Subscribe to Updates
Get the latest creative news from FooBar about art, design and business.
Author: roovari
ಸುರತ್ಕಲ್: ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ನ ಕೇಂದ್ರ ಮಹಿಳಾ ಘಟಕದ ಸಪ್ತಮ ವಾರ್ಷಿಕೋತ್ಸವವು ದಿನಾಂಕ 22-03-2024 ರಂದು ಸಂಜೆ ಘಂಟೆ 6.00ರಿಂದ ಹಳೆಯಂಗಡಿ ಸಮೀಪದ ಪಾವಂಜೆ ಕ್ಷೇತ್ರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಟ್ಲ ಫೌಂಡೇಷನ್ ಟ್ರಸ್ಟಿನ ಸ್ಥಾಪಕಾಧ್ಯಕ್ಷ ಪಟ್ಟ ಸತೀಶ್ ಶೆಟ್ಟಿ, ವಕೀಲ ನಾರಾಯಣ ಪಾಟಾಳಿ, ಕಲಾ ಪೋಷಕರಾದ ಶಕುಂತಳಾ ರಮಾನಂದ ಭಟ್, ಸಂಧ್ಯಾ ಜಯದೇವ ಐತಾಳ್, ಪಟ್ಲ ಫೌಂಡೇಷನ್ ಟ್ರಸ್ಟಿ ಸಹನಾ ರಾಜೇಶ್ ರೈ, ಜೆಸಿಐ ಸುರತ್ಕಲ್ ಘಟಕದ ಅಧ್ಯಕ್ಷೆ ಜ್ಯೋತಿ ಪ್ರವೀಣ್ ಶೆಟ್ಟಿ, ಪಟ್ಲ ಪೌಂಡೇಷನ್ ಕೋಶಾಧಿಕಾರಿ ಸುದೇಶ್ ಕುಮಾರ್ ರೈ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಹಳುವಳ್ಳಿಯ ಶ್ರೀ ಕುಮಾರ ಸಾಂಸ್ಕೃತಿಕ ಪ್ರತಿಷ್ಠಾನದ ನಿರ್ದೇಶಕಿ ಜ್ಯೋತಿ ಟಿ. ಎನ್. ಕಳಸ, ಧೀಶಕ್ತಿ ಮಹಿಳಾ ಯಕ್ಷ ಬಳಗದ ನಿರ್ದೇಶಕಿ ಪದ್ಮಾ ಕೆ. ಆರ್. ಆಚಾರ್ಯ ಪುತ್ತೂರು, ತಾಳಮದ್ದಲೆ ಕಲಾವಿದೆ ರೇವತಿ ನವೀನ್ ಕುಳಾಯಿ ಅವರನ್ನು ಸನ್ಮಾನಿಸಲಾಯಿತು. ಮಹಿಳಾ ಕೇಂದ್ರೀಯ ಘಟಕದ ಅಧ್ಯಕ್ಷೆ ಪೂರ್ಣಿಮಾ ಶೆಟ್ಟಿ ಸ್ವಾಗತಿಸಿ, ಸಾಯಿಸುಮ ನಾವಡ ಕಾರ್ಯಕ್ರಮ…
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠ ಮತ್ತು ಮಿಲಾಗ್ರಿಸ್ ಕಾಲೇಜಿನ ಸಹಯೋಗದಲ್ಲಿ ‘ಕೊಂಕಣಿ ಜಾನಪದ ಮತ್ತು ಭವಿಷ್ಯ’ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರಸಂಕಿರಣ ದಿನಾಂಕ 26-03-2024ರ ಮಂಗಳವಾರದಂದು ಮಂಗಳೂರಿನ ಮಿಲಾಗ್ರಿಸ್ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಮಿಲಾಗ್ರಿಸ್ ಕಾಲೇಜಿನ ಸಂಚಾಲಕ ಫಾ. ಬೊನವೆಂಚರ್ ನಝರತ್ “ಜಾನಪದವು ಮೌಖಿಕ ಪರಂಪರೆಯ ವಾಹಕ. ಅದು ಸಂಸ್ಕೃತಿ, ಜಾತಿ, ಧರ್ಮ, ಪಂಥಗಳನ್ನು ಬೆಸೆಯುತ್ತದೆ. ಇಂಥ ಶ್ರೀಮಂತ ಜಾನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾದದ್ದು ನಮ್ಮೆಲ್ಲರ ಕರ್ತವ್ಯ. ಕೊಂಕಣಿ ಭಾಷೆಯು ಬಾಂಧವ್ಯ ಬೆಸೆಯುವ ಕಲೆಯನ್ನು ಹೊಂದಿದ್ದು, ಕೊಂಕಣಿ ಅಕಾಡೆಮಿಯು ಕೊಂಕಣಿ ಭಾಷಾಭಿವೃದ್ಧಿಗೆ ಶ್ರಮಿಸುತ್ತಿದೆ. ಕೊಂಕಣಿ ಭಾಷಿಗರು ತಮ್ಮ ಮಕ್ಕಳಿಗೆ ಕೊಂಕಣಿ ಭಾಷೆಯ ಬಗ್ಗೆ ಅಭಿರುಚಿ ಮೂಡಿಸಿದಾಗ ಮಾತ್ರ ಭಾಷೆ ಬೆಳೆಯಲು ಸಾಧ್ಯ” ಎಂದರು. ಕಥೋಲಿಕ್ ಬೋರ್ಡ್ ನಿಯೋಜಿತ ಕಾರ್ಯದರ್ಶಿ ಲಿಯೋ ಲಾಸ್ರಾದೊ ಹಾಗೂ ವಿದ್ಯಾರ್ಥಿ ಪ್ರತಿನಿಧಿ ಆನ್ಸನ್ ಪಿಂಟೊ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೊಂಕಣಿ ಅಧ್ಯಯನ ಪೀಠದ ಸಂಯೋಜಕ ಜಯವಂತ ನಾಯಕ್…
ಮಂಜೇಶ್ವರ : ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ ವತಿಯಿಂದ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಯವರ ಜನ್ಮದಿನಾಚರಣೆಯು ಗೋವಿಂದ ಪೈ ನಿವಾಸ ಗಿಳಿವಿಂಡು ಇಲ್ಲಿ ದಿನಾಂಕ 23-03-2024ರಂದು ನಡೆಯಿತು. ಅಧ್ಯಕ್ಷತೆ ವಹಿಸಿದ ಸ್ಮಾರಕ ಸಮಿತಿ ಕಾರ್ಯದರ್ಶಿ ಉಮೇಶ ಸಾಲಿಯಾನ್ ತಿಂಗಳಿಗೊಂದು ಯಕ್ಷಗಾನ ಪ್ರದರ್ಶನವನ್ನೂ ಯಕ್ಷಗಾನ ಶಿಬಿರಗಳ ಆಯೋಜನೆಯನ್ನೂ ಸಾಧ್ಯವಾಗಿಸಬೇಕು ಎಂಬ ಹಂಬಲವನ್ನು ವ್ಯಕ್ತಪಡಿಸಿ ತಿಂಗಳಿಗೊಂದು ತುಳು ಕಾರ್ಯಕ್ರಮ ನಡೆಸುವಂತೆ ಆಸಕ್ತರನ್ನು ಕೇಳಿಕೊಳ್ಳುವುದಾಗಿ ಹೇಳಿದರು. ವಿಶಾಲ ಸಭಾಭವನ ಇದೆ, ವಿದ್ಯುತ್ ವ್ಯವಸ್ಥೆಗೆ 57 ಲಕ್ಷ ಪಾಸಾಗಿದೆ. ಆ ಅನುದಾನ ಸಿಕ್ಕರೆ ವ್ಯವಸ್ಥೆ ಸಸೂತ್ರವಾಗಲಿದೆ ಎಂದು ಹೇಳಿದರು. ಗಡಿ ಅಭಿವೃದ್ಧಿ ಪ್ರಾಧಿಕಾರದಿಂದ ಪ್ರತಿಷ್ಠಿತ ‘ಗಡಿನಾಡ ಚೇತನ’ ಪ್ರಶಸ್ತಿಯನ್ನು ಸ್ವೀಕರಿಸಿದ್ದ ಡಾ. ರಾಧಾಕೃಷ್ಣ ಕೆ. ಉಳಿಯತ್ತಡ್ಕ ಗೋವಿಂದ ಪೈಗಳ ಬದುಕು ಬರಹಗಳ ಕುರಿತು ಮಾತನಾಡಿ, ಡಾ. ರಮಾನಂದ ಬನಾರಿ ಅವರ ಅನುಪಸ್ಥಿತಿಯಲ್ಲಿ ಉದ್ಘಾಟನೆಯನ್ನು ನೆರವೇರಿಸಿ ಇಲ್ಲಿ ಎಲ್ಲರೂ ಕಾರ್ಯಕ್ರಮ ನಡೆಸುವ ಅವಕಾಶವನ್ನು ತಮ್ಮದಾಗಿಸಬೇಕೆಂದು ಸಲಹೆ ಕೊಟ್ಟರು. ರವೀಂದ್ರನ್ ಪಾಡಿ ಅವರು ಪೈಗಳ ಗಿಳಿವಿಂಡು ಕವನದ ಸಾಲುಗಳನ್ನು…
ಉಡುಪಿ : ಬೆಂಗಳೂರಿನಲ್ಲಿ ಸದಾ ಚಟುವಟಿಕೆಯಿಂದಿರುವ ಹಾಗೂ ಕಳೆದ 12 ವರ್ಷದಿಂದ ಕೋಟದ ಹಂದೆ ದೇವಸ್ಥಾನದಲ್ಲಿ ಯಕ್ಷಗಾನ ಬೇಸಿಗೆ ಶಿಬಿರ ಮಾಡುತ್ತಿರುವ ಬೆಂಗಳೂರಿನ ಯಕ್ಷಾಂಗಣ ಟ್ರಸ್ಟ್ ವತಿಯಿಂದ ಉಡುಪಿ ಕುಂದಾಪುರ ತಾಲೂಕಿನ ಕೊಮೆ ತೆಕ್ಕಟ್ಟೆ ಯಶಸ್ವೀ ಕಲಾವೃಂದದ ಶ್ವೇತಯಾನದ ಅಡಿಯಲ್ಲಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರ ಇವರ ಸಹಯೋಗದಲ್ಲಿ ಉಡುಪಿಯ ತೆಕ್ಕಟ್ಟೆ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ದಿನಾಂಕ 31-03-2024ರಂದು ‘ಕೃಷ್ಣಲೀಲೆ’ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಈ ಯಕ್ಷಗಾನವು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ನಡೆಯಲಿದ್ದು, ಕಲಾವಿದರಾಗಿ ಹಿಮ್ಮೇಳದಲ್ಲಿ ಲಂಬೋದರ ಹೆಗಡೆ, ರಾಘವೇಂದ್ರ ಹೆಗಡೆ ಮತ್ತು ಸುದೀಪ ಉರಾಳ ಹಾಗೂ ಮುಮ್ಮೇಳದಲ್ಲಿ ತಮ್ಮಣ್ಣ ಗಾಂವ್ಕರ್, ದಿನೇಶ್ ಕನ್ನಾರ್, ಸ್ಪೂರ್ತಿ ಭಟ್, ರಾಘವೇಂದ್ರ ತುಂಗ ಕೆ., ಸತೀಶ ಹಾಲಾಡಿ, ಪ್ರಶಾಂತ್ ಆಚಾರ್ಯ, ರಾಜು ಪೂಜಾರಿ ಮತ್ತು ಇನ್ನಿತರರು ಭಾಗವಹಿಸಲಿದ್ದಾರೆ.
ಉಡುಪಿ : ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಹಾಗೂ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ವತಿಯಿಂದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮವು ದಿನಾಂಕ 26-03-2024ರ ಮಂಗಳವಾರದಂದು ಉಡುಪಿಯ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಶಾಖೆಯಲ್ಲಿ ನೆರವೇರಿತು. ಈ ಪ್ರಯುಕ್ತ ರಾಜ್ಯ ಮತ್ತು ಹೊರರಾಜ್ಯದ ಐವರು ಹಿರಿಯ ರಂಗಕರ್ಮಿಗಳಿಗೆ ಮಲಬಾರ್ ವಿಶ್ವರಂಗ ಪುರಸ್ಕಾರ-2024′ ನೀಡಿ ಗೌರವಿಸಲಾಯಿತು. ನಾಟಕ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಪ್ರೊ. ಆರ್. ಎಲ್. ಭಟ್ ಉಡುಪಿ, ಮುಂಬೈನ ರಂಗ ನಿರ್ದೇಶಕರಾದ ಕೆ. ವಿ. ರಾಘವೇಂದ್ರ ಐತಾಳ್, ರಂಗ ಸಂಘಟಕರಾದ ಕಜೆ ರಾಮಚಂದ್ರ ಭಟ್, ರಂಗ ಸಂಘಟಕರು ಹಾಗೂ ನಿರ್ದೇಶಕರಾದ ಎಸ್. ವಿ. ರಮೇಶ್ ಬೇಗಾರ್ ಹಾಗೂ ರಂಗ ನಟಿಯಾದ ಸುಜಾತ ಶೆಟ್ಟಿ ಇವರಿಗೆ ಪ್ರಶಸ್ತಿ ಪತ್ರ, ಫಲಕ ಹಾಗೂ ಬೆಳ್ಳಿ ಪದಕದೊಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಇದರ ಕಾರ್ಯದರ್ಶಿಯಾದ ವರದರಾಯ ಪೈ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ…
ತೆಕ್ಕಟ್ಟೆ: ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆಯ ಸಂಯೋಜನೆಯಲ್ಲಿ ಧಮನಿ ಹಾಗೂ ದಿಮ್ಸಾಲ್ ಸಂಸ್ಥೆಯ ಸಹಕಾರದೊಂದಿಗೆ ‘ಶ್ವೇತಯಾನ’ ಸರಣಿ ಕಾರ್ಯಕ್ರಮದ ‘ಸಿನ್ಸ್ 1999’ ಅಂಗವಾಗಿ 11ನೇ ಕಾರ್ಯಕ್ರಮವು ದಿನಾಂಕ 26-03-2024ರಂದು ತೆಕ್ಕಟ್ಟೆಯ ಹಯಗ್ರೀವದಲ್ಲಿ ನಡೆಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದಲ್ಲಿ ಸಂಘಸಂಸ್ಥೆಗಳ ಧನಸಹಾಯ ಯೋಜನೆಯಡಿಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನ್ನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ “ಸಾಂಪ್ರದಾಯಿಕವಾಗಿಯೇ ಜನಾನುರಾಗಿಯಾದ ಯಕ್ಷಾಂತರಂಗ ಕೋಟ ಸಂಸ್ಥೆಯು ಕಳೆದ ಹಲವು ವರ್ಷಗಳಿಂದ ಪ್ರಸಿದ್ಧ ಕಲಾವಿದರನ್ನೊಳಗೂಡಿಕೊಂಡು ಯಕ್ಷಗಾನದ ಹಲವು ಚಟುವಟಿಕೆಗಳನ್ನು ಕರಾವಳಿ ಭಾಗದಲ್ಲಿ ಮಾಡುತ್ತಾ ಬಂದಿದೆ. ಪರಿಪೂರ್ಣ ಸಾಂಪ್ರದಾಯಿಕ ಪ್ರದರ್ಶನ ಹಾಗೂ ತರಗತಿಗಳಿಗೆ ಒತ್ತು ಕೊಟ್ಟು ಸಮಾಜಮುಖಿಯಾಗಿ ತೆರೆದುಕೊಂಡಿದೆ. ಇಂತಹ ಸಂಸ್ಥೆಗಳಿಗೆ ಪ್ರಜ್ಞಾವಂತ ಕಲಾಭಿಮಾನಿಗಳು ಮಾನ್ಯತೆ ನೀಡಬೇಕು.” ಎಂದರು. ಉದ್ಯಮಿ ಸುಬ್ರಾಯ ಆಚಾರ್ ಮಾತನಾಡಿ “ಯಕ್ಷಗಾನದ ಕಲೆ ವಿಶ್ವವ್ಯಾಪಿಗೊಳಿಸುವಲ್ಲಿ ಸಾಂಪ್ರದಾಯಿಕವಾಗಿಯೇ ಮುನ್ನಡೆಸಿದ ಸಂಸ್ಥೆ ‘ಯಕ್ಷಾಂತರಂಗ’. ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆಯ ‘ಸಿನ್ಸ್ 1999 ಶ್ವೇತಯಾನ’ ಕಾರ್ಯಕ್ರಮದೊಳಗೆ ಯಕ್ಷಾಂತರಂಗದ…
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಅಗಲಿದ ಹಿರಿಯ ಬರಹಗಾರರ ನೆನಪಿನಲ್ಲಿ ಹಮ್ಮಿಕೊಂಡಿದ್ದ ಶ್ರದ್ದಾಂಜಲಿ ಸಭೆಯು ದಿನಾಂಕ 27-03-2024ರಂದು ಜರಗಿತು. ಈ ಕಾರ್ಯಕ್ರಮದಲ್ಲಿ ನುಡಿನಮನವನ್ನು ಸಲ್ಲಿಸಿದ ನಾಡೋಜ ಡಾ.ಮಹೇಶ ಜೋಶಿ “ಗುರುಲಿಂಗ ಕಾಪಸೆಯವರು ಕನ್ನಡ ಸಾಹಿತ್ಯದ ಸೀಮೆಯನ್ನು ಗಮನಾರ್ಹವಾಗಿ ವಿಸ್ತರಿಸದವರು. ಮಧುರ ಚೆನ್ನ ಮತ್ತು ಅರವಿಂದರ ಕುರಿತು ಅಧಿಕೃತವಾಗಿ ಮಾತನಾಡಬಲ್ಲವರಾಗಿದ್ದ ಅವರು ಅಧ್ಯಾತ್ಮದ ಹಿರಿಮೆಯನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ್ದರು. ಹದಿನೆಂಟನೆಯ ವಯಸ್ಸಿನಲ್ಲಿ ತಮ್ಮೂರಿನಲ್ಲಿ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ್ದ ಗುರುಲಿಂಗ ಕಾಪಸೆಯವರು ಸ್ವ-ಅಧ್ಯಯನದಿಂದ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾದರು. ಅವರು ಸೇವೆ ಸಲ್ಲಿಸುತ್ತಿದ್ದ ಅವಧಿಯಲ್ಲಿ ಗ್ರಾಮೀಣ ಪ್ರದೇಶದಿಂದ ಬಂದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿ ಅವರು ದೊಡ್ಡ ಪ್ರಮಾಣದ ಸಾಧನೆ ಮಾಡಲು ಕಾರಣರಾದರು. ಕರ್ನಾಟಕ ಸಾಹಿತ್ಯ ಅಕಾಡಮಿ ಅಧ್ಯಕ್ಷರಾದ ಸಂದರ್ಭದಲ್ಲಿ ಹಲವಾರು ವಿಶಿಷ್ಟ ಯೋಜನೆಗಳನ್ನು ರೂಪಿಸಿದ್ದರು. ಮಧುರಚೆನ್ನರ ಜೀವನ ಹಾಗೂ ಕೃತಿಗಳು ಕುರಿತು ಮಹಾಪ್ರಬಂಧ ರಚಿಸಿ ಡಾಕ್ಟರೇಟ್ ಪಡೆದಿದ್ದ ಕಾಪಸೆಯವರು ಸಂಪಾದಿಸಿದ ಮಧುರ ಚೆನ್ನರ ಕೃತಿಗಳಲ್ಲಿ ಆ ಕಾಲದ…
ಸಿದ್ಧಕಟ್ಟೆ : ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಸಂಶೋಧನಾ ಕೇಂದ್ರದ ವತಿಯಿಂದ ಸಿದ್ಧಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದೊಂದಿಗೆ ಏರ್ಪಡಿಸಿದ ‘ಕನಕದಾಸರ ಕಾವ್ಯಗಳು : ಸ್ವರೂಪ ಮತ್ತು ಆಶಯ’ ಎಂಬ ವಿಷಯದ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣವು ದಿನಾಂಕ 28-03-2024ರಂದು ನಡೆಯಿತು. ಈ ವಿಚಾರ ಸಂಕಿರಣದಲ್ಲಿ ಸಂಸ್ಕೃತಿ ಚಿಂತಕ ಮುನಿರಾಜ ರೆಂಜಾಳ ಇವರು ‘ಹರಿಭಕ್ತಿಸಾರ’ ಕೃತಿಯ ಕುರಿತು ಉಪನ್ಯಾಸ ನೀಡುತ್ತಾ “ಬದುಕಿನಲ್ಲಿ ಮೌಲ್ಯ, ಋಣಪ್ರಜ್ಞೆ, ದೇವರ ಭಯ ಇರಬೇಕು. ತನ್ನ ಧರ್ಮವನ್ನು ಅರಿತು ಆಚರಿಸುವಂತೆ ಇತರೆ ಧರ್ಮಗಳನ್ನೂ ಗೌರವಿಸಬೇಕು. ದೇವರ ವಿಷಯದಲ್ಲಿ ನಾವು ಚಿಕ್ಕವರಾಗುವುದು ಬೇಡ ಎಂಬುದು ಕನಕದಾಸರನ್ನೂ ಒಳಗೊಂಡಂತೆ ಎಲ್ಲ ಸಂತರ ಸಂದೇಶ. ಕನಕದಾಸರು ಮನುಷ್ಯನ ಅಸಹಾಯಕತೆಯನ್ನು ಅರ್ಥಮಾಡಿಕೊಂಡು ಭಕ್ತಿಯ ದಾರಿಯಲ್ಲಿ ಸಾಂತ್ವನ ಹೇಳಲು ಹರಿಭಕ್ತಿಸಾರ ಮತ್ತು ಕೆಲವು ಕೀರ್ತನೆಗಳನ್ನು ರಚಿಸಿದರು” ಎಂದು ಹೇಳಿದರು. ‘ರಾಮಧಾನ್ಯ ಚರಿತೆ’ ಕಾವ್ಯದ ಕುರಿತು ಮಾತನಾಡಿದ ವಾಮದಪದವು ಸ.ಪ್ರ. ಕಾಲೇಜಿನ ಪ್ರಾಧ್ಯಾಪಕಿ ಡಾ. ರೇಷ್ಮಾ ಭಟ್ ಮಾತನಾಡಿ “ಹಿಂದಿನ ಕಾವ್ಯಗಳ ಓದಿನಿಂದ ನಿಜ ಭಾರತದ…
ಬೆಂಗಳೂರು : ರಂಗ ಚಂದಿರ ತಂಡ ಆಯೋಜಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮಮವು ದಿನಾಂಕ 27-3-2024ರಂದು ಸಂಜೆ ಬೆಂಗಳೂರಿನ ಎನ್. ಆರ್. ಕಾಲೋನಿಯಲ್ಲಿರುವ ಸಿ. ಅಶ್ವತ್ ಸಭಾಂಗಣದಲ್ಲಿ ನಡೆಯಿತು. ರಂಗಕರ್ಮಿಗಳಾದ ಸಿ. ಕೆ. ಗುಂಡಣ್ಣ ಚಿಕ್ಕಮಗಳೂರು ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎನ್. ಆರ್. ಹೆಗಡೆ, ಆರ್. ಕೆ. ಹೆಗಡೆ, ಮಾಗಡಿ ಗಿರೀಶ್, ಶ್ರೀಧರ್ ಗೌಡ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾದ ಜಿ. ಪಿ. ಓ. ಚಂದ್ರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಬಿಸ್ಮಿಲ್ಲಾ ಖಾನ್ ಯುವ ಪ್ರಶಸ್ತಿ ಪುರಸ್ಕೃತರಾದ ನಾಟಕಕಾರ ಬೇಲೂರು ರಘುನಂದನ ಹಾಗೂ ಭರತನಾಟ್ಯ ಕಲಾವಿದೆ ಕುಮಾರಿ ಚಿತ್ರಾರಾವ್ ಇವರಿಗೆ ರಂಗ ಗೌರವ ಸಲ್ಲಿಸಲಾಯಿತು. ಸಭಾಕಾರ್ಯಕ್ರಮದ ಬಳಿಕ ಜೋಗಿಲ ಸಿದ್ದರಾಜು ಮತ್ತು ಲಕ್ಷ್ಮೀನಾರಾಯಣ್ ಇವರಿಂದ ರಂಗಗೀತೆಗಳು ಪ್ರಸ್ತುತಗೊಂದವು. ಕಾರ್ಯಕ್ರಮದ ಅಂತ್ಯದಲ್ಲಿ ಹಿರಿಯ ರಂಗಕರ್ಮಿಗಳಾದ ಶ್ರೀನಿವಾಸ್ ಜಿ. ಕಪ್ಪಣ್ಣ ಇವರ ಸಹಕಾರದಿಂದ ನಟನ ತಂಡ ಮೈಸೂರು ಪ್ರಸ್ತುತಪಡಿಸಿದ ‘ಕಣಿವೆಯ ಹಾಡು’ ನಾಟಕ ಪ್ರದರ್ಶನಗೊಂಡಿತು.
ಮಂಗಳೂರು : ಅಮೃತ ಪ್ರಕಾಶನ ಪತ್ರಿಕೆ ಆಯೋಜಿಸಿದ ಸರಣಿ ಕೃತಿ ಬಿಡುಗಡೆ ಕಾರ್ಯಕ್ರಮದ 39ನೇ ಕೃತಿ ಸಪ್ನ ದಿನಕರ್ ಅವರ ‘ಮೌನದೊಳಗಿನ ಮಾತು’ ಕವನ ಸಂಕಲನದ ಲೋಕಾರ್ಪಣೆ ಸಮಾರಂಭವು ದಿನಾಂಕ 27-03-2024ನೇ ಬುಧವಾರ ಮಂಗಳೂರಿನ ಪತ್ರಿಕಾಭವನದಲ್ಲಿ ನಡೆಯಿತು. ಪ್ರೆಸ್ ಕ್ಲಬ್ ಮಂಗಳೂರು ಇದರ ಅಧ್ಯಕ್ಷರಾದ ಪಿ.ಬಿ ಹರೀಶ್ ರೈ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಲೇಖಕಿ ಮತ್ತು ವಿಮರ್ಶಕಿಯಾದ ಶ್ರೀಮತಿ ವಿದ್ಯಾ ನಾಯಕ್ ಪುಸ್ತಕ ಲೋಕಾರ್ಪಣೆಗೊಳಿಸಿದರು. ಮುಖ್ಯ ಅತಿಥಿಗಳಾಗಿ ಗಣ್ಯರಾದ ಯುಗ ಪುರುಷ ಪತ್ರಿಕೆಯ ಸಂಪಾದಕ ಕುಡೆತ್ತೂರು ಭುವನಾಭಿರಾಮ ಉಡುಪ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷರಾದ ಹರಿಕೃಷ್ಣ ಪುನರೂರು, ಲೇಖಕಿ ಶ್ರೀಮತಿ ವೀಣಾ ಟಿ. ಶೆಟ್ಟಿ ಹಾಗೂ ಕವಿಯತ್ರಿ ಮತ್ತು ಶಿಕ್ಷಕಿಯಾದ ಸುಧಾ ನಾಗೇಶ್ ಉಪಸ್ಥಿತರಿದ್ದರು. ಅಮೃತ ಪ್ರಕಾಶನ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ.ಮಾಲತಿ ಶೆಟ್ಟಿ ಮಾಣೂರು ಸ್ವಾಗತಿಸಿ, ಕವಯಿತ್ರಿ ಹಾಗೂ ಶಿಕ್ಷಕಿಯಾದ ಸುರೇಖಾ ಯಾಳವಾರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.