Author: roovari

ಮೈಸೂರು : ಕರ್ನಾಟಕದ ಪ್ರಸಿದ್ಧ ಧಾರವಾಡ ಘರಾನೆಯ ಏಳನೇ ತಲೆಮಾರಿನ ಕಲಾವಿದರಾದ ಡಾ. ಮೊಹಸಿನ್‌ ಖಾನ್ ರವರಿಗೆ ಈ ಬಾರಿ ದಸರಾ ಮುಖ್ಯ ವೇದಿಕೆಯಲ್ಲಿ ಕಾರ್ಯಕ್ರಮ ನೀಡುವ ಗೌರವ ಸಂದಿದೆ. ಅವರಿಗೆ ಸಿಕ್ಕ ಈ ಅವಕಾಶಕ್ಕೂ, ಮೈಸೂರು ಆಸ್ಥಾನಕ್ಕೂ ಮತ್ತು ಕರ್ನಾಟಕಕ್ಕೆ ಸಿತಾರ್‌ ವಾದ್ಯದ ಪರಿಚಯಕ್ಕೂ ವಿಶೇಷವಾದ ಸಂಬಂಧವಿದೆ ಮೈಸೂರು ಆಸ್ಥಾನ 1911ರ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಮೈಸೂರನ್ನು ಆಳುತ್ತಿದ್ದ ಕಾಲ. ಸ್ವತಃ ವೀಣಾವಾದಕರಾಗಿದ್ದ ಅವರು ಕಲಾ ಪೋಷಕರೂ ಆಗಿದ್ದರು. ತಮ್ಮ ಆಸ್ಥಾನದಲ್ಲಿ ಅನೇಕ ಸಂಗೀತ ವಿದ್ವಾಂಸರಿಗೂ ಆಶ್ರಯ ನೀಡಿದ್ದರು. ಅದರಲ್ಲಿ ವೀಣೆ ಶೇಷಣ್ಣನವರೂ ಒಬ್ಬರು. ದೇಶದ ಶ್ರೇಷ್ಥ ಸಂಗೀತಗಾರರನ್ನು ತಮ್ಮ ಆಸ್ಥಾನಕ್ಕೆ ಕರೆಸಿ ದರ್ಬಾರಿನಲ್ಲಿ ಸಂಗೀತ ಕಛೇರಿಯನ್ನು ನಡೆಸುತ್ತಿದ್ದರು. ಹೀಗಿರುವಾಗ, ಉಸ್ತಾದ್‌ ರಹಿಮತ್‌ ಖಾನರ ಕೀರ್ತಿ ಪೂನಾದ ಸಾಂಗ್ಲಿ, ಕೊಲ್ಹಾಪುರ, ಇಚರಕರಂಜಿ ದಾಟಿ ಮೈಸೂರಿನವರೆಗೂ ಹಬ್ಬಿತು. ಇವರ ಸಿತಾರ್ ವಾದನದ ಬಗ್ಗೆ ಕೇಳಿದ ನಾಲ್ವಡಿ ಕೃಷ್ಣರಾಜ ಒಡೆಯರು, ದರ್ಬಾರಿನಲ್ಲಿ ಕಛೇರಿ ನಡೆಸಲು ಅವರಿಗೆ ಆಮಂತ್ರಣವನ್ನು ನೀಡಿದರು. ಕಛೇರಿ ಮುಗಿದಾಗ…

Read More

ಬೆಂಗಳೂರು : ಹವ್ಯಾಸಿ ಯಕ್ಷಗಾನ ರಂಗಭೂಮಿಯಲ್ಲಿ ತನ್ನದೇ ಆದ ಸಾಧನೆಯನ್ನು ಮಾಡಿರುವ ಯಕ್ಷಸಿಂಚನ ಟ್ರಸ್ಟ್ (ರಿ), ಬೆಂಗಳೂರು ಇವರು 16ನೇ ವರುಷದ ವಾರ್ಷಿಕೋತ್ಸವದ ಅಂಗವಾಗಿ ದಿನಾಂಕ 21 ಸೆಪ್ಟೆಂಬರ್ 2024ನೇ ಭಾನುವಾರ ಮಧ್ಯಾಹ್ನ 3-00 ಗಂಟೆಗೆ ‘ಬಡಗುತಿಟ್ಟು ಪೌರಾಣಿಕ ಯಕ್ಷೋತ್ಸವ’ವನ್ನು ಬೆಂಗಳೂರಿನ ಬಸವನಗುಡಿ ವರ್ಲ್ಡ್ ಕಲ್ಚರ್ ಬಿ.ಪಿ. ವಾಡಿಯಾ ಹಾಲ್ ನಲ್ಲಿ ಆಯೋಜಿಸಿದ್ದಾರೆ. ಇದೇ ಸಂದರ್ಭದಲ್ಲಿ ಖ್ಯಾತ ಹಿರಿಯ ಯಕ್ಷಗುರು ಹಾಗೂ ಮದ್ದಲೆ ವಾದಕರಾದ ಮಂಜುನಾಥ ಪ್ರಭು ಇವರಿಗೆ 2025ನೇ ಸಾಲಿನ ‘ಸಾರ್ಥಕ ಸಾಧಕ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಮಧ್ಯಾಹ್ನ 3-00 ಗಂಟೆಗೆ ಬೆಂಗಳೂರಿನ ಯಕ್ಷಕಲಾ ಅಕಾಡೆಮಿಯ ಬಾಲ ಕಲಾವಿದರಿಂದ ಪಾರ್ತಿಸುಬ್ಬ ರಚಿತ ‘ರಾಮ –ಪರಶುರಾಮ’ ಮತ್ತು 5-00 ಗಂಟೆಗೆ ಯಕ್ಷಸಿಂಚನ ತಂಡದ ಕಲಾವಿದರಿಂದ ದಿನಕರ ಪಚ್ಚನಾಡಿ ರಚಿತ ‘ತರಣಿಸೇನ ಕಾಳಗ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.

Read More

ಮೈಸೂರು : ಮೈಸೂರು ದಸರಾ ಪ್ರಯುಕ್ತ ದಿನಾಂಕ 22 ಸೆಪ್ಟೆಂಬರ್ 2025ರಿಂದ ಕನ್ನಡ ಪುಸ್ತಕಗಳ ಪ್ರದರ್ಶನ, ರಿಯಾಯಿತಿ ಮಾರಾಟ ಮೇಳ ಪ್ರಾರಂಭವಾಗಲಿದೆ. ಮೈಸೂರಿನ ಹಳೆಯ ಜಿಲ್ಲಾಧಿಕಾರಿ ಕಚೇರಿ ಸಮೀಪದ ಸ್ಕೌಟ್ಸ್‌ ಮತ್ತು ಗೈಡ್ಸ್‌ ಮೈದಾನದಲ್ಲಿ ದಿನಾಂಕ 22 ಸೆಪ್ಟೆಂಬರ್ 2025ರಿಂದ 01 ಅಕ್ಟೋಬರ್ 2025ರವರೆಗೆ ಬೆಳಿಗ್ಗೆ 10-00ರಿಂದ ರಾತ್ರಿ 8-30 ಗಂಟೆವರೆಗೆ ಕನ್ನಡ ಪುಸ್ತಕಗಳ ಪ್ರದರ್ಶನ ಹಾಗೂ ರಿಯಾಯಿತಿ ಮಾರಾಟ ಮೇಳವನ್ನು ಆಯೋಜಿಸಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಅವರು ದಿನಾಂಕ 22 ಸೆಪ್ಟೆಂಬರ್ 2025ರಂದು ಬೆಳಿಗ್ಗೆ 10-30 ಗಂಟೆಗೆ ಚಾಮುಂಡಿಬೆಟ್ಟದಲ್ಲಿ ನಡೆಯುವ ನಾಡ ಹಬ್ಬ ದಸರಾ ಉದ್ಘಾಟನೆ ಕಾರ್ಯಕ್ರಮದಲ್ಲಿ, ಪ್ರಾಧಿಕಾರದಿಂದ ಪ್ರಕಟಿಸಿರುವ ಹಾಗೂ ಶಿವಾನಂದ ವಿರಚಿತ ಬಾನು ಮುಷ್ತಾಕ್ ಅವರ ಬದುಕು-ಬರಹ ಕುರಿತ ‘ಬುಕರ್‌ ಬಾನು’ ಪುಸ್ತಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಲಿದ್ದು, ಸಂಜೆ 5-00 ಗಂಟೆಗೆ ಮೇಳವನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್‌ ಎಸ್. ತಂಗಡಗಿ ಉದ್ಘಾಟಿಸುವರು. ಮೇಳದ ಮೊದಲು ‘ಪುಸ್ತಕ ರಥ’ವು…

Read More

ನಂದಳಿಕೆ : ವಿಶಾಲ ಯಕ್ಷ ಕಲಾ ಬಳಗ ನಂದಳಿಕೆ ಕಾರ್ಕಳ ತಾಲೂಕು ಇದರ ವತಿಯಿಂದ ಹಮ್ಮಿಕೊಂಡ ‘ತಾಳಮದ್ದಳೆ ಜ್ಞಾನಯಜ್ಞ’ ಶತಕೋತ್ತರ ಕಾರ್ಯಕ್ರಮವನ್ನು ದಿನಾಂಕ 21, 23, 26 ಸೆಪ್ಟೆಂಬರ್ ಮತ್ತು 02 ಅಕ್ಟೋಬರ್ 2025ರಂದು ಆಯೋಜಿಸಲಾಗಿದೆ. ದಿನಾಂಕ 21 ಸೆಪ್ಟೆಂಬರ್ 2025ರಂದು ಬೆಳಿಗ್ಗೆ 9-30 ಗಂಟೆಗೆ ಮೂಡುಬಿದಿರೆ ಪ್ರೀತಮ್ ಗಾರ್ಡನ್ ಇಲ್ಲಿ ‘ಶ್ರೀ ಕೃಷ್ಣ ಸಂಧಾನ’, ದಿನಾಂಕ 23 ಸೆಪ್ಟೆಂಬರ್ 2025ರಂದು ಸಂಜೆ 6-00 ಗಂಟೆಗೆ ನಿಟ್ಟೆ ಕೆಮ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ‘ಸುಧಾಮ ಚರಿತ್ರೆ’, ದಿನಾಂಕ 26 ಸೆಪ್ಟೆಂಬರ್ 2025ರಂದು ಮಧ್ಯಾಹ್ನ 2-30 ಗಂಟೆಗೆ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ‘ರಾವಣಾಂತರಂಗ’ ಮತ್ತು ದಿನಾಂಕ 02 ಅಕ್ಟೋಬರ್ 2025ರಂದು ಬೆಳಿಗ್ಗೆ 10-00 ಗಂಟೆಗೆ ವಾಮದಪದವು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ‘ಕರ್ಣ ಪರ್ವ’ ಪ್ರಸಂಗದ ತಾಳಮದ್ದಳೆ ನಡೆಯಲಿದೆ.

Read More

‘ಮುಂಬೈ ಯಕ್ಷಗಾನ ರಂಗಭೂಮಿ’ ಇದು ಡಾ. ವೈ.ವಿ. ಮಧುಸೂದನ್ ರಾವ್ ಅವರ ಸಂಶೋಧನ ಮಹಾಪ್ರಬಂಧ. ಮುಂಬೈ ಒಂದು ದೈತ್ಯ ನಗರ. ಇದು ನಮ್ಮ ದೇಶದ ಬಹು ದೊಡ್ಡ ಸಾಂಸ್ಕೃತಿಕ ಕೇಂದ್ರವೂ ಅಹುದು. ಈ ಮಾಯಾ ನಗರಿಯಲ್ಲಿ ಕರ್ನಾಟಕ ಮೂಲದ ಯಕ್ಷಗಾನ ಕಲೆ ಇಟ್ಟ ಹೆಜ್ಜೆ ಹಾಗೂ ಅದು ತೊಟ್ಟ ರೂಪದ ಸಮಗ್ರ ಚಿತ್ರಣ ಈ ಕೃತಿಯಲ್ಲಿ ಅಚ್ಚುಕಟ್ಟಾಗಿ ದಾಖಲಾಗಿದೆ. ಕರ್ನಾಟಕದ ರಾಜಧಾನಿ ಬೆಂಗಳೂರನ್ನು ಬಿಟ್ಟರೆ ಅತಿ ಹೆಚ್ಚು ಕನ್ನಡಿಗರಿರುವ ಪ್ರದೇಶವೆಂದರೆ ಅದು ಮುಂಬಯಿ. ಇಂದಿಗೂ ಮುಂಬಯಿ ಸುತ್ತ ಮುತ್ತ ಸುಮಾರು ಇಪ್ಪತ್ತೈದು ಲಕ್ಷ ತುಳು-ಕನ್ನಡಿಗರು ನೆಲೆಸಿ ತಮ್ಮ ಅಸ್ಮಿತೆಯನ್ನು ಉಳಿಸಿಕೊಂಡು ಬಂದಿರುವುದು ಉಲ್ಲೇಖನೀಯ ಅಂಶ. ಮುಂಬಯಿಯಲ್ಲಿ ಇರುವಷ್ಟು ಸಂಘ ಸಂಸ್ಥೆಗಳು ಜಗತ್ತಿನ ಬೇರೆ ಎಲ್ಲಿಯೂ ಇಲ್ಲ ಎನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಯಕ್ಷಗಾನ ಕಲೆಯ ಬಲವರ್ಧನೆಗೆ ಹೊರನಾಡಾದ ಮುಂಬಯಿ ಬಹು ಮಹತ್ವದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಇಲ್ಲಿನ ಯಕ್ಷಗಾನ ರಂಗಭೂಮಿಗೆ ಹತ್ತಿರ ಹತ್ತಿರ ಒಂದು ಶತಮಾನದ ಇತಿಹಾಸವಿದೆ. 1880ರ ಹೊತ್ತಿಗೆ ಕರ್ಕಿ…

Read More

ಬೆಂಗಳೂರು: ಪ್ರಸಿದ್ಧ ಸಂಶೋಧಕ, ಸಾಹಿತಿ ಹಾಗೂ ನಿವೃತ್ತ ಉಪನ್ಯಾಸಕ ಡಾ. ಕೆ. ಜಿ. ವಸಂತ ಮಾಧವ (ಗುಜ್ಜಾಡಿ ವಸಂತ ಮಾಧವ ಕೊಡಂಚ) ಇವರು ದಿನಾಂಕ 17 ಸೆಪ್ಟೆಂಬರ್ 2025 ರ ರಾತ್ರಿ ಬೆಂಗಳೂರಿನ ಮಗಳ ಮನೆಯಲ್ಲಿ ನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು. ಅವರು ಪತ್ನಿ, ಒಬ್ಬ ಪುತ್ರ ಮತ್ತು ಒಬ್ಬ ಪುತ್ರಿಯನ್ನು ಅಗಲಿದ್ದಾರೆ. 1937ರ ಏಪ್ರಿಲ್ 9ರಂದು ಜನಿಸಿದ ವಸಂತ ಮಾಧವ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಕೆನರಾದ ರಾಜಕೀಯ ಇತಿಹಾಸ : 1565-1763 ಎಂಬ ವಿಷಯದ ಮೇಲೆ ಮಹಾಪ್ರಬಂಧ ರಚಿಸಿ ಪಿಎಚ್.ಡಿ. ಪದವಿಗೂ ಪಾತ್ರರಾದರು. ಮುಲ್ಕಿಯ ವಿಜಯಾ ಕಾಲೇಜಿನಲ್ಲಿ 32 ವರ್ಷಗಳ ಕಾಲ ಇತಿಹಾಸ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಅವರು ನಿವೃತ್ತಿಯ ನಂತರ ಕೇರಳದ ಕ್ಯಾಲಿಕಟ್ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಪ್ರೊಫೆಸರ್‌ ಆಗಿ ಸೇವೆ ಸಲ್ಲಿಸಿದ್ದರು.

Read More

ಉಳ್ಳಾಲ : ಕರ್ನಾಟಕ ರಾಜ್ಯ ಭಾವೈಕ್ಯತಾ ಪರಿಷತ್ತಿನ ವತಿಯಿಂದ ರಾಜ್ಯ ಮಟ್ಟದ ಚುಟುಕು ಕವಿಗೋಷ್ಠಿಯು ಮತ್ತು ಭಾವೈಕ್ಯತಾ ಸಾಹಿತ್ಯ ರತ್ನ ಮತ್ತು ಸಮಾಜ ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 14 ಸೆಪ್ಟೆಂಬರ್ 2025ರಂದು ದೇರಳಕಟ್ಟೆಯ ಅಲ್ ಸಲಾಮ ಸಭಾಂಗಣದಲ್ಲಿ ನಡೆಯಿತು. ಹಿರಿಯ ಕವಿಗಳಾದ ಪತ್ರಕರ್ತ ಜಯಾನಂದ ಪೆರಾಜೆ, ಶಿಕ್ಷಕಿ ಡಾ. ಶಾಂತ ಪುತ್ತೂರು, ವೈದ್ಯ ಡಾ. ಸುರೇಶ ನೆಗಳಗುಳಿ, ಹಾ.ಮ. ಸತೀಶ, ವಿರಾಜ್ ಅಡೂರು, ಮಲ್ಲಿಕಾ ಜೆ. ರೈ, ಪ್ಲಾವಿಯ ಅಲ್ಬುಕರ್ಕ್, ಬಶೀರ್ ಅಹ್ಮದ್ ಬಂಟ್ವಾಳ, ಸಹನಾ ಕಾಂತಬೈಲು, ರತ್ನಾ ಕೆ. ತಲಂಜೇರಿ ಇವರಿಗೆ ‘ಭಾವೈಕ್ಯತಾ ಸಾಹಿತ್ಯ ರತ್ನ ಪ್ರಶಸ್ತಿ’ ಮತ್ತು ಸಮಾಜ ಸೇವಕರಾದ ಡಾ. ರವಿ ಕಕ್ಯಪದವು, ಡಾ. ಹರ್ಷ ಕುಮಾರ್ ರೈ, ಕೆ.ಟಿ ರಾಜೇಂದ್ರ ಹೊಳ್ಳ ಕಲ್ಲಡ್ಕ, ಅಬ್ದುಲ್ ರಹಿಮಾನ್ ಸಂಕೇಶ್ ಇವರಿಗೆ ‘ಸಮಾಜ ಸೇವಾ ರತ್ನ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಯಿತು. ಡಾ. ಯು.ಟಿ. ಇಫ್ತಿಖಾರ್ ಅಲಿಯವರಿಗೆ ‘ಶಿಕ್ಷಣ ರತ್ನ ಪ್ರಶಸ್ತಿ’, ಭಾವೈಕ್ಯತಾ ಪರಿಷತ್ತಿನ ಪ್ರಧಾನ…

Read More

ಆಧುನಿಕತೆಯ ವೇಗದಡಿ ಬದಲುಗೊಳ್ಳುವ ನಾಗರೀಕತೆ, ವೈಜ್ಞಾನಿಕ ಚಿಂತನೆಯತ್ತ ಚಿತ್ತವರಿಸುತ್ತಿದಿಯೇ..? ಅಥವಾ ನಂಬಿಕೆಗಳ ಆಚರಣೆಗಳಲ್ಲಿ ಒಂದಿಷ್ಟು ಮೌಡ್ಯತೆ-ಕಂದಾಚಾರಗಳನ್ನು ತೊಳೆದು ಸುಧಾರಿಸುತ್ತಿದಿಯೇ..? ಅಥವಾ ಬದಲಾಗದ ಕಟ್ಟುಪಾಡುಗಳಲ್ಲಿ ಮೌಡ್ಯಗಳನ್ನು ಅನುಸರಿಸುವ ಬದುಕುಗಳು ಹಾಗೆಯೇ ಉಳಿದುಕೊಂಡಿದಿಯೇ..? ಎಂಬುದರ ಸಂಗತಿಗಳತ್ತ ಅಧ್ಯಯಿಸಿದಾಗ, ವಿಮರ್ಶಿಸಿದಾಗ ಈ ಮೇಲಿನ ಮೂರು ಸಂಗತಿಗಳು ಈ ಒಟ್ಟು ಸಮಾಜದಲ್ಲಿ ಇದ್ದೇ ಇದೆ, ಆದರೆ ಸಾಂವಿಧಾನಿಕ ಪ್ರಶ್ನೆಗಳು ಎಲ್ಲೆಲ್ಲಿ ದನಿಯಾಗಿದಿಯೋ.. ಅಲ್ಲಲ್ಲಿ ಇಂತಹ ಆಚರಣೆಗಳಲ್ಲಿನ ಮೌಡ್ಯ ಮತ್ತು ಕಂದಾಚಾರಗಳು ದೂರ ಸರಿದು ನಾಗರೀಕತೆಯ ಸಾಂಗತ್ಯ ಬಯಸಿದೆ ಎನ್ನುವುದು ಅಷ್ಟೆ ಸತ್ಯವಾಗಿದೆ. ಹೀಗಾಗಿ ಯಾವುದೇ ಆಚರಣೆಗಳಿಗೆ ವಿರೋಧವಿಲ್ಲ ಅದರೊಳಗಿನ ಮೌಡ್ಯತೆಗಳಿಗೆ ವಿರೋಧವಿದೆ ಎನ್ನುವ ಬಹುತೇಕ ಸಮಾಜಮುಖಿ ದನಿಗಳು ಪ್ರತಿಧ್ವನಿಸುತ್ತಲೇ ಇರುವ ಅಗತ್ಯತೆ ಇದೆ. ಅಷ್ಟಕ್ಕೂ ಮೌಡ್ಯತೆ ಎನ್ನುವುದು ಹಿಂದೂ ಧಾರ್ಮಿಕತೆಯಲ್ಲಿ ಮಾತ್ರ ಇದೆ, ಅನ್ಯ ಧರ್ಮಗಳಲ್ಲಿ ಇಲ್ಲ ಎನ್ನುವುದು ತರ್ಕವಲ್ಲ, ಒಂದೆಡೆ ಮಾತ್ರ ಬೊಟ್ಟು ಮಾಡಿ ತೋರಿಸುವುದು ಕೂಡ ಸಮಂಜಸವಾದುದ್ದಲ್ಲ?, ಹೀಗೆ ಒಂದೆಡೆ ಮಾತ್ರ ತೋರು ಬೆರಳು ಬಿತ್ತುವುದಕ್ಕೆ ಶುರುವಾದರೆ ಅಲ್ಲಿನ ಕೃಷಿಯಲ್ಲಿ ಏಕತಾಭಿಪ್ರಾಯ ಬೆಳೆವುದು ಅಸಾಧ್ಯ.…

Read More

ಮಡಿಕೇರಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಕ್ಕಳು ಮತ್ತು ಯುವಜನರ ಕಲಾಪ್ರತಿಭೆ ಗುರುತಿಸಿ ಅವರಿಗೆ ಉತ್ತೇಜನ ನೀಡುವ ಮತ್ತು ಅವರು ತಮ್ಮ ಕಲಾ ನೈಪುಣ್ಯ ವೃದ್ಧಿಗೊಳಿಸುವಂತೆ ಪ್ರೋತ್ಸಾಹಿಸಲು ‘ಕಲಾ ಪ್ರತಿಭೋತ್ಸವ’ ರೂಪಿಸಿದೆ. ಈ ಉತ್ಸವವನ್ನು ದಿನಾಂಕ 09 ಮತ್ತು 10 ಅಕ್ಟೋಬರ್ 2025ರಂದು ಮಡಿಕೇರಿಯ ಗಾಂಧಿ ಭವನದಲ್ಲಿ ನಡೆಸಲಾಗುವುದು. ಬಾಲಪ್ರತಿಭೆ/ಕಿಶೋರ ಪ್ರತಿಭೆ/ಯುವಪ್ರತಿಭೆ ಎಂಬ ಶೀರ್ಷಿಕೆಯಡಿ ಮೂರು ವಿಭಾಗಗಳಲ್ಲಿ ಸ್ಪರ್ಧಾ ರೂಪದಲ್ಲಿ ಏರ್ಪಡಿಸಲಾಗುವುದು. ಈ ಸ್ಪರ್ಧೆಗಳನ್ನು ದಿನಾಂಕ 09 ಅಕ್ಟೋಬರ್ 2025ರಂದು ಬಾಲಪ್ರತಿಭೆ/ ಕಿಶೋರ ಪ್ರತಿಭೆ ಹಾಗೂ ದಿನಾಂಕ 10 ಅಕ್ಟೋಬರ್ 2025ರಂದು ಯುವ ಪ್ರತಿಭೆ/ ಸಮೂಹ ಸ್ಪರ್ಧೆಗಳಿಗೆ ಸ್ಪರ್ಧಾರೂಪದಲ್ಲಿ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು. ಜಿಲ್ಲಾ ಮಟ್ಟದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಪಡೆದವರಲ್ಲಿ ಪ್ರಥಮ ಸ್ಥಾನ ಪಡೆದವರನ್ನು ವಲಯ ಮಟ್ಟದ ಸ್ಪರ್ಧೆ ಆಯ್ಕೆ ಮಾಡಿ ಕಳುಹಿಸಿಕೊಡಲಾಗುವುದು. ಅರ್ಹತೆ : ಬಾಲ ಪ್ರತಿಭೆ : ಬಾಲ ಪ್ರತಿಭೆಯ ವಿಭಾಗದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಕನಿಷ್ಠ 8 ವರ್ಷ ತುಂಬಿರಬೇಕು ಹಾಗೂ 14…

Read More

ಕಾಸರಗೋಡು : ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ‘ಶ್ರೀ ದುರ್ಗಾಂಬ ವೇದಿಕೆ’ಯಲ್ಲಿ 22 ಸೆಪ್ಟೆಂಬರ್ 2025 ರಿಂದ 01 ಅಕ್ಟೋಬರ್ 2025ರ ತನಕ ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ-2025 ಜರುಗಲಿದೆ. ಕನ್ನಡ ಭವನದ ಸಂಸ್ಥಾಪಕ ಶ್ರೀ ವಾಮನ್ ರಾವ್ ಬೇಕಲ್ ಸಾರಥ್ಯದಲ್ಲಿ ಕಳೆದ 12 ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ದಸರಾ ಸಂಭ್ರಮದ ಈ ಬಾರಿಯ ಉದ್ಘಾಟನೆ ದಿನಾಂಕ 22 ಸೆಪ್ಟೆಂಬರ್ 2025ರಂದು ಬೆಳಿಗ್ಗೆ 11-00 ಗಂಟೆಗೆ ಪಾಂಗೋಡು ಕ್ಷೇತ್ರ ಸಭಾಂಗಣದಲ್ಲಿ ಧಾರ್ಮಿಕ, ಸಾಮಾಜಿಕ ಮುಂದಾಳು ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ಉದ್ಘಾಟಿಸಲಿರುವರು. ಕ್ಷೇತ್ರ ಪಾತ್ರಿಗಳಾದ ಪಾಂಗೋಡು ಶ್ರೀ ಪ್ರವೀಣ್ ನಾಯಕ ದೀಪ ಪ್ರಜ್ವಲನೆಗೈಯುವರು. ಧಾರ್ಮಿಕ ಮುಂದಾಳು ಡಾ. ಅನಂತ ಕಾಮತ್, ಪಾಂಗೋಡು ಕ್ಷೇತ್ರ ಸಮಿತಿ ಅಧ್ಯಕ್ಷ ಶ್ರೀ ನಾಗೇಶ್ ಪಿ. ನಾಯಕ, ದ.ಕ. ಜಿಲ್ಲಾ ಮಹಿಳಾ ಮೋರ್ಚ ಅಧ್ಯಕ್ಷೆ ಡಾ. ಮಂಜುಳಾ ಅನಿಲ್ ರಾವ್ ಗೌರವ ಉಪಸ್ಥಿತಿಯಲ್ಲಿರುವರು. ಧಾರ್ಮಿಕ ಮುಂದಾಳು ಅರಿಬೈಲು ಗೋಪಾಲ ಶೆಟ್ಟಿಯವರು ಅಧ್ಯಕ್ಷತೆ ವಹಿಸುವರು, ಡಾ. ಜಯಪ್ರಕಾಶ್…

Read More