Subscribe to Updates
Get the latest creative news from FooBar about art, design and business.
Author: roovari
ಭಾವದಲೆಯಲ್ಲಿ ಭರತನಾಟ್ಯದ ಸೊಬಗು ! ಬೆಂಗಳೂರಿನ ಭಾರತೀಯ ವಿದ್ಯಾ ಭವನ್ ನಲ್ಲಿ ಒಂದು ರಂಗ ಪ್ರವೇಶದ ಕಾರ್ಯಕ್ರಮದ ನಿರೂಪಣೆಗೆ ಹೋಗಿದ್ದೆ. ಬೆಳ್ತಂಗಡಿ ಮೂಲದ ಪ್ರಸ್ತುತ ಕುವೈಟ್ ದೇಶದಲ್ಲಿ ನೆಲೆಸಿರುವ ವಿದುಷಿ ಶಾಂತಲಾ ಸತೀಶ್ ಅವರ ಪುಷ್ಕರ ನೃತ್ಯ ನಿಕೇತನದ ವಿದ್ಯಾರ್ಥಿನಿ ಸಾನ್ವಿ ನವೀನ್ ಇವರ ಭರತನಾಟ್ಯ ರಂಗಪ್ರವೇಶದ ಕಾರ್ಯಕ್ರಮ. ಸಾಮಾನ್ಯವಾಗಿ ರಂಗ ಪ್ರವೇಶದ ಕಾರ್ಯಕ್ರಮ ನಡೀತಾನೇ ಇರುತ್ತೆ, ಆದ್ರೆ ಇದು ನನಗೆ ಬಹಳ ವಿಶೇಷ ಅನ್ನಿಸಿದ್ದಕ್ಕಾಗಿ ಈ ಲೇಖನವನ್ನ ಬರೀತಾ ಇದೀನಿ. ಭಾವ, ರಾಗ, ತಾಳ, ರಸ ಕಾವ್ಯದ ಸುಂದರ ದೃಶ್ಯ ವೈಭವ ಅದು ಭರತನಾಟ್ಯ! ಭರತ ಮುನಿಯ ಮೂಲಕ ರಚಿತವಾದ ಭರತನಾಟ್ಯ ಸಹಸ್ರಾರು ವರ್ಷಗಳ ಭವ್ಯವಾದ, ದಿವ್ಯವಾದ ಇತಿಹಾಸವನ್ನ ಹೊಂದಿದೆ. ಇದು ಕೇವಲ ನೃತ್ಯವಲ್ಲ ಭಾರತದ ಸನಾತನ ಶಾಸ್ತ್ರೀಯ ಪರಂಪರೆಯ ಪ್ರತಿಬಿಂಬ. ಒಂದೋ ಎರಡೋ ತಿಂಗಳು ಡಾನ್ಸ್ ಕ್ಲಾಸ್ ಗೆ ಹೋಗಿ ಭರತನಾಟ್ಯ ಕಲಿಯೋದಿಕ್ಕಾಗಲ್ಲ, ಹಲವಾರು ವರ್ಷಗಳ ಕಾಲದ ಶ್ರದ್ದಾ ಭಕ್ತಿಯ ಕಲಿಕೆ, ಗುರುವಿನ ಮಾರ್ಗದರ್ಶನದಿಂದ ಮಾತ್ರ ಭರತನಾಟ್ಯ ಒಬ್ಬ…
ಮಡಿಲಲ್ಲಿ ಮುಖ ಹುದುಗಿಸಿ ಕಂಬನಿಯಲಿ ಒಡಲ ತೋಯಿಸುವ ಅಂತರಾಳದ ಹಂಬಲಕೆ ಓಗೊಡಲು ಯಾರಿಹರಿಲ್ಲಿ ? ತಾಯ್ಮಮತೆಯ ನೆನಪಾದಾಗಲೆಲ್ಲಾ ಮೂಡುವುದೊಂದೇ ಜಿಜ್ಞಾಸೆ ಅಮ್ಮಾ ನೀನೇಕೆ ದೂರಾದೆ ? ಸಂಬಂಧ ಎಂದರೇನಮ್ಮಾ ಲೌಕಿಕ ಸುಖದ ಹಾದಿ ಪಯಣವೇ ? ಭೌತಿಕ ಸ್ಪರ್ಶದಲಿ ಹಿತಕಾಣುವ ತನುಮನ ಭಾವನೆಗಳ ಮಿಳಿತವೇ ? ಅಥವಾ ಮಿಲನ ಸುಖದಲಿ ಮಿಂದು ಸಾಂಗತ್ಯದಲ್ಲೇ ಸಾರ್ಥಕ್ಯ ಕಾಣುವುದೇ ? ನೋವಿಗೆ ಸ್ಪಂದಿಸದ ಭಾವ ಮರಳುಗಾಡಿನ ಹಸಿರು ದಿಬ್ಬದಂತಲ್ಲವೇ ? ಮಾಸದ ಗಾಯಗಳು ಮಾಗಿದ ಅಂತರಂಗದ ಯಾತನೆಗಳು ಮತ್ತೆಮತ್ತೆ ಇರಿದು ಚಿಮ್ಮುತ್ತಿರುವಾಗ ಎದೆಯಾಗ್ನಿಯ ಕುಲುಮೆಗೆ ತಂಪೆರೆಯುವ ಒಂದೆರಡು ಸವಿಮಾತು ಬೇಕಲ್ಲವೇನಮ್ಮಾ ,,,,,? ಬಂಧನದ ಸಂಕೋಲೆಗಳಲಿ ಎದೆಯ ಸದ್ದಿಗೆ ನಾಡಿ ಕಿವುಡಾದರೆ ಬೆಸುಗೆಯ ಸಾರ್ಥಕ್ಯವ ಕಾಣುವುದೆಲ್ಲಿ ? ಈ ಆಂತರ್ಯದ ಕೂಗು ನಿನಗೆ ಕೇಳಿಸದು ಮರ್ತ್ಯ ಲೋಕದ ಹೊಸ್ತಿಲಿಗೆ ಕಟ್ಟಿರುವ ತೋರಣವ ಛೇದಿಸಿ ನೋಡು ನಿನ್ನ ಕಂದನ ನೋವಾದರೂ ಕಂಡೀತು ! – ನಾ ದಿವಾಕರ
ಧಾರವಾಡ : ಬೆಳಗಾವಿಯ ಶ್ರೀ ಲಕ್ಕಮ್ಮದೇವಿ ಕಲಾ ಪೋಷಕ ಸಂಘ (ರಿ.) ಕರ್ನಾಟಕ ಇದರ ವತಿಯಿಂದ ‘ರಾಷ್ಟ್ರೀಯ ಜಾನಪದ ಲೋಕೋತ್ಸವ’ ಹಾಗೂ ‘ನ್ಯಾಶನಲ್ ಅಚಿವ್ಮೆಂಟ್ ಗ್ಲೋಬಲ್ ಅವಾರ್ಡ್’ ಪ್ರದಾನ ಸಮಾರಂಭವು ದಿನಾಂಕ 10 ಆಗಸ್ಟ್ 2025ರಂದು ಧಾರವಾಡದ ರಂಗಾಯಣ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಕಳೆದ ಎಂಟು ವರ್ಷಗಳಿಂದ ಕಲೆ, ಸಾಹಿತ್ಯ, ಸಂಗೀತ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ಚಾಪು ಮೂಡಿಸಿ ಜನಮನ ಗಳಿಸಿದೆ. ಆದ್ದರಿಂದ ಇದೀಗ ಧಾರವಾಡದಲ್ಲಿ ಜರಗುವ ರಾಷ್ಟ್ರೀಯ ಜಾನಪದ ಲೋಕೋತ್ಸವ ಕಾರ್ಯಕ್ರಮಕ್ಕೆ ಸಾಧಕರಿಗೆ ಕರೆ ನೀಡಿ ಕಲೆ, ಸಾಹಿತ್ಯ, ಸಂಗೀತ, ಸಾಮಾಜಿಕ, ವೈದ್ಯಕೀಯ, ಕ್ರೀಡೆ, ಪತ್ರಿಕೋದ್ಯಮ, ಧಾರ್ಮಿಕ, ವೈಜ್ಞಾನಿಕ, ರಂಗಭೂಮಿ ಹೀಗೆ ಅನೇಕ ಕ್ಷೇತ್ರಗಳಲ್ಲಿ ಸಾಧನೆಗೈಯುತ್ತಿರುವ ಸಾಧಕ ಪ್ರತಿಭೆಗಳಿಗೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಅಧ್ಯಕ್ಷರು ಸಿದ್ರಾಮ ಮಾ. ನಿಲಜಗಿ 9611694804 ಇವರನ್ನು ಸಂಪರ್ಕಿಸಿರಿ.
ಬಹುತೇಕ ಕಲೆಗಳಿಗೆ ತನ್ನದೇ ರೂಢಿಗತ ಮಾದರಿಗಳಿದ್ದ ಹಾಗೆ ಬರವಣಿಗೆಗೆ ಯಾವುದೇ ನಿರ್ದಿಷ್ಟ ಮಾದರಿಗಳು ಅಂದರೆ ಕಲಿಕಾ ಮಾದರಿಗಳು ಇರಲಾರವು, ಬರವಣಿಗೆಗೆ ಬೇಕಾಗಿರುವ ಬಹುದೊಡ್ಡ ಪೂರ್ವ ತಾಲೀಮು ‘ಅನುಭವ’ದ ಮಾಗುವಿಕೆ ; ಧ್ಯಾನಸ್ಥ ಸ್ಥಿತಿ. ಜೀವನಕ್ರಮದಲ್ಲಿ ಇವೆರಡೂ ಪ್ರಧಾನ ಸಂಕರಗಳೂ ಹೌದು. ಒಬ್ಬ ಬರಹಗಾರ ಈ ಎರಡನ್ನೂ ತನ್ನದಾಗಿಸಿಕೊಳ್ಳುವ ವಿಧಾನದಲ್ಲೇ ಬೇರೆ ಬರಹಗಾರರಿಗಿಂತ ಭಿನ್ನವಾಗಬಲ್ಲ. ಯಾವುದೇ ಲೇಖಕನಿಗೆ ಪೂರ್ವ ತಾಲೀಮು ಕೇವಲ ಬದುಕಿನ ಅನುಭವಗಳಿಂದ ಲಭ್ಯವಾದರೆ ಸಾಲದು. ಬರಹಕ್ಕೆ ಚಾಲಕಶಕ್ತಿ, ಅಭಿವ್ಯಕ್ತಿಯ ಸೇತುವೆಯಾದ ‘ಭಾಷಿಕ ವಿನ್ಯಾಸ’ಗಳೂ ಕೈ ಹಿಡಿಯಬೇಕು. ಈ ನೆಲೆಯಲ್ಲಿ ಪ್ರತಿ ಬರಹಗಾರನೂ ತಾಲೀಮು ನಡೆಸಿರುತ್ತಾನೆ. ಕನ್ನಡದ ಸಂವೇದನಾಶೀಲ ಬರಹಗಾರರು ತಮ್ಮ ಬರವಣಿಗೆಯ ತಾಲೀಮಿನ ಕುರಿತು ಇಲ್ಲಿ ಬರೆದಿದ್ದಾರೆ. ಈ ‘ಬರವಣಿಗೆಯ ತಾಲೀಮು’ ಸ್ವಾರಸ್ಯಕರವಾಗಿದೆ. ನೀವು ಹೇಗೆ ಬರೆಯುತ್ತೀರಿ? ಹೇಗೆ ಬರವಣಿಗೆಯ ತಾಲೀಮು ನಡೆಸುತ್ತೀರಿ? ಎಂದು ಕೇಳಿದರೆ ಹೇಳುವುದು ಕಷ್ಟ. ಅದು ಗೊತ್ತಿದ್ದೂ ಲೇಖಕರ ಜೊತೆ ಸೃಜನಶೀಲ ‘ಆಟ’ವಾಡಿ ಮೋಜು ನೋಡಬೇಕೆನಿಸಿತು. ‘ಆಟ’ ಸಾರ್ಥಕಗೊಳ್ಳುವಂತೆ ಎಲ್ಲ ಬರಹಗಾರರು ಭಿನ್ನವಾಗಿ ಬರೆದುಕೊಟ್ಟಿದ್ದಾರೆ. -ಟಿ.ಎಸ್.…
ಬೆಂಗಳೂರು : ಬಿಲ್ಲವ ಅಸೋಸಿಯೇಶನ್ ಬೆಂಗಳೂರು (ರಿ.) ಇದರ ಸುವರ್ಣ ಸಂಭ್ರಮ 2025ರ ಪ್ರಯುಕ್ತ ‘ಯಕ್ಷ ಹಾಸ್ಯ ರಸ’ ಕಾರ್ಯಕ್ರಮವನ್ನು ದಿನಾಂಕ 10 ಆಗಸ್ಟ್ 2025ರಂದು ಬೆಂಗಳೂರಿನ ವೈಟ್ ಪೆಟಲ್ ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಪ್ರಶಾಂತ್ ಸಿ.ಕೆ. ಸಾರಥ್ಯದಲ್ಲಿ ದಯಾನಂದ ಕೋಡಿಕಲ್ ಭಾಗವತಿಕೆ ಕನ್ನಡ ಹಾಸ್ಯ ಯಕ್ಷಗಾನ ಪ್ರಸ್ತುತಗೊಳ್ಳಲಿದ್ದು, ಆಚಾರ ವಿಚಾರ ಪುಸ್ತಕ – ಸ್ಮರಣ ಸಂಚಿಕೆ ಬಿಡುಗಡೆ, ಜಾನಪದ ಕಲರವ, ಕಲಿವಲಿ ಕಾಮಿಡಿ, ಕಿಲಾಡಿ ದರ್ಬಾರ್, ಮನಮೋಹಕ ನೃತ್ಯ, ಆಹಾರ ಮಳಿಗೆ, ಸ್ತಬ್ಧ ಚಿತ್ರ ಪ್ರದರ್ಶನ, ಗೊಂಬೆ ಪ್ರದರ್ಶನ ನಡೆಯಲಿದೆ.
ಮಡಿಕೇರಿ : 2025ನೇ ಸಾಲಿನ ಐತಿಹಾಸಿಕ ಮಡಿಕೇರಿ ದಸರಾ ಬಹುಭಾಷೆ ಕವಿಗೋಷ್ಠಿಗೆ ಕವನಗಳನ್ನು ವಾಚನ ಮಾಡಲು ಆಸಕ್ತರಾಗಿರುವ ಕವಿ, ಕವಯತ್ರಿಯರಿಂದ ಸ್ವರಚಿತ ಕವನಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಕವಿ/ ಕವಯತ್ರಿಯರು ಯಾವುದೇ ಒಂದು ಭಾಷೆಯ ಒಂದು ಕವನವನ್ನು ದಿನಾಂಕ 06 ಸೆಪ್ಟೆಂಬರ್ 2025ರ ಒಳಗಾಗಿ ಕಳಹಿಸಿಕೊಡಬೇಕು. ಆ ನಂತರ ಬರುವ ಕವನಗಳನ್ನು ಪರಿಗಣಿಸಲಾಗುವುದಿಲ್ಲ. ಈ ಬಾರಿಯ ಕವಿಗೋಷ್ಠಿಯಲ್ಲಿ ವರ್ಷಂಪ್ರತಿಯಂತೆ ಕನ್ನಡ, ಕೊಡವ, ಅರೆಭಾಷೆ, ತುಳು, ಕೊಂಕಣಿ, ಹವ್ಯಕ, ಬ್ಯಾರಿ, ಯರವ, ಕುಂಬಾರ, ಹಿಂದಿ, ಉರ್ದು, ತಮಿಳು, ಮಲೆಯಾಳಂ, ತೆಲುಗು, ಮರಾಠಿ, ಸಂಸ್ಕೃತ ಹೀಗೆ ಯಾವುದೇ ಭಾಷೆಯ ಕವನಗಳನ್ನು ‘ಕನ್ನಡ’ ಲಿಪಿಯಲ್ಲಿ ಹಾಗೂ ಹಿಂದಿ, ಇಂಗ್ಲಿಷ್ ಕವನವನ್ನು ಅದೇ ಭಾಷೆಯಲ್ಲಿ ಕಳುಹಿಸಿಕೊಡತಕ್ಕದ್ದು. ಕನ್ನಡ ಭಾಷೆಯ ಚುಟುಕು ಕವನ (4 ಸಾಲಿನ ಗರಿಷ್ಠ 4 ಕವನಗಳಿಗೆ ಮಾತ್ರ ಅವಕಾಶ)ಗಳು, ಮಕ್ಕಳ ಕವನ (6ರಿಂದ 14 ವರ್ಷ ಒಳಪಟ್ಟವರು)ಗಳಿಗೂ ಅವಕಾಶ ಕಲ್ಪಿಸಲಾಗಿದೆ. ಮಕ್ಕಳ ಕವನ ಕಳುಹಿಸುವವರು ತರಗತಿ ಹಾಗೂ ಶಾಲೆಯ ವಿವರವನ್ನು ನಮೂದಿಸಬೇಕು. ಕವನಗಳನ್ನು ಕಳುಹಿಸುವವರು ತಮ್ಮ…
ಉಡುಪಿ : ಯಕ್ಷಶಿಕ್ಷಣ ಟ್ರಸ್ಟ್ (ರಿ.) ಉಡುಪಿ ಇದರ ಗುರುಗಳ ಸಭೆಯು ದಿನಾಂಕ 07 ಆಗಸ್ಟ್ 2025ರಂದು ಉಡುಪಿಯ ಯಕ್ಷಗಾನ ಕಲಾರಂಗದ ಐ.ವೈ.ಸಿ. ಸಭಾಂಗಣದಲ್ಲಿ ನಡೆಯಿತು. ಯಕ್ಷಗಾನ ಕಲಾರಂಗದ ಅಧ್ಯಕ್ಷರಾದ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಮಾತನಾಡಿ “ಈ ಬಾರಿ 94 ಪ್ರೌಢಶಾಲೆಗಳಲ್ಲಿ 41 ಗುರುಗಳಿಂದ ಯಕ್ಷಗಾನ ಕಲಿಕೆ ಆರಂಭಗೊಂಡಿದ್ದು, ನವಂಬರ್ ಕೊನೆಯ ವಾರ ಬ್ರಹ್ಮಾವರದಲ್ಲಿ ಪ್ರದರ್ಶನವನ್ನು ಆರಂಭಿಸಿ, ಬಳಿಕ ರಾಜಾಂಗಣದಲ್ಲಿ ಪ್ರದರ್ಶನ, ಅದೇ ಸಂದರ್ಭದಲ್ಲಿ ಸಮಾನಾಂತರವಾಗಿ ಕಾಪು ಕ್ಷೇತ್ರದ ಶಾಲೆಗಳ ಪ್ರದರ್ಶನವನ್ನು ಆಯೋಜಿಸೋಣ. ಆ ಬಳಿಕ ಕುಂದಾಪುರ ಮತ್ತು ಬೈಂದೂರು ಕ್ಷೇತ್ರದ ಶಾಲೆಗಳ ಪ್ರದರ್ಶನಗಳನ್ನು ನಡೆಸೋಣ. ಡಿಸೆಂಬರ್ ಅಂತ್ಯದೊಳಗೆ ಎಲ್ಲಾ ಪ್ರದರ್ಶನಗಳನ್ನು ಮುಗಿಸೋಣ” ಎಂದು ನುಡಿದರು. ಗುರುಗಳು ತಮ್ಮ ತಮ್ಮ ಶಾಲೆಯ ಯಕ್ಷಶಿಕ್ಷಣದ ಕುರಿತಾಗಿ, ಶಾಲೆಯ ಪ್ರತಿಸ್ಪಂದನೆಯ ಬಗೆಗೂ ಮಾಹಿತಿಯನ್ನು ನೀಡಿದರು. ಸಭೆಯಲ್ಲಿ ಕೋಶಾಧಿಕಾರಿ ಗಣೇಶ್ ಬ್ರಹ್ಮವಾರ, ಟ್ರಸ್ಟಿಗಳಾದ ನಾರಾಯಣ ಎಂ. ಹೆಗಡೆ, ವಿ.ಜಿ. ಶೆಟ್ಟಿ, ವಿದ್ಯಾಪ್ರಸಾದ್, ನಟರಾಜ ಉಪಾಧ್ಯಾಯ, ನಾಗರಾಜ ಹೆಗಡೆ ಹಾಗೂ ಗುರುಗಳು…
ಒಡಿಯೂರು : ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರ ಜನ್ಮದಿನೋತ್ಸವ ಮತ್ತು ಒಡಿಯೂರು ಗ್ರಾಮೋತ್ಸವದ ಅಂಗವಾಗಿ ಶ್ರೀಕ್ಷೇತ್ರದ ರಾಜಾಂಗಣದಲ್ಲಿ ದಿನಾಂಕ 06 ಮತ್ತು 07 ಆಗಸ್ಟ್ 2025ರಂದು ನಡೆದ ನಾಟಕ ಸ್ಪರ್ಧೆಯಲ್ಲಿ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಎರಡು ನಾಟಕಗಳು ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಪ್ರಶಸ್ತಿಯನ್ನು ಪಡೆದಿರುತ್ತವೆ. ಡಾ. ಜೀವನ್ ರಾಂ ಸುಳ್ಯ ರಚಿಸಿ, ನಿರ್ದೇಶಿಸಿದ ‘ದೇವವೃದ್ಧರು’ ಪ್ರದರ್ಶನವು ಅತ್ಯುತ್ತಮ ನಾಟಕ ರೂ.50,000 ನಗದು ಹಾಗೂ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದುಕೊಂಡಿತು. ಇದೇ ನಾಟಕದ ಅತ್ಯುತ್ತಮ ಸಂಗೀತ ಸಂಯೋಜಕ ಪ್ರಶಸ್ತಿಯನ್ನು ಸುಳ್ಯ ರಂಗಮನೆಯ ಮನುಜ ನೇಹಿಗ ಪಡೆದುಕೊಂಡರು. ದ್ವಿತೀಯ ಪ್ರಶಸ್ತಿ ರೂ.30,000/- ಪಡೆದ ಆಳ್ವಾಸ್ ನ ‘ಮಗು ಮತ್ತು ಮರ’ ನಾಟಕವನ್ನು ಪ್ರಶಾಂತ್ ಶೆಟ್ಟಿ ಕೋಟ ನಿರ್ದೇಶಿಸಿದ್ದರು. ಈ ನಾಟಕದ ‘ಅತ್ಯುತ್ತಮ ನಟ’ ಪ್ರಶಸ್ತಿಯನ್ನು ಮನೋಜ್ ತೀರ್ಥಹಳ್ಳಿ ಹಾಗೂ ‘ಅತ್ಯುತ್ತಮ ನಟಿ’ ಪ್ರಶಸ್ತಿಯನ್ನು ತೇಜಸ್ಸಿನಿ ತರೀಕೆರೆ ಪಡೆದುಕೊಂಡರು. ಪ್ರಶಸ್ತಿಯನ್ನು ಶ್ರೀ ಒಡಿಯೂರು ಗುರುದೇವಾನಂದ ಸ್ವಾಮಿಗಳು ನೀಡಿದರು. ವೇದಿಕೆಯಲ್ಲಿ ಒಡಿಯೂರು ಸಾದ್ವಿ ಶ್ರೀಮಾತಾನಂದಮಯಿ,…
ಬೆಂಗಳೂರು : ಜನಸಂಸ್ಕೃತಿ ಪ್ರತಿಷ್ಠಾನ, ಬೆಂಗಳೂರು ಆರ್ಟ್ ಫೌಂಡೇಷನ್ ಮತ್ತು ಕಿರಂ ಪ್ರಕಾಶನ ಇವರ ಜಂಟಿ ಸಹಯೋಗದಲ್ಲಿ ದಿನಾಂಕ 07 ಆಗಸ್ಟ್ 2025ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡದ ಖ್ಯಾತ ವಿಮರ್ಶಕ ಪ್ರೊ. ಕಿ.ರಂ. ನಾಗರಾಜ ಇವರ ಸ್ಮರಣಾರ್ಥ 14ನೇ ವರ್ಷದ ‘ಅಹೋರಾತ್ರಿ ಕಾಡುವ ಕಿರಂ’ ಕಾರ್ಯಕ್ರಮ ಆಯೋಜನೆಗೊಂಡಿದೆ. ಕಾರ್ಯಕ್ರಮವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ. ಪುರುಷೋತ್ತಮ ಬಿಳಿಮಲೆ ಇವರು ಉದ್ಘಾಟಿಸಿ, ‘ಕಾಡುವ ಕಿರಂ ಹೊಸ ಕವಿತೆಗಳು 2025’ ಕೃತಿಯನ್ನು ಡಾ. ಎಂ.ಎಸ್. ಮೂರ್ತಿ ಬಿಡುಗಡೆ ಮಾಡಿದರು. ಕವಿಗೋಷ್ಠಿ, ಜನಪದ ಗಾಯನ ಮತ್ತು ಉಪನ್ಯಾಸಗಳೊಂದಿಗೆ ಸಾಧಕರಾದ ಎಂ. ಗೋಪಾಲ್ (ಜನಪರ ಹೋರಾಟ), ಡಾ. ಎಂ. ಉಷಾ (ಸ್ತ್ರೀವಾದ, ಸಾಹಿತ್ಯ), ಪ್ರೊ. ಎಂ.ಜಿ. ಚಂದ್ರಶೇಖರಯ್ಯ (ಸಾಹಿತ್ಯ), ಶ್ರೀನಿವಾಸ ನಟೇಕರ್ (ವೈಚಾರಿಕತೆ, ರಂಗಭೂಮಿ), ಡಾ. ಕೂಡ್ಲೂರು ವೆಂಕಟಪ್ಪ (ಸಾಹಿತ್ಯ, ಸಂಶೋಧನೆ) ಮತ್ತು ಟಿ. ನಾರಾಯಣ್ (ಚಿತ್ರಕಲೆ) ಇವರುಗಳಿಗೆ ‘ಕಿರಂ ಪುರಸ್ಕಾರ’ವನ್ನು ಪ್ರದಾನ ಮಾಡಲಾಯಿತು. ಪ್ರಸ್ತಾವನೆಗೈದ ಜನಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ, ಸಂಶೋಧಕ ಮತ್ತು ಪತ್ರಕರ್ತ…
ಸ್ವಾತಂತ್ರ್ಯ ಹೋರಾಟಗಾರರಾಗಿ, ಕರ್ನಾಟಕ ಏಕೀಕರಣದ ಮುಂದಾಳುವಾಗಿ, ಕನ್ನಡ ಕಾವ್ಯ ಪರಂಪರೆಯ ಪ್ರತಿನಿಧಿಯಾಗಿ, ರಾಷ್ಟ್ರ ಪ್ರಶಸ್ತಿ ವಿಜೇತ ಅಧ್ಯಾಪಕರಾಗಿ, ಕನ್ನಡಿಗರಿಗೆ ಹಿರಿಯಣ್ಣನಾಗಿ ಪ್ರೇರಣೆಯನ್ನು ನೀಡಿದ ಕಯ್ಯಾರ ಕಿಂಞಣ್ಣ ರೈಯವರು ಶತಮಾನ ಕಂಡ ಅಪರೂಪದ ಕವಿ. “ಇವರ ಕವನಗಳು ಪಾರಿವಾಳದ ಹಿಂಡಿನಂತೆ ರೂಪದಲ್ಲಿ ಮಾತ್ರ ಸಾಹಜಿಕವಾಗಿ ಭಿನ್ನವೇ ಹೊರತು ಧ್ವನಿಯಲ್ಲಿ ಏಕಪ್ರಕಾರವಾದ ಕಲಕಂಠ” ಎಂದು ಮಂಜೇಶ್ವರ ಗೋವಿಂದ ಪೈಗಳು ‘ಪುನರ್ನವ’ ಸಂಕಲನಕ್ಕೆ ಸಂಬಂಧಿಸಿ ಹೇಳಿದ ಮಾತುಗಳನ್ನು ಕಯ್ಯಾರರ ಒಟ್ಟು ಕವನಗಳಿಗೆ ಅನ್ವಯಿಸಹುದು. ‘ಶ್ರೀಮುಖ’, ‘ಐಕ್ಯಗಾನ’, ‘ಪುನರ್ನವ’, ‘ಚೇತನ’, ‘ಪಂಚಮಿ’, ‘ಕೊರಗ’, ‘ಗಂಧವತಿ’ ಎಂಬ ಆರು ಕವನ ಸಂಕಲನಗಳ ಜೊತೆಗೆ 111 ಕವನಗಳ ಸಂಕಲನ ‘ಶತಮಾನದ ಗಾನ’, ಅವುಗಳನ್ನು ಒಳಗೊಂಡ ‘ಪ್ರತಿಭಾ ಪಯಸ್ವಿನಿ’ಯೂ ಸೇರಿದಂತೆ ‘ಕುಮಾರನ್ ಆಶಾನ್ ಅವರ ಮೂರು ಕವಿತೆಗಳು’ (ಅನುವಾದ) ಮತ್ತು ‘ಮಕ್ಕಳ ಪದ್ಯ ಮಂಜರಿ ಭಾಗ 1 ಮತ್ತು ಭಾಗ 2’ ಎಂಬ ಕೃತಿಗಳು ಅವರ ಪ್ರತಿಭೆಗೆ ಸಾಕ್ಷಿಯಾಗಿವೆ. “ಆಗ ಕನ್ನಡದಲ್ಲಿ ನವೋದಯ ಸಾಹಿತ್ಯ ಕೃಷಿಯ ಕಾಲವಾಗಿತ್ತು. ನನ್ನ ಒಲವು ಆ…