Author: roovari

ಉಡುಪಿ : ಶ್ರೀಮತಿ ಆಶಾ ಕುತ್ಯಾರ್ ಹಾಗೂ ಶ್ರೀ ಅಶೋಕ್ ಕುತ್ಯಾರ್ ಪ್ರಾಯೋಜಿತ ಪ್ರೊ. ಕು.ಶಿ ಹರಿದಾಸ ಭಟ್ಟರ ನೆನಪಿನಲ್ಲಿ ನೀಡಲಾಗುವ ‘ಪ್ರೊ. ಕು.ಶಿ. ಹರಿದಾಸ ಭಟ್ ಜನ್ಮಶತಮಾನೋತ್ಸವ ಜಾನಪದ ಪ್ರಶಸ್ತಿ’ ಹಾಗೂ ‘ಪ್ರೊ. ಕು.ಶಿ ಹರಿದಾಸ ಭಟ್ ಜಾನಪದ ಪ್ರಶಸ್ತಿ’ ಪ್ರದಾನ ಸಮಾರಂಭವು ದಿನಾಂಕ 21 ಜೂನ್ 2025ರಂದು ಉಡುಪಿಯ ಎಂ.ಜಿ.ಎಂ. ಕಾಲೇಜಿನ ಟಿ. ಮೋಹನದಾಸ್ ಪೈ ಕೌಶಲ್ಯ ಅಭಿವೃದ್ಧಿ ಕೇಂದ್ರದ ಸಭಾಂಗಣದಲ್ಲಿ ಮಧ್ಯಾಹ್ನ ಘಂಟೆ 3.೦೦ರಿಂದ ನಡೆಯಲಿರುವುದು. ಸಾಹಿತ್ಯ, ಶಿಕ್ಷಣ, ಆಡಳಿತ, ಸಂಘಟನೆ, ಜಾನಪದ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮ ಅನುಪಮ ಸಾಧನೆ ಸಿದ್ಧಿಗಳಿಂದ ಲೋಕ ವಿಖ್ಯಾತರಾದ ಪ್ರೊ. ಕು.ಶಿ ಅವರ 2024ರ ಸಾಲಿನ ಜನ್ಮಶತಮಾನೋತ್ಸವ ಜಾನಪದ ಪ್ರಶಸ್ತಿಯನ್ನು ಮೈಸೂರಿನ ಡಾ. ಡಿ. ಕೆ. ರಾಜೇಂದ್ರ ಇವರಿಗೆ, 2025ರ ಸಾಲಿನ ಜಾನಪದ ಪ್ರಶಸ್ತಿಯನ್ನು ಬೆಂಗಳೂರಿನ ಡಾ. ವಿಜಯಶ್ರೀ ಸಬರದ ಇವರಿಗೂ ಪ್ರದಾನ ಮಾಡಲಾಗುವುದು. ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಇದರ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಪ್ರಶಸ್ತಿ…

Read More

ಬೆಳ್ತಂಗಡಿ : ಕೊಯ್ಯೂರು ಪಂಚದುರ್ಗಾಪರಮೇಶ್ವರಿ ಯಕ್ಷಗಾನ ಸಂಘ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಸಂಕ್ರಾಂತಿಯ ಪ್ರಯುಕ್ತ ‘ಸೌಗಂಧಿಕಾ’ ಪ್ರಸಂಗದ ಯಕ್ಷಗಾನ ತಾಳಮದ್ದಳೆಯು ದಿನಾಂಕ 15 ಜೂನ್ 2025ರಂದು ಕೊಯ್ಯೂರು ಪಂಚದುರ್ಗಾಪರಮೇಶ್ವರಿ ದೇವಾಲಯದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವತರಾಗಿ ಶ್ರೀ ಉಮೇಶ ಆಚಾರ್ಯ ಮತ್ತು ಕುಮಾರಿ ನಂದನ ಮಾಲೆಂಕಿ. ಮದ್ದಳೆ ಹಾಗೂ ಚೆಂಡೆಯಲ್ಲಿ ಶ್ರೀ ರತನ್ ಮತ್ತು ಸಮರ್ಥ್ ಹೊಳ್ಳ ಸಹಕರಿಸಿದರು, ಮುಮ್ಮೇಳದಲ್ಲಿ ದ್ರೌಪದಿಯಾಗಿ ಶ್ರೀರಾಮಕೃಷ್ಣ ಭಟ್ ಬಳೆಂಜ, ಭೀಮನಾಗಿ ದಿನೇಶ್ ಕೊಯ್ಯುರು, ಹನುಮಂತನಾಗಿ ಪ್ರೊಫೆಸರ್ ಮಧೂರು ಮೋಹನ ಕಲ್ಲೂರಾಯ, ಯಕ್ಷ ಮಂತ್ರಿಯಾಗಿ ಬಾಸಮೆ ನಾರಾಯಣ ಭಟ್ ಸಹಕರಿಸಿದರು. ದೇವಸ್ಥಾನದ ಮೋಕ್ತೇಸರ ಶ್ರೀಹರೀಶ್ ಬಲ್ಲಾಳ್ ಮತ್ತು ಪ್ರಧಾನ ಅರ್ಚಕ ಅಶೋಕ ಬಾಂಗಿನ್ನಾಯ ಕಲಾವಿದರನ್ನು ಗೌರವಿಸಿದರು. ಶ್ರೀಮತಿ ಕೆ. ಆರ್. ಸುವರ್ಣಕುಮಾರಿ ಸಹಕರಿಸಿದರು.

Read More

ಬಂಟ್ವಾಳ : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ‘ಯುವ ವಾಹಿನಿ (ರಿ.)’ ಬಂಟ್ವಾಳ ಘಟಕವು ಕವಿ, ಸಾಹಿತಿ, ಸಂಘಟಕ ಬಿ. ತಮ್ಮಯ್ಯ ನೆನಪಿನಲ್ಲಿ ಆಯೋಜಿಸಿದ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆ 2024-25ರ ಅತೀ ಸಣ್ಣಕಥೆ ಸ್ಪರ್ಧೆ ಹಾಗೂ ಲಲಿತ ಪ್ರಬಂಧ ಸ್ಪರ್ಧೆಯ ವಿಜೇತರನ್ನು ಘೋಷಿಸಿದ್ದು, ಅತೀ ಸಣ್ಣಕಥಾ ಸ್ಪರ್ಧೆಯಲ್ಲಿ ಸುಲ್ತಾನ್ ಮನ್ಸೂರು ಮಂಚಿ ಇವರ ‘ಜಾಥಾ’ ಕಥೆ ಪ್ರಥಮ ಹಾಗೂ ಸ್ಮಿತಾ ಅಮೃತರಾಜ್ ಸಂಪಾಜೆ ಇವರ ‘ಸ್ಫೋಟ’ ದ್ವಿತೀಯ ಬಹುಮಾನವನ್ನು ಪಡೆದುಕೊಂಡಿದೆ. ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ರೂಪಕಲಾ ಆಳ್ವ ಬರೆದ ‘ಬೂಬು ಎಂಬ ಮರಿಮೊಮ್ಮಗಳು’ ಪ್ರಥಮ ಹಾಗೂ ನಳಿನಿ ಭೀಮಪ್ಪ ಧಾರವಾಡ ಬರೆದ ‘ಮುಡಿಯಿಂದ ಜಾರುತಿಹವೋ’ ದ್ವಿತೀಯ ಬಹುಮಾನವನ್ನು ಪಡೆದುಕೊಂಡಿದೆ. ವಿಜೇತರಿಗೆ ಪ್ರಶಸ್ತಿಯನ್ನು ದಿನಾಂಕ 22 ಜೂನ್ 2025ರಂದು ಬಿ. ಸಿ.ರೋಡು ಗಾಣದ ಪಾಡ್ಪುವಿನಲ್ಲಿರುವ ಬ್ರಹ್ಮ ಶ್ರೀ ನಾರಾಯಣಗುರು ಸಭಾ ಭವನದಲ್ಲಿ ನಡೆಯಲಿರುವ ಪದಗ್ರಹಣ ಸಮಾರಂಭದಲ್ಲಿ ನೀಡಿ ಗೌರವಿಸಲಾಗುವುದು.

Read More

ಬೆಂಗಳೂರು : ಟೀಮ್ ಕದಳಿ ಪ್ರಸ್ತುತಿಯಲ್ಲಿ ‘ಯಕ್ಷ ಸಿಂಧೂರ’ ಪ್ರಸಂಗ 02 ಪೌರಾಣಿಕ ಯಕ್ಷ ಭಿನ್ನಣ ಕಾರ್ಯಕ್ರಮವನ್ನು ದಿನಾಂಕ 21 ಜೂನ್ 2025ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಆಯೋಜಿಸಲಾಗಿದೆ. ರಾಮಕೃಷ್ಣ ಹೆಗಡೆ ಹಿಲ್ಲೂರು ಮತ್ತು ಶ್ರೇಯಾ ಆಚಾರ್ಯ ಅಲಂಕಾರು ಇವರ ಕಂಠಸಿರಿಯಲ್ಲಿ ‘ಸುದರ್ಶನ ವಿಜಯ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

Read More

ಸಾಲಿಗ್ರಾಮ : ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ – ಐರೋಡಿ ಇದರ ವತಿಯಿಂದ ಆಯೋಜಿಸುವ ಸಂಸ್ಕೃತಿ ಸಮಾರಂಭದ ಯಕ್ಷವರ್ಷ ಕಾರ್ಯಕ್ರಮದಡಿಯಲ್ಲಿ ‘ಲಂಕಾ ದಹನ’ ಯಕ್ಷಗಾನ ಪ್ರದರ್ಶನವನ್ನು ದಿನಾಂಕ 21 ಜೂನ್ 2025ರಂದು ಸಂಜೆ 6-00 ಗಂಟೆಗೆ ಗುಂಡ್ಮಿ-ಸಾಲಿಗ್ರಾಮದ ಸದಾನಂದ ರಂಗ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ಸರ್ವಶ್ರೀಗಳಾದ ಚಂದ್ರಕಾಂತ ರಾವ್ ಮೂಡಬೆಳ್ಳೆ, ಕೆ.ಜೆ. ಸುದೀಂದ್ರ, ವಾಗ್ವಿಲಾಸ ಭಟ್, ಕೊಂಡದಕುಳಿ ರಾಮಚಂದ್ರ ಹೆಗಡೆ, ಪ್ರಸನ್ನ ಶೆಟ್ಟಿಗಾ‌ರ್, ಹೆನ್ನಾಬೈಲ್ ಸಂಜೀವ ಶೆಟ್ಟಿ, ಹಾಲಾಡಿ ಸತೀಶ, ನರಸಿಂಹ ತುಂಗ, ನಿತ್ಯಾನಂದ ಶೆಟ್ಟಿಗಾ‌ರ್, ಪ್ರಶಾಂತ ಮಯ್ಯ ದಾರಿಮಕ್ಕಿ, ವಿನಯ ಕುಮಾರ ಹಟ್ಟಿಯಂಗಡಿ, ಅನುಪ ಉರಾಳ ಇವರುಗಳು ಸಹಕರಿಸಲಿದ್ದಾರೆ.

Read More

ಪಯ್ಯನೂರು : ತುರೀಯಮ್ ಮ್ಯೂಜಿಕ್ ಫೆಸ್ಟಿವಲ್ ಕಾರ್ಯಕ್ರಮವನ್ನು ದಿನಾಂಕ 19 ಜೂನ್ 2025ರಂದು ಸಂಜೆ 6-00 ಗಂಟೆಗೆ ಕೇರಳದ ಪಯ್ಯನೂರಿನ ಶ್ರೀ ಪ್ರಭಾ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದೆ. ಹಿಂದೂಸ್ತಾನಿ ಸಂಗೀತ ಕಛೇರಿಯಲ್ಲಿ ದುರ್ಗಾ ಶರ್ಮ ಇವರ ವಯೋಲಿನ್ ವಾದನಕ್ಕೆ ಪಂಡಿತ್ ರಾಜೇಂದ್ರ ನಾಕೋಡ್ ತಬಲಾ ಸಾಥ್ ನೀಡಲಿದ್ದಾರೆ.

Read More

ಬೆಳ್ತಂಗಡಿ : ಕರ್ನಾಟಕ ಗಮಕಕಲಾ ಪರಿಷತ್ ಬೆಳ್ತಂಗಡಿ ತಾಲೂಕು ಘಟಕದ ಆಶ್ರಯದಲ್ಲಿ ಆಯೋಜಿಸಿದ ‘ಮನೆಮನೆ ಗಮಕ’ ಸರಣಿ ಕಾರ್ಯಕ್ರಮದ 20ನೇ ಕಾರ್ಯಕ್ರಮ ದಿನಾಂಕ 14 ಜೂನ್ 2025ರಂದು ಜಿಲ್ಲಾಧ್ಯಕ್ಷರಾದ ಪ್ರೊಫೆಸರ್ ಮಧೂರು ಮೋಹನ ಕಲ್ಲೂರಾಯರ ಬೆಳ್ತಂಗಡಿ ಗೇರು ಕಟ್ಟೆಯ ಮಧೂರು ಮನೆಯಲ್ಲಿ ನಡೆಯಿತು. ಸಂಗೀತ ವಿದ್ವಾನ್ ಶ್ರೀ ಎ. ಡಿ. ಸುರೇಶ್ ಇವರು ಕೌಶಿಕ ರಾಮಾಯಣದ ಸೀತಾ ಕಲ್ಯಾಣ ಭಾಗವನ್ನು ವಾಚನ ಮಾಡಿದರೆ, ಡಾಕ್ಟರ್ ಶ್ರೀಧರ ಭಟ್ ವ್ಯಾಖ್ಯಾನ ಮಾಡಿದರು. ಶ್ರೀ ಭುಜಬಲಿ ಧರ್ಮಸ್ಥಳ, ಡಾಕ್ಟರ್ ದಿವಾ ಕೊಕ್ಕಡ, ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ದಿವಾಕರ್ ಆಚಾರ್ಯ ಗೇರುಕಟ್ಟೆ, ಕುಂಟಿನಿ ರಾಘವೇಂದ್ರ ಭಾಂಗಿನ್ನಾಯ, ನಾರಾವಿ ಜಯರಾಮ್ ಭಟ್, ತಾಲೂಕು ಅಧ್ಯಕ್ಷರಾದ ಶ್ರೀ ರಾಮಕೃಷ್ಣ ಭಟ್ ಬಳಂಜ , ಉಪನ್ಯಾಸಕಿ ಶ್ರೀಮತಿ ಭಾರತಿ ಮತ್ತು ಹಲವು ಗಮಕದ ವಿದ್ಯಾರ್ಥಿಗಳು, ಆಸಕ್ತರು ಹಾಜರಿದ್ದರು. ಶ್ರೀಮತಿ ಕೆ. ಆರ್. ಸುವರ್ಣ ಕುಮಾರಿ ಕಲಾವಿದರನ್ನು ಗೌರವಿಸಿದರು.

Read More

The eminent Kannada writer N. Mogasale’s much acclaimed novel ‘Dharma Yuddha’ has been translated into English by the well-known translator Dr. N.T. Bhat, and it has been published by Subbu Prakashana of Hubli with the very same original title. The title reminds us of the Dharma Yuddha of the Mahabharata. There, though it was decided that the battle will be taught abiding by righteousness, all kinds of tricks were played by both the parties. In Mogasale’s novel also righteousness seems to have gone to the dogs. Hence the title carries irony. The novel records the societal transformation in a coastal…

Read More

ಬೆಂಗಳೂರು : ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಮತ್ತು ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ (ರಿ.) ಸವದತ್ತಿ ಇವುಗಳ ಜಂಟಿ ಆಶ್ರಯದಲ್ಲಿ ‘ತಿಂಗಳ ನಾಟಕ ಸಂಭ್ರಮ’ದ ಪ್ರಯುಕ್ತ ನಾಟಕ ಪ್ರದರ್ಶನವನ್ನು ದಿನಾಂಕ 21 ಜೂನ್ 2025ರಂದು ಸಂಜೆ 6-30 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮದ ಸಮುಚ್ಚಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಝಕೀರ ನದಾಫ ಇವರ ರಚನೆ, ನಿರ್ದೇಶನ ಮತ್ತು ಸಂಗೀತ ಸಂಯೋಜನೆಯಲ್ಲಿ ‘ನೆಲ ಮುಗಿಲು’ ನಾಟಕ ಪ್ರದರ್ಶನಗೊಳ್ಳಲಿದೆ.

Read More

ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ತಿಂಗಳ ಸರಣಿ ಕಾರ್ಯಕ್ರಮದ ಅಂಗವಾಗಿ ಬಲಮುರಿ ಶ್ರೀ ವಿದ್ಯಾ ಗಣಪತಿ ದೇವಸ್ಥಾನ ಭಾರತಿ ನಗರ ಬನ್ನೂರು ಇದರ ಆಶ್ರಯದಲ್ಲಿ ತಾಳಮದ್ದಳೆ ‘ಅತಿಕಾಯ ಮೋಕ್ಷ’ ಎಂಬ ಆಖ್ಯಾನದೊಂದಿಗೆ ಜರಗಿತು. ಹಿಮ್ಮೇಳದಲ್ಲಿ ಭಾಗವತರಾಗಿ ಎಲ್.ಎನ್. ಭಟ್ ಬಟ್ಯಮೂಲೆ, ಆನಂದ ಸವಣೂರು ಹಾಗೂ ಚೆಂಡೆ, ಮದ್ದಲೆಗಳಲ್ಲಿ ಪದ್ಯಾಣ ಶಂಕರನಾರಾಯಣ ಭಟ್, ಮುರಳೀಧರ ಕಲ್ಲೂರಾಯ, ಅಚ್ಯುತ ಪಾಂಗಣ್ಣಾಯ, ಮಾಸ್ಟರ್ ಪರೀಕ್ಷಿತ್, ಕುಮಾರಿ ಶರಣ್ಯ ನೆತ್ತರಕೆರೆ, ಮಾಸ್ಟರ್ ಅನೀಶ್ ಕೃಷ್ಣ ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ ಬಾರ್ಯ ಮತ್ತು ದುಗ್ಗಪ್ಪ ನಡುಗಲ್ಲು (ಶ್ರೀರಾಮ), ಗುಂಡ್ಯಡ್ಕ ಈಶ್ವರ ಭಟ್ ಹಾಗೂ ಶುಭಾ ಅಡಿಗ (ಅತಿಕಾಯ), ಮಾಂಬಾಡಿ ವೇಣುಗೋಪಾಲ ಭಟ್ (ರಾವಣ), ಪ್ರೇಮಲತಾ ರಾವ್ (ವಿಭೀಷಣ), ಕಿಶೋರಿ ದುಗ್ಗಪ್ಪ ನಡುಗಲ್ಲು (ಲಕ್ಷ್ಮಣ) ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ವಂದಿಸಿದರು. ಶಿವಶಂಕರ ಭಟ್ ಬೋನಂತಾಯ ಪ್ರಾಯೋಜಿಸಿದ ಈ ಕಾರ್ಯಕ್ರಮಕ್ಕೆ ವ್ಯವಸ್ಥಾಪಕ ಸುಬ್ರಹ್ಮಣ್ಯ ಭಟ್ ಸಹಕರಿಸಿದರು.

Read More