Author: roovari

ಬೆಂಗಳೂರು : ಚೌಕಿ ಮನೆ ಟ್ರಸ್ಟ್ ಪ್ರಸ್ತುತ ಪಡಿಸುವ ‘ನಿಮ್ಮೊಳಗಿನ ಜಗತ್ತು’ ಕಲ್ಪನೆಯ ಕುರಿತು ನಟನಾ ಕಾರ್ಯಾಗಾರವನ್ನು ದಿನಾಂಕ 29 ಜೂನ್ 2025ರಿಂದ 05 ಜುಲೈ 2025ರವೆರೆಗೆ ಬೆಂಗಳೂರಿನ ಜೆ.ಪಿ. ನಗರದಲ್ಲಿರುವ ಅನ್ ಟೈಟಲ್ ಆರ್ಟ್ಸ್ ಫೌಂಡೇಷನ್ ಇಲ್ಲಿ ಹಮ್ಮಿಕೊಳ್ಳಲಾಗಿದೆ. ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆ ಮತ್ತು ಹೆಗ್ಗೋಡು ನೀನಾಸಂ ಇದರ ಹಳೆಯ ವಿದ್ಯಾರ್ಥಿ ಮಂಜು ಕಾಸರಗೋಡು ಇವರು ಈ ಕಾರ್ಯಾಗಾರವನ್ನು ನಡೆಸಿಕೊಡಲಿದ್ದು, ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಾವಣೆಗೆ 9900864577 ಸಂಖ್ಯೆಯನ್ನು ಸಂಪರ್ಕಿಸಿರಿ.

Read More

ಉಡುಪಿ : ಉಡುಪಿಯ ಯಕ್ಷಗಾನ ಕಲಾರಂಗ, ತಲ್ಲೂರು ಕನಕಾ-ಅಣ್ಣಯ್ಯ ಶೆಟ್ಟಿ ನೆನಪಿನಲ್ಲಿ ವಿದ್ವಾಂಸರಿಗೆ ನೀಡುವ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ಗೆ ನಾಡಿನ ಹಿರಿಯ ಬಹುಶ್ರುತ ವಿದ್ವಾಂಸ, ಬಹುಭಾಷಾ ವಿಶಾರದ, ಏಕವ್ಯಕ್ತಿ ಯಕ್ಷಗಾನದ ಹರಿಕಾರ, ಹಲವು ಶ್ರೇಷ್ಠ ಗ್ರಂಥಗಳನ್ನು ಸಾರಸ್ವತ ಲೋಕಕ್ಕೆ ನೀಡಿ ವಿದ್ವಜ್ಜನ ಗೌರವಕ್ಕೆ ಭಾಜನರಾದ ಶತಾವಧಾನಿ ಡಾ. ಆರ್. ಗಣೇಶ್ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭ 04 ಜುಲೈ 2025ರ ಶುಕ್ರವಾರ ಸಂಜೆ ಘಂಟೆ 4.00ಕ್ಕೆ ಸಂಸ್ಥೆಯ ಐ. ವೈ. ಸಿ. ಸಭಾಂಗಣದಲ್ಲಿ ನಡೆಯಲಿದೆ. ಎಂದು ಸಂಸ್ಥೆಯ ಅಧ್ಯಕ್ಷರಾದ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿರುತ್ತಾರೆ. ತಲ್ಲೂರು ಫ್ಯಾಮಿಲಿ ಟ್ರಸ್ಟ್ ಪ್ರಾಯೋಜಿತ ಈ ಪ್ರಶಸ್ತಿಯು ರೂ.60,000 ನಗದು ಪುರಸ್ಕಾರ ಒಳಗೊಂಡಿದೆ.

Read More

ಉಪ್ಪಿನಕುದ್ರು :  “ಪ್ರತಿಭೆ ನಿಮ್ಮದು ವೇದಿಕೆ ನಮ್ಮದು” 2025ರ ಕಾರ್ಯಕ್ರಮದಡಿ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ ಸತತ 108ನೇ ತಿಂಗಳ ಕಾರ್ಯಕ್ರಮ ದಿನಾಂಕ 15 ಜೂನ್ 2025ರಂದು  ವಿಷ್ಣು ಸಹಸ್ರನಾಮದೊಂದಿಗೆ ಆರಂಭವಾಯಿತು. ಅಧ್ಯಕ್ಷತೆಯನ್ನು ನಿವೃತ್ತ ಶಿಕ್ಷಕ ಸದಾಶಿವ ಐತಾಳ್, ಉಪ್ಪಿನಕುದ್ರು ವಹಿಸಿದ್ದರು. ವೇದಿಕೆಯಲ್ಲಿ ನಿವೃತ್ತ ಪ್ರಾಂಶುಪಾಲ ಎಮ್. ರತ್ನಾಕರ ಪೈ, ಉಪನ್ಯಾಸಕಿ ಮಾಲತಿ ಜಿ. ಪೂಜಾರಿ, ಶ್ರೀರಕ್ಷಾ ಎಸ್. ಪೈ, ವಸಂತಿ ಆರ್. ಪಂಡಿತ್ ಹಾಗೂ ಅಕಾಡೆಮಿ ಅಧ್ಯಕ್ಷರಾದ ಭಾಸ್ಕರ್ ಕೊಗ್ಗ ಕಾಮತ್ ಉಪಸ್ಥಿತರಿದ್ದರು. ವಸಂತಿ ಆರ್. ಪಂಡಿತ್ ಇವರನ್ನು    ಗೊಂಬೆಯಾಟ ಅಕಾಡೆಮಿ ವತಿಯಿಂದ ಸನ್ಮಾನಿಸಲಾಯಿತು. ವರದರಾಯ ಕಾಮತ್ ಮತ್ತು ವೀಣಾ ಕಾಮತ್ ಇವರನ್ನು ಗೌರವಿಸಲಾಯಿತು. ವಸಂತಿ ಆರ್. ಪಂಡಿತ್ ಕುಂದಾಪುರ  ಇವರು ನಡೆಸಿಕೊಟ್ಟ ಭಜನ್ ಸಂಧ್ಯಾ ಕಾರ್ಯಕ್ರಮ ಅದ್ಭುತವಾಗಿ ಮೂಡಿ ಬಂತು.  ಶಾಮ್ ಜಿ. ಎನ್. ಪೂಜಾರಿ ಗಂಗೊಳ್ಳಿ ಇವರ ಕೊಳಲು ವಾದನ ಹಾಗೂ ಆಕಾಂಕ್ಷಾ ಎಸ್. ಪೈ ಇವರ ಭಾವಗೀತೆ ಪ್ರೇಕ್ಷಕರ ಗಮನ ಸೆಳೆಯಿತು. ಭಾಸ್ಕರ್ ಕೊಗ್ಗ ಕಾಮತ್ ನಿರೂಪಿಸಿದರು.

Read More

ಮಂಗಳೂರು : ನಾಟ್ಯನಿಕೇತನ (ರಿ.) ಕೊಲ್ಯ ಕೋಟೆಕಾರ್ ಆಯೋಜಿಸೀದಾ ನಾಟ್ಯಮೋಹನ ನವತ್ಯುತ್ಸವ ನೃತ್ಯ ಸರಣಿಯ 18ನೇ ಕಾರ್ಯಕ್ರಮ ದಿನಾಂಕ 18 ಜೂನ್ 2025ನೇ ಬುಧವಾರದಂದು ಸಂಜೆ ಘಂಟೆ 6.00ಕ್ಕೆ ಕೊಲ್ಯದಲ್ಲಿರುವ ನಾಟ್ಯನಿಕೇತನ ನೃತ್ಯಾಂಗಣದಲ್ಲಿ ನಡೆಯಲಿದೆ. ಸಮಾರಂಭದಲ್ಲಿ ಗುರು ಶ್ರೀ ಉಳ್ಳಾಲ ಮೋಹನ್ ಕುಮಾರ್ ದೇವತಾ ದೀಪ ಪ್ರಜ್ವಲನೆ ಗೈಯ್ಯಲಿದ್ದು, ನಮ್ಮಕುಡ್ಲ ವಾಹಿನಿಯ ಹಿರಿಯ ಛಾಯಾಗ್ರಾಹಕರಾದ ಜಯಂತ್ ಉಳ್ಳಾಲ್ ಉಪಸ್ಥಿತರಿರುವರು. ಬಳಿಕ ನಾಟ್ಯನಿಕೇತನದ ಹಿರಿಯ ವಿದ್ಯಾರ್ಥಿ, ಶಾಂತಲಾ ನಾಟ್ಯಾಲಯ (ರಿ), ಬೆಳಗಾವಿ ಇದರ ನಿರ್ದೇಶಕಿಯಾದ ವಿದ್ವಾನ್ ಶ್ರೀಮತಿ ರೇಖಾ ಅಶೋಕ್ ಹೆಗ್ಡೆ ನೃತ್ಯ ಪ್ರಸ್ತುತ ಪಡಿಸಲಿದ್ದಾರೆ.

Read More

ಶಿಕ್ಷಣ ತಜ್ಞ, ಸಂಸ್ಕೃತಿ ಚಿಂತಕ, ಸಾಹಿತಿ ಡಾ. ಜಿ. ರಾಮಕೃಷ್ಣ ಇವರು ಶೈಕ್ಷಣಿಕ ಹಾಗೂ ಸಾಮಾಜಿಕ ವಲಯದಲ್ಲಿ ಜಿ. ಆರ್. ಎಂದೇ ಪ್ರಸಿದ್ದರು. ವಂಶದಿಂದ ಇವರ ಮೂಲ ಹೆಸರು ಗಂಪಲಹಳ್ಳಿ ರಾಮಕೃಷ್ಣ. ಸುಬ್ರಹ್ಮಣ್ಯಂ ಮತ್ತು ನರಸಮ್ಮ ದಂಪತಿಗಳ ಪುತ್ರನಾಗಿ 17 ಜೂನ್ 1939 ರಂದು ಮಾಗಡಿಯ ಸಮೀಪವಿರುವ ಕೆಂಪಸಾಗರದಲ್ಲಿ ಜನಿಸಿದರು. ಇವರು ತಮ್ಮಪ್ರಾಥಮಿಕ ಮತ್ತು ಪ್ರೌಢ ವಿದ್ಯಾಭ್ಯಾಸವನ್ನು ಕೆಂಪ ಸಾಗರ ಮತ್ತು ಮಾಗಡಿಯಲ್ಲಿ ಮುಗಿಸಿದರು. ಸಂಸಾರದಲ್ಲಿ ಆರ್ಥಿಕ ಮಿತಿ ಇದ್ದ ಕಾರಣ ಮೈಸೂರಿಗೆ ಹೋಗಿ ವಾರಾನ್ನ ಮಾಡಿಕೊಂಡು   ಕಷ್ಟಪಟ್ಟು ಓದಿ, ಸಂಸ್ಕೃತ, ವೇದ, ತತ್ವಶಾಸ್ತ್ರಗಳನ್ನು ಅಧ್ಯಯನ ಮಾಡಿ ಪಾಂಡಿತ್ಯವನ್ನು ಪಡೆದರು. ಮೈಸೂರು ವಿಶ್ವವಿದ್ಯಾಲಯದಿಂದ ಬಿ. ಎ. ಮತ್ತು ಸಂಸ್ಕೃತದಲ್ಲಿ ಎಂ. ಎ., ಪುಣೆ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ನಲ್ಲಿ ಎಂ. ಎ. ಪದವಿಯನ್ನು ಪಡೆದುಕೊಂಡ ನಂತರ ಮೈಸೂರು ವಿಶ್ವ ವಿದ್ಯಾಲಯದಿಂದ “Origin and growth of rhuta in vedic literature”  ಮಹಾಪ್ರಬಂಧಕ್ಕೆ ಪಿ. ಎಚ್. ಡಿ. ಪದವಿ ಮತ್ತು ವೇಲ್ಸ್  ವಿಶ್ವವಿದ್ಯಾಲಯದಿಂದ…

Read More

‘ಪೆನ್ ಟು ಪ್ರೀಮಿಯರ್’ ಇವರು ಮಹಿಳಾ ದಿನಾಚರಣೆ -2026ರ ಪ್ರಯುಕ್ತ ಮಹಿಳೆಯರಿಗಾಗಿ ‘ಪುಟದಿಂದ ಪರದೆಗೆ’ ಶೀರ್ಷಿಕೆಯಲ್ಲಿ ಸಣ್ಣ ಕಥೆಗಳ ಸ್ಪರ್ಧೆಯನ್ನು ಆಯೋಜಿಸಿದೆ. ಕಥೆಯನ್ನು ಕನ್ನಡ, ತುಳು ಹಾಗೂ ಕೊಂಕಣಿ ಭಾಷೆಯಲ್ಲಿ ಬರೆಯಲು ಅವಕಾಶವಿದ್ದು, ಕಥೆಯು 5,000 ಪದಸಂಖ್ಯೆಯ ಮಿತಿಯೊಳಗಿರಬೇಕು. ಆಯ್ಕೆಯಾದ ಉತ್ತಮ 9 ಕಥೆಗಳನ್ನು ಮೂರು ಕಿರುಚಿತ್ರಗಳಾಗಿ, ಮೂರು ಅಡಿಯೋ ಕಥೆಗಳಾಗಿ ಹಾಗೂ ಮೂರು ಪುರವಣಿಗಳಲ್ಲಿ ಪ್ರಕಟವಾಗಲಿವೆ. ಕಥೆಗಳನ್ನು ಕಳುಹಿಸಲು 31 ಆಗಸ್ಟ್ 2025 ಅಂತಿಮ ದಿನವಾಗಿದ್ದು. ಸ್ಪರ್ಧೆಗೆ ರೂಪಾಯಿ 200ರ ಪ್ರವೇಶ ಶುಲ್ಕವಿದೆ. ಹೆಚ್ಚಿನ ಮಾಹಿತಿಗಾಗಿ : 88926 62603/99005 65740 pentopremieregmail.com https://www.facebook.com/Pento Premier https://www.instagram.com/pentopremier

Read More

ಕಾಸರಗೋಡು : ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ (ರಿ.) ಕಾಸರಗೋಡು ಇದರ ನೂತನ ಗೌರವ ಸಲಹೆಗಾರರಾಗಿ ಮಂಗಳೂರಿನ ಕಲಾ, ಸಾಹಿತ್ಯ, ಸಾಂಸ್ಕೃತಿಕ ಸಂಘಟಕ ದೀಪಕ್ ಪೆರ್ಮುದೆ, ಮಂಗಳೂರು ಇವರನ್ನು ಸಮಿತಿಯು ಸರ್ವಾನುಮತದಿಂದ ಆಯ್ಕೆಗೊಳಿಸಿದೆ. ಮಂಗಳೂರು ಪರಿಸರದ ವಿವಿಧ ಸಂಘ -ಸಂಸ್ಥೆ, ಸಂಘಟನೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ ಇವರು ಗ್ರಾಮ ಪಂಚಾಯತ್ ಪೆರ್ಮುದೆ ಇದರ ಮಾಜಿ ಸದಸ್ಯರು. ಪೆರ್ಮುದೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯರೂ ಆಗಿರುವ ಶ್ರೀಯುತರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಚೇಳ್ಯಾರು- ಮದ್ಯ – ಕೊಡಿಪಾಡಿ, ಮಂಗಳೂರು ಹಾಗೂ ಲಯನ್ಸ್ ಕ್ಲಬ್ ಕಾಟಿಪಳ್ಳ – ಕೃಷ್ಣಪುರ ಇದರ ಮಾಜಿ ಅಧ್ಯಕ್ಷರಾಗಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವ ಇವರು ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು ಇದರ ಸದಸ್ಯರೂ ಆಗಿದ್ದಾರೆ. ಶ್ರೀ ಶಾರದಾ ಕಲಾ ಪ್ರಕಾಶನ(ರಿ.)ದ ಅದ್ಯಕ್ಷರು ಸಂಸ್ಥಾಪಕರಾಗಿರುವ ಇವರು ಶ್ರೀ ಶಾರದಾ ಯಕ್ಷಗಾನ ಮಂಡಳಿ, ಪೆರ್ಮುದೆ ಇದರ ಉಪಾಧ್ಯಕ್ಷರಾಗಿ ಅತ್ಯುತ್ತಮ ಕಾರ್ಯ…

Read More

ಮಲೆನಾಡಿನ ಭೂರಮೆ ಶೃಂಗಾರ ಉಳುವಾ ರೈತನ ಕನಸಿನ ಮಂದಾರ ಕಾಣಲು ಎಂಥಾ ಸುಂದರ ತೋಟ ನಯನ ಮನೋಹರ ನೋಟ ಎಲ್ಲಿ ನೋಡಿದರಲ್ಲಿ ಹಸಿರಿನ ವನಸಿರಿ ಬಾನೆತ್ತರ ಬೆಳೆದು ನಿಂತ ಉನ್ನತ ಗಿರಿ ವೈವಿದ್ಯಮಯ ಗಿಡ ಮರದ ಸೊಬಗು ಅಲ್ಲಲ್ಲಿ ರವಿಯ ಕಿರಣದ ಮಿನುಗು ಜುಳು ಜುಳು ಹರಿಯುವ ನೀರಿನ ಝರಿ ಧವಳ ಸೀರೆಯುಟ್ಟ ಬಳುಕುವ ನಾರಿ ಹಸಿರು ಮಾನವಗೆ ಕೊಡುವುದು ಉಸಿರು ಪರಿಸರ ವೈಭವ ಮೆರೆಯುವ ಹಸಿರು ಜೀವದಾತೆ ಜನ್ಮದಾತೆ ನಮ್ಮ ದೇವತೆ ಮನುಜ ಕುಲದ ದೈವ ಶಕ್ತಿ ಶಾಂತಿದಾತೆ ಪಶು ಪಕ್ಷಿ ಖಗ ಮೃಗಗಳ ಸಂಕುಲ ಬೀಡು ಔಷದ ಗಿಡ ಮೂಲಿಕೆಗಳ ಆಗರ ನಾಡು ಜೀವಿಸಲು ಬೇಕಾದ ಚಿರ ಸಂಪದ ಶುಕ ಪಿಕಗಳ ಉಲಿತದ ಉನ್ಮಾದ ಪ್ರಕೃತಿಯ ಮಡಿಲಲ್ಲಿ ಶಿಶುವು ನಾನು ಜೋಗುಳ ಹಾಡಿ ಮಲಗಿಸೊ ತಾಯಿ ನೀನು ಮನೆಗೊಂದು ಗಿಡ ಇರಲು ಜೀವನ ಸುಗಮ ಆರೋಗ್ಯ ರಕ್ಷಣೆಗೆ ಇದು ಸಾಧನ ತಪ್ಪದೇ ಗಿಡನೆಡಿ ವಿಮಲಾ ಭಾಗ್ವತ್, ಸಿರ್ಸಿ ಉತ್ತರ…

Read More

ಬೆಂಗಳೂರು : ರಂಗಾಸ್ಥೆ ಅಭಿನಯಿಸುವ ಜನಪದ ಹಾಗೂ ಕುಮಾರವ್ಯಾಸ ಭಾರತದ ಸಂಗಮ ‘ದ್ರೋಪತಿ ಹೇಳ್ತವ್ಳೆ’ ನಾಟಕ ಪ್ರದರ್ಶನವನ್ನು ದಿನಾಂಕ 19 ಜೂನ್ 2025ರಂದು ಸಂಜೆ 7-30 ಗಂಟೆಗೆ ಬೆಂಗಳೂರಿನ ಜೆ.ಪಿ. ನಗರದಲ್ಲಿರುವ ರಂಗಶಂಕರದಲ್ಲಿ ಹಮ್ಮಿಕೊಳ್ಳಲಾಗಿದೆ. ಗಣೇಶ ಮಂದಾರ್ತಿ ಇವರು ವಿನ್ಯಾಸ, ಸಂಗೀತ ಮತ್ತು ನಿರ್ದೇಶನ ಮಾಡಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 88674 19347, 97422 42313 ಮತ್ತು 81477 93773 ಸಂಖ್ಯೆಯನ್ನು ಸಂಪರ್ಕಿಸಿರಿ.

Read More

ಉಡುಪಿ : ಮಾಹೆಯ ಎಂ.ಐ.ಸಿ.ಯಲ್ಲಿ ನಡೆದ ಅಂತರಾಷ್ಟ್ರೀಯ ಸಮ್ಮೇಳನದ ಸಂದರ್ಭದಲ್ಲಿ ಇಂದ್ರಾಳಿ ಯಕ್ಷಗಾನ ಕೇಂದ್ರದ ಯಕ್ಷರಂಗದ ಕಲಾವಿದರಿಂದ ‘ಜಾಂಬವತಿ ಕಲ್ಯಾಣ’ ಯಕ್ಷಗಾನ ಕಾರ್ಯಕ್ರಮವು ದಿನಾಂಕ 14 ಜೂನ್ 2025ರಂದು ನಡೆಯಿತು. ಕಾರ್ಯಕ್ರಮದಲ್ಲಿ ಎಂ.ಐ.ಸಿ. ನಿರ್ದೇಶಕರು, ಮಲ್ಟಿಮೀಡಿಯ ಸಂಪನ್ಮೂಲ ಕೇಂದ್ರದ ಸಂಯೋಜಕಿ ಡಾ. ಶುಭಾ ಎಚ್.ಎಸ್. ಇವರುಗಳು ಉಪಸ್ಥಿತರಿದ್ದರು.

Read More