Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : “ಪ್ರತಿಯೊಬ್ಬ ವ್ಯಕ್ತಿಯ ಒಳಗೊಬ್ಬ ಕಲಾವಿದ ಇರುತ್ತಾನೆ. ಅವನನ್ನು ಜಾಗ್ರತಗೊಳಿಸುವುದಷ್ಟೇ ನನ್ನ ಕೆಲಸ. ನಿಮ್ಮೊಳಗಿನ ಪ್ರತಿಭೆ ನಿಮಗೆ ತಿಳಿಯುವುದಿಲ್ಲ. ಆಸಕ್ತಿ, ಶ್ರದ್ದೆ, ಮತ್ತು ತಾಳ್ಮೆಯು ಕಲಾವಿದನಿಗೆ ಇರಬೇಕಾದ ಮುಖ್ಯ ಲಕ್ಷಣಗಳು”. ಎಂದು ಖ್ಯಾತ ರಂಗ ನಿರ್ದೇಶಕ, ನಟ ಕಾಸರಗೋಡು ಚಿನ್ನಾ ಅವರು ತಿಳಿಸಿದರು. ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದ ನೇತೃತ್ವದಲ್ಲಿ ವರ್ಷಂಪ್ರತಿ ಜರಗುವ “ಕ್ಷಿತಿಜ್ ” ಕಾರ್ಯಕ್ರಮದ ಅಂಗವಾಗಿ ಕೇಂದ್ರದಲ್ಲಿ ಜರಗಿದ ರಂಗ ತರಬೇತಿ ಶಿಬಿರದ ನಿರ್ದೇಶಕರಾಗಿ ಅವರು ಮಾತನಾಡುತ್ತಿದ್ದರು. ಮೇ ತಿಂಗಳ 25 ರಂದು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಊರುಗಳಿಂದ ಭಾಗವಹಿಸಿದ ಸುಮಾರು 70 ಮಂದಿ ವಿದ್ಯಾರ್ಥಿಗಳಿಗೆ ಧ್ವನಿ ಏರಿಳಿತ, ಮೂಕಾಭಿನಯ, ನಟನೆ ಮತ್ತು ಅಂಗಿಕ ಅಭಿನಯ ಸೇರಿದಂತೆ ರಂಗಭೂಮಿಯ ವಿವಿಧ ಆಯಾಮಗಳ ಬಗ್ಗೆ ವಿವರಿಸಿ ಹೇಳಿದರು. ವಿಶ್ವ ಕೊಂಕಣಿ ಕೇಂದ್ರದ ಆಡಳಿತ ನಿರ್ದೇಶಕರಾದ ಸಿ.ಎ. ನಂದಗೋಪಾಲ ಶೆಣೈ ಅವರು “ಕ್ಷಿತಿಜ್ ” ಕಾರ್ಯಾಗಾರದ ಪರವಾಗಿ ಸ್ಮರಣಿಕೆ ನೀಡಿ ಗೌರವಿಸಿದರು. ಕೇಂದ್ರದ ಶ್ರೀಮತಿ ಲಕ್ಷ್ಮಿ ಅವರು ಸ್ವಾಗತಿಸಿ,…
ಸುಳ್ಯ : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಅರೆಭಾಷೆ ಕಥೆ ಬರೆಯುವ ಕಾರ್ಯಾಗಾರ ದಿನಾಂಕ 31 ಮೇ 2025ರಂದು ಸುಳ್ಯದ ಕನ್ನಡ ಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ಮಾತನಾಡಿ “ಮಕ್ಕಳಲ್ಲಿ ಕಥೆ ಬರೆಯುವ ಹವ್ಯಾಸವನ್ನು ಬೆಳೆಸಿದರೆ ಮುಂದೆ ಉತ್ತಮ ಕಥೆಗಾರರಾಗಿ ಭಾಷೆ, ಸಾಹಿತ್ಯಕ್ಕೆ ದೊಡ್ಡ ಆಸ್ತಿ ಆಗಲಿದ್ದಾರೆ” ಎಂದು ಹೇಳಿದರು. ಅಕಾಡೆಮಿಯ ಸದಸ್ಯ ಹಾಗು ಕಾರ್ಯಕ್ರಮದ ಸಂಚಾಲಕ ಲೋಕೇಶ್ ಊರುಬೈಲು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅಕಾಡೆಮಿ ಸದಸ್ಯರಾದ ತೇಜಕುಮಾರ್ ಕುಡೆಕಲ್ಲು, ಅರಂತೋಡು ಶಾಲೆಯ ಶಿಕ್ಷಕರಾದ ಕಿಶೋರ್ ಕುಮಾರ್ ಕಿರ್ಲಾಯ ಶುಭ ಹಾರೈಸಿದರು. ಸಂಪನ್ಮೂಲ ವ್ಯಕ್ತಿಗಳಾದ ಡಾ. ಪುನೀತ್ ರಾಘವೇಂದ್ರ ಕುಂಟುಕಾಡು, ಪ್ರಸನ್ನ ಐವರ್ನಾಡು ಮತ್ತು ಅಕಾಡೆಮಿ ಸದಸ್ಯರಾದ ಗೋಪಾಲ ಪೆರಾಜೆ ಉಪಸ್ಥಿತರಿದ್ದರು. ದೃತಿ ದೀಟಿಗೆ ಸ್ವಾಗತಿಸಿ, ಅಕಾಡೆಮಿ ಸದಸ್ಯ ವಿನೋದ್ ಮೂಡಗದ್ದೆ ಕಾರ್ಯಕ್ರಮ ನಿರೂಪಿಸಿ, ಖಷೀರ ಸಿ.ಯು ವಂದಿಸಿದರು. ಸಂಜೆ ನಡೆದ ಸಮಾರೋಪ…
ಮಡಿಕೇರಿ : ಪತ್ರಕರ್ತ ಪ್ರಶಾಂತ್ ಟಿ. ಆರ್ ವಿರಚಿತ ‘ಬಾಳ ಹಾದಿಯಲಿ ಬೆಳ್ಳಿ ಚುಕ್ಕಿ’ ಕಾದಂಬರಿಗೆ ಈ ಸಾಲಿನ ಇಂಡಿಯನ್ ಐಕಾನ್ ಸಂದಿದೆ. ಒರಿಯಂಟಲ್ ಫೌಂಡೇಶನ್ ಪ್ರತಿ ವರ್ಷ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಇಂಡಿಯನ್ ಐಕಾನ್ ರಾಷ್ಟ್ರಮಟ್ಟದ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಅಂತೆಯೇ ಈ ಬಾರಿಯೂ ಪ್ರಶಸ್ತಿ ಪ್ರಕಟಸಿದ್ದು ಸಾಹಿತ್ಯ ಕ್ಷೇತ್ರದಿಂದ ಪ್ರಶಾಂತ್ ಟಿ.ಆರ್. ವಿರಚಿತ ‘ಬಾಳ ಹಾದಿಯಲಿ ಬೆಳ್ಳಿ ಚುಕ್ಕಿ’ ಕಾದಂಬರಿಗೆ ಪ್ರಶಸ್ತಿ ಲಭಿಸಿದೆ. ಬಡತನದಲ್ಲಿ ಅರಳಿದ ಕ್ರೀಡಾ ಪ್ರತಿಭೆಯ ಕುರಿತ ಕಥಾವಸ್ತು ಈ ಕಾದಂಬರಿಯಲ್ಲಿ ಅಡಕವಾಗಿದೆ. ವಿಶೇಷ ಎಂದರೆ ಈ ಕಾದಂಬರಿಯನ್ನು ಮೆಚ್ಚಿದ ಖ್ಯಾತ ನಟ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಅನಿರುದ್ಧ ಜಟ್ಕರ್ ಬೆನ್ನುಡಿ ಬರೆದಿದ್ದಾರೆ. ಬಾಲಿವುಡ್ ನಟ ಹಾಗೂ ಕ್ರಿಕೆಟಿಗೆ ಭಾಸ್ಕರ್ ಮುನ್ನುಡಿ ಬರೆದಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಅವರ ಸಹಯೋಗದಲ್ಲಿ ನಡೆಯುವ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ದಿನಾಂಕ 15 ಜೂನ್ 2025ರಂದು ಬೆಂಗಳೂರಿನ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ನೆರವೇರಲಿದ್ದು, ಅಂದು…
ಮಂಗಳೂರು : ಸರಯೂ ಬಾಲ ಯಕ್ಷವೃಂದ ಕೋಡಿಕಲ್ ಇದರ ರಜತ ಮಹೋತ್ಸವ ಸಂಭ್ರಮ ಸಮಾರಂಭದ ಅಂಗವಾಗಿ ಆಯೋಜಿಸಿದ 15 ದಿನಗಳ ಯಕ್ಷಪಕ್ಷ – ರಜತ ಸರಯೂ ಕಾರ್ಯಕ್ರಮದ 11ನೇ ದಿನದ ಕಾರ್ಯಕ್ರಮ ದಿನಾಂಕ 28ಮೇ 2025ರ ಬುಧವಾರದಂದು ಕದ್ರಿ ದೇವಳದ ವಠಾರದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಉದ್ಯಮಿ, ಕಲಾಪೋಷಕ ಸಿ. ಎಸ್. ಭಂಡಾರಿ ಮಾತನಾಡಿ “ಇಂದು ಯಕ್ಷಗಾನವು ಪಂಡಿತ-ಪಾಮರರೆನ್ನುವ ಬೇಧವಿಲ್ಲದೇ ಎಲ್ಲರನ್ನೂ ಸುಲಭವಾಗಿ ತಲುಪುವ ಕಲೆಯಾಗಿದೆ. ಎಳೆಯ ಚಿಣ್ಣರೂ ಇದರ ನಾಟ್ಯಗಾರಿಕೆ ಮಾತುಗಾರಿಕೆಯನ್ನು ಕೈಗೂಡಿಸಿಕೊಂಡು ಬೆಳೆಯುತ್ತಿದ್ದಾರೆ. ಇದು ಈ ರಂಗದಲ್ಲಿ ಉತ್ತಮ ಬೆಳವಣಿಗೆ ಎಂಬುದು ಸಂತಸದ ವಿಷಯ. ಕಲಾ ಗೌರವ ಎಲ್ಲೆಡೆ ತುಂಬಿ ಹರಿಯಲಿ” ಎಂದು ಹಾರೈಸಿದರು. ಸಾಧಕ ಸನ್ಮಾನವನ್ನು ಸ್ವೀಕರಿಸಿದ ನಿವೃತ್ತ ಶಿಕ್ಷಕ, ಯಕ್ಷಲಹರಿ (ರಿ) ಸಂಸ್ಥೆಯ ಕಾರ್ಯದರ್ಶಿ ಕಲ್ಲ ಮುಂಡ್ಕೂರು ವಸಂತ ದೇವಾಡಿಗ ಮಾತನಾಡಿ “ಯಕ್ಷಗಾನ,u ನಾಟಕವೇ ಮೊದಲಾದ ಸಾಂಸ್ಕೃತಿಕ ರಂಗದಲ್ಲಿ ನಿರಂತರ ಸೇವೆಗಳನ್ನು ಮಾಡುತ್ತಾ ಬರುತ್ತಿದ್ದೇನೆ. ಇದರಲ್ಲಿ ತುಂಬಾ ವಿಚಾರಗಳನ್ನು ತಿಳಿದಿದ್ದೇನೆ. ಇದು ನನಗೆ ಪ್ರಿಯವಾದ…
ತೆಕ್ಕಟ್ಟೆ : ಯಶಸ್ವೀ ಕಲಾವೃಂದ (ರಿ.) ಕೊಮೆ ತೆಕ್ಕಟ್ಟೆ ಮತ್ತು ಯಕ್ಷಗಾನ ಕಲಿಕಾ ಕೇಂದ್ರ ತೆಕ್ಕಟ್ಟೆ ಇವರ ಸಹಯೋಗದಲ್ಲಿ ನಡೆಯುವ ಆರು ತಿಂಗಳುಗಳ ಕಾಲದ ಬಡಗು ಹಿಮ್ಮೇಳ ಮುಮ್ಮೇಳ ಯಕ್ಷಗಾನದ ತರಗತಿಯು ದಿನಾಂಕ 01 ಜೂನ್ 2025ರಂದು ತೆಕ್ಕಟ್ಟೆ ಹಯಗ್ರೀವದಲ್ಲಿ ಉದ್ಘಾಟನೆಗೊಂಡಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶ್ರೀ ಶಾರದಾ ಪೀಠಂ ಶೃಂಗೇರಿಯ ಪ್ರಾಂತೀಯ ಧರ್ಮಾಧಿಕಾರಿ ವೇದಮೂರ್ತಿ ಲೋಕೇಶ ಅಡಿಗರು “ಸನಾತನ ಧರ್ಮದಲ್ಲಿ ಸತ್ಕಾರ್ಯಗಳೆಲ್ಲವಕ್ಕೂ ಮನ್ನಣೆ ಇದೆ. ಪ್ರತೀ ಮನೆ ಮನೆಗಳ ಒಂದೊಂದು ಮಗುವಿನ ಹೃದಯದಲ್ಲೂ ಕಲೆ ಇರುತ್ತದೆ. ಹಲವು ಮಕ್ಕಳು ಜನ್ಮತಃ ಕಲಾವಿದರಾಗಿರುತ್ತಾರೆ. ಅವರನ್ನು ಹೊರ ಪ್ರಪಂಚಕ್ಕೆ ತೋರಿಸುವುದಕ್ಕೆ ಇಂತಹ ಸಂಸ್ಥೆ ಬೇಕು, ಗುರುಗಳು ಬೇಕು. ಅನೇಕ ಮಕ್ಕಳನ್ನು ಕಲಾ ಪ್ರಪಂಚಕ್ಕಾಗಿ ತಯಾರಿ ಮಾಡುವಲ್ಲಿ ಸಂಸ್ಥೆಯ ಸ್ವಾರ್ಥ ಇರುವುದಿಲ್ಲ. ಗುರುಗಳಿಗೆ ಯಾವುದೇ ನಿರೀಕ್ಷೆ ಇರುವುದಿಲ್ಲ. ಕೇವಲ ಕಲೆ ಬೆಳೆಯಬೇಕೆಂಬುದಷ್ಟೇ ಆಗಿರುತ್ತದೆ. ಸಂಸ್ಥೆ ಅನೇಕ ಶಿಷ್ಯರನ್ನು ಹೊಂದಿ ಇನ್ನಷ್ಟು ಬೆಳೆಯಲಿ” ಎಂದು ಶುಭಾಶಂಸನೆಗೈದರು. ತರಗತಿಯನ್ನು ಮಕ್ಕಳಿಗೆ ಕೋರೆ ತಾಳ ಹೇಳಿಕೊಡುವ ಮೂಲಕ ಉದ್ಘಾಟಿಸಿದ…
ಶಿವಮೊಗ್ಗ : ಗೋಪಿಶೆಟ್ಟಿಕೊಪ್ಪದ ಸಾಹಿತ್ಯ ಗ್ರಾಮದಲ್ಲಿ ಏರ್ಪಡಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ತನ್ನ ಮೂರು ವರ್ಷದ ಕಾರ್ಯಚಟುವಟಿಕೆಗಳ ದಾಖಲೆಗಳಿರುವ ‘ಕ್ರಿಯಾಶೀಲತೆಯ ಒಳನೋಟ’ ಸ್ಮರಣ ಸಂಚಿಕೆ ಬಿಡುಗಡೆ ಹಾಗೂ ಬಾನು ಮುಷ್ತಾಕ್ ಅವರ ‘ಎದೆಯ ಹಣತೆ’ ಕೃತಿ ಕುರಿತು ಚರ್ಚೆ ಕಾರ್ಯಕ್ರಮವು ದಿನಾಂಕ 28 ಮೇ 2025ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ 19ನೆಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು, ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಜೆ.ಕೆ. ರಮೇಶ್ “ಕ್ರಿಯಾಶೀಲತೆಯ ಒಳನೋಟಕ್ಕೆ ಹೊರನೋಟವು ಇದೆ. ಮಲೆನಾಡಿನ ಚಿತ್ರಣ, ಜಿಲ್ಲೆಯ ನಕ್ಷೆ, ರಾಷ್ಟ್ರಕವಿಯ ಚಿತ್ರ ಎಲ್ಲವನ್ನೂ ಒಳಗೊಂಡಿದೆ. ಪರಿಷತ್ತು ಚಟುವಟಿಕೆಗಳು, ಅತಿಥಿಗಳ ಮಾತು ಸಂಘಟಿಸಿದ ನಾಲ್ಕು ಸಮ್ಮೇಳನಗಳ ಭಾಷಣಗಳ ಸಂಗ್ರಹಗಳಲ್ಲಿ ನೂರ ಇಪ್ಪತೈದು ಜನರ ಭಾಷಣಗಳ ಟಿಪ್ಪಣಿಗಳಿವೆ. ಇಲ್ಲಿ ಎಲ್ಲಾ ಬಗೆಯ ಅಭಿಪ್ರಾಯಗಳಿವೆ. ಒಳಹೊಕ್ಕು ನೋಡಿದಾಗ ಒಳನೋಟದ ಅರಿವಾಗುತ್ತೆ. ಈ ಸಂಚಿಕೆಯಲ್ಲಿ ಕನ್ನಡ ಭಾಷೆ, ಅದರ ಸ್ವರೂಪ, ಸ್ಥಿತಿ, ಸ್ಥಾನಮಾನಗಳ ಕುರಿತು ಚಿಂತಿಸಿರುವ ಲೇಖನಗಳಿವೆ. ಸಾಹಿತ್ಯ ಕೃತಿಗಳು,…
ಕಾಸರಗೋಡು : ಕಾಸರಗೋಡಿನ ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಗ್ರಂಥಾಲಯ ಮತ್ತು ಕೇರಳ ರಾಜ್ಯ- ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ಆಶ್ರಯದಲ್ಲಿ ದಿನಾಂಕ 08 ಜೂನ್ 2025ರಂದು ಅಪರಾಹ್ನ 3-00 ಗಂಟೆಗೆ ಕನ್ನಡ ಭವನ ಸಭಾಂಗಣದಲ್ಲಿ ಕಯ್ಯಾರ ಕಿಞಣ್ಣ ರೈ ಜನ್ಮದಿನೋತ್ಸವ ಕಾರ್ಯಕ್ರಮ ನಡೆಯಲಿದೆ. ಕನ್ನಡ ಭವನ ರೂವಾರಿಗಳಾದ ಡಾ. ವಾಮನ್ ರಾವ್ ಬೇಕಲ್-ಸಂಧ್ಯಾರಾಣಿ ಟೀಚರ್ ದಂಪತಿಗಳು ಕಯ್ಯಾರರ ಭಾವಚಿತ್ರಕ್ಕೆ ಹಾರಾರ್ಪಣೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಕ.ಸಾ.ಪ. ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸುವರು. ಹಿರಿಯ ಕವಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ ನುಡಿನಮನ ಸಲ್ಲಿಸುವರು. ಮುಖ್ಯ ಅತಿಥಿಯಾಗಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸಮಿತಿ ಸದಸ್ಯ ಎ.ಆರ್. ಸುಬ್ಬಯ್ಯಕಟ್ಟೆ, ನ್ಯಾಯವಾದಿ ಕೆ. ಸತ್ಯನಾರಾಯಣ ತಂತ್ರಿ, ದ.ಕ. ಜಿಲ್ಲಾ ಕನ್ನಡ ಭವನ ಅಧ್ಯಕ್ಷೆ ರೇಖಾ ಸುಧೇಶ್ ರಾವ್, ದ.ಕ. ಜಿಲ್ಲಾ ಕನ್ನಡ ಭವನ ಕಾರ್ಯಾಧ್ಯಕ್ಷ ಉಮೇಶ್…
ಬೆಂಗಳೂರು : ಸಂವಿಧಾನ ಶಿಲ್ಪಿ ಬಾಬಾಸಾಹೇಬ ಅಂಬೇಡ್ಕರ್ ಅವರ ಜಯಂತಿಯ ಪ್ರಯುಕ್ತ ಖಿದ್ಮಾ ಫೌಂಡೇಶನ್ ಕರ್ನಾಟಕ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಲೇಖನ ಸ್ಪರ್ಧೆಯ ಫಲಿತಾಂಶ ಪ್ರಕಟಣೆಯಾಗಿದೆ. ಪ್ರಥಮ : ಹಿರಿಯ ವೈದ್ಯ ಅಧಿಕಾರಿ ಡಾ. ಸುರೇಶ್ ನೆಗಳಗುಳಿ, ದ್ವಿತೀಯ : ಶ್ರೀಮತಿ ಸ್ವಪ್ನ ಆರ್.ಎ ಹಾಗೂ ತೃತೀಯ ಸ್ಥಾನ ಡಾ. ಪೂರ್ಣಿಮಾ ಧಾಮಣ್ಣವರ ಪಡೆದುಕೊಂಡರೆ ತೀರ್ಪುಗಾರರಿಂದ ಕುಮಾರಿ ಜ್ಯೋತಿ ಆನಂದ ಚಂದುಕರ, ಪಲ್ಲವಿ ಎಂ.ಓ., ಪ್ರತಿಭಾ ಬಿ. ತಲ್ಲೂರ, ರೇಣುಕಾ ಸಂಗಪ್ಪನವರ ಮತ್ತು ಝುಲೇಖ ಮಮ್ತಾಝ್ ಇವರುಗಳು ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ. ಸಾರ್ವಜನಿಕ ನೆಲೆಯಲ್ಲಿ ದೇಶಾದ್ಯಂತ ನೆಲಸಿರುವ ಅರುವತ್ತೈದಕ್ಕೂ ಹೆಚ್ಚಿನ ಕನ್ನಡ ಪ್ರಜೆಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಲೇಖನ ಸ್ಪರ್ಧೆಗೆ ಹಿರಿಯ ಸಾಹಿತಿಗಳು ಹಾಗೂ ವಕೀಲರಾದ ಬಿ.ಎಸ್. ಅಪರಂಜಿ, ಶಿಕ್ಷಕರು ಲೇಖಕರಾದ ಮೊಹಮ್ಮದ್ ಹುಮಾಯುನ್ ಎನ್. ಹಾಗೂ ಶಿಕ್ಷಕಿ ಅಂಕಣ ಬರಹಗಾರರಾದ ಶ್ರೀಮತಿ ಅಶ್ವಿನಿ ಎಸ್. ಅಂಗಡಿ ಇವರುಗಳು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ದಿನಾಂಕ 31 ಮೇ 2025ರಂದು ಸಂಜೆ ಗೂಗಲ್ ಮೀಟ್ ಮೂಲಕ…
ತೆಕ್ಕಟ್ಟೆ : ಯಶಸ್ವೀ ಕಲಾವೃಂದ (ರಿ.) ಕೊಮೆ ತೆಕ್ಕಟ್ಟೆ ಇದರ ಆಶ್ರಯದಲ್ಲಿ ಗಂಪು ಪೈ ಸಾಲಿಗ್ರಾಮ ಸಹಕಾರದಲ್ಲಿ ಕಾಳಿಂಗ ನಾವಡರ ಸಂಸ್ಮರಣೆಯಾಗಿ ‘ಯಕ್ಷ ಗಾನ ನಮನ’ ಕಾರ್ಯಕ್ರಮವು ತೆಕ್ಕಟ್ಟೆ ಹಯಗ್ರೀವದಲ್ಲಿ ದಿನಾಂಕ 31 ಮೇ 2025ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂಸ್ಮರಣಾ ನುಡಿಗಳನ್ನಾಡಿದ ಯಕ್ಷಗುರು ಲಂಬೋದರ ಹೆಗಡೆ ನಿಟ್ಟೂರು “ಕಾಳಿಂಗ ನಾವಡರ ಹೆಸರೇ ಯಕ್ಷ ಪ್ರಪಂಚದಲ್ಲಿ ರೋಮಾಂಚನ. ಸರಿಸಾಟಿಯಿಲ್ಲದ ಕಂಠ ಸಿರಿಯನ್ನು ಹೊಂದಿದ ಕಾಳಿಂಗ ನಾವಡರು ತನ್ನ ಎಳವೆಯಲ್ಲಿಯೇ ಅದ್ಭುತ ಸಾಧನೆಗೈದು ಇಹಲೋಕ ತ್ಯಜಿಸಿ ಅಜರಾಮರರಾದರು. ಗಾನಗಾರುಡಿಗರಾಗಿ ಯಕ್ಷ ಮನಗಳಲ್ಲಿ ಚಿರಸ್ಥಾಯಿಯಾಗಿ ಉಳಿದರು” ಎಂದು ಹೇಳಿದರು. ಕೈಲಾಸ ಕಲಾಕ್ಷೇತ್ರದ ಅಧ್ಯಕ್ಷ ಹೆರಿಯ ಮಾಸ್ಟರ್ ಮಾತನ್ನಾಡಿ, ಲಕ್ಷೋಪಲಕ್ಷ ಕಲಾಭಿಮಾನಿಗಳ ಮನ ತಟ್ಟಿದ ಕಾಳಿಂಗ ನಾವಡರು ಯಕ್ಷ ಪರಂಪರೆಯಲ್ಲಿ ಇನ್ನಿಲ್ಲದ ಸಾಧನೆಗೈದವರು. ಇವರ ಸ್ಮರಣೆಯಲ್ಲಿಯೇ ಅನುದಿನವೂ ಯಕ್ಷಾಭಿಮಾನಿಗಳು ಇರುವುದನ್ನು ಅಲ್ಲಗಳೆಯುವಂತಿಲ್ಲ” ಎಂದರು. ರಂಗ ನಿರ್ದೇಶಕ ರೋಹಿತ್ ಎಸ್. ಬೈಕಾಡಿ, ಉದ್ಯಮಿ ಗೋಪಾಲ ಪೂಜಾರಿ ಬಾಳೆಹಿತ್ಲು ಉಪಸ್ಥಿತರಿದ್ದರು. ಯುವ ಭಾಗವತರಾದ ರಾಜೇಶ್ ಕೋಡಿ, ಹರೀಶ್ ಕಾವಡಿ,…
ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ಸರಕಾರಿ ಪ್ರೌಢಶಾಲೆ ಮಡಿಕೇರಿ ಇವರ ಸಂಯುಕ್ತ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 141ನೇ ಜನ್ಮದಿನೋತ್ಸವ ಹಾಗೂ ಶ್ರೀಮತಿ ವಿಜಯ ವಿಷ್ಣು ಭಟ್ ದತ್ತಿ ಪ್ರಶಸ್ತಿ ಪ್ರದಾನ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಮಡಿಕೇರಿಯ ಸರಕಾರಿ ಪ್ರೌಢಶಾಲಾ ಸಭಾಂಗಣದಲ್ಲಿ ದಿನಾಂಕ 04 ಜೂನ್ 2025ರಂದು ಬೆಳಿಗ್ಗೆ 11-00 ಗಂಟೆಗೆ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ.ಪಿ. ಕೇಶವ ಕಾಮತ್ ಇವರು ವಹಿಸಲಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲೆಯ ಹಿರಿಯ ಸಾಹಿತಿಗಳಾದ ನಾಗೇಶ್ ಕಾಲೂರುರವರು ನಡೆಸಿಕೊಡಲಿದ್ದಾರೆ. ಶ್ರೀಮತಿ ವಿಜಯ ವಿಷ್ಣು ಭಟ್ ದತ್ತಿ ಪ್ರಶಸ್ತಿಯ ಪ್ರಥಮ ವರ್ಷದ ಪುರಸ್ಕೃತರಾದ ಸಾಹಿತಿ ಶ್ರೀಮತಿ ಸ್ಮಿತಾ ಅಮೃತರಾಜ್ ಸಂಪಾಜೆ ಇವರಿಗೆ ಆಕಾಶವಾಣಿಯ ನಿವೃತ್ತ ಉದ್ಘೋಷಕರು, ಸಾಹಿತಿಯೂ ಆದ ಸುಬ್ರಾಯ ಸಂಪಾಜೆಯವರು ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ. ರಾಜಶ್ರೀ…