Author: roovari

ಐರೋಡಿ : ಕೀರ್ತಿಶೇಷ ಭಾಗವತ ನೀಲಾವರ ಲಕ್ಷ್ಮೀನಾರಾಯಣ ರಾಯರ ಜನ್ಮ ಶತಮಾನೋತ್ಸವ 2025 ಸಂಕೀರ್ತನ 12 ತಿಂಗಳ ಸರಣಿ ಕಾರ್ಯಕ್ರಮಗಳ ಮಾಲಿಕೆಯಲ್ಲಿ ಜೂನ್ ತಿಂಗಳ ಕಾರ್ಯಕ್ರಮದಲ್ಲಿ ‘ಯಕ್ಷಗಾನ ತಾಳಮದ್ದಳೆ’ಯು ದಿನಾಂಕ 29 ಜೂನ್ 2025ರಂದು ಸಂಜೆ 4-00 ಗಂಟೆಗೆ ಬಾಳ್ಕುದ್ರು ಶ್ರೀ ರಾಮ ಮಂದಿರದಲ್ಲಿ ನಡೆಯಲಿದೆ. ಪಾರ್ತಿಸುಬ್ಬ ವಿರಚಿತ ‘ವಾಲಿ ವಧೆ’ ಪ್ರಸಂಗದ ಹಿಮ್ಮೇಳದಲ್ಲಿ ಉದಯ ಕುಮಾರ್ ಹೊಸಾಳ, ಶಶಿಕುಮಾರ್ ಆಚಾರ್ ಮತ್ತು ವಾಗ್ವಿಲಾಸ ಭಟ್ ಹಾಗೂ ಮುಮ್ಮೇಳದಲ್ಲಿ ಕೊಂಡದಕುಳಿ ರಾಮಚಂದ್ರ ಹೆಗಡೆ, ಜಬ್ಬಾರ್ ಸಮೊ ಸಂಪಾಜೆ, ರವಿರಾಜ ಪನೆಯಾಲ ಮತ್ತು ಸುನಿಲ್ ಹೊಲಾಡ್ ಸಹಕರಿಸಲಿದ್ದಾರೆ.

Read More

ಬೆಳ್ತಂಗಡಿ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ವತಿಯಿಂದ ನಡೆಯುವ 2025-26ನೇ ಸಾಲಿನ ಯಕ್ಷಧ್ರುವ ಯಕ್ಷ ಶಿಕ್ಷಣ ನಾಟ್ಯಾಭ್ಯಾಸ ಕಾರ್ಯಕ್ರಮವು ಸರ್ಕಾರಿ ಪ್ರೌಢಶಾಲೆ ನಿಡ್ಲೆಯಲ್ಲಿ ದಿನಾಂಕ 20 ಜೂನ್ 2025ರ ಶುಕ್ರವಾರದಂದು ಉದ್ಘಾಟನೆಗೊಂಡಿತು. ಕಾರ್ಯಕ್ರಮವನ್ನು ಫೌಂಡೇಶನ್ನಿನ ಕೇಂದ್ರ ಸಮಿತಿಯ ಟ್ರಸ್ಟಿಗಳೂ ಆಗಿರುವ ಸಂಘಟಕರಾದ ಶ್ರೀ ಭುಜಬಲಿ ಬಿ. ಧರ್ಮಸ್ಥಳ ಇವರು ಉದ್ಘಾಟಿಸಿದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಶ್ರೀಯುತರು “ಉತ್ತಮ ಕಲಾವಿದರಾದ ಈಶ್ವರ ಪ್ರಸಾದ್ ಇವರು ಗುರುಗಳಾಗಿ ಸಿಗುತ್ತಿರುವುದು ನಿಮ್ಮ ಭಾಗ್ಯ. ವಿದ್ಯಾಭ್ಯಾಸದ ಜೊತೆಗೆ ಯಕ್ಷಗಾನವನ್ನು ಕಲಿಯಿರಿ. ಇದು ನಿಮ್ಮ ಭವಿಷ್ಯಕ್ಕೆ ಪೂರಕ” ಎಂದು ಕಿವಿ ಮಾತು ಹೇಳಿದರು. ಪಟ್ಲ ಫೌಂಡೇಶನ್ ಟ್ರಸ್ಟಿನ ಕಾರ್ಯ ಚಟುವಟಿಕೆಗಳನ್ನು ತಿಳಿಸಿದರು. ಪಟ್ಲ ಶ್ರೀ ಸತೀಶ್ ಶೆಟ್ಟಿ ಇವರ ಕಾರ್ಯವೈಖರಿಯನ್ನು ಪ್ರಶಂಶಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಟ್ರಸ್ಟಿನ ಬೆಳ್ತಂಗಡಿ ಘಟಕದ ಅಧ್ಯಕ್ಷರಾದ ಶ್ರೀ ಸುರೇಶ್ ಶೆಟ್ಟಿಯವರು ಕಳೆದ ಮೂರು ವರ್ಷಗಳಿಂದ ವಿವಿಧ ಶಾಲೆಗಳಲ್ಲಿ ನಡೆಯುತ್ತಿರುವ ಯಕ್ಷನಾಟ್ಯ ಅಭಿಯಾನ ಕಾರ್ಯಕ್ರಮದ ಬಗ್ಗೆ ತಿಳಿಸುತ್ತಾ ಪ್ರಸ್ತುತ ಸಾಲಿನಲ್ಲಿ ನಡೆಯುವ…

Read More

ಬೆಂಗಳೂರು : ಆಲಾಫ್ ಸಂಗೀತ ಸಭಾ ಇದರ ವತಿಯಿಂದ ಬೈಠಕ್ ಸಂಗೀತ ಕಛೇರಿಯನ್ನು ದಿನಾಂಕ 22 ಜೂನ್ 2025ರಂದು ಸಂಜೆ 5-00 ಗಂಟೆಗೆ ಬೆಂಗಳೂರಿನ ಮಹಾಲಕ್ಷ್ಮೀಪುರಂನಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸಂಗೀತ ಕಛೇರಿಯಲ್ಲಿ ಅರ್ಜುನ್ ಆನಂದ್ ಇವರ ಸಿತಾರ್ ವಾದನ, ಸುದೀಪ್ತೋ ಚಕ್ರಬೋರ್ತಿ ಮತ್ತು ಮಾಹಿ ಜವೇರಿ ಇವರ ಹಾಡುಗಾರಿಕೆಗೆ ರೂಪಕ್ ಕಲ್ಲೂರ್ಕರ್, ಆದಿತ್ಯ ಸಿಂಗ್, ಕೌಶಿಕ್ ಭಟ್ ತಬಲಾದಲ್ಲಿ ಹಾಗೂ ಮಧುಸೂದನ್ ಭಟ್ ಮತ್ತು ಗೌರವ್ ಗಡಿಯಾರ್ ಇವರು ಹಾರ್ಮೋನಿಯಂನಲ್ಲಿ ಸಾಥ್ ನೀಡಲಿದ್ದಾರೆ.

Read More

ಮೈಸೂರು : ಡಿ.ವಿ.ಜಿ. ಬಳಗ ಪ್ರತಿಷ್ಠಾನ (ನೋಂ) ಇದರ ವತಿಯಿಂದ ‘ಡಿ.ವಿ.ಜಿ. ಪ್ರಶಸ್ತಿ 2025’ ಪ್ರದಾನ ಸಮಾರಂಭವನ್ನು ದಿನಾಂಕ 22 ಜೂನ್ 2025ರಂದು ಬೆಳಗ್ಗೆ 10-00 ಗಂಟೆಗೆ ಮೈಸೂರಿನ ಕುವೆಂಪು ನಗರದ ರಮಾ ಗೋವಿಂದ ಕಲಾವೇದಿಕೆಯಲ್ಲಿ ಆಯೋಜಿಸಲಾಗಿದೆ. ಈ ಸಮಾರಂಭದ ಅಧ್ಯಕ್ಷತೆಯನ್ನು ಶಿವಮೊಗ್ಗದ ಖ್ಯಾತ ವಾಗ್ಮಿಗಳಾದ ವಿದ್ವಾನ್ ಜಿ.ಎಸ್. ನಟೇಶ್ ಇವರು ವಹಿಸಲಿದ್ದು, ಕವಿಗಳು ಹಾಗೂ ಸಾಹಿತಿ ಟಿ.ಎನ್. ಶಿವಕುಮಾರ್ (ತ ನಾ ಶಿ) ಇವರಿಗೆ ‘ಡಿ.ವಿ.ಜಿ. ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಗುವುದು. ಬೆಂಗಳೂರಿನ ಖ್ಯಾತ ಶಿಕ್ಷಣ ತಜ್ಞರಾದ ಡಾ. ಗುರುರಾಜ ಕರಜಗಿ ಮತ್ತು ಖ್ಯಾತ ಸಂಗೀತಗಾರರು ಹಾಗೂ ಸಂಗೀತ ಶಾಸ್ತ್ರಜ್ಞರಾದ ವಿದ್ವಾನ್ ಡಾ. ರಾ.ಸ. ನಂದಕುಮಾರ್ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

Read More

ಪುತ್ತೂರು : ಸಂಧ್ಯಾರಶ್ಮಿ ಸಾಹಿತ್ಯ ಸಂಘ ಹಾಗೂ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸುಳ್ಯ ಹೋಬಳಿ ಘಟಕಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಸಾಹಿತಿ ಕೆ. ಆರ್. ತೇಜಕುಮಾರ್ ಬಡ್ಡಡ್ಕ ಇವರ ವ್ಯಕ್ತಿತ್ವ ಹಾಗೂ ಕೃತಿ ಪರಿಚಯದ ‘ತಿಂಗಳ ಸಾಹಿತ್ಯ ಸಂವಾದ ಮಾಲಿಕೆ’ ಕಾರ್ಯಕ್ರಮದಲ್ಲಿ ಸಾಹಿತಿ ಉಲ್ಲಾಸ್ ಕಜೋಡಿ ಬರೆದ ಚೊಚ್ಚಲ ಕೃತಿ “ಜೀವನಯಾನ” ಕವನ ಸಂಕಲನದ ಲೋಕಾರ್ಪಣಾ ಸಮಾರಂಭವು ದಿನಾಂಕ 20 ಜೂನ್ 2025ರಂದು ಕುರುಂಜಿಬಾಗ್‌ ನಲ್ಲಿರುವ ಸಂದ್ಯಾರಶ್ಮಿ ಸಭಾಂಗಣದಲ್ಲಿ ನಡೆಯಿತು. ಸಂದ್ಯಾರಶ್ಮಿ ಸಾಹಿತ್ಯ ಸಂಘದ ಅಧ್ಯಕ್ಷರಾದ ಶ್ರೀಮತಿ ಲೀಲಾ ದಾಮೋದರ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಸಾಹಿತಿಗಳಾದ ಅರವಿಂದ ಚೊಕ್ಕಾಡಿ ಕೃತಿ ಲೋಕಾರ್ಪಣೆಗೊಳಿಸಿದರು. ನಿವೃತ್ತ ಉಪನ್ಯಾಸಕ ರಾಮಚಂದ್ರ ಪಳಂಗಾಯ ಇವರು ವ್ಯಕ್ತಿತ್ವ ಪರಿಚಯ ಮಾಡಿ, ನಿವೃತ್ತ ಉಪ ಪ್ರಾಂಶುಪಾಲರಾದ ಬಾಬು ಮಾಸ್ತರ್ ಅಚೆಪ್ಪಾಡಿ ಕೃತಿ ಪರಿಚಯಿಸಿದರು. ಸಮಾರಂಭದಲ್ಲಿ ಸಾಹಿತಿ ಕೆ. ಆರ್. ತೇಜಕುಮಾರ್ ಬಡ್ಡಡ್ಕ, ಬಂಟಮಲೆ ಅಕಾಡೆಮಿಯ ಅಧ್ಯಕ್ಷರಾದ ಸಾಹಿತಿ ಎ. ಕೆ. ಹಿಮಕರ, ಸುಳ್ಯ ತಾಲೂಕು…

Read More

ತುಮಕೂರು : ಕನ್ನಡ ಸಾಹಿತ್ಯ ಪರಿಷತ್ತು ತುಮಕೂರು ಹಾಗೂ ಜಯಮಂಗಲಿ ಪ್ರಕಾಶನ ತುಮಕೂರು ಆಯೋಜಿಸುವ ದುಗ್ಗೇನಹಳ್ಳಿ ಸಿದ್ದೇಶ ಇವರ ‘ಗುರುವಿನ ಜೋಳಿಗೆ’ ಕವನ ಸಂಕಲನದ ಲೋಕಾರ್ಪಣಾ ಸಮಾರಂಭವು 22 ಜೂನ್ 2025 ರಂದು ಬೆಳಿಗ್ಗೆ ಘಂಟೆ 11.00ಕ್ಕೆ ತುಮಕೂರಿನ ಅಮಾನಿಕೆರೆ ರಸ್ತೆಯಲ್ಲಿರುವ ಕನ್ನಡ ಭವನದಲ್ಲಿ ನಡೆಯಲಿದೆ. ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಇದರ ಅಧ್ಯಕ್ಷರಾದ ನಾಡೋಜ ಡಾ. ವೂಡೇ ಪಿ.ಕೃಷ್ಣ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ರಾಜ್ಯ ಒಕ್ಕಲಿಗರ ಸಂಘ ತುಮಕೂರು ಇದರ ನಿರ್ದೇಶಕರು ಹಾಗೂ ಸಹಾಯಕ ಕಾರ್ಯದರ್ಶಿಗಳಾದ ಶ್ರೀ ಹನುಮಂತರಾಯಪ್ಪ ಆ‌ರ್. ಉದ್ಘಾಟಿಸಲಿದ್ದಾರೆ. ಬೆಂಗಳೂರಿನ ಹಿರಿಯ ಜಾನಪದ ವಿದ್ವಾಂಸರಾದ ಡಾ. ಮೀರಾಸಾಬಿಹಳ್ಳಿ ಶಿವಣ್ಣ ಕೃತಿ ಲೋಕಾರ್ಪಣೆ ಗೊಳಿಸಲಿದ್ದು, ಬೆಂಗಳೂರಿನ ವಿಮರ್ಶಕರು ಮತ್ತು ಲೇಖಕರಾದ ಡಾ. ಜಿ. ಬಿ. ಹರೀಶ ಕೃತಿ ಕುರಿತು ಮಾತನಾಡಲಿದ್ದಾರೆ. ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲಾ ಕ.ಸಾ.ಪ. ಇದರ ಅಧ್ಯಕ್ಷರಾದ ಶ್ರೀ ಕೆ.ಎಸ್. ಸಿದ್ದಲಿಂಗಪ್ಪ ಹಾಗೂ ತುಮಕೂರು ಜಿಲ್ಲಾ ಕ. ಸಾ. ಪ ಇದರ ಕೋಶಾಧ್ಯಕ್ಷರು…

Read More

ಬೆಂಗಳೂರು : ರಂಗಚಂದಿರ (ರಿ.) ಆಯೋಜಿಸುವ ಒಡನಾಡಿ ಬಂಧು ಸಿಜಿಕೆ -75 ‘ಮಾಸದ ನೆನೆಪು’ ಸರಣಿ ಕಾರ್ಯಕ್ರಮದ ಉದ್ಘಾಟನೆ ಸಮಾರಂಭವನ್ನು ದಿನಾಂಕ 27 ಜೂನ್ 2025ರಂದು ಸಂಜೆ 6-00 ಗಂಟೆ ಬೆಂಗಳೂರಿನ ಜೆ.ಸಿ. ರಸ್ತೆ, ಕನ್ನಡ ಭವನದ ನಯನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಪ್ರೊ ಎಲ್.ಎನ್. ಮುಕುಂದರಾಜ್ ಇವರ ಅಧ್ಯಕ್ಷತೆಯಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾದ ಡಾ. ಕೆ.ವಿ. ನಾಗರಾಜಮೂರ್ತಿ ಇವರು ಈ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ರಂಗ ಸಂಘಟಕ ಕೆ. ರೇವಣ್ಣ, ರಂಗ ನಿರ್ದೇಶಕ ರಾಜೇಶ್ ತಲಕಾಡು ಮತ್ತು ಹಿರಿಯ ಕಲಾವಿದರಾದ ಎಂ. ಚಂದ್ರಕಾಂತ ಇವರಿಗೆ ರಂಗ ಗೌರವ ನೀಡಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಂಗಳೂರಿನ ಸಂಚಯ ತಂಡದಿಂದ ರಂಗಗೀತೆಗಳು, ರಂಗ ಪ್ರದರ್ಶನ ಕಲಾ ಕೇಂದ್ರ ಅಭಿನಯದ ಕುವೆಂಪು ರಚನೆಯ ‘ಜಲಗಾರ’ ನಾಟಕ ದೃಶ್ಯಾವಳಿ ಮತ್ತು ಡಾ. ಹೆಚ್.ಎಸ್. ಶಿವಪ್ರಕಾಶ್ ರಚನೆಯ ‘ಸಮಗಾರ ಭೀಮವ್ವ’ ಕಾವ್ಯ ವಾಚನ ಮಂಜನಾಥ್ ಕಗ್ಗೆರೆ ಇವರಿಂದ ಪ್ರಸ್ತುತಗೊಳ್ಳಲಿದೆ.

Read More

ಕುಮಟಾ : ಶ್ರೀ ವಿನಾಯಕ ಭಟ್ಟ ಸಂಯೋಜನೆಯಲ್ಲಿ ಸುಪ್ರಸಿದ್ಧ ಯಕ್ಷ ದಿಗ್ಗಜರಿಂದ ‘ಯಕ್ಷ ಸಂಭ್ರಮ’ ಕಾರ್ಯಕ್ರಮವನ್ನು ದಿನಾಂಕ 22 ಜೂನ್ 2025ರಂದು ಸಂಜೆ 4-00 ಗಂಟೆಗೆ ಕುಮಟಾ ಹವ್ಯಕ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ‘ಶ್ರೀ ಸತ್ಯನಾರಾಯಣ ವೃತ ಮಹಾತ್ಮೆ’ ಹಾಗೂ ‘ಮೀನಾಕ್ಷಿ ಕಲ್ಯಾಣ’ ಎಂಬ ಪ್ರಸಂಗ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

Read More

ಸ್ವಿಟ್ಜರ್ಲ್ಯಾಂಡ್ : ಭಾರತೀಯ ಶಾಸ್ತ್ರೀಯ ಸಂಗೀತ ಕಛೇರಿ ವಯೋಲಿನ್ ಟ್ರಿಯೋ ಕಾರ್ಯಕ್ರಮವು ದಿನಾಂಕ 22 ಜೂನ್ 2025ರಂದು ಸಂಜೆ 4-00 ಗಂಟೆಗೆ ಸ್ವಿಟ್ಜರ್ಲ್ಯಾಂಡ್ ನಲ್ಲಿ ನಡೆಯಲಿದೆ. ಡಾ. ಮೈಸೂರು ಮಂಜುನಾಥ್, ಸುಮಂತ್ ಮಂಜುನಾಥ್ ಮತ್ತು ಮಾಳವಿ ಇವರ ವಯೋಲಿನ್ ವಾದನಕ್ಕೆ ಶ್ರೀರಂಗ ಮಿರಾಜ್ಕರ್ ಇವರು ತಬಲಾ ಹಾಗೂ ಚಿದು ನಾರಾಯಣನ್ ಇವರು ಮೃದಂಗದಲ್ಲಿ ಸಾಥ್ ನೀಡಲಿದ್ದಾರೆ.

Read More

ಮೈಸೂರು : ಬೆಂಗಳೂರಿನ ರಂಗಸಂಪದ ರಂಗ ತಂಡದ ವತಿಯಿಂದ ಸುವರ್ಣ ಸಂಭ್ರಮದ ಪ್ರಯುಕ್ತ ದಿನಾಂಕ 22 ಜೂನ್ 2025ರಂದು ಸಂಜೆ 4-00 ಹಾಗೂ 6-30 ಗಂಟೆಗೆ ಹಿರಿಯ ರಂಗ ಕಲಾವಿದೆ ಉಮಾಶ್ರೀ ಅಭಿನಯಿಸುವ ‘ಶರ್ಮಿಷ್ಠೆ’ ಏಕವ್ಯಕ್ತಿ ನಾಟಕ ಪ್ರದರ್ಶನವನ್ನು ಮೈಸೂರಿನ ನಟನ ರಂಗಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಡಾ. ಬೇಲೂರು ರಘುನಂದನ್ ನಾಟಕ ರಚಿಸಿದ್ದು, ಚಿದಂಬರ ರಾವ್ ಜಂಬೆ ವಿನ್ಯಾಸ ನಿರ್ದೇಶನ ಮಾಡಿದ್ದು, ಟಿಕೆಟ್ ದರ ರೂ.150/- ನಿಗದಿ ಮಾಡಲಾಗಿದೆ.

Read More