Subscribe to Updates
Get the latest creative news from FooBar about art, design and business.
Author: roovari
ಕುಂದಾಪುರ : ಉಪ್ಪಿನಕುದ್ರು ಗೊಂಬೆಯಾಟ ಅಕಾಡಮಿಯ ವತಿಯಿಂದ ಉಪ್ಪಿನಕುದ್ರು ಗೊಂಬೆಯಾಟ ರಂಗಭೂಮಿಯ ಹರಿಕಾರ, ಸೂತ್ರ ಕ್ರೀಡೆಯ ಗಾರುಡಿಗ ಶ್ರೀ ಕೊಗ್ಗ ದೇವಣ್ಣ ಕಾಮತ್ ಇವರ ಹೆಸರಿನಲ್ಲಿ ನೀಡುವ ೨೦೨೪-೨೫ರ ಸಾಲಿನ “ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ -2025” ಪ್ರಶಸ್ತಿಗೆ ಖ್ಯಾತ ಜಾದೂ ಕಲಾವಿದ, ಲೇಖಕ, ರಂಗ ಕಲಾವಿದ, ಚಲನಚಿತ್ರ ನಟ ಶ್ರೀ ಓಂ ಗಣೇಶ್ ಉಪ್ಪುಂದ ಇವರು ಆಯ್ಕೆಯಾಗಿದ್ದಾರೆ. ಉಪ್ಪುಂದ ದಿ. ನಾರಾಯಣ ಕಾಮತ್ ಹಾಗೂ ದಿ. ಮನೋರಮಾ ಕಾಮತ್ ಇವರ ಸುಪುತ್ರರಾಗಿ 20 ಜನವರಿ 1965 ರಂದು ಜನಿಸಿದ ಓಂ ಗಣೇಶ್ ಉಪ್ಪುಂದ, ಬೈಂದೂರು ಹಾಗೂ ಕುಂದಾಪುರದಲ್ಲಿ ಬಿ.ಕಾಂ. ತನಕ ವಿದ್ಯಾಭ್ಯಾಸ ಪಡೆದರು. ನಂತರ ನಾಟಕದಲ್ಲಿ ಅಭಿನಯ, ತಬಲಾ ನುಡಿಸುವುದನ್ನು ಕಲಿತು ಆರ್ಕೆಸ್ಟ್ರಾ ತಂಡ ಕಟ್ಟಿ ನಾಟಕಕ್ಕೆ ಹಿನ್ನೆಲೆ ಸಂಗೀತ ನುಡಿಸಿದವರು. ವಿಶ್ವದಾದ್ಯಂತ ಜಾದೂ ಪ್ರದರ್ಶನ ನೀಡಿದ ಜಾದೂಗಾರರೂ ಹೌದು. ಶ್ರೀಯುತರು ಹಲವಾರು ಸಿನೆಮಾಗಳಲ್ಲಿ ನಟಿಸಿದ್ದಾರೆ. ಜಾದೂ ಪ್ರದರ್ಶನದೊಂದಿಗೆ ಬೆರಳ ನೆರಳಿನಾಟ ಪ್ರದರ್ಶನ ನೀಡಿದವರು. ಹಲವಾರು ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಸೇವೆ…
ತೆಕ್ಕಟ್ಟೆ: ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ, ರಂಗ ಸಂಪದ ಕೋಟ, ಧಮನಿ ಟ್ರಸ್ಟ್ ಇದರ ಸಂಯುಕ್ತ ಆಶ್ರಯದಲ್ಲಿ ‘ಸಿನ್ಸ್ 1999 ಶ್ವೇತಯಾನ-89’ ಕಾರ್ಯಕ್ರಮದಡಿಯಲ್ಲಿ “ನಾಟಕಾಷ್ಟಕ” ಇದರ ಉದ್ಘಾಟನಾ ಸಮಾರಂಭವು ದಿನಾಂಕ 26 ಡಿಸೆಂಬರ್ 2024ರಂದು ತೆಕ್ಕಟ್ಟೆಯ ಹಯಗ್ರೀವದಲ್ಲಿ ನಡೆಯಿತು. ಸಂಸ್ಥೆಯ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಗೀತಾನಂದ ಫೌಂಡೇಶನ್ ಇದರ ಪ್ರವರ್ತಕರಾದ ಆನಂದ ಸಿ. ಕುಂದರ್ ಮಾತನಾಡಿ “ಸಮಾಜದ ಕುಂದು ಕೊರತೆಗಳನ್ನು ಜನರಿಗೆ ಮನ ಮುಟ್ಟುವಂತೆ ರಂಗರೂಪಕ್ಕಿಳಿಸಿ ಅಭಿನಯಿಸುವ ಕಲೆಯೇ ರಂಗಭೂಮಿ ನಾಟಕ. ಹಲವಾರು ಕಲಾ ಪ್ರಕಾರಗಳನ್ನು ಮೈಗೂಡಿಸಿಕೊಂಡು ಯಶಸ್ವೀ ಕಲಾವೃಂದದ ವೇದಿಕೆಯಲ್ಲಿ ಅನಾವರಣಗೊಳಿಸುತ್ತಿರುವುದು ಈ ಭಾಗದ ಜನಕ್ಕೆ ಬಹಳ ಉಪಯುಕ್ತವಾಗಿದೆ. ಕಲಾಸಕ್ತ ಮನಸ್ಸುಗಳಿಗೆ ಹತ್ತಿರವಾಗಿ ಬೆಳಗುತ್ತಿರುವ ಸಂಸ್ಥೆ ನೂರು ವರ್ಷ ಬದುಕಿ ಬಾಳಲಿ.” ಎಂದು ಹಾರೈಸಿದರು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ವೀರಯೋಧ ಅನೂಪ್ ಪೂಜಾರಿ ಇವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಗಣಪತಿ…
ಮಂಗಳೂರು: ‘ನಿಲ್ಲದ ಮನವಲ್ಲಿ ಪೋಗದೆ ಕಳುಹಿಸಲಾಗದೆ…’ ಪ್ರಾಣವಲ್ಲಭ ಭಾಗವತೆ ಶಾಲಿನಿ ಹೆಬ್ಬಾರ್ ಮಧುರ ರಾಗ ಚಾರುಕೇಶಿಯಲ್ಲಿ ದಕ್ಷಾಧ್ವರ ಪ್ರಸಂಗದ ಈ ಪದವನ್ನು ಏರುಧ್ವನಿಯಲ್ಲಿ ಹಾಡುತ್ತಿದ್ದರೆ, ಅವರ ಗುರು ಲೀಲಾವತಿ ಬೈಪಾಡಿತ್ತಾಯ ಅವರ ಭಾವಚಿತ್ರದ ಮೇಲೆ ದೃಷ್ಟಿ ನೆಟ್ಟಿದ್ದ ಯಕ್ಷಗಾನಪ್ರಿಯರ ಕಣ್ಣುಗಳು ಮಂಜಾಗಿದ್ದವು. ಈಚೆಗೆ ನಿಧನರಾದ ಬಜಪೆ ಸಮೀಪದ ತಲಕಲ ನಿವಾಸಿ, ಯಕ್ಷಗಾನ ಕ್ಷೇತ್ರದಲ್ಲಿ ಮಹಿಳಾ ಕ್ರಾಂತಿಗೆ ಕಾರಣರಾದ ಲೀಲಾವತಿ ಬೈಪಾಡಿತ್ತಾಯ ಅವರ ಮನೆಯ ಸಮೀಪದ ಕಾಶಿ ವಿಶ್ವನಾಥೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ದಿನಾಂಕ 26 ಡಿಸೆಂಬರ್ 2024ರ ಗುರುವಾರ ನಡೆದ ‘ಗಾನ ನಮನ’ ಕಾರ್ಯಕ್ರಮದಲ್ಲಿ ಲೀಲಾವತಿ ಅವರ ಶಿಷ್ಯರು ಮತ್ತು ಅಭಿಮಾನಿಗಳು ಯಕ್ಷಗಾನದ ಪದಗಳನ್ನು ಹಾಡಿ ಅಗಲಿದ ಕಲಾವಿದೆಯನ್ನು ಸ್ಮರಿಸಿದರು. ‘ನಿಲ್ಲದ ಮನವಲ್ಲಿ ಪೋಗದೆ…’ ಹಾಡಿಗೂ ಮೊದಲು ‘ಕಾಮಿನಿ ಮಣಿ ಕೇಳು..’ ಹಾಡಿಗೆ ಸಭಿಕರ ಒತ್ತಾಯದ ಮೇರೆಗೆ ಲೀಲಾವತಿ ಅವರ ಪತಿ ಹರಿನಾರಾಯಣ ಬೈಪಾಡಿತ್ತಾಯರು ಮದ್ದಲೆ ನುಡಿಸಿದರೆ ಪುತ್ರ ಅವಿನಾಶ್ ಬೈಪಾಡಿತ್ತಾಯ ಚೆಂಡೆ ಸಹಕಾರ ನೀಡಿದರು. ವಾಲಿಮೋಕ್ಷ ಪ್ರಸಂಗದ ‘ಕರುಣವಿಷ್ಟೇ ಸಾಕು..’ ಹಾಡು…
ದೇಶದ ಹೆಮ್ಮೆಯ ಯುವ ಸಿತಾರ್ ವಾದಕ ಮಂಗಳೂರಿನ ಅಂಕುಶ್ ಎನ್. ನಾಯಕ್ ಇವರು ಹಿಂದೂಸ್ತಾನಿ ಶಾಸ್ತ್ರೀಯ ವಾದ್ಯ ವಿಭಾಗದಲ್ಲಿ ಪ್ರಸಾರ ಭಾರತಿಯಿಂದ ಎ-ಗ್ರೇಡ್ ಮಾನ್ಯತೆ ಪಡೆದಿದ್ದಾರೆ. ದೂರದರ್ಶನ ಹಾಗೂ ಆಕಾಶವಾಣಿಯಿಂದ ಎ-ಗ್ರೇಡ್ ಪಡೆಯುವುದು ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ಅತ್ಯುನ್ನತ ಮಟ್ಟದ ಕಲಾ ಶ್ರೇಷ್ಠತೆ ಹಾಗೂ ಮಾನ್ಯತೆಯಾಗಿದೆ. ಈ ಮೂಲಕ ಪ್ರಸಾರ ಭಾರತಿಯ ಸಹಯೋಗದೊಂದಿಗೆ ನಡೆಯುವ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಗೀತ ವೇದಿಕೆಗಳಿಗೆ ನುಡಿಸುವ ಅರ್ಹತೆಯನ್ನು ಅಂಕುಶ್ ಎನ್. ನಾಯಕ್ ಪಡೆದಿದ್ದಾರೆ. ಈ ಪ್ರಮಾಣೀಕರಣವನ್ನು ಶೇ. 10ಕ್ಕಿಂತ ಕಡಿಮೆ ಪ್ರದರ್ಶನ ಕಲಾವಿದರಿಗೆ ಸಾಮಾನ್ಯವಾಗಿ ನೀಡಲಾಗುತ್ತದೆ. ಇದು ಒಬ್ಬರ ಸಂಗೀತ ವೃತ್ತಿ ಜೀವನದಲ್ಲಿ ಮಹತ್ವದ ಮೈಲುಗಲ್ಲಾಗಿದೆ. ಸಂಗೀತದ ಪ್ರಕಾರಗಳಲ್ಲಿ ಸಾರ್ವಕಾಲಿಕ ಶ್ರೇಷ್ಠತೆಗಾಗಿ ನಿರಂತರವಾಗಿ ಅಧ್ಯಯನ ನಡೆಸಿ, ಆ ಮೂಲಕ ಸಂಗೀತಕ್ಕಾಗಿ ಜೀವನ ಸಮರ್ಪಣೆ ಮಾಡಿ, ಸಂಗೀತದ ಪಾಂಡಿತ್ಯ ಸಾಧನೆಗೆ ಈ ಗ್ರೇಡ್ ಸಾಕ್ಷಿಯಾಗಿರುತ್ತದೆ. ಪ್ರಸ್ತುತ ಅಂಕುಶ್ ಎನ್. ನಾಯಕ್ ಇವರು ಮಂಗಳೂರಿನ ಎಕ್ಸಪರ್ಟ್ ಸಮೂಹ ಶಿಕ್ಷಣ ಸಂಸ್ಥೆಯ ಮಾಹಿತಿ ತಂತ್ರಜ್ಞಾನ ವಿಭಾಗದ ನಿರ್ದೇಶಕರಾಗಿದ್ದಾರೆ. ಧಾರವಾಡ…
ಬೆಳಗಾವಿ : ಡಾ. ಡಿ.ಎಸ್. ಕರ್ಕಿ ಪ್ರತಿಷ್ಠಾನ ಟ್ರಸ್ಟ್ (ರಿ.) ಇದರ ವತಿಯಿಂದ ಡಾ. ಡಿ.ಎಸ್. ಕರ್ಕಿಯವರ 117ನೇ ಜನ್ಮ ದಿನೋತ್ಸವ ಹಾಗೂ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿನಾಂಕ 29 ಡಿಸೆಂಬರ್ 2024ರಂದು ಮುಂಜಾನೆ 11-00 ಗಂಟೆಗೆ ಬೆಳಗಾವಿ ಕಿತ್ತೂರ ಚನ್ನಮ್ಮ ವೃತ್ತದ ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಗದಗಿನ ತೋಂಟದಾರ್ಯ ಮಠದ ಪೂಜ್ಯರು ಡಾ. ಸಿದ್ದರಾಮ ಸ್ವಾಮೀಜಿಯವರು ಸಾನಿಧ್ಯ ನೀಡಲಿದ್ದಾರೆ. ನಿವೃತ್ತ ಪ್ರಾಂಶುಪಾಲರಾದ ಡಾ. ರಮೇಶ ಮು. ಕರ್ಕಿ ಇವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಬ್ಯಾಡಗಿ ಕುಮಾರಿ ಮಧು ಕಾರಗಿ, ಕೋಲಾರ ಪ.ಗು. ಸಿದ್ಧಾಪುರ ಮತ್ತು ಬೆಳಗಾವಿ ಶ್ರೀಮತಿ ಸುಧಾ ಇವರಿಗೆ ಕಾವ್ಯ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಇದೇ ಸಂದರ್ಭದಲ್ಲಿ ಬೆಳಗಾವಿಯ ಹಿರಿಯ ಸಾಹಿತಿ ಶ್ರೀಮತಿ ಆಶಾ ಯಮಕನಮರಡಿ, ಸಂಕೇಶ್ವರದ ಹಿರಿಯ ಸಾಹಿತಿ ಶ್ರೀಮತಿ ಹಮೀದಾ ಬೇಗಂ ಮತ್ತು ಬೆಳಗಾವಿಯ ಹಿರಿಯ ಸಾಹಿತಿ ಶ್ರೀಮತಿ ಜಯಶೀಲ ಬ್ಯಾಕೋಡ ಇವರನ್ನು ಸನ್ಮಾನಿಸಲಾಗುವುದು. ಡಾ ಡಿ.ಎಸ್. ಕರ್ಕಿ ಕಾವ್ಯ ಪ್ರಶಸ್ತಿಗೆ…
ಬಂಟ್ವಾಳ: ಅಜ್ಜಿಬೆಟ್ಟು ಗ್ರಾಮದ ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ಯಕ್ಷಗಾನ ಕಲಿಕಾಕೇಂದ್ರದ ವಿದ್ಯಾರ್ಥಿಗಳ ರಂಗಪ್ರವೇಶ, ಗುರುವಂದನಾ ಹಾಗೂ ‘ವಿಷ್ಣುಮೂರ್ತಿ ಯಕ್ಷಶ್ರೀ ಪ್ರಶಸ್ತಿ’ ಪ್ರದಾನ ಸಮಾರಂಭವು ದಿನಾಂಕ 29 ಡಿಸೆಂಬರ್ 2024ರಂದು ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ. ಕ್ಷೇತ್ರದ ತಂತ್ರಿ ವೇದಮೂರ್ತಿ ಬಾಲಕೃಷ್ಣ ಪಾಂಗಣ್ಣಾಯ ಮಧ್ಯಾಹ್ನ 2.30ಕ್ಕೆ ಈ ಕಾರ್ಯಕ್ರಮವನ್ನು ದೀಪಪ್ರಜ್ವಲನೆಗೈದು ಉದ್ಘಾಟಿಸಲಿದ್ದು, ಗುರು ಚಂದ್ರಶೇಖರ ಭಟ್ ಕೊಂಕಣಾಜೆ ಇವರ ಸುಮಾರು ಹತ್ತಕ್ಕೂ ಹೆಚ್ಚು ಮಂದಿ ಶಿಷ್ಯಂದಿರು ಈ ಸಮಾರಂಭದಲ್ಲಿ ರಂಗಪ್ರವೇಶ ಮಾಡಲಿದ್ದಾರೆ. ಸಂಜೆ 4ಕ್ಕೆ ಪಿಲಾತಬೆಟ್ಟು ಸಿ. ಎ. ಬ್ಯಾಂಕ್ ಇದರ ಅಧ್ಯಕ್ಷರಾದ ತುಂಗಪ್ಪ ಬಂಗೇರ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಹಿರಿಯ ಹಿಮ್ಮೇಳ ವಾದಕರಾದ ಹರಿನಾರಾಯಣ ಬೈಪಡಿತ್ತಾಯರಿಗೆ ‘ಶ್ರೀ ವಿಷ್ಣುಮೂರ್ತಿ ಯಕ್ಷಶ್ರೀ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಇದೇ ಸಂದರ್ಭದಲ್ಲಿ ಗುರು ಚಂದ್ರಶೇಖರ ಭಟ್ ಕೊಂಕಣಾಜೆ ಇವರಿಗೆ ಗುರುವಂದನೆ ನಡೆಯಲಿದೆ. ಸಮಾರಂಭದಲ್ಲಿ ಉದ್ಯಮಿಗಳಾದ ಶ್ರೀಪತಿ ಭಟ್ ಮೂಡುಬಿದಿರೆ, ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ, ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿ ಕಾವಳಕಟ್ಟೆ, ಪಾಂಗಲ್ಪಾಡಿ…
ಮಂಗಳೂರು : ಶ್ರೀ ಬೆಂಕಿನಾಥೇಶ್ವರ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿಯ ಸ್ಥಾಪಕಾಧ್ಯಕ್ಷರಾದ ಲಕ್ಷ್ಮೀ ನಾರಾಯಣ ಭಟ್ (ಸನ್ ಭಟ್ರು) ಇವರು 22 ಡಿಸೆಂಬರ್ 2024ರಂದು ನಿಧನ ಹೊಂದಿದರು. ಇವರಿಗೆ 74 ವರ್ಷ ವಯಸ್ಸಾಗಿತ್ತು. ಕಳವಾರು ಶ್ರೀ ಬೆಂಕಿನಾಥೇಶ್ವರ ಭಜನಾ ಮಂಡಳಿಯ ಹುಟ್ಟಿಗೆ ಕಾರಣಕರ್ತರಾಗಿದ್ದ ಇವರು ಪ್ರಸ್ತುತ ಮಂಡಳಿಯ ಗೌರವಾಧ್ಯಕ್ಷ ಹಾಗೂ ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಭಜನೆ, ನಾಟಕ, ಯಕ್ಷಗಾನದ ಹವ್ಯಾಸಿ ಕಲಾವಿದರಾಗಿದ್ದ ಶ್ರೀಯುತರು ಪುರೋಹಿತರಾಗಿ ಜನಾನುರಾಗಿಯಾಗಿದ್ದರು. ಜೋಕಟ್ಟೆ ಶ್ರೀ ವಿಜಯ ವಿಠಲ ಭಜನ ಮಂದಿರ, ಬಜಪೆ ವಿಜಯ ವಿಠಲ ಭಜನ ಮಂದಿರ ಮತ್ತು ಶಾಂತಿನಗರ ಶ್ರೀ ಜಗದಾಂಬಿಕ ಭಜನ ಮಂದಿರದಲ್ಲಿಯೂ ಅರ್ಚಕರಾಗಿ ಸೇವೆ ಸಲ್ಲಿಸಿದ್ದಾರೆ. ಮೃತರು ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಬೆಂಗಳೂರು : ರಂಗಮಂಡಲ ಬೆಂಗಳೂರು ಮತ್ತು ಜಾಗೃತಿ ಟ್ರಸ್ಟ್ (ರಿ.) ಶಾಂತಿನಗರ ಆಯೋಜಿಸಿರುವ ‘ಕಾವ್ಯ ಸಂಸ್ಕೃತಿ ಯಾನ’ ಕಾರ್ಯಕ್ರಮದ ಆರನೇ ಕವಿಗೋಷ್ಠಿ ಮನುಕುಲದ ನೋವಿಗೆ ಮದ್ದಾಗಲಿ ಕವಿತೆಗಳು ಜನಸಾಮಾನ್ಯರ ದನಿಯಾಗಲಿ ಕಾವ್ಯ ಹೀಗೆ ಜನರೆಡೆಗೆ ಕಾವ್ಯ ಕೊಂಡುಹೋಗುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ರಾಜಧಾನಿ ಬೆಂಗಳೂರಿನಿಂದ ಶರಣರ ನಾಡು ಬೀದರ ಕಡೆಗೆ ‘ಕಾವ್ಯ ದೀವಟಿಗೆಯ ಪಯಣ’ವು ದಿನಾಂಕ 28 ಡಿಸೆಂಬರ್ 2024ರಂದು ಮಧ್ಯಾಹ್ನ 3-00 ಗಂಟೆಗೆ ಬೆಂಗಳೂರಿನ ಶಾಂತಿನಗರ, ಟಿ.ವಿ. 9 ಚಾನಲ್ ಬಳಿ, ವುಡ್ ಬ್ಯಾಂಕ್ ಎದುರು ಇರುವ ಪುನೀತ್ ರಾಜಕುಮಾರ ಭವನದಲ್ಲಿ ನಡೆಯಲಿದೆ. ಬೆಂಗಳೂರು ಗೋಷ್ಠಿಯ ಅಧ್ಯಕ್ಷತೆಯನ್ನು ಕವಿ ಹಾಗೂ ಬರಹಗಾರ್ತಿ ಡಾ. ವಾಣಿ ಸಂದೀಪ್ ಇವರು ವಹಿಸಲಿದ್ದು, ಉದ್ಘಾಟಕರಾಗಿ ಕವಿ ಹಾಗೂ ಅಂಕಣಗಾರ್ತಿ ಎನ್. ಸಂಧ್ಯಾ ರಾಣಿ ಇವರು ಭಾಗವಹಿಸಲಿದ್ದಾರೆ. ನಾಡಿನ ಖ್ಯಾತ ಕವಿಗಳಿಂದ ‘ಕವಿತಾ ವಾಚನ’ ಮತ್ತು ‘ಪದ ಪಾದ’ ಕಾರ್ಯಕ್ರಮ ನಡೆಯಲಿದೆ.
ನಾನು ಪ್ರೀತಿಯಿಂದ ‘ವಾಸುವೇಟ್ಟಾ’ ಎಂದು ಕರೆಯುತ್ತಿದ್ದ ಪ್ರಿಯ ಲೇಖಕ, ಮಲೆಯಾಳ ಸಾಹಿತ್ಯ ದಿಗ್ಗಜ, ಬಹುಮುಖ ಪ್ರತಿಭೆ ಎಂ.ಟಿ. ವಾಸುದೇವನ್ ನಾಯರ್, ತಮ್ಮ 92ನೆಯ ವಯಸ್ಸಿನಲ್ಲಿ ಇಹಲೋಕದ ಯಾತ್ರೆಯನ್ನು ಮುಗಿಸಿದ್ದಾರೆ. ಕಣ್ಣುಗಳು ತುಂಬುತ್ತಿವೆ. ಮನಸ್ಸು ಭಾರವಾಗಿದೆ. ವಯಸ್ಸು ಆಗಿದ್ದರೂ ನಮಗೆ ಹತ್ತಿರವಾದವರು ಎಷ್ಟು ಕಾಲ ನಮ್ಮ ಜತೆಗಿದ್ದರೂ ಅದು ಕಡಿಮೆಯೇ ಅನ್ನಿಸುವುದು ಸಹಜ. ಅವರು ಬಿಟ್ಟು ಹೋದ ಮಹಾ ಶೂನ್ಯವನ್ನು ಯಾರು ತಾನೇ ತುಂಬಬಲ್ಲರು? ಅವರ ಕಾದಂಬರಿಗಳನ್ನು ಕಾಸರಗೋಡು ಕಾಲೇಜಿನಲ್ಲಿ ಕಲಿಯುತ್ತಿರುವಾಗಲೇ ಓದಿ ಇಷ್ಟಪಟ್ಟಿದ್ದೆನಾದರೂ ಅವರನ್ನು ನೇರವಾಗಿ ಭೇಟಿಯಾದದ್ದು 1999 ಆಗಸ್ಟ್ 12ರಂದು ತ್ರಿಶ್ಶೂರಿನ ಕೇರಳ ಸಾಹಿತ್ಯ ಅಕಾಡೆಮಿ ಹಾಲ್ ನಲ್ಲಿ ನನ್ನ ಮೊದಲ ಅನುವಾದ ವೆಟ್ಟೂರು ರಾಮನ್ ನಾಯರರ ‘ಬದುಕಲು ಮರೆತ ಸ್ತ್ರೀ’ ಎಂಬ ಕಾದಂಬರಿಯನ್ನು ಅವರು ತಮ್ಮ ಅಮೃತ ಹಸ್ತದಿಂದ ಬಿಡುಗಡೆ ಮಾಡಿದಾಗ. ಅಲ್ಲಿ ಎಲ್ಲರೂ ಎಂ.ಟಿ. ಬಗ್ಗೆ ಮಾತನಾಡುತ್ತಿದ್ದುದನ್ನು ನೋಡಿದಾಗ ಅಲ್ಲಿನ ಜನರಿಗೆ ಅವರೆಂದರೆ ಎಷ್ಟೊಂದು ಭಯ-ಭಕ್ತಿ-ಪ್ರೀತಿ-ಗೌರವ ಅನ್ನುವುದು ನನಗೆ ಅರ್ಥವಾಯಿತು. ಜನರ ದೃಷ್ಟಿಯಲ್ಲಿ ಅವರೊಂದು ಲಿವಿಂಗ್ ಲೆಜೆಂಡ್…
ಮೈಸೂರು : ಸುವ್ವಿ ಅರ್ಪಿಸುವ ಕೈಲಾಸಂ ಬದುಕು ಬರಹಗಳ ಸಮೀಕ್ಷೆಯ ‘ಕೈಲಾ ಸಂಸಾರ’ ಹಾಸ್ಯ ನಾಟಕವು ದಿನಾಂಕ 29 ಡಿಸೆಂಬರ್ 2024ರಂದು ಸಂಜೆ 6-30 ಗಂಟೆಗೆ ಮೈಸೂರಿನ ರಾಮಕೃಷ್ಣ ನಗರದ ನಟನ ರಂಗ ಶಾಲೆಯಲ್ಲಿ ಪ್ರದರ್ಶನಗೊಳ್ಳಲಿದೆ. ಆಧುನಿಕ ಕನ್ನಡ ರಂಗಭೂಮಿಯ ಆಧ್ಯರಲ್ಲಿ ಕೈಲಾಸಂ ಹೆಸರು ಚಿರಸ್ಥಾಯಿ. ಅವರ ಬದುಕು ಬರಹಗಳ ಸಾರವನ್ನು ನಗುತ್ತಲೇ ಗ್ರಹಿಸುವ ಒಂದು ವಿಶಿಷ್ಟ ಪ್ರಯತ್ನ ಈ ನವೀನ ಪ್ರಯೋಗ. ರಂಗಭೂಮಿ ಕಿರುತೆರೆ ಹಿರಿತೆರೆಗಳ ಸುಂದರ್ ವೀಣಾ – ವೀಣಾ ಸುಂದರ್ ಜೊತೆಯಾಗಿ ನಿಮ್ಮನ್ನು ರಂಜಿಸಲಿದ್ದಾರೆ. ನಿರ್ಮಾಪಕಿ, ನಟಿ, ನಿರ್ದೇಶಕಿ ಶ್ರುತಿ ನಾಯ್ಡು ಈ ಪ್ರಯೋಗ ಆಯೋಜಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ – 9845223834, 7259537777 ಮತ್ತು 9480468327.