Author: roovari

ಕಾರ್ಕಳ : ರಂಗಸಂಸ್ಕೃತಿ ಕಾರ್ಕಳ ಇದರ ದಶಮಾನೋತ್ಸವದ ಅಂಗವಾಗಿ ಡಾ ಮಂಜುನಾಥ ಪೈ ಸಾಂಸ್ಕೃತಿಕ ಪ್ರತಿಷ್ಠಾನ ಕಾರ್ಕಳ ಇದರ ಸಹಕಾರದೊಂದಿಗೆ ಸರಸ್ವತಿ ಮಂಜುನಾಥ ಪೈ ರಂಗ ಮಂಟಪದಲ್ಲಿ ಆಯೋಜಿಸಿರುವ ನಾಟಕೋತ್ಸವ ‘ದಶರಂಗ ಸಂಭ್ರಮ’ವು ದಿನಾಂಕ 21-03-2024ರಂದು ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ರಂಗ ಮಾಂತ್ರಿಕ ಡಾ. ಜೀವನ್ ರಾಮ್ ಸುಳ್ಯ ಇವರು ಮಾತನಾಡಿ “ನಾಟಕದ ಸ್ವಾದ ಮನಸ್ಸಿನ ಒತ್ತಡ ಹಾಗೂ ಬದುಕಿನ ಜಂಜಾಟವನ್ನು ಮರೆಸುವಲ್ಲಿ ನೆರೆವಾಗುತ್ತದೆ. ಕಲಾಭಿರುಚಿಯನ್ನು ಹೊಂದಿರುವ ಕಾರ್ಕಳದ ಜನತೆ ಸಂಗೀತ ನಾಟಕ ಇತ್ಯಾದಿ ಲಲಿತ ಕಲೆಗಳನ್ನು ನಿರಂತರವಾಗಿ ಪ್ರೋತ್ಸಾಹಿಸುತ್ತಾ ಬಂದಿದೆ” ಎಂದು ಹೇಳಿದರು. ಕಾರ್ಯಕ್ರಮ ಅಧ್ಯಕ್ಷತೆಯನ್ನು ರಂಗಸಂಸ್ಕೃತಿಯ ಅಧ್ಯಕ್ಷರಾದ ಉದ್ಯಮಿ ಎಸ್. ನಿತ್ಯಾನಂದ ಪೈ ವಹಿಸಿದ್ದರು. ಈ ಸಂದರ್ಭದಲ್ಲಿ ನಾಟಕೋತ್ಸವದ ಪ್ರೋತ್ಸಾಹಕರಾದ ರೊಟೇರಿಯನ್ ವೈ. ಮೋಹನ್ ಶೆಣೈ, ಉದ್ಯಮಿ ನಿಟ್ಟೆ ಅರುಣ್ ಕುಮಾರ್ ಹಾಗೂ ನಾಟಕ ನಿರ್ದೇಶಕರಾದ ಡಾ. ಜೀವನ್ ರಾಮ್ ಸುಳ್ಯ ಅವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ರಂಗಸಂಸ್ಕೃತಿಯ ಉಪಾಧ್ಯಕ್ಷರಾದ ರಾಮಚಂದ್ರ ಟಿ. ನಾಯಕ್, ರಮಿತಾ ಶೈಲೇಂದ್ರ ರಾವ್…

Read More

ಮಂಜೇಶ್ವರ : ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಯವರ 141ನೇ ಜನ್ಮ ದಿನಾಚರಣೆಯು ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜಿನ ಕನ್ನಡ ವಿಭಾಗದಲ್ಲಿ ದಿನಾಂಕ 23-03-2024ರಂದು ನಡೆಯಿತು. ಮಂಜೇಶ್ವರ ಎಂದಾಗಲೇ ಪೈಗಳ ನೆನಪಾಗುವುದರಿಂದ ಈ ಪ್ರದೇಶದಲ್ಲಿ ಅವರ ಹೆಸರು ಒಂದು ದಿನಕ್ಕಷ್ಟೇ ಸೀಮಿತವಲ್ಲ. ನವೋದಯ ಸಾಹಿತ್ಯದ ಹೆಸರಾಂತ ಕವಿ ಆಗಿದ್ದಂತೆಯೆ ಪತ್ರಿಕೆ, ಸಂಶೋಧನಾ ವಲಯ, ಸ್ವಾತಂತ್ರ್ಯದ ತುಡಿತ, ನಾಟಕಗಳ ರಚನೆ ಮಹಾತ್ಮರ ಸಂದೇಶಗಳ ಅಧ್ಯಯನ, ಶ್ರೀಕೃಷ್ಣನಂತಹ ಪೌರಾಣಿಕ ಅಧ್ಯಾತ್ಮಿಕ ವ್ಯಕ್ತಿತ್ವಗಳ ಕಂಡರಿಸುವಿಕೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಕೀರ್ತಿಶಾಲಿ ಅನಿಸಿ ರಾಷ್ಟ್ರ ಕವಿ ಪ್ರಶಸ್ತಿ ಪಡೆದವರು. ಹೀಗಾಗಿಯೇ ಅವರ ಸಾಧನೆ ಸಾರ್ವಕಾಲಿಕ ಕವಿವಾಣಿಯ ರೂಪದಲ್ಲಿ ಶಾಶ್ವತವಾಗಿದೆ. ಕಾಲೇಜಿನ ಕನ್ನಡ ವಿಭಾಗ ಹೆಚ್ಚು ಮತುವರ್ಜಿ ವಹಿಸಿ ಕನ್ನಡ ಐಚ್ಛಿಕ ತರಗತಿಗಳ ವಿದ್ಯಾರ್ಥಿಗಳಿಂದ ಉಪನ್ಯಾಸಗಳ ಮೂಲಕ ಪೈಗಳ ಪರಿಚಯ ಮಾಡಿಸಿದ್ದು ಸಂದರ್ಭೋಚಿತವಾಗಿತ್ತು. ಆರು ಮಂದಿ ಪಾಲು ಮಾಡಿಕೊಂಡು ಪೈಗಳ ನುಡಿಚಿತ್ರ ಹೆಣೆದರು. ಶರ್ವಾಣಿ ಬಿ.ಕೆ. ಪೈಗಳು ಅನುಭವಿಸಿದ ಸಂಕಷ್ಟಗಳ ವಿವರಗಳ ಸಮೀಕ್ಷೆ ನಡೆಸಿದರೆ, ಪೈಗಳ ದಾಂಪತ್ಯ…

Read More

ಉಡುಪಿ : ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಾಗೂ ಹರಿಕಥಾ ಪ್ರವೀಣರಾದ ಹರಿದಾಸ ಬಿ.ಸಿ. ರಾವ್ ಅವರೊಂದಿಗೆ ‘ದಾಸ ಸಾಹಿತ್ಯ’ ವಿಷಯದಲ್ಲಿ ಸಂವಾದ ಕಾರ್ಯಕ್ರಮವು ದಿನಾಂಕ 27-03-2024ರಂದು ಸಂಜೆ ಶಿವಪುರ ಪಾಂಡುಕಲ್ಲಿನ ಶ್ರೀಯುತರ ಸ್ವಗೃಹ ‘ಗುರುಪದ’ದಲ್ಲಿ ನಡೆಯಿತು. ದಾಸ ಸಾಹಿತ್ಯ ವಿಷಯದಲ್ಲಿ ಮಾತನಾಡಿದ ಶ್ರೀ ಬಿ.ಸಿ. ರಾವ್ ಶಿವಪುರ ಅವರು “ದಾಸ ಸಾಹಿತ್ಯವೆಂದರೆ ಈಶ ಸಾಹಿತ್ಯವಾಗಿದೆ ಮತ್ತು ಅದು ದೇಶ ಹಿತ ಸಾಹಿತ್ಯವಾಗಿದೆ. ಆಧ್ಯಾತ್ಮಿಕ ಚಿಂತನೆಗಳ ಮೂಲಕ ವಿಶ್ವ ಜೀವನ ಸಂದೇಶವನ್ನು ನೀಡಿದ ದೇಶ ನಮ್ಮದು. ಹದಿನೈದು ಹದಿನಾರನೆಯ ಶತಮಾನದಲ್ಲಿ ಜನ ಸಾಮಾನ್ಯರಿಗೆ ಅರ್ಥವಾಗುವ ಸರಳ ಕನ್ನಡದಲ್ಲಿ ದಾಸ ಶ್ರೇಷ್ಠರು ಹಾಡಿದರು. ಸಾಹಿತ್ಯ ಸೃಜಿಸಿದರು. ಸಮಾಜದ ಅಂಕು ಡೊಂಕುಗಳನ್ನು ತಿದ್ದಿದರು. ಭಗವಂತನಿಗೆ ಸಂಪೂರ್ಣ ಶರಣಾಗುತ್ತ ಬದುಕಿನ ಸತ್ಯಗಳನ್ನು ತಿಳಿಸಿದರು. ‘ಈಸ ಬೇಕು ಇದ್ದು ಜಯಿಸಬೇಕು..’, ‘ಮಾನವ ಜನ್ಮ ದೊಡ್ಡದು ಇದನ್ನು ಹಾಳು ಮಾಡಿಕೊಳ್ಳ ಬೇಡಿರೋ..’, ‘ತಲ್ಲಣಿಸದಿರು ಕಂಡ್ಯ ತಾಳು ಮನವೇ..’, ‘ಕುಲ ಕುಲ ಕುಲವೆಂದು ಹೊಡೆದಾಡಬೇಡಿ..’ ಮುಂತಾದ ಸಾವಿರಾರು ಕೀರ್ತನೆಗಳ…

Read More

ಮೂಡುಬಿದಿರೆ : ಕಾಂತಾವರ ಕನ್ನಡ ಸಂಘದ ವತಿಯಿಂದ ಕಾಂತಾವರ ಕನ್ನಡ ಭವನದಲ್ಲಿ ಮುದ್ದಣ ಸಾಹಿತ್ಯೋತ್ಸವ ಮತ್ತು ಮುದ್ದಣ ಕಾವ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ದಿನಾಂಕ 24-03-2024ರಂದು ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಶಿವಮೊಗ್ಗ ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್. ಸುಂದರ್ ರಾಜ್ ಮಾತನಾಡಿ, “ಕಾಂತಾವರ ಕನ್ನಡ ಸಂಘ ಹಾಗೂ ಶಿವಮೊಗ್ಗ ಕರ್ನಾಟಕ ಸಂಘಗಳ ಧ್ಯೇಯೋದ್ದೇಶ ಕನ್ನಡಪರ ಚಟುವಟಿಕೆ ಹಮ್ಮಿಕೊಳ್ಳುವುದೇ ಆಗಿದೆ. ಕಾಂತಾವರ ಕನ್ನಡ ಸಂಘವು ಜನ್ಮತಾಳಿ 50ರ ಅಂಚಿಗೆ ತಲುಪುತ್ತಿದ್ದರೆ, ಶಿವಮೊಗ್ಗ ಕರ್ನಾಟಕ ಸಂಘವು ಶತಮಾನದಂಚಿಗೆ ಕಾಲಿಡುತ್ತಿದೆ” ಎಂದರು. ಕ.ಸಾ.ಪ. ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಇವರ ಅಧ್ಯಕ್ಷತೆಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 2023ರ ಸಾಲಿನ ‘ಮುದ್ದಣ ಕಾವ್ಯ ಪ್ರಶಸ್ತಿ’ಯನ್ನು ಬೆಂಗಳೂರಿನ ಕವಿ ಡಾ. ಲಕ್ಷ್ಮಣ ವಿ.ಎ. ಅವರಿಗೆ ಪ್ರದಾನ ಮಾಡಲಾಯಿತು. ಅವರ ಪ್ರಶಸ್ತಿ ಪುರಸ್ಕೃತ ಕೃತಿ ‘ಕಾಯಿನ್ ಬೂತ್’ ಅನ್ನು ಬಿಡುಗಡೆ ಮಾಡಲಾಯಿತು. 2024ರ ಸಾಲಿನ ದತ್ತಿನಿಧಿ ಪುರಸ್ಕಾರದಲ್ಲಿ ಮುನಿರಾಜ ರೆಂಜಾಳ ಅವರಿಗೆ ‘ಗಮಕ ಕಲಾ ಪ್ರವಚನ ಪ್ರಶಸ್ತಿ’, ಗಮಕಿ…

Read More

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ದಿನಾಂಕ 30-03-2024ರಂದು ಸಂಜೆ 5-00 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಮೂರು ಪ್ರತಿಷ್ಟಿತ ದತ್ತಿ ಪುರಸ್ಕಾರಗಳ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಮತ್ತು ಪ್ಯಾರಾ ಅಂತರರಾಷ್ಟ್ರೀಯ ಕ್ರೀಡಾಪಟು ಡಾ. ಕೆ.ಎನ್. ರಾಜಣ್ಣನವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ನಾಡೋಜ ಡಾ. ಮನು ಬಳಿಗಾರ್, ಕರ್ನಾಟಕ ಇಂಜಿನಿಯರಿಂಗ್ ಸರ್ವೀಸ್ ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀ ಶಿವಾನಂದ ಪಿ. ಹೂಗಾರ, ದತ್ತಿ ದಾನಿಯಾದ ಡಾ. ಹೆಚ್. ವಿಶ್ವನಾಥ್, ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಶ್ರೀ ಪಿ. ಮಹೇಶ್ ಉಪಸ್ಥಿತರಿರುವರು. ಬೀದರದ ಶರಣ ಸಾಹಿತಿಗಳಾದ ಅಕ್ಕ ಡಾ. ಅನ್ನಪೂರ್ಣತಾಯಿ, ಬೆಳಗಾವಿ ಶರಣ ಸಾಹಿತಿಗಳಾದ ಶ್ರೀ ವಿನೋದ ಸುರೇಂದ್ರ ದೊಡ್ಡಣ್ಣವರ, ಬೆಂಗಳೂರಿನ ವಿಶೇಷ ದೃಷ್ಟಿ ಚೇತನ ಬರಹಗಾರರಾದ ರಮಾ…

Read More

ಹುಬ್ಬಳ್ಳಿ : ಜಗದ್ಗುರು ಶ್ರೀ ಸಿದ್ದಾರೂಢ ಮಹಾಸ್ವಾಮಿಗಳವರ ಜಯಂತ್ಯುತ್ಸವದ ಅಂಗವಾಗಿ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ದಿನಾಂಕ 10-04-2024ರಿಂದ 15-04-2024ರವರೆಗೆ ರಾಜ್ಯ ಮಟ್ಟದ ಒಂಭತ್ತನೇ ವರ್ಷದ ಭಜನಾ ಸ್ಪರ್ಧೆ ಏರ್ಪಡಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಭಜನಾ ತಂಡದವರು ದಿನಾಂಕ 10-04-2024ರೊಳಗಾಗಿ ಶ್ರೀಮಠದ ಟ್ರಸ್ಟ್ ಕಮಿಟಿಯ ಕಾರ್ಯಾಲಯದಲ್ಲಿ ಹೆಸರು ನೋಂದಾಯಿಸಬೇಕೆಂದು ರಾಜ್ಯ ಮಟ್ಟದ ಭಜನಾ ಸ್ಪರ್ಧೆಯ ಅಧ್ಯಕ್ಷರು ಹಾಗೂ ಶ್ರೀಮಠದ ಧರ್ಮದರ್ಶಿಗಳಾದ ಶ್ರೀ ಶಾಮಾನಂದ ಪೂಜೇರಿ ಇವರು ತಿಳಿಸಿದರು. ಭಾಗವಹಿಸುವ ಭಜನಾ ಮೇಳದವರಿಗೆ ಶ್ರೀಮಠದಲ್ಲಿ ವಸತಿ ಹಾಗೂ ಊಟದ ವ್ಯವಸ್ಥೆಯನ್ನು ಮಾಡಲಾಗುವುದು ಮತ್ತು ಒಂದು ಬದಿಯ ಬಸ್ಸು ಚಾರ್ಜನ್ನು ಪ್ರತಿ ತಂಡದ 6 ಜನರಿಗೆ ನೀಡಲಾಗುವದು. ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿಯೊಂದು ಭಜನಾ ತಂಡಕ್ಕೆ ‘ಸವಿನೆನಪಿನ ಕಾಣಿಕೆ’ ಹಾಗೂ ಪ್ರತಿಯೊಂದು ತಂಡದ ಪ್ರತಿಯೊಬ್ಬ ಕಲಾವಿದರಿಗೂ ‘ಪ್ರಶಸ್ತಿ ಪತ್ರ’ ನೀಡಲಾಗುವುದು. ದಿನಾಂಕ 10-04-2024ರಂದು ಮುಂಜಾನೆ 10-30ಕ್ಕೆ ಉದ್ಘಾಟನಾ ಸಮಾರಂಭ ಜರುಗುವುದು. ಬಹುಮಾನಗಳ ವಿವರ : ಪ್ರಥಮ : ರೂ.1,00,000/- ದ್ವಿತೀಯ : ರೂ.80,000/- ತೃತೀಯ :…

Read More

ಸುರತ್ಕಲ್ : ಚಿರಂತನ ಚಾರಿಟೇಬಲ್ ಟ್ರಸ್ಟ್ ಹಾಗೂ ಗೋವಿಂದ ದಾಸ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶ, ಲಲಿತಕಲಾ ಸಂಘಗಳ ಸಹಭಾಗಿತ್ವದಲ್ಲಿ ಮಂಗಳೂರಿನ ಯುವ ಬಾನ್ಸುರಿ ಕಲಾವಿದ ಕಾರ್ತಿಕ್ ಭಟ್ ಇವರಿಂದ ಬಾನ್ಸುರಿ ವಾದನ ಕಾರ್ಯಕ್ರಮವು ಗೋವಿಂದ ದಾಸ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಧಾರವಾಡದ ಹೇಮಂತ್‌ ಜೋಷಿ ತಬಲಾದಲ್ಲಿ ಸಾಥ್ ನೀಡಿದರು. ಆರಂಭದಲ್ಲಿ ಸಾಯಂಕಾಲದ ರಾಗ ಯಮನ್‌ನಲ್ಲಿ ಆಲಾಪ್, ಮಧ್ಯಲಯ್‌ ಝಪ್‌ ತಾಲ್ ಹಾಗೂ ದೃತ್‌ತೀನ್ ತಾಳದ ಗತ್‌ಗಳನ್ನು ನುಡಿಸಿದರು. ನಂತರ ರಾಗ್‌ದೇಸ್‌ನ್ನು ದೃತ್‌ಏಕ್‌ತಾಳ್ ಹಾಗೂ ಅತಿದೃತ್‌ತೀನ್ ತಾಳದಲ್ಲಿ ಪ್ರಸ್ತುತ ಪಡಿಸಿದರು. ಕೊನೆಯಲ್ಲಿ ಭಜನ್‌ನೊಂದಿಗೆ ಕಛೇರಿಯನ್ನು ಸಂಪನ್ನಗೊಳಿಸಿದರು. ಚಿರಂತನ ಚಾರಿಟೇಬಲ್ ಟ್ರಸ್ಟಿನ ಭಾರವಿ ದೇರಾಜೆ ಕಲಾವಿದರನ್ನು ಪರಿಚಯಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯದರ್ಶಿ ಹಿತಾ ಉಮೇಶ್ ಸ್ವಾಗತಿಸಿ, ಪ್ರಾಂಶುಪಾಲ ಪ್ರೊ. ಪಿ. ಕೃಷ್ಣಮೂರ್ತಿ ಕಲಾವಿದರನ್ನು ಗೌರವಿಸಿದರು.

Read More

ಮಡಿಕೇರಿ : ಕೊಡವ ಮಕ್ಕಡ ಕೂಟದ 88ನೇ ಪುಸ್ತಕ ಹಾಗೂ ಲೇಖಕಿ ಯಶೋಧ ಪೇರಿಯಂಡ ಅವರ ಪ್ರಥಮ ಪುಸ್ತಕ ‘ಚುಪ್ಪಿ ಕತೆರ ಜೊಪ್ಪೆ’ ಕೃತಿಯ ಬಿಡುಗಡೆ ಕಾರ್ಯಕ್ರಮವು ದಿನಾಂಕ 25-03-2024ರಂದು ನಗರದ ಪತ್ರಿಕಾ ಭವನದಲ್ಲಿ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೂಟದ ಅಧ್ಯಕ್ಷರಾದ ಬೊಳ್ಳಜಿರ ಬಿ. ಅಯ್ಯಪ್ಪ “ಕೊಡಗಿನ ಸಾಹಿತ್ಯ ಕ್ಷೇತ್ರಕ್ಕೆ ಯುವ ಬರಹಗಾರರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು. ಯುವ ಬರಹಗಾರರಿಗೆ ಪ್ರೋತ್ಸಾಹ ನೀಡಲು ಕೊಡವ ಮಕ್ಕಡ ಕೂಟ ಸದಾ ಸಿದ್ಧವಿದೆ. ಕೊಡವ, ಕನ್ನಡ, ಇಂಗ್ಲೀಷ್, ಹಿಂದಿ ಭಾಷೆಯಲ್ಲಿ ರಚನೆಗೊಂಡ ಒಟ್ಟು 87 ಪುಸ್ತಕಗಳನ್ನು ಕೂಟದ ಮೂಲಕ ಈಗಾಗಲೇ ಬಿಡುಗಡೆ ಮಾಡಲಾಗಿದೆ. ಹೊಸ ಬರಹಗಾರರೊಂದಿಗೆ ಯುವ ಬರಹಗಾರರನ್ನೂ ಪರಿಚಯಿಸುತ್ತಾ ಬರಲಾಗಿದೆ. ಕೊಡಗಿನ ಸಾಹಿತ್ಯ ಕ್ಷೇತ್ರಕ್ಕೆ ಯುವ ಬರಹಗಾರರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಮೂಲಕ ಸಾಹಿತ್ಯ ಕೃಷಿ ಆಗಬೇಕಾಗಿದೆ. ಇದೇ ಕಾರಣಕ್ಕೆ ಕೂಟ ಯುವ ಬರಹಗಾರರಿಗೆ ಹೆಚ್ಚು ಉತ್ತೇಜನ ನೀಡುತ್ತಿದೆ. ಸಾಮಾಜಿಕ ಕಳಕಳಿ, ಕೊಡಗಿನ ಅಭ್ಯುದಯ, ಸಾಹಿತ್ಯ, ಸಂಸ್ಕೃತಿಯ ಬೆಳವಣಿಗೆಗಾಗಿ ನಿರಂತರ…

Read More

ಮಂಗಳೂರು : ಮುಲ್ಲಕಾಡಿನ ಶ್ರೀ ಅಯ್ಯಪ್ಪ ಸ್ವಾಮಿ ಯಕ್ಷವೃಂದದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ‘ಯಕ್ಷ ತ್ರಿವೇಣಿ’ಯು ದಿನಾಂಕ 29-03-2024, 30-03-2024 ಮತ್ತು 31-03-2024ರಂದು ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ವಠಾರದಲ್ಲಿ ನಡೆಯಲಿದೆ. ದಿನಾಂಕ 29-03-2024ರಂದು ‘ಸ್ವಾಮಿಯೇ ಶರಣಂ ಅಯ್ಯಪ್ಪ’, ದಿನಾಂಕ 30-03-2024ರಂದು ‘ಶ್ರೀ ಶನೀಶ್ವರ ಮಹಾತ್ಮೆ’ ಮತ್ತು ದಿನಾಂಕ 31-03-2024ರಂದು ಪರಂಪರೆಯ ದೊಂದಿ ಬೆಳಕಿನ ಯಕ್ಷಗಾನ ‘ಶ್ರೀ ದೇವಿ ಕದಂಬ ಕೌಶಿಕೆ’ ಎಂಬ ಪರಸಂಗದ ಯಕ್ಷಗಾನ ಪ್ರದರ್ಶನ ನಡೆಯಲಿದೆ.

Read More

ಮಂಗಳೂರು : ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಆಂಡ್ ಕಲ್ಬರಲ್ ಹೆರಿಟೇಜ್ (ಇಂಟ್ಯಾಕ್) ಇದರ ಮಂಗಳೂರು ಅಧ್ಯಾಯ ಮತ್ತು ಕಲ್ಲಚ್ಚು ಪ್ರಕಾಶನ ವತಿಯಿಂದ ವಿಶ್ವ ಕವಿತ ದಿನಾಚರಣೆ ಅಂಗವಾಗಿ ‘ಮುಸ್ಸಂಜೆಯ ಕವಿತೆಗಳು’ ಕನ್ನಡ ಕವಿ- ಕಾವ್ಯ ಮಂಥನ ಕಾರ್ಯಕ್ರಮವು ದಿನಾಂಕ 21-03-2024ರ ಗುರುವಾರದಂದು ಮಂಗಳೂರಿನ ಕೊಡಿಯಾಲ್‌ ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ನಡೆಯಿತು. ಮೈಸೂರಿನ ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರದ ನಿಕಟಪೂರ್ವ ಯೋಜನಾ ನಿರ್ದೇಶಕರಾದ ಪ್ರೊ. ಬಿ. ಶಿವರಾಮ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಕೆನರಾ ಬ್ಯಾಂಕಿನ ನಿವೃತ್ತ ಎ. ಜಿ. ಎಂ. ರೀಸ್ ಮ್ಯಾಥ್ಯೂಸ್ ಉದ್ಘಾಟಿಸಿದರು. ಕನ್ನಡದ 20ನೇ ಶತಮಾನದ ಹಿರಿಯ ಕವಿಗಳ ಕವನ ವಾಚನ ಮತ್ತು ವಿಶ್ಲೇಷಣೆಯಲ್ಲಿ ಕರಾವಳಿಯ ಕವಿ- ಕವಯಿತ್ರಿಯರಾದ ಡಾ. ಮೀನಾಕ್ಷಿ ರಾಮಚಂದ್ರ, ಪ್ರೊ. ಪಿ. ಕೃಷ್ಣಮೂರ್ತಿ, ಡಾ. ಸಾಯಿಗೀತಾ ಹೆಗ್ಡೆ, ಮಾರ್ಸೆಲ್ ಡಿ’ಸೋಜ, ಬಶೀರ್ ಅಹ್ಮದ್ ಕಿನ್ಯ, ದಿವಾ ಕೊಕ್ಕಡ, ಅಕ್ಷಯಾ ಆ‌ರ್.ಶೆಟ್ಟಿ, ದಿವಾಕರ ಬಲ್ಲಾಳ್ ಮುದ್ರಾಡಿ, ಯೋಗೀಶ್ ಮಲ್ಲಿಗೆಮಾಡು…

Read More