Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು : ಸಪ್ನ ಬುಕ್ ಹೌಸ್ ಬೆಂಗಳೂರು, ಗಾಂಧಿ ಸ್ಮಾರಕ ನಿಧಿ ಬೆಂಗಳೂರು ಮತ್ತು ದಲಿತ ಸಾಹಿತ್ಯ ಪರಿಷತ್ತು ಗದಗ ಇವುಗಳ ಸಂಯುಕ್ತಾಶ್ರಯದಲ್ಲಿ ವಿಚಾರ ಸಂಕಿರಣ, ಸಾಕ್ಷ್ಯಚಿತ್ರ, ಕಥಾ ಆಲಾಪ, ಐದು ಕೃತಿಗಳ ಜನಾರ್ಪಣೆ ಮತ್ತು ಅಭಿನಂದನೆ ಕಾರ್ಯಕ್ರಮವನ್ನು ದಿನಾಂಕ 22 ಫೆಬ್ರವರಿ 2025ರಂದು ಬೆಳಗ್ಗೆ 10-30 ಗಂಟೆಗೆ ಬೆಂಗಳೂರು, ಕುಮಾರಪಾರ್ಕ್ ಪೂರ್ವ, ಗಾಂಧಿ ನಗರ, ಎರಡನೆಯ ಮಹಡಿ, ಮಹಾದೇವ ದೇಸಾಯಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 10-00 ಗಂಟೆಗೆ ಡಾ. ಅಪ್ಪಗೆರೆ ತಿಮ್ಮರಾಜು ಮತ್ತು ತಂಡದವರಿಂದ ‘ಜನಪದ ಗೀತಗಾಯನ’ ಪ್ರಸ್ತುತಗೊಳ್ಳಲಿದೆ. ಉನ್ನತ ಶಿಕ್ಷಣ ಪರಿಷತ್ತು ಇದರ ಉಪಾಧ್ಯಕ್ಷರಾದ ಪ್ರೊ. ಎಸ್.ಆರ್. ನಿರಂಜನ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದು, ಬೆಂಗಳೂರು ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ನಾಡೋಜ ಡಾ. ವೂಡೇ ಪಿ. ಕೃಷ್ಣ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಕವಿ ಹಾಗೂ ಸಂಸ್ಕೃತಿ ಚಿಂತಕರಾದ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಇವರು ಆಶಯ ಭಾಷಣ ಮಾಡಲಿರುವರು. ಪ್ರೊ. ಪಿ.ಕೆ. ಖಂಡೋಬಾ, ಪ್ರೊ. ವ್ಹಿ.ಜಿ.…
ಕಾಸರಗೋಡು : ಇತ್ತೀಚೆಗೆ ದೀಪದ ಬೆಳಕಿನ ಯಕ್ಷಗಾನ ಎಂಬ ವಿನೂತನ ಪ್ರಯೋಗ ನಡೆಸಿ ಸೈಯೆನಿಸಿದ ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆಯು ಹಲವಾರು ಮೈಲಿಗಲ್ಲುಗಳನ್ನು ದಾಟಿದೆ. ಇದೀಗ ಸಂಸ್ಥೆಯು ಮತ್ತೊಂದು ದಿಟ್ಟ ಹೆಜ್ಜೆಯಿಡಲು ಸಿದ್ಧವಾಗಿದೆ. ಗಡಿನಾಡು ಕಾಸರಗೋಡಿನ ಕುಂಬಳೆ ಸಮೀಪ ನಾರಾಯಣಮಂಗಲದ ಕಿನ್ನಿಮಾಣಿ ಪೂಮಾಣಿ ಕಟ್ಟೆಯಲ್ಲಿ ಇನ್ನೊಂದು ವಿಶಿಷ್ಟ ಪ್ರಯೋಗ ನಡೆಯಲಿದೆ. ಯಕ್ಷ ಗುರು ಶ್ರೀಯುತ ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ಇವರ ಮಾರ್ಗದರ್ಶನದಲ್ಲಿ ‘ದೊಂದಿ ಬೆಳಕಿನ ಯಕ್ಷಗಾನ’ ಪ್ರದರ್ಶನಕ್ಕೆ ರಂಗಸಿರಿಯ ತಂಡವು ಸಿದ್ಧವಾಗಿದೆ. ಯಕ್ಷಗಾನ ಕಲಾಭಿಮಾನಿಗಳಿಗೆ ಇದೊಂದು ಅಪೂರ್ವ ಸುವರ್ಣಾವಕಾಶವಾಗಿದೆ. ಯಕ್ಷಗಾನದ ಗತವೈಭವವನ್ನು ಮರಳಿ ಕಾಣುವ ಪ್ರಯತ್ನವೆಂಬ ನಿಟ್ಟಿನಲ್ಲಿ ಇದು ಮಹತ್ವ ಪಡೆದಿದೆ. ದಿನಾಂಕ 22 ಫೆಬ್ರವರಿ 2025ರಂದು ರಾತ್ರಿ 10-00 ಗಂಟೆಗೆ ಯಕ್ಷಗಾನ ಆರಂಭಗೊಳ್ಳಲಿದ್ದು, ‘ಗಿರಿಜಾ ಕಲ್ಯಾಣ’ ಹಾಗೂ ‘ಪುರುಷಾಮೃಗ’ ಎಂಬ ಪುರಾಣ ಕಥಾನಕಗಳ ಪ್ರಸ್ತುತಿ ನಡೆಯಲಿದೆ. ಪರಂಪರೆಯ ದೇವೇಂದ್ರ ಒಡ್ಡೋಲಗದ ಗಾಂಭೀರ್ಯ, ಮನ್ಮಥ ದಹನದ ಪ್ರಸ್ತುತಿ, ಹನುಮ ಒಡ್ಡೋಲಗಗಳು, ಸಭಿಕರ ಮಧ್ಯದಿಂದೆದ್ದು ಬರುವ ಕೆಲವು ವೇಷಗಳ ಅಬ್ಬರ ಇತ್ಯಾದಿ ಆಕರ್ಷಣೆಗಳಿರಲಿವೆ.…
ಬೆಂಗಳೂರು : ವಿಶ್ವ ಕನ್ನಡ ಆರನೇ ರಾಜ್ಯಮಟ್ಟದ ಕವಿಗಳ ಕವಿಗೋಷ್ಠಿ ಸಮ್ಮೇಳನವು ದಿನಾಂಕ 23 ಫೆಬ್ರವರಿ 2025ರಂದು ಬೆಂಗಳೂರಿನಲ್ಲಿ ಜರುಗಲಿದೆ. ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಪ್ರಮಾಣಿತ ದಾಖಲೆಯ ಕವಿಗೋಷ್ಠಿ ಇದು. ಸಾಹಿತ್ಯ, ಸಂಸ್ಕೃತಿ, ಜಾಗೃತಿ ಆಶಯ ಹೊಂದಿದ ವಿಶ್ವ ಕನ್ನಡ ಕಲಾ ಸಂಸ್ಥೆ (ರಿ.) ಇದನ್ನು ಆಯೋಜಿಸಿದ್ದಾರೆ. ಈ ಕವಿಗೋಷ್ಠಿಯ ಭಾಗವಾಗಿ ದ.ರಾ. ಬೇಂದ್ರೆ ವೇದಿಕೆಯಲ್ಲಿ ನಡೆಯುವ ಗೋಷ್ಠಿಯ ಅಧ್ಯಕ್ಷತೆಗೆ ಮಂಗಳೂರಿನ ಡಾ. ಕೊಳ್ಚಪ್ಪೆ ಗೋವಿಂದ ಭಟ್ ಇವರು ಆಯ್ಕೆಯಾಗಿದ್ದಾರೆ. ಡಾ. ಕೊಳ್ಚಪ್ಪೆ ಗೋವಿಂದ ಭಟ್ ಮೂಲತ: ಗಡಿನಾಡು ಕಾಸರಗೋಡಿನಲ್ಲಿ ಹುಟ್ಟಿ ಬೆಳೆದವರು. ಇವರ ಓದು ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್. ಬ್ಯಾಂಕಿನಲ್ಲಿ 35 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಮೂರು ಕಥಾಸಂಕಲನಗಳು ಪ್ರಕಟವಾಗಿದ್ದು, ‘ನೆಲಸಂಪಿಗೆ’ ಕಥಾಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಕೂಡ ಮಾಡುವ ‘ಶ್ರೀ ಕೆ. ವಾಸದೇವಾಚಾರ್ ದತ್ತಿ ಪ್ರಶಸ್ತಿ’ ದೊರಕಿದೆ.
ಬೆಂಗಳೂರು : ಬಿ.ಎಂ.ಶ್ರೀ ಪ್ರತಿಷ್ಠಾನ (ರಿ.) ಮತ್ತು ಲೇಖಿಕಾ ಸಾಹಿತ್ಯ ವೇದಿಕೆ ಇವರ ಸಂಯುಕ್ತಾಶ್ರಯದಲ್ಲಿ ‘ವಾಣಿ ಸ್ಮರಣೆ’ ಒಂದು ಸ್ಮರಣೀಯ ಕಾರ್ಯಕ್ರಮವನ್ನು ದಿನಾಂಕ 25 ಫೆಬ್ರವರಿ 2025ರಂದು ಬೆಳಗ್ಗೆ 10-30 ಗಂಟೆಗೆ ಬೆಂಗಳೂರಿನ ಬಿ.ಎಂ.ಶ್ರೀ ಕಲಾಭವನ ಎಂ.ವಿ.ಸೀ. ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ.ಎಂ.ಶ್ರೀ ಪ್ರತಿಷ್ಠಾನದ ಕಾರ್ಯದರ್ಶಿಯಾದ ಡಾ. ಶಾಂತರಾಜು ಇವರು ವಹಿಸಲಿದ್ದು, ಲೇಖಕಿ ಶ್ರೀಮತಿ ಶೈಲಜಾ ಸುರೇಶ್ ಇವರು ಉದ್ಘಾಟನೆ ಮಾಡಲಿದ್ದಾರೆ. ಹಿರಿಯ ಲೇಖಕರಾದ ಡಾ. ಮಂಗಳ ಪ್ರಿಯದರ್ಶಿನಿ ಡಿ. ಇವರು ‘ವಾಣಿ ಸ್ಮರಣೆ’ಗೈಯ್ಯಲಿದ್ದು, ಪುತ್ತೂರಿನ ಹಿರಿಯ ಲೇಖಕಿ, ಸಾಧಕಿ ಶ್ರೀಮತಿ ಎ.ಪಿ. ಮಾಲತಿ ಇವರಿಗೆ ಸಾವಿತ್ರಮ್ಮ ಅಪ್ಪಯ್ಯ ಹಿರಿಯ ಸಾಧಕಿ ಪ್ರಶಸ್ತಿ 2024 ಪ್ರದಾನ ಮಾಡಲಾಗುವುದು. ವಾಣಿ ಕೌಟುಂಬಿಕ ಕಥಾಸ್ಪರ್ಧೆ-2025 ವಿಜೇತರು – ‘ಸೋತು ಗೆದ್ದವಳು’ – ಸುಹಾಸಿನಿ ಹೆಗಡೆ, ಮೂರೂರು ‘ತಪ್ಪೊಂದ ಹೇಳುವೆ !’ – ಸ್ವರ್ಣಗೌರಿ ಎಸ್. ಕಳಾಸಪುರ ‘ಅಮ್ಮನಾಗುವುದೆಂದರೆ’ – ಕಲ್ಪನಾ ಹೆಗಡೆ ‘ಆತಂಕ’ – ರಮೇಶ್ ಗೋನಾಳ್ ‘ಸಂಪತ್ತು’ – ಸಂಜಯ್…
ಹೊನ್ನಾವರ : ಚಿಂತನ ಉತ್ತರ ಕನ್ನಡ, ಚಿಂತನ ರಂಗ ಅಧ್ಯಯನ ಕೇಂದ್ರ ಮತ್ತು ಪ್ರೀತಿಪದ ಇವರ ವತಿಯಿಂದ ಬಹುರೂಪಿಯ ಪ್ರಕಟಣೆ ಕಿರಣ ಭಟ್ ಇವರ ‘ಹೌಸ್ ಫುಲ್’ ಕೃತಿ ಲೋಕಾರ್ಪಣೆಯನ್ನು ದಿನಾಂಕ 26 ಫೆಬ್ರವರಿ 2025ರಂದು ಬೆಳಿಗ್ಗೆ 11-00 ಗಂಟೆಗೆ ಹೊನ್ನಾವರದ ನಾಮಧಾರಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತರಾದ ಜಿ.ಯು. ಭಟ್ ಇವರು ವಹಿಸಲಿದ್ದು, ಬರಹಗಾರರಾದ ದೀಪಾ ಹಿರೇಗುತ್ತಿ ಇವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಧಾರವಾಡದ ಸಮಾಜ ವಿಜ್ಞಾನಿಗಳಾದ ಪ್ರಕಾಶ ಭಟ್ ಇವರು ಪುಸ್ತಕದ ಕುರಿತು ಮಾತನಾಡಲಿದ್ದು, ಬಹುರೂಪಿಯ ಜಿ.ಎನ್. ಮೋಹನ್ ಇವರು ಅತಿಥಿಯಾಗಿ ಭಾಗವಹಿಸಲಿದ್ದಾರೆ.
ರಂಗ ಚಟುವಟಿಕೆಗಳ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಕೆ. ವಿ. ಸುಬ್ಬಣ್ಣ ಎಂದೇ ಪ್ರಖ್ಯಾತರಾಗಿರುವ ಇವರ ಮೂಲ ಹೆಸರು ಕುಂಟಗೋಡು ವಿಭೂತಿ ಸುಬ್ಬಣ್ಣ. ಇವರ ತಂದೆ ಕೆ. ವಿ. ರಾಮಪ್ಪ, ತಾಯಿ ಸಾವಿತ್ರಮ್ಮ. ಮೂಲಮನೆ ‘ಕುಂಟಗೋಡು’ ಇದು ಒಂದು ಪುಟ್ಟ ಹಳ್ಳಿ. ‘ವಿಭೂತಿ’ ಇವರ ಮನೆತನದ ಹೆಸರು. ಬಿ. ಎ. ಆನರ್ಸ ಪದವಿಯನ್ನು ರ್ಯಾಂಕ್ ನಲ್ಲಿ ಉತ್ತೀರ್ಣರಾಗಿ, ಉದ್ಯೋಗಕ್ಕೆ ಅವಕಾಶಗಳಿದ್ದರೂ, ಅಡಿಕೆ ಬೆಳೆಗಾರರಾದ ಇವರು ಹಳ್ಳಿಗೆ ಬಂದು ಮಾಡಿದ ಸಾಧನೆ ಅಪೂರ್ವವಾದದ್ದು, ಶಿವಮೊಗ್ಗ ಜಿಲ್ಲೆಯ, ಸಾಗರ ತಾಲೂಕಿನ ಒಂದು ಚಿಕ್ಕ ಊರು ಹೆಗ್ಗೋಡಿನಲ್ಲಿ 1932 ಫೆಬ್ರವರಿ 20ರಂದು ಇವರ ಜನನವಾಯಿತು. ಇವರು ಹೆಗ್ಗೋಡಿನಲ್ಲಿದ್ದುಕೊಂಡೇ ‘ನೀನಾಸಂ’ ಎಂದು ಖ್ಯಾತಿವೆತ್ತ ‘ನೀಲಕಂಠೇಶ್ವರ ನಾಟ್ಯ ಸೇವಾ ಸಂಘ’ವನ್ನು 1949ರಲ್ಲಿ ಸ್ಥಾಪಸಿ ಸ್ಥಾಪಕಸದಸ್ಯರಾದರು. ಆದರೆ 1974ರಲ್ಲಿ ಕಟ್ಟಿದ ‘ನೀನಾಸಂ ಚಿತ್ರ ಸಮಾಜ’ ಭಾರತದ ಮೊತ್ತಮೊದಲ ಗ್ರಾಮೀಣ ಸಿನಿಮಾ ಸೊಸೈಟಿ ಎಂಬ ಕೀರ್ತಿಯನ್ನು ಪಡೆದಿದೆ. ‘ ನೀನಾಸಂ’ ನ ರಂಗ ಚಟುವಟಿಕೆಗಳ ಮೂಲಕ ಗ್ರಾಮೀಣ ರಂಗಭೂಮಿಗೆ ತನ್ನದೇ ಆದ ಸ್ಥಾನ…
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥೆಯು ಮಂಗಳೂರು ವಿಶ್ವವಿದ್ಯಾನಿಲಯ ಕೊಣಾಜೆಯ ಮಂಗಳ ಸಭಾಂಗಣದಲ್ಲಿ ದಿನಾಂಕ 21 ಮತ್ತು 22 ಫೆಬ್ರವರಿ 2025ರಂದು ನಡೆಯಲಿರುವ 27ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ ಧನಂಜಯ ಮೂಡುಬಿದಿರೆ ಇವರನ್ನು ಸನ್ಮಾನಿಸಲಿದೆ. ಬಿ. ಎಸ್. ಸಿ. ಪದವಿ ಹಾಗೂ ಫ್ರೆಂಚ್ ಪ್ರೈಮರಿ ಪದವಿ ಗಳಿಸಿರುವ ಧನಂಜಯ ಮೂಡುಬಿದಿರ 37 ವರ್ಷಗಳ ಕಾಲ ‘ಹೊಸದಿಗಂತ’, ‘ಮುಂಗಾರು’, ‘ಕನ್ನಡ ಜನಾಂತರಂಗ’, ‘ಜನ ಈದಿನ’ ಮತ್ತು ‘ಉದಯವಾಣಿ’ ಪತ್ರಿಕೆಗಳಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಕೊಪ್ಪಳ ಮತ್ತು ಮಂಡ್ಯದಲ್ಲಿ 90ರ ದಶಕದಲ್ಲಿ ನಡೆದಿದ್ದ ಅ. ಭಾ. ಕನ್ನಡ ಸಾಹಿತ್ಯ ಸಮ್ಮೇಳನ, ಮೂಡುಬಿದಿರೆಯಲ್ಲಿ ನಡೆದಿದ್ದ 71ನೇ ಅ. ಭಾ. ಕ. ಸಾಹಿತ್ಯ ಸಮ್ಮೇಳನ, ಬೆಳಗಾವಿ, ಮಂಗಳೂರು ಮೊದಲಾದೆಡೆ ನಡೆದಿದ್ದ ಅ. ಭಾ. ಕ. ಸಾ. ಸಮ್ಮೇಳನಗಳಲ್ಲಿ ಭಾಗಿಯಾಗಿ ಸಮಗ್ರ ವರದಿ ಪ್ರಕಟಿಸಿದ್ದಾರೆ. ಸಾಹಿತ್ಯದಲ್ಲೂ ಆಸಕ್ತಿ ಹೊಂದಿರುವ ಇವರ ಬರವಣಿಗೆಯ ಕವನ, ಕಥೆ, ಹಾಸ್ಯ, ವ್ಯಕ್ತಿ/ಸ್ಥಳ…
ಮಂಜೇಶ್ವರ: ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗ ಮತ್ತು ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಜಂಟಿ ಆಶ್ರಯದಲ್ಲಿ ಭಾಷಾಂತರಕಾರರ ನಾಲ್ಕನೇ ಸಮಾವೇಶ ಹಾಗೂ ಪುಸ್ತಕ ಬಿಡುಗಡೆ ಸಮಾರಂಭ ದಿನಾಂಕ 17 ಫೆಬ್ರವರಿ 2025ರಂದು ಮಂಜೇಶ್ವರದ ಗೋವಿಂದ ಪೈ ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಡಿ. ವಿ. ಪರಮಶಿವ ಮೂರ್ತಿ ಮಾತನಾಡಿ “ಭಾಷಾ ಶಾಸ್ತ್ರದ ವಿಷಯಕ್ಕೆ ಸಂಬಂಧಿಸಿದ ವಿದ್ವಾಂಸರು ಇತ್ತೀಚೆಗೆ ಕಡಿಮೆಯಾಗುತ್ತಿದ್ದಾರೆ. ಭಾಷಾ ಶಾಸ್ತ್ರದ ವಿಷಯ ಮರೀಚಿಕೆಯಾಗಿದೆ. ಭಾಷೆ ಮತ್ತು ಸಂಸ್ಕೃತಿಯ ವಿಚಾರ ಚಿಂತಾಜನಕವಾಗಿದೆ. ಈಗಿನ ವಿದ್ಯಾರ್ಥಿಗಳು ಅಂಕಗಳ ಹಿಂದೆ ಹೋಗುತ್ತಾರೆ. ಆದ್ದರಿಂದ ಭಾಷೆ ಮತ್ತು ಸಂಸ್ಕೃತಿ ಅಳಿಸಿ ಹೋಗುವ ಆತಂಕ ಎದುರಾಗಿದೆ. ಶಾಸ್ತ್ರೀಯ ಬೇರುಗಳು ಉಳಿದರೆ ಮಾತ್ರ ಹೊಸ ಜ್ಞಾನ ಲಭಿಸಲು ಸಾಧ್ಯ. ಈ ನಿಟ್ಟಿನಲ್ಲಿ ಡಾ. ಸುಭಾಷ್ ಪಟ್ಟಾಜೆಯವರ ‘ಬಹುಮುಖಿ’, ವಿಶ್ವನಾಥ ನಾಗಠಾಣ ಅವರ ‘ಕೃತಿಶೋಧ’, ಡಾ.ಮೋಹನ ಕುಂಟಾರ್ ಅವರ ‘ಇರುಳಿನ ಆತ್ಮ’ ಹಾಗೂ ‘ಪುರಾಣ ಕಥಾ ಕೋಶ’…
ಮಂಜೇಶ್ವರ ಗೋವಿಂದ ಪೈ ಸರಕಾರಿ ಕಾಲೇಜಿನಲ್ಲಿ ದಿನಾಂಕ 18 ಫೆಬ್ರವರಿ 2025ರಂದು ಹಂಪಿ ಕನ್ನಡ ವಿ.ವಿ.ಯ ಸಹಭಾಗಿತ್ವದೊಂದಿಗೆ ಭಾಷಾಂತರ ಪ್ರಕ್ರಿಯೆಯ ಕುರಿತಾದ ವಿಚಾರ ಸಂಕಿರಣದ ಸಂದರ್ಭದಲ್ಲಿ ಸಂಜೆಯ ಹೊತ್ತು ಮಂಗಳೂರಿನ ‘ಸೌರಭ ಸಂಗೀತ ನೃತ್ಯ ಶಾಲೆ’ಯ ನೃತ್ಯ ವಿದುಷಿ ಡಾ. ಶ್ರೀವಿದ್ಯಾ ಇವರ ನೇತೃತ್ವದಲ್ಲಿ ಡಾ. ಮೋಹನ ಕುಂಟಾರ್ ರವರ ‘ಲೋಕಾಂತದ ಕಾವು’ ಎಂಬ ಕವನ ಸಂಕಲನದಿಂದ ಆಯ್ದ ಕವಿತೆಗಳನ್ನಾಧರಿಸಿದ ನೃತ್ಯ ಪ್ರದರ್ಶನವಿತ್ತು. ಒಂದು ಗಂಟೆಯ ಕಾಲ ನಡೆದ ಈ ಕಾರ್ಯಕ್ರಮವು ತುಂಬಾ ರಂಜನೀಯವಾಗಿತ್ತು, ಮಾತ್ರವಲ್ಲದೆ ಪ್ರೇಕ್ಷಕರ ಅರಿವಿನ ವ್ಯಾಪ್ತಿಯನ್ನು ವಿಸ್ತರಿಸುವಂತೆಯೂ ಇತ್ತು. ಎರಡು ಆರಂಭಿಕ ಭಾವಗೀತೆಗಳ ನಂತರ ತಂಡವು ಪ್ರಸ್ತುತ ಪಡಿಸಿದ ‘ಮಹಾಬಲಿ’ ಮತ್ತು ‘ಕೋಟಿ ಪುಣ್ಯ’ ಎಂಬ ರೂಪಕಗಳು ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿ ಜನಮನದಲ್ಲಿ ಉಳಿಯುವಂತಿದ್ದವು. ‘ಮಹಾಬಲಿ’ ರೂಪಕದಲ್ಲಿ ಮೊದಲಿಗೆ ಮಹಾಬಲಿಯು ಓಣಂ ಹಬ್ಬದ ಕಾಲದ ಕಥೆಯ ಪ್ರಕಾರ ತನ್ನ ಪ್ರಜೆಗಳೆಲ್ಲ ಹೇಗಿದ್ದಾರೆ ಎಂದು ನೋಡಲು ನಾಡಿಗೆ ಬರುತ್ತಾನೆ. ಆದರೆ ಬಂದು ನೋಡಿದಾಗ ಅಲ್ಲೇನಿದೆ? ಬರೇ ಅವ್ಯವಸ್ಥೆಯ ರಾಶಿ.…
ಹಾಸನ : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ.) ಬೆಂಗಳೂರು ಸಂಸ್ಥೆ, ಉತ್ತರ ಕನ್ನಡ ಜಿಲ್ಲಾ ಘಟಕ ಹಾಗೂ ಯಲ್ಲಾಪುರ ತಾಲೂಕು ಘಟಕದ ಸಹಕಾರದಲ್ಲಿ ನಾಡಿನ ಪ್ರಸಿದ್ಧ ಮಕ್ಕಳ ಸಾಹಿತಿ ತಮ್ಮಣ್ಣ ಬೀಗಾರ ಸರ್ವಾಧ್ಯಕ್ಷತೆಯಲ್ಲಿ ದಿನಾಂಕ 23 ಫೆಬ್ರವರಿ 2025 ಭಾನುವಾರ ಯಲ್ಲಾಪುರದ ಅಡಿಕೆ ಭವನದಲ್ಲಿ ಹಮ್ಮಿಕೊಂಡಿರುವ ಅಖಿಲ ಕರ್ನಾಟಕ ಪ್ರಥಮ ಶಿಶು ಸಾಹಿತ್ಯ ಸಮ್ಮೇಳನದ ಲೋಗೋ ಬಿಡುಗಡೆ ಕಾರ್ಯಕ್ರಮವು ದಿನಾಂಕ 19 ಫೆಬ್ರವರಿ 2025ರಂದು ಹಾಸನದ ಮದನಗೌಡರ ನಿವಾಸದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಲೋಗೋ ಅನಾವರಣಗೊಳಿಸಿ ಮಾತನಾಡಿದ ಹಾಸನ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಚ್.ಬಿ. ಮದನಗೌಡ “ಬೆಂಗಳೂರಿನ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ.) ಇದರಡಿಯಲ್ಲಿ ಕೊಟ್ರೇಶ್ ಎಸ್. ಉಪ್ಪಾರ್ ನೇತೃತ್ವದ ತಂಡ ಕರ್ನಾಟಕದ ಉದ್ದಗಲಕ್ಕೂ ಕನ್ನಡದ ಕಂಪನ್ನು ಸೂಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ. ಸಾಹಿತ್ಯ ವೇದಿಕೆ ಈಗಾಗಲೇ ಸಾಹಿತ್ಯದ ವಿವಿಧ ಪ್ರಕಾರಗಳಿಗೆ ಸಂಬಂಧಿಸಿದಂತೆ ಹಲವು ರಾಜ್ಯಮಟ್ಟದ ಸಮ್ಮೇಳನಗಳನ್ನು ಹಮ್ಮಿಕೊಂಡಿದ್ದು, ಪ್ರಸ್ತುತ ಉತ್ತರ ಕನ್ನಡ ಜಿಲ್ಲೆಯ…