Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಕಥಾ ಬಿಂದು ಪ್ರಕಾಶನ ಏರ್ಪಡಿಸಿದ ‘ಕಥಾ ಬಿಂದು ಸಾಹಿತ್ಯ ಸಂಭ್ರಮ’ ಕಾರ್ಯಕ್ರಮವು ದಿನಾಂಕ 18 ಏಪ್ರಿಲ್ 25ರಂದು ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಂಗಳೂರಿನ ಜನಪ್ರಿಯ ದಿನಪತ್ರಿಕೆ ‘ಜಯಕಿರಣ’ದ ವಾರದ ವಿಭಾಗದಲ್ಲಿ ಪ್ರಕಟವಾದ ಮಂಗಳೂರಿನ ಕಣಚೂರು ಹಾಗೂ ಮಂಗಳಾ ಆಸ್ಪತ್ರೆಯ ಶಸ್ತ್ರ ಕ್ರಿಯಾ ಕ್ಷಾರ ತಜ್ಞ ಹಾಗೂ ಬರಹಗಾರರಾದ ಡಾ. ಸುರೇಶ ನೆಗಳಗುಳಿಯವರ ಕವನಗಳ ಸಂಕಲನ ‘ಕಾವ್ಯಕಿರಣ’ವನ್ನು ಲೋಕಾರ್ಪಣೆಗೊಳಿಸಲಾಯಿತು. 63 ಕವನಗಳಿರುವ ಈ ಸಂಕಲನವು ತಯಾರಾಗುವಲ್ಲಿ ತನ್ನ. ರಚನೆಗಳನ್ನು ಪ್ರಕಟಿಸುತ್ತಾ ಸ್ಪೂರ್ತಿಯಾದ ಜಯಕಿರಣ ದಿನಪತ್ರಿಕೆ ಸಂಪಾದಕ ಶ್ರೀ ಜಿತೇಶ್ ಹಾಗೂ ಪ್ರಕಟಿಸುವಲ್ಲಿ ನೆರವಾದ ಕಥಾಬಿಂದು ಪ್ರಕಾಶನದ ಪಿ. ವಿ. ಪ್ರದೀಪ ಕುಮಾರ್ ಇವರನ್ನು ಲೇಖಕರು ಸ್ಮರಿಸಿದರು. “ಇದರಲ್ಲಿ ಗಜಲ್, ನವ್ಯ ನವ್ಯೋತ್ತರ, ಷಟ್ಪದಿ ,ತನಗ ಮುಂತಾದ ಪ್ರಕಾರಗಳ ತನ್ನ ರಚನೆಗಳನ್ನು ಪ್ರಕಟಿಸಲಾಗಿದೆ. ಇದು ಹಲವು ಪ್ರಕಾರಗಳ ಮಾಹಿತಿಗೆ ಅನುಕೂಲ” ಎಂದು ತಿಳಿಸಿದರು. ಸಮಾರಂಭದಲ್ಲಿ ಧರ್ಮದರ್ಶಿಶ್ರೀ ಹರಿಕೃಷ್ಣ ಪುನರೂರು ಕೃತಿಯನ್ನು ಲೋಕಾರ್ಪಣೆಗೊಳಿಸಿದರು. ಯುಗಪುರುಷ ಪ್ರಕಾಶನದ ಮುಖ್ಯಸ್ಥರಾದ ಭುವನಾಭಿರಾಮ ಉಡುಪ,…
ಮಂಗಳೂರು : ಸರಯೂ ಬಾಲ ಯಕ್ಷ ವೃಂದ(ರಿ) ಮಕ್ಕಳ ಮೇಳ ಇದರ ರಜತೋತ್ಸವ ಸಮಾರಂಭ (2000-2025) ದ ಆಚರಣೆಯ ಪ್ರಯುಕ್ತ 16 ಮೇ 2025 ರಿಂದ 01 ಜೂನ್ 2025ರ ವರೆಗಿನ ನಡೆಯಲಿರುವ “ಯಕ್ಷ ಪಕ್ಷ- ರಜತ ಸರಯೂ” ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯ ಬಿಡುಗಡೆ ಸಮಾರಂಭವು ದಿನಾಂಕ 17 ಏಪ್ರಿಲ್ 2025ರ ಗುರುವಾರದಂದು ಶ್ರೀ ದುರ್ಗಾಪರಮೇಶ್ವರಿ ನಾಗಕನ್ನಿಕಾ ದೇವಸ್ಥಾನ, ತೋಟದ ಮನೆ ದೇರೇಬೈಲ್ ಇಲ್ಲಿ ನಡೆಯಿತು. ದೇವಳದ ಅಧ್ಯಕ್ಷರಾದ ಬಿ. ನಾಗರಾಜ ಶೆಟ್ಟಿ, ವಾರ್ಡಿನ ಮಾಜಿ ಮ. ನ. ಪಾ. ಸದಸ್ಯೆ ಶ್ರೀಮತಿ ರಂಜಿನಿ ಎಲ್. ಕೋಟ್ಯಾನ್, ಶ್ರೀ ನಾಗರಾಜ ಖಾರ್ವಿ, ಮಧುಸೂದನ ಅಲೆವೂರಾಯ ವರ್ಕಾಡಿ, ಗುರುಪ್ರಸಾದ್ ಕಡಂಬಾರ್, ಶಿವಪ್ರಸಾದ್ ದಂಪತಿ, ಗೌತಂ ಭಂಡಾರಿ ದಂಪತಿ, ರಾಘಣ್ಣ, ಯೋಗೀಶ್, ವರ್ಕಾಡಿ ರವಿ ಅಲೆವೂರಾಯ, ಕು. ಸೈಶಾ ಭಂಡಾರಿ, ಹಂಸಿಕಾ, ಕೃತಿ ದೇವಾಡಿಗ, ಗೌರವ್ ಕೊಂಚಾಡಿ, ಶ್ರೀಮತಿ ವಿಜಯಲಕ್ಮೀ ಎಲ್. ಎನ್., ದೇವಳದ ಪದಾಧಿಕಾರಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಮಡಿಕೇರಿ : ಕಲಾಕಾವ್ಯ ನಾಟ್ಯ ಶಾಲೆಯ ಏಳನೇ ವರ್ಷದ ವಾರ್ಷಿಕೋತ್ಸವವವು ಸಂಭ್ರಮದಿಂದ ದಿನಾಂಕ 14 ಏಪ್ರಿಲ್ 2025ರಂದು ನಡೆಯಿತು. ಮಡಿಕೇರಿಯ ಕೆಳಗಿನ ಗೌಡ ಸಮಾಜದಲ್ಲಿ ನಡೆದ ಕಾರ್ಯಕ್ರಮವನ್ನು ಭರತನಾಟ್ಯ ಕಲಾವಿದೆ ಮಿಲನ ಭರತ್ ಹಾಗೂ ಯೋಗ ಗುರು ಶಿಲ್ಪ ರವೀಂದ್ರ ರೈ ಉದ್ಘಾಟಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಿಲನಾ ಭರತ್ “ಒಂದು ನಾಟ್ಯಶಾಲೆಯನ್ನು ಸ್ಥಾಪಿಸುವುದು ಸುಲಭದ ವಿಷಯವಲ್ಲ, ತಾನು ಕಲಿತು ಬಳಿಕ ಇತರರಿಗೆ ಆ ವಿದ್ಯೆಯನ್ನು ಧಾರೆಯೆರೆಯಬೇಕಾಗಿರುತ್ತದೆ, ಇದಕ್ಕೆ ಬಹಳ ಅತ್ಮಸ್ಥೆರ್ಯದ ಅಗತ್ಯವಿರುತ್ತದೆ. ಕಾವ್ಯಶ್ರೀ ಅವರು ಎಲ್ಲವನ್ನೂ ಮೀರಿ ಈ ಶಾಲೆಯನ್ನು ಕಟ್ಟಿದ್ದಾರೆ. ಅವರ ಸಾಧನೆ ನಿಜಕ್ಕೂ ಅಭಿನಂದನೀಯ” ಎಂದರು. ಶಿಲ್ಪಾ ರವೀಂದ್ರ ರೈ ಮಾತನಾಡಿ “ಇಂದು ಭಾರತೀಯ ನೃತ್ಯಕಲೆ ಕಲಿಯುವವರ ಸಂಖ್ಯೆ ದಿನದಿಂದ ದಿನಕ್ಕೆ ಕುಂಠಿತವಾಗುತ್ತಿದೆ, ಜನರು ಆಸಕ್ತಿ ಕಳೆದುಕೊಳ್ಳುತ್ತಿರುವುದು ಇದಕ್ಕೆ ಮೂಲ ಕಾರಣ. ಆದರೆ ಕಾವ್ಯಶ್ರೀ ದಕ್ಷಿಣ ಭಾರತದ ಪ್ರಮುಖ ನೃತ್ಯ ಪ್ರಕಾರವಾದ ಭರತನಾಟ್ಯದ ಮೇಲಿಟ್ಟಿರುವ ಗೌರವ, ಅಭಿಮಾನ ನಿಜಕ್ಕೂ ಮೆಚ್ಚುವಂತದ್ದು, ಈ ನೃತ್ಯಶಾಲೆ ಸ್ಥಾಪಿಸಲು ಅವರು ಅಂದು…
ಒಂಟ್ವಾಳ: ಬಿ.ಸಿ.ರೋಡಿನ ಸಂಚಯಗಿರಿಯಲ್ಲಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯ ವತಿಯಿಂದ ‘ರಾಣಿ ಅಬ್ಬಕ್ಕ ಬಹುಮುಖಿ ಚಿಂತನೆ’ ಎಂಬ ವಿಷಯದ ಕುರಿತು ಒಂದು ದಿನ ಪೂರ್ತಿ ವಿಚಾರಗೋಷ್ಠಿ ಹಾಗೂ ಸಂವಾದ ಕಾರ್ಯಕ್ರಮ ದಿನಾಂಕ 18 ಏಪ್ರಿಲ್ 2025ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸುರತ್ಕಲ್ ಗೋವಿಂದದಾಸ್ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ ಮಾತನಾಡಿ “ರಾಣಿ ಅಬ್ಬಕ್ಕ ಈ ಮಣ್ಣಿನವಳಾಗಿದ್ದು ಸ್ವಾತಂತ್ರ್ಯಕ್ಕಾಗಿ ಧಾರೆ ಎರೆದಿದ್ದವಳಾಗಿದ್ದರೂ ಕಥೆ, ಕಾವ್ಯ ಗಳಲ್ಲಿ ಬಿಂಬಿತವಾದದ್ದು ಅತೀ ಕಡಿಮೆ. 1995 ರಲ್ಲಿ ಬಿ. ಸಿ. ರೋಡಿನ ಸಂಚಯಗಿರಿಯಲ್ಲಿ ಆರಂಭಗೊಂಡ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದಿಂದ ಅಬ್ಬಕ್ಕ ಹೆಚ್ಚು ಪ್ರಚಾರಕ್ಕೆ ಬಂದಿದ್ದಾಳೆ ಎಂಬುದನ್ನು ನಾವೆಲ್ಲರೂ ನೆನಪಿಸಿಕೊಳ್ಳಬೇಕು” ಎಂದು ಹೇಳಿದ್ದಾರೆ. ವಿದ್ವಾಂಸ ಡಾ. ರುಡೊಲ್ಫ್ ನೊರೊನ್ ಇವರು ಪೋರ್ಚುಗೀಸ್ ದಾಖಲೆಯಲ್ಲಿ ಅಬ್ಬಕ್ಕ ಹೇಗೆ ಪ್ರತಿಬಿಂಬಿತವಾಗಿದ್ದಾಳೆ ಎನ್ನುವುದನ್ನು ಪೊರ್ಚುಗೀಸ್ ಬರವಣಿಗೆ ಗಳ ಮುಖಾಂತರ ತಿಳಿಸಿದರು. ಸಂಸ್ಕೃತಿಕ ಚಿಂತಕ ರಾಜಗೋಪಾಲ್ ಕನ್ಯಾನ ಅವರು ಅಬ್ಬಕ್ಕ…
ಕೋಟ : ಕೋಟದ ಸಾಲಿಗ್ರಾಮ ಮಕ್ಕಳ ಮೇಳವು ಸುವರ್ಣ ಪರ್ವದ ಸರಣಿ ಕಾರ್ಯಕ್ರಮವಾಗಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ಸಹಯೋಗದೊಂದಿಗೆ ಆಯೋಜಿಸಿದ ಯಕ್ಷ ತ್ರಿವಳಿ’ ಯಕ್ಷೋತ್ಸವದ ಉದ್ಘಾಟನಾ ಸಮಾರಂಭವು ದಿನಾಂಕ 17 ಏಪ್ರಿಲ್ 2025ರಂದು ಕೋಟ ಮೂರ್ಕೈಯ ಹಂದೆ ಮಹಾ ವಿಷ್ಣು ವಿನಾಯಕ ದೇವಸ್ಥಾನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕುಂದಾಪುರ ವಿಧಾನ ಸಭಾ ಶಾಸಕರಾದ ಕಿರಣ ಕುಮಾರ ಕೊಡ್ಗಿ ಮಾತನಾಡಿ “ಯಕ್ಷಗಾನ ಕಲೆ ಉಳಿದು ಬೆಳೆಯುವಲ್ಲಿ ಎಲ್ಲರೂ ಕೈ ಜೋಡಿಸಬೇಕು. ಸರಕಾರದಿಂದ ಬರುವ ಎಲ್ಲಾ ರೀತಿಯ ಅನುದಾನದ ಜೊತೆಗೆ ಈ ಭಾಗದ ಜನ ಪ್ರತಿನಿಧಿಗಳಾಗಿ ನಮ್ಮಿಂದ ಮಾಡಬಹುದಾದ ಹೆಚ್ಚಿನ ನೆರವನ್ನು ನೀಡುವಲ್ಲಿ ನಾವು ಸದಾ ಸಿದ್ಧರು. ಶ್ರೀಧರ ಹಂದೆ ಮತ್ತು ಕಾರ್ಕಡ ಶ್ರೀನಿವಾಸ ಉಡುಪರ ಸಾಲಿಗ್ರಾಮ ಮಕ್ಕಳ ಮೇಳ ಐವತ್ತು ವರ್ಷಗಳ ಸಾರ್ಥಕ ಇತಿಹಾಸವನ್ನು ಸೃಷ್ಟಿಸಿರುವುದು ಅಭಿನಂದನೀಯ. ಈ ಕಲೆಯ ಏಳಿಗೆಗಾಗಿ ಶ್ರಮಿಸುತ್ತಿರುವ ಯಕ್ಷಗಾನ ಅಕಾಡೆಮಿ ಹಾಗೂ ಉಡುಪಿ ಕಲಾರಂಗದ ಚಟುವಟಿಕೆಗಳು ಸ್ಮರಣಿಯ” ಎಂದು ಹೇಳಿದರು. ಅಧ್ಯಕ್ಷತೆ…
ಅಂಕೋಲಾ : ಅಂಕೋಲಾ ತಾಲ್ಲೂಕಿನ ಬೇಲೇಕೇರಿಯ ಶ್ರೀ ಜೈನಬೀರ ದೇವಾಲಯದ ಸನಿಹದಲ್ಲಿ ಎಪ್ರಿಲ್ 21ರ ಸೋಮವಾರದಂದು ರಾತ್ರಿ 10:00 ಗಂಟೆಗೆ ಉಪನ್ಯಾಸಕರಾದ ಹರೀಶ ಬೀರಣ್ಣ ನಾಯಕರವರ ಸಂಯೋಜನೆಯಲ್ಲಿ ಬೇಲೇಕೇರಿ ಊರ ನಾಗರಿಕರ ಪ್ರಾಯೋಜಕತ್ವದಲ್ಲಿ ದಕ್ಷಿಣೋತ್ತರದ ಹೆಸರಾಂತ ಕಲಾವಿದರಿಂದ “ಶ್ರೀ ಶನೀಶ್ವರ ಮಹಾತ್ಮೆ” ಎಂಬ ಸುಂದರ ಪೌರಾಣಿಕ ಯಕ್ಷಗಾನ ಕಥಾನಕವು ಬಯಲಾಟವಾಗಿ ಪ್ರದರ್ಶನಗೊಳ್ಳಲಿದೆ. “ರಸರಾಗ ಚಕ್ರವರ್ತಿ” ಜಿ. ಆರ್. ಕಾಳಿಂಗ ನಾವಡರನ್ನು ನೆನಪಿಸುವ ತುಂಬು ಕಂಠಸಿರಿಯ ಭಾಗವತದ್ವಯರಾದ ವಿನಯ ಶೆಟ್ಟಿ ಮತ್ತು ಗಣಪತಿ ಕೋಡ್ಕಣಿಯವರ ಸುಮಧುರವಾದ ಹಾಡುಗಾರಿಕೆಗೆ ಮದ್ದಳೆಯಲ್ಲಿ ನರಸಿಂಹ ಹೆಗಡೆ ಮುರೂರು ಹಾಗೂ ಚಂಡೆಯಲ್ಲಿ ಗಜಾನನ ಹೆಗಡೆ ಕೋಣಾರೆಯವರು ಸಾಥ್ ನೀಡಲಿದ್ದಾರೆ. ಕರ್ನಾಟಕ ಯಕ್ಷಗಾನ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷರಾಗಿರುವ “ಕಣ್ಣೆದುರುಗಿನ ಬೃಹಸ್ಪತಿ” ಡಾ. ಜಿ.ಎಲ್. ಹೆಗಡೆಯವರು ಪ್ರಪ್ರಥಮವಾಗಿ ಬೃಹಸ್ಪತಿಯ ವೇಷದಲ್ಲಿಯೂ, ವಿಕ್ರಮನ ಪಾತ್ರಕ್ಕೆ ಹೆಸರಾದ ”ಪದವಿಗಳ ಸರದಾರ”, “ರಂಗ ವಿಕ್ರಮ” ಎಂಬ ಅಭಿದಾನಗಳಿಂದ ಸುವಿಖ್ಯಾತರಾದ ಮಂಜುನಾಥ ಗಾಂವಕರ್ ಬರ್ಗಿಯವರು ವಿಕ್ರಮಾದಿತ್ಯ ಮಹಾರಾಜನ ಪಾತ್ರದಲ್ಲಿಯೂ ಕಾಣಿಸಿಕೊಳ್ಳಲಿರುವರು. ಲಾಲಿತ್ಯಮಯ ನೃತ್ಯದ ಲಯಬ್ರಹ್ಮ ಬಿ. ಎಸ್.…
ಕಾಸರಗೋಡು: ಮಾತಾಪಿತರ ಆಶೀರ್ವಾದ ಯಾವತ್ತೂ ಒಳಿತನ್ನು ಉಂಟುಮಾಡುತ್ತದೆ. ಅವರ ಆಶೀರ್ವಾದ ಕಲ್ಪವೃಕ್ಷಕ್ಕೆ ಸಮಾನವಾದದು. ಕಾಸರಗೋಡಿದ ನೆಲ ಸಾಂಸ್ಕೃತಿಕವಾಗಿಯೂ ಸಾಹಿತ್ಯಿಕವಾಗಿಯೂ ಸಂಪತ್ಭರಿತವಾದದ್ದು, ಈ ನೆಲದಲ್ಲಿ ಆತ್ಮೀಯ ರಂಗಭೂಮಿಯ ಕಲ್ಪನೆ ಯೊಂದಿಗೆ ಜ್ಯೋತಿಶ್ರೀ ಟ್ರಸ್ಟ್ ಮೊದಲ ಹೆಜ್ಜೆ ಇಡುತ್ತಿದೆ. ತನ್ನ ಪತಿದೇವರಿಗೆ ಸಂಗೀತವೆಂದರೆ ಪಂಚಪ್ರಾಣವಾಗಿತ್ತು ಈ ಪರಿಸರದಲ್ಲಿಯೇ ಎಷ್ಟೋ ಸಂಗೀತ ಕಾರ್ಯಕ್ರಮಗಳು ಜರಗಿದೆ ಮತ್ತಷ್ಟು ಸಾಂಸ್ಕೃತಿಕ ಕೆಲಸ ಮಾಡಲು ಯೋಚಿಸಿ ಅಂತರಂಗ ಕಾಸರಗೋಡಿನವರಿಗೆ ತೆರೆದಿದೆ ಎಂದು ಟ್ರಸ್ಟಿನ ಅಧ್ಯಕ್ಷ್ಯೆ ಶ್ರೀಮತಿ ಜ್ಯೋತಿಪ್ರಭಾ ರಾವ್ ಹೇಳಿದರು. ಅವರು ಕಾಸರಗೋಡಿನ ಶಾಂತ ದುರ್ಗಾಂಭಾ ರಸ್ತೆಯಲ್ಲಿರುವ ‘ಬನಶಂಕರಿ’ಯ ಆವರಣದಲ್ಲಿ ನಿರ್ಮಿಸಲಾದ ‘ಜ್ಯೋತಿಶ್ರೀ’ ಅಂತರಂಗ ರಂಗವೇದಿಕೆ ಹಾಗೂ ಜೋತಿಶ್ರೀ ಟ್ರಸ್ಟ್ ಇದರ ಲಾಂಛನವನ್ನು ಬಿಡುಗಡೆಗೊಳಿಸಿ, ದೀಪ ಬೆಳಗಿಸಿ ಮಾತನಾಡುತ್ತಿದ್ದರು.ಏಪ್ರಿಲ್ ತಿಂಗಳ 12ರಂದು ಬನ ಸುಂದರಿ ಆವರಣದಲ್ಲಿ ಜರಗಿದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ರಂಗ ನಿರ್ದೇಶಕರು, ಚಲನಚಿತ್ರ ನಟರು, ಟ್ರಸ್ಟಿನ ಉಪಾಧ್ಯಕ್ಷರು ಆಗಿರುವ ಕಾಸರಗೋಡು, ಚಿನ್ನಾ ಮಾತನಾಡಿ “ತಂದೆ ತಾಯಿಯವರ ಹೆಸರಲ್ಲಿ ‘ಆತ್ಮೀಯ ರಂಗಭೂಮಿ’ಯ ಕಲ್ಪನೆಯೊಂದಿಗೆ ಕಾಸರಗೋಡಿನಲ್ಲಿ ಪ್ರಪ್ರಥಮವಾಗಿ ನಿರ್ಮಿಸಿದ…
ಉಚ್ಛಿಲ : ವಿದ್ವಾನ್ ರಾಮಚಂದ್ರ ಉಚ್ಚಿಲ್ (ಚ.ರಾ.) ಜನ್ಮಶತಮಾನೋತ್ಸವ ಸಮಿತಿ ಮಂಗಳೂರು, ಗುರುಶಿಷ್ಯ ಒಕ್ಕೂಟ, ಚ.ರಾ. ಪ್ರಕಾಶನ ಮುಂಬಯಿ ಆಯೋಜಿಸುವ ಕೃತಿಸಂಚಯ ಲೋಕಾರ್ಪಣೆ ಮತ್ತು ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ದಿನಾಂಕ 20 ಏಪ್ರಿಲ್ 2025ರ ಅಪರಾಹ್ನ ಘಂಟೆ 2.30 ರಿಂದ ಉಚ್ಚಿಲದ ಬೋವಿ ಹಿರಿಯ ಪ್ರಾಥಮಿಕ ಶಾಲೆಯ ವಜ್ರಮಹೋತ್ಸವ ಸ್ಮಾರಕ ಕಟ್ಟಡದ ಸಭಾಗೃಹದಲ್ಲಿ ನಡೆಯಲಿದೆ. ಸಂಶೋಧಕರು ಮತ್ತು ಮುಂಬಯಿ ವಿ.ವಿ.ಯ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ತಾಳ್ತಜೆ ವಸಂತ ಕುಮಾರ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಪ್ರಸಿದ್ಧ ವೈದ್ಯರು ಮತ್ತು ಯಕ್ಷಗಾನ ಅರ್ಥದಾರಿಗಳಾದ ಡಾ. ರಮಾನಂದ ಬನಾರಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಇವರು ಚ.ರಾ. ಸಂಸ್ಮರಣೆ ಗೈಯ್ಯಲಿದ್ದು, ಪ್ರಧಾನ ಸಂಪಾದಕಿಯಾದ ಡಾ. ವಾಣಿ ಎನ್. ಉಚ್ಚಿಲ್ಕರ್ ಕೃತಿ ಪರಿಚಯ ಮಾಡಿಕೊಡಲಿದ್ದಾರೆ. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಯಕ್ಷಗಾನ ವಿದ್ವಾಂಸರಾದ ಡಾ. ಎಂ. ಪ್ರಭಾಕರ ಜೋಶಿ, ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ, ಮುದ್ದಣ ಪ್ರತಿಷ್ಠಾನದ ಸ್ಥಾಪಕರಾದ ಶ್ರೀ…
ಮಂಗಳೂರು : ‘ಬಹು ಓದು ಬಳಗ’ ಮಂಗಳೂರು ಪ್ರಕಟಿಸಿರುವ ‘ತಾಯಿ ಬೇರು’ ಪುಸ್ತಕದ ಲೋಕರ್ಪಣಾ ಸಮಾರಂಭವು ದಿನಾಂಕ 14 ಏಪ್ರಿಲ್ 2025ರ ಸೋಮವಾರದಂದು ಮಂಗಳೂರಿನ ಸಹೋದಯ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಪುಸ್ತಕವನ್ನು ಲೋಕಾರ್ಪಣೆಗೊಳಿಸಿದ ಸಮಾಜಶಾಸ್ತ್ರಜ್ಞ ಡಾ. ಲಕ್ಷ್ಮೀಪತಿ ಸಿ. ಜೆ. ಮಾತನಾಡಿ “ಅನ್ನೋನ್ಯವಾಗಿರುವ ಜನರ ಮಧ್ಯೆ ಭಯ ಹುಟ್ಟಿಸುವವರು ನಿಜವಾದ ಭಯೋತ್ಪಾದಕರಾಗಿದ್ದಾರೆ. ಈ ಭಯೋತ್ಪಾದಕರನ್ನು ಕರಾವಳಿಯ ಜನತೆ ಮಟ್ಟಹಾಕಬೇಕಿದೆ. ಅದಕ್ಕಾಗಿ ಮೌನ ಮುರಿದು ಪ್ರಬಲ ಹೋರಾಟ ಮಾಡಬೇಕಿದೆ. ಕರಾವಳಿಯು ಬಹುಸಂಸ್ಕೃತಿಗೆ ಹೆಸರುವಾಸಿಯಾಗಿದೆ. ಈ ಸಂಸ್ಕೃತಿಯನ್ನು ನಾಶಪಡಿಸಲು ಬೆರಳೆಣಿಕೆಯ ಕೆಲವು ಶಕ್ತಿಗಳು ಪ್ರಯತ್ನಿಸುತ್ತಿವೆ. ಇದಕ್ಕೆ ಶಾಂತಿ ಬಯಸುವ ಬಹುಸಂಖ್ಯಾತರು ಅವಕಾಶ ಮಾಡಿಕೊಡಬಾರದು. ಬಹುಜನರು ಮೌನವಾಗಿದ್ದರೆ ಕೋಮುವಾದಿ ಶಕ್ತಿಗಳಿಗೆ ಅದು ಮತ್ತಷ್ಟು ಅವಕಾಶ ಮಾಡಿಕೊಟ್ಟಂತಾಗುತ್ತದೆ. ತಳ ಸಮುದಾಯದ ಚರಿತ್ರೆಯನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದು ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್. ಅಂತಹ ಅಂಬೇಡ್ಕರ್ ಅವರ ಫೋಟೋವನ್ನು ಎಲ್ಲಿಡಬೇಕು ಎಂದು ಈ ಮತೀಯ ಶಕ್ತಿಗಳು ನಿರ್ಧರಿಸುವಷ್ಟರ ಮಟ್ಟಿಗೆ ತಲುಪಿರುವುದು ವಿಪರ್ಯಾಸ. ನಿಜವಾದ ಈ ಭಯೋತ್ಪಾದಕರು,…
ಮಂಗಳೂರು : ಮಂಗಳೂರು ಹಾಗೂ ಉಡುಪಿಯಲ್ಲಿ ಕಾರ್ಯಾಚರಿಸುತ್ತಿರುವ ನೃತ್ಯ ಸುಧಾ (ರಿ) ಸಂಸ್ಥೆ ಪ್ರಸ್ತುತ ಪಡಿಸುವ ‘ನೃತ್ಯೋತ್ಕರ್ಷ – 2025’ ಕಾರ್ಯಕ್ರಮವು ದಿನಾಂಕ 20 ಏಪ್ರಿಲ್ 2025ರಂದು ಮಂಗಳೂರಿನ ಕುದ್ಮಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ. ಅಂದು ಸಂಜೆ ಘಂಟೆ 5.00 ಕ್ಕೆ ದೀಪ ಪ್ರಜ್ವಲನ, 5.30 ರಿಂದ ಭರತನಾಟ್ಯ ಕಾರ್ಯಕ್ರಮ ಹಾಗೂ ಸಂಜೆ ಘಂಟೆ 7.00 ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಾನ್ಯ ವಿಧಾನ ಪರಿಷತ್ ಸದಸ್ಯರಾದ ಶ್ರೀ ಪ್ರತಾಪ್ ಸಿಂಹ ನಾಯಕ್, ಆಕಾಶವಾಣಿಯ ನಿವೃತ್ತ ಮೃದಂಗ ಕಲಾವಿದರು ಹಾಗೂ ಹಿರಿಯ ಮೃದಂಗ ವಿದ್ವಾಂಸರಾದ ಗುರು ವಿದ್ವಾನ್ ಶ್ರೀ ಕುಂಜೂರು ಹೆಚ್. ರವಿ ಕುಮಾರ್ ಬಾಗವಹಿಸಲಿದ್ದಾರೆ. ಸಭಾಕಾರ್ಯಕ್ರಮದ ಬಳಿಕ ಗುರು ವಿದುಷಿ ಶ್ರೀಮತಿ ಸುಮಂಗಲಾ ರತ್ನಾಕರ್ ರಾವ್ ಇವರ ನಾಟ್ಯಾರಾಧನ ಹಾಗೂ ಯಕ್ಷಾರಾಧನ ಕಲಾ ಕೇಂದ್ರ ಉರ್ವ ಸಂಸ್ಥೆಯ ಕಲಾವಿದರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮಕ್ಕೆ ನೃತ್ಯ ಸುಧಾ ಸಂಸ್ಥೆಯ ಅಧ್ಯಕ್ಷರಾದ ಡಾ. ಸುಧೀಂದ್ರ ರಾವ್ ಹಾಗೂ ನೃತ್ಯ…