Subscribe to Updates
Get the latest creative news from FooBar about art, design and business.
Author: roovari
ಬಂಟ್ವಾಳ : ಏರ್ಯ ಆಳ್ವ ಫೌಂಡೇಶನ್’ ಮತ್ತು ಕನ್ನಡ ಸಾಹಿತ್ಯ ಪರಿಷತ್ ಬಂಟ್ವಾಳ ಇದರ ಸಹಯೋಗದಲ್ಲಿ ‘ವಿದ್ಯಾರ್ಥಿಗಳ ಸಾಹಿತ್ಯ ಸಾಂಸ್ಕೃತಿಕ ಕಮ್ಮಟ’ದ ಅಂಗವಾಗಿ ವಿದ್ಯಾರ್ಥಿಗಳಿಗೆ ‘ಮಿನಿಕಥೆ’ ರಚನಾ ಸ್ಪರ್ಧೆ ಹಾಗೂ ಕವನ ಸ್ಪರ್ಧೆ ಆಯೋಜಿಸಲಾಗಿದೆ. ‘ಮಿನಿಕಥೆ’ 100 ಪದಗಳ ಒಳಗಿನ ಸ್ವರಚಿತ ಕಥೆಯಾಗಿರಬೇಕು. ಕವನ ಸ್ಪರ್ಧೆಯು ಮೂರು ವಿಭಾಗದಲ್ಲಿ ನಡೆಯಲಿದ್ದು, ಪ್ರಾಥಮಿಕ ವಿಭಾಗದಲ್ಲಿ ‘ಬಾಲ್ಯ’ , ಪ್ರೌಢ ವಿಭಾಗದಲ್ಲಿ ‘ಪ್ರಕೃತಿ’ ಹಾಗೂ ಕಾಲೇಜು ವಿಭಾಗದಲ್ಲಿ ಭಾಗವಹಿಸುವ ಸ್ಪರ್ಧಿಗಳು ‘ಕಾಮನ ಬಿಲ್ಲು’ ವಿಷಯದಲ್ಲಿ ಕವನಗಳನ್ನು ರಚಿಸಿ ದಿನಾಂಕ 24 ಜುಲೈ 2025ರ ಒಳಗಾಗಿ ಶ್ರೀ ದಾಮೋದರ ಮಸ್ತರ್ ಏರ್ಯ ಇವರ ಮೊಬೈಲ್ – 9449645537 ಸಂಖ್ಯೆಗೆ ವಾಟ್ಸ್ಆಪ್ ಸಂದೇಶ ಮುಖಾಂತರ ಕಳುಹಿಸಿಕೊಡಬಹುದು.
ಉಡುಪಿ : ಯಕ್ಷಗಾನ ಗುರು, ಭಾಗವತ ಪ್ರಸಾದ್ ಕುಮಾರ್ ಮೊಗೆಬೆಟ್ಟು ಅವರನ್ನು ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾರಂಗ ವಡ್ಡರ್ಸೆ ಇವರು ದಿನಾಂಕ 10 ಜುಲೈ 2025ರ ಗುರುಪೂರ್ಣಿಮೆಯಂದು ಗುರುವಂದನೆಯ ಮೂಲಕ ಗೌರವಿಸಿದರು. ವಡ್ಡರ್ಸೆ ಕಲಾರಂಗ ದ ನೂತನ ಅಧ್ಯಕ್ಷರಾದ ಗುರುಪ್ರಸಾದ ಐತಾಳ್, ಕಾರ್ಯದರ್ಶಿ ಪದ್ಮನಾಭ ಆಚಾರ್ಯ ಇವರು ಗುರುಪೂರ್ಣಿಮೆಯ ಈ ಗುರುವಂದನೆಯ ಕಾರ್ಯಕ್ರಮ ಸಂಯೋಜಿಸಿ ಮೊಗೆಬೆಟ್ಟು ಅವರ ಸ್ವಗೃಹದಲ್ಲಿ ತಮ್ಮ ತಂಡದ ಮೂಲಕ ಗೌರವಿಸಿದರು. ವಡ್ಡರ್ಸೆ ಕಲಾರಂಗದ ನಿಕಟಪೂರ್ವ ಅಧ್ಯಕ್ಷ ಸಚಿನ್ ಶೆಟ್ಟಿ ಹಾಗೂ ಶ್ರೀಕಾಂತ್ ಭಟ್, ಸತೀಶ್ ವಡ್ಡರ್ಸೆ, ಮೋಹಿತ್, ಶಿವರಂಜನ್ ಮೊದಲಾದವರು ಉಪಸ್ಥಿತರಿದ್ದರು.
ಬಂಟ್ವಾಳ : ‘ಏರ್ಯ ಆಳ್ವ ಫೌಂಡೇಶನ್’ ಮತ್ತು ಕನ್ನಡ ಸಾಹಿತ್ಯ ಪರಿಷತ್ ಬಂಟ್ವಾಳ ಇದರ ಸಹಯೋಗದಲ್ಲಿ ‘ವಿದ್ಯಾರ್ಥಿಗಳ ಸಾಹಿತ್ಯ ಸಾಂಸ್ಕೃತಿಕ ಕಮ್ಮಟ’ ಕಾರ್ಯಕ್ರಮವು ದಿನಾಂಕ 27 ಜುಲೈ 2025ನೇ ಆದಿತ್ಯವಾರ ಪೂರ್ವಾಹ್ನ ಗಂಟೆ 9.00ರಿಂದ ಬಂಟ್ವಾಳದ ‘ಏರ್ಯ ಬೀಡು’ ಇಲ್ಲಿ ನಡೆಯಲಿದೆ. ಏರ್ಯ ಬಾಲಕೃಷ್ಣ ಹೆಗ್ಡೆ ಇವರ ಗೌರವ ಉಪಸ್ಥಿತಿಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಶ್ರೀಮತಿ ಆನಂದಿ ಎಲ್. ಆಳ್ವ ದೀಪ ಪ್ರಜ್ವಲನೆ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಸಂಚಯಗಿರಿ ಬಿ.ಸಿ.ರೋಡು ಇದರ ಅಧ್ಯಕ್ಷರಾದ ಶ್ರೀ ತುಕಾರಾಂ ಪೂಜಾರಿ, ಕ.ಸಾ.ಪ. ಬಂಟ್ವಾಳ ಇದರ ಅಧ್ಯಕ್ಷರಾದ ಶ್ರೀ ವಿಶ್ವನಾಥ ಬಂಟ್ವಾಳ, ಹೋಟೆಲ್ ರಂಗೋಲಿ ಬಿ. ಸಿ. ರೋಡು ಇದರ ಶ್ರೀ ಚಂದ್ರಹಾಸ ಡಿ. ಶೆಟ್ಟಿ, ಮುಂಡಡ್ಕಗುತ್ತು ಇದರ ಯಜಮಾನರಾದ ಶ್ರೀ ರತ್ನಾಕರ ಶೆಟ್ಟಿ, ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಶ್ರೀ ಕೃಷ್ಣಕುಮಾರ್ ಪೂಂಜ, ಅಮ್ಮಾಡಿ ಗ್ರಾಮ ಪಂಚಾಯತ್ ಇದರ ಅಧ್ಯಕ್ಷರಾದ ಶ್ರೀ ವಿಜಯ್ ಕುಮಾರ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ…
ಕೋಲಾರ : ಮೇಘ ಮೈತ್ರಿ ಕನ್ನಡ ಸಾಹಿತ್ಯ ಸಂಘ ಕಮತಗಿ ಹಾಗೂ ಕನ್ನಡ ಭವನ ಕಾಸರಗೋಡು ಜಿಲ್ಲಾ ಘಟಕ ಕೋಲಾರ ಇವುಗಳ ವತಿಯಿಂದ ಕೋಲಾರದ ಪತ್ರಕರ್ತರ ಭವನದಲ್ಲಿ ದಿನಾಂಕ 19 ಜುಲೈ 2025ರಂದು ‘ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳನ’ ಅತ್ಯಂತ ಅರ್ಥಪೂರ್ಣವಾಗಿ ಮತ್ತು ಯಶಸ್ವಿಯಾಗಿ ನಡೆಯಿತು. ಹಿರಿಯ ಸಾಹಿತಿ ಹಾಗೂ ರಂಗ ನಿರ್ದೇಶಕರಾದ ಡಾ. ಇಂಚರ ನಾರಾಯಣ ಸ್ವಾಮಿ ಇವರು ಸರ್ವಾಧ್ಯಕ್ಷತೆ ವಹಿಸಿದ್ದು, ಪುಸ್ತಕ ಮಳಿಗೆ ಉದ್ಘಾಟನೆ, ಪುಸ್ತಕ ಬಿಡುಗಡೆ, ಕವಿಗೋಷ್ಠಿ, ವಿಚಾರಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭಗಳು ನಡೆದವು.
ಬೆಂಗಳೂರು : ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಇದರ ವತಿಯಿಂದ ಆಯೋಜಿಸಿದ್ದ ‘ತಿಂಗಳ ನಾಟಕ ಸಂಭ್ರಮ’ದಲ್ಲಿ ಬೊಳುವಾರು ಮುಹಮ್ಮದ್ ಕುಂಞ ಅವರ ಕೃತಿಯಾಧಾರಿತ ‘ಸ್ವಾತಂತ್ರ್ಯದ ಓಟ’ ಎಂಬ ನಾಟಕ ಪ್ರದರ್ಶನವು ದಿನಾಂಕ 19 ಜುಲೈ 2025ರಂದು ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮದ ಸಮುಚ್ಚಯ ಭವನದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ “ದೇಶ ಒಂದು ರೀತಿಯ ನೈತಿಕತೆ ಕಳೆದುಕೊಂಡು, ಏಕಮುಖಿ ಸಂಸ್ಕೃತಿಯನ್ನು ಅನುಸರಿಸುತ್ತಿರುವ ಸಂದರ್ಭದಲ್ಲಿ ಬಹುಮುಖಿ ಸಂಸ್ಕೃತಿಯನ್ನು ಪ್ರತಿಪಾದಿಸಿದಂತಹ ಗಾಂಧೀಜಿಯವರ ಆದರ್ಶಗಳು ನಮಗೆಲ್ಲರಿಗೂ ಅಗತ್ಯವಾಗಿದೆ. ಇಡೀ ದೇಶದಲ್ಲಿ ಬೆಳೆಯುತ್ತಿರುವ ಏಕಮುಖ ಸಂಸ್ಕೃತಿಯನ್ನು ವಿರೋಧಿಸಬೇಕಾಗಿದೆ. ಸುಳ್ಳೇ ದೇಶವನ್ನು ರಾರಾಜಿಸುತ್ತಿರುವ ಸಂದರ್ಭದಲ್ಲಿ ಸತ್ಯವನ್ನು ಪ್ರತಿಪಾದಿಸಿದಂತಹ ಗಾಂಧೀಜಿಯ ತತ್ವಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. ಎಂದಿಗೂ ಸತ್ಯಕ್ಕೆ ಜಯ ಎನ್ನುವುದನ್ನು ಮನದಟ್ಟು ಮಾಡಿಕೊಡಬೇಕಾಗಿದೆ. ಬಹುಶಃ ರಾಜ್ಯದಲ್ಲಿ ಎಲ್ಲರ ಸಾಹಿತ್ಯ ಪ್ರಿಯರಿಗೆ ಬೊಳುವಾರು ಮುಹಮ್ಮದ್ ಕುಂಞಯವರು ಪರಿಚಿತರೇ ಆಗಿದ್ದಾರೆ. ಗಾಂಧೀಜಿ ಎಲ್ಲರಿಗಿಂತಲೂ ಅತ್ಯಂತ ಪ್ರಸ್ತುತವಾಗುತ್ತಿದ್ದಾರೆ. ಹಾಗಾಗಿ ‘ಸ್ವಾತಂತ್ರ್ಯದ ಓಟ’ ನಾಟಕದ ಮೂಲಕ ಗಾಂಧೀಜಿಯ ಕನಸುಗಳು…
ಧಾರವಾಡ : ಕನ್ನಡದ ಹೆಸರಾಂತ ಸಾಹಿತಿ, ವಿಮರ್ಶಕ ಡಾ.ಗಿರಡ್ಡಿ ಗೋವಿಂದರಾಜ ಅವರ ಹೆಸರಲ್ಲಿ ನಿಡುವ “ವಿಮರ್ಶಾ ಪ್ರಶಸ್ತಿಗೆ” ವಿಮರ್ಶಾ ಕೃತಿಗಳನ್ನು ಆಹ್ವಾನಿಸಲಾಗಿದೆ. ಕನ್ನಡದ ಹೆಸರಾಂತ ಸಾಹಿತಿ. ವಿಮರ್ಶಕ ಡಾ.ಗಿರಡ್ಡಿ ಗೋವಿಂದರಾಜ ಅವರ ಸ್ಮರಣಾರ್ಥ ಪ್ರತಿ ವರ್ಷ ಕನ್ನಡದ ಒಂದು ಸ್ವತಂತ್ರ ವಿಮರ್ಶಾ ಕೃತಿಗೆ ಧಾರವಾಡದ ಡಾ.ಗಿರಡ್ಡಿ ಗೋವಿಂದರಾಜ ಫೌಂಡೇಶನ್ ಪ್ರಶಸ್ತಿ ನೀಡಲು ನಿರ್ಧರಿಸಿದೆ. ಪ್ರಸ್ತುತ ಪ್ರಶಸ್ತಿಯನ್ನು 01 ಜನವರಿ 2024 ರಿಂದ 31ಡಿಸೆಂಬರ್ 2024ರ ವರೆಗೆ ಪ್ರಥಮ ಸಲ ಮುದ್ರಣಗೊಂಡಿರುವ ಕನ್ನಡದ ವಿಮರ್ಶಾ ಕೃತಿಗೆ ನೀಡಲಾಗುವುದು. ಈ ಪ್ರಶಸ್ತಿಯು ರೂಪಾಯಿ 25ಸಾವಿರ ನಗದು ಮತ್ತು ಸ್ಮರಣಿಕೆ ಒಳಗೊಂಡಿರುತ್ತದೆ. ಒಬ್ಬ ವಿಮರ್ಶಕರ ಒಂದು ಕೃತಿಯನ್ನು ಮಾತ್ರ ಪ್ರಶಸ್ತಿಗೆ ಪರಿಗಣಿಸಲಾಗುವುದು. ಪ್ರಶಸ್ತಿಗೆ ಕಳುಹಿಸುವ ಕೃತಿಯ 4 ಪ್ರತಿಗಳನ್ನು 10 ಆಗಸ್ಟ್ 2025ರ ಒಳಗಾಗಿ ತಲುಪುವಂತೆ ಅಧ್ಯಕ್ಷರು, ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್, ಕೆ/ಆಫ್ ಹಿರೇಮಲ್ಲೂರ ಈಶ್ವರನ್ ಪದವಿ ಪೂರ್ವ ವಿದ್ಯಾಲಯ, ಕಲ್ಯಾಣನಗರ, ಧಾರವಾಡ-580007. ಈ ವಿಳಾಸಕ್ಕೆ ಕಳುಹಿಸಿಕೊಡಬೇಕು. ಅವಧಿ ಮೀರಿ – ತಲುಪುವ ಕೃತಿಗಳನ್ನು…
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣ ಪರಿಷತ್ತಿನ ಮಂದಿರದಲ್ಲಿ ದಿನಾಂಕ 19 ಜುಲೈ 2025ರಂದು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಟಿತ ಪ್ರಶಸ್ತಿಗಳಲ್ಲೊಂದಾದ ಫಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವು ಜರಗಿತು. ಈ ಸಮಾರಂಭದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು “ಕ್ರೈಸ್ತ ಸಮುದಾಯ ತನ್ನ ನಿಸ್ವಾರ್ಥ ಸೇವೆಯಿಂದ ಮಾನವೀಯತೆಯ ತಳಹದಿಯನ್ನು ಜಗತ್ತಿನೆಲ್ಲೆಡೆ ಗಟ್ಟಿಗೊಳಿಸಿದೆ, ಆಧುನಿಕ ಕನ್ನಡ ರೂಪುಗೊಳ್ಳುವಲ್ಲಿ ಮುಖ್ಯ ಪಾತ್ರ ವಹಿಸಿದ ಕ್ರೈಸ್ತರು ಕನ್ನಡವನ್ನು ಚೆನ್ನಾಗಿ ಕಲಿತು, ಹಳೆಯ ಗ್ರಂಥಗಳನ್ನು ಬೆಳಕಿಗೆ ತಂದಿದ್ದಲ್ಲದೆ ವ್ಯಾಕರಣ ನಿಘಂಟುಗಳನ್ನು ರಚಿಸಿ, ಭಾಷಾಶಾಸ್ತ್ರ ವ್ಯಾಸಂಗಕ್ಕೆ ಸಾಮಾಗ್ರಿ ಕೂಡಿ ಹಾಕಿದರು. ಇವರಲ್ಲಿ ಸೃಜನಶೀಲ ಗುಣವು ಬೇರೂರಿದ್ದರಿಂದ ಕನ್ನಡದ ಸಾಹಿತ್ಯಿಕ ಬೆಳವಣಿಗೆಗೆ ಸೃಜನಾತ್ಮಕ ಶಕ್ತಿಯನ್ನು ಬಳಸಿಕೊಳ್ಳುವಲ್ಲಿ ಸಫಲರಾದರು. ಮೊದಲ ಕನ್ನಡ ನಿಘಂಟುವನ್ನು ರಚಿಸಿದ ಕಿಟಲ್, ಮೊದಲ ಕನ್ನಡ ಪತ್ರಿಕೆಗೆ ಕಾರಣರಾದ ಮೊಗ್ಲಿಂಗ್, ಆಡಳಿತಗಾರರಾದ ಥಾಮಸ್ ಮನ್ರೋ, ಕಬ್ಬನ್ ಮೊದಲಾದ ಕ್ರೈಸ್ತ ಸಮುದಾಯದವರು ಆಧುನಿಕ ಕನ್ನಡದ ಬೆಳವಣಿಗೆಗೆ…
ಬಂಟ್ವಾಳ : ವಿಶ್ವಭಾರತಿ ಯಕ್ಷ ಸಂಜೀವಿನಿ ಟ್ರಸ್ಟ್ (ರಿ.) ಮುಡಿಪು ಮತ್ತು ತುಳು ಶಿವಳ್ಳಿ ಸೇವಾ ಟ್ರಸ್ಟ್ ಬಂಟ್ವಾಳ ತಾಲೂಕು ಇವರ ಸಹಭಾಗಿತ್ವದಲ್ಲಿ ವಿಶ್ವಭಾರತಿ ಯಕ್ಷ ಸಂಭ್ರಮದ ಅಂಗವಾಗಿ ಬಿ.ಸಿ. ರೋಡಿನ ತುಳು ಶಿವಳ್ಳಿ ಸಭಾಭವನದಲ್ಲಿ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇವರ ವತಿಯಿಂದ ದಿನಾಂಕ 20 ಜುಲೈ 2025ರಂದು ತಾಳಮದ್ದಳೆ ‘ಪಾರ್ಥ ಸಾರಥ್ಯ’ ಎಂಬ ಆಖ್ಯಾನದೊಂದಿಗೆ ಜರಗಿತು. ಹಿಮ್ಮೇಳದಲ್ಲಿ ಭಾಗವತರಾಗಿ ಗಿರೀಶ್ ಮುಳಿಯಾಲ ಹಾಗೂ ಚೆಂಡೆ, ಮದ್ದಲೆಗಳಲ್ಲಿ ಪದ್ಯಾಣ ಜಯರಾಮ ಭಟ್, ಮುರಳೀಧರ ಆಚಾರ್ಯ ನೇರಂಕಿ, ಮಾಸ್ಟರ್ ಪ್ರತಾಪ್ ಸಹಕರಿಸಿದರು. ಮುಮ್ಮೇಳದಲ್ಲಿ ಕಿಶೋರಿ ದುಗ್ಗಪ್ಪ ನಡುಗಲ್ಲು (ಶ್ರೀಕೃಷ್ಣ), ಶುಭಾ ಅಡಿಗ (ದುರ್ಯೋಧನ), ಹರಿಣಾಕ್ಷಿ ಜೆ. ಶೆಟ್ಟಿ (ಬಲರಾಮ), ಶಾರದಾ ಅರಸ್ (ಅರ್ಜುನ) ಸಹಕರಿಸಿದರು. ಯಕ್ಷ ಸಂಜೀವಿನಿ ಸೇವಾ ಟ್ರಸ್ಟಿನ ನಿರ್ದೇಶಕ ಪ್ರಶಾಂತ್ ಹೊಳ್ಳ ಸ್ವಾಗತಿಸಿ, ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ವಂದಿಸಿದರು.
ಬೆಂಗಳೂರು : ‘ಉಪಾಸನ ಬುಕ್ಸ್’ ಪ್ರಕಾಶನ ಸಂಸ್ಥೆಯ ವತಿಯಿಂದ ಆಶಾ ರಘು ಇವರ ರಚನೆಯ ‘ಮಾರ್ಕೋಲು’ ಕಾದಂಬರಿ ಹಾಗೂ ಸಂಪಾದನೆಯ 58 ಕಥೆಗಾರರ ಕಥೆಗಳನ್ನು ಒಳಗೊಂಡ ‘ನೂತನ ಜಗದಾ ಬಾಗಿಲು’ ಕಥಾ ಸಂಕಲನವು ದಿನಾಂಕ 21 ಜುಲೈ 2025ರಂದು ಬೆಂಗಳೂರಿನ ಮಲ್ಲೇಶ್ವರದ ‘ಗಾಂಧಿ ಸಾಹಿತ್ಯ ಸಂಘ’ದಲ್ಲಿ ಲೋಕಾರ್ಪಣೆಗೊಂಡಿತು. ಹಿರಿಯ ನಟರೂ ಲೇಖಕರೂ ಆದ ಶ್ರೀ ಶ್ರೀನಿವಾಸ ಪ್ರಭು ಇವರು ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ಶ್ರೀ ಲಿಂಗರಾಜ ಸೊಟ್ಟಪ್ಪನವರು ‘ಮಾರ್ಕೋಲು’ ಕಾದಂಬರಿಯನ್ನು ಪರಿಚಯಿಸಿದರೆ, ಶ್ರೀಮತಿ ಸುಮಾ ಸತೀಶ್ ಅವರು ‘ನೂತನ ಜಗದಾ ಬಾಗಿಲು’ ಕಥಾ ಸಂಕಲನದ ಕುರಿತು ಮಾತನಾಡಿದರು. ಡಾ. ಎಚ್.ಎಸ್.ಎಂ. ಪ್ರಕಾಶ್ ಇವರೂ ಬಿಡುಗಡೆಯ ವೇಳೆ ಉಪಸ್ಥಿತರಿದ್ದರು. ಉಪಾಸನ ಬುಕ್ಸ್ ಪ್ರಕಟಣೆಯ ಆಶಾ ರಘು ಅವರ ‘ಮಾರ್ಕೋಲು’ (ಕಾದಂಬರಿ) ಮತ್ತು ಆಶಾ ರಘು ಸಂಪಾದನೆಯ 58 ಕಥೆಗಾರರ ಕಥಾ ಸಂಕಲನ ‘ನೂತನ ಜಗದಾ ಬಾಗಿಲು’ ಪುಸ್ತಕಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಹಿರಿಯ ನಟ ಮತ್ತು ಸಾಹಿತಿ ಶ್ರೀನಿವಾಸ ಪ್ರಭು “ಈ…
ಬೆಂಗಳೂರು : ಹಿರಿಯ ಬರಹಗಾರ ಡಾ. ಸಿ. ನಾಗಣ್ಣನವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಟಿತ ಮಳಲಿ ವಸಂತ ಕುಮಾರ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ತಿಳಿಸಿದ್ದಾರೆ. ಶ್ರೇಷ್ಠ ಬರಹಗಾರರಾದ ಡಾ. ಮಳಲಿ ವಸಂತ ಕುಮಾರ್ ಅವರು ‘ಮನುಕುಲದ ವಾಗ್ಮಿ’ ಎಂದು ಹೆಸರು ಪಡೆದಿದ್ದರು. ಕನ್ನಡಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು. ಬರಹಗಾರರಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ತಾವೇ 46 ಮಹತ್ವದ ಕೃತಿಗಳನ್ನು ರಚಿಸಿದ್ದರು. ಅವರ ನೆನಪಿನಲ್ಲಿ ಕುಟುಂಬದವರು ದತ್ತಿ ನಿಧಿಯನ್ನು ಸ್ಥಾಪಿಸಿದ್ದು, ಕನ್ನಡಕ್ಕೆ ಮಹತ್ವದ ಕೊಡುಗೆ ನೀಡಿದ ಬರಹಗಾರರಿಗೆ, ಕನ್ನಡಪರ ಹೋರಾಟಗಾರರಿಗೆ ಈ ಪುರಸ್ಕಾರ ನೀಡುವಂತೆ ಯೋಜನೆ ರೂಪಿಸಿದ್ದಾರೆ. ಮಳಲಿ ವಸಂತ ಕುಮಾರ್ ಪುರಸ್ಕಾರಕ್ಕೆ 2025ನೆಯ ಸಾಲಿಗೆ ಆಯ್ಕೆಯಾಗಿರುವ ಡಾ. ಸಿ. ನಾಗಣ್ಣನವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದು, ಪ್ರಸಾರಾಂಗದ ನಿರ್ದೇಶಕರಾಗಿ ಕೂಡ ಸೇವೆಯನ್ನು ಸಲ್ಲಿಸಿದ್ದಾರೆ. ಭಾಷಾಂತರ ಕ್ಷೇತ್ರದಲ್ಲಿ ಮಹತ್ವದ ಕೊಡುಗೆಯನ್ನು ಸಲ್ಲಿಸಿರುವ ಇವರು ಹಲವು ಪ್ರಮುಖ ವಿಶ್ವವಿದ್ಯಾಲಯಗಳ ತಜ್ಞರ ಸಮಿತಿ…