಗಳನ್ನಾಡಿದೆ. ಬೀದಿ ನಾಟಕವನ್ನು ಕರ್ನಾಟಕದಲ್ಲಿ ಮೊದಲ ಬಾರಿಗೆ ಮಾಡಿದ ಹೆಗ್ಗಳಿಕೆ ‘ಚಿತ್ರಾ’ ತಂಡದ್ದು. ಚಿತ್ರಾ ತನ್ನ 75ನೇ ವರ್ಷದ ಹುಟ್ಟುಹಬ್ಬವನ್ನು ‘ನಾಟಕ ಸ್ಪರ್ಧೆ’ ಏರ್ಪಡಿಸುವ ಮೂಲಕ ಆಚರಿಸುವ ಯೋಜನೆಯನ್ನು ಹಾಕಿಕೊಂಡಿದೆ. ಈ ಸ್ಪರ್ಧೆ ಪ್ರತಿವರ್ಷ ನಡೆಯುತ್ತಿದ್ದು, ನಾಟಕದ ಅವಧಿ ಕನಿಷ್ಠ 45 ನಿಮಿಷಗಳು ಗರಿಷ್ಠ 60 ನಿಮಿಷ ಇರಬಹುದು. ಪ್ರವೇಶ ಶುಲ್ಕ ರೂ.2,500/- ಆಗಿದ್ದು, ನೋಂದಾಯಿಸಲು 15…

Read More

ಮೈಸೂರು : ಕಲಾಸುರುಚಿ ಮೈಸೂರು ಇದರ ವತಿಯಿಂದ ‘ಸಾಹಿತ್ಯ ಚಾವಡಿ’ ಸಂವಾದ ಕಾರ್ಯಕ್ರಮವನ್ನು ದಿನಾಂಕ 31 ಆಗಸ್ಟ್ 2025 ಭಾನುವಾರ ಬೆಳಿಗ್ಗೆ ಗಂಟೆ 10-30ಕ್ಕೆ ಮೈಸೂರಿನ ಕುವೆಂಪು ನಗರ, ಚಿತ್ರಭಾನು ರಸ್ತೆ, ನಂ.476, ಸುರುಚಿ ರಂಗಮನೆಯಲ್ಲಿ ಆಯೋಜಿಸಲಾಗಿದೆ. ಸಂವಾದ ಕಾರ್ಯಕ್ರಮದಲ್ಲಿ ‘ಅಂಕಣ ಸಾಹಿತ್ಯ ಸಾಧ್ಯತೆ, ಸವಾಲು ಮತ್ತು ಸಿದ್ಧತೆ’ ಎಂಬ ವಿಷಯದ ಬಗ್ಗೆ ಲೇಖಕ ಎನ್. ರವಿಶಂಕರ್ ಹಾಗೂ ಹಾಗೂ ಕಲಾವಿದೆ ಶ್ರೀಮತಿ ದೀಪಾ ರವಿಶಂಕರ್ ಇವರೊಂದಿಗೆ ಸಂವಾದಕರಾಗಿ ಲೇಖಕಿ ಶ್ರೀಮತಿ ಅಲಕಾ ಕಟ್ಟೆಮನೆ ಮತ್ತು ಲೇಖಕ ಅಜಯ್ ಸ್ವರೂಪ್ ಭಾಗವಹಿಸಲಿದ್ದಾರೆ.

Read More

ಮಂಗಳೂರು : ಕೊಂಕಣಿ ಸಾಹಿತ್ಯ ಅಕಾಡೆಮಿಯ ಸ್ಥಾಪನೆಗೆ ದುಡಿದವರಲ್ಲಿ ಪ್ರಮುಖರು, ಕೊಂಕಣಿಯ ಖ್ಯಾತ ಸಂಗೀತರಾರು, ಮಾಂಡ್ ಸೊಭಾಣ್ ಸಂಸ್ಥೆಯ ಗುರಿಕಾರರು, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಶ್ರೀ ಎರಿಕ್ ಒಝೇರಿಯೊರವರು ದಿನಾಂಕ 29 ಆಗಸ್ಟ್ 2025ರಂದು ಅಕಾಲಿಕ ಮರಣ ಹೊಂದಿರುತ್ತಾರೆ. ಕೊಂಕಣಿ ಪ್ರದರ್ಶನ ಕಲೆಗಳನ್ನು ಪೋಷಿಸಲು ಮೀಸಲಾಗಿರುವ ಪ್ರಮುಖ ಸಾಂಸ್ಕೃತಿಕ ಸಂಸ್ಥೆಯಾದ ‘ಮಾಂಡ್‌ ಸೊಭಾಣ್‌’ (ಸುಂದರ ಕಲಾ ವೇದಿಕೆ) ಹೆಸರಿನ ಸಂಸ್ಥೆಯನ್ನು ಇವರು ಸ್ಥಾಪಿಸಿ, ಕಳೆದ 39 ವರ್ಷಗಳಿಂದ ಮಾತೃಭಾಷೆಯ ಬಗ್ಗೆ ಜಾಗೃತಿ ಮೂಡಿಸಲು ಶ್ರಮಿಸಿದ್ದಾರೆ. ನಂತರ ಇವರು ‘ಕಲಾಂಗಣ’ ಎಂಬ ಸಾಂಸ್ಕೃತಿಕ ಕೇಂದ್ರವನ್ನು ಸ್ಥಾಪಿಸಿ ಇದು ಕೊಂಕಣಿ ಸಂಪ್ರದಾಯಗಳನ್ನು ಕಲಿಯಲು ಮತ್ತು ಸಂರಕ್ಷಿಸಲು ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಹಲವಾರು ಮಹತ್ವಪೂರ್ಣ ಕಾರ್ಯಕ್ರಮಗಳು, ಯಾತ್ರೆ-ತಿರುಗಾಟಗಳು, ಜಾಗೃತಿ ಅಭಿಯಾನಗಳ ಮೂಲಕ ಕೊಂಕಣಿ ಭಾಷೆಯನ್ನು ಬೆಳೆಸುವಲ್ಲಿ ತನ್ನನ್ನೇ ತಾನು ತೊಡಗಿಸಿಕೊಂಡಿದ್ದರು. ಒಜಾರಿಯೊರವರ ಪ್ರಯತ್ನಗಳು ಅನೇಕ ಪ್ರಶಸ್ತಿಗಳನ್ನು ತಂದುಕೊಟ್ಟವು. ಅವುಗಳಲ್ಲಿ 1994ರಲ್ಲಿ ‘ಕೊಂಕಣಿ ಕಲಾ ಸಾಮ್ರಾಟ್’ ಎಂಬ ಬಿರುದು ಪಡೆದಿದ್ದು, ಕೊಂಕಣಿ ರತ್ನ, 1993ರಲ್ಲಿ…

Read More

ಉಳ್ಳಾಲ : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಸೋಮೇಶ್ವರದ ಆನಂದಾಶ್ರಮ ಪ್ರೌಢಶಾಲೆ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ತುಳು ಹಾಡುಗಳ ಕಲಿಕಾ ಕಾರ್ಯಾಗಾರ, ಹಾಡುಗಳ ಪ್ರಸ್ತುತಿ ‘ಡೆನ್ನ ಡೆನ್ನಾನ – ಪದ ಪನ್ಕನ’ ಕಾರ್ಯಕ್ರಮವು ದಿನಾಂಕ 22 ಆಗಸ್ಟ್ 2025ರಂದು ಸೋಮೇಶ್ವರದ ಆನಂದಾಶ್ರಮ ಪ್ರೌಢ ಶಾಲೆಯಲ್ಲಿ ಉದ್ಘಾಟನೆಗೊಂಡಿತು. ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡು ಅಧ್ಯಕ್ಷತೆ ವಹಿಸಿ ಮಾತನಾಡಿ, “ಅಕಾಡೆಮಿ ಕಚೇರಿಯಲ್ಲಿ ‘ತುಳು ಓದುಗ’ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಅಕಾಡೆಮಿಯಲ್ಲಿ ಮಹಾಕಾವ್ಯಗಳಾದ ಮಹಾಭಾರತ, ರಾಮಾಯಣ, ವಿವಿಧ ಸಾಹಿತ್ಯ ಪ್ರಕಾರಗಳು ಸಹಿತ ಸುಮಾರು 5 ಸಾವಿರ ತುಳು ಗ್ರಂಥಗಳ ಭಂಡಾರವಿದೆ. ಇಲ್ಲಿಗೆ ತುಳು ಓದಲು ಬರುವ ವಿದ್ಯಾರ್ಥಿಗಳಿಗೆ ಲಘು ಉಪಹಾರ, ಊಟದ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಶಾಲಾ-ಕಾಲೇಜಿನ ಆಡಳಿತ ಮಂಡಳಿ ವಿದ್ಯಾರ್ಥಿಗಳನ್ನು ಅಕಾಡೆಮಿಗೆ ಕಳುಹಿಸಿ ಕೊಡುವುದರ ಮೂಲಕ ತುಳು ಉಳಿಸುವ ಅಭಿಯಾನಕ್ಕೆ ಕೈಜೋಡಿಸಬೇಕಿದೆ” ಎಂದರು. ಈ ಕಾರ್ಯಕ್ರಮವನ್ನು ಸಿನಿಮಾ, ನಾಟಕ ಕಲಾವಿದೆ ರೂಪಶ್ರೀ ವರ್ಕಾಡಿ ಉದ್ಘಾಟಿಸಿದರು. ಗಾಯಕ ತೋನ್ಸೆ ಪುಷ್ಕಳ ಕುಮಾರ್ ಮತ್ತು ಗಾಯಕಿ ವಾಣಿ ಸಪ್ರೆ…

Read More

ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಮಂಗಳೂರಿನವರಾದ ರಾಘವೇಂದ್ರ ಇವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದವರು. ಅವರು ‘ಲಾಟರಿ ಹುಡುಗ’ (ಕಥಾ ಸಂಕಲನ) ‘ಭೂಮಿ ದುಂಡಗಿದೆ’ (ಹಾಸ್ಯ ವಿಡಂಬನೆಗಳ ಸಂಗ್ರಹ) ಮತ್ತು ‘ನ್ಯಾನೋ ಕಥೆಗಳು’ (ಹನಿಗತೆಗಳ ಸಂಕಲನ) ಎಂಬ ಕೃತಿಗಳನ್ನು ಪ್ರಕಟಿಸಿದ್ದಾರೆ. ನ್ಯಾನೋ ಕಥೆಗಳಲ್ಲಿರುವ 208 ಕತೆಗಳ ಪೈಕಿ ಕೆಲವು ರಚನೆಗಳು ಇತ್ತೀಚಿಗೆ ಬಂದ ಹನಿಗತೆಗಳ ಪೈಕಿ ವಿಶಿಷ್ಟವೆನಿಸುತ್ತವೆ. ಕತೆಗಾರರು ತಮ್ಮ ನಾಯಕಿಯನ್ನು ತೆಳ್ಳಗೆ, ಬೆಳ್ಳಗಿನ ಚೆಲುವೆಯರನ್ನಾಗಿ ಚಿತ್ರಿಸುವ ರೂಢಿಯಿದೆ. ಆದರೆ ‘ಒಂದು ಪ್ರೇಮ ಕಥೆ’ಯ ನಾಯಕನು ಮೂಕನೂ, ನಾಯಕಿ ಕಿವುಡಿಯೂ ಆಗಿದ್ದಾಳೆ. ಅಂಥವರ ಮನಸ್ಸಿನಲ್ಲೂ ಪ್ರೀತಿ ಪ್ರೇಮದ ಭಾವನೆಗಳಿರುತ್ತವೆ ಎಂಬುದನ್ನು ಮನಗಾಣಿಸುವಲ್ಲಿ, ಅವರು ಅಂಗವಿಕಲಾದರೂ ಮನಸ್ಸಿಗೆ ವೈಕಲ್ಯವಿಲ್ಲ ಎಂಬುದನ್ನು ಅರಿವಿಗೆ ತರುವುದರಲ್ಲಿ ಕತೆಯ ಹೆಚ್ಚುಗಾರಿಕೆಯಿದೆ. ಪ್ರಿಯಕರನ ಬಗ್ಗೆ ಪ್ರೇಯಸಿಯ ಹೃದಯದಲ್ಲಿ ತುಂಬಿದ ಕಾತರವು ದೇಶಕಾಲ ಪರಿಮಿತವಾದುದಲ್ಲ. ಅದು ಸಾರ್ವತ್ರಿಕವೂ ಸಾರ್ವಕಾಲಿಕವೂ ಆಗಿದೆ. ಪ್ರಿಯಕರನ ಏಳಿಗೆಗಾಗಿ ತುಡಿಯುವ ಆಕೆಯ ಹೃದಯವು ಆತನ ಬದುಕು ಚೆನ್ನಾಗಿರುವುದನ್ನು…

Read More