Author: roovari

ಮಂಗಳೂರು : ನಾಚ್‌ ಸೊಭಾಣ್‌ ವತಿಯಿಂದ ಶಕ್ತಿನಗರದ ಕಲಾಂಗಣದಲ್ಲಿ ತಿಂಗಳ ವೇದಿಕೆ ಸರಣಿಯ 268ನೇ ಕಾರ್ಯಕ್ರಮ ʻನವಿಂ ವಜ್ರಾಂʼ (ಹೊಸ ವಜ್ರಗಳು) ದಿನಾಂಕ 07-04-2024ರಂದು ನಡೆಯಿತು. ನೃತ್ಯ-ಗಾಯನ-ಸಂಗೀತ-ನಿರೂಪಣೆ ಹೀಗೆ ಸಾದರಕಲೆಯ ಸುಂದರ ಅನುಭೂತಿ ದೊರೆಯಿತು. ಮೊದಲಿಗೆ ಉದ್ಯಮಿ ಸಂತೋಷ್ ರೊಡ್ರಿಗಸ್‌ ಘಂಟೆ ಬಾರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಮಾಂಡ್‌ ಸೊಭಾಣ್‌ ಗುರಿಕಾರ ಎರಿಕ್‌ ಒಝೇರಿಯೊ ಹಾಗೂ ಅಧ್ಯಕ್ಷ ಲುವಿ ಪಿಂಟೊ ಉಪಸ್ಥಿತರಿದ್ದರು. ನೃತ್ಯಕ್ಕೆ ಪೂರಕ ಹಾಡುಗಳ ಕೊರತೆ ತುಂಬಿಸಲು ಮಾಂಡ್‌ ಸೊಭಾಣ್‌ ಲಘುತಾಳದ ಹೊಸ ಹಾಡುಗಳ ರಚನೆಗೆ ಅವಕಾಶ ಕಲ್ಪಿಸಿತ್ತು. ಬಂದ 25 ಹಾಡುಗಳಲ್ಲಿ 10 ಆಯ್ದ ಹಾಡುಗಳಿಗೆ ರಾಗ ಸಂಯೋಜಿಸಿ, ಸಂಗೀತ ನೀಡಿ, ನಾಚ್‌ ಸೊಭಾಣ್‌ ತಂಡವು ನರ್ತಿಸಿತು. ಬಾಯ್ಲಾ, ಬಾಯ್ಲಾ ಮಸಾಲಾ, ವೆಸ್ಟರ್ನ್‌ ಹಿಪ್‌ಹೊಪ್‌, ಬೊಲ್‌ರೂಮ್‌, ಲಿರಿಕಲ್ ಪ್ರಕಾರದ ಹಾಡುಗಳು ಪ್ರೇಕ್ಷಕರ ಮನ ಗೆದ್ದವು. ರೊನಿ ಕ್ರಾಸ್ತಾ ಕೆಲರಾಯ್, ಐರಿನ್ ರೆಬೆಲ್ಲೊ, ಲುಸಿಫೆರ್, ಜೊಯೆಲ್ ಪಿಂಟೊ ಇಜಯ್, ಆಲ್ಬನ್ ಡಿಸಿಲ್ವಾ, ಹೊನ್ನಾವರ, ಲೊಯ್ಡ್ ರೇಗೊ ತಾಕೊಡೆ, ಮತ್ತು…

Read More

ಧಾರವಾಡ : ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ಕರ್ನಾಟಕ 50ರ ಸಂಭ್ರಮ ಪ್ರಯುಕ್ತ ಮಹಿಳಾ ಸಾಹಿತ್ಯ ಸಮಾವೇಶ ಹಾಗೂ 2022ರ ‘ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನ’ ಪ್ರದಾನ ಸಮಾರಂಭವನ್ನು ನಗರದ ಕ.ವಿ.ವ. ಸಂಘದ ಶ್ರೀ ರಾ.ಹ. ದೇಶಪಾಂಡೆ ಸಭಾ ಭವನದಲ್ಲಿ ದಿನಾಂಕ 07-04-2024ರ ರವಿವಾರದಂದು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ. ಮಲ್ಲಿಕಾ ಘಂಟಿ ಮಾತನಾಡಿ, “ಸಾಮಾಜಿಕ ವಾಸ್ತವ ಸತ್ಯ ಅರಿಯುವುದಿಲ್ಲವೋ ಅಲ್ಲಿಯವರೆಗೆ ಸಾಹಿತ್ಯದ ಮೂಲಕ ಸಾಮಾಜಿಕ ವಿಚಾರಗಳನ್ನು ಹೇಳಲು ಸಾಧ್ಯವಿಲ್ಲ. ಅದರಲ್ಲೂ ಮಹಿಳಾ ಸಾಹಿತ್ಯ ನೋಡುವ ದೃಷ್ಟಿಕೋನ ಬದಲಾಗಬೇಕು. ಇಲ್ಲವಾದಲ್ಲಿ ಮಹಿಳಾ ಸಾಹಿತ್ಯಕ್ಕೆ ಸಿಗಬೇಕಾದ ನ್ಯಾಯ ದೊರಕುವುದಿಲ್ಲ. ಮಹಿಳೆಯರು ಇಲ್ಲದ ಸಮಾಜ ಸಾಧ್ಯವಿಲ್ಲ ಎಂಬುದನ್ನು 12ನೇ ಶತಮಾನದಲ್ಲಿ ಶರಣರು ಸಾರಿದ್ದಾರೆ. ಸಾಹಿತ್ಯದ ಮೂಲಕ ಸಮಾಜಕ್ಕೆ ಎಂಥ ಸಂದೇಶ ನೀಡಬೇಕು ಎಂಬುದನ್ನು ಅರಿತುಕೊಳ್ಳಬೇಕಿದೆ. ಇಂದು ಯಾವುದೇ ಚಳವಳಿಗಳಿಲ್ಲ. ಇಂಥ ಸಂದರ್ಭದಲ್ಲಿ ಮುಂದಿನ ಪೀಳಿಗೆಯನ್ನು ಯಾವ ರೀತಿ ಸಾಮಾಜಿಕ ಮುಖ್ಯವಾಹಿನಿಗೆ ತರಬೇಕೆಂಬ ಸಂಕಷ್ಟಗಳು ಕಾಡುತ್ತಿವೆ.…

Read More

ಮಂಗಳೂರು : ತುಳು ಕೂಟ (ರಿ) ಕುಡ್ಲ ಇದರ ವತಿಯಿಂದ ವಿಷು ಸಂಕ್ರಮಣದ ವಿಶೇಷತೆಯನ್ನು ಸಾರುವ ತುಳುವರ ‘ಬಿಸು ಪರ್ಬೊ ಸಂಭ್ರವೊ’ ಕಾರ್ಯಕ್ರಮವು ದಿನಾಂಕ 14-04-2024ರ ಆದಿತ್ಯವಾರದಂದು ಸಂಜೆ 3-30 ಗಂಟೆಗೆ ಮಂಗಳಾದೇವಿ ದೇವಸ್ಥಾನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಮಂಗಳಾದೇವಿ ಆಡಳಿತ ಮೊಕ್ತೇಸರರಾದ ಶ್ರೀ ಅರುಣ್ ಕುಮಾರ್ ಐತಾಳ್ ಇವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಲಿದ್ದು, ತುಳು ಕೂಟ (ರಿ) ಕುಡ್ಲ ಇದರ ಅಧ್ಯಕ್ಷರಾದ ಮರೋಳಿ ಬಿ. ದಾಮೋದರ ನಿಸರ್ಗ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ನಮ್ಮ ಕುಡ್ಲದ ತುಳು ವಾರ್ತಾ ವಾಚಕಿ ಡಾ. ಪ್ರಿಯಾ ಹರೀಶ್ ವಿಷುವಿನ ವಿಶೇಷತೆಯ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪ್ರಾಯೋಜಕತ್ವದಲ್ಲಿ ಅಪ್ರಕಟಿತ ತುಳು ನಾಟಕಕ್ಕಾಗಿ ತುಳುಕೂಟ ಸಂಯೋಜಿಸಿದ ಸ್ಪರ್ಧೆಯ ವಿಜೇತರಿಗೆ 2023-2024ನೇ ಸಾಲಿನ ‘ರತ್ನವರ್ಮ ಹೆಗ್ಗಡೆ ಪ್ರಶಸ್ತಿ’ಯ ಪ್ರಥಮ ಬಹುಮಾನ ಶ್ರೀ ಶಶಿರಾಜ್ ರಾವ್ ಕಾವೂರು, ದ್ವಿತೀಯ ಬಹುಮಾನ ನವೀನ್ ಸುವರ್ಣ ಪಡ್ರೆ ಮತ್ತು ತೃತೀಯ…

Read More

ಮಂಗಳೂರು : ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಮಂಗಳೂರು ತಾಲೂಕು ಘಟಕದ ವತಿಯಿಂದ ಮತದಾನದ ಮಹತ್ವ ಹಾಗೂ ಜಾಗೃತಿ ನಿಟ್ಟಿನಲ್ಲಿ ‘ಮತದಾನ ಪ್ರದಾನ’ ಎಂಬ ವಿಷಯದ ಕವಿಗೋಷ್ಠಿಯು ದಿನಾಂಕ 20-04-2024ರಂದು ನಡೆಯಲಿದೆ. ಕವಿತೆಗಳು ಯಾವುದೇ ಪಕ್ಷ ಅಥವಾ ವ್ಯಕ್ತಿಗೆ ಸಂಬಂಧಿಸಿರಬಾರದು. ಕವಿಗಳು ತಮ್ಮ ಕವಿತೆಗಳನ್ನು ಡಾ. ಮೀನಾಕ್ಷಿ ರಾಮಚಂದ್ರ, ಅಕ್ಷರ, ಗುರುದೇವನಗರ, ಮೋರ್ ಮಾರುಕಟ್ಟೆ ‘ಹಿಂಭಾಗ, ಬಿಜೈ, ಮಂಗಳೂರು -575004 ಈ ವಿಳಾಸಕ್ಕೆ ಅಥವಾ 9448911777 ಈ ಸಂಖ್ಯೆಗೆ ವಾಟ್ಸಪ್ ಮೂಲಕ ಕಳುಹಿಸಬಹುದೆಂದು ತಿಳಿಸಿದ್ದಾರೆ.

Read More

ಶಂಭೂರು : ಮಕ್ಕಳ ಕಲಾ ಲೋಕ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ಇವರ ವತಿಯಿಂದ ಶಂಭೂರು ದ.ಕ.ಜಿ.ಪ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಒಂದು ದಿನದ ಸಾಹಿತ್ಯ ರಚನಾ ಪ್ರೇರಣಾ ಕಮ್ಮಟವು ದಿನಾಂಕ 02-04-2024 ರಂದು ನಡೆಯಿತು. ಶಾಲಾ ಎಸ್. ಡಿ .ಎಂ.ಸಿ ಅಧ್ಯಕ್ಷ ನಾಗರಾಜ್ ಕಮ್ಮಟವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಭಾಷಣ ಕಲೆಯ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಮಕ್ಕಳ ಕಲಾಲೋಕದ ಅಧ್ಯಕ್ಷರಾದ ರಮೇಶ ಎಂ. ಬಾಯಾರು ಮಾಹಿತಿ ನೀಡಿದರು. ಮಕ್ಕಳ ಕಲಾಲೋಕದ ಗೌರವ ಸಲಹೆಗಾರರಾದ ಭಾಸ್ಕರ ಅಡ್ವರು ಕವನ, ಕಥೆ, ಚುಟುಕು ರಚನೆ ಬಗ್ಗೆ ತರಬೇತಿ ನೀಡಿದರು. ಎಸ್. ಡಿ. ಎಂ. ಸಿ. ಸದಸ್ಯರಾದ ವಿಶಾಲಾಕ್ಷಿ, ಮುಖ್ಯ ಶಿಕ್ಷಕ ಜಯರಾಮ ಪಡ್ರೆ, ಶಿಕ್ಷಕಿಯರಾದ ದಯಾವತಿ, ಇಂದಿರಾ, ಗಾಯತ್ರಿ, ಮೀನಾಕ್ಷಿ ಮತ್ತು ಉಷಾ ಉಪಸ್ಥಿತರಿದ್ದರು.

Read More

ಮಂಗಳೂರು : ಸಂಸ್ಕೃತ ಭಾರತೀ ಮಂಗಳೂರು ಆಯೋಜಿಸಿದ ‘ಸಂಸ್ಕೃತ ಮಹೋದಧಿಃ’ ಜನಪದ ಸಮ್ಮೇಳನವು ದಿನಾಂಕ 07-04-2024ರ ರವಿವಾರದಂದು ಮಂಗಳೂರಿನ ಡೊಂಗರಕೇರಿಯಲ್ಲಿರುವ ಕೆನರಾ ಹೈಸ್ಕೂಲಿನ ಶ್ರೀ ಸುಧೀಂದ್ರ ಸಭಾಭವನದಲ್ಲಿ ನಡೆಯಿತು. ಸಮ್ಮೇಳನವನ್ನು ಉದ್ಘಾಟಿಸಿದ ಸಂಸ್ಕೃತ ಭಾರತೀ ಇದರ ಅ. ಭಾ. ಸಹ ಪ್ರಶಿಕ್ಷಣ ಪ್ರಮುಖ ಡಾ. ಸಚಿನ್ ಕಠಾಳೆ ಮಾತನಾಡಿ “ಸಂಸ್ಕೃತವನ್ನು ಏಕೆ ಓದಬೇಕು? ಎಂದು ಎಲ್ಲರೂ ಪ್ರಶ್ನಿಸುತ್ತಾರೆ. ಆದರೆ ಭಾರತದಲ್ಲಿ ಸಂಸ್ಕೃತವನ್ನು ಏಕೆ ಓದಬೇಕು ಎಂಬ ಪ್ರಶ್ನೆಯೇ ಬರುವುದಿಲ್ಲ. ಇಂದಿನ ಕಾಲದಲ್ಲಿ ಬ್ರಿಟಿಷರ ಕಾರಣದಿಂದ ಸಂಸ್ಕೃತ ಕೇವಲ ಸಿಲೆಬಸ್ ವಿಷಯವಾಗಿದೆ. ಅದು ಅಧ್ಯನದ ವಿಷಯವಾಗಿ ಉಳಿದಿಲ್ಲ. ಉದಾಹರಣೆಗೆ ಕ್ರೀಡೆ ಅಧ್ಯಯನದ ವಿಷಯವಲ್ಲ. ಅದು ಸ್ವಾಭಾವಿಕ ವಿಷಯ. ಕ್ರೀಡೆ ಎಲ್ಲರಿಗೂ ಬೇಕಾದ ವಿಷಯವಾಗಿದೆ. ಯಾವಾಗ ಕ್ರೀಡೆ ಮತ್ತು ಸಂಗೀತಗಳಿಗೆ ಶಿಕ್ಷಕರ ತರಬೇತಿ ಆರಂಭವಾಯಿತೋ ಆ ದಿನದಿಂದಲೇ ಅವುಗಳು ಪಠ್ಯವಿಷಯವಾಗಿ ಅದರ ಮೌಲ್ಯವನ್ನು ಕಳೆದುಕೊಳ್ಳುತ್ತಾ ಬಂದಿದೆ. ಇದೇ ರೀತಿ ಜ್ಞಾನ ಸಿದ್ಧಿಗಾಗಿ ಸಂಸ್ಕೃತವನ್ನು ಓದಬೇಕು. ಸಂಸ್ಕೃತದಲ್ಲಿ ಏನಿದೆ? ಎಂದು ಪ್ರಶ್ನೆ ಮಾಡಿದರೆ ಅದಕ್ಕೆ ಉತ್ತರಿಸುವ…

Read More

ಮಂಗಳೂರು : ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದಲ್ಲಿ ಮೈಕಲ್ ಡಿ’ಸೊಜಾ ವಿಶನ್ ಕೊಂಕಣಿ ಪುಸ್ತಕ ಪ್ರಕಟಣೆ ಯೋಜನೆಯಡಿ ಆಯ್ಕೆಯಾದ ಲೇಖಕರ ಬಳಗದ ಜೊತೆ ಮಾತುಕತೆ ಹಾಗೂ ‘ಪುಸ್ತಕ ಪಂಚಾತಿಕೆ’ ಎಂಬ ಸಂವಾದ ಕಾರ್ಯಕ್ರಮವು ದಿನಾಂಕ 07-04-2024 ರಂದು ಮಂಗಳೂರಿನ ಶಕ್ತಿನಗರದಲ್ಲಿರುವ ವಿಶ್ವ ಕೊಂಕಣಿ ಕೇಂದ್ರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಲೇಖಕರ ಬಳಗವನ್ನು ಉದ್ದೇಶಿಸಿ ಮಾತನಾಡಿದ ಗೋವಾದ ಹಿರಿಯ ಸಾಹಿತಿ ಶ್ರೀ ದತ್ತಾ ದಾಮೋದರ ನಾಯಕ್ “ಲೇಖಕರು ವೈಜ್ಞಾನಿಕ ಮನೋಭಾವ, ತಾರ್ಕಿಕತೆ ಮತ್ತು ಸಂವೇದನಾಶೀಲತೆಯನ್ನು ಮೈಗೂಡಿಸಿಕೊಂಡರೆ ಮಾತ್ರ ಉತ್ತಮ ಸಾಹಿತ್ಯ ಕೃತಿ ರಚಿಸಲು ಸಾಧ್ಯ. 25 ಮಿಲಿ ಸುಗಂದ ದ್ರವ್ಯ ತಯಾರಿಸಲು ಸಾವಿರಾರು ಹೂವಿನ ಪಕಳೆಗಳನ್ನು ಅರೆಯಬೇಕಾಗುತ್ತದೆಯೋ ಹಾಗೆ ಒಂದು ಸಾಹಿತ್ಯ ಕೃತಿ ರಚನೆಯ ಹಿಂದೆ ಸಾವಿರಾರು ಪುಟಗಳ ಓದು, ಅಭ್ಯಾಸ ಇರುತ್ತದೆ. ಬರವಣಿಗೆಯ ಭಾಷೆ ಸಾಧ್ಯವಾದಷ್ಟು ಸರಳ ಮತ್ತು ಹೃದ್ಯವಾದಾಗ ವಾಚಕನಿಗೆ ಓದುವ ಅನುಭೂತಿ ದಕ್ಕುತ್ತದೆ. ಅತಿಯಾದ ಅಲಂಕಾರ, ಸಾಂಕೇತಿಕತೆ, ಪ್ರತಿಮೆ – ಪ್ರತೀಕಗಳನ್ನು ಹೇರಿಕೊಂದು ರಚಿಸಿದ ಸಾಹಿತ್ಯ ಕೃತಿಯಿಂದ ಓದುಗರು ವಿಮುಖರಾಗುವ…

Read More

ವಲಸೆ ಎಂಬುದು ಅನಾದಿ ಕಾಲದಿಂದ ಬಂದ ಪ್ರಕ್ರಿಯೆ. ಕಂಸ ಸಂಹಾರಕ್ಕಾಗಿ ಗೋಕುಲದಿಂದ ಮಥುರೆಗೆ ಬಂದ ಶ್ರೀಕೃಷ್ಣ, ಗೋಕುಲಕ್ಕೆ ಮತ್ತೆ ಮರಳಲೇ ಇಲ್ಲ. ಈಗಿನ ವಲಸೆ ವಿಧಾನಗಳೇ ಬೇರೆ. ಹಳ್ಳಿಗಳೆಲ್ಲ ನಗರಕ್ಕೆ ವಲಸೆ ಬಂದು, ಅವು ವೃದ್ಧಾಶ್ರಮಗಳಾದರೆ, ಅತಿ ಜನಸಾಂದ್ರತೆಯಿಂದ ನಗರಗಳು ಉಸಿರು ಕಟ್ಟಿಸುವ ನರಕಗಳಾಗುತ್ತಿವೆ. ಇಂತಹದೇ ವಲಸೆಯ ಅಪಾಯದ ಕುರಿತು ದಕ್ಷಿಣ ಆಫ್ರಿಕಾದ ಪ್ರಸಿದ್ಧ ನಾಟಕಕಾರ ಅಥೋಲ್ ಫಗಾರ್ಡ್ ಬರೆದ ನಾಟಕ “ದಿ ವ್ಯಾಲಿ ಸಾಂಗ್” ಡಾ. ಮೀರಾ ಮೂರ್ತಿಯವರು ಅದನ್ನು ‘ಕಣಿವೆಯ ಹಾಡು’ ಎನ್ನುವ ಹೆಸರಿನಲ್ಲಿ ಅನುವಾದ ಮಾಡಿದ್ದಾರೆ. ಮೈಸೂರಿನಲ್ಲಿ ನಟನ ರೆಪರ್ಟರಿ ತಂಡದವರು ಕಣಿವೆಯ ಹಾಡನ್ನು ಶ್ರೀಪಾದ ಭಟ್ ನಿರ್ದೇಶನದಲ್ಲಿ ರಂಗಕ್ಕೆ ತಂದಿದ್ದಾರೆ. ಅಜ್ಜ ಮತ್ತು ಮೊಮ್ಮಗಳ ಸಂವಾದದಲ್ಲಿ ಇಡೀ ನಾಟಕ ನಡೆಯುತ್ತಾ ಹೋಗುತ್ತದೆ. ಕಣಿವೆಯ ಸುಂದರ ಗದ್ದೆಗಳಲ್ಲಿ ಕೃಷಿ ಮಾಡಿಕೊಂಡು, ಎಲ್ಲಕ್ಕೂ ಹರಿ ಚಿತ್ತ ಎಂದು ನಂಬಿ ಬದುಕುವ ವೃದ್ಧ ಅಬ್ರಾಂ ಜೋಂಕರ್ಸ್ ತುಂಡು ಭೂಮಿಯಲ್ಲಿಯೇ ಗೇಣಿ ಮಾಡಿಕೊಂಡು ಜೀವನ ಸಾಗಿಸುವವ. ಅವನ ಮಗಳು ಪ್ರಿಯತಮನೊಂದಿಗೆ ಪಟ್ಟಣಕ್ಕೆ…

Read More

ಮುಂಬಯಿ : ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ ಆಯೋಜಿಸಿರುವ ಕನ್ನಡ ವಿಭಾಗದ ನಲ್ವತ್ತಾರರ ಸಂಭ್ರಮ, ನಿರಂಜನ ಶತಮಾನೋತ್ಸವ, ಉಪನ್ಯಾಸ ಹಾಗೂ ಆರು ಕೃತಿಗಳ ಬಿಡುಗಡೆ ಕಾರ್ಯಕ್ರಮವು ದಿನಾಂಕ 13-04-2024ರಂದು ಮಧ್ಯಾಹ್ನ ಗಂಟೆ 2ಕ್ಕೆ ಮುಂಬಯಿ ಜೆ.ಪಿ. ನಾಯಕ್ ಸಭಾಭವನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಮುಂಬಯಿ ಬಂಟರ ಸಂಘದ ಅಧ್ಯಕ್ಷರಾದ ಪ್ರವೀಣ ಭೋಜ ಶೆಟ್ಟಿ ಇವರು ಉದ್ಘಾಟನೆ ಮಾಡಲಿದ್ದು, ಕರ್ನಾಟಕ ‘ಮಲ್ಲ’ ಪತ್ರಿಕೆಯ ಸಂಪಾದಕರಾದ ಚಂದ್ರಶೇಖರ ಪಾಲೆತ್ತಾಡಿ ಇವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ. ಜಿ.ಎನ್. ಉಪಾಧ್ಯ ಇವರ ‘ಸಾಹಿತ್ಯ ಸಿದ್ಧಿ ಸಿರಿಸೇವೆಯ ಸಾಕಾರ – ಡಾ. ಸುಧಾಮೂರ್ತಿ’ ಮತ್ತು ‘ರಸಋಷಿ ರಾಷ್ಟ್ರಕವಿ ಕುವೆಂಪು’, ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಎಂ.ಎ. ವಿದ್ಯಾರ್ಥಿ ವಿದ್ಯಾ ರಾಮಕೃಷ್ಣ ಇವರು ಅನುವಾದಿಸಿದ ‘From words to Noble Deeds-The Inspiring Tale of Dr. Sudha Murthy’, ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ…

Read More

ಬೆಂಗಳೂರು : ಕನ್ನಡ ಸಹೃದಯರ ಪ್ರತಿಷ್ಠಾನ (ನೋಂ.) ಇದರ ವತಿಯಿಂದ ಬೆಂಗಳೂರಿನ ಶ್ರೀ ವಾಗ್ದೇವಿ ಗಮಕ ಕಲಾ ಪ್ರತಿಷ್ಠಾನದ ಸಹಯೋಗದಲ್ಲಿ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ‘ಚೈತ್ರೋತ್ಸವ’ವು ರಾಜಾಜಿನಗರ, ಕುಮಾರವ್ಯಾಸ ಮಂಟಪದಲ್ಲಿ ದಿನಾಂಕ 10-04-2024ರಿಂದ 18-04-2024ರವರೆಗೆ ನಡೆಯಲಿದೆ. ದಿನಾಂಕ 10-04-2024ರಂದು ಡಾ. ಸುಮನಾ ಮತ್ತು ಶ್ರೀ ಶಿವರಾಂ ಇವರಿಂದ ‘ವಾದ್ಯ ಸಂಗೀತ’, ದಿನಾಂಕ 11-04-2024ರಂದು ಶ್ರೀಮತಿ ಮೀನಾಕ್ಷಿ ಶ್ರೀಪಾದ ಮತ್ತು ತಂಡದವರಿಂದ ‘ಗಮಕ ರೂಪಕ’, ದಿನಾಂಕ 12-04-2024ರಂದು ವಿದುಷಿ ಗೌರಿ ವಿಶ್ವನಾಥ್ ಮತ್ತು ತಂಡ ಹಾಗೂ ಶ್ರೀಚಿತ್ರಾ ಭಜನಾ ಮಂಡಲಿಯವರಿಂದ ‘ಹನುಮದ್ವಿಲಾಸ’, ದಿನಾಂಕ 13-04-2024ರಂದು ಗಮಕಿ ಶ್ರೀಮತಿ ಸುಮಾ ಪ್ರಸಾದ್ ಮತ್ತು ತಂಡದವರಿಂದ ‘ಹನುಮದ್ವಿಲಾಸ’, ದಿನಾಂಕ 14-04-2024ರಂದು ವಿದುಷಿ ಸಂಪದಾ ಗುರುಪ್ರಸಾದ್ ಇವರಿಂದ ‘ಭರತನಾಟ್ಯ’, ದಿನಾಂಕ 15-04-2024ರಂದು ಶ್ರೀ ಶಾರದಾ ಭಜನಾ ಮಂಡಲಿ ಹಾಗೂ ಶ್ರೀಮತಿ ಇಂದು ಸುಂದರೇಶ್ ಮತ್ತು ತಂಡದವರಿಂದ ‘ಶ್ರೀರಾಮ ಭಜನೆ’, ದಿನಾಂಕ 16-04-2024ರಂದು ವಿದುಷಿ ರೇಖಾ ಪ್ರಸಾದ್ ಮತ್ತು ಶ್ರೀಮತಿ ಜ್ಯೋತಿ ಮಹೇಶ್…

Read More