Author: roovari

ಕಾಸರಗೋಡು: ಹೊಸಕೋಟೆಯ ಶ್ರೀ ನವಚೇತನ ನೃತ್ಯ ಕಲಾ ಅಕಾಡೆಮಿಯ 48ನೇ ಭರತನಾಟ್ಯ ರಂಗ ಪ್ರವೇಶ ಕಾರ್ಯಕ್ರಮ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ದಿನಾಂಕ 23 ಆಗಸ್ಟ್ 2024ರಂದುಜರಗಿತು. ಈ ಸಂದರ್ಭದಲ್ಲಿ ಹೊರನಾಡ ಕನ್ನಡಿಗ ಸಾಧನೆಗಾಗಿ ಗುರುಪ್ರಸಾದ್ ಕೋಟೆಕಣಿ ಅವರನ್ನು `ಶ್ರೇಷ್ಠ ಕನ್ನಡಿಗ ಪ್ರಶಸ್ತಿ’ ನೀಡಿ ಸಮ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಅಂತಾರಾಜ್ಯ ನೃತ್ಯ ಪಟು ಗುರು ವಿದ್ವಾನ್ ಕೋಲಾರ ರಮೇಶ್, ಕೆಂಬಳಲುಪಾಳ್ಯ ಶ್ರೀ ನಾಗರಾಜು ಸ್ವಾಮಿ, ಕಲಾಶ್ರೀ ಗುರು ಸುಪರ್ಣ ವೆಂಕಟೇಶ್, ಬೆಂಗಳೂರು ಪೋಲೀಸ್ ವರಿಷ್ಠಾಧಿಕಾರಿ ಎ. ನಾಗರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು ವಿಭಾಗ ಜಂಟಿ ನಿರ್ದೇಶಕ ವಿ. ಎನ್. ಮಲ್ಲಿಕಾರ್ಜುನ ಸ್ವಾಮಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯ ಡಿ.ದೇವರಾಜ್, ಅಂತರಾಷ್ಟ್ರೀಯ ಗಾಯಕ ಗೊ. ನಾ. ಸ್ವಾಮಿ, ಅಖಿಲ ಭಾರತ ಜನಪದ ಒಕ್ಕೂಟ ಅಧ್ಯಕ್ಷ ಕೆ. ನಾಗರಾಜ್, ಎಂಡೇವರ್ಸ್ ಇಂಟರ್ ನ್ಯಾಶನಲ್ ಸ್ಕೂಲ್ ಇಲ್ಲಿನ ಸಂಸ್ಥಾಪಕ ಎಂ. ಎಲ್. ಶಿವಶಂಕರ್ ಮೊದಲಾದವರು ಉಪಸ್ಥಿತರಿದ್ದರು.

Read More

ಬೆಂಗಳೂರು : 2024ನೆಯ ಸಾಲಿನ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಟಿತ ‘ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರಿ ವಿದ್ವತ್ ದತ್ತಿ’ ಪ್ರಶಸ್ತಿಗಾಗಿ ಕಾಸರಗೋಡಿನ ಹಿರಿಯ ಸಂಶೋಧಕ ಡಾ. ಪಿ. ಶ್ರೀಕೃಷ್ಣ ಭಟ್ ಇವರನ್ನು ಆಯ್ಕೆ ಮಾಡಲಾಗಿದೆ. ಕನ್ನಡದ ಮೇರು ವಿದ್ವಾಂಸರಾದ ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರಿಗಳ ಬಂಧು-ಮಿತ್ರರು ಈ ದತ್ತಿಯನ್ನು ಸ್ಥಾಪಿಸಿದ್ದು, ಹಳಗನ್ನಡ ಸಾಹಿತ್ಯ, ಛಂದಸ್ಸು, ನಿಘಂಟು ರಚನೆ, ಗ್ರಂಥ ಸಂಪಾದನೆ, ಅನುವಾದ, ಭಾಷಾಶಾಸ್ತ್ರ ಮೊದಲಾದ ಶಾಸ್ತ್ರ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಈ ಪುರಸ್ಕಾರವನ್ನು ನೀಡಲಾಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ತಿಳಿಸಿದ್ದಾರೆ. ಕಾಸರಗೋಡಿನ ಪತ್ರೊಡಿ ಎಂಬ ಚಿಕ್ಕ ಗ್ರಾಮದಲ್ಲಿ ಜನಿಸಿದ ಡಾ. ಪಿ. ಶ್ರೀಕೃಷ್ಣ ಭಟ್ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಥಮ ಶ್ರೇಣಿ ಮತ್ತು ಚಿನ್ನದ ಪದಕದೊಂದಿಗೆ ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ‘ಕನ್ನಡ ವ್ಯಾಕರಣ ಪರಂಪರೆಯ ಮೇಲೆ ಸಂಸ್ಕೃತದ ಪ್ರಭಾವ’ ಎನ್ನುವ ವಿಷಯದಲ್ಲಿ ಸಂಶೋಧನೆ ನಡೆಸಿ ಡಾಕ್ಟರೇಟ್ ಪಡೆದರು. ಸುರತ್ಕಲ್ ನಲ್ಲಿ…

Read More

ಭಾರತದ ಜಾನಪದ ರಂಗಭೂಮಿಗೆ ಕರ್ನಾಟಕ ಕೊಟ್ಟ ಮಹತ್ತ್ವದ ದೇಣಿಗೆ ಎಂದರೆ ‘ಯಕ್ಷಗಾನ’. ಇದೊಂದು ಪರಿಪೂರ್ಣವೂ ವಿಶಿಷ್ಟವೂ ಆದ ಸಮ್ಮಿಶ್ರ ಕಲೆ. ಸಂಗೀತ, ಸಾಹಿತ್ಯ, ಮಾತುಗಾರಿಕೆ, ಅಭಿನಯ, ನೃತ್ಯ, ಅರ್ಥಾತ್ ವಾಚಿಕ, ಆಂಗಿಕ, ಆಹಾರ್ಯ, ಸಾತ್ವಿಕಗಳೆಲ್ಲ ಅಲ್ಲಿ ಏಕತ್ರಗೊಂಡಿರುವುದು ಗಮನೀಯ ಅಂಶ. ಯಕ್ಷಗಾನ ಜನಪದ ಸಂಸ್ಕೃತಿಯ ಗತಿಬಿಂಬವಾಗಿರುವಂತೆ ಅದು ಕನ್ನಡ ಸಂಸ್ಕೃತಿಯ ಜೀವಾಳವೂ ಆಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಕನ್ನಡ ಭಾಷೆ ಇಂದಿಗೂ ಶುದ್ಧವಾಗಿ ಉಳಿದು ಬಂದಿರುವುದು ಯಕ್ಷಗಾನದಲ್ಲಿ ಮಾತ್ರ. ಡಾ. ಗೋಪಾಲಕೃಷ್ಣ ಎಲ್. ಹೆಗಡೆ ವಿರಚಿತ ‘ಶೇಣಿ ಭಾರತ’ ಒಂದು ವಿದ್ವತ್ಪೂರ್ಣವೂ ಹಾಗೂ ಸೃಜನಶೀಲ ಪ್ರತಿಭೆಯ ವಿಲಾಸವನ್ನು ತೋರುವ ಉದ್ಗ್ರಂಥ. ವ್ಯಾಸಭಾರತವನ್ನು ಮರು ಸೃಷ್ಟಿ ಮಾಡಿದ ಕವಿ ಕೃತಿಗಳನ್ನು ಪಂಪ ಭಾರತ, ಕುಮಾರವ್ಯಾಸ ಭಾರತ ಎಂದು ಕರೆಯುವ ಹಾಗೆಯೇ ಶೇಣಿ ಭಾರತವೆಂದರೆ ಮಹಾಭಾರತದ ಪ್ರಸಂಗಗಳಿಗೆ ಬಹುಮುಖ ಪ್ರತಿಭೆಯ ಕಲಾವಿದ ಶೇಣಿ ಗೋಪಾಲಕೃಷ್ಣ ಭಟ್ ಅವರು ಅಲ್ಲಲ್ಲಿ ಹೇಳಿದ ಅರ್ಥವನ್ನು ಸಂಗ್ರಹಿಸಿ ನಿರ್ಮಿಸಿದ ಆಶು ಕಾವ್ಯ ಕೃತಿ. ಇದು ಇಪ್ಪತ್ತೊಂದನೆಯ ಶತಮಾನದ ಮಹತ್ವದ…

Read More

ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ವತಿಯಿಂದ ತಿಂಗಳ ಸರಣಿ ತಾಳಮದ್ದಳೆಯ ಪ್ರಯುಕ್ತ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ದಿನಾಂಕ 02 ಸೆಪ್ಟೆಂಬರ್ 2024ರಂದು ‘ವಾಲಿ ಮೋಕ್ಷ’ ಎಂಬ ಪ್ರಸಂಗದ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಯಲ್.ಯನ್. ಭಟ್, ಆನಂದ ಸವಣೂರು, ಪದ್ಯಾಣ ಶಂಕರನಾರಾಯಣ ಭಟ್, ಅಚ್ಯುತ ಪಾಂಗಣ್ಣಾಯ ಸಹಕರಿಸಿದರು. ಮುಮ್ಮೇಳದಲ್ಲಿ ಗುಂಡ್ಯಡ್ಕ ಈಶ್ವರ ಭಟ್, ಗುಡ್ಡಪ್ಪ ಬಲ್ಯ, ಮಾಂಬಾಡಿ ವೇಣುಗೋಪಾಲ ಭಟ್, ಶುಭಾ ಅಡಿಗ ಹಾಗೂ ಭಾಸ್ಕರ್ ಬಾರ್ಯ ಸಹಕರಿಸಿದರು. ಟಿ. ರಂಗನಾಥ ರಾವ್ ಸ್ವಾಗತಿಸಿ, ವಂದಿಸಿದರು.

Read More

ಮಂಗಳೂರು : ಕರಾವಳಿ ಲೇಖಕಿಯರ ವಾಚಕಿಯರ ಸಂಘದ ವತಿಯಿಂದ ಡಾ. ಕೆ.ವಿ. ಜಲಜಾಕ್ಷಿ ಸಂಸ್ಮರಣ ಕಾರ್ಯಕ್ರಮವು ಉರ್ವಸ್ಟೋರ್ ನ ಸಾಹಿತ್ಯ ಸದನದಲ್ಲಿ ದಿನಾಂಕ 24 ಆಗಸ್ಟ್ 2024ರಂದು ನಡೆಯಿತು. ಮಾಜಿ ಶಾಸಕಿ ಶ್ರೀಮತಿ ಶಕುಂತಲಾ ಶೆಟ್ಟಿಯವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮನುಷ್ಯ ಜನ್ಮದ ಕ್ಷಣಿಕತೆ ಹಾಗೂ ನಶ್ವರತೆಗಳನ್ನು ತಿಳಿಸುತ್ತಾ ಇಂತಹ ಸಂಸ್ಮರಣ ಕಾರ್ಯಕ್ರಮಗಳು ದೇಹ ಅಳಿದರೂ ಖ್ಯಾತಿ ಅಮರವೆಂಬಂತೆ ಮಾನವರಿಗೆ ಮರುಜನ್ಮ ನೀಡುತ್ತವೆ ಎಂದು ಹೇಳಿದರು. ಡಾ. ಕೆ.ವಿ. ಜಲಜಾಕ್ಷಿಯವರ ಪತಿ ಹಾಗೂ ಕಾರ್ಯಕ್ರಮದ ಪ್ರಮುಖ ರೂವಾರಿ ಡಾ. ವಿ.ಜಿ. ಭಟ್ ಇವರು ಪ್ರಾಸ್ತಾವಿಕ ಭಾಷಣ ಮಾಡಿ ಜಲಜಾಕ್ಷಿಯವರ ಬಹುಮುಖ ಪ್ರತಿಭೆಯ ಜೀವನವನ್ನು ಕೊಂಡಾಡಿದರು. ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಡಾ. ಸೋಮಣ್ಣರವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಡಾ. ಜಲಜಾಕ್ಷಿಯವರ ಸಾಹಿತ್ಯ ಸೇವೆ ಹಾಗೂ ವೃತ್ತಿ ನಿಷ್ಠೆಯನ್ನು ಶ್ಲಾಘಿಸಿದರು. “ಪ್ರಸ್ತುತ ಸಾಮಾಜಿಕ ಪರಿಸ್ಥಿತಿಯಲ್ಲಿ ಹೆಣ್ಣು ಮಕ್ಕಳ ಶಿಕ್ಷಣ ಅತೀ ಅಗತ್ಯ.…

Read More

ಸುರತ್ಕಲ್:  ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ) ಮತ್ತು ನಾಗರಿಕ ಸಲಹಾ ಸಮಿತಿ (ರಿ), ಸುರತ್ಕಲ್  ಆಯೋಜಿಸುತ್ತಿರುವ ಸರಣಿ ಕಾರ್ಯಕ್ರಮ ‘ಉದಯರಾಗ – 55’ ದಿನಾಂಕ 01 ಸೆಪ್ಟೆಂಬರ್ 2024ರಂದು ಸುರತ್ಕಲ್ ಮೇಲು ಸೇತುವೆಯ ತಳಭಾಗದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಿವೃತ್ತ ಬ್ಯಾಂಕ್ ಪ್ರಬಂಧಕ ಮತ್ತು ರೋಟರಿ ಕ್ಲಬ್ ಸುರತ್ಕಲ್‌ ಇದರ  ಸಾಮಾಜಿಕ ಸೇವಾ ವಿಭಾಗದ ನಿರ್ದೇಶಕ ರಾಮಚಂದ್ರ ಬಿ. ಕುಂದರ್ ಮಾತನಾಡಿ “ಸಂಗೀತವನ್ನು ಆಲಿಸಿದಾಗ ಮನಸ್ಸಿಗೆ ಸಂತೋಷವಾಗುವುದರೊಂದಿಗೆ ಮಾನಸಿಕ ಸಮಸ್ಯೆಗಳನ್ನು ಹೋಗಲಾಡಿಸಲೂ ಸಾಧ್ಯವಿದೆ. ಔದ್ಯೋಗಿಕ ಒತ್ತಡ ನಿವಾರಣೆಗೆ ಸಂಗೀತ ಅತ್ಯಂತ ಉಪಯುಕ್ತವಾದದ್ದು. ಸಂಗೀತದ ಆಸ್ವಾದಿಸುವಿಕೆಯಿಂದ ಕಾರ್ಯಕ್ಷಮತೆಯನ್ನು ವರ್ಧಿಸಲು ಸಾಧ್ಯ.” ಎಂದು ನುಡಿದರು. ಕಾರ್ತಿಕ್ ರಾವ್ ಇಡ್ಯಾ ಇವರ ನಿರ್ದೇಶನದಲ್ಲಿ  ‘ಗಾಯನ ಮಿತ್ರರು ಸುರತ್ಕಲ್’ ಇವರಿಂದ ನಾಮ ಸಂಕೀರ್ತನ ಕಾರ್ಯಕ್ರಮ ನಡೆಯಿತು. ಹಾಡುಗಾರಿಕೆಯಲ್ಲಿ ಸಂಪತ್ ಎಸ್. ಬಿ. ಮತ್ತು ಶ್ರೀನಿಧಿ ರಾವ್, ಸಹಗಾಯನದಲ್ಲಿ ಸೌರವ್ ಶ್ರೀಯಾನ್, ಶೈಲೇಶ್ ಬೈಕಂಪಾಡಿ ಮತ್ತು ಲಕ್ಷ್ಮೀಶ ಸೂರಿಂಜೆ,  ಹಾರ್ಮೋನಿಯಂನಲ್ಲಿ ವಿಜಯ್ ಆಚಾರ್ಯ ಕುಳಾಯಿ, ತಬಲಾದಲ್ಲಿ…

Read More

ಪ್ರಸಿದ್ಧ ‘ಸಾಧನ ಸಂಗಮ ಡಾನ್ಸ್ ಸೆಂಟರ್‘ ಇದರ ನೃತ್ಯಗುರುಗಳಾದ ಜ್ಯೋತಿ ಪಟ್ಟಾಭಿರಾಮ್ ಮತ್ತು ಡಾ. ಸಾಧನಾ ಶ್ರೀ ಗುರುದ್ವಯರ ಕಾಳಜಿಪೂರ್ಣ ಬದ್ಧತೆಯ ಭರತನಾಟ್ಯ ಮಾರ್ಗದರ್ಶನದಲ್ಲಿ ರೂಹು ತಳೆದ ಕಲಾಶಿಲ್ಪ ಕು. ಧೃತಿ ಪಿ. ಶೆಟ್ಟಿ ಬಹುಮುಖ ಪ್ರತಿಭೆ. ಶ್ರೀಮತಿ ಶೈಲಜಾ ಮತ್ತು ಪ್ರಶಾಂತ್ ಟಿ. ಇವರ ಪುತ್ರಿಯಾದ ಧೃತಿ ಕಳೆದ ಹತ್ತು ವರ್ಷಗಳ ತನ್ನ ಸತತ ಪರಿಶ್ರಮದ ಅಭ್ಯಾಸದಿಂದ, ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯದ 5 ಹಂತಗಳ ಪರೀಕ್ಷೆಗಳು ಮತ್ತು ಕರ್ನಾಟಕ ಸರ್ಕಾರದ ಜ್ಯೂನಿಯರ್ ಮತ್ತು ಸೀನಿಯರ್ ನೃತ್ಯಪರೀಕ್ಷೆಗಳಲ್ಲಿ ಅತ್ಯುಚ್ಚ ಅಂಕಗಳನ್ನು ಗಳಿಸಿದ ವೈಶಿಷ್ಟ್ಯ ಅವರದು. ಎನ್. ಸಿ. ಸಿ. ಯಲ್ಲಿ ಮೆಡಲ್ ಗಳಿಸಿರುವ ಬಿ. ಕಾಂ. ವಿದ್ಯಾರ್ಥಿನಿ ಧೃತಿ, 8 ಸೆಪ್ಟೆಂಬರ್ 2024ರ ಭಾನುವಾರ ಬೆಳಗ್ಗೆ 10 ಗಂಟೆಗೆ ಬಸವೇಶ್ವರ ನಗರದ ಕೆ. ಇ. ಎ. ಪ್ರಭಾತ್ ರಂಗಮಂದಿರದಲ್ಲಿ ವಿದ್ಯುಕ್ತವಾಗಿ ತನ್ನ ರಂಗಪ್ರವೇಶವನ್ನು ‘’ನೃತ್ಯ ದ್ಯುತಿ’’ ಎಂಬ ವಿಶಿಷ್ಟ ಶೀರ್ಷಿಕೆಯಲ್ಲಿ ನೆರವೇರಿಸಿಕೊಳ್ಳಲಿದ್ದಾರೆ. ಇವರ ಸುಮನೋಹರ ನೃತ್ಯವಲ್ಲರಿಯನ್ನು ಕಣ್ತುಂಬಿಕೊಳ್ಳಲು ಎಲ್ಲಾ ಕಲಾರಸಿಕರಿಗೂ…

Read More

ಧಾರವಾಡ : ಅಭಿನಯ ಭಾರತಿ (ರಿ.) ಇದರ ವತಿಯಿಂದ ‘ವಜ್ರ ಸಿರಿ ರಂಗೋತ್ಸವ 2024’ ಕಾರ್ಯಕ್ರಮವು ಧಾರವಾಡ ಕರ್ನಾಟಕ ಕಾಲೇಜಿನ ಆವರಣದ ಸೃಜನಾ ರಂಗಮಂದಿರದಲ್ಲಿ ದಿನಾಂಕ 31 ಆಗಸ್ಟ್ 2024ರಂದು ಪ್ರಾರಂಭವಾಯಿತು. ವಜ್ರ ಸಿರಿ ರಂಗೋತ್ಸವದ ಪ್ರಥಮ ದಿನದ ಚಾಲನೆಯನ್ನು ಡಾ. ಅಜಿತ ಪ್ರಸಾದ ಇವರು ನೆರವೇರಿಸುತ್ತ “ದಿ. ಡಾ. ನಾ. ವಜ್ರಕುಮಾರ ಇವರು ಧರ್ಮಧಿಕಾರಿ ಡಿ. ಡಾ. ವೀರೇಂದ್ರ ಹೆಗ್ಗಡೆಯವರ ಅನುಗ್ರಹದಿಂದ ಅಳಿವಿನಂಚಿನ್ನಲ್ಲಿದ್ದ ಜೆ.ಎಸ್.ಎಸ್. ಸಂಸ್ಥೆಗಳನ್ನು ಉಳಿಸಿದ ರೀತಿ, 49 ವರ್ಷ ಕಾಲ ಸತತವಾಗಿ ಬೆಳೆಸಿದ ರೀತಿ ಮತ್ತು ಸಾಂಸ್ಕೃತಿಕ, ಶೈಕ್ಷಣಿಕ ವಾತಾವರಣಕ್ಕೆ ಪೂರಕವಾಗಿ ಅಭಿವೃದ್ಧಿಗೊಳಿಸಿದ ರೀತಿಯನ್ನು ಮರೆಯಲಾಗದು. ಈ ದಿಕ್ಕಿನಲ್ಲಿ ಅಭಿನಯ ಭಾರತಿ ಇಂದು ಮಾಡುತ್ತಿರುವ ‘ವಜ್ರ ಸಿರಿ ರಂಗೋತ್ಸವ’ ಶ್ಲಾಘನೀಯ” ಎಂದು ಹೇಳಿದರು. ಶ್ರೀಮತಿ ಸುಮನಾ ವಜ್ರಕುಮಾರ ಇವರು ದಿ. ನ. ವಜ್ರಕುಮಾರ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿದರು. ಅವರ ಜತೆ ಡಾ. ಅಜಿತ್ ಪ್ರಸಾದ, ಬ್ರಹ್ಮ ಪ್ರಕಾಶ್, ಮಹಾವೀರ್ ಉಪಾಧ್ಯ, ಸೂರಜ್ ಜೈನ ಮಲ್ಲಿಕಾರ್ಜುನಪ್ಪ, ಶ್ರೀಮತಿ…

Read More

ಬೆಂಗಳೂರು : ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರವು ತನ್ನ 8ನೇ ಆವೃತ್ತಿಯ ವಿದ್ಯಾರ್ಥಿಗಳ ಘಟಿಕೋತ್ಸವ ಹಾಗೂ 9ನೇ ಆವೃತ್ತಿಯ ವಿದ್ಯಾರ್ಥಿಗಳ ಮೊದಲನೇ ಸೆಮಿಸ್ಟರ್ ನ ಕಲಿಕಾ ಭಾಗವಾಗಿ ಪ್ರಸ್ತುತ ಪಡಿಸಲಿರುವ ಶಾಂತಾ ಗಾಂಧಿ ವಿರಚಿತ ‘ಜಸ್ಮಾ ಓಡನ್’ ನಾಟಕವನ್ನು ಖ್ಯಾತ ರಂಗ ನಿರ್ದೇಶಕಿ ಡಾ. ಬಿ . ಜಯಶ್ರೀಯವರ ನಿರ್ದೇಶನದಲ್ಲಿ ದಿನಾಂಕ 04-09-2024ರಿಂದ 06-09-2024ರವರೆಗೆ ಬೆಂಗಳೂರಿನ ಮಲ್ಲತ್ತಹಳ್ಳಿಯಲ್ಲಿರುವ ಕಲಾಗ್ರಾಮದ ಸಮುಚ್ಛಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಪ್ರದರ್ಶನದ ವಿವರಗಳು: 4ನೇ ಸೆಪ್ಟೆಂಬರ್ 2024ರಂದು ಸಂಜೆ 7-00 ಗಂಟೆಗೆ (ಸಂಜೆ 5-30 ಘಟಿಕೋತ್ಸವ) 5 ಹಾಗೂ 6ನೇ ಸೆಪ್ಟೆಂಬರ್ ಪ್ರತಿದಿನ ಮಧ್ಯಾಹ್ನ 3-30 ಮತ್ತು ಸಂಜೆ 7-00 ಗಂಟೆಗೆ ನಾಟಕ – ‘ಜಸ್ಮಾ ಓಡನ್’ ರಚನೆ – ಶಾಂತಾ ಗಾಂಧಿ ಕನ್ನಡ ಅನುವಾದ – ವೈಶಾಲಿ ಕಾಸರವಳ್ಳಿ ರಂಗಸಜ್ಜಿಕೆ – ಶಶಿಧರ ಅಡಪ ಸಂಗೀತ, ಪರಿಕಲ್ಪನೆ, ನಿರ್ದೇಶನ – ಡಾ. ಬಿ. ಜಯಶ್ರೀ ಸ್ಥಳ – ಸಮುಚ್ಛಯ ಭವನ, ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಂಗಳೂರು ವಿಶ್ವವಿದ್ಯಾಲಯದ…

Read More

ಕಾಸರಗೋಡು : ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ದಿನಾಂಕ 31 ಆಗಸ್ಟ್ 2024ನೇ ಶನಿವಾರ ಶ್ರೀ ಧರ್ಮಸ್ಥಳ ಶಿಕ್ಷಣ ಕ್ಷೇತ್ರದ ಕಾರ್ಯದರ್ಶಿ, ಧರ್ಮಸ್ಥಳ ಮೇಳದ ಯಜಮಾನರಾದ ಶ್ರೀ ಡಿ. ಹರ್ಷೇಂದ್ರ ಕುಮಾರ್ ಇವರಿಗೆ ‘ಗೌರವ ಗಾನ ನಮನ’ ಸಲ್ಲಿಸಲಾಯಿತು. ಈ ಕಾರ್ಯಕ್ರಮದಲ್ಲಿ ಹರ್ಷೇಂದ್ರ ಕುಮಾರ್ ಧರ್ಮಸ್ಥಳ ಇವರು ಮಾತನಾಡಿ “ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಇದೊಂದು ಯಕ್ಷಗಾನ ಕ್ಷೇತ್ರದಲ್ಲಿ ಅದ್ಭುತ. ಯಕ್ಷಗಾನದ ಅಧ್ಯಯನಕ್ಕೆ ಬೇಕಾಗುವ ಸಮಗ್ರ ದಾಖಲೆಗಳನ್ನು ಸಂಗ್ರಹಿಸಿ ಮುಂದಿನ ಪೀಳಿಗೆ ಹಸ್ತಾಂತರಿಸುವ ಪ್ರತಿಷ್ಠಾನದ ಸಂಕಲ್ಪ ಯಶಸ್ವಿಯಾಗಲಿ. ಮುಂದೆ ಇದೊಂದು ಪ್ರವಾಸೋದ್ಯಮದ ಕೇಂದ್ರವಾಗಿ ಮೆರೆಯಲಿ. ಸತತ 35 ವರ್ಷ ಧರ್ಮಸ್ಥಳ ಮೇಳದಲ್ಲಿ ಯಕ್ಷಗಾನ ಭಾಗವತಿಗೆ ಮಾಡುತ್ತಾ ಬಂದಿರುವ ರಾಮಕೃಷ್ಣ ಮಯ್ಯ ಸಿರಿಬಾಗಿಲು ಇವರ ಸಾಧನೆ ಮೆಚ್ಚುವಂತದ್ದು, ತನ್ನ ಕಾರ್ಯಕ್ಷೇತ್ರದ ಬಗ್ಗೆ ಅಪಾರ ಗೌರವ, ಕಾಳಜಿಯಿಂದ ಕಾರ್ಯತತ್ಪರರಾದ ಬೆರಣಿಕೆಯ ಕಲಾವಿದರಲ್ಲಿ ಶ್ರೀ ಮಯ್ಯರು ಒಬ್ಬರು. ಛಲವಿದ್ದರೆ ಏನನ್ನೂ ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಶ್ರೀ ಮಂಜುನಾಥ ಸ್ವಾಮಿ ಮಹಾಗಣಪತಿಯು ಸದಾ ಅನುಗ್ರಹಿಸಲಿ”…

Read More