Author: roovari

ಹೊನ್ನಾವರ : ಚಿಂತನ ಉತ್ತರ ಕನ್ನಡ, ಚಿಂತನ ರಂಗ ಅಧ್ಯಯನ ಕೇಂದ್ರ ಹಾಗೂ ಪ್ರೀತಿಪದ ಹೊನ್ನಾವರ ಇವರ ವತಿಯಿಂದ ಬಹುರೂಪಿಯ ಪ್ರಕಟಣೆ, ರಂಗಕರ್ಮಿ ಕಿರಣ ಭಟ್ ರವರ ‘ಹೌಸ್ ಫುಲ್’ ರಂಗಕೃತಿ ಬಿಡುಗಡೆ ಸಮಾರಂಭವು ದಿನಾಂಕ 26 ಫೆಬ್ರವರಿ 2025ರಂದು ಹೊನ್ನಾವರದ ನಾಮಧಾರಿ ಕಲ್ಯಾಣ ಮಂಟಪದಲ್ಲಿ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತರಾದ ಜಿ.ಯು. ಭಟ್ ಮಾತನಾಡಿ “ಸದ್ದಿಲ್ಲದೆ ಸಂವಿಧಾನವನ್ನು ಬದಲಿಸಲು ಪ್ರಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ವಿಚಾರವಂತಿಕೆಯನ್ನು ರಕ್ಷಿಸಿಕೊಳ್ಳಬೇಕಾದ ಅವಶ್ಯಕತೆ ಇದೆ. ರಂಗಭೂಮಿ ಸದಾ ಜೀವಂತವಾದದ್ದು. ಚಲನಶೀಲತೆಯನ್ನು ಉಳ್ಳದ್ದು. ಈ ರಂಗಭೂಮಿ ಜನರ ಮನಸ್ಸಿನ ಕನ್ನಡಿ. ಹಾಗಾಗಿಯೇ ರಂಗಭೂಮಿ ಬದಲಾವಣೆಯನ್ನು ಪ್ರೇರೇಪಿಸುತ್ತದೆ. ಕಿರಣ್ ಭಟ್ ಅವರ ‘ಹೌಸ್ ಫುಲ್’ ಕೃತಿ ಬಿ.ವಿ. ಕಾರಂತರ ನಂತರ ನಡೆಯುತ್ತಿರುವ ಹವ್ಯಾಸಿ ರಂಗಭೂಮಿಯ ಚಟುವಟಿಕೆಗಳನ್ನು ಹಿಡಿದಿಟ್ಟಿದೆ. ರಂಗ ಕೈರಳಿ ಕೃತಿಯ ಮೂಲಕ ಓದುಗರ ಮನ ಗೆದ್ದ ಕಿರಣ್ ಈಗ ರಂಗ ವಿಮರ್ಶೆಯ ಮೂಲಕ ರಂಗ ಚರಿತ್ರೆಯನ್ನು ದಾಖಲಿಸಿದ್ದಾರೆ” ಎಂದರು. ಪತ್ರಕರ್ತ, ಬಹುರೂಪಿಯ ಜಿ.ಎನ್. ಮೋಹನ್…

Read More

ಪುತ್ತೂರು : ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನ ಮುಂಡೂರು ನರಿಮೊಗರು ಇಲ್ಲಿ ಮಹಾಶಿವರಾತ್ರಿ ಉತ್ಸವದ ಅಂಗವಾಗಿ ದಿನಾಂಕ 26 ಫೆಬ್ರವರಿ 2025ರಂದು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ‘ದಕ್ಷ ಯಜ್ಞ’ ಎಂಬ ತಾಳಮದ್ದಳೆ ಜರಗಿತು. ಹಿಮ್ಮೇಳದಲ್ಲಿ ಭಾಗವತರಾಗಿ ನಾರಾಯಣ ಶಬರಾಯ ಹಾಗೂ ಚೆಂಡೆ, ಮದ್ದಲೆಗಳಲ್ಲಿ ಪದ್ಯಾಣ ಜಯರಾಮ ಭಟ್ ಮತ್ತು ಮುರಳೀಧರ ಕಲ್ಲೂರಾಯ ಸಹಕರಿಸಿದರು. ಮುಮ್ಮೇಳದಲ್ಲಿ ಶುಭಾ ಜೆ.ಸಿ. ಅಡಿಗ (ಈಶ್ವರ), ಕಿಶೋರಿ ದುಗ್ಗಪ್ಪ ನಡುಗಲ್ಲು (ದಾಕ್ಷಾಯಿಣಿ), ಗಾಯತ್ರಿ ಹೆಬ್ಬಾರ್ (ವೃದ್ಧ ಬ್ರಾಹ್ಮಣ), ಹರಿಣಾಕ್ಷಿ ಜೆ. ಶೆಟ್ಟಿ (ದಕ್ಷ), ಶಾರದಾ ಅರಸ್ (ವೀರಭದ್ರ) ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ವಂದಿಸಿದರು.

Read More

ಮಂಗಳೂರು : ಅಶೋಕನಗರ ಯುವಕ ಸಂಘ (ರಿ.) ಅಶೋಕನಗರ ಮಂಗಳೂರು ಇದರ 64ನೇ ವಾರ್ಷಿಕೋತ್ಸವ ಸಂಭ್ರಮದ ಪ್ರಯುಕ್ತ ಸನ್ಮಾನ ಸಮಾರಂಭ, ಪ್ರತಿಭಾ ಪುರಸ್ಕಾರ, ಗೌರವ ಅಭಿನಂದನೆ ಮತ್ತು ಸಾಂಸ್ಕೃತಿಕ ವೈಭವ ಕಾರ್ಯಕ್ರಮಗಳನ್ನು ದಿನಾಂಕ 01 ಮಾರ್ಚ್ 2025ರಂದು ಸಂಜೆ 7-00 ಗಂಟೆಗೆ ಅಶೋಕನಗರ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸಮಾರಂಭವು ಭಾರತ ಸರಕಾರ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಮಂಗಳೂರು ಇವರ ಆಡಳಿತಾಧಿಕಾರಿ ಜಗದೀಶ ಕೆ. ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ಜಿಲ್ಲಾ ಪ್ರಶಸ್ತಿ ವಿಜೇತ ಉರ್ವ ಅಶೋಕನಗರದ ಬಿಲ್ಲವ ಸಂಘಕ್ಕೆ ಗೌರವ ಅಭಿನಂದನೆ ಹಾಗೂ ಮಾಜಿ ಸೈನಿಕ ಪ್ರಸನ್ನ ಮತ್ತು ಅಂಗನವಾಡಿ ಸಹಾಯಕಿ ಶ್ರೀಮತಿ ವಿಶಾಲಾಕ್ಷಿ ಇವರನ್ನು ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಬೈಕಾಡಿ ಪ್ರತಿಷ್ಠಾನದ ಅಂಗ ಸಂಸ್ಥೆ ‘ರತ್ನ ಕಲಾಲಯ’ದ ನಿರ್ದೇಶಕಿ ಅಕ್ಷತಾ ಬೈಕಾಡಿ ಇವರ ಶಿಷ್ಯ ವೃಂದ ಮತ್ತು ಕಲಾವಿದರಿಂದ ನೃತ್ಯ-ಗಾನ-ಕುಂಚ ಹಾಗೂ ವೈವಿಧ್ಯಮಯ ಕಾರ್ಯಕ್ರಮಗಳು ಪ್ರಸ್ತುತಗೊಳ್ಳಲಿವೆ.

Read More

ಕುಂದಾಪುರ : ಯಶಸ್ವೀ ಕಲಾವೃಂದ (ರಿ.) ಕೊಮೆ, ತೆಕ್ಕಟ್ಟೆ ಸಂಯೋಜನೆಯಲ್ಲಿ ಶ್ರೀ ಕುಂದೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ದಿನದ ಪ್ರಯುಕ್ತ ದಿನಾಂಕ 26 ಫೆಬ್ರವರಿ 2025ರಂದು ತಾಳಮದ್ದಳೆ-ಯಕ್ಷಗಾನ-ಭರತನಾಟ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಇದೇ ಸಂದರ್ಭದಲ್ಲಿ ಯಶಸ್ವೀ ಕಲಾವೃಂದ ಕೊಮೆ, ತೆಕ್ಕಟ್ಟೆಯ ತಂಡದ ಭಾಗವತರಾದ ಗುರು ಲಂಬೋದರ ಹೆಗಡೆ ನಿಟ್ಟೂರು ಇವರನ್ನು ಗೌರವಿಸಲಾಯಿತು. ತಂಡವನ್ನು ಗೌರವಿಸಿ ಮಾತನಾಡಿದ ಆಡಳಿತ ಮಂಡಳಿಯ ಮುಖ್ಯಸ್ಥ ವಾಸುದೇವ ಯಡಿಯಾಳ್ “ಕನ್ನಡ ಭಾಷಾಭಿವೃದ್ಧಿಯ ಏಕೈಕ ಕಲೆ ಯಕ್ಷಗಾನ. ಮಕ್ಕಳ ಮೂಲಕ ಕಲೆಯನ್ನು ಸಾಂಕ್ರಾಮಿಕವಾಗಿ ಹರಡಿಸುವ ಕಾರ್ಯ ಶ್ಲಾಘನೀಯ. ಇತಿಹಾಸ ಪ್ರಸಿದ್ಧವಾದ ಪುರಾತನ ದೇಗುಲದಲ್ಲಿ ಈಶನಿಗೆ ಪ್ರಿಯವಾದ ಕಲೆಯ ವಿವಿಧ ಆಯಾಮಗಳ ಪ್ರದರ್ಶನ ಶಿವರಾತ್ರಿಯಂದು ಅತ್ಯಂತ ಸೂಕ್ತ. ಮಕ್ಕಳಿಗೆ ಅವಕಾಶ ಕಲ್ಪಿಸುವುದರಿಂದ ದೇವರಿಗೆ ಪ್ರಿಯವಾಗುವುದು ಸತ್ಯ” ಎಂದರು. “ಕಲೆಗೂ, ಧಾರ್ಮಿಕ ಕಾರ್ಯಕ್ರಮಕ್ಕೂ ಬಹಳ ಸಾಮ್ಯತೆ. ಪ್ರತೀ ವರ್ಷ ನೂರಾರು ಮಕ್ಕಳು ಕುಂದೇಶ್ವರದ ರಂಗದಲ್ಲಿ ಗೆಜ್ಜೆ ಕಟ್ಟುತ್ತಾರೆ. ಬಹಳ ಹಿಂದಿನಿಂದಲೂ ಪ್ರಸಿದ್ಧತೆಯನ್ನು ಪಡೆದುಕೊಂಡ ಕುಂದೇಶ್ವರ ದೇಗುಲ ಸಾಂಸ್ಕೃತಿಕವಾಗಿಯೂ ಹೆಸರಾಗಿದೆ” ಎಂದು ಆಡಳಿತ ನಿರ್ದೇಶಕ ಜಿ.ಎಸ್.…

Read More

ಮೈಸೂರು : ರಂಗಾಂತರಂಗ ಮೈಸೂರು (ರಿ.) ಮಕ್ಕಳ ಅಭಿನಯ ರಂಗಶಾಲೆ ಇವರ ವತಿಯಿಂದ ‘ಕಲರವ’ ಮಕ್ಕಳ ಬೇಸಿಗೆ ಶಿಬಿರವನ್ನು ದಿನಾಂಕ 10 ಏಪ್ರಿಲ್ 2025ರಿಂದ 10 ಮೇ 2025ರವರೆಗೆ ಬೆಳ್ಳಿಗೆ 10-00 ಗಂಟೆಯಿಂದ ಸಂಜೆ 4-00 ಗಂಟೆ ತನಕ ಆಯೋಜಿಸಲಾಗಿದೆ. ನಾಟಕ, ಮೈಮ್, ಜನಪದ ಗೀತೆಗಳು, ಯೋಗ ಮತ್ತು ಧ್ಯಾನ, ನೃತ್ಯ, ಚಿತ್ರಕಲೆ, ದೇಶಿ ಆಟಗಳು, ನಿರೂಪಣ ಕೌಶಲ್ಯ, ಧ್ವನಿ ಮತ್ತು ಮಾತು, ಭಾಷಾ ಕೌಶಲ್ಯ, ಪರಿಸರ ಮತ್ತು ಪ್ರಾಣಿಗಳ ಮಾಹಿತಿ, ಮಕ್ಕಳಿಗಾಗಿ ಸಿನಿಮಾ ವೀಕ್ಷಣೆ, ಪೌರಾಣಿಕ ಮತ್ತು ಸಾಮಾಜಿಕ ಐತಿಹಾಸಿಕ ಕಥೆಗಳ ಮಾಹಿತಿ ಈ ಶಿಬಿರದ ಚಟುವಟಿಕೆಗಳಗಿದ್ದು, ಅಭಿನಯ ತರಬೇತಿ, ಭರತನಾಟ್ಯ, ಸಂಗೀತ ಮತ್ತು ನೃತ್ಯ ವಾರಾಂತ್ಯ ತರಗತಿಗಳನ್ನು ಈ ರಂಗಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9739919004 ಸಂಖ್ಯೆಯನ್ನು ಸಂಪರ್ಕಿಸಿರಿ.

Read More

ಶಿವಮೊಗ್ಗ : ವಸುಧಾ ಕರಣಿಕ್ – ವೈಶಾಲಿ ಭಟ್ ಇವರ ಜನ್ಮದಿನೋತ್ಸವ ನಿಮಿತ್ತ ಸನ್ಮಾನ ಸಮಾರಂಭ ಮತ್ತು ಭರತನಾಟ್ಯ ಪ್ರಸ್ತುತಿಯು ದಿನಾಂಕ 02 ಮಾರ್ಚ್ 2025ರಂದು ಸಂಜೆ 5-00 ಗಂಟೆಗೆ ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ನಡೆಯಲಿದೆ. ಶಿವಮೊಗ್ಗ ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊ. ಹೆಚ್.ಆರ್. ಶಂಕರನಾರಾಯಣ ಶಾಸ್ತ್ರಿ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಡಾ. ವಿದುಷಿ ವಸುಂಧರಾ ದೊರೆಸ್ವಾಮಿಯವರ ಶಿಷ್ಯೆ ಮಂಗಳೂರಿನ ನಾದನೃತ್ಯ ಸ್ಕೂಲ್ ಆಫ್ ಡಾನ್ಸ್ ಎಂಡ್ ಕಲ್ಚರಲ್ ಟ್ರಸ್ಟ್ ಇದರ ನಿರ್ದೇಶಕರಾದ ಡಾ. ವಿದುಷಿ ಭ್ರಮರಿ ಶಿವಪ್ರಕಾಶ್ ಇವರನ್ನು ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಸನ್ಮಾನಿತರು ‘ಕುಮಾರವ್ಯಾಸ ನೃತ್ಯ ಭಾರತ’ ಶಾಸ್ತ್ರೀಯ ನೃತ್ಯ ಪ್ರಸ್ತುತಿ ನೀಡಲಿದ್ದಾರೆ.

Read More

ಸಾಹಿತ್ಯದ ಗೀಳು ಹಚ್ಚಿಕೊಳ್ಳುವುದು ಸುಲಭಸಾಧ್ಯವಾದ ಕೆಲಸವಲ್ಲ. ಭಾಷೆ, ಸಾಹಿತ್ಯದ ಹಿನ್ನೆಲೆ ಇರುವವರಿಗೆ ಅದು ಬಹಳ ಕಷ್ಟದ ಕೆಲಸವೂ ಅಲ್ಲ. ವೃತ್ತಿ ಜೀವನಕ್ಕೂ ಸಾಹಿತ್ಯಕ್ಕೂ ಹೊಂದಾಣಿಕೆ ಕಷ್ಟವಾಗಿದ್ದರೂ, ಸಾಹಿತ್ಯ ಲೋಕಕ್ಕೆ ಅನನ್ಯ ಕೊಡುಗೆ ನೀಡುವ ಮೂಲಕ ಸಾಧನೆ ಮಾಡಿದ ಅನೇಕರಲ್ಲಿ ನ್ಯಾಯವಾದಿ ಕೋಣನ ವೀರಣ್ಣ ಚೆನ್ನಬಸಪ್ಪನವರೂ ಒಬ್ಬರು. ಚೆನ್ನಬಸಪ್ಪನವರು ಬಳ್ಳಾರಿ ಜಿಲ್ಲೆಯ, ಕೂಡ್ಲಿಗಿ ತಾಲೂಕಿನ, ಆಲೂರು ಮಜರಾ ಗ್ರಾಮದಲ್ಲಿ 1922 ಫೆಬ್ರವರಿ 27ರಂದು ಜನಿಸಿದರು. ತಂದೆ ಕೋಣನ ವೀರಣ್ಣ, ತಾಯಿ ಬಸಮ್ಮ. ಕೋ. ಚನ್ನಬಸಪ್ಪ ಇವರ ಹಿರಿಯರು ಕೋಣಗಳ ಮೇಲೆ ದವಸಧಾನ್ಯ, ದಿನಸಿಗಳನ್ನು ಹೇರಿಕೊಂಡು ವ್ಯಾಪಾರ ಮಾಡುತ್ತಿದ್ದುದರಿಂದ ಈ ಉಪನಾಮ ರೂಢಿಯಲ್ಲಿ ಬಂದಿದೆ. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ನಂತರ ಬಳ್ಳಾರಿಯಲ್ಲಿ ಪ್ರೌಢಶಾಲಾ ಶಿಕ್ಷಣ, ಅನಂತಪುರದಲ್ಲಿ ಕಾಲೇಜು ಶಿಕ್ಷಣ ಪಡೆದುಕೊಂಡರು. ದೇಶದಲ್ಲಿ ಸ್ವಾತಂತ್ರ್ಯದ ಹೋರಾಟ ಬಿರುಸಾಗಿ ನಡೆಯುತ್ತಿದ್ದ ಸಂದರ್ಭವದು. ಚೆನ್ನಬಸಪ್ಪನವರು ವಿದ್ಯಾರ್ಥಿ ಮುಖಂಡರಾಗಿ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ಬಂಧನಕ್ಕೊಳಗಾಗಿ ಸೆರೆಮನೆ ವಾಸವನ್ನೂ ಅನುಭವಿಸಿದರು. ನಂತರ ಬೆಳಗಾವಿ ಕಾಲೇಜಿನಿಂದ ಕಾನೂನು ಪದವಿ, ಚರಿತ್ರೆ…

Read More

ಬೆಳಗಾವಿ : ವಿಚಾರವಾಣಿ ಸಾಹಿತ್ಯ ಪ್ರಕಾಶನ ನೇಸರಗಿ ಹಾಗೂ ಭವಾನಿ ಪ್ರಕಾಶನ ಮಲ್ಲಮ್ಮನ ಬೆಳವಡಿ ಜಂಟಿಯಾಗಿ ಆಯೋಜಿಸುವ ಶ್ರೀ ಸಿ. ವೈ. ಮೆಣಸಿನಕಾಯಿ ರಚಿಸಿದ ‘ಭೋಜರಾಜನ ಪುನರ್ಜನ್ಮ ಇನ್ನಿತರ ಸತ್ಯಕಥೆಗಳು’ (ಅನುವಾದಿತ) ಹಾಗೂ ಶ್ರೀ ಲಕ್ಷ್ಮಣ ಕೆ. ಡೊಂಬರ ರಚಿಸಿದ ‘ಈ ಸ್ನೇಹ ಬಂಧನ’ ಎರಡು ಕೃತಿಗಳ ಲೋಕಾರ್ಪಣಾ ಸಮಾರಂಭವು ದಿನಾಂಕ 02 ಮಾರ್ಚ್ 2025ರ ರವಿವಾರದಂದು ಬೆಳಿಗ್ಗೆ ಘಂಟೆ 10.00ಕ್ಕೆ ಬೆಳಗಾವಿಯ ರಾಣಿ ಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದಲ್ಲಿ ನಡೆಯಲಿದೆ. ಕ. ಸಾ.ಪ. ಬೆಳಗಾವಿ ಇದರ ಜಿಲ್ಲಾಧ್ಯಕ್ಷರಾದ ಶ್ರೀಮತಿ ಮಂಗಲಾ ಶ್ರೀ ಮೆಟಗುಡ್ಡ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಬೆಳಗಾವಿಯ ಜಿಲ್ಲಾಧಿಕಾರಿಗಳಾದ ಶ್ರೀ ಮೊಹ್ಮದ್ ರೋಷನ್ (ಐ. ಎ. ಎಸ್) ಕೃತಿಗಳ ಲೋಕಾರ್ಪಣೆ ಗೊಳಿಸಲಿದ್ದಾರೆ. ಹಿರಿಯ ಭಾಷಾ ಶಿಕ್ಷಕರು ಹಾಗೂ ಸಾಹಿತಿಗಳಾದ ಡಾ. ಸುನೀಲ ಪರೀಟ ಇವರು ‘ಭೋಜರಾಜನ ಪುನರ್ಜನ ಇನ್ನಿತರ ಸತ್ಯಕಥೆಗಳು’ ಕೃತಿಯನ್ನು ಪರಿಯಿಸಲಿದ್ದು, ಕ. ಸಾ. ಪ. ಬೆಳಗಾವಿಯ ಮಾಜಿ ಜಿಲ್ಲಾಧ್ಯಕ್ಷ ಹಾಗೂ…

Read More

ಮಂಗಳೂರು : ಶ್ರೀ ಉಮಾಮಹೇಶ್ವರ ಯಕ್ಷಗಾನ ಅಧ್ಯಯನ ಕೇಂದ್ರ, ಅತ್ತಾವರ, ಇದರ 4ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವು ದಿನಾಂಕ 25 ಫೆಬ್ರವರಿ 2025ರಂದು ಮಂಗಳೂರಿನ ಅತ್ತಾವರದ ಶ್ರೀ ಉಮಾಮಹೇಶ್ವರ ದೇವಳದ ಆವರಣದಲ್ಲಿ ನಡೆಯಿತು. ಸಮಾರಂಭದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ‘ಯಕ್ಷ ಸಿರಿ’ ಪ್ರಶಸ್ತಿ ಪುರಸ್ಕೃತ ಯಕ್ಷಗುರುಗಳಾದ ಶ್ರೀ ರಾಮಾ ಸಾಲಿಯನ್ ಮಂಗಲ್ಪಾಡಿ ಇವರು ಯಕ್ಷರಂಗಕ್ಕೆ ಸಲ್ಲಿಸಿದ ಅನನ್ಯ ಸೇವೆಯನ್ನು ಗುರುತಿಸಿ “ಯಕ್ಷ ಮಾಣಿಕ್ಯ” ಎಂಬ ಬಿರುದನ್ನು ನೀಡಿ ಗೌರವಿಸಲಾಯಿತು. ಯಕ್ಷಗುರುಗಳನ್ನು ಸನ್ಮಾನಿಸಿದ ಸಾಹಿತಿ, ನಾಟಕಕಾರ, ನಟ, ಹಾಗೂ ಖ್ಯಾತ ವಕೀಲರಾದ ಶ್ರೀ ಶಶಿರಾಜ್ ಕಾವೂರು ಮಾತಾನಾಡಿ “ಇವತ್ತು ಯುವ ಜನಾಂಗವನ್ನು ಯಕ್ಷ ರಂಗವು ಸೂಜಿಕಲ್ಲಿನಂತೆ ಸೆಳೆಯುತ್ತಿದೆ. ಮುಂದಿನ ಪರಂಪರೆಗೆ ಯಕ್ಷಗಾನ ಉಳಿಸುವ ನಿಟ್ಟಿನಲ್ಲಿ ಹಲವಾರು ಯುವಕರು, ಯವತಿಯರು, ಮಕ್ಕಳನ್ನು ತಯಾರಿಗೊಳಿಸುವ ನಿಟ್ಟಿನಲ್ಲಿ ಯಕ್ಷಗುರು ರಾಕೇಶ್ ರೈ ಹಾಗೂ ಶ್ರಿ ರಾಮ ಸಾಲಿಯನ್ ಮಂಗಲ್ಪಾಡಿ ಅಂತಹ ಶ್ರೇಷ್ಠ ಗುರುಗಳು ಇಂದು ಅವಿರತ ಶ್ರಮಿಸುತ್ತಿದ್ದಾರೆ” ಎಂದರು. ಸಭಾ ಕಾರ್ಯಕ್ರಮವನ್ನು ಶ್ರೀ ಉಮಾಮಹೇಶ್ವರ ಕ್ಷೇತ್ರ ಅತ್ತಾವರದ…

Read More

ಹೊನ್ನಾವರ: ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ (ರಿ.) ಇದರ 90ನೇ ವರ್ಷದ ಸಂಭ್ರಮದಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿರುವ ಶ್ರೀ ಧರ್ಮಸ್ಥಳ ಮೇಳದ ಪ್ರಧಾನ ಭಾಗವತರಾದ ಸಿರಿಬಾಗಿಲು ರಾಮಕೃಷ್ಣ ಮಯ್ಯ ಇವರಿಗೆ “ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ-15” ಪ್ರಶಸ್ತಿ ಪ್ರದಾನ ಸಮಾರಂಭ ದಿನಾಂಕ 25 ಫೆಬ್ರವರಿ 2025 ರಂದು ಹೊನ್ನಾವರದ ಗುಣವಂತೆಯಲ್ಲಿ ನಡೆಯಿತು. ಈ ವೇಳೆ ಯಕ್ಷಗಾನದ ಹಿರಿಯ ಅರ್ಥದಾರಿ ಜಬ್ಬಾರ್ ಸಮೋ ಸಂಪಾಜೆ ಹಾಗೂ ಯಕ್ಷಗಾನ ಭಾಗವತ ಹಾಗೂ ಸಂಘಟಕ ರಾದ ಡಾ. ಸುರೇಂದ್ರ ಪಣಿಯೂರು ಇವರನ್ನು ಸನ್ಮಾನಿಸಲಾಯಿತು.

Read More