Author: roovari

ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ.) ಮತ್ತು ಸುರತ್ಕಲ್ ನಾಗರಿಕ ಸಲಹಾ ಸಮಿತಿ (ರಿ.) ಈ ಸಂಸ್ಥೆಗಳು ಜಂಟಿಯಾಗಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಪ್ರಸ್ತುತ ಪಡಿಸುವ ‘ಕರ್ನಾಟಕ ಶಾಸ್ತ್ರೀಯ ಸಂಗೀತ’ವು ದಿನಾಂಕ 06-04-2024ರಂದು ಸಂಜೆ 5.45 ಗಂಟೆಗೆ ಸುರತ್ಕಲ್ಲಿನ ಕೆನರಾ ಬ್ಯಾಂಕ್ ಕ್ರಾಸ್ ರೋಡಿನಲ್ಲಿರುವ ‘ಅನುಪಲ್ಲವಿ’ಯಲ್ಲಿ ಹಾಗೂ ‘ಉದಯರಾಗ – 52’ನೇ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯು ಸುರತ್ಕಲ್ಲಿನ ಫ್ಲೈ ಓವರಿನ ಕೆಳಗಡೆ ದಿನಾಂಕ 07-04-2024 ಭಾನುವಾರ ಪೂರ್ವಾಹ್ನ 6-00 ಗಂಟೆಗೆ ನಡೆಯಲಿದೆ. ದಿನಾಂಕ 06-04-2024ರಂದು ಚಿನ್ಮಯೀ ಮನೀಷ್ ಇವರ ಹಾಡುಗಾರಿಕೆಗೆ ಸುನಂದ ಪಿ.ಎಸ್. ಮಾವೆ ವಯೋಲಿನ್, ಯುವಕಲಾಮಣಿ ನಿಕ್ಷಿತ್ ಪುತ್ತೂರು ಮೃದಂಗ ಹಾಗೂ ಕಾರ್ತಿಕ್ ಭಟ್ ಇನ್ನಂಜೆ ಖಂಜೀರದಲ್ಲಿ ಸಾಥ್ ನೀಡಲಿದ್ದಾರೆ. ಸುರತ್ಕಲ್ಲಿನ ಸಂಗೀತ ಗುರು ವಿದುಷಿ ಸುಮಾ ಸತೀಶ್ ರಾವ್ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಸಂಗೀತ ಶಾಲೆಯ ವಿದ್ಯಾರ್ಥಿಗಳು ‘ನಾಮಸನಕೀರ್ಥಂ’ ಪ್ರಸ್ತುತ ಪಡಿಸಲಿದ್ದಾರೆ.…

Read More

ಉಡುಪಿ : ಬಂಟ್ವಾಳ ಸಂಚಯಗಿರಿಯ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ತುಳು ಬದುಕು ವಸ್ತು ಸಂಗ್ರಹಾಲಯ ಮತ್ತು ಉಡುಪಿ ಅಜ್ಜರಕಾಡಿನ ಡಾ. ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಇದರ ಆಶ್ರಯದಲ್ಲಿ ಡಾ. ಮಾಲತಿ ಕೃಷ್ಣಮೂರ್ತಿ ಇವರ ‘ಭಾಸ್ಕರಾನಂದ ಸಾಲೆತ್ತೂರರ ತುಳುವ ವಸ್ತು ಪ್ರಪಂಚ’ ಎಂಬ ಕೃತಿ ಲೋಕಾರ್ಪಣೆಯು ದಿನಾಂಕ 06-04-2024ರಂದು ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಅಜ್ಜರಕಾಡಿನ ಡಾ. ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲರಾದ ಡಾ. ಭಾಸ್ಕರ ಶೆಟ್ಟಿ ಎಸ್. ಇವರು ವಹಿಸಲಿದ್ದು, ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿನ್ಸೆಂಟ್ ಆಳ್ವ ಇವರು ಕೃತಿ ಬಿಡುಗಡೆ ಮಾಡಲಿದ್ದಾರೆ.

Read More

ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘ ಬೊಳುವಾರು ಪುತ್ತೂರು ಇವರ ವತಿಯಿಂದ ತಿಂಗಳ ಸರಣಿ ಕಾರ್ಯಕ್ರಮದ ಅಂಗವಾಗಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಳದ ರಾಜ ಗೋಪುರದಲ್ಲಿ ಪಾರ್ತಿಸುಬ್ಬ ವಿರಚಿತ ‘ಉರಗಾಸ್ತ್ರ ಪ್ರಯೋಗ’ ಎಂಬ ತಾಳಮದ್ದಳೆ ದಿನಾಂಕ 01-04-2024 ರಂದು  ನಡೆಯಿತು.  ಹಿಮ್ಮೇಳದಲ್ಲಿ  ಭಾಗವತರಾಗಿ ಲಕ್ಷ್ಮೀನಾರಾಯಣ ಭಟ್ ಬಟ್ಯಮೂಲೆ, ನಿತೀಶ್ ಕುಮಾರ್ ಹಾಗೂ ಚೆಂಡೆ ಮದ್ದಳೆಗಳಲ್ಲಿ ಪದ್ಯಾಣ ಶಂಕರ ನಾರಾಯಣ ಭಟ್ , ಮುರಳೀಧರ ಕಲ್ಲೂರಾಯ ಹಾಗೂ ಮಾ. ಪರೀಕ್ಷಿತ್ ಸಹಕರಿಸಿದರು. ಅರ್ಥಧಾರಿಗಳಾಗಿ ಕಿಶೋರಿ ದುಗ್ಗಪ್ಪ ನಡುಗಲ್ಲು ಶ್ರೀರಾಮನಾಗಿ, ಮನೋರಮಾ ಜಿ. ಭಟ್ ಲಕ್ಷ್ಮಣ ನಾಗಿ, ಶ್ರೀಧರ ರಾವ್ ಕುಂಬ್ಳೆ ಸೀತೆಯಾಗಿ, ಭಾಸ್ಕರ ಬಾರ್ಯ ವಿಭೀಷಣನಾಗಿ, ಗುಡ್ಡಪ್ಪ ಬಲ್ಯ ರಾವಣನಾಗಿ, ದುಗ್ಗಪ್ಪ ನಡುಗಲ್ಲು ಇಂದ್ರಜಿತುವಾಗಿ, ಹರಿಣಾಕ್ಷಿ ಜೆ.ಶೆಟ್ಟಿ ವಿದ್ಯುಜಿಹ್ವನಾಗಿ ಹಾಗೂ ಭಾರತಿ ರೈ ಅರಿಯಡ್ಕ ಸರಮೆಯಾಗಿ ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ಗೌರವ ಕಾರ್ಯದರ್ಶಿ ರಂಗನಾಥ ರಾವ್ ವಂದಿಸಿದರು.

Read More

ಉಡುಪಿ : ಭಾವನಾ ಫೌಂಡೇಶನ್ (ರಿ.) ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೊ ಸಂಯೋಜಿಸುವ ‘ಬಾಲ ಲೀಲಾ -2024’ ಚಿಣ್ಣರ ಬೇಸಿಗೆ ಶಿಬಿರವು ದಿನಾಂಕ 11-04-2024ರಿಂದ 14-04-2024ರವರೆಗೆ ಬೆಳಗ್ಗೆ 9ರಿಂದ ಸಂಜೆ 5ರ ತನಕ ಹಾವಂಜೆ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ. ನೋಂದಣಿಗಾಗಿ ಸಂಪರ್ಕಿಸಿರಿ : ವಿಶು ರಾವ್ ಹಾವಂಜೆ 9880052105 ಜನಾರ್ದನ ಹಾವಂಜೆ 9845650544 ಉದಯ್ ಕೋಟ್ಯಾನ್ 9448157424

Read More

ಉಡುಪಿ : ಭೂಮಿಕಾ (ರಿ.) ಹಾರಾಡಿ ಇದರ ದಶಮ ಸಂಭ್ರಮ ಪ್ರಯುಕ್ತ ‘ಬಣ್ಣ’ ಆರು ದಿನಗಳ ರಂಗದ ರಂಗಿನಾಟವು ದಿನಾಂಕ 09-04-2024ರಿಂದ 14-04-2024ರವರೆಗೆ ಬ್ರಹ್ಮಾವರ ಎಸ್.ಎಂ.ಎಸ್. ಮಕ್ಕಳ ಮಂಟಪದಲ್ಲಿ ನಡೆಯಲಿದೆ. ದಿನಾಂಕ 09-04-2024ರಂದು ಪ್ರದೀಪ್ ಚಂದ್ರ ಕುತ್ಪಾಡಿ ಇವರ ನಿರ್ದೇಶನದಲ್ಲಿ ಅಮೋಘ ರಿ. ಹಿರಿಯಡ್ಕ ಇವರು ಪ್ರಸ್ತುತ ಪಡಿಸುವ ನಾಟಕ ‘ರೈಲುಭೂತ’, ದಿನಾಂಕ 10-04-2024ರಂದು ಸಾಲಿಯಾನ್ ಉಮೇಶ್ ನಾರಾಯಣ ಇವರ ನಿರ್ದೇಶನದಲ್ಲಿ ನಮ ತುಳುವರ್ ಕಲಾ ಸಂಘಟನೆ ಮುದ್ರಾಡಿ ಇವರು ಪ್ರಸ್ತುತ ಪಡಿಸುವ ನಾಟಕ ‘ಅಂಬೆ’, ದಿನಾಂಕ 11-04-2024ರಂದು ಮೋಹನ್ ಚಂದ್ರ ಯು. ಇವರ ನಿರ್ದೇಶನದಲ್ಲಿ ಮಂಗಳೂರಿನ ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಇವರು ಪ್ರಸ್ತುತ ಪಡಿಸುವ ನಾಟಕ ‘ನೆಮ್ಮದಿ ಅಪಾರ್ಟಮೆಂಟ್ BLOCK-B’, ದಿನಾಂಕ 12-04-2024ರಂದು ಜೋಸೆಫ್ ಜಾನ್ ಇವರ ನಿರ್ದೇಶನದಲ್ಲಿ ಸುಸ್ಥಿರ ಪ್ರತಿಷ್ಠಾನ (ರಿ.) ಬೆಂಗಳೂರು ಇವರು ಪ್ರಸ್ತುತ ಪಡಿಸುವ ನಾಟಕ ‘ಸರಸ ವಿರಸ ಸಮರಸ’, ದಿನಾಂಕ 13-04-2024ರಂದು ಡಾ. ಶ್ರೀಪಾದ ಭಟ್ ಇವರ ನಿರ್ದೇಶನದಲ್ಲಿ ಮೈಸೂರಿನ ನಟನ ತಂಡದವರು…

Read More

ಬೈಂದೂರು : ಸುರಭಿ (ರಿ.) ಬೈಂದೂರು ಇವರ ವತಿಯಿಂದ ಮೂರು ದಿನಗಳ ರಾಜ್ಯ ಮಟ್ಟದ ನಾಟಕೋತ್ಸವ ‘ರಂಗ ಸುರಭಿ 2024’ ದಿನಾಂಕ 06-04-2024ರಿಂದ 08-04-2024ರವರೆಗೆ ಸಂಜೆ ಗಂಟೆ 6.30ಕ್ಕೆ ಬೈಂದೂರಿನ ಶ್ರೀ ಶಾರದಾ ವೇದಿಕೆಯಲ್ಲಿ ನಡೆಯಲಿದೆ. ದಿನಾಂಕ 06-04-2024ರಂದು ಬೈಂದೂರಿನ ಶ್ರೀರಾಮ ವಿವಿದೋದ್ಧೇಶ ಟ್ರಸ್ಟಿನ ಆಡಳಿತ ಟ್ರಸ್ಟಿ ಶ್ರೀ ಬಿ ರಾಮಕೃಷ್ಣ ಶೇರೆಗಾರ್ ಇವರ ಅಧ್ಯಕ್ಷತೆಯಲ್ಲಿ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಪುರವಧ್ಯಕ್ಷರಾದ ಶ್ರೀ ಚಂದ್ರಶೇಖರ ಶೆಟ್ಟಿ ಕೆರಾಡಿ ಇವರು ಜ್ಯೋತಿ ಪ್ರಜ್ವಲಿಸಿ ನಾಟಕೋತ್ಸವದ ಉದ್ಘಾಟನೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಹಿರಿಯ ರಂಗ ಕಲಾವಿದರಾದ ಶ್ರೀ ವಿಶ್ವೇಶ್ವರ ಅಡಿಗ ಬಿಜೂರು ಇವರಿಗೆ ರಂಗ ಸನ್ಮಾನ ಮಾಡಲಾಗುವುದು. ಸಭಾ ಕಾರ್ಯಕ್ರಮದ ನಂತರ ಮಂಗಳೂರಿನ ‘ಅಸ್ತಿತ್ವ (ರಿ.)’ ಇವರು ಅಭಿನಯಿಸುವ ಅರುಣ್ ಲಾಲ್ ಕೇರಳ ಇವರ ರಂಗ ಪಠ್ಯ, ವಿನ್ಯಾಸ ಮತ್ತು ನಿರ್ದೇಶನದಲ್ಲಿ ‘ಜುಗಾರಿ’ ನಾಟಕ ಪ್ರದರ್ಶನಗೊಳ್ಳಲಿದೆ. ದಿನಾಂಕ 07-04-2024ರಂದು ನಡೆಯಲಿರುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ರಾಂತ ಮುಖ್ಯೋಪಾಧ್ಯಾಯರಾದ ಶ್ರೀ ಕೃಷ್ಣಪ್ಪ…

Read More

ಬ್ರಹ್ಮಾವರ : ಮಂದಾರ (ರಿ.) ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ಗಾಂಧಿನಗರ ಬೈಕಾಡಿ ಇವರ ಆಯೋಜನೆಯ ಮೂರನೇ ವರ್ಷದ ‘ರಂಗೋತ್ಸವ-2024’ ಕಾರ್ಯಕ್ರಮವು ದಿನಾಂಕ 05-04-2024ರಿಂದ 07-04-2024ರವರೆಗೆ ಮೂರು ದಿನಗಳ ಕಾಲ ಬ್ರಹ್ಮಾವರದ ಹೋಲಿ ಫ್ಯಾಮಿಲಿ ಚರ್ಚ್ ಆವರಣ ನಿರ್ಮಲ ಆಂಗ್ಲ ಮಾಧ್ಯಮ ಶಾಲಾ‌ ವೇದಿಕೆಯಲ್ಲಿ ನಡೆಯಲಿದೆ. ದಿನಾಂಕ 05-04-2024ರಂದು ಗಂಟೆ 6.45ಕ್ಕೆ ‘ನಾದ ಮಣಿನಾಲ್ಕೂರು’ ಇವರ ಸದಾಶಯದ ಅರಿವಿನ ಹಾಡುಗಳೊಂದಿಗೆ ಕಾರ್ಯಕ್ರಮವು ಉದ್ಘಾಟನೆಗೊಳ್ಳಲಿದೆ. ನಂತರ 7-00 ಗಂಟೆಗೆ ಅಸ್ತಿತ್ವ (ರಿ.) ಮಂಗಳೂರು ಇವರು ಅಭಿನಯಿಸುವ ಅರುಣ್ ಲಾಲ್ ಕೇರಳ ಇವರ ರಂಗ ಪಠ್ಯ, ವಿನ್ಯಾಸ ಮತ್ತು ನಿರ್ದೇಶನದಲ್ಲಿ ‘ಜುಗಾರಿ’ ನಾಟಕ ಪ್ರದರ್ಶನಗೊಳ್ಳಲಿದೆ. ದಿನಾಂಕ 06-04-2024ರಂದು ಎರಡನೇ ದಿನ ಬ್ರಹ್ಮಾವರ ತೆಂಕು ಬಿರ್ತಿ ಅಂಕದ ಮನೆ ಜಾನಪದ ಕಲಾ ತಂಡ (ರಿ.) ಪ್ರಸ್ತುತ ಪಡಿಸುವ ‘ಜನಪದ ಸಂಜೆ’ಯೊಂದಿಗೆ ಕಾರ್ಯಕ್ರಮ ಆರಂಭವಾಗಿ ರಾಜ್ ಗುರು ಹೊಸಕೋಟೆ ಇವರ ರಚನೆ, ವಿನ್ಯಾಸ, ಸಂಗೀತ ಮತ್ತು ನಿರ್ದೇಶನದಲ್ಲಿ ಬೆಂಗಳೂರಿನ ರಂಗಪಯಣ ಪ್ರಸ್ತುತ ಪಡಿಸುವ ‘ನವರಾತ್ರಿಯ ಕೊನೆ ದಿನ’…

Read More

ನಿರಂತರ ಸಾಹಿತ್ಯಾಧ್ಯಯನ, ಬರಹ ಅದರಲ್ಲೂ ವಿಶೇಷವಾಗಿ ಪ್ರಕೃತಿ ಮತ್ತು ವನ್ಯಜೀವಿ ಛಾಯಾಗ್ರಹಣದಲ್ಲಿ ಆಸಕ್ತಿ ಹೊಂದಿರುವ ನವೀನಕೃಷ್ಣ ಎಸ್. ಉಪ್ಪಿನಂಗಡಿ ಅವರ ಚೊಚ್ಚಲ ಕೃತಿ ‘ಹೆಜ್ಜೆ ಊರುವ ತವಕ’ವು ಅವರ ಹವ್ಯಾಸಗಳಲ್ಲಿರುವ ಪ್ರಾಮಾಣೀಕತೆಯ ಪ್ರತೀಕವಾಗಿ ಮೂಡಿಬಂದಿದೆ. ‘ಹೆಜ್ಜೆ ಊರುವ ತವಕ’ವು ಮೂರು ಭಾಗಗಳನ್ನು ಹೊಂದಿದ್ದು, ಮೊದಲ ಭಾಗ ಪಕ್ಷಿ ಜಗತ್ತಿನ ವಿಸ್ಮಯಗಳಿಗೆ ತೆರೆದ ಮಡಿಲಾದರೆ, ಎರಡನೇ ಭಾಗವು ಲೇಖಕರು ಕೈಗೊಂಡ ಚಾರಣಗಳ ಕುರಿತಾದ ಅನುಭವಾತ್ಮಕ ಬರಹಗಳಿಂದ ಕೂಡಿದೆ. ಮೂರನೇ ಭಾಗದಲ್ಲಿ ನಿಸರ್ಗ ಜಗತ್ತನ್ನು ಅನಾವರಣಗೊಳಿಸಿದ ಪ್ರಸಿದ್ಧ ಲೇಖಕರ ಕೃತಿಗಳ ಕುರಿತಾದ ವಿಮರ್ಶಾ ಬರಹಗಳಿದ್ದು, ಪ್ರಾಕೃತಿಕ ವಿದ್ಯಮಾನಗಳನ್ನು ಧ್ವನಿಸಿದ ರೀತಿಯು ಸೊಗಸಾಗಿ ಮೂಡಿಬಂದಿದೆ. ವಿಸ್ಮಯ ಮತ್ತು ಆಲೋಚನೆಗಳಿಗೆ ನಿಲುಕದ ಪಕ್ಷಿ ಜಗತ್ತಿನ ಸೂಕ್ಷ್ಮ ಅವಲೋಕನಗಳನ್ನು ಕೃತಿಯ ಮೊದಲ ಭಾಗದಲ್ಲಿ ಕಾಣಬಹುದು. ಎಳವೆಯ ಮುಗ್ಧ ಮನಸ್ಸುಗಳು ಅಜ್ಜಿ ಮನೆಯ ಆಸರೆಯನ್ನು ಬಯಸುವಂತೆ ತನ್ನ ಅಜ್ಜಿ ಮನೆಯನ್ನು ನೆಚ್ಚಿಕೊಳ್ಳುವ ಲೇಖಕರು ರಜಾ ದಿನಗಳಲ್ಲಿ ಅಲ್ಲಿ ಉಳಿದುಕೊಂಡುದುದರ ಫಲವೋ ಎಂಬಂತೆ ಕೃತಿಯಲ್ಲಿ ಆ ಕುರಿತಾದ ಬರಹಗಳು ಅನಾವರಣಗೊಂಡಿವೆ. ಬೇಸಿಗೆಯ…

Read More

ಮಂಗಳೂರು : ಅರೆಹೊಳೆ ಪ್ರತಿಷ್ಠಾನದ ವತಿಯಿಂದ ನಂದ ಗೋಕುಲ, ಕಲಾಭಿ ಮತ್ತು ಕೆನರಾ ಕಲ್ಚರಲ್ ಅಕಾಡೆಮಿ ಸಹಯೋಗದೊಂದಿಗೆ ರಾಜ್ಯ ಮಟ್ಟದ ಒಂಭತ್ತನೆ ‘ಅರೆಹೊಳೆ ನಾಟಕೋತ್ಸವ’ವು ದಿನಾಂಕ 04-01-2024ರಿಂದ 07-04-2024ರವರೆಗೆ ಮಂಗಳೂರಿನ ಕೆನರಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ. ದಿನಾಂಕ 04-01-2024ರಂದು ಡಾ. ಶ್ರೀಪಾದ್ ಭಟ್ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಮೈಸೂರಿನ ‘ನಟನ’ ತಂಡದ ಮೇಘ ಸಮೀರ ಮತ್ತು ದಿಶಾ ರಮೇಶ್ ಅಭಿನಯಿಸುವ ‘ಕಣಿವೆಯ ಹಾಡು’, ದಿನಾಂಕ 05-01-2024ರಂದು ರಾಜೇಂದ್ರ ಕಾರಂತ್ ರಚನೆ ಮತ್ತು ನಿರ್ದೇಶನದಲ್ಲಿ ಬೈಂದೂರಿನ ಲಾವಣ್ಯ ತಂಡದವರು ಪ್ರಸ್ತುತ ಪಡಿಸುವ ‘ನಾಯಿ ಕಳೆದಿದೆ’, ದಿನಾಂಕ 06-01-2024ರಂದು ರೋಹಿತ್ ಎಸ್. ಬೈಕಾಡಿ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಮಣಿಪಾಲದ ಸಂಗಮ ಕಲಾವಿದೆರ್ ಅಭಿನಯಿಸುವ ‘ಮೃತ್ಯುಂಜಯ’ ಮತ್ತು ದಿನಾಂಕ 07-01-2024ರಂದು ರಾಜ್ ಗುರು ಹೊಸ ಕೋಟೆ ರಚನೆ, ವಿನ್ಯಾಸ ಮತ್ತು ನಿರ್ದೇಶನದಲ್ಲಿ ಬೆಂಗಳೂರಿನ ರಂಗಪಯಣ ಪ್ರಸ್ತುತ ಪಡಿಸುವ ‘ನವರಾತ್ರಿಯ ಕೊನೆ ದಿನ’ ನಾಟಕ ಪ್ರದರ್ಶನಗಳು ನಡೆಯಲಿದೆ. ಕಣಿವೆಯ ಹಾಡು ನಾಟಕದ ಕುರಿತು : ಮೂಲತಃ…

Read More

ಶಿವಮೊಗ್ಗ : ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಸಮಿತಿ ನೇತೃತ್ವದಲ್ಲಿ ವಾಸುದೇವ ಭೂಪಾಳಂ ಅವರ ಕವನಗಳ ಗಾಯನ, ವಾಚನ ಸ್ಪರ್ಧೆ ಕಾರ್ಯಕ್ರಮವು ದಿನಾಂಕ 31-03-2024ರಂದು ಶಿವಮೊಗ್ಗದ ನಿವೃತ್ತಿ ನೌಕರರ ಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕ. ಸಾ. ಪ. ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ “ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೋರಾಟ, ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರವನ್ನು ಸದಾಜಾಗೃತವಾಗಿಡುವಲ್ಲಿ ವಾಸುದೇವ ಭೂಪಾಳಂ ಅವರ ಪಾತ್ರ ಪ್ರಮುಖವಾಗಿತ್ತು. ವಸುದೇವ ಭೂಪಾಳಂ ಅವರು ಹದಿನೆಂಟಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ. ಕವನ, ಮಕ್ಕಳ ಸಾಹಿತ್ಯ, ಪ್ರವಾಸ ಕಥನ, ಕಥೆ, ವೈಚಾರಿಕತೆಯ ಕೃತಿಗಳು ಆ ಕಾಲದಲ್ಲಿ ಮೆಚ್ಚುಗೆ ಪಡೆದಿದ್ದವು. ಅವರು ಬರೆದ ‘ದೇವರು ಸತ್ತ’ ಕೃತಿ ಸದ್ದುಮಾಡಿತ್ತು.” ಎಂದು ವಿವರಿಸಿದರು. ನಿವೃತ್ತ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ಡಿ. ಎಂ. ಚಂದ್ರಶೇಖರ ಅವರು ಭೂಪಾಳಂ ಅವರ ಕವನ ವಾಚಿಸುವ ಮೂಲಕಕಾರ್ಯಕ್ರಮವನ್ನು ಉದ್ಘಾಟಿಸಿದರು.  ತಾಲ್ಲೂಕು ಅಧ್ಯಕ್ಷರಾದ ಮಹಾದೇವಿ, ಜಿಲ್ಲಾ ಕೋಶಾಧ್ಯಕ್ಷರಾದ ಎಂ. ನವೀನ್ ಕುಮಾರ್ ಉಪಸ್ಥಿತರಿದ್ದರು. ಗಾಯಕಿ ಲಕ್ಷ್ಮೀ ಮಹೇಶ್…

Read More