Subscribe to Updates
Get the latest creative news from FooBar about art, design and business.
Author: roovari
ಮಂಗಳೂರು: ಪುತ್ತೂರು ತಾಲೂಕು ಸರ್ವೆ ಗ್ರಾಮದ ಕಲ್ಪನೆಯಲ್ಲಿ ನಾಲ್ಕು ದಶಕಗಳ ಹಿಂದೆ ಶ್ರೀ ರಾಜರಾಜೇಶ್ವರಿ ದೇವಸ್ಥಾನವನ್ನು ಸ್ಥಾಪಿಸಿದ ನಿವೃತ್ತ ಅರಣ್ಯ ರಕ್ಷಕ ಮತ್ತು ಯಕ್ಷಗಾನ ಕಲಾಪೋಷಕ ಕಲ್ಪನೆ ಚಂದು ಗೌಡ ಇವರಿಗೆ ಸನ್ಮಾನ ಕಾರ್ಯಕ್ರಮ ದಿನಾಂಕ 29 ಡಿಸೆಂಬರ್ 2024ರಂದು ನಡೆಯಿತು. ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆಯ ಕಾರ್ಯಾಧ್ಯಕ್ಷ ಹಾಗೂ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿಯವರು ವಯೋವೃದ್ಧ ಚಂದು ಗೌಡ ಮತ್ತು ನೀಲಮ್ಮ ದಂಪತಿಯನ್ನು ಶಕ್ತಿನಗರದಲ್ಲಿರುವ ಅವರ ಮಗಳ ಮನೆಯಲ್ಲಿ ಶಾಲು ಸ್ಮರಣಿಕೆ ಮತ್ತು ಫಲ ವಸ್ತುಗಳೊಂದಿಗೆ ಸನ್ಮಾನಿಸಿದರು. ತಮ್ಮ ಕಾಲೇಜು ದಿನಗಳಲ್ಲಿ ಹವ್ಯಾಸಿ ಕಲಾವಿದರ ಯಕ್ಷಗಾನ ಬಯಲಾಟ ಮತ್ತು ತಾಳಮದ್ದಳೆಗಳಿಗೆ ಚಂದು ಗೌಡರು ನೀಡಿದ ಪ್ರೋತ್ಸಾಹವನ್ನು ಸ್ಮರಿಸಿ ಮಾತನಾಡಿದ ಭಾಸ್ಕರ ರೈ ಕುಕ್ಕುವಳ್ಳಿ “ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಕೋಟೆಕಾರ್ ಶಂಕರ ಮಠದ ಧರ್ಮಾಧಿಕಾರಿ ಬೋಲ್ಲಾವ ಸತ್ಯ ಶಂಕರರು ನೀಡುತ್ತಿದ್ದ ಯಕ್ಷಗಾನ ತರಬೇತಿ ಸಂದರ್ಭದಲ್ಲಿ…
ಮಂಗಳೂರು : ಹವ್ಯಾಸಿ ಬಳಗ ಕದ್ರಿ (ರಿ.) ಮಂಗಳೂರು ಇದರ ತ್ರಿಂಶತಿ ಸಂಭ್ರಮ ಸಮಾರಂಭವನ್ನು ದಿನಾಂಕ 05 ಜನವರಿ 2024ರಂದು ಸಂಜೆ 4-00 ಗಂಟೆಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಆ ಪ್ರಯುಕ್ತ ಯಕ್ಷಗಾನ ತಾಳಮದ್ದಳೆ, ಕೀರ್ತಿಶೇಷ ಕಲಾವಿದರ ಸಂಸ್ಮರಣೆ, ಯಕ್ಷ ಸುವಾಸಿನಿ ಪುರಸ್ಕಾರ, ಯಕ್ಷ ಪ್ರಶಸ್ತಿ ಪ್ರದಾನ – ಯಕ್ಷ ಸಂಮಾನ, ಯಕ್ಷ ಗೌರವಾಭಿನಂದನೆ ಮತ್ತು ಯಕ್ಷಗಾನ ಪ್ರದರ್ಶನ ನಡೆಯಲಿದೆ. ಸಾಯಂಕಾಲ 4-00 ಗಂಟೆಗೆ ಪ್ರಸಿದ್ಧ ಅರ್ಥಧಾರಿಗಳಿಂದ ‘ಶರಣಸುತ ತರಣಿಸೇನ’ ಯಕ್ಷಗಾನ ತಾಳಮದ್ದಳೆ, 6-00 ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಯಂ.ಯಂ.ಸಿ. ರೈ ಯವರಿಗೆ ನುಡಿನಮನ, ಕೀರ್ತಿಶೇಷ ಕಲಾವಿದರ ಸಂಸ್ಮರಣೆ, ಯಕ್ಷ ಸುವಾಸಿನಿ ಪುರಸ್ಕಾರ, ಹಿರಿಯ ವಿಶ್ರಾಂತ ಕಲಾವಿದರಿಗೆ ‘ಯಕ್ಷ ಪ್ರಶಸ್ತಿ’ ಪ್ರದಾನ, ಯಕ್ಷಾ ಸಾಧಕರಿಗೆ ‘ಯಕ್ಷ ಸಂಮಾನ’ ಮತ್ತು ಯಕ್ಷ ಗೌರವಾಭಿನಂದನೆ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ‘ರಾಜಾ ದಂಡಕ’ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.
ತೆಕ್ಕಟ್ಟೆ: ಯಶಸ್ವೀ ಕಲಾವೃಂದ (ರಿ.) ಕೊಮೆ ತೆಕ್ಕಟ್ಟೆ, ರಂಗಸಂಪದ ಕೋಟ, ಧಮನಿ ಟ್ರಸ್ಟ್ ತೆಕ್ಕಟ್ಟೆ ಇದರ ಸಂಯುಕ್ತ ಆಶ್ರಯದಲ್ಲಿ ‘ಸಿನ್ಸ್ 1999 ಶ್ವೇತಯಾನ-93’ ಕಾರ್ಯಕ್ರಮದಡಿಯಲ್ಲಿ ಆಯೋಜಿಸಲಾದ ‘ನಾಟಕಾಷ್ಟಕ’ ಕಾರ್ಯಕ್ರಮದ 5ನೇ ದಿನದ ಕಾರ್ಯಕ್ರಮವು ದಿನಾಂಕ 30 ಡಿಸೆಂಬರ್ 2024 ರಂದು ತೆಕ್ಕಟ್ಟೆಯ ಹಯಗ್ರೀವದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಕವಿ ಅಭಿಲಾಷ ಸೋಮಯಾಜಿ ಮಾತನಾಡಿ “ಕೇವಲ ಕವಿತೆಗಳನ್ನಾಧರಿಸಿದ ಏಕವ್ಯಕ್ತಿ ನಾಟಕವನ್ನು ರಂಗದಲ್ಲಿ ಪ್ರಯೋಗಿಸಲಾಗಿರುವ ನಾಟಕ ‘ಹಕ್ಕಿ ಮತ್ತು ಅವಳು’. ಹೆಣ್ಣಿನ ಮನಸ್ಥಿತಿಯನ್ನು ವಿವಿಧ ಆಯಾಮಗಳಲ್ಲಿ ಬಿಂಬಿಸುವ ಪ್ರಸ್ತುತಿ ಇದಾಗಿದೆ. ಹೆಣ್ಣೋರ್ವಳು ಅಬಲೆಯಲ್ಲ, ಸಬಲೆ ಎನ್ನುವುದನ್ನು ರಂಗದ ಮೂಲಕ ಸಮಾಜಕ್ಕೆ ಬಿತ್ತರಿಸುವ ಕಾರ್ಯ ಸಫಲವಾಗಿದೆ.” ಎಂದು ಹೇಳಿದರು. ಶ್ರೀಮತಿ ವಿನಿತಾ ಹಂದೆ, ನಟಿ ಕಾವ್ಯ ಹಂದೆ, ಉಪನ್ಯಾಸಕ ಸುಜಯೀಂದ್ರ ಹಂದೆ, ಕಾರ್ಯದರ್ಶಿ ವೆಂಕಟೇಶ ವೈದ್ಯ ಉಪಸ್ಥಿತರಿದ್ದರು. ಗಣೇಶ್ ಅಮೀನ್ ಕೊಮೆ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ಡಾ. ಶ್ರೀಪಾದ ಭಟ್ ನಿರ್ದೇಶನದಲ್ಲಿ ಕಾವ್ಯಾಧಾರಿತ ಏಕವ್ಯಕ್ತಿ ನಾಟಕ ‘ಹಕ್ಕಿ ಮತ್ತು ಅವಳು’ ಪ್ರಸ್ತುತಿಗೊಂಡಿತು.
ಟಿ. ಚೌಡಯ್ಯನವರು ಮೈಸೂರು ಸಮೀಪದ ಕಾವೇರಿ ಮತ್ತು ಕಪಿಲಾ ನದಿ ಸಂಗಮದಲ್ಲಿರುವ ತಿರುಮಕೂಡಲು ಎಂಬ ಹಳ್ಳಿಯಲ್ಲಿ ಒಕ್ಕಲಿಗ ಕುಟುಂಬದಲ್ಲಿ 1895ರಲ್ಲಿ ಜನಿಸಿದರು. ತಂದೆ ಅಗಸ್ತ್ಯೇ ಗೌಡ ತಾಯಿ ಸುಂದರಮ್ಮ. ಚೌಡಯ್ಯನವರು 1910ರಲ್ಲಿ ಮೈಸೂರು ರಾಜ ಮನೆತನದ ಆಸ್ಥಾನ ಸಂಗೀತಗಾರರಾದ ಗಾನ ವಿಶಾರದ ಬಿಡಾರಂ ಕೃಷ್ಣಪ್ಪ ಇವರ ಶಿಷ್ಯರಾಗಿದ್ದರು. 1918ರವರೆಗೆ ಗುರುಕುಲ ಪದ್ಧತಿಯಲ್ಲಿ ಅತ್ಯಂತ ಕಠಿಣ ಮತ್ತು ಶಿಸ್ತಿನ ಶ್ರದ್ಧಾಪೂರ್ವಕ ಅಭ್ಯಾಸದಿಂದ ಶ್ರೇಷ್ಠ ಪಿಟೀಲು ವಾದಕರಾಗಿದ್ದು, ಗುರುಗಳ ಪ್ರೋತ್ಸಾಹ ಪಾಂಡಿತ್ಯದಿಂದಾಗಿ ಇವರ ಸಮಕಾಲೀನರಾದವರೆಲ್ಲರಿಂದ ಪ್ರೀತಿ, ಗೌರವ ಪಡೆದು ಖ್ಯಾತರಾದವರು. ಪ್ರಸಿದ್ಧ ಗಾಯಕ ಜಿ.ಎನ್. ಬಾಲಸುಬ್ರಮಣ್ಯಂ ತಮ್ಮ ಸಂಗೀತ ಕಚೇರಿಯನ್ನು ಏರ್ಪಡಿಸುವ ಮೊದಲು, ಪಿಟೀಲು ವಾದನಕ್ಕೆ ಚೌಡಯ್ಯನವರು ದೊರೆಯುವ ಸಾಧ್ಯತೆಯನ್ನು ನೋಡಿ ದಿನ ನಿಗದಿಪಡಿಸುವಂತೆ ಸಭಾ ಕಾರ್ಯದರ್ಶಿಗಳಿಗೆ ಹೇಳುತ್ತಿದ್ದರು. ಮಾತ್ರವಲ್ಲದೆ ಎಲ್ಲಾ ಪ್ರಸಿದ್ಧ ಸಂಗೀತಗಾರರೂ ಚೌಡಯ್ಯನವರೇ ಪಿಟೀಲು ವಾದನಕ್ಕೆ ಬರುವುದನ್ನು ಬಯಸುತ್ತಿದ್ದರು. ಗುರು ಬಿಡಾರಂ ಕೃಷ್ಣಪ್ಪನವರು ಸಾರ್ವಜನಿಕ ಸಂಗೀತ ಕಾರ್ಯಕ್ರಮಕ್ಕೆ ನಿಗದಿಪಡಿಸಿದ ಪಿಟೀಲುವಾದಕರು ಕಾರಣಾಂತರಗಳಿಂದ ಬರಲಾಗದ ಕಾರಣ ಪಿಟೀಲು ವಾದಕರಾಗಿ ತಮ್ಮ 17ನೇ ವಯಸ್ಸಿಗೆ…
ದಕ್ಷಿಣ ಕನ್ನಡ ಜಿಲ್ಲೆ ಮೂಲ್ಕಿಯ ಕೆರೆಕಾಡಿನ ಉಮೇಶ್ ಜೆ ಆಚಾರ್ಯ ಹಾಗೂ ಸಂಧ್ಯಾ ಯು ಆಚಾರ್ಯ ಇವರ ಮಗಳಾಗಿ 13.11.1999ರಂದು ಪೂಜಾ ಯು. ಆಚಾರ್ಯ ಅವರ ಜನನ. M. Com. (Finance) ಇವರ ವಿದ್ಯಾಭ್ಯಾಸ ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ (Rathnagiri Ventures Pvt Ltd) ಅಕೌಂಟೆಂಟ್ ಉದ್ಯೋಗ ನಿರ್ವಹಣೆಯನ್ನು ಮಾಡುತ್ತಿದ್ದಾರೆ. ಯಕ್ಷಗಾನ ಗುರುಗಳು:- ದಿ.ಸತೀಶ್ ಆಚಾರ್ಯ, ಜಗನ್ನಾಥ ಆಚಾರ್ಯ, ಶ್ರೀ ಪ್ರಸಾದ್ ಚೆರ್ಕಾಡಿ, ಅಜಿತ್ ಕೆರೆಕಾಡು ಪ್ರಸ್ತುತ ಶ್ರೀ ರಕ್ಷಿತ್ ಶೆಟ್ಟಿ ಪಡ್ರೆಯವರಲ್ಲಿ ಯಕ್ಷಗಾನ ಕಲಿಯುತ್ತಿದ್ದಾರೆ. ಬಾಲ್ಯದಿಂದಲೇ ಯಕ್ಷಗಾನದ ಬಗ್ಗೆ ಆಸಕ್ತಿ ಇತ್ತು. ತಂದೆ ತಾಯಿ ಅಜ್ಜ ಎಲ್ಲರಿಗೂ ಯಕ್ಷಗಾನವೆಂದರೆ ಅಚ್ಚುಮೆಚ್ಚು, ಕಲೆ ನನಗೆ ರಕ್ತಗತವಾಗಿ ಬಂದಿದೆ ಎಂದು ಹೇಳಿದರು ತಪ್ಪಾಗಲಾರದು. ನನ್ನ ಪಿಜ್ಜ ಪಣಂಬೂರು ಗಣಪತಿ ಆಚಾರ್ ಯಕ್ಷಗಾನ ಕಲಾವಿದರು, ಅಜ್ಜ ನಾಟಕ ಕಲಾವಿದರು. ಹಿರಿಯರ ಆಶೀರ್ವಾದ, ತಂದೆ ತಾಯಿಯ ಪ್ರೋತ್ಸಾಹ ನನಗೆ ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆಯಾಯಿತು. 4ನೇ ತರಗತಿಯಲ್ಲಿ ಯಕ್ಷಗಾನದ ಪ್ರಾಥಮಿಕ ಶಿಕ್ಷಣವನ್ನು ಪಡೆಯುವುದಕ್ಕೆ ಪ್ರಾರಂಭಿಸಿ ಬಾಲ…
ಕನ್ನಡ ನಾಡು ನುಡಿ ಕಂಡ ಶ್ರೇಷ್ಠ ಸಂಗೀತ ಪ್ರತಿಭೆಗಳಲ್ಲಿ ಅಗ್ರಪಂಕ್ತಿಯಲ್ಲಿ ಸದಾ ರಾರಾಜಿಸುವವರು ಮಲ್ಲಿಕಾರ್ಜುನ ಭೀಮರಾಯಪ್ಪ ಮನ್ಸೂರ್. ಜೈಪುರ – ಅತ್ರೋಲಿ ಘರಾನಾದ ‘ಖಯಾಲಿ’ ಶೈಲಿಯ ಸಂಗೀತಗಾರರಾಗಿದ್ದ ಇವರು ಆರು ದಶಕಗಳಿಗೂ ಮಿಕ್ಕಿ ದೇಶ – ವಿದೇಶಗಳಲ್ಲಿ ತಮ್ಮ ಸಂಗೀತ ಸುಧೆ ಹರಿಸಿ ಗಾನಾಸಕ್ತರ ಹೃದಯದಲ್ಲಿ ಚಿರಸ್ಥಾಯಿಯಾಗಿದ್ದಾರೆ. ಕರ್ನಾಟಕದ ಧಾರವಾಡ ಸಮೀಪ ‘ಮನಸೂರ’ ಎಂಬ ಚಿಕ್ಕ ಗ್ರಾಮದಲ್ಲಿ ಭೀಮರಾಯಪ್ಪ ಹಾಗೂ ನೀಲಮ್ಮ ದಂಪತಿಯ ದ್ವಿತೀಯ ಪುತ್ರನಾಗಿ ಜನಿಸಿದ್ದು 31 ಡಿಸೆಂಬರ್ 1911ರಂದು. ಎಳವೆಯಲ್ಲಿಯೇ ಮನ್ಸೂರ್ ಜೀ ಅವರನ್ನು ಕಲೆ ಸೆಳೆದದ್ದು ನಾಟಕ ಕ್ಷೇತ್ರದೆಡೆಗೆ. ನಾಟಕ ಹಾಗೂ ಸಂಗೀತ ಪ್ರಿಯರಾಗಿದ್ದ ತಂದೆ ಭೀಮರಾಯಪ್ಪರು ಮಲ್ಲಿಕಾರ್ಜುನರ ಸಂಗೀತ ಪ್ರಜ್ಞೆಯನ್ನು ಬಾಲ್ಯದಲ್ಲೇ ಕಂಡರಿದಿದ್ದರು. ತನ್ನ 9ನೇ ಹರೆಯದಲ್ಲಿ ಶಾಲೆಗೆ ವಿದಾಯ ಹೇಳಿ ಅಣ್ಣ ಬಸವರಾಜರೊಂದಿಗೆ ವಾಮನ ರಾವ್ ಮಾಸ್ಟರರ ನಾಟಕ ಕಂಪನಿಗೆ ಸೇರ್ಪಡೆಗೊಂಡರು. ಈ ನಾಟಕ ತಂಡದಲ್ಲಿ ಪ್ರಹ್ಲಾದ, ಧ್ರುವ, ನಾರದ, ಹೀಗೆ ಹಲವಾರು ಪಾತ್ರಗಳು ಜನಮನ್ನಣೆಗಳಿಸಿದ್ದರೂ, ಸಾಧನೆಗೈದದ್ದು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ. ಪಂಡಿತ್ ಮಲ್ಲಿಕಾರ್ಜುನ…
ಪುತ್ತೂರು : ಕರ್ನಾಟಕ ಭಾವೈಕ್ಯ ಪರಿಷತ್ ವತಿಯಿಂದ ‘ಮಾದಕತೆ ಮಾರಣಾಂತಿಕ’ ಪುಸ್ತಕ ಬಿಡುಗಡೆ ಅಂಗವಾಗಿ ಬಹುಭಾಷಾ ಕವಿಗೋಷ್ಠಿಯು ದಿನಾಂಕ 26 ಡಿಸೆಂಬರ್ 2024ರಂದು ಪುತ್ತೂರು ಸುದಾನ ಮೈದಾನದಲ್ಲಿ ನಡೆಯಿತು. ಈ ಸಮಾರಂಭದಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಖ್ಯಾತ ಸಾಹಿತಿ ಹೆಚ್. ಭೀಮರಾವ್ ವಾಷ್ಠರ್ ಸುಳ್ಯ ಮಾತನಾಡಿ “ಕಣ್ಣಾರೆ ಕಂಡ ವಿಷಯಗಳಿಗೆ ಮತ್ತು ಭಾವನೆಗಳಿಗೆ ಅಕ್ಷರ ರೂಪ ಕೊಡುವ ಮೂಲಕ ಕವಿಗಳು ಕ್ರಾಂತಿಕಾರಿ ಕವನಗಳನ್ನು ರಚಿಸಿ ಸಮಾಜವನ್ನು ಒಳಿತಿನ ಹಾದಿಗೆ ಸೇರಿಸುವ ದೇಶದ ಕಾವಲುಗಾರರು. ಸಾಹಿತ್ಯಕ್ಕೆ ಜನರ ಮನಸ್ಸನ್ನು ಒಗ್ಗೂಡಿಸುವ ಅಭೂತಪೂರ್ವ ಶಕ್ತಿಯಿದೆ. ಸಾಹಿತ್ಯವು ನಿರಂತರ ಹರಿಯುವ ತೊರೆಯಾಗಿದ್ದು, ಇಡೀ ಜಗತ್ತು ಈ ಶುದ್ಧ ತೊರೆಯನ್ನು ಪರಿವರ್ತನೆಗಾಗಿ ಬಳಸಿ ಅಮೂಲಾಗ್ರ ಬದಲಾವಣೆ ತರಬಹುದು” ಎಂದು ಹೇಳಿದರು. ಕವಿಗೋಷ್ಠಿ ಸಮಾರಂಭವನ್ನು ಹವ್ಯಾಸಿ ಪತ್ರಕರ್ತ ಕೆ.ಎ. ಅಬ್ದುಲ್ ಅಝೀಝ್ ಪುಣಚ ಉದ್ಘಾಟಿಸಿದರು. ಕೃತಿಯ ಕರ್ತೃ ನೂರೇ ಅಜ್ಮೀರ್, ಕಾರ್ಯಕ್ರಮದ ಆಯೋಜಕರಾದ ಕರ್ನಾಟಕ ಭಾವೈಕ್ಯ ಪರಿಷತ್ ಅಧ್ಯಕ್ಷ ಕೆ.ಎಂ. ಇಕ್ಬಾಲ್ ಬಾಳಿಲ, ಪುತ್ತೂರು ಪೊಲೀಸ್ ಠಾಣೆಯ ಉಪನಿರೀಕ್ಷಕ…
ಮಂಗಳೂರು : ನಿವೃತ್ತ ಬ್ಯಾಂಕ್ ಉದ್ಯೋಗಿ ಹಾಗೂ ಮಂಗಳೂರು ಸೀನಿಯರ್ ಸಿಟಿಜನ್ಸ್ ಇದರ ಸದಸ್ಯರಾದ ಕೆ. ರಾಧಾಕೃಷ್ಣ ರಾವ್ ಇವರ ಆಯ್ದ ಕಥೆಗಳನ್ನು ಶ್ರೀಮತಿ ರೋಹಿಣಿಯವರು ಸಂಪಾದಿಸಿದ್ದು, ಆಕೃತಿ ಆಶಯ ಪಬ್ಲಿಕೇಶನ್ಸ್ ವತಿಯಿಂದ “ರಾಯರ ಕಥೆಗಳು” ಎಂಬ ಕಥಾಸಂಕಲನವಾಗಿ ದಿನಾಂಕ 28 ಡಿಸೆಂಬರ್ 2024ರಂದು ಬಲ್ಮಠದ ಸಹೋದಯ ಸಭಾಂಗಣದಲ್ಲಿ ಲೋಕಾರ್ಪಣೆಗೊಂಡಿತು. ಕರ್ಣಾಟಕ ಬ್ಯಾಂಕ್ ಇದರ ಮಾಜಿ ಅಧ್ಯಕ್ಷರಾದ ಶ್ರೀ ಮಹಾಬಲೇಶ್ವರ ಭಟ್ ಕೃತಿ ಲೋಕಾರ್ಪಣೆಗೊಳಿಸಿದರು. ಕೃತಿಯ ಕುರಿತಾಗಿ ಪ್ರಕಾಶಕರಾದ ಕಲ್ಲೂರು ನಾಗೇಶ ಮಾತನಾಡಿ “ರಾಧಾಕೃಷ್ಣರು ಆಳವಾದ ಜೀವನಾನುಭವ ಉಳ್ಳವರು. ಅವರ ಕಥೆಗಳನ್ನು ಗಮನಿಸಿದರೆ ಅವರು ಕೇವಲ ಕಥೆಗಾಗಿ ಕಥೆ ಬರೆಯದೆ, ಅವರು ಕಂಡುಂಡ ಅನುಭವಗಳನ್ನು ಮುಂದಿನ ತಲೆಮಾರಿಗೆ ದಾಟಿಸಲು ಬರೆದಿದ್ದಾರೆ. ಅವರ ಕಥೆಗಳು ಹೆಚ್ಚಾಗಿ ಕುಟುಂಬ ಜೀವನದ ಆಗುಹೋಗುಗಳು, ಸಂಸಾರ ನಿರ್ವಹಣೆ, ಸಾಮಾಜಿಕ ಸಂಬಂಧಗಳು ಗಂಡು ಹೆಣ್ಣಿನ ಸಾಮರಸ್ಯ, ವೈರುಧ್ಯ, ಹೀಗೆ ಮಾನವೀಯ ಮೌಲ್ಯಗಳನ್ನು ತಿಳಿಹೇಳುವ ರೀತಿಯಲ್ಲೇ ಸಾಗುತ್ತವೆ. ವಿಜ್ಞಾನ ಪದವೀಧರರಾದರೂ ಅವರು ಸಾಹಿತ್ಯ, ಭಾಷಾ ಶಾಸ್ತ್ರ, ಶಿಕ್ಷಣ, ಸಂಗೀತ, ಕ್ರೀಡೆ…
ಬೆಂಗಳೂರಿನಲ್ಲಿ ನೃತ್ಯ ಚಟುವಟಿಕೆಗಳು ನಡೆಯುತ್ತಲೇ ಇರುತ್ತವೆ. ಕೇವಲ ವೇದಿಕೆಯ ಮೇಲೆ ನೃತ್ಯ ಪ್ರದರ್ಶನವೊಂದೇ ನೃತ್ಯಕಲಾವಿದರ ಗುರಿಯಾಗಿರಬಾರದು. ನೃತ್ಯ ಮಾಡಲು ತಕ್ಕ ಅಂಗಸೌಷ್ಟವ, ಪ್ರದರ್ಶನಕ್ಕೆ ಅಗತ್ಯವಾದ ಉತ್ತಮ ಶಿಕ್ಷಣ -ಅಭ್ಯಾಸವಷ್ಟೇ ಆಗದೇ, ಸಮಗ್ರ ಬೆಳವಣಿಗೆಯ ಕಡೆ ಆದ್ಯ ಗಮನ ನೀಡಬೇಕಾದ್ದು ಅವಶ್ಯ ಎಂಬುದನ್ನು ಮನಗಾಣಿಸಿದ್ದು, ಇತ್ತೀಚೆಗೆ ನಡೆದ ‘ಸಾಧನ ಸಂಗಮ ಡಾನ್ಸ್ ಸೆಂಟರ್’ ಇದರ ‘ಮುಕುಲ ನೃತ್ಯೋತ್ಸವ’. ಕಾಲ ಕಾಲಕ್ಕೆ ಹೊಸ ಚಿಂತನೆಗಳು, ಪ್ರಯೋಗ-ಪ್ರಯತ್ನಗಳಿಂದ ನೂತನ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಂಡು ಬರುತ್ತಿರುವ ಬಸವೇಶ್ವರ ನಗರದ ಖ್ಯಾತ ನೃತ್ಯ ಸಂಸ್ಥೆ ‘ಸಾಧನ ಸಂಗಮ’ದ ಹಿಂದಿನ ಧೀ ಶಕ್ತಿ, ಅನುಭವ ಭಂಡಾರ ಖ್ಯಾತ ನೃತ್ಯಜ್ಞೆ ವಿ. ಜ್ಯೋತಿ ಪಟ್ಟಾಭಿರಾಮ್. ಅವರದು ಸಮಗ್ರ ದೃಷ್ಟಿ. ಅಂತಸ್ಸತ್ವ ಬೆಳೆಸುವ ಸುತ್ಯಾರ್ಹ ಪ್ರಯತ್ನ- ಸಾಧನ ಸಂಗಮದ ‘ಮುಕುಲ ನೃತ್ಯೋತ್ಸವ’ ಇದಕ್ಕೆ ಸಾಕ್ಷಿ. ಉದಯೋನ್ಮುಖ ಕಲಾವಿದರಾಗಿದ್ದಾಗಲೇ ಅವರನ್ನು ಸಂಪೂರ್ಣ ಜ್ಞಾನಾರ್ಜನೆಯಿಂದ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸಂಸ್ಥೆ ಪ್ರತಿ ವರ್ಷ ಅನೇಕ ವಿಧವಾದ ಚಿಂತನೆಗಳಿಂದ ಹೂರಣಗೊಂಡ ನೃತ್ಯ ಕಾರ್ಯಕ್ರಮವನ್ನು ಕಳೆದ 23 ವರ್ಷಗಳಿಂದ ವಿಶಿಷ್ಟ…
ಮಂಗಳೂರು : ಅಕ್ಕ ಮಹಾದೇವಿ ವೀರಶೈವ ಮಹಿಳಾ ಸಂಘ (ರಿ.) ಇದರ ವತಿಯಿಂದ ‘ರಾಜ್ಯಮಟ್ಟದ ವಚನ ಸಾಹಿತ್ಯ ಸಮ್ಮೇಳನ’ವನ್ನು ದಿನಾಂಕ 04 ಜನವರಿ 2025ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದ್ದು, ಡಾ. ಅರವಿಂದ್ ಜತ್ತಿ ಇವರು ಸಮ್ಮೇಳನಾಧ್ಯಕ್ಷತೆ ವಹಿಸಲಿದ್ದಾರೆ. ‘ವಚನ ಸಾಹಿತ್ಯ ದಿಬ್ಬಣ’ವು ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ನಡೆಯಲಿದ್ದು, ಆಡಳಿತ ಮೊಕ್ತೇಸರರಾದ ಶ್ರೀ ರಾಘವೇಂದ್ರ ಶಾಸ್ತ್ರಿ ಉದ್ಘಾಟನೆ ಮಾಡಲಿರುವರು. ಅನುಭವ ಸಂಗಮ ವೇದಿಕೆಯಲ್ಲಿ ಬೆಳಿಗ್ಗೆ 9-30 ಗಂಟೆಗೆ ಶ್ರೀ ಸೂರ್ಯ ಬಸಪ್ಪಕಡಿ ಇವರಿಂದ ವಚನ ಗಾಯನ ಪ್ರಸ್ತುತಗೊಳ್ಳಲಿದೆ. ಅಲ್ಲಮಪ್ರಭು ವೇದಿಕೆಯಲ್ಲಿ ಸಮೂಹ ವಚನ ಗಾಯನ ಸ್ಪರ್ಧೆ ಮತ್ತು ಸಮೂಹ ವಚನ ನೃತ್ಯ ಸ್ಪರ್ಧೆ ನಡೆಯಲಿದೆ. ಕುದ್ಮುಲ್ ರಂಗರಾವ್ ಪುರಭವನದಲ್ಲಿ ಬೆಳಗ್ಗೆ 10-00 ಗಂಟೆಗೆ ಧ್ವಜಾರೋಹಣ ಮತ್ತು ಉದ್ಘಾಟನಾ ಸಮಾರಂಭದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ, ವಸ್ತು ಪ್ರದರ್ಶನ ಉದ್ಘಾಟನೆ, ವಸ್ತು ಮಾರಾಟ ಮಳಿಗೆ ಉದ್ಘಾಟನೆ, ಸಾಕ್ಷ್ಯ ಚಿತ್ರ ಉದ್ಘಾಟನೆ ನಡೆಯಲಿದೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಹಾಗೂ ಸಂಘಗಳನ್ನು…