Subscribe to Updates
Get the latest creative news from FooBar about art, design and business.
Author: roovari
ಉಡುಪಿ : ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀಕೃಷ್ಣ ಮಠ ಉಡುಪಿ ಆಶ್ರಯದಲ್ಲಿ ರಾಧಾಕೃಷ್ಣ ನೃತ್ಯನಿಕೇತನ (ರಿ.) ಉಡುಪಿ ಆಚರಿಸುವ 23ನೇ ವರ್ಷದ ‘ಭರತಮುನಿ ಜಯಂತ್ಯುತ್ಸವ’ವನ್ನು ದಿನಾಂಕ 26 ಅಕ್ಟೋಬರ್ 2025ರಂದು ಬೆಳಿಗ್ಗೆ 10-00 ಗಂಟೆಗೆ ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಕಿದಿಯೂರು ಶ್ರೀ ವೇದಮೂರ್ತಿ ಕೆ. ಪದ್ಮನಾಭ ಭಟ್ ಇವರ ಅಧ್ಯಕ್ಷತೆಯಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಆಶೀರ್ವಚನ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ‘ಭರತ ಪ್ರಶಸ್ತಿ’, ‘ಕಲಾರ್ಪಣ ಪ್ರಶಸ್ತಿ’ ಮತ್ತು ‘ಗುರು ರಾಧಾಕೃಷ್ಣಾನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಗುವುದು. 12-00 ಗಂಟೆಗೆ ರಾಧಾಕೃಷ್ಣ ನೃತ್ಯನಿಕೇತನದ ಶಿಷ್ಯರಿಂದ, ಪ್ರಶಿಷ್ಯರಿಂದ ಭರತನಾಟ್ಯ ನೃತ್ಯ ಕಾರ್ಯಕ್ರಮ, 3-00 ಗಂಟೆಗೆ ನೃತ್ಯ ಸಿಂಚನ, ಸಂಜೆ 7-00 ಗಂಟೆಗೆ ರಾಧಾಕೃಷ್ಣ ನೃತ್ಯನಿಕೇತನ ಶಿಷ್ಯರಿಂದ ‘ನೃತ್ಯಾಭಿಷೇಕಂ’ ಕೂಚುಪುಡಿ ನೃತ್ಯ ಕಾರ್ಯಕ್ರಮ ಪ್ರಸ್ತುತಗೊಳ್ಳಲಿದೆ.
ಕೋಟ : ಗೆಳೆಯರ ಬಳ ದಿನಾಂಕ ಗ ಕಾರ್ಕಡ ಇವರ ಆಶ್ರಯದಲ್ಲಿ ಡಾ.ಕೋಟ ಶಿವರಾಮ ಕಾರಂತ ಜನ್ಮದಿನಾಚರಣ ಅಂಗವಾಗಿ ಗೆಳೆಯರ ಬಳಗ ಕಾರಂತ ಪುರಸ್ಕಾರ ಸಮಾರಂಭ ದಿನಾಂಕ 17 ಅಕ್ಟೋಬರ್ 2025ರ ಶನಿವಾರದಂದು ಗಿರಿಜಾ ಕಲ್ಯಾಣಮಂಟಪದಲ್ಲಿ ನಡೆಯಿತು. ಕಾರ್ಯಕ್ರಮಾವನ್ನು ಉದ್ಘಾಟಿಸಿದ ಕುಂದಾಪುರದ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ “ಕಾರಂತರು ತಮ್ಮ ಜೀವಿತ ಅವಧಿಯಲ್ಲಿ ನಡೆನುಡಿ ಬಲು ವಿಶಿಷ್ಟವಾದದ್ದು ಅವರ ಸಾಹಿತ್ಯಿಕ ಬದುಕು ಯುವ ಸಮುದಾಯಕ್ಕೆ ಪ್ರೇರಣೆದಾಯಕ, ಕಾರಂತರು ವಿಶ್ವಮಟ್ಟದಲ್ಲಿ ತಮ್ಮ ಸಾಹಿತ್ಯ, ವಿವಿಧ ರಂಗವನ್ನು ಪರಿಚಯಿಸಿಕೊಂಡವರು ಅಂತಹ ಮಹಾನ್ ಚೇತನ ಹೆಸರಿನಲ್ಲಿ ಪುರಸ್ಕಾರ ಏರ್ಪಡಿಸಿದ ಗೆಳೆಯರ ಬಳಗಕ್ಕೆ ಕೃತಜ್ಞತೆ ಸಲ್ಲಿಸಬೇಕು.” ಎಂದು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷರಾದ ಹರಿಕೃಷ್ಣ ಪುನನೂರು ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಾಹಿತಿ ಎಚ್. ಶಕುಂತಲ ಭಟ್ ಹಳೆಯಂಗಡಿ ಇವರಿಗೆ ಗೆಳೆಯರ ಬಳಗದ ಕಾರಂತ ಪುರಸ್ಕಾರ ನೀಡಲಾಯಿತು. ಕಲ್ಕೂರ ಪ್ರತಿಷ್ಠಾನ ಮಂಗಳೂರು ಇದರ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಕಾರಂತರ ಭಾವ…
ಸಾಲಿಗ್ರಾಮ : ಪಟ್ಟಣ ಪಂಚಾಯತ್ ಸಾಲಿಗ್ರಾಮ ಇದರ ಸುವರ್ಣ ಸಂಭ್ರಮದ ಉತ್ಸವದ ಪ್ರಯುಕ್ತ ಯಕ್ಷಗಾನ ಕಲಾ ಕೇಂದ್ರ ಹಂಗಾರಕಟ್ಟೆ ಐರೋಡಿ ಇವರ ಸಂಯೋಜನೆಯಲ್ಲಿ ಯಕ್ಷಗಾನ ಪ್ರದರ್ಶನವನ್ನು ದಿನಾಂಕ 25 ಅಕ್ಟೋಬರ್ 2025ರಂದು ರಾತ್ರಿ ಗಂಟೆ 8-00ಕ್ಕೆ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಬಯಲು ರಂಗಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ಹಳೆಮಕ್ಕಿ ರಾಮ ಇವರು ವಿರಚಿತ ‘ಕೃಷ್ಣಾರ್ಜುನ’ ಎಂಬ ಪ್ರಸಂಗದ ಯಕ್ಷಗಾನ ಪ್ರದರ್ಶನದಲ್ಲಿ ಪರಮೇಶ್ವರ ನಾಯ್ಕ್, ಗಜೇಂದ್ರ ಶೆಟ್ಟಿ ಆಜ್ರಿ, ಗಣೇಶ ಶಣೈ ಶಿವಪುರ, ವಾಗ್ವಿಲಾಸ ಭಟ್ಸ್, ಕೋಟ ಸುರೇಶ, ನಾಗೂರು ಮಾಧವ, ಪಂಜು ಪೂಜಾರಿ, ವಿಘ್ನೇಶ ಪೈ ಸಿದ್ದಾಪುರ, ಸತೀಶ ಹಾಲಾಡಿ, ಆದಿತ್ಯ ಹೆಗಡೆ, ಅಶೋಕ ಆಚಾರ್, ಯುವರಾಜ ಇವರುಗಳು ಸಹಕರಿಸಲಿದ್ದಾರೆ.
ಕೋಣಾಜೆ : ಮಂಗಳೂರು ವಿಶ್ವವಿದ್ಯಾನಿಲಯ ಕನಕದಾಸ ಸಂಶೋಧನ ಕೇಂದ್ರದ ವತಿಯಿಂದ ʻಕನಕ ಜಯಂತಿ ಪ್ರಯುಕ್ತʼ ಕನಕದಾಸರ ಕೀರ್ತನೆಗಳ ‘ಕನಕ ಕೀರ್ತನ ಗಂಗೋತ್ರಿ’ ಕಾರ್ಯಕ್ರಮವು ದಿನಾಂಕ 12 ನವೆಂಬರ್ 2025ರಂದು ಬುಧವಾರ ಪೂರ್ವಾಹ್ನ 10-00 ಗಂಟೆಗೆ ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಪ್ರೊ. ವಿವೇಕ ರೈ ವಿಚಾರ ವೇದಿಕೆಯಲ್ಲಿ ನಡೆಯಲಿದೆ ಎಂದು ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕ ಡಾ. ಧನಂಜಯ ಕುಂಬ್ಳೆ ತಿಳಿಸಿದ್ದಾರೆ. ಪ್ರೌಢಶಾಲಾ, ಪದವಿಪೂರ್ವ, ಪದವಿ, ಸ್ನಾತಕೋತ್ತರ ಪದವಿಗಳ ವಿದ್ಯಾರ್ಥಿಗಳು, ಅಧ್ಯಾಪಕ, ಅಧ್ಯಾಪಕೇತರ ಹಾಗೂ ಸಾರ್ವಜನಿಕ ಒಟ್ಟು ಏಳು ವಿಭಾಗಗಳಲ್ಲಿ ನಡೆಯುವ ʻಸಾಮುದಾಯಿಕ ಪಾಲ್ಗೊಳ್ಳುವಿಕೆʼಯ ಆಶಯದ ಈ ಕಾರ್ಯಕ್ರಮದಲ್ಲಿ ಉಳ್ಳಾಲ, ಮಂಗಳೂರು, ಬಂಟ್ವಾಳ, ಪುತ್ತೂರು, ಮೂಲ್ಕಿ, ಮೂಡಬಿದ್ರೆ ಹಾಗೂ ಗಡಿನಾಡು ಪ್ರದೇಶವಾದ ಮಂಜೇಶ್ವರ, ಕಾಸರಗೋಡು ತಾಲೂಕು ವ್ಯಾಪ್ತಿಯ ಪ್ರೌಢ ಶಾಲೆ, ಪದವಿಪೂರ್ವ ಕಾಲೇಜುಗಳು ಮತ್ತು ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಕಾಲೇಜುಗಳು, ದಕ್ಷಿಣ ಕನ್ನಡ ಉಡುಪಿ, ಕೊಡಗು ಜಿಲ್ಲೆಯ ವಿಶ್ವೇಶ್ವರಯ್ಯ ತಾಂತ್ರಿಕ ಹಾಗೂ ರಾಜೀವ್ ಗಾಂಧಿ ವೈದ್ಯಕೀಯ ವಿಶ್ವವಿದ್ಯಾನಿಲಯ, ಕಣ್ಣೂರು…
ವಾರಾಣಸಿ : ಕರಾವಳಿಯ ಜನಪ್ರಿಯ ಕಲೆ ಯಕ್ಷಗಾನದ ಗಂಧಗಾಳಿ ಇಲ್ಲದಿದ್ದರೂ ಕೇವಲ ನಾಲ್ಕು ವಾರಗಳ ತರಬೇತಿಯಿಂದಲೇ ಉತ್ತರ ಭಾರತದ ವಿದ್ಯಾರ್ಥಿಗಳು ‘ಜಟಾಯು ಮೋಕ್ಷ’ ಯಕ್ಷಗಾನ ಪ್ರಸಂಗವನ್ನು ದಿನಾಂಕ 17 ಅಕ್ಟೋಬರ್ 2025ರಂದು ರಂಗದಲ್ಲಿ ಪ್ರದರ್ಶಿಸಿದ್ದಾರೆ. ಯಕ್ಷಗಾನ ಗುರು ಉಡುಪಿಯ ಬನ್ನಂಜೆ ಸಂಜೀವ ಸುವರ್ಣ ಇವರು ವಾರಾಣಸಿಗೆ ತೆರಳಿ ಅಲ್ಲಿನ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮದಲ್ಲಿ (ಎನ್.ಎಸ್.ಡಿ.) ರಂಗ ಶಿಕ್ಷಣ ಪಡೆಯುತ್ತಿರುವ 20 ವಿದ್ಯಾರ್ಥಿಗಳಿಗೆ ಯಕ್ಷ ಧೀಂಗಿಣ ಕಲಿಸಿ ಅವರಲ್ಲಿ ಕರಾವಳಿ ಕಲೆಯ ಒಲವು ಮೂಡಿಸಿದ್ದಾರೆ. ದಿನಾಂಕ 15 ಸೆಪ್ಟೆಂಬರ್ 2025ರಿಂದ ಪ್ರಾರಂಭವಾಗಿ 17 ಅಕ್ಟೋಬರ್ 2025ರವರೆಗೆ ಯಕ್ಷಗಾನದ ರಾಗ, ತಾಳ ಮತ್ತು ಮುಖಭಾವಗಳನ್ನು ಅಭ್ಯಾಸ ಮಾಡಿದ 10 ಹುಡುಗರು ಹಾಗೂ 10 ಹುಡುಗಿಯರು ಪಾರ್ತಿಸುಬ್ಬ ಬರೆದ ಪೌರಾಣಿಕ ಪ್ರಸಂಗವನ್ನು ವಾರಾಣಸಿ ಎನ್.ಎಸ್.ಡಿ.ಯಲ್ಲಿ ಪ್ರದರ್ಶಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪಾರ್ತಿಸುಬ್ಬ ಬರೆದ ‘ಪಂಚವಟಿ’ ಪ್ರಸಂಗವನ್ನು ಪರ್ಕಳದ ಪ್ರಭಾತ್ ಎಸ್. ಪಾಟೀಲ್ ಇವರು ಹಿಂದಿ ಭಾಷೆಗೆ ಅನುವಾದಿಸಿದ್ದಾರೆ. ಅದರಲ್ಲಿನ ‘ಜಟಾಯು ಮೋಕ್ಷ’ ಭಾಗವನ್ನು ವಿದ್ಯಾರ್ಥಿಗಳ…
ಬೆಂಗಳೂರು : ಪ್ರವರ ಥಿಯೇಟರ್ ಪ್ರಸ್ತುತಪಡಿಸುವ ಹನು ರಾಮಸಂಜೀವ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ‘ಅಣು ರೇಣು ತೃಣ ಕಾಷ್ಠ’ ಕನ್ನಡ ನಾಟಕ ಪ್ರದರ್ಶನವನ್ನು ದಿನಾಂಕ 27 ಅಕ್ಟೋಬರ್ 2025ರಂದು ಸಂಜೆ 8-00 ಗಂಟೆಗೆ ಬೆಂಗಳೂರು ಬನ ಶಂಕರಿ 2 ನೇ ಹಂತ ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಯ ನಾಣಿ ಅಂಗಳದಲ್ಲಿ ಆಯೋಜಿಸಲಾಗಿದೆ. ಕಾವ್ಯಾ ಕಡಮೆ ರಚಿಸಿರುವ ಈ ನಾಟಕಕ್ಕೆ ಅಕ್ಷಯ್ ಭೊಂಸ್ಲೆ ಸಂಗೀತ ನೀಡಿರುತ್ತಾರೆ. ರಂಗದ ಮೇಲೆ ನಾಗಶ್ರೀ ಪುಟ್ಟರಾಜು, ವರ್ಚಸ್ವಿನಿ ರವೀಂದ್ರ, ವಿಕಾಸ್ ಗೌಡ, ಸಂಜೀವಿನಿ, ರಾಜೇಶ್ವರಿ ಪ್ರಭು, ಪ್ರವೀಣ್ ಕೆಮ್ತೂರ್, ಚಂದನ್ ರಾಮಚಂದ್ರೇ ಗೌಡ ಇವರುಗಳು ಅಭಿನಯಿಸಲಿದ್ದು, ಹೆಚ್ಚಿನ ಮಾಹಿತಿಗಾಗಿ 9686869676 ಸಂಖ್ಯೆಯನ್ನು ಸಂಪರ್ಕಿಸಿರಿ.
ಮಾಣಿ : ಯಕ್ಷಗಾನ ಸಮಿತಿ ಮಾಣಿ ಇದರ 42ನೇ ವರ್ಷದ ತಾಳಮದ್ದಲೆ ಕೂಟವನ್ನು ದಿನಾಂಕ 26 ಅಕ್ಟೋಬರ್ 2025ರಂದು ಮಧ್ಯಾಹ್ನ 2-00 ಗಂಟೆಗೆ ಮಾಣಿ ಕರ್ನಾಟಕ ಪ್ರೌಢ ಶಾಲೆಯಲ್ಲಿ ಆಯೋಜಿಸಲಾಗಿದೆ. ಕವಿ ಪಾರ್ತಿಸುಬ್ಬ ವಿರಚಿತ ‘ವಾಲಿ ವಧೆ’ ಎಂಬ ಪ್ರಸಂಗದ ಯಕ್ಷಗಾನ ತಾಳಮದ್ದಲೆಯ ಹಿಮ್ಮೇಳದಲ್ಲಿ ರವಿಚಂದ್ರ ಕನ್ನಡಿಕಟ್ಟೆ, ಚೈತನ್ಯಕೃಷ್ಣ ಪದ್ಯಾಣ, ಶ್ರೀಧರ ವಿಟ್ಲ, ರಾಜೇಂದ್ರಕೃಷ್ಣ ಪಂಜಿಗದ್ದೆ ಹಾಗೂ ಮುಮ್ಮೇಳದಲ್ಲಿ ಸುಣ್ಣಂಬಳ ವಿಶ್ವೇಶ್ವರ ಭಟ್, ವಾಸುದೇವ ರಂಗ ಭಟ್ ಮಧೂರು, ಸಂಕದಗುಂಡಿ ಗಣಪತಿ ಭಟ್ ಮತ್ತು ಹರೀಶ್ ಬಳಂತಿಮೊಗರು ಇವರುಗಳು ಸಹಕರಿಸಲಿದ್ದಾರೆ.
ಸುರತ್ಕಲ್: ಬಂಟರ ಸಂಘ ಸುರತ್ಕಲ್ ವತಿಯಿಂದ ನಡೆಸಲ್ಪಡುವ ‘ಯಕ್ಷ ಸಿರಿ’ ಯಕ್ಷಗಾನ ತರಬೇತಿ ಕೇಂದ್ರದ ತೃತೀಯ ವಾರ್ಷಿಕೋತ್ಸವ ಸಮಾರಂಭ ಸುರತ್ಕಲ್ ಬಂಟರ ಸಂಘದ ವಠಾರದಲ್ಲಿ ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಸುರತ್ಕಲ್ ಗೋವಿಂದದಾಸ ಕಾಲೇಜು ಆಡಳಿತಾತ್ಮಕ ನಿರ್ದೇಶಕ ರಮೇಶ್ ಭಟ್ ಎಸ್.ಜಿ. ಮಾತನಾಡಿ “ಮಕ್ಕಳ ವ್ಯಕ್ತಿತ್ವದ ಸಕಾರಾತ್ಮಕ ಬೆಳವಣಿಗೆಗೆ ಯಕ್ಷಗಾನ ಸಹಕಾರಿ’ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸುರತ್ಕಲ್ ಬಂಟರ ಸಂಘ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಮಾತನಾಡಿ “ಮಕ್ಕಳಿಗೆ ಕಲೆಯ ಮೇಲೆ ಆಸಕ್ತಿ ಬೆಳೆಯಲು ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ” ಎಂದರು. ಉದ್ಯಮಿ ಸತೀಶ್ ಮುಂಚೂರು, ದ.ಕ. ಜಿಲ್ಲಾ ಬಿ.ಜೆ.ಪಿ ವಕ್ತಾರ ರಾಜ್ ಗೋಪಾಲ್ ರೈ, ಹೋಟೆಲ್ ಉದ್ಯಮಿ ಚಂದ್ರಹಾಸ ಶೆಟ್ಟಿ ಕಂಫರ್ಟ್, ದೀಪಕ್ ಶೆಟ್ಟಿ ಲಿಂಗಮಾರುಗುತ್ತು, ಮಮತ ಪ್ರೇಮ್ನಾಥ್ ಹೆಗ್ಡೆ, ಸೀಮಾ ಶೆಟ್ಟಿ ಸುಭಾಷಿತನಗರ, ಸಹನಾ ರಾಜೇಶ್ ರೈ, ಯಕ್ಷ ಗುರು ರಾಕೇಶ್ ರೈ ಅಡ್ಕ, ಸಂಘದ ಮಾಜಿ ಅಧ್ಯಕ್ಷ ಸುಧಾಕರ್ ಎಸ್.ಪೂಂಜ ಅತಿಥಿಗಳಾಗಿದ್ದರು. ಉಪಾಧ್ಯಕ್ಷ ಪ್ರವೀಣ್ ಪಿ. ಶೆಟ್ಟಿ, ಕೋಶಾಧಿಕಾರಿ…
ಕೋಟ : ಸಾಲಿಗ್ರಾಮ ಮಕ್ಕಳ ಮೇಳದ 50ರ ಸಂಭ್ರಮದ ಸುವರ್ಣ ಪರ್ವ ಸಮಾರೋಪ ಸಮಾರಂಭ ದಿನಾಂಕ 19 ಅಕ್ಟೋಬರ್ 2025ರಂದು ಕೋಟದ ವಿವೇಕ ವಿದ್ಯಾ ಸಂಸ್ಥೆಯ ಆವರಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಚಂಡೆ ನುಡಿಸಿ ಉದ್ಘಾಟಿಸಿದ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು “ಉಡುಪ ಮತ್ತು ಹಂದೆಯವರಿಂದ ಸ್ಥಾಪಿಸಲ್ಪಟ್ಟ ಸಾಲಿಗ್ರಾಮ ಮಕ್ಕಳ ಮೇಳವು ಚಾರಿತ್ರಿಕ ದಾಖಲೆಯೊಂದಿಗೆ ಐವತ್ತು ವರ್ಷಗಳ ದಿಗ್ವಿಜಯವನ್ನು ಸಾಧಿಸಿರುವುದರ ಜತೆಗೆ ವಿಶ್ವಕ್ಕೆ ಪರಿಚಯಿಸಿಕೊಂಡಿದೆ. ಈ ಮೇಳದ ಕೀರ್ತಿ ಇನ್ನಷ್ಟು ಹೆಚ್ಚಲಿ. ಇತ್ತೀಚೆಗೆ ಯಕ್ಷಗಾನವು ವಾಣಿಜೀಕರಣಗೊಂಡು ಅದರ ಮೂಲ ಸ್ವರೂಪಕ್ಕೆ ಧಕ್ಕೆ ಬಂದಿದೆ. ಕಲಾವಿದರ ವೈಯಕ್ತಿಕ ಮಾತುಕತೆಗಳೇ ರಂಗದ ಸಂಭಾಷಣೆಗಳಾಗಿ ಮೂಡಿಬರುತ್ತಿವೆ. ಇಂಥವುಗಳಿಗೆ ಕಡಿವಾಣ ಹಾಕಬೇಕು” ಎಂದು ಆಶೀರ್ವದಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಕರ್ನಾಟಕ ಸರ್ಕಾರದ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷರಾದ ಟಿ. ಶ್ಯಾಮ್ ಭಟ್ ಮಾತನಾಡಿ “ಯುವಜನತೆ ಸಮಾಜ ಬಾಹಿರ ಕೆಲಸದಲ್ಲಿ ತೊಡಗಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಮಕ್ಕಳು, ಯಕ್ಷಗಾನದಲ್ಲಿ ತೊಡಗಿಸಿ ಕೊಂಡಾಗ ಅವರಲ್ಲಿ ಉತ್ತಮ ಸಂಸ್ಕಾರ ಮೂಡುವುದಕ್ಕೆ…
ಪೆರಿಯ : ಬೇಕಲದ ಗೋಕುಲಂ ಗೋಶಾಲೆಯಲ್ಲಿ ನಡೆಯುತ್ತಿರುವ 5ನೇ ದೀಪಾವಳಿ ಸಂಗೀತೋತ್ಸವದಲ್ಲಿ ದಿನಾಂಕ 22 ಅಕ್ಟೋಬರ್ 2025ರಂದು ಕಾಂಚನಾ ಸಹೋದರಿಯರೆಂದೇ ಕರೆಸಿಕೊಳ್ಳುವ ಶ್ರುತಿರಂಜಿನಿ ಮತ್ತು ಶ್ರೀರಂಜನಿ ಪ್ರಸ್ತುತಪಡಿಸಿದ ಸಂಗೀತ ಕಛೇರಿ ವೈವಿಧ್ಯತೆಯಿಂದ ಗಮನ ಸೆಳೆಯಿತು. ಏಕಕಾಲಕ್ಕೆ ಎರಡು ತಾಳ ಕಲಾಪಗಳನ್ನು ಪ್ರಸ್ತುತಪಡಿಸುವ ಅವಧಾನ ತಾಳ ಪಲ್ಲವಿಯ ಅಪರೂಪದ ಸಂಯೋಜನೆ ಬಹು ಸೊಬಗಾಗಿತ್ತು. ಸಿಂಧು ಭೈರವಿ ರಾಗದ ಆರು ಕೃತಿಗಳ ಸಂಯೋಜನೆ ಹೊಸತನವಾಗಿತ್ತು. ಕರ್ನಾಟಿಕ್ ಸಂಗೀತದ ಅತ್ಯಂತ ಜನಪ್ರಿಯ ಕೃತಿಯಾದ ಕೃಷ್ಣ ನೀ ಬೇಗನೇ ಬಾರೋ ಮತ್ತು ಯಮುನಾ ಕಲ್ಯಾಣಿ ರಾಗದ ಪ್ರಸಿದ್ಧ ಹಿಂದೂಸ್ತಾನಿ ಭಜನೆ ಶ್ರೀರಾಮಚಂದ್ರ ಕೃಪಾಲು ಸಂಯೋಜನೆಯು ಪ್ರೇಕ್ಷಕರಿಗೆ ಮರೆಯಲಾಗದ ಅನುಭವವಾಗಿತ್ತು. ಪಕ್ಕ ವಾದ್ಯದಲ್ಲಿ ವೈಭವ್ ರಮಣಿ ಪಿಟೀಲು, ಮೃದಂಗದಲ್ಲಿ ಕುಳಲ್ಮಂದನ್ ರಾಮಕೃಷ್ಣನ್ ರಾಮಕೃಷ್ಣನ್, ಘಟಂನಲ್ಲಿ ರೋಹಿತ್ ಪ್ರಸಾದ್, ಮೋರ್ಸಿಂಗ್ ನಲ್ಲಿ ಗೋಪಿ ನಾದಾಲಯ,ಅಭಿಜಿತ್ ಟಿ.ಪಿ., ಔಚಿತ್ಯ, ದ್ವಾರಂ ಲಕ್ಷ್ಮಿ ತಿರುಪತಿ, ಅರ್ಜುನ್ ಗಣೇಶ್, ಲಾವಣ್ಯ ರೂಪಕಲಾ, ಆಶಾ ಪುರವಂಕರ, ಮೇಘನಾ ಪಾಣಾಜೆ, ಧನ್ಯ ದಿನೇಶ್ ರುದ್ರಪಟ್ಟಣ, ಕೃತಿ ಭಟ್…