Author: roovari

ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ, ಏರ್ಯ ಆಳ್ವ ಫೌಂಡೇಶನ್ ಮೊಡಂಕಾಪು ಇದರ ಸಹಯೋಗದೊಂದಿಗೆ ಏರ್ಯ ಲಕ್ಷ್ಮೀನಾರಾಯಣ ಆಳ್ವರವರ ಸ್ಮರಣಾರ್ಥ 2ನೇ ವರ್ಷದ ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆ ‘ವರ್ಣಾಂಜಲಿ 2024’ ದಿನಾಂಕ 22 ಡಿಸೆಂಬರ್ 2024ರಂದು ಫರಂಗಿಪೇಟೆಯ ಸೇವಾಂಜಲಿ ಸಭಾಗೃಹದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ರಂಗಭೂಮಿ ಕಲಾವಿದೆ ಸರೋಜಿನಿ ಶೆಟ್ಟಿ ಮಾತನಾಡಿ “ವಿದ್ಯಾರ್ಥಿಗಳಲ್ಲಿ ಬೇರೆ ಬೇರೆ ಪ್ರತಿಭೆಗಳಿರುತ್ತದೆ. ವಿವಿಧ ಚಟುವಟಿಕೆಗಳಲ್ಲಿ ಆಸಕ್ತಿಯಿರುತ್ತದೆ. ಅವುಗಳನ್ನು ಪೋಷಕರು ಗುರುತಿಸಿ ಪ್ರೋತ್ಸಾಹ ನೀಡಿದಾಗ ವಿದ್ಯಾರ್ಥಿಗಳು ಪ್ರತಿಭಾವಂತರಾಗುತ್ತಾರೆ. ಸೇವಾಂಜಲಿ ಸಂಸ್ಥೆ ಮೂಲಕ ಬಡವರಿಗೆ, ರೋಗಿಗಳಿಗೆ ಶಕ್ತಿ ತುಂಬುವ ಕಾರ್ಯ ಕೃಷ್ಣಕುಮಾ‌ರ್ ಪೂಂಜ ಮಾಡುತ್ತಿದ್ದಾರೆ. ಈ ಸೇವೆ ನಿರಂತರವಾಗಿ ನಡೆಯಲಿ.” ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ದೀಪಿಕಾ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಮಹಾಬಲೇಶ್ವರ ಹೆಬ್ಬಾರ್ ಮಾತನಾಡಿ “ಚಿತ್ರಕಲೆಯಂತಹ ಸಹಪಠ್ಯ ಚಟುವಟಿಕೆಗಳಲ್ಲಿ ಮಕ್ಕಳು ತೊಡಗಿಸಿಕೊಂಡರೆ ಅವರ ಕಲಿಕೆಗೆ ಅಡ್ಡಿಯಾಗುವುದಿಲ್ಲ ಬದಲಾಗಿ ಕಲಿಕೆಗೆ ಪೂರಕವಾಗಲಿದೆ.” ಎಂದರು. ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ಸ್ವಾಗತಿಸಿ ಪ್ರಾಸ್ತವಿಕ ಮಾತುಗಳನ್ನಾಡಿ, ಚಿತ್ರಕಲಾ ಶಿಕ್ಷಕ ಬಾಲಕೃಷ್ಣಶೆಟ್ಟಿ…

Read More

ಧಾರವಾಡ : ಧಾರವಾಡದ ನೆಲದ ಸತ್ವವನ್ನು ಹೀರಿ ಧಾರವಾಡದಲ್ಲಿಯೇ ಹುಟ್ಟಿ ಬೆಳೆದ ವರಕವಿ ಬೇಂದ್ರೆ ಅವರು ಜನಮಾನಸ ಕವಿ, ದಿನನಿತ್ಯದ ಆಡು ಮಾತಿನಲ್ಲಿ ಜೀವನದರ್ಶನದ ಒಳನೋಟಗಳನ್ನು ನೀಡುವ ಸಾವಿರಾರು ಕವಿತೆಗಳನ್ನು ಬರೆದು ಇಂದಿಗೂ ಹಳ್ಳಿಗರ ಮುಗ್ಧ ಮನಸ್ಸು ಹಾಗೂ ಪ್ರಜ್ಞಾವಂತ ನಾಗರಿಕರ ನರ ನಾಡಿಗಳಲ್ಲಿ ಚೈತನ್ಯ ತುಂಬುವಂತೆ ಮಾಡಿದ್ದಾರೆ. ‘ಗಂಗಾವತರಣ’ ವರಕವಿ ಬೇಂದ್ರೆಯವರ ಬದುಕು ಬರಹಗಳನ್ನು ಆಧರಿಸಿ ಬರೆದ ನಾಟಕ, ಬೆಂಗಳೂರಿನ ರಂಗ ಸೌರಭ ತಂಡದವರು ಈ ನಾಟಕವನ್ನು ಧಾರವಾಡದ ಸೃಜನಾರಂಗ ಮಂದಿರದಲ್ಲಿ ದಿನಾಂಕ 26 ಡಿಸೆಂಬರ್ 2024ರ ಸಂಜೆ ಹೃದಯಂಗಮವಾಗಿ ಪ್ರಸ್ತುತಪಡಿಸಿದರು. ಬೇಂದ್ರೆ ಅವರ ಬದುಕಿನ ಹಲವು ಪುಟಗಳನ್ನು ತೆರೆಯುತ್ತ, ಅವರ ಉದಾತ್ತ ಜೀವನದ ತಾದಾತ್ಮತೆಯನ್ನು ತೋರುವ ಹಲವು ಹಾಡುಗಳಿಂದ ಹಾಗೂ ನೃತ್ಯ ರೂಪಕಗಳಿಂದ ಜನಮನವನ್ನು ರಂಜಿಸಿದರು. ಆಧುನಿಕ ಜೀವನದ ಶುಷ್ಕ ಆಡಂಬರಕ್ಕೆ ಮನಸೋತ ಇಂದಿನ ಪೀಳಿಗೆಯವರ ತೊಳಲಾಟವನ್ನು ಸಮರ್ಥವಾಗಿ ಬಿಂಬಿಸಿ ಬೇಂದ್ರೆಯವರ ಆತ್ಮ ಸಾಕ್ಷಾತ್ಕಾರದ ನೆಲೆಯಲ್ಲಿ ಜೀವನ ದರ್ಶನ ಮೂಡಿಸಿದ ಪರಿ ಅದ್ಭುತವಾಗಿತ್ತು. ಲೇಖಕ ಹಾಗೂ ನಿರ್ದೇಶಕರಾದ ಶ್ರೀ…

Read More

ಬೆಂಗಳೂರು : ‘ಅನೇಕ’ ಪ್ರಸ್ತುತ ಪಡಿಸುವ ‘ಅಭಿನಯ ಹಾಗೂ ನಾಟಕ ನಿರ್ಮಾಣ ಕಾರ್ಯಾಗಾರ’ವನ್ನು ದಿನಾಂಕ 04 ಜನವರಿ 2025ರಂದು ಪ್ರತಿ ದಿನ ಸಂಜೆ 6-00 ಗಂಟೆಯಿಂದ 8-30 ಗಂಟೆಗೆ ತನಕ ಬೆಂಗಳೂರಿನ ಪಟ್ಟಣಗೆರೆ ಮೆಟ್ರೋ ಸ್ಟೇಷನ್ ಹತ್ತಿರವಿರುವ ಅನೇಕ ಸ್ಟುಡಿಯೋ ಥಿಯೇಟರ್ ಇಲ್ಲಿ ಆಯೋಜಿಸಲಾಗಿದೆ. ಈ ತರಬೇತಿಯು ಉಚಿತವಾಗಿದ್ದು, ಐದು ವಾರಗಳವರೆಗೆ ನಡೆಯಲಿರುವ ಈ ಕಾರ್ಯಾಗಾರದ ಸಾರಥ್ಯವನ್ನು ಅಪೂರ್ವ ಆನಗಳ್ಳಿ ಇವರು ವಹಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ 9448050950 ಮತ್ತು 9718080422.

Read More

ತೆಕ್ಕಟ್ಟೆ: ಯಶಸ್ವೀ ಕಲಾವೃಂದ (ರಿ.)ಕೊಮೆ ತೆಕ್ಕಟ್ಟೆ, ರಂಗಸಂಪದ ಕೋಟ, ಧಮನಿ ಟ್ರಸ್ಟ್ ತೆಕ್ಕಟ್ಟೆ ಇವರ ಸಂಯುಕ್ತ ಆಶ್ರಯದಲ್ಲಿ ‘ಸಿನ್ಸ್ 1999 ಶ್ವೇತಯಾನ-92’ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ ‘ನಾಟಕಾಷ್ಟಕ’ದ ನಾಲ್ಕನೇ ದಿನದ ಕಾರ್ಯಕ್ರಮ ದಿನಾಂಕ 29 ಡಿಸೆಂಬರ್ 2024ರಂದು ತೆಕ್ಕಟ್ಟೆ ಹಯಗ್ರೀವದಲ್ಲಿ ನಡೆಯಿತು. ಮಕ್ಕಳಿಗೆ ಮುಖವಾಡ ತೊಡಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಚಿತ್ರಕಾರ ಹಾಗೂ ಅಧ್ಯಾಪಕ ಅಶೋಕ್ ತೆಕ್ಕಟ್ಟೆ ಮಾತನಾಡಿ “ರಂಗಭೂಮಿಯ ಸಂಗತಿಗಳು ಭಿನ್ನಭಿನ್ನವಾಗಿರುತ್ತವೆ. ಪ್ರತೀ ನಿರ್ದೇಶಕರ ಯೋಚನೆಗನುಸಾರವಾಗಿ ರಂಗ ತಂತ್ರಗಳು ವಿಭಿನ್ನವಾಗಿ ರಂಗದಲ್ಲಿ ಚಿತ್ರಿತಗೊಳ್ಳುತ್ತವೆ. ಅದರಲ್ಲಿಯೂ ಮಕ್ಕಳ ರಂಗಭೂಮಿ ಬಹು ಕ್ಲಿಷ್ಠಕರವಾಗಿರುತ್ತದೆ. ಮಕ್ಕಳನ್ನು ಒಟ್ಟುಗೂಡಿಸಿ ರಂಗತಂತ್ರದಲ್ಲಿ ಮಾರ್ಪಾಡುಗೊಳಿಸಿ, ಕಾರ್ಯರೂಪಕ್ಕೆ ತರುವ ಕಾರ್ಯ ಸುಲಭಸಾಧ್ಯವಲ್ಲ. ಇದು ಸಾಧಕ ಕ್ಷೇತ್ರ. ಈ ನಿಟ್ಟಿನಲ್ಲಿ ಮಕ್ಕಳ ರಂಗಭೂಮಿಗಾಗಿ ಕೆಲಸ ಮಾಡುತ್ತಿರುವ ಕಲಾಭಿ ಚಿಲ್ಡ್ರನ್ಸ್ ಥಿಯೇಟರ್‌ನ ಕೆಲಸವನ್ನು ಮೆಚ್ಚಲೇ ಬೇಕು.” ಎಂದರು. ರಂಗ ನಿದೇರ್ಶಕ ರಂಜಿತ್ ಶೆಟ್ಟಿ ಕುಕ್ಕುಡೆ, ರೊ. ಶ್ರೀಧರ ಆಚಾರ್ ತೆಕ್ಕಟ್ಟೆ, ಉದ್ಯಮಿ ಗೋಪಾಲ್ ಪೂಜಾರಿ ಬಾಳೆಹಿತ್ಲು, ಉಪನ್ಯಾಸಕ ಶಂಕರನಾರಾಯಣ ಉಪಾಧ್ಯಾಯ ಕೊರ್ಗಿ, ಕಾರ್ಯದರ್ಶಿ…

Read More

ಉಜಿರೆ : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ಸಹಪ್ರಾಧ್ಯಾಪಕರಾದ ಡಾ.ಸುಬ್ರಹ್ಮಣ್ಯ ಭಟ್ ಇವರು ಬರೆದ ‘ ಅಮ್ಮ ಹೇಳಿದ ಕತೆಗಳು’ ಕಥಾಸಂಕಲನದ ಲೋಕಾರ್ಪಣಾ ಸಮಾರಂಭವು ದಿನಾಂಕ 29 ಡಿಸೆಂಬರ್ 2024ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯಿತು. ಧರ್ಮಸ್ಥಳದ ಧರ್ಮಾಧಿಕಾರಿಗಳಾದ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ತಮ್ಮ ಅಮೃತಹಸ್ತದಿಂದ ಕೃತಿ ಲೋಕಾರ್ಪಣೆಗೊಳಿಸಿದರು. ಕೃತಿಕರ್ತ ಡಾ. ಸುಬ್ರಹ್ಮಣ್ಯ ಭಟ್, ಅವರ ಪತ್ನಿ ಭವ್ಯ ಜಿ. ಜಿ. ಹಾಗೂ ಮಕ್ಕಳಾದ ಅಭಿಗಮ್ಯ ರಾಮ್ ಮತ್ತು ಆಶ್ಮನ್ ಕೃಷ್ಣ ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ಭಟ್ಟರ ಎರಡನೇ ಕಥಾ ಸಂಕಲನ ಇದಾಗಿದ್ದು, ಸುಧಾ ವಾರಪತ್ರಿಕೆಯ ಮುಖ್ಯ ಉಪಸಂಪಾದಕಿ ಉಮಾ ಅನಂತ್ ಕೃತಿಗೆ ಮುನ್ನುಡಿ ಬರೆದಿದ್ದಾರೆ. ಖ್ಯಾತ ಸಾಹಿತಿ ಪ. ರಾಮಕೃಷ್ಣ ಶಾಸ್ತ್ರಿಯವರು ಶುಭನುಡಿಗಳನ್ನು ಬರೆದಿದ್ದು, ಮಲೆನಾಡು ಪ್ರಕಾಶನ ಚಿಕ್ಕಮಗಳೂರು ಈ ಕೃತಿಯನ್ನು ಪ್ರಕಟಿಸಿದೆ. ಕೃತಿಯ ಪ್ರತಿಗಳಿಗಾಗಿ ಲೇಖಕರನ್ನು 9448951856 ವಾಟ್ಸಪ್ ಮೂಲಕ ಸಂಪರ್ಕಿಸಬಹುದಾಗಿದೆ.

Read More

ಬೆಂಗಳೂರು : ವಿಜಯನಗರ ಬಿಂಬ (ರಿ.) ರಂಗ ಶಿಕ್ಷಣ ಕೇಂದ್ರ, ಮಕ್ಕಳ ವಿಭಾಗದ ವತಿಯಿಂದ ಚಿಣ್ಣರ ರಂಗ ಸಂಕ್ರಾಂತಿ ಸಮಾರಂಭವನ್ನು ದಿನಾಂಕ 03 ಜನವರಿ 2025ರಂದು ಸಂಜೆ 6-00 ಗಂಟೆಗೆ ಬೆಂಗಳೂರಿನ ಜೆ.ಸಿ. ರೋಡ್, ರವೀಂದ್ರ ಕಲಾ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಈ ಸಮಾರಂಭದಲ್ಲಿ 2 ನಾಟಕಗಳ ಉತ್ಸವ ಮತ್ತು ಶ್ರೀ ಕೃಷ್ಣಮೂರ್ತಿ ಬಿಳಿಗೆರೆಯವರಿಗೆ ಸನ್ಮಾನ ಮಾಡಲಾಗುವುದು. ಡಾ. ಎಸ್.ವಿ. ಕಶ್ಯಪ್ ರಚಿಸಿರುವ ಡಾ. ಸುಷ್ಮಾ ಎಸ್. ವಿ. ಇವರ ನಿರ್ದೇಶನದಲ್ಲಿ ‘ಋಷ್ಯಮೂಕ’ ಮತ್ತು ಡಾ. ಎಸ್.ವಿ. ಕಶ್ಯಪ್ ಇವರು ರಚಿಸಿ ನಿರ್ದೇಶನ ಮಾಡಿರುವ ‘ಕೃಬು’ ಎಂಬ ನಾಟಕಗಳು ಪ್ರದರ್ಶನಗೊಳ್ಳಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ 9844152967, 9845265967, 9845734967, 9844017881, 9880033018.

Read More

ಮಂಗಳೂರು : ಕಳೆದ 25 ವರ್ಷಗಳಿಂದ ಮಂಗಳೂರು ಕೇಂದ್ರವಾಗಿ ‘ಸಾಹಿತ್ಯ, ಸಂಸ್ಕೃತಿ, ಕಲೆ, ಸಂಘಟನೆ, ಸದ್ವಿಚಾರ’ ಎಂಬ ನೆಲೆಯಲ್ಲಿ ಸಾಹಿತ್ಯ ಪುಸ್ತಕಗಳ ಪ್ರಕಟಣೆ ಮತ್ತು ದೇಶ ವಿದೇಶಗಳಲ್ಲಿ ಸಾಹಿತ್ಯ ಪರ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿರುವ ಕಲ್ಲಚ್ಚು ಪ್ರಕಾಶನ ಸಂಸ್ಥೆಯ ಬೆಳ್ಳಿ ಹಬ್ಬ ಪ್ರಯುಕ್ತ ‘ರಜತ ರಂಗು’ ಸಮಾರಂಭವು ದಿನಾಂಕ 05 ಜನವರಿ 2025ರಂದು ಮಂಗಳೂರಿನ ಕೊಡಿಯಾಲ್ ಬೈಲ್ ನವಭಾರತ ಸರ್ಕಲ್ ಇಲ್ಲಿರುವ ದಿ ಓಷನ್ ಪರ್ಲ್ ಹೊಟೇಲ್ ಸಭಾಂಗಣದಲ್ಲಿ ನಡೆಯಲಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ವಿಶ್ರಾಂತ ಉಪಕಾರ್ಯದರ್ಶಿ ಡಾ. ಮಹಾಲಿಂಗೇಶ್ವರ ಎಸ್.ಪಿ. ಉದ್ಘಾಟಿಸಲಿದ್ದು, ಈ ಸಂದರ್ಭದಲ್ಲಿ ಹೊರಬರುವ ಕಲ್ಲಚ್ಚು ಪ್ರಕಾಶನದ ಮಹೇಶ ಆರ್. ನಾಯಕ್ ಇವರ ‘ಅನೂಗೂಡುನೂ ಬಾ’ ಕೃತಿಯನ್ನು ಸಾಹಿತಿಗಳಾದ ಡಾ. ಪ್ರಭಾಕರ ನೀರ್ ಮಾರ್ಗ ಬಿಡುಗಡೆಗೊಳಿಸಲಿದ್ದು, ಕಥೆಗಾರರಾದ ಡಾ. ಸಂಪೂರ್ಣಾನಂದ ಬಳ್ಕೂರು ಕೃತಿ ಪರಿಚಯ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಹಿರಿಯ ಸಂಶೋಧಕಿ ಡಾ. ಇಂದಿರಾ ಹೆಗ್ಗಡೆ ಮತ್ತು ಬೆಂಗಳೂರಿನ ಉದ್ಯಮಿ ಜಯಂತ್ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಡಾ.…

Read More

ಉಚ್ಚಿಲ : ಯಕ್ಷ ಶಿಕ್ಷಣ ಟ್ರಸ್ಟ್ (ರಿ.) ಉಡುಪಿ ಆಯೋಜಿಸುತ್ತಿರುವ ‘ಕಿಶೋರ ಯಕ್ಷಗಾನ ಸಂಭ್ರಮ 2024’ ಪ್ರಯುಕ್ತ ಕಾಪು ವಿಧಾನ ಸಭಾ ವ್ಯಾಪ್ತಿಗೆ ಸೇರಿದ ಎಂಟು ಶಾಲೆಗಳ ಯಕ್ಷಗಾನ ಪ್ರದರ್ಶನವು ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಳದ ಆಶ್ರಯದಲ್ಲಿ, ದೇವಳದ ವಠಾರದಲ್ಲಿ ನಡೆದಿದ್ದು, ಅದರ ಸಮಾರೋಪ ಸಮಾರಂಭವು ದಿನಾಂಕ 23 ಡಿಸೆಂಬರ್ 2024ರಂದು ಜರಗಿತು. ಅಧ್ಯಕ್ಷತೆ ವಹಿಸಿದ್ದ ಶಾಸಕ ಗುರ್ಮೆ ಸುರೇಶ ಶೆಟ್ಟಿಯವರು ಮಾತನಾಡಿ “ಯಕ್ಷ ಶಿಕ್ಷಣ ಮಕ್ಕಳಿಗೆ ಸಂಸ್ಕಾರ ನೀಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಮುಂದಿನ ವರ್ಷಗಳಲ್ಲಿ ಇನ್ನೂ ಹೆಚ್ಚು ಶಾಲೆಗಳಿಗೆ ಇದನ್ನು ವಿಸ್ತರಿಸೋಣ” ಎಂದರು. ಈ ಮಹಾಭಿಯಾನದ ಯಶಸ್ಸಿಗೆ ಕಾರಣರಾದ ಕಲಾರಂಗದ ಕಾರ್ಯಕರ್ತರನ್ನು ಅಭಿನಂದಿಸಿದರು. ಮಂಗಳೂರಿನ ಖ್ಯಾತ ವೈದ್ಯ ಡಾ. ಜೆ.ಎನ್. ಭಟ್, ಗುರು ಬನ್ನಂಜೆ ಸಂಜೀವ ಸುವರ್ಣ, ನಿವೃತ್ತ ಪ್ರಾಧ್ಯಾಪಕ ಡಾ. ಚಂದ್ರಶೇಖರ ಶೆಟ್ಟಿ, ಕ್ಷೇತ್ರ ಆಡಳಿತ ಮಂಡಳಿಯ ಅಧ್ಯಕ್ಷ ಗಿರಿಧರ ಸುವರ್ಣ, ದ.ಕ. ಮೊಗವೀರ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ ಹೆಜಮಾಡಿ, ಕಲಾ ಗಂಗೋತ್ರಿಯ ಸದಾಶಿವ…

Read More

‘ಕೆಂಡದ ರೊಟ್ಟಿ’ ಕಥೆಗಾರ್ತಿ ಉಷಾ ನರಸಿಂಹನ್ ಇವರ ಇತ್ತೀಚಿನ ಕಾದಂಬರಿ. ಕೆಂಡದ ಮೇಲೆ ಸುಡುವ ರೊಟ್ಟಿಯ ರೂಪಕದ ಮೂಲಕ ದಾಂಪತ್ಯ ಬದುಕಿನ ಯಶಸ್ಸು-ವೈಫಲ್ಯಗಳ ಮೇಲೆ ಲೇಖಕಿ ಬೆಳಕು ಚೆಲ್ಲಿದ್ದಾರೆ. ಗಂಡನಾಗಲಿ ಹೆಂಡತಿಯಾಗಲಿ ತುಸು ಎಚ್ಚರ ತಪ್ಪಿದರೂ ಬದುಕಿನ ಹದ ತಪ್ಪಿ ವಿನಾಶದ ಅಂಚಿಗೆ ದೂಡಲ್ಪಡುತ್ತದೆ ಅನ್ನುವ ಸತ್ಯದತ್ತ ಕಾದಂಬರಿ ಬೆರಳು ಮಾಡಿ ತೋರಿಸುತ್ತದೆ. ಇಲ್ಲಿ ಆ ರೀತಿ ಬಾಳು ಹದ ತಪ್ಪಿ ಮುರಿದು ಹೋಗುವ ಮೂರು ದಾಂಪತ್ಯಗಳು ಒಂದೇ ಕುಟುಂಬದ ಸತ್ಯಾ-ರಾಮಣ್ಣ, ನಾಗವೇಣಿ-ಗೋಪಾಲರಾಯ ಮತ್ತು ರಮ್ಯಾ-ಪ್ರಶಾಂತರದ್ದು.‌ ಸತ್ಯಾ ಸುಂದರಿಯಾದರೂ ಅಹಂಕಾರವಿಲ್ಲದ ಸರಳ-ಸಾಧು ಹೆಣ್ಣು. ಹಳ್ಳಿಯ ಬದುಕಿಗೆ ಚೆನ್ನಾಗಿ ಹೊಂದಿಕೊಂಡು ದೊಡ್ಡ ಕುಟುಂಬದ ಎಲ್ಲ ಕೆಲಸಗಳನ್ನು ಸಮರ್ಥವಾಗಿ ತೂಗಿಸಿಕೊಂಡು ಹೋಗುತ್ತಾಳೆ. ಆದರೆ ಅವಳ ಗಂಡ ರಾಮಣ್ಣ ಬೇಜವಾಬ್ದಾರಿ ಗಂಡಸು. ಮೇಲಾಗಿ ಪುರುಷ ಪ್ರಾಧಾನ್ಯದಲ್ಲಿ ನಂಬಿಕೆಯಿಟ್ಟವನು. ಹೆಣ್ಣಾದವಳು ಸದಾ ತಗ್ಗಿ ಬಗ್ಗಿ ಇರಬೇಕು ಮತ್ತು ಗಂಡ ಅವಳನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಬೇಕು ಅನ್ನುವವನು. ಅದ್ದರಿಂದ ಹೆಂಡತಿಯನ್ನು ಸದಾ ಕ್ರೂರವಾಗಿ ನಡೆಸಿಕೊಳ್ಳುತ್ತಾನೆ. ಪರಿಣಾಮವಾಗಿ ಸತ್ಯಾಸತ್ಯಳ ವೈಯಕ್ತಿಕ ಬದುಕಿನಲ್ಲಿ…

Read More

ಮಂಗಳೂರು : ಹೃದಯವಾಹಿನಿ ಮಂಗಳೂರು ಮತ್ತು ಎಸ್.ಕೆ. ಮುನ್ಸಿಪಲ್ ಎಂಪ್ಲಾಯಿಸ್ ಯೂನಿಯನ್ (ರಿ.) ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಒಂದು ದಿನದ 20ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನವನ್ನು ದಿನಾಂಕ 09 ಜನವರಿ 2025ರಂದು ಬೆಳಿಗ್ಗೆ 9-00 ಗಂಟೆಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆಯೋಜಿಸಲಾಗಿದೆ. ಈ ಸಮ್ಮೇಳನದಲ್ಲಿ ಶಾಸ್ತ್ರೀಯ ನೃತ್ಯ, ಜಾನಪದ ನೃತ್ಯ, ಹಾಸ್ಯೋತ್ಸವ, ರಸಮಂಜರಿ, ಭಾಷಾ ಸೌಹಾರ್ದಗೋಷ್ಠಿ, ಕವಿಗೋಷ್ಠಿ ಹಾಗೂ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ 9886510087.

Read More