Author: roovari

ಮೈಸೂರು : ತಿರಂಗಾ ಥಿಯೇಟರ್ ಪ್ರಸ್ತುತ ಪಡಿಸುವ ಅಂಬಿಕಾ ಈಡಿಗ ರಚನೆ ಮತ್ತು ನಿರ್ದೇಶನದಲ್ಲಿ ‘ಕೃಷ್ಣಗೀತೆ’ ಸಂಗೀತ ಕಾರ್ಯಕ್ರಮವನ್ನು ದಿನಾಂಕ 08 ಜೂನ್ 2025ರಂದು ಸಂಜೆ 6-30 ಗಂಟೆಗೆ ಮೈಸೂರಿನ ನಟನ ರಂಗಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ 7259537777 ಮತ್ತು 8123729998 ಸಂಖ್ಯೆಯನ್ನು ಸಂಪರ್ಕಿಸಿರಿ.

Read More

ಬೆಂಗಳೂರು : ಯಕ್ಷರಂಗದ ಸುಪ್ರಸಿದ್ಧ ಕಲಾವಿದರ ಮೇಳೈಸುವಿಕೆಯಲ್ಲಿ ಹೆಬ್ಬಾಡಿ ಸುದೀಪ್ ಶೆಟ್ಟಿ ಸಂಯೋಜನೆಯಲ್ಲಿ ‘ಯಕ್ಷ ಸಮಾಗಮ 7’ ಯಕ್ಷಗಾನ ಪ್ರದರ್ಶನವನ್ನು ದಿನಾಂಕ 07 ಜೂನ್ 2025ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ‘ಕುರುಕುಲ ತಿಲಕ’, ‘ಮುದುಕನ ಮದುವೆ’, ‘ಅಮೃತ ಕಲಶ’ ಮತ್ತು ‘ಪ್ರಚಂಡ ಪರಶುಧರ’ ಎಂಬ ಪ್ರಸಂಗದ ಯಕ್ಷಗಾನ ಪ್ರದರ್ಶನ ನಡೆಯಲಿದ್ದು, ಹೆಚ್ಚಿನ ಮಾಹಿತಿಗಾಗಿ 9591311056 ಸಂಖ್ಯೆಯನ್ನು ಸಂಪರ್ಕಿಸಿರಿ.

Read More

ಮಂಗಳೂರು : ಕೊಂಕಣಿ ಸಾಂಸ್ಕೃತಿಕ ಸಂಘ ಮಂಗಳೂರು, ಸಿದ್ದಿವಿನಾಯಕ ದೇವಸ್ಥಾನ ಮಂಗಳೂರು ವತಿಯಿಂದ ‘ದಮಯಂತಿ ಪುನಃ ಸ್ವಯಂವರ’ ಕೊಂಕಣಿ ಯಕ್ಷಗಾನ ಪ್ರದರ್ಶನ ದಿನಾಂಕ 31 ಮೇ 2025ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ ಸಿ. ಎ. ನಂದಗೋಪಾಲ ಶೆಣೈ ಮಾತನಾಡಿ “ಪ್ರಸ್ತುತ ದಿನಗಳಲ್ಲಿ ವಿವಿಧ ಕೊಂಕಣಿ ಕಾರ್ಯಕ್ರಮಗಳು ಸಾಕಷ್ಟು ನಡೆಯುತ್ತಿವೆ. ಆದರೆ, ಕೊಂಕಣಿ ಪ್ರೇಕ್ಷಕ ವರ್ಗ ಹೇಗೆ ಹೆಚ್ಚಿಸುವುದು ಎಂಬುದು ಸವಾಲಿನದ್ದಾಗಿದೆ. ಕೊಂಕಣಿ ಭಾಷಿಗರು ಕೊಂಕಣಿಯ ಕಂಪು ಮತ್ತಷ್ಟು ಪಸರಿಸಲು ನೆರವಾಗಬೇಕು. ಕೊಂಕಣಿಗರು ವಿಶ್ವದಲ್ಲೇ 40 ಲಕ್ಷ ಮಂದಿ ಇದ್ದೇವೆ. ಸಂಖ್ಯೆಯಲ್ಲಿ ಕಡಿಮೆ ಇದ್ದರೂ ವಿಶ್ವದಾದ್ಯಂತ ವ್ಯಾಪಿಸಿಕೊಂಡಿದ್ದೇವೆ. ಕೊಂಕಣಿ ಮಾತನಾಡುವ 40 ವಿವಿಧ ಪಂಗಡಗಳಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನ ವಿದೇಶದಲ್ಲಿದ್ದಾರೆ. ಕೊಂಕಣಿಯಲ್ಲಿ ಯಾವುದೇ ಸಂಸ್ಥೆ ಕಾರ್ಯಕ್ರಮ ಇದ್ದರೂ ಎಲ್ಲರೂ ಭಾಗವಹಿಸಬೇಕು. ಯಾರಿಗೂ ನಿರ್ಬಂಧವಿರಬಾರದು. ಎಲ್ಲರಿಗೂ ಅವಕಾಶ ನೀಡಬೇಕು. ಗೋವಾದಲ್ಲಿ ಕೊಂಕಣಿ ಭಾಷೆಯನ್ನು ಪ್ರೀತಿಸುವಂತೆ ನಮ್ಮಲ್ಲೂ ಭಾಷೆಯನ್ನು ಬೆಳೆಸುವ ಪ್ರವೃತ್ತಿ ಹೆಚ್ಚಾಗಬೇಕು.…

Read More

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಮಂದಿರದಲ್ಲಿ ರಾಜರ್ಷಿ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್ ಅವರ 141ನೆಯ ಜಯಂತ್ಯುತ್ಸವ ಕಾರ್ಯಕ್ರಮ ದಿನಾಂಕ 04 ಜೂನ್ 2025 ರಂದು ನಡೆಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ “ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೂ ಕನ್ನಡ ಸಾಹಿತ್ಯ ಪರಿಷತ್ತಿಗೂ ಇದ್ದ ಸಂಬಂಧ ತಾಯಿ-ಮಗುವಿನಷ್ಟೇ ನಿಕಟವಾದದ್ದು. ಅವರು ಕೇವಲ ಸಂಸ್ಥಾಪಕರು ಮಾತ್ರವಲ್ಲದೆ ಅದರ ಬೆಳವಣಿಗೆಯಲ್ಲಿಯೂ ಕೂಡ ನಿರಂತರವಾಗಿ ಆಸಕ್ತಿ ವಹಿಸುತ್ತಾ ಪೋಷಕರಾಗಿ, ಮಾರ್ಗದರ್ಶಕರಾಗಿ ಕನ್ನಡ ಸಾಹಿತ್ಯ ಪರಿಷತ್ತನ್ನು ಬೆಳೆಸುವುದರ ಜೊತೆಗೆ ಅದು ಸ್ವಾಯತ್ತ ಸಂಸ್ಥೆಯಾಗ ಬೇಕು ಎಂದು ಆರಂಭದಿಂದಲೇ ಪ್ರತಿಪಾದಿಸುತ್ತಾ ಬಂದವರು. 1918ರಲ್ಲಿ ನಾಲ್ಕನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಧಾರವಾಡದಲ್ಲಿ ಅಯೋಜಿತವಾದಾಗ ಸಮ್ಮೇಳನಾಧ್ಯಕ್ಷತೆಯ ಕಲ್ಪನೆ ಬಂದಿತು. ಸಮ್ಮೇಳನಾಧ್ಯಕ್ಷತೆಯ ಕುರಿತು ಮಹಾರಾಜರ ಸೂಚನೆಯನ್ನು ಅಪೇಕ್ಷಿಸಿ ಪಂಡಿತರ ನಿಯೋಗವು ಬಂದಾಗ ‘ಕನ್ನಡ ಸಾಹಿತ್ಯ ಪರಿಷತ್ತನ್ನು ನೋಡಿ ಕೊಳ್ಳಲು ಪರಿಣಿತರು ಇದ್ದಾರೆ, ಅವರು ನಿರ್ಣಯಿಸಲಿ, ಅರಮನೆ ಇದರಲ್ಲಿ ಮಧ್ಯ ಪ್ರವೇಶಿಸುವುದಿಲ್ಲ”…

Read More

ಕಮತಗಿ : ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘ(ರಿ.)ಕಮತಗಿ ವತಿಯಿಂದ ಕೊಡಮಾಡುವ 2025ನೇ ಸಾಲಿನ ರಾಜ್ಯಮಟ್ಟದ “ಮೇಘರತ್ನ ಪ್ರಶಸ್ತಿ”ಗೆ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ರಂಗಕರ್ಮಿ, ಹಿರಿಯ ಸಾಹಿತಿ, ನಟ ಹಾಗೂ ನಾಟಕಕಾರರಾದ ಶ್ರೀ ಮಹಾಂತೇಶ ಎಂ.ಗಜೇಂದ್ರಗಡ ಅವರು ಆಯ್ಕೆಯಾಗಿದ್ದಾರೆ. ಈ ವಾರ್ಷಿಕ ಪ್ರಶಸ್ತಿಯನ್ನು ಉತ್ತರ ಕರ್ನಾಟಕದ ಜೀವಮಾನ ಸಾಧನೆ ಮಾಡಿದ ಒಬ್ಬ ಮಹನೀಯರಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಯು ರೂಪಾಯಿ 5 ಸಾವಿರ ನಗದು ಹಾಗೂ ನೆನಪಿನ ಕಾಣಿಕೆ ಒಳಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭವು ಜೂನ್ ತಿಂಗಳ ಕೊನೆಯಲ್ಲಿ ಬಾಗಲಕೋಟೆ ಜಿಲ್ಲೆಯ ಇಳಕಲ್ ನಲ್ಲಿ ನಡೆಯಲಿದೆ.

Read More

ಆಧುನಿಕ ಕನ್ನಡ ಕಾವ್ಯ ನಿರ್ಮಾಪಕರಲ್ಲಿ ಬೇಂದ್ರೆಯವರದು ಎದ್ದು ಕಾಣುವ ಹೆಸರು. “ಒಂದು ಪೂರ್ಣ ಆಯುಷ್ಯವನ್ನು ಸಾರ್ಥಕವಾಗಿ ಸಫಲವಾಗಿ ಯಾರ ಕಾವ್ಯದ ಅಭ್ಯಾಸಕ್ಕಾಗಿ ಮೀಸಲಾಗಿಡಬಹುದೋ ಅಂಥ ಕನ್ನಡ ಕವಿಗಳಲ್ಲಿ ಶ್ರೀಮಾನ್ ಬೇಂದ್ರೆಯವರು ಅತ್ಯಾಧುನಿಕರು. ಇಪ್ಪತ್ತನೆಯ ಶತಮಾನದಲ್ಲಿ ಇಂಥ ಕವಿ ಕನ್ನಡದಲ್ಲಿ ಇರುವುದು ಕನ್ನಡ ಭಾಷೆಯ ಸುದೈವವೇ ಸರಿ” ಎಂಬುದಾಗಿ ಖ್ಯಾತ ಸಾಹಿತಿ ವಿಮರ್ಶಕ ಶಂಕರ ಮೊಕಾಶಿ ಪುಣೇಕರ ಅವರು ಹೇಳಿರುವ ಮಾತಿನಲ್ಲಿ ಅತ್ಯುಕ್ತಿ ಇಲ್ಲ. ಬೇಂದ್ರೆ ಕನ್ನಡಿಗರ ಭಾವಕೋಶದಲ್ಲಿ ಸೇರಿಹೋದ ಅದ್ಭುತ ಕವಿ ಚೇತನ. ಅವರ ಸಮಗ್ರ ಸಾಹಿತ್ಯವನ್ನು ತಾಳೆ ಹಾಕಿ ಒರೆಗೆ ಹಚ್ಚಿ ನೋಡಿ ಅವರನ್ನು ‘ಭುವನದ ಭಾಗ್ಯ’ ಎಂದು ಕರೆದು ಅವರ ದೈತ್ಯ ಪ್ರತಿಭೆಯ ಪ್ರಕಾಶವನ್ನು ಲೋಕ ಸಮ್ಮುಖಗೊಳಿಸಿದವರು ವಿಮರ್ಶಕ ಡಾ. ಆಮೂರ. ‘ಡಾ. ಜಿ.ಎಸ್. ಆಮೂರ ಅವರ ಸಮಗ್ರ ಬೇಂದ್ರೆ ವಿಮರ್ಶೆ’ ಈ ಮಹಾಕೃತಿಯನ್ನು ವಿಮರ್ಶಕ ಡಾ. ಜಿ.ಎಂ. ಹೆಗಡೆಯವರು ಇತ್ತೀಚಿಗೆ ಸಂಪಾದಿಸಿ ಕೊಟ್ಟಿದ್ದಾರೆ. “ಸಾಹಿತ್ಯವನ್ನು ಅರ್ಥ ಮಾಡಿಕೊಳ್ಳುವ ಪ್ರಕ್ರಿಯೆ ಒಂದು ಸಜೀವ ವಿಕಾಸ ಪ್ರಕ್ರಿಯೆ. ಅದಕ್ಕೆ ಶತಮಾನಗಳೂ…

Read More

ಪುತ್ತೂರು : ಹಲಸು ಹಣ್ಣು ಮೇಳದ ಸಭಾಂಗಣದಲ್ಲಿ ಪನಸೋಪಾಖ್ಯಾನ ‘ಹಲಸಿನ ಅರಿವಿನ ಹರಿವು’ ಕಾಲ್ಪನಿಕ ಕಥೆ ತಾಳಮದ್ದಲೆಯನ್ನು ದಿನಾಂಕ 07 ಜೂನ್ 2025ರಂದು ಸಂಜೆ 4-30 ಗಂಟೆಗೆ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಆಯೋಜಿಸಲಾಗಿದೆ. ಕುಂಬಳೆಯ ಶ್ರೀ ಶೇಡಿಗುಮ್ಮೆ ವಾಸುದೇವ ಭಟ್ ಇವರು ಪ್ರಸಂಗ ಕವಿ, ಶ್ರೀ ಅಡ್ಕ ಗೋಪಾಲಕೃಷ್ಣ ಭಟ್ ಕಥಾ ಹಂದರ, ಪೆರಾಜೆಯ ನಾ. ಕಾರಂತ ಇವರ ಪರಿಕಲ್ಪನೆ ಹಾಗೂ ಪುತ್ತೂರಿನ ಶ್ರೀ ರಮೇಶ್ ಭಟ್ ಸಂಯೋಜನೆ ಮಾಡಲಿದ್ದಾರೆ.

Read More

ಮಂಗಳೂರು : ದಿನಾಂಕ 03 ಜೂನ್ 2025ರ ಮಂಗಳವಾರ ಮಧ್ಯಾಹ್ನ 3-00 ಗಂಟೆಯಿಂದ ದಿನಾಂಕ 04 ಜೂನ್ 2025ರ ಬುಧವಾರ 3-00 ಗಂಟೆ ವರೆಗೆ ನಿರಂತರವಾಗಿ 24 ಗಂಟೆಗಳ ಕಾಲ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ 270 ಹಾಡುಗಳನ್ನು ಹಾಡುವ ಮೂಲಕ ಕರಾವಳಿ ಮೂಲದ ಯಶವಂತ್ ಎಂ.ಜಿ. ಸೇರಿದಂತೆ ಆರು ಸಂಗೀತ ಕಲಾವಿದರು ತಮ್ಮ ಹೆಸರನ್ನು ವಿಶ್ವ ದಾಖಲೆ ನಿರ್ಮಿಸಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ದಾಖಲಿಸಿಕೊಂಡಿದ್ದಾರೆ. ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಮಂಗಳವಾರ ಸಂಜೆ ಮೂರು ಗಂಟೆಗೆ ಆರಂಭವಾದ ‘ಬಾಲಗಾನ ಯಶೋಯಾನ’ ನಿರರ್ಗಳ ಗಾಯನ ಬುಧವಾರ ಸಂಜೆ ಮೂರು ಗಂಟೆಗೆ ಸಮಾಪನಗೊಳ್ಳುವ ಮೂಲಕ ಈ ದಾಖಲೆ ನಿರ್ಮಾಣವಾಗಿದೆ. ಗಾನ ಗಂಧರ್ವ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಜನ್ಮ ದಿನೋತ್ಸವದ ಪ್ರಯುಕ್ತ ಯಶವಂತ್ ಅವರು ಏಕಾಂಗಿಯಾಗಿ ಹಾಡುವ ಮೂಲಕ ದಾಖಲೆಯ ಗಾಯನ ಕಾರ್ಯಕ್ರಮ ನಡೆಸಿದ್ದಾರೆ. ಇವರ ಜತೆಗೆ ಗಿಟಾರ್ ನಲ್ಲಿ ರಾಜ್ ಗೋಪಾಲ್, ಕೀ ಬೋರ್ಡ್ ನಲ್ಲಿ ದೀಪಕ್ ಜಯಶೀಲನ್,…

Read More

ಮಂಗಳೂರು : ಸರಯೂ ಬಾಲ ಯಕ್ಷವೃಂದ ಕೋಡಿಕಲ್ ಇದರ ರಜತ ಮಹೋತ್ಸವ ಸಂಭ್ರಮ ಸಮಾರಂಭದ ಅಂಗವಾಗಿ ಆಯೋಜಿಸಿದ 15 ದಿನಗಳ ‘ಯಕ್ಷಪಕ್ಷ – ರಜತ ಸರಯೂ’ಸಮಾರಂಭದ 14ನೇ ದಿನದ ಕಾರ್ಯಕ್ರಮವು ದಿನಾಂಕ 31 ಜೂನ್ 2025ರ ಬುಧವಾರದಂದು ಕದ್ರಿ ದೇವಳದ ವಠಾರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಆರೂರು ಆಶಾ ಪ್ರಭಾಕರ ರಾವ್ ಮಾತನಾಡಿ “ಇಂದು ಯಕ್ಷಗಾನ ರಂಗ ವಿಸ್ತರಿಸಲ್ಪಟ್ಟಿದೆ. ಪುರುಷರಂತೆಯೇ ಮಹಿಳಾ ಕಲಾವಿದರೂ ತಮ್ಮ ನೈಪುಣ್ಯತೆಯನ್ನು ಪ್ರದರ್ಶಿಸುತ್ತಿದ್ದಾರೆ. ದೇಶವಿದೇಶಗಳಿಗೂ ತಮ್ಮ ಕಲಾ ಪ್ರದರ್ಶನವನ್ನು ವಿಸ್ತರಿಸಿದ್ದಾರೆ. ಅನೇಕರು ಮೇಳದ ಕಲಾವಿದರಿಗೆ ಸಮದಂಡಿಯಾಗಿ ನಿಲ್ಲುವಂತೆ ಪ್ರಬುದ್ಧರಾಗುತ್ತಿದ್ದಾರೆ. ಇಂದು ಸರಯೂವಿನಿಂದ ಸನ್ಮಾನಗೊಳ್ಳುತ್ತಿರುವ ಸಂಧಾ ರಾವ್ ಕೂಡಾ ಓರ್ವ ಸಂಘಟಕಿ, ಯಕ್ಷಕಲಾವಿದೆ, ಉತ್ತಮ ವಾಗ್ಮಿಯೂ ಆಗಿದ್ದಾರೆ. ಈ ಪುಣ್ಯಕ್ಷೇತ್ರದಲ್ಲಿ ಗೌರವಿಸಲ್ಪಡುವುದು ಅವರ ಭಾಗ್ಯ” ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ತುಳುಕೂಟ (ರಿ) ಸಂಸ್ಥೆಯ ಅಧ್ಯಕ್ಷೆ ಹೇಮಾ ದಾಮೋದರ ನಿಸರ್ಗ ರಜತ ಸಂಭ್ರಮದಲ್ಲಿರುವ ಮಕ್ಕಳ ಮೇಳದ ಕಾರ್ಯಚಟುವಟಿಕೆಗಳ ಬಗ್ಗೆ ಶ್ಲಾಘಿಸಿದರು. ಕದ್ರಿ ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ…

Read More

ಶಿರಸಿ : ಶ್ರೀ ಯಕ್ಷರಾಘವ ಜನ್ಸಾಲೆ ಪ್ರತಿಷ್ಠಾನ (ರಿ.) ಸಿದ್ಧಾಪುರ ಮತ್ತು ಅತಿಥಿ ಕಲಾವಿದರ ಸಂಗಮದಲ್ಲಿ ‘ಗಾನ ಸಾರಥಿ’ ಜನ್ಸಾಲೆಯವರ ನಿರ್ದೇಶನದಲ್ಲಿ ‘ಬ್ರಹ್ಮ ಕಪಾಲ’ ಎಂಬ ಪ್ರಸಂಗದ ಪೌರಾಣಿಕ ಯಕ್ಷಗಾನ ಪ್ರದರ್ಶನವನ್ನು ದಿನಾಂಕ 07 ಜೂನ್ 2025ರಂದು ಸಂಜೆ 9-00 ಗಂಟೆಗೆ ಇಟಗುಳಿಯ ಶ್ರೀ ಶಾಂತಾರಾಮ ಸೀತಾರಾಮ ಹೆಗಡೆ ಇವರ ಮನೆಯಂಗಳದಲ್ಲಿ ಹಮ್ಮಿಕೊಳ್ಳಲಾಗಿದೆ. ಹಿಮ್ಮೇಳದಲ್ಲಿ ಭಾಗವತರು ರಾಘವೇಂದ್ರ ಆಚಾರ್ಯ ಜನ್ಸಾಲೆ ಮತ್ತು ಬಿಲ್ಗಾಡಿ ಗಣೇಶಾಚಾರ್ಯ, ಮದ್ದಳೆಯಲ್ಲಿ ಶಂಶಾಕ ಆಚಾರ್ಯ ಕಿರುಮಂಜೇಶ್ವರ ಮತ್ತು ಚಂಡೆಯಲ್ಲಿ ಪ್ರಜ್ವಲ್ ಮುಂಡಾಡಿ ಹಾಗೂ ಮುಮ್ಮೇಳದಲ್ಲಿ ಉದಯ ಹೆಗಡೆ ಕಡಬಾಳ, ವಿನಯ್ ಭಟ್ಟ ಬೇರೊಳ್ಳಿ, ಸುಬ್ರಹ್ಮಣ್ಯ ಭಟ್ಟ ನೇರಗೋಡು, ಕಾರ್ತೀಕ ಹೆಗಡೆ ಚಿಟ್ಟಾಣಿ, ಪವನ್ ಕುಮಾರ್ ಸಾಣ್ಮನೆ ಮತ್ತು ಕೆ. ಜಿ. ಕಾರ್ತಿಕ್, ಸ್ತ್ರೀ ವೇಷದಲ್ಲಿ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ, ಸುಧೀರ ಉಪ್ಪೂರು ಮತ್ತು ಸಂತೋಷ ಕುಮಾರ ಕುಲಾಲ್ ಹಾಗೂ ಹಾಸ್ಯದಲಿ ಪುರಂದರ ಮೂಡ್ಕಣಿ ಇವರು ಸಹಕರಿಸಲಿದ್ದಾರೆ.

Read More