Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಹೃದಯವಾಹಿನಿ ಮಂಗಳೂರು ಮತ್ತು ಎಸ್.ಕೆ. ಮುನ್ಸಿಪಲ್ ಎಂಪ್ಲಾಯಿಸ್ ಯೂನಿಯನ್ (ರಿ.) ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಒಂದು ದಿನದ 20ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನವನ್ನು ದಿನಾಂಕ 09 ಜನವರಿ 2025ರಂದು ಬೆಳಿಗ್ಗೆ 9-00 ಗಂಟೆಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆಯೋಜಿಸಲಾಗಿದೆ. ಈ ಸಮ್ಮೇಳನದಲ್ಲಿ ಶಾಸ್ತ್ರೀಯ ನೃತ್ಯ, ಜಾನಪದ ನೃತ್ಯ, ಹಾಸ್ಯೋತ್ಸವ, ರಸಮಂಜರಿ, ಭಾಷಾ ಸೌಹಾರ್ದಗೋಷ್ಠಿ, ಕವಿಗೋಷ್ಠಿ ಹಾಗೂ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ 9886510087.
ಅಜ್ಜನಿಂದ ತಾಯಿ ಯಕ್ಷಗಾನದ ಪ್ರೇರೇಪಣೆಗೊಂಡು.. ತಾಯಿಯಿಂದ ಮಗಳಿಗೆ ಯಕ್ಷಗಾನದ ಆಸಕ್ತಿ ಹುಟ್ಟಿಕೊಂಡು ಪ್ರಸ್ತುತ ಯಕ್ಷ ರಂಗದಲ್ಲಿ ಛಾಪು ಮೂಡಿಸುತ್ತಿರುವ ಕಲಾವಿದೆ ಶ್ರೀರಕ್ಷಾ ಬಿ. ಕಾಸರಗೋಡಿನ ಶ್ರೀಮತಿ ಲತಾ ವಿಜಯಬಾನು ದಂಪತಿಯ ಕಿರಿಯ ಪುತ್ರಿಯಾಗಿ ಮೇ 2ರಂದು ಶ್ರೀರಕ್ಷಾ ಬಿ. ಅವರ ಜನನ. ಪ್ರಸ್ತುತ ಫಾದರ್ ಮುಲ್ಲರ್ ಹೊಮಿಯೋಪತಿ ಮೆಡಿಕಲ್ ಕಾಲೇಜು ದೇರಳಕಟ್ಟೆ ಮಂಗಳೂರಿನಲ್ಲಿ 3ನೇ ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯಾಗಿ ವ್ಯಾಸಂಗ ಮಾಡುತ್ತಿದ್ದಾರೆ. ತಾಯಿಯ ತಂದೆ ವಿಶ್ವನಾಥ ಅವರು ಹವ್ಯಾಸಿ ಯಕ್ಷ ಕಲಾವಿದರು. ಇದರಿಂದ ತಾಯಿಗೂ ತಾಯಿಯಿಂದ ಮಗಳಿಗೂ ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆಯಾಯಿತು. ಯಕ್ಷಗಾನ ಗುರುಗಳು:- ಶ್ರೀ ದಿವಾಣ ಶಿವಶಂಕರ ಭಟ್ ಶ್ರೀ ಧರ್ಮೇಂದ್ರ ಆಚಾರ್ಯ ಬಾಯಾರ್ ನೆಚ್ಚಿನ ಪ್ರಸಂಗಗಳು:- ಶ್ರೀ ದೇವಿ ಮಹಾತ್ಮೆ, ಶ್ರೀ ಕೃಷ್ಣ ಲೀಲೆ, ದಕ್ಷಾಧ್ವರ. ನೆಚ್ಚಿನ ವೇಷಗಳು:- ಶ್ರೀ ದೇವಿ, ಶ್ರೀ ಕೃಷ್ಣ, ದಾಕ್ಷಾಯಿಣಿ, ಸುದರ್ಶನ, ವಿಷ್ಣು. “ಭಾಗವತರಲ್ಲಿ ಹಾಗೂ ಹಿರಿಯ ಕಲಾವಿದರಲ್ಲಿ ಅಭಿಪ್ರಾಯ ಕೇಳಿ ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ತಯಾರಿ ಮಾಡಿಕೊಳ್ಳುತ್ತೇನೆ”…
ತೆಕ್ಕಟ್ಟೆ: ಯಶಸ್ವೀ ಕಲಾವೃಂದ (ರಿ.)ಕೊಮೆ ತೆಕ್ಕಟ್ಟೆ, ರಂಗಸಂಪದ ಕೋಟ, ಧಮನಿ ಟ್ರಸ್ಟ್ ತೆಕ್ಕಟ್ಟೆ ಇದರ ಸಂಯುಕ್ತ ಆಶ್ರಯದಲ್ಲಿ ‘ಸಿನ್ಸ್ 1999 ಶ್ವೇತಯಾನ-91’ ಕಾರ್ಯಕ್ರಮದಡಿಯಲ್ಲಿ ‘ನಾಟಕಾಷ್ಟಕ’ದ ಮೂರನೇ ದಿನದ ಕಾರ್ಯಕ್ರಮ ದಿನಾಂಕ 28 ಡಿಸೆಂಬರ್ 2024ರಂದು ತೆಕ್ಕಟ್ಟೆಯ ಹಯಗ್ರೀವದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕಲಾಪೋಷಕ ಡಾ. ಆದರ್ಶ ಹೆಬ್ಬಾರ್ ಇವರನ್ನು ಗೌರವಿಸಿದ ಗುರುರಾಜ್ ಮಾತನಾಡಿ “ಗಳಿಸಿದ ಒಂದಂಶವನ್ನು ಕಲೆಗಾಗಿ ಮುಡಿಪಾಗಿಡುವ ಗುಣ ಹಲವರಲ್ಲಿರುವುದಿಲ್ಲ. ಪ್ರತಿಭಾನ್ವಿತ ಯಕ್ಷಗಾನಾಸಕ್ತ ಹಾಗೂ ಸಂಗೀತಾಸಕ್ತ ಡಾ. ಆದರ್ಶ ಹೆಬ್ಬಾರ್ ಕಲಾ ಪೋಷಕರಾಗಿ ಹೆಸರಾದವರು. ಶ್ವೇತಯಾನದಲ್ಲಿ ‘ಭೀಷ್ಮ ವಿಜಯ’ ಪ್ರಸಂಗದಲ್ಲಿ ಸಾಲ್ವನ ಪಾತ್ರವನ್ನು ವಿಭಿನ್ನವಾಗಿ ರಂಗದಲ್ಲಿ ಕಟ್ಟಿಕೊಟ್ಟವರು. ಎಳವೆಯಲ್ಲಿ ಕಲಿತ ಹೆಜ್ಜೆಯನ್ನು ನಲವತ್ತು ವರ್ಷಗಳ ಬಳಿಕ ಮತ್ತೆ ಬಣ್ಣ ಹಚ್ಚಿ ರಂಗವೇರಿ ಸೈ ಎನಿಸಿಕೊಂಡವರು. ಅವರ ಕಲೋತ್ಸಾಹ ನಿಜಕ್ಕೂ ಕಲಾಪ್ರಪಂಚಕ್ಕೆ ಆಸ್ತಿ ಎಂಬುದು ಜನಜನಿತವಾಗಿದೆ.” ಎಂದರು. ಖ್ಯಾತ ರಂಗ ತಜ್ಞ ರಾಮಕೃಷ್ಣ ಹೇರ್ಳೆ, ನಟನ ರಂಗಶಾಲೆಯ ಚೇತನ್, ಬಿ. ವಿ. ಕಾರಂತ್ ಕೋಣಿ, ಸತ್ಯನಾರಾಯಣ ಅರಸರು, ರಂಗ ನಿರ್ದೇಶಕ ವಾಸು ಗಂಗೇರ…
ಉಡುಪಿ : ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಉಡುಪಿ ಇದರ ವತಿಯಿಂದ ಪ್ರಭಾವತಿ ಹಾಗೂ ಉಡುಪಿ ವಿಶ್ವನಾಥ್ ಶೆಣೈ ಪ್ರಾಯೋಜಿತ ‘ವಿಶ್ವಪ್ರಭಾ ಪುರಸ್ಕಾರ – 2025’ವನ್ನು ತುಳು ಹಾಗೂ ಕನ್ನಡ ಚಲನಚಿತ್ರ ಮತ್ತು ರಂಗಭೂಮಿಯ ಪ್ರಸಿದ್ಧ ಕಲಾವಿದ ನವೀನ್ ಡಿ. ಪಡೀಲ್ ಇವರಿಗೆ ನೀಡಿ ಪುರಸ್ಕರಿಸಲಾಗುವುದು. ಈ ಪುರಸ್ಕಾರವು ಪ್ರಶಸ್ತಿ ಪತ್ರ, ಫಲಕ ಹಾಗೂ ಒಂದು ಲಕ್ಷ ರೂಪಾಯಿ ನಗದು ಒಳಗೊಂಡಿರುತ್ತದೆ. ಉಡುಪಿಯ ಯಕ್ಷಗಾನ ಕಲಾರಂಗದ ಐ.ವೈ.ಸಿ. ಸಭಾಂಗಣದಲ್ಲಿ ಫೆಬ್ರವರಿ ತಿಂಗಳಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸದ್ರಿ ಪುರಸ್ಕಾರವನ್ನು ಪ್ರದಾನ ಮಾಡಲಾಗುವುದು. ನವೀನ್ ಡಿ. ಪಡೀಲ್ : ರಂಗಭೂಮಿ ಮತ್ತು ಚಲನಚಿತ್ರ ನಟರಾಗಿದ್ದು, ತುಳು ಭಾಷೆಯಲ್ಲಿ 15 ಸಾವಿರಕ್ಕೂ ಹೆಚ್ಚು ನಾಟಕ ಪ್ರದರ್ಶನಗಳಲ್ಲಿ ನಟಿಸಿದ್ದಾರೆ. ‘ಮಾಸ್ಟರ್ ಆಫ್ ಕಾಮೆಡಿ ಅಂಡ್ ಟ್ರಾಜಿಡಿ’ನಂತಹ ನಟನಾ ಪ್ರದರ್ಶನಗಳಿಂದ ತುಳು ರಂಗಭೂಮಿ ವಲಯಗಳಲ್ಲಿ ವ್ಯಾಪಕವಾಗಿ ಪ್ರಸಿದ್ಧರಾಗಿರುವ ಇವರನ್ನು ‘ಕುಸಲ್ದ ಅರಸೆ’ (ತಮಾಶೆಯ ರಾಜ) ಎಂದು ಕರೆಯುತ್ತಾರೆ. ಹಾಸ್ಯಮಯ ಪಾತ್ರಗಳಲ್ಲಿ ಮುಖ್ಯವಾಗಿ ಇವರು ನಟಿಸಿದ್ದು, ದೇವದಾಸ್ ಕಾಪಿಕಾಡ್ ಮತ್ತು…
ದೇವುಡು ನರಸಿಂಹ ಶಾಸ್ತ್ರಿಯವರು 1896 ಡಿಸೆಂಬರ್ 29 ರಂದು ಮೈಸೂರಿನಲ್ಲಿ ವೇದ ಶಾಸ್ತ್ರ ಪಾರಂಗತ ಮತ್ತು ಆಗರ್ಭ ಶ್ರೀಮಂತ ಕುಟುಂಬದಲ್ಲಿ ತಾಯಿ ಸುಬ್ಬಮ್ಮ ಮತ್ತು ತಂದೆ ಶ್ರೀ ಕೃಷ್ಣ ಶಾಸ್ತ್ರಿಯವರ ಪುತ್ರರಾಗಿ ಜನಿಸಿದರು. ದೇವುಡು ಎಂದೇ ಖ್ಯಾತರಾದ ಇವರು ಕನ್ನಡದ ಖ್ಯಾತ ವಿದ್ವಾಂಸ ಮತ್ತು ಸಾಹಿತಿಗಳಲ್ಲಿ ಒಬ್ಬರು. ತಮ್ಮ ಐದನೇ ವಯಸ್ಸಿನಲ್ಲಿ ತಂದೆಯನ್ನು ಕಳಕೊಂಡ ಇವರು ಆಗಲೇ ಸಂಸ್ಕೃತದ “ಅಮರ ಶಬ್ದ ಕೋಶ” ಮತ್ತು “ಶಬ್ದ ಮತ್ತು ರಘು ವಂಶ”ಗಳನ್ನು ಕಲಿತಿದ್ದರು. ಪ್ರಾಥಮಿಕ ಶಾಲೆಯಿಂದ ಮಾಧ್ಯಮಿಕ ಶಾಲೆಗೆ ಬರುವಾಗಲೇ ದೇವುಡು “ರಾಮಾಯಣ”, “ಮಹಾಭಾರತ”, “ಭಾಗವತ”, “ಬ್ರಹ್ಮಾಂಡ ಪುರಾಣ”ಗಳನ್ನು ಓದಿ ಮುಗಿಸಿದ್ದರು, ಮತ್ತು ಎಲ್ಲಾ ತರದ ಆಟಗಳಲ್ಲಿ ಭಾಗವಹಿಸಿ ದೇಹದಾರ್ಡ್ಯದ ಕಡೆಗೂ ಗಮನ ನೀಡಿದ್ದರು. ತಮ್ಮ ಪ್ರಾಥಮಿಕ, ಮಾಧ್ಯಮಿಕ ಮತ್ತು ಕಾಲೇಜು ಶಿಕ್ಷಣವನ್ನು ಮೈಸೂರಿನಲ್ಲಿ ಪೂರೈಸಿದ ಇವರು 1917 ರಿಂದ 1922ರವರೆಗೆ ಮೈಸೂರು ಮಹಾರಾಜ ಕಾಲೇಜು ಮತ್ತು ಮೈಸೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾಗಿದ್ದರು. ಖ್ಯಾತ ಸಾಹಿತಿ ವಿ.ಸೀತಾರಾಮಯ್ಯ ಮತ್ತು ದೇವುಡು ಇವರು ಮೈಸೂರಿನಲ್ಲಿ ಸಹಪಾಠಿಗಳಾಗಿದ್ದು,…
ಬೆಂಗಳೂರು: ಮಣೂರ ಪ್ರಕಾಶನ ಕಲಬುರಗಿ ಇವರ ವತಿಯಿಂದ ಮಕರ ಸಂಕ್ರಾ೦ತಿ ನಿಮಿತ್ತ ಚೆನ್ನಮ್ಮಾಜಿಯವರ ಐಕ್ಯ ಸ್ಥಳವಾದ ಬೈಲಹೊಂಗಲದಲ್ಲಿ 13 ಜನವರಿ 2024ರಂದು ರಾಜ್ಯಮಟ್ಟದ ಕವಿಗೋಷ್ಠಿ ಆಯೋಜಿಸಲಾಗಿದೆ. ಈ ನಿಮಿತ್ತ ಉದಯೋನ್ಮುಖ ಹಾಗೂ ಪ್ರತಿಭಾವಂತ ಕವಿಗಳಿಂದ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ, ವೀರರಾಣಿ ಕಿತ್ತೂರು ಚನ್ನಮ್ಮ, ಸ್ವಾತಂತ್ರ್ಯ ಹೋರಾಟಗಾರರು, ಕನ್ನಡ ನಾಡು, ನುಡಿ, ಇತಿಹಾಸ, ಸಂಸ್ಕೃತಿ, ಪರಂಪರೆ, ಪರಿಸರ ಪ್ರೇಮ, ರಾಷ್ಟ್ರಪ್ರೇಮ, ಮಾನವೀಯ ಮೌಲ್ಯಗಳು ಇತ್ಯಾದಿ ವಿಷಯಗಳಿಗೆ ಸಂಬ೦ಧಿಸಿದ೦ತೆ ಕವನಗಳನ್ನು ಆಹ್ವಾನಿಸಲಾಗಿದೆ. ಕವನವು 30 ಸಾಲುಗಳಿಗೆ ಮಿಕ್ಕದಂತೆ ಕಾಗದದ ಒಂದೇ ಮಗ್ಗುಲಲ್ಲಿ ಬರೆದು ಅಥವಾ ಡಿ. ಟಿ. ಪಿ. ಮಾಡಿಸಿರಬೇಕು. ಸ್ವವಿಳಾಸ, ಕಿರುಪರಿಚಯ, ಭಾವಚಿತ್ರ, ವಾಟ್ಸಪ್ ಮೊಬೈಲ್ ಸಂಖ್ಯೆಯೊ೦ದಿಗೆ 05 ಜನವರಿ 2025ರ ಒಳಗಾಗಿ ಮೋಹನ ಬಸನಗೌಡ ಪಾಟೀಲ, ಮಾಜಿ ಜಿಲ್ಲಾಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ‘ಬಸವ ನಿವಾಸ’, ಚನ್ನಮ್ಮನಗರ ಮೊದಲನೆಯ ಅಡ್ಡರಸ್ತೆ, ಬೈಲಹೊಂಗಲ- 591102, ಬೆಳಗಾವಿ ಜಿಲ್ಲೆ. ಈ ವಿಳಾಸಕ್ಕೆ ನೋಂದಾಯಿತ ಅಂಚೆ ಮೂಲಕ ಕಳಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ 94489…
ತೆಕ್ಕಟ್ಟೆ: ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ, ರಂಗ ಸಂಪದ ಕೋಟ, ಧಮನಿ ಟ್ರಸ್ಟ್ ತೆಕ್ಕಟ್ಟೆ ಸಂಯುಕ್ತ ಆಶ್ರಯದಲ್ಲಿ ‘ಸಿನ್ಸ್ 1999 ಶ್ವೇತಯಾನ-90’ ಕಾರ್ಯಕ್ರಮದಡಿಯಲ್ಲಿ ನೀನಾಸಂ ಹೆಗ್ಗೋಡು ತಿರುಗಾಟದ ನಾಟಕ ಪ್ರದರ್ಶನ ದಿನಾಂಕ 27 ಡಿಸೆಂಬರ್ 2024ರಂದು ತೆಕ್ಕಟ್ಟೆಯ ಹಯಗ್ರೀವದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಿಧನರಾದ ಭಾರತದ ಮಾಜಿ ಪ್ರಧಾನ ಮಂತ್ರಿ ಶ್ರೀ ಮನಮೋಹನ್ ಸಿಂಗ್ ಇವರಿಗೆ ಪುಷ್ಪನಮನ ಸಲ್ಲಿಸಿದ ಸಿನ್ಸ್ 1999 ಶ್ವೇತಯಾನದ ಕಾರ್ಯಾಧ್ಯಕ್ಷ ಸುಜಯ್ ಶೆಟ್ಟಿ ಮಾತನಾಡಿ “ಅರ್ಥಶಾಸ್ತ್ರಜ್ಞ, ಶಿಕ್ಷಣ ತಜ್ಞ ಹಾಗೂ ಅಧಿಕಾರಿಯಾಗಿದ್ದ ಮನಮೋಹನ್ ಸಿಂಗ್ 10 ವರ್ಷಗಳ ಕಾಲ ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸಿ, ದೇಶದ ಆರ್ಥಿಕ ವ್ಯವಸ್ಥೆಯನ್ನು ಸುವ್ಯವಸ್ಥಿತವಾಗಿಸಿದವರು. ಸಂಸತ್ತಿನಲ್ಲಿ ಅದ್ಭುತ ಮಧ್ಯಸ್ಥಿಕೆಯನ್ನು ವಹಿಸಿ, ಜನರ ಜೀವನವನ್ನು ಸುಧಾರಿಸಲು ವ್ಯಾಪಕ ಪ್ರಯತ್ನ ಮಾಡಿದವರು. ಭಾರತವನ್ನು ಅಪಾರ ಬುದ್ಧಿವಂತಿಕೆಯಿಂದ, ಸಮಗ್ರತೆಯಿಂದ ಮುನ್ನಡೆಸಿ ಇದೀಗ ಅಗಲಿರುವುದು ಅತೀವ ನೋವು ತಂದಿದೆ.” ಎಂದರು. ಉಪನ್ಯಾಸಕ ಮೋಹನ್ಚಂದ್ರ ಪಂಜಿಗಾರು, ಮುಖ್ಯೋಪಾಧ್ಯಾಯ ದಿವಾಕರ್ ರಾವ್, ಉಪನ್ಯಾಸಕ ಕಿಶೋರ್ ಹಂದೆ ಉಪಸ್ಥಿತರಿದ್ದರು. ಹೆರಿಯ ಮಾಸ್ಟರ್…
ಮಂಗಳೂರು : ಹರಿಕಥಾ ಪರಿಷತ್ ಮಂಗಳೂರು ಇವರು ಉಡುಪಿ, ದ. ಕ. ಹಾಗೂ ಕಾಸರಗೋಡು ಜಿಲ್ಲೆಗಳ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಹರಿಕಥಾ ಸ್ಪರ್ಧೆಯು ದಿನಾಂಕ 25 ಡಿಸೆಂಬರ್ 2024ದಂದು ಕದ್ರಿ ಮಲ್ಲಿಕಟ್ಟೆಯ ಶ್ರೀಕೃಷ್ಣ ಕಲ್ಯಾಣಮಂದಿರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಎಸ್. ಕೆ. ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಇದರ ಅಧ್ಯಕ್ಷರಾದ ಪಿ. ಉಪೇಂದ ಆಚಾರ್ಯ ಮಾತನಾಡಿ “ಆಧ್ಯಾತ್ಮ, ಪುರಾಣ, ಸಂಗೀತ ಮತ್ತು ಶಾಸ್ತ್ರೀಯತೆಗಳಿಂದ ಕೂಡಿರುವ ಹರಿಕಥಾ ಕಲೆಯು ಅಂತಃ ಸತ್ವದಿಂದ ಶಾಶ್ವತವಾಗಿ ಉಳಿಯುವ ಕಲೆ. ಸರಕಾರ ಹಾಗೂ ಸಾರ್ವಜನಿಕ ಸಂಸ್ಥೆಗಳಿಂದ ಇಂತಹ ಕಲೆಗೆ ಇನ್ನಷ್ಟು ಪ್ರೋತ್ಸಾಹದ ಅಗತ್ಯವಿದೆ.” ಎಂದರು. ಹರಿಕಥಾ ಪರಿಷತ್ ಇದರ ಅಧ್ಯಕ್ಷರಾದ ಕೆ. ಮಹಾಬಲ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕ. ಸಾ. ಪ. ಮಾಜಿ ಅಧ್ಯಕ್ಷರಾದ ಡಾ. ಹರಿಕೃಷ್ಣ ಪುನರೂರು ಶುಭ ಹಾರೈಸಿದರು. ಬೆಂಗಳೂರಿನ ಷಡ್ಜ ಕಲಾಕೇಂದ್ರ ಟ್ರಸ್ಟ್ ಇದರ ಸಂಚಾಲಕ ಡಾ. ದತ್ತಾತ್ರೆಯ ಎಲ್. ವೇಲಣ್ಕರ್, ವಿಜಯ ಬ್ಯಾಂಕ್ ಇದರ ನಿವೃತ್ತ ಮ್ಯಾನೇಜರ್…
ತಿಮ್ಮಪ್ಪ ಮತ್ತು ರುಕ್ಮಿಣಿ ದಂಪತಿಯ ಸುಪುತ್ರರಾದ ಇವರು ವೈದ್ಯಕೀಯ ವ್ಯಕ್ತಿಯಲ್ಲಿದ್ದುಕೊಂಡು ಸಾಹಿತ್ಯ ಕೃಷಿ ಮಾಡಿದ ಸಾಧಕ. ತಾಯಿ ರುಕ್ಮಿಣಿಯ ಸಹೋದರ ಶಿವಮೊಗ್ಗ ಜಿಲ್ಲೆಯ ಕೆಳದಿಯ ನಾಡಿಗ ಲಕ್ಷ್ಮೀನಾರಾಯಣ ಇವರ ಮನೆಯಲ್ಲಿ 1913 ಡಿಸೆಂಬರ್ 28ಕ್ಕೆ ಇವರ ಜನನವಾಯಿತು. ಇವರು ಮೂಲತಃ ಸೊರಬ ತಾಲೂಕಿನ ದೊಡ್ಡೇರಿ ಎಂಬ ಹಳ್ಳಿಯವರು. ಸಾಗರದ ಪುರಸಭೆಯ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಇವರು ಬಾಲ್ಯದಲ್ಲಿಯೇ ಕವಿತೆ ಮತ್ತು ಕಥೆಗಳ ರಚನೆ ಮಾಡುತ್ತಿದ್ದ ಸಾಹಿತ್ಯ ಪ್ರೇಮಿ. ಇವರ ಸಾಹಿತ್ಯ ರಚನೆಗೆ ಪ್ರೋತ್ಸಾಹ ನೀಡಿದವರು ಇವರ ಗುರುಗಳಾದ ಅಳಸಿಂಗಾಚಾರ್ಯರು. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದ ವೆಂಕಟಗಿರಿ ರಾವ್ ರಾಯಚೂರು ಜಿಲ್ಲೆಯ ಪಂಡಿತ ತಾರಾನಾಥರ ‘ಪ್ರೇಮ ವಿದ್ಯಾಪೀಠ’ದಲ್ಲಿ ಅಧ್ಯಯನ ಮಾಡಿ “ಆಯುರ್ವೇದ ಶಿರೋಮಣಿ ” ಡಿಪ್ಲೋಮಾ ಪದವಿಯನ್ನು ಪಡೆದು ಸಾಗರದಲ್ಲಿ ವೈದ್ಯ ವೃತ್ತಿ ಜೀವನಕ್ಕೆ 1938ರಲ್ಲಿ ಪಾದಾರ್ಪಣೆ ಮಾಡಿದರು. ಕೊಡಗಿನ ಗಣಪಯ್ಯನವರ ಸುಪುತ್ರಿ ಸಾವಿತ್ರಮ್ಮನೊಂದಿಗೆ ವಿವಾಹವಾದ ಇವರು ಗೃಹಸ್ಥಾಶ್ರಮದ ಹೊಸಿಲನ್ನು ಮೆಟ್ಟಿ ಮೂರು ಮಂದಿ ಗಂಡು ಮತ್ತು ಇಬ್ಬರು ಹೆಣ್ಣುಮಕ್ಕಳೊಂದಿಗೆ ಬೆಂಗಳೂರು ಜಿಲ್ಲೆಯ…
ಕುಂದಾಪುರ : ಉಪ್ಪಿನಕುದ್ರು ಗೊಂಬೆಯಾಟ ಅಕಾಡಮಿಯ ವತಿಯಿಂದ ಉಪ್ಪಿನಕುದ್ರು ಗೊಂಬೆಯಾಟ ರಂಗಭೂಮಿಯ ಹರಿಕಾರ, ಸೂತ್ರ ಕ್ರೀಡೆಯ ಗಾರುಡಿಗ ಶ್ರೀ ಕೊಗ್ಗ ದೇವಣ್ಣ ಕಾಮತ್ ಇವರ ಹೆಸರಿನಲ್ಲಿ ನೀಡುವ ೨೦೨೪-೨೫ರ ಸಾಲಿನ “ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ -2025” ಪ್ರಶಸ್ತಿಗೆ ಖ್ಯಾತ ಜಾದೂ ಕಲಾವಿದ, ಲೇಖಕ, ರಂಗ ಕಲಾವಿದ, ಚಲನಚಿತ್ರ ನಟ ಶ್ರೀ ಓಂ ಗಣೇಶ್ ಉಪ್ಪುಂದ ಇವರು ಆಯ್ಕೆಯಾಗಿದ್ದಾರೆ. ಉಪ್ಪುಂದ ದಿ. ನಾರಾಯಣ ಕಾಮತ್ ಹಾಗೂ ದಿ. ಮನೋರಮಾ ಕಾಮತ್ ಇವರ ಸುಪುತ್ರರಾಗಿ 20 ಜನವರಿ 1965 ರಂದು ಜನಿಸಿದ ಓಂ ಗಣೇಶ್ ಉಪ್ಪುಂದ, ಬೈಂದೂರು ಹಾಗೂ ಕುಂದಾಪುರದಲ್ಲಿ ಬಿ.ಕಾಂ. ತನಕ ವಿದ್ಯಾಭ್ಯಾಸ ಪಡೆದರು. ನಂತರ ನಾಟಕದಲ್ಲಿ ಅಭಿನಯ, ತಬಲಾ ನುಡಿಸುವುದನ್ನು ಕಲಿತು ಆರ್ಕೆಸ್ಟ್ರಾ ತಂಡ ಕಟ್ಟಿ ನಾಟಕಕ್ಕೆ ಹಿನ್ನೆಲೆ ಸಂಗೀತ ನುಡಿಸಿದವರು. ವಿಶ್ವದಾದ್ಯಂತ ಜಾದೂ ಪ್ರದರ್ಶನ ನೀಡಿದ ಜಾದೂಗಾರರೂ ಹೌದು. ಶ್ರೀಯುತರು ಹಲವಾರು ಸಿನೆಮಾಗಳಲ್ಲಿ ನಟಿಸಿದ್ದಾರೆ. ಜಾದೂ ಪ್ರದರ್ಶನದೊಂದಿಗೆ ಬೆರಳ ನೆರಳಿನಾಟ ಪ್ರದರ್ಶನ ನೀಡಿದವರು. ಹಲವಾರು ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಸೇವೆ…