Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಸಂತ ಅಲೋಶಿಯಸ್ (ಪರಿಗಣಿತ) ವಿಶ್ವವಿದ್ಯಾಲಯ ರಂಗ ಅಧ್ಯಯನ ಕೇಂದ್ರದ ಆಯೋಜನೆಯಲ್ಲಿ ಮತ್ತು ಭಾಷೆ ಮತ್ತು ಸಂಸ್ಕೃತಿ ಅಧ್ಯಯನ ನಿಕೇತನ, ಕನ್ನಡ ವಿಭಾಗ, ಅರೆಹೊಳೆ ಪ್ರತಿಷ್ಠಾನ ಮತ್ತು ಅಸ್ತಿತ್ವ (ರಿ.) ಮಂಗ್ಳುರ್ ಇವರ ಸಹಯೋಗದಲ್ಲಿ ‘ತಮಾಷಾ’ ನಾಲ್ಕು ದಿನಗಳ ವಿದ್ಯಾರ್ಥಿ ನಾಟಕೋತ್ಸವವು ದಿನಾಂಕ 14 ಆಗಸ್ಟ್ 2025ರಿಂದ 17 ಆಗಸ್ಟ್ 2025ರವರೆಗೆ ಪ್ರತಿ ದಿನ ಸಂಜೆ 6-30 ಗಂಟೆಗೆ ಸಂತ ಅಲೋಶಿಯಸ್ ಕಾಲೇಜಿನ ಎಲ್.ಸಿ.ಆರ್.ಐ. ಸಭಾಂಗಣದಲ್ಲಿ ನಡೆಯಲಿದೆ. ದಿನಾಂಕ 14 ಆಗಸ್ಟ್ 2025ರಂದು ಸಂತ ಅಲೋಶಿಯಸ್ (ಪರಿಗಣಿತ) ವಿಶ್ವವಿದ್ಯಾಲಯ ರಂಗ ಅಧ್ಯಯನ ಕೇಂದ್ರದ ತಂಡದವರು ರೋಹಿತ್ ಬೈಕಾಡಿ ಇವರ ನಿರ್ದೇಶನದಲ್ಲಿ ‘ಸೈರನ್’ ನಾಟಕ ಪ್ರದರ್ಶನ ನೀಡಲಿದ್ದಾರೆ. ದಿನಾಂಕ 15 ಆಗಸ್ಟ್ 2025ರಂದು ಕಲಾಯುಗ ತಂಡದವರಿಂದ ಚರಿತ್ ಸುವರ್ಣ ಇವರ ನಿರ್ದೇಶನದಲ್ಲಿ ‘ಹುಡುಕಾಟದಲ್ಲಿ’ ನಾಟಕ ಪ್ರದರ್ಶನಗೊಳ್ಳಲಿದೆ. ದಿನಾಂಕ 16 ಆಗಸ್ಟ್ 2025ರಂದು ಸುರತ್ಕಲ್ ಗೋವಿಂದದಾಸ ಕಾಲೇಜಿನ ಕಲಾಬ್ಧಿ ತಂಡದವರಿಂದ ಚೇತನ್ ಗಣೇಶಪುರ ಇವರ ನಿರ್ದೇಶನದಲ್ಲಿ ‘ಕೂಸಿನ ಕಂಡಿರಾ’ ನಾಟಕ ಪ್ರದರ್ಶನ ನಡೆಯಲಿದೆ.…
ಕಾಸರಗೋಡು : ಜನಪ್ರಿಯ ಕನ್ನಡ ಸಂಸ್ಥೆ ಕನ್ನಡ ಭವನ ಮತ್ತು ಗ್ರಂಥಾಲಯ (ರಿ. 223/2008) ಇದರ ಅಂಗ ಸಂಸ್ಥೆಗಳಾದ ಕನ್ನಡ ಭವನ ಪ್ರಕಾಶನ, ಕನ್ನಡ ಭವನ ಉಚಿತ ಸಾರ್ವಜನಿಕ ವಾಚನಾಲಯ, ಕರ್ನಾಟಕದಿಂದ ಯಾ ಹೊರನಾಡಿನಿಂದ ಕಾಸರಗೋಡು ಪ್ರದೇಶಕ್ಕೆ ಬರುವ ಸಾಂಸ್ಕೃತಿಕ ರಾಯಬಾರಿಗಳಿಗೆ ‘ಉಚಿತ ವಸತಿ ವ್ಯವಸ್ಥೆ’ ಹಾಗೂ ಕೇರಳ ರಾಜ್ಯ -ಕನ್ನಡ ಚುಟುಕು ಸಾಹಿತ್ಯ ಪರಿಷತ್ತು, ಸ್ಥಾಪಕ ಸಂಚಾಲಕರಾಗಿರುವ ಡಾ. ವಾಮನ್ ರಾವ್ ಬೇಕಲರನ್ನು ಕನ್ನಡ ಜಾನಪದ ಪರಿಷತ್ತು ಬೆಂಗಳೂರಿನ ಸ್ಥಾಪಕ ಅಧ್ಯಕ್ಷರಾಗಿರುವ ಡಾ. ಎಸ್. ಬಾಲಾಜಿ ಇವರು ಕೇರಳ ರಾಜ್ಯ ಕಾಸರಗೋಡು ಘಟಕದ ಅಧ್ಯಕ್ಷರನ್ನಾಗಿ ನೇಮಿಸಿ ಆದೇಶ ನೀಡಿದ್ದಾರೆ. ಈ ನಿಯಮನದ ಮೇರೆಗೆ, ಕಾಸರಗೋಡು ಜಿಲ್ಲೆಯ ಜಾನಪದ ವಿದ್ವಾಂಸರು, ಕಲಾವಿದರು, ಜಾನಪದ ಕಲಾ ಕಾಯಕ ಯೋಗಿಗಳು, ತಂಡಗಳು, ಆಸಕ್ತ ಜಾನಪದ ವ್ಯಕ್ತಿಗಳು ಡಾ. ವಾಮನ್ ರಾವ್ ಬೇಕಲ್, ಅಧ್ಯಕ್ಷರು, ಕನ್ನಡ ಜಾನಪದ ಪರಿಷತ್ತು, ಕನ್ನಡ ಭವನ ಸಂಕೀರ್ಣ, ನುಳ್ಳಿಪ್ಪಾಡಿ, ಕಾಸರಗೋಡು 671121. ಮೊ. 9633073400, ಈ ವಿಳಾಸದಲ್ಲಿ ಸಂಪರ್ಕಿಸಬೇಕಾಗಿ ವಿನಂತಿ.…
ಮೂಡುಬಿದಿರೆ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೂಡುಬಿದಿರೆ ತಾಲೂಕು ಘಟಕ ಹಾಗೂ ಕನ್ನಡ ವಿಭಾಗ ಆಳ್ವಾಸ್ ಪದವಿ (ಸ್ವಾಯತ್ತ) ಕಾಲೇಜು ಮೂಡುಬಿದಿರೆ ಇದರ ಸಹಯೋಗದೊಂದಿಗೆ ‘ರಂಗ ಸಂಸ್ಕೃತಿ’ ಉಪನ್ಯಾಸ ಕಾರ್ಯಕ್ರಮವನ್ನು ದಿನಾಂಕ 13 ಆಗಸ್ಟ್ 2025ರಂದು ಅಪರಾಹ್ನ 2-00 ಗಂಟೆಗೆ ವಿದ್ಯಾಗಿರಿ ಎ.ವಿ. ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಮೂಡುಬಿದಿರೆ ತಾಲೂಕು ಘಟಕದ ಅಧ್ಯಕ್ಷರಾದ ವೇಣುಗೋಪಾಲ ಶೆಟ್ಟಿ ಕೆ. ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ರಂಗ ನಿರ್ದೇಶಕ ಮತ್ತು ಸಾಹಿತಿ ಡಾ. ಶ್ರೀಪಾದ ಭಟ್ ಇವರು ಉಪನ್ಯಾಸ ನೀಡಲಿದ್ದಾರೆ.
ಸಾಲಿಗ್ರಾಮ : ಮಧುರತರಂಗ (ರಿ.) ಮಂಗಳೂರು ದಕ್ಷಿಣ ಕನ್ನಡ ಇವರ ವತಿಯಿಂದ ಸಾಲಿಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸಹಕಾರದೊಂದಿಗೆ ಡಾ. ರಾಜ್ ಸವಿನೆನಪಿನ ‘ಸ್ವರಕಂಠೀರವ’ ನೃತ್ಯ ವೈವಿಧ್ಯತೆಯೊಂದಗೆ ಮನರಂಜನಾ ಕಾರ್ಯಕ್ರಮವನ್ನು ದಿನಾಂಕ 15 ಆಗಸ್ಟ್ 2025ರಂದು ಸಂಜೆ 3-00 ಗಂಟೆಗೆ ಸಾಲಿಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಕನ್ಯ ಜೆ. ಶೆಟ್ಟಿ ಇವರು ದೀಪ ಪ್ರಜ್ವಲನೆ ಮಾಡಿ ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರದೀಪ ಕುಮಾರ ಕಲ್ಕೂರ ಇವರು ದಿಕ್ಸೂಚಿ ನುಡಿಗಳನ್ನಾಡಲಿದ್ದಾರೆ. ಹಿರಿಯ ಕಲಾ ಸಾಹಿತಿ ಹೆಚ್. ಜನಾರ್ದನ ಹಂದೆ ಕೋಟ ಇವರಿಂದ ಚಂಪು ಕಾವ್ಯ ಪ್ರಸ್ತುತಿ ನಡೆಯಲಿದೆ. ಸುಪ್ರಭಾತ ನರಸಿಂಹ ಐತಾಳ್, ಸದಾನಂದ ಅಡಿಗ ಮತ್ತು ಪಿ.ವೈ. ಕೃಷ್ಣಪ್ರಸಾದ್ ಹೇರ್ಳೆ ಇವರನ್ನು ಸನ್ಮಾನಿಸಲಾಗುವುದು. ಸ್ವರಕಂಠೀರವ, ಸ್ವರತಪಸ್ವಿ ಜಗದೀಶ ಶಿವಪುರ ಇವರಿಂದ ಮನರಂಜನಾ ಗೀತೆಗಳು ಪ್ರಸ್ತುತಗೊಳ್ಳಲಿವೆ.
ಮುಂಬಯಿ : ಮುಂಬಯಿ ವಿದ್ಯಾವಿಹಾರ್ ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ಮಂದಿರದಲ್ಲಿ ದಿನಾಂಕ 09 ಆಗಸ್ಟ್ 2025ರಂದು ಅಜೆಕಾರು ಕಲಾಭಿಮಾನಿ ಬಳಗದ 24ನೇ ವರ್ಷದ ಯಕ್ಷಗಾನ ತಾಳಮದ್ದಳೆ ಸರಣಿಯ ಉದ್ಘಾಟನಾ ಸಮಾರಂಭ ನಡೆಯಿತು. ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಹಿರಿಯ ಯಕ್ಷಗಾನ ಅರ್ಥಧಾರಿ, ಬಹುಶ್ರುತ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಇವರು ಮಾತನಾಡಿ “ಯಕ್ಷಗಾನವಿಂದು ಕೇವಲ ಕರಾವಳಿಯ ಕಲೆಯಾಗಿ ಉಳಿದಿಲ್ಲ. ತನ್ನ ವಿಶಿಷ್ಟವಾದ ಪ್ರಭಾವ ಮತ್ತು ಪ್ರಯೋಗಶೀಲತೆಯಿಂದ ನಾಡು – ಹೊರನಾಡುಗಳಲ್ಲಿ ಮೆರೆದು ಸೀಮೋಲ್ಲಂಘನೆ ಮಾಡಿರುವ ಯಕ್ಷಗಾನ ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಪರಿಪೂರ್ಣ ರಂಗಕಲೆಯಾಗಿ ಗಮನ ಸೆಳೆದಿದೆ. ಅದು ಜಗತ್ತಿನ ಶ್ರೇಷ್ಠ ರಂಗಕಲೆಗಳಲ್ಲೊಂದು. ಅದರ ಮೌಖಿಕ ವಿಭಾಗವಾದ ತಾಳಮದ್ದಳೆಯನ್ನು ಮುಂಬಯಿಯಲ್ಲಿ ಜನಪ್ರಿಯಗೊಳಿಸಿರುವ ಅಜೆಕಾರು ಬಾಲಕೃಷ್ಣ ಶೆಟ್ಟರ ಕಾರ್ಯ ಶ್ಲಾಘನೀಯ” ಎಂದು ಹೇಳಿದರು. ಮುಂಬಯಿಯ ಹಿರಿಯ ಅರ್ಥಧಾರಿ ಕೆ.ಕೆ. ಶೆಟ್ಟಿಯವರು ಶ್ರೀದೇವಿ ಸನ್ನಿಧಿಯಲ್ಲಿ ದೀಪ ಬೆಳಗಿ 2024-25ನೇ ಸಾಲಿನ ಸರಣಿ ತಾಳಮದ್ದಳೆಯನ್ನು ವಿಧ್ಯುಕ್ತವಾಗಿ ಉದ್ಘಾಟಿಸಿ “ಮುಂಬಯಿಯಲ್ಲಿ ಯಕ್ಷಗಾನಕ್ಕೆ ದೀರ್ಘ ಪರಂಪರೆಯಿದೆ.…
ಮಂಗಳೂರು : ಸುರತ್ಕಲ್ ರೋಟರಿ ಕ್ಲಬ್ ದಿನಾಂಕ 10 ಆಗಸ್ಟ್ 2025ರಂದು ಆಯೋಜಿದ್ದ ಆಟಿಯ ಹುಣ್ಣಿಮೆ.. ಆಟಿದ ಕೂಟದಲ್ಲಿ ಜಾನ್ ಎಫ್. ಕೆನಡಿ ಇವರನ್ನು ಸನ್ಮಾನಿಸಲಾಯಿತು. ಸಮ್ಮಾನ ಸ್ವೀಕರಿಸಿ ಮಾತನಾಡಿದ ಜಾನ್ ಎಫ್. ಕೆನಡಿ “ನಮ್ಮ ಹಿರಿಯರಿಂದ ಬಂದಿರುವ ಪಾರಂಪರಿಕ ಜ್ಞಾನ ವಿಚಾರಗಳನ್ನು ಯುವ ಸಮುದಾಯಕ್ಕೆ ತಲುಪಿಸಲು ಜ್ಞಾನದ ಮನೆ ತುಳುನಾಡ ವಸ್ತು ವಿಚಾರಗಳ ಸಂಗ್ರಹಾಲಯ ಸ್ಥಾಪನೆ ಮಾಡಲಾಯಿತು. ತುಳುನಾಡಿನ ಸಂಸ್ಕೃತಿಯ ಕುರಿತು ಹೆಚ್ಚಿನ ಆಸಕ್ತಿ ಮೂಡುತ್ತಿದ್ದು, ಇಲ್ಲಿರುವ ಒಂದೊಂದು ವಸ್ತುವು ಇತಿಹಾಸದ ವಿಚಾರಗಳನ್ನು ಹೇಳುತ್ತಿವೆ. ಅದನ್ನು ವೀಕ್ಷಿಸಿ ಅರ್ಥ ಮಾಡಿಕೊಳ್ಳುವ ತಾಳ್ಮೆ ನಮ್ಮಲ್ಲಿರಬೇಕು. ವಿದ್ಯಾರ್ಥಿಗಳಿಗೆ ಪೂರಕವಾಗಿರುವ ಇಲ್ಲಿನ ಸಂಗ್ರಹಣೆಯನ್ನು ವೀಕ್ಷಿಸಲು ಮುಕ್ತ ಅವಕಾಶ ಇದೆ” ಎಂದು ನುಡಿದರು. ಕ್ಲಬ್ ಸರ್ವಿಸ್ ನಿರ್ದೇಶಕ ಪ್ರೊ. ಕೃಷ್ಣ ಮೂರ್ತಿ ಇವರು ಅಭಿನಂದನಾ ಮಾತುಗಳಲ್ಲಿ “ಪಾರಂಪರಿಕ ವಸ್ತುಗಳ ಮೂಲಕ ನಮ್ಮ ನಾಡಿನ ಇತಿಹಾಸವನ್ನು ಪುನರ್ ರಚಿಸಲು ಸಾಧ್ಯವಿದೆ. ಜಾನ್ ಎಫ್. ಕೆನಡಿಯವರ ಕಾರ್ಯಗಳಿಗೆ ಸೇವಾ ಹಾಗೂ ಕೈಗಾರಿಕಾ ಸಂಸ್ಥೆಗಳ ಬೆಂಬಲ ಅಗತ್ಯ” ಎಂದರು. ರೋಟರಿ…
ಬೆಳಗಾವಿ : ಶ್ರೀ ಲಾಲಸಾಬ ಎಚ್. ಪೆಂಡಾರಿ ಸಾರಥ್ಯದ ಕವಿತ್ತ ಕರ್ಮಮಣಿ ಫೌಂಡೇಶನ್ (ರಿ.) ನಾಗರಮುನ್ನೋಳಿ ಇದರ ವತಿಯಿಂದ ದಿನಾಂಕ 27 ಜುಲೈ 2025ರಂದು ಮಂಗಳೂರಿನ ಕಣಚೂರು ಆಸ್ಪತ್ರೆ ಹಾಗೂ ಮಂಗಳಾ ಆಸ್ಪತ್ರೆಯ ವೈದ್ಯ ಮೂಲವ್ಯಾಧಿ ಚರ್ಮರೋಗಗಳ ವಿಶೇಷ ಚಿಕಿತ್ಸಕ ಹಾಗೂ ಬರಹಗಾರ ಡಾ. ಸುರೇಶ ನೆಗಳಗುಳಿ ಇವರಿಗೆ ಅಂತಾರಾಷ್ಟ್ರೀಯ ಮಟ್ಟದ ‘ಕವಿ ಕುಲಪತಿ ಪ್ರಶಸ್ತಿ’ಯನ್ನು ನೀಡಿ ಸನ್ಮಾನ ಮಾಡಲಾಯಿತು. ಕನ್ನಡ ನಾಡು-ನುಡಿ, ನೆಲ-ಜಲ, ಸಂಸ್ಕೃತಿ ಈ ಮೊದಲಾದ ಕ್ಷೇತ್ರಗಳಲ್ಲಿ ಅನವರತವಾಗಿ ಶ್ರಮಿಸುತ್ತಿರುವ ತಮ್ಮ ಸೇವೆ ಗಣನೀಯ ಸೇವೆ ಹಾಗೂ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ಪ್ರತಿಭೆ ಮತ್ತು ಸಾಧನೆಯನ್ನು ಗುರುತಿಸಿ ಈ ಅಂತಾರಾಷ್ಟ್ರೀಯ ಪ್ರಶಸ್ತಿ ನೀಡುವುದಾಗಿ ಸಂಘಟಕರು ತಿಳಿಸಿರುತ್ತಾರೆ. ಜಿಲ್ಲಾಧ್ಯಕ್ಷ ಶ್ರೀ ಮಂಜುನಾಥ ಗಣಪತಿ ಹೆಗಡೆ, ಸರ್ವಾಧ್ಯಕ್ಷ ಡಾ ಗೋವಿಂದರಾಯ ಎಂ. ಮತ್ತು ಶ್ರೀಮತಿ ರೂಪ ಮಂಜುನಾಥ ಮುಂತಾದವರು ಉಪಸ್ಥಿತರಿದ್ದರು.
ಹೈದರಾಬಾದ್ : ‘ಪಯಣ’ ಪ್ರಸ್ತುತ ಪಡಿಸುವ ಶ್ರೀಜಿತ್ ಸುಂದರಂ ನಿರ್ದೇಶನದ ‘ತಲ್ಕಿ’ ನಾಟಕದ ಪ್ರದರ್ಶನವನ್ನು ಅಭಿನಯ ನ್ಯಾಷನಲ್ ಥಿಯೇಟರ್ ಫೆಸ್ಟಿವಲ್ -2025 ಕಾರ್ಯಕ್ರಮದಲ್ಲಿ ದಿನಾಂಕ 13 ಆಗಸ್ಟ್ 2025ರಂದು ಸಂಜೆ ಗಂಟೆ 8-00ಕ್ಕೆ ಹೈದರಾಬಾದಿನ ರವೀಂದ್ರ ಭಾರತಿಯಲ್ಲಿ ಆಯೋಜಿಸಲಾಗಿದೆ. ನಾಟಕದ ಕುರಿತು : ‘ತಲ್ಕಿ’ ನಾಟಕವು ಸಮುದಾಯದವರ ಜೀವನ ಕಥೆಗಳ ಆಧಾರದ ಸತ್ಯ ಕಥೆಗಳು. ಬರವಣಿಗೆ, ಸಮಾಜಸೇವೆ, ಸಮುದಾಯ ಮುಖ್ಯಸ್ಥರು, ಅಮ್ಮಂದಿರು, ಹೀಗೆ ಸಮಾಜದ ಬೇರೆ ಬೇರೆ ಘಟಕಗಳಲ್ಲಿ ಕೆಲಸ ಮಾಡುತ್ತಿರುವ, ಐವತ್ತು ವರ್ಷ ದಾಟಿರುವ ಮಂಗಳಮುಖಿಯರು ತಮ್ಮ ಈಡೇರದ ಕನಸ್ಸುಗಳನ್ನು ನನಸು ಮಾಡಿಕೊಳ್ಳಲು ನಟನೆ ಹಾಗೂ ರಂಗ ಪ್ರಕ್ರಿಯೆಗಳ ನೆರವಿನಿಂದ ಹೋರಾಡಲು ಅವಕಾಶ ಕಲ್ಪಿಸಿಕೊಡುವ ವಿಶಿಷ್ಟ ಯತ್ನ ಈ ನಾಟಕ. ಇವರೆಲ್ಲರಿಗೂ ಇರುವ ಒಂದು ಸಾಮ್ಯತೆ ಎಂದರೆ ಸಮಯ ಹಾಗೂ ಸಮಾಜ ನೀಡಿರುವ ಗಾಯದ ಗುರುತುಗಳು. ಬೆಂಗಳೂರಿನ ಬೇರೆ ಬೇರೆ ಪ್ರದೇಶಗಳ ಜೊತೆ ಅವಿನಾಭಾವ ಸಂಬಂಧವಿರುವ ಅವರ ದೇಹದ ಮೇಲಿನ ಗುರುತುಗಳು, ಆ ಪ್ರದೇಶಗಳ ಗುರುತುಗಳಾಗಿ ಮಾರ್ಪಟ್ಟಿವೆ ಎನ್ನಬಹುದು. ಇಂತಹ…
ಕಾರ್ಕಳ : ಕ್ರಿಯೇಟಿವ್ ಪುಸ್ತಕ ಮನೆ ಪ್ರಕಾಶನ ಇದರ ವತಿಯಿಂದ ‘ಕ್ರಿಯೇಟಿವ್ ಪುಸ್ತಕ ಧಾರೆ 2025’ ಸಮಾರಂಭವನ್ನು ದಿನಾಂಕ 13 ಆಗಸ್ಟ್ 2025ರಂದು ಬೆಳಿಗ್ಗೆ 11-00 ಗಂಟೆಗೆ ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ಸಪ್ತಗಿರಿ ಕ್ಯಾಂಪಸ್ ಇಲ್ಲಿ ಹಮ್ಮಿಕೊಳ್ಳಲಾಗಿದೆ. ಮುಖ್ಯ ಅತಿಥಿಗಳಾಗಿ ಚಿತ್ರ ನಿರ್ದೇಶಕರಾದ ಡಾ. ನಾಗತಿಹಳ್ಳಿ ಚಂದ್ರಶೇಖರ್ ಮತ್ತು ವಿಶ್ರಾಂತ ಕುಲಪತಿಗಳಾದ ಡಾ. ಕೆ. ಚಿನ್ನಪ್ಪ ಗೌಡ ಇವರುಗಳು ಭಾಗವಹಿಸಲಿದ್ದು, ಅಪರಾಹ್ನ 2-00 ಗಂಟೆಗೆ ಸಂವಾದ ಕಾರ್ಯಕ್ರಮ ನಡೆಯಲಿದೆ. ಖ್ಯಾತ ನಿರೂಪಕರಾದ ಅವಿನಾಶ್ ಕಾಮತ್ ಇವರು ಸಂವಾದಕರಾಗಿ ಮತ್ತು ಜೀ ಸರಿಗಮಪ ಖ್ಯಾತಿಯ ಯಶವಂತ್ ಎಂ.ಜಿ. ಇವರಿಂದ ಗಾಯನ ಪ್ರಸ್ತುತಗೊಳ್ಳಲಿದೆ. ಇದೇ ಸಂದರ್ಭದಲ್ಲಿ ಕ್ರಿಯೇಟಿವ್ ಪುಸ್ತಕ ಮನೆ ಪ್ರಕಾಶನದಿಂದ 22 ಕೃತಿಗಳು ಅನಾವರಣಗೊಳ್ಳಲಿವೆ. ಹೆಚ್ಚಿನ ಮಾಹಿತಿಗಳ 96064 74296 ಸಂಖ್ಯೆಯನ್ನು ಸಂಪರ್ಕಿಸಿರಿ.
ಮಂಗಳೂರು : ಅಮೃತ ಪ್ರಕಾಶ ಪತ್ರಿಕೆ ಮಂಗಳೂರು ಹಾಗೂ ಮಹರ್ಷಿ ವಾಲ್ಮೀಕಿ ವಸತಿ ಶಾಲೆ ಕದ್ರಿ ಮಂಗಳೂರು ಇವುಗಳ ಜಂಟಿ ಆಶ್ರಯದಲ್ಲಿ 112ನೇಯ ಸಾಹಿತ್ಯ ಅಭಿರುಚಿ ಕಾರ್ಯಕ್ರಮವು ದಿನಾಂಕ 09 ಆಗಸ್ಟ್ 2025 ಶನಿವಾರ ಮಹರ್ಷಿ ವಾಲ್ಮೀಕಿ ಸಭಾಂಗಣದಲ್ಲಿ ನಡೆಯಿತು. ಸಾಹಿತ್ಯ ಅಭಿರುಚಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹರ್ಷಿ ವಾಲ್ಮೀಕಿ ವಸತಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸುನೀತಾರವರು ವಹಿಸಿದ್ದರು. ಮುಖ್ಯ ಸಂಪನ್ಮೂಲ ಅತಿಥಿಗಳಾಗಿ ಕರಾವಳಿ ಡೈಲಿ ನ್ಯೂಸ್ ಚೀಪ್ ಎಡಿಟರ್ ಮಹೇಶ್ ಕನ್ನೇಶ್ವರ, ಹಿರಿಯ ಬರಹಗಾರರಾದ ಸುಬ್ರಾಯ ಭಟ್, ದೂರದರ್ಶನ ಸುದ್ದಿ ವಾಹಿನಿಯ ಜಿಲ್ಲಾ ವರದಿಗಾರರಾದ ರಾಜೇಶ್ ದಡ್ಡಂಗಡಿ ಇವರುಗಳು ಭಾಗವಹಿಸಿದ್ದರು. ಶಾಲೆಯ ಮೇಲ್ವಿಚಾರಕಿ ಸರಸ್ವತಿ ಉಪಸ್ಥಿತರಿದ್ದರು. ಸುರೇಖಾ ಯಾಳವಾರ ಕಾರ್ಯಕ್ರಮ ನಿರೂಪಿಸಿ, ಅಮೃತ ಪ್ರಕಾಶ ಪತ್ರಿಕೆಯ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ಸ್ವಾಗತಿಸಿ, ಲೇಖಕಿ ಶಿಕ್ಷಕಿ ನಿರ್ಮಲ ಉದಯಕುಮಾರ್ ವಂದಿಸಿದರು.