Author: roovari

ಮಂಗಳೂರು : ಮಂಗಳೂರಿನ ಸಮತಾ ಮಹಿಳಾ ಬಳಗದ ‘ಶ್ರೀ ದೇವಿ ಮಹಿಷ ಮರ್ದಿನಿ’ ಮಹಿಳಾ ಯಕ್ಷಗಾನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ದಿನಾಂಕ 18 ಫೆಬ್ರವರಿ 2025 ರಂದು ಮಂಗಳೂರಿನ ಜೈಲ್ ರಸ್ತೆ ಯಲ್ಲಿರುವ ‘ಸುಬ್ರಮಣ್ಯ ಸಭಾ’ದಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ “ಯಕ್ಷಗಾನ ಕರಾವಳಿಯ ಮಣ್ಣಿನ ಕಲೆ. ಇದರ ಬಗ್ಗೆ ಕೀಳರಿಮೆ ಬಿಟ್ಟು ಆಬಾಲ ವೃದ್ಧರಾಗಿ ಯಕ್ಷಗಾನವನ್ನು ಆರಾಧಿಸುವ ಅನೇಕ ಮಂದಿ ಯಕ್ಷಗಾನ ಪ್ರೇಮಿಗಳಿದ್ದಾರೆ. ಅದರಲ್ಲೂ ಮಹಿಳಾ ತಂಡಗಳು ಪ್ರಾರಂಭಗೊಳ್ಳುವುದರಿಂದ ಈ ಕಲೆಗೆ ಹೆಚ್ಚಿನ ಶಕ್ತಿ ತುಂಬಿದೆ” ಎಂದು ನುಡಿದರು. ‘ಸಮತಾ’ ಇದರ ಗೌರವ ಅಧ್ಯಕ್ಷೆಯಾದ ಶ್ರೀಮತಿ ವಿಜಯಲಕ್ಷ್ಮಿ ಎ. ರಾವ್, ಮಾಜಿ ಅಧ್ಯಕ್ಷೆ ಶ್ರೀಮತಿ ಸುಮಿತ್ರಾ ಆಚಾರ್, ಮಾಜಿ ಅಧ್ಯಕ್ಷೆ ,ಯಕ್ಷ ಮಂಜುಳಾ ಕದ್ರಿ ಮತ್ತು ಮಹಿಳಾ ತಾಳಮದ್ದಳೆ ಬಳಗದ ಅಧ್ಯಕ್ಷೆಯಾದ ಶ್ರೀಮತಿ ಪೂರ್ಣಿಮಾ ಪ್ರಭಾಕರ ರಾವ್ ಪೇಜಾವರ, ಯಕ್ಷಗಾನ ಅಕಾಡೆಮಿಯ ಸದಸ್ಯ ಶ್ರೀ ರಾಜೇಶ್…

Read More

ಉಡುಪಿ : ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ವತಿಯಿಂದ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರ ಹಾಗೂ ಪ್ರಭಾವತಿ ಶೆಣೈ ಮತ್ತು ಉಡುಪಿ ವಿಶ್ವನಾಥ್ ಶೆಣೈ ಪ್ರಾಯೋಜಕತ್ವದಲ್ಲಿ ನೀಡಲಾಗುವ ‘ವಿಶ್ವಪ್ರಭಾ ಪ್ರಶಸ್ತಿ’ ಪ್ರದಾನ ಸಮಾರಂಭವು ದಿನಾಂಕ 23 ಫೆಬ್ರವರಿ 2025ರ ಭಾನುವಾರದಂದು ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ನಡೆಯಿತು. ತುಳು ನಾಟಕ, ತುಳು ಮತ್ತು ಚಲನಚಿತ್ರ, ಕಿರುತೆರೆ ಕಲಾವಿದ ‘ಕುಸಲ್ ದ ಅರಸೆ’ ಖ್ಯಾತಿಯ ನವೀನ್ ಡಿ. ಪಡೀಲ್ ಅವರಿಗೆ 2025ನೇ ಸಾಲಿನ ರೂಪಾಯಿ 1 ಲಕ್ಷ ಮೊತ್ತದ ಪ್ರತಿಷ್ಠಿತ ‘ವಿಶ್ವಪ್ರಭಾ ಪುರಸ್ಕಾರ ನೀಡಿ’ ಗೌರವಿಸಲಾಯಿತು. ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿದ ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್ ಮಾತನಾಡಿ “ಮಾನಸಿಕವಾಗಿ ದುಗುಡ-ಒತ್ತಡಕ್ಕೆ ಒಳಗಾದಾಗ ನಿವಾರಣೆಗಾಗಿ ನಾನಾ ರೀತಿಯ ಕ್ರಮ ಅನುಸರಿಸುತ್ತಾರೆ. ಹಲವರು ಬಾರ್‌ಗೆ ಹೋಗುತ್ತಾರೆ. ಅದರಿಂದ ಹಣ ವ್ಯರ್ಥವಾಗುತ್ತದೆಯೇ ಹೊರತು ಬೇರೇನೂ ಸಿಗದು. ಆದರೆ, ನಾಟಕಗಳ ವೀಕ್ಷಣೆಯಿಂದ, ಅಲ್ಲಿನ ಧನಾತ್ಮಕ ಹಾಗೂ ಹಾಸ್ಯ ದೃಶ್ಯಗಳಿಂದ ಮನಸ್ಸಿಗೆ ಅಂಟಿಕೊಂಡ ಒತ್ತಡ…

Read More

ಮಂಗಳೂರು: . ಎಸ್. ವಿ. ಪರಮೇಶ್ವರ ಭಟ್ಟ ಪ್ರತಿಷ್ಠಾನದ ವತಿಯಿಂದ ನೀಡಲಾಗುವ ಪ್ರೊ. ಎಸ್. ವಿ. ಪರಮೇಶ್ವರ ಭಟ್ಟ ಸಂಸ್ಮರಣ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 21 ಫೆಬ್ರವರಿ 2025ರ ಶುಕ್ರವಾರದಂದು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು ಇದರ ಸಭಾಂಗಣದಲ್ಲಿ ನಡೆಯಿತು. ಸಮಾರಂಭದಲ್ಲಿ ಸಾಹಿತಿ ಚಂದ್ರಕಲಾ ನಂದಾವರ ಹಾಗೂ ನಿವೃತ್ತ ಪ್ರಾಧ್ಯಾಪಕ ಕಾಸರಗೋಡಿನ ಪಿ. ಕೃಷ್ಣ ಭಟ್ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿದ ಎಸ್‌. ವಿ. ಪಿ. ಪ್ರತಿಷ್ಠಾನದ ಅಧ್ಯಕ್ಷರಾದ ಬಿ. ಎ. ವಿವೇಕ ರೈ ಮಾತನಾಡಿ “ಕನ್ನಡ ಭಾಷಾ ಲೋಕಕ್ಕೆ ಎಸ್‌. ವಿ. ಪಿ. ಅವರ ಕೊಡುಗೆ ಮಹತ್ತರವಾದುದು. ಜಿಲ್ಲೆಯಲ್ಲಿ ಇಂದಿಗೂ ಕನ್ನಡದ ವಾತಾವರಣ ಉಳಿಯಲು ಪರಮೇಶ್ವರ ಭಟ್ಟರ ಕೊಡುಗೆ ಬಹಳಷ್ಟಿದೆ. 1968ರಲ್ಲಿ ಮೈಸೂರ್ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಸ್ಥಾಪನೆ ಆದಾಗ ಮಂಗಳೂರು ಬಂದವರು ಪ್ರೊ. ಪರಮೇಶ್ವರ ಭಟ್ಟರು. ಮಂಗಳೂರಿನ ಎಲ್ಲಾ ಕಾಲೇಜುಗಳಲ್ಲಿ ಕನ್ನಡ ಐಚ್ಛಿಕ ವಿಷಯವಾಗಿ ಬರಬೇಕೆಂದು ಪ್ರಾಯತ್ನಿಸಿದವರು ಎಸ್. ವಿ. ಪಿ.…

Read More

ಮಂಗಳೂರು : ಅಲೆವೂರಾಯ ಪ್ರತಿಷ್ಠಾನದ ಎಂಟನೇ ವರ್ಷದ ‘ಯಕ್ಷ ತ್ರಿವೇಣಿ’ ಇದರ ಉದ್ಘಾಟನಾ ಸಮಾರಂಭವು ದಿನಾಂಕ 22 ಫೆಬ್ರವರಿ 2025 ರಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಮಾತನಾಡಿ “ದೇಶದ ಹಲವಾರು ಕಲೆಗಳಲ್ಲಿ ಯಕ್ಷಗಾನವು ಅಗ್ರಸ್ಥಾನವನ್ನು ಪಡೆದಿದೆ. ನೃತ್ಯ, ಸಾಹಿತ್ಯ ಹಾಗೂ ಹಿಮ್ಮೇಳಗಳಿಂದ ಶ್ರೀಮಂತವಾಗಿರುವ ಈ ಕಲೆಯು ವಿಶ್ವದಲ್ಲಿಯೇ ಸಶಕ್ತ – ಸಧೃಡ ಕಲೆಯಾಗಿದೆ. ಬೇರೆ ರಾಜ್ಯಗಳಲ್ಲಿರುವ ಕಲೆಗಳೂ ಹೆಚ್ಚು ಹೆಚ್ಚಾಗಿ ಯಕ್ಷಗಾನಕ್ಕೆ ಸಮೀಪವೇ ಇವೆ. ರಾಜಕಲೆಯಾದ ಇದನ್ನು ರಾಜಾಶ್ರಯದಿಂದ ಬೆಳೆಸೋಣ” ಎಂದು ಹೇಳಿದರು. ಮಂಗಳಾದೇವಿ ದೇವಳದ ಮೊಕ್ತೇಸರರಾದ ಶ್ರೀ ಅರುಣ್ ಐತಾಳ್ ನಮ್ಮಂತಹಾ ದೇವಸ್ಥಾನಗಳಲ್ಲಿ ಇಂತಹಾ ಕಲಾಪ್ರಕಾರಗಳ ಪ್ರದರ್ಶನಕ್ಕೆ ಖಂಡಿತಾ ಅವಕಾಶವಿದೆ. ಅಲೆವೂರಾಯ ಸಹೋದರರ ಈ ಪ್ರಯತ್ನಕ್ಕೆ ಶುಭವಾಗಲಿ” ಎಂದು ಶುಭಾಸಂಶನೆಗೈದರು. ಅಲೆವೂರಾಯ ಪ್ರತಿಷ್ಠಾನದ ಪ್ರಶಸ್ತಿ ಸ್ವೀಕರಿಸದ ಉಪನ್ಯಾಸಕ, ಹಾಗೂ ಸಾಲಿಗ್ರಾಮ ಮಕ್ಕಳ ಮೇಳದ ಸಂಚಾಲಕ ಶ್ರೀ ಸುಜಯೀಂದ್ರ ಹಂದೆ ಮಾತನಾಡಿ ’ನಮ್ಮ ಮಕ್ಕಳ ಮೇಳದಂತೆಯೇ ಇಲ್ಲಿಯೂ ಇದೆ. ಇದನ್ನು ನಾವು ದೇವರ ಕಲೆ ಎಂದು…

Read More

ಜಯಂತ ಕಾಯ್ಕಿಣಿ ಬಹಳ ವರ್ಷಗಳ ಹಿಂದೆ ರಂಗಭೂಮಿ ರೂಪ ನೀಡಿದ ಕನ್ನಡದ ‘ಜತೆಗಿರುವವನು ಚಂದಿರ’ ರಷ್ಯ ಮೂಲದ ಜೆವಿಶ್ ಜನಾಂಗ ಎದುರಿಸಿದ ಭೌಗೋಳಿಕ ವಿಭಜನೆಯ ಕಟುಸತ್ಯದ ಒಂದು ballet/musical ರೂಪ, ಮುಂದೆ ಅದು ಭಾರತದ ವಿಭಜನೆಯ ನಿಟ್ಟಿನಲ್ಲಿ ತಯಾರಾಗಿ ಈವರೆಗೆ ಅನೇಕ ಬಾರಿ ಯಶಸ್ಸಿಯಾಗಿ ವಿವಿಧ ತಂಡ / ನಿರ್ದೇಶಕ / ನಟರಿಂದ ಪ್ರಯೋಗಗೊಂಡಿರುವ ಒಂದು ಎವರ್ಗ್ರೀನ್ ನಾಟಕ. ಇಂದು ಅಂದು ಮಂಗಳೂರಿನಲ್ಲಿ, ಮೈಸೂರಿನ ಹುಲುಗಪ್ಪ ಕಟ್ಟಿಮನಿ ಅವರ ನಿರ್ದೇಶಕ/ನಟನೆ/ ತಂಡದ ಮೂಲಕ ಎರಡುವರೆ ಗಂಟೆಗಳ ಕಾಲ ಪ್ರದರ್ಶನಗೊಂಡಾಗ, ತುಂಬಿದ ಸಭಾಂಗಣದ ಎಲ್ಲರೂ ಒಂದೊಮ್ಮೆ 1947ರ ದಿನಗಳಿಗೆ ಸ್ವಯಂ ತೆರಳಿದ ಅನುಭವ ಹೊಂದಿದ್ದು ಮಾತ್ರ ಸುಳ್ಳಲ್ಲ. ಬ್ರಿಟಿಷರಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಸಂಧರ್ಭದಲ್ಲಿ ಇದ್ದ ದೇಶ ವಿಭಜನೆಯ ರಾಜಕೀಯ ಪರಿಣಾಮಗಳು ಹೆಚ್ಚು ಕಾಡಿದ್ದು ಸಾಮಾಜಿಕ ಮತ್ತು ಸಾಂಸಾರಿಕವಾಗಿ. ಅದೇ ಸಂದರ್ಭದ ದಕ್ಷಿಣ ಭಾರತದ ಮುಸ್ಲಿಂ ಬಾಹುಳ್ಯ ಪ್ರದೇಶವೊಂದರ ಬಡ ಮುಸ್ಲಿಂ ಕುಟುಂಬ ಒಂದರ ಮೂರು ಹೆಣ್ಣು ಮಕ್ಕಳ / ಮತ್ತವರ ಮದುವೆಯ…

Read More

ಫಿಲಿಪೈನ್ಸ್ : ಭಾರತ ಮತ್ತು ಫಿಲಿಪೈನ್ಸ್ ನ ನಡುವಿನ ರಾಜತಾಂತ್ರಿಕ ಸಂಬಂಧಗಳ 75 ವರ್ಷಗಳ ಆಚರಣೆಯ ಅಂಗವಾಗಿ ಮ್ಯೂಸಿಕ್ ಇನ್ ಮನಿಲಾ ಮತ್ತು ಭಾರತ ಸರಕಾರದ ವಿದೇಶಾಂಗ ಸಚಿವಾಲಯವು ಜಂಟಿಯಾಗಿ ದಿನಾಂಕ 21 ಫೆಬ್ರವರಿ 2025ರಂದು ಫಿಲಿಪೈನ್ಸ್ ನ ಮನಿಲಾದಲ್ಲಿ ಆಯೋಜಿಸಿದ್ದ ‘ಸುರ್ ತಾರ್’ ಎಂಬ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು. ಮಂಗಳೂರಿನ ಯುವ ಕಲಾವಿದ ಅಂಕುಶ್ ಎನ್. ನಾಯಕ್ ಇವರ ಸಿತಾರ್ ವಾದನಕ್ಕೆ ತಬ್ಲಾದಲ್ಲಿ ಯಶವಂತ ವೈಷ್ಣವ್ ಸಾಥ್ ನೀಡಿದರು. ಸಂಗೀತ ಕಾರ್ಯಕ್ರಮಕ್ಕೆ ಭಾರತೀಯ ರಾಯಭಾರಿ ಹರ್ಷ ಕೆ. ಜೈನ್ ಮತ್ತು ಅವರ ಪತ್ನಿ ವಂದನಾ ಜೈನ್ ಚಾಲನೆ ನೀಡಿದರು. ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕರಾದ ವಿಕಾಸ್ ಶೀಲ್, ಜಸ್ಟಿನ್ ಡಿಯೋಕ್ನೋ-ಸಿಕಾಟ್, ಎಡಿಬಿ ಸೆಕ್ಟರ್ ಗ್ರೂಪ್‌ನ ಮಹಾನಿರ್ದೇಶಕ ರಮೇಶ್ ಸುಬ್ರಮಣಿಯಂ, ಎಡಿಬಿಯ ಕಾರ್ಯನಿರ್ವಾಹಕ ನಿರ್ದೇಶಕರ ಹಿರಿಯ ಸಲಹೆಗಾರ ಮತ್ತು ಹಿರಿಯ ಐಎಎಸ್ ಅಧಿಕಾರಿ ಪೊನ್ನುರಾಜ್ ವಿ. ಉಪಸ್ಥಿತರಿದ್ದರು.

Read More

ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗ ಮತ್ತು ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಜಂಟಿ ಆಶ್ರಯದಲ್ಲಿ ದಿನಾಂಕ 17, 18 ಮತ್ತು 19 ಫೆಬ್ರವರಿ 2025ರಂದು ಮಂಜೇಶ್ವರದ ಗೋವಿಂದ ಪೈ ಕಾಲೇಜಿನಲ್ಲಿ ನಡೆದ ಭಾಷಾಂತರಕಾರರ ನಾಲ್ಕನೇ ಸಮಾವೇಶ ಕನ್ನಡ ಸಾಹಿತ್ಯ ಕಾರ್ಯಕ್ರಮಗಳಿಗೆ ಅಪೂರ್ವ ಮಾದರಿಯನ್ನು ಹಾಕಿಕೊಟ್ಟಿದೆ. ಮುಂದಿನ ಎರಡು ದಿನಗಳ ಕಾರ್ಯಕ್ರಮದ ಪೀಠಿಕೆ ಎಂಬಂತೆ ಆಯೋಜಿಸಿದ ಪುಸ್ತಕ ಬಿಡುಗಡೆ ಸಮಾರಂಭವು ಮನಸೂರೆಗೊಳ್ಳುವಂತಿತ್ತು. ಸಾಹಿತ್ಯಾಸಕ್ತರಿಗೆ ಖುಶಿ ಕೊಡುವಂತಿತ್ತು. ಪುಸ್ತಕ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಡಿ.ವಿ. ಪರಮಶಿವ ಮೂರ್ತಿಯವರು “ಭಾಷಾ ಶಾಸ್ತ್ರದ ವಿಷಯಕ್ಕೆ ಸಂಬಂಧಿಸಿದ ವಿದ್ವಾಂಸರು ಇತ್ತೀಚೆಗೆ ಕಡಿಮೆಯಾಗುತ್ತಿದ್ದಾರೆ. ಭಾಷಾ ಶಾಸ್ತ್ರದ ವಿಷಯ ಮರೀಚಿಕೆಯಾಗಿದೆ. ಭಾಷೆ ಮತ್ತು ಸಂಸ್ಕೃತಿಯ ವಿಚಾರ ಚಿಂತಾಜನಕವಾಗಿದೆ” ಎಂದು ಹೇಳಿದ್ದು ವಾಸ್ತವವಾದರೂ “ಈಗಿನ ವಿದ್ಯಾರ್ಥಿಗಳು ಅಂಕಗಳ ಹಿಂದೆ ಹೋಗುತ್ತಾರೆ. ಆದ್ದರಿಂದ ಭಾಷೆ ಮತ್ತು ಸಂಸ್ಕೃತಿ ಅಳಿಸಿ ಹೋಗುವ ಆತಂಕ ಎದುರಾಗಿದೆ. ಶಾಸ್ತ್ರೀಯ ಬೇರುಗಳು ಉಳಿದರೆ ಮಾತ್ರ ಹೊಸ…

Read More

ತೆಕ್ಕಟ್ಟೆ : ಯಶಸ್ವೀ ಕಲಾವೃಂದ (ರಿ.) ಕೊಮೆ, ತೆಕ್ಕಟ್ಟೆ ಸಂಯೋಜನೆಯಲ್ಲಿ ಸಿನ್ಸ್ 1999 ಶ್ವೇತಯಾನ -108 ಕಾರ್ಯಕ್ರಮದಡಿಯಲ್ಲಿ ‘ಯಶಸ್ವಿ ಮಹಿಳಾ ಸಮ್ಮಿಳನ’ ಕಾರ್ಯಕ್ರಮವು ದಿನಾಂಕ 23 ಫೆಬ್ರವರಿ 2025ರಂದು ತೆಕ್ಕಟ್ಟೆ ಹಯಗ್ರೀವದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಮುಖ್ಯೋಪಾಧ್ಯಾಯಿನಿ ಸುಧಕ್ಷಣ ಆರ್. ಉಡುಪ ಇವರು ಉದ್ಘಾಟನೆಗೊಳಿಸಿ “ಇಪ್ಪತ್ತೈದರ ಏಳು ಬೀಳುಗಳೊಂದಿಗಿನ ಸಂಭ್ರಮವು ನಮಗೂ ಲಭಿಸಿದ್ದು ಭಾಗ್ಯ. ಕೃತಕತೆಯ ಯುಗದಲ್ಲಿ ನಮ್ಮನ್ನು ನಾವು ನಾಶಗೊಳಿಸಿಕೊಳ್ಳುತ್ತಿದ್ದೇವೆ. ಕಲಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಾಗ ಸ್ವಾಭಾವಿಕತೆಯ ಅರಿವು ಮೂಡುತ್ತದೆ. ಮಕ್ಕಳಲ್ಲಿಯೂ ಕಲೆಯ ಸಂಸ್ಕಾರವನ್ನು ಮೂಡಿಸಿದರೆ ಭವಿಷ್ಯದಲ್ಲಿ ಸ್ವಾಭಾವಿಕತೆಯನ್ನು ಕಂಡುಕೊಳ್ಳಬಹುದು. ಇಲ್ಲವಾದರೆ ಬದುಕು ಬಹಳ ಕಷ್ಟ” ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಸಾಧಕಿ ಶಾಂತಾ ಗಣೇಶ್ ಕುಂಭಾಶಿ ಇವರನ್ನು ಅಭಿನಂದಿಸಲಾಯಿತು. “ಮಹಿಳಾ ಸಂಘಟನೆಗಳು ಪ್ರಸ್ತುತ ಕಾಲಘಟ್ಟದಲ್ಲಿ ಅತ್ಯಂತ ಶಕ್ತಿ ಉಳ್ಳದ್ದು. ಸಂಘಟನೆಯ ಮೌಲ್ಯವನ್ನು ಉಳಿಸಿಕೊಂಡು ಬೆಳೆಯುತ್ತಿರುವ ಹಲವು ಸಂಘಟನೆಗಳನ್ನು ನಾವು ಕಂಡಿದ್ದೇವೆ. ಆದರೆ ಇದು ಕಲೆಯನ್ನು ಮೈಗೂಡಿಸಿಕೊಂಡ ಯಶಸ್ವೀ ಕಲಾವೃಂದದ ಮಹಿಳಾ ಸಂಘಟನೆ. ಇದರಲ್ಲಿ ಮಧುರ ಮೈತ್ರಿ ಇವೆ” ಎಂದು ಅಭಿವಂದಿಸಿಕೊಂಡ…

Read More

ಬೆಂಗಳೂರು : ಜನಸಂಸ್ಕೃತಿ ಪ್ರತಿಷ್ಠಾನ, ಕಾವ್ಯಮಂಡಲ, ಸ್ನಾತಕೋತ್ತರ ಕೇಂದ್ರ ರಾಮನಗರ ಮತ್ತು ಬೆಂಗಳೂರು ವಿಶ್ವವಿದ್ಯಾನಿಲಯ ಇವುಗಳ ಜಂಟಿ ಆಶ್ರಯದಲ್ಲಿ ‘ಕಾವ್ಯ ಶಿವರಾತ್ರಿ’ ಅಹೋರಾತ್ರಿ ಕಾವ್ಯ ಗಾಯನ ಕಾರ್ಯಕ್ರಮವನ್ನು ದಿನಾಂಕ 26 ಫೆಬ್ರವರಿ 2025ರಂದು ಸಂಜೆ 6-00 ಗಂಟೆಗೆ ಬೆಂಗಳೂರು ವಿ.ವಿ. ಜ್ಞಾನ ಭಾರತಿ ಆವರಣ, ಡಾ. ವೆಂಕಟಗಿರಿ ಗೌಡ ಸ್ಮಾರಕ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಸಂಜೆ ಗಂಟೆ 6-30ಕ್ಕೆ ಬೆಂಗಳೂರು ವಿಶ್ವವಿದ್ಯಾನಿಲಯದ ಮಾನ್ಯ ಕುಲಪತಿಗಳಾದ ಡಾ. ಜಯಕರ್ ಎಸ್.ಎಂ. ಇವರ ಅಧ್ಯಕ್ಷತೆಯಲ್ಲಿ ಸಂಸ್ಕೃತಿ ಚಿಂತಕರಾದ ಶೂದ್ರ ಶ್ರೀನಿವಾಸ ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಸ್ನಾತಕೋತ್ತರ ಕೇಂದ್ರ ರಾಮನಗರದ ನಿರ್ದೇಶಕರಾದ ಪ್ರೊ. ಬಿ. ಗಂಗಾಧರ ಇವರಿಂದ ಕಾವ್ಯ ಶಿವರಾತ್ರಿ ಪ್ರಸ್ತಾವನೆ ನಡೆಯಲಿದೆ. ಅಲ್ಕೆರೆ ಶಿವಕುಮಾರ್ ಮತ್ತು ಸಂಗಡಿಗರಿಂದ ಮಂಟೇಸ್ವಾಮಿ ಮತ್ತು ಮಲೆ ಮಹಾದೇಶ್ವರ ಮಹಾಕಾವ್ಯ ಗಾಯನ ಪ್ರಸ್ತುತಗೊಳ್ಳಲಿದೆ.

Read More

ಮಳವಳ್ಳಿ : ರಂಗಬಂಡಿ ಮಳವಳ್ಳಿ (ರಿ.) ಆಯೋಜಿಸುವ 2 ತಿಂಗಳ ರಂಗ ತರಬೇತಿ ಶಿಬಿರ ಮತ್ತು ನಾಟಕ ಪ್ರದರ್ಶನವು ದಿನಾಂಕ 10 ಮಾರ್ಚ್ 2025ರಂದು 01 ಮೇ 2025ರವರೆಗೆ ಮಳವಳ್ಳಿಯ ಬಿ.ಆರ್. ಅಂಬೇಡ್ಕರ್ ಭವನದ ಹಿಂಬಾಗದಲ್ಲಿರುವ ಸಿದ್ಧಾರ್ಥ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ. ನುರಿತ ತಜ್ಞರಿಂದ ತರಬೇತಿ ನೀಡಲಾಗುವುದು. ಶಿಬಿರದಲ್ಲಿ ಅಭಿನಯ, ದೇಹ ಚಲನೆ, ಧ್ವನಿಯ ಕುರಿತ ವ್ಯಾಯಾಮಗಳು, ಪ್ರಸಾಧನ, ಬೆಳಕಿನ ವಿನ್ಯಾಸ, ರಂಗ ಸಜ್ಜಿಕೆ, ಪರಿಕರಗಳ ತಯಾರಿ, ವಸ್ತ್ರ ವಿನ್ಯಾಸದ ಬಗ್ಗೆ ಮಾಹಿತಿ ನೀಡಲಾಗುವುದು. ಮಧು ಮಳವಳ್ಳಿ ಶಿಬಿರದ ನಿರ್ದೇಶಕರಾಗಿದ್ದು, ಭರತ್ ರಾಜ್ ಎನ್.ಎಲ್. ಸಹಕಾರದೊಂದಿಗೆ ನಡೆಯುವ ಈ ಶಿಬಿರದ ಹೆಚ್ಚಿನ ಮಾಹಿತಿಗಾಗಿ 7022940964 ಮತ್ತು 9448739907 ಸಂಖ್ಯೆಯನ್ನು ಸಂಪರ್ಕಿಸಿರಿ.

Read More