Author: roovari

ಬೆಂಗಳೂರು : ಎಸ್.ವಿ.ಎನ್. ಮ್ಯೂಜಿಕ್ ಅಕಾಡೆಮಿ, ಎಂ.ಡಿ.ಎನ್.ಡಿ. ಮತ್ತು ದೊಸಾ ಸ್ಟುಡಿಯೋ ಇವರ ಆಶ್ರಯದಲ್ಲಿ ವಿಶ್ವ ಸಂಗೀತ ದಿನಾಚರಣೆಯನ್ನು ದಿನಾಂಕ 21 ಮತ್ತು 22 ಜೂನ್ 2025ರಂದು ಸಂಜೆ 6-00 ಗಂಟೆಗೆ ಬೆಂಗಳೂರಿನ ರಮಣ ಮಹರ್ಷಿ ಹೆರಿಟೇಜ್ ಆಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 21 ಜೂನ್ 2025ರಂದು ಜಯಂತಿ ಕುಮಾರೇಶ್ ಇವರ ವೀಣಾ ವಾದನಕ್ಕೆ ಅಂಬಿ ಸುಬ್ರಮಣ್ಯಂ ಇವರು ವಯೋಲಿನ್, ಕೆ.ಯು. ಜಯಚಂದ್ರ ರಾವ್ ಇವರು ಮೃದಂಗ ಮತ್ತು ಗಿರಿಧರ್ ಉಡುಪ ಇವರು ಘಟಂನಲ್ಲಿ ಸಾಥ್ ನೀಡಲಿದ್ದಾರೆ. ದಿನಾಂಕ 22 ಜೂನ್ 2025ರಂದು ತ್ರಿಚೂರ್ ಬ್ರದರ್ಸ್ ಇವರ ಹಾಡುಗಾರಿಕೆ ಎಸ್. ಜನಾರ್ದನ್ ಇವರು ವಯೋಲಿನ್, ತ್ರಿಚೂರ್ ಆರ್. ಮೋಹನ್ ಇವರು ಮೃದಂಗ ಮತ್ತು ಓಂಕಾರ್ ರಾವ್ ಜಿ. ಇವರು ಘಟಂನಲ್ಲಿ ಸಾಥ್ ನೀಡಲಿದ್ದಾರೆ.

Read More

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ವಿವಿಧ ಪ್ರಕಾರಗಳಲ್ಲಿ ಪುರಸ್ಕಾರಗಳನ್ನು ನೀಡಲು ಒಟ್ಟು 54 ದತ್ತಿ ಪುರಸ್ಕಾರಗಳಿದ್ದು, ಇವುಗಳಿಗೆ 2024ರ ಜನವರಿ 1ರಿಂದ ಡಿಸಂಬರ್ 31ರೊಳಗೆ ಪ್ರಕಟವಾದ ಪುಸ್ತಕಗಳನ್ನು ಆಹ್ವಾನಿಸಲಾಗಿದೆ. ಕಾದಂಬರಿ, ಕಥಾ ಸಂಕಲನ, ಅನುವಾದ, ಸಂಶೋಧನೆ, ಮಕ್ಕಳ ಸಾಹಿತ್ಯ, ವೈಚಾರಿಕ ಬರಹಗಳು, ವೈದ್ಯಕೀಯ ಸಾಹಿತ್ಯ, ಇತಿಹಾಸ, ಜಾನಪದ, ಮನೋವಿಜ್ಞಾನ, ಸಿನಿಮಾ ಸಾಹಿತ್ಯ, ಕೃಷಿಗೆ ಸಂಬಂಧಿಸಿದ ಕೃತಿಗಳು, ಪ್ರವಾಸ ಸಾಹಿತ್ಯ, ಮಹಿಳೆಯರಿಗೆ ಸಂಬಂಧಿಸಿದ ಮಹಿಳೆಯರು ರಚಿಸಿದ ಕೃತಿಗಳು, ನಾಟಕ, ಪ್ರಬಂಧ, ಸಂಪಾದನೆ, ಜೈನ ಸಾಹಿತ್ಯದ ಕುರಿತ ಸಂಶೋಧನೆ ಮೊದಲಾದ ಕ್ಷೇತ್ರಗಳಿಗೆ ರಚಿತವಾದ ಕೃತಿಗಳಿಗೆ ದತ್ತಿ ಪುರಸ್ಕಾರಗಳು ಇರುತ್ತವೆ. ಪುಸ್ತಕ ದತ್ತಿ ಪ್ರಶಸ್ತಿಗೆ ಪುಸ್ತಕ ಕಳುಹಿಸುವವರು ಸಮಗ್ರ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿರಬೇಕು, ಪುಸ್ತಕ ಕಳುಹಿಸುವಾಗ ತಮ್ಮ ಸದಸ್ಯತ್ವದ ಸಂಖ್ಯೆಯನ್ನು ನಮೂದಿಸಿರಬೇಕು, ಒಂದೊಮ್ಮೆ ಸದಸ್ಯರಾಗದಿದ್ದಲ್ಲಿ ಕೂಡಲೇ ಸದಸ್ಯತ್ವವನ್ನು ಪಡೆದು ಅರ್ಜಿಯನ್ನು ಸಲ್ಲಿಸ ಬಹುದು. ಪುರಸ್ಕಾರದ ಕುರಿತು ಕನ್ನಡ ಸಾಹಿತ್ಯ ಪರಿಷತ್ತು ತೀರ್ಪುಗಾರರ ಮಂಡಳಿಯನ್ನು ರಚಿಸಿ ಆಯ್ಕೆಯನ್ನು ಮಾಡುತ್ತದೆ. ಈ ಮಂಡಳಿಯ…

Read More

ಮಡಿಕೇರಿ : ಕೊಡಗಿನ ಕವಿ, ಬರಹಗಾರ, ಕೊಡಗು ಜಿಲ್ಲಾ ದಸಾಪ ಅಧ್ಯಕ್ಷ ಅರ್ಜುನ್ ಮೌರ್ಯ ಇವರಿಗೆ 2025ರ ರಾಷ್ಟ್ರಮಟ್ಟದ “ಇಂಡಿಯನ್ ಐಕಾನಿಕ್ ಆಧರ್ -2025” ಅವಾರ್ಡ್ ಲಭಿಸಿದೆ. ಅರ್ಜುನ್ ಮೌರ್ಯ ಅವರ ಸಾಹಿತ್ಯ ಸೇವೆ ಗುರುತಿಸಿ “ವೈಡ್ ಇಂಡಿಯಾ ಅವಾರ್ಡ್” ನಂಸ್ಥೆಯ ವತಿಯಿಂದ ಹೈದರಾಬಾದ್ ನ ‘ದಿ ಪಾರ್ಕ್ ಹೊಟೇಲ್ ನಲ್ಲಿ ನಡೆದ ಸಮಾರಂಭದಲ್ಲಿ ಬಾಲಿವುಡ್ ತಾರೆ ಕಾವ್ಯ ತಾಪರ್ ಹಾಗೂ ವೈಡ್ ಇಂಡಿಯಾ ಅವಾರ್ಡ್ ಸಂಸ್ಥೆಯ ಸಿ. ಇ. ಓ. ವಿನಯ್ ಕುಮಾರ್ ಪ್ರಶಸ್ತಿ ನೀಡಿ ಗೌರವಿಸಿದರು. ಇತ್ತೀಚೆಗಷ್ಟೇ ಅರ್ಜುನ್ ಮೌರ್ಯ ಅವರ “ಬೆಂದೊಡಲ ಕುಣಿತ” ಕಾವ್ಯ ಸಂಕಲನವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮುಕುಂದರಾಜ್ ಕೊಡಗು ವಿಶ್ವವಿದ್ಯಾಲಯದಲ್ಲಿ ನಡೆದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಲೋಕಾರ್ಪಣೆ ಮಾಡಿದ್ದರು. ಅರ್ಜುನ್ ಮೌರ್ಯ ಅವರು ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ವಿರಾಜಪೇಟೆ ಸೈಂಟ್ ಆನ್ಸ್ ಪದವಿ ಕಾಲೇಜಿನ ಕನ್ನಡ ಭಾಷಾ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Read More

ಬೆಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ವತಿಯಿಂದ ‘ಮೂಡಲಪಾಯ ಯಕ್ಷೋತ್ಸವ’ ಕಾರ್ಯಕ್ರಮವನ್ನು ದಿನಾಂಕ 24 ಮತ್ತು 25 ಜೂನ್ 2025ರಂದು ಬೆಳಿಗ್ಗೆ 10-00 ಗಂಟೆಗೆ ಬೆಂಗಳೂರಿನ ನಯನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 24 ಜೂನ್ 2025ರಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಾಲ್ಲೂರು ಶಿವರಾಮ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾನ್ಯ ನಿರ್ದೇಶಕರಾದ ಶ್ರೀಮತಿ ಕೆ.ಎಂ. ಗಾಯತ್ರಿ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಮೈಸೂರಿನ ಶ್ರೀ ಹೇಮಾಂಭಿಕಾ ಯಕ್ಷಗಾನ ಕಲಾ ಸಂಘ (ರಿ.) ಇವರಿಂದ ‘ಅಂಗಧ ಸಂಧಾನ’ ಮೂಡಲಪಾಯ ತಾಳಮೇಳ ಪ್ರಸ್ತುತಗೊಳ್ಳಲಿದೆ. ಮಧ್ಯಾಹ್ನ 12-00 ಗಂಟೆಗೆ ‘ಮೂಡಲಪಾಯ ಕೇಳಿಕೆ, ಘಟ್ಟದಕೋಣೆ, ಬೊಂಬೆಯಾಟದ ಪಾತ್ರಗಳ ವೈಶಿಷ್ಟ್ಯ’ ಕುರಿತು ವಿಚಾರ ಸಂಕಿರಣ ನಡೆಯಲಿದೆ. ಬಳಿಕ ಬೆಂಗಳೂರಿನ ಡಾ. ದತ್ತಾತ್ರೇಯ ಅರಳಿಕಟ್ಟೆ ಇವರಿಂದ ‘ಕುಮಾರ ಸಂಭವ’ ಮೂಡಲಪಾಯ ಬೊಂಬೆಯಾಟ ಪ್ರದರ್ಶನಗೊಳ್ಳಲಿದೆ. ದಿನಾಂಕ 25 ಜೂನ್ 2025ರಂದು ‘ಮೂಡಲಪಾಯ ಯಕ್ಷಗಾನದ…

Read More

ಬೈಂದೂರು: ಸುರಭಿ ರಿ. ಬೈಂದೂರು, ರಂಗಸ್ಥಳ ಉಪ್ಪಂದ ಹಾಗೂ ಕಂಬದ ಕೋಣೆ ರೈತರ ಸೇವಾ ಸಹಕಾರಿ ಸಂಘ ಉಪ್ಪುಂದ ಇವರ ಸಹಯೋಗದಲ್ಲಿ ಭಾವ ಕವಿ ಪ್ರಸಿದ್ಧ ಸಾಹಿತಿ ಡಾ. ಎಚ್.ಎಸ್.ವೆಂಕಟೇಶ್ ಮೂರ್ತಿ ಇವರಿಗೆ “ಭಾವ ನಮನ” ಕಾರ್ಯಕ್ರಮ ದಿನಾಂಕ 14 ಜೂನ್ 2025ರಂದು ಉಪ್ಪುಂದದ ಕಂಬದ ಕೋಣೆ ರೈತರ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು “ರಂಗಸ್ಥಳ” ಉಪ್ಪಂದ ಇದರ ಅಧ್ಯಕ್ಷರಾದ ಯು. ಎಚ್. ರಾಜಾರಾಮ ಭಟ್ ವಹಿಸಿದ್ದು, ಕಂಬದ ಕೋಣೆ ರೈತರ ಸೇವಾ ಸಹಕಾರಿ ಸಂಘ ಉಪ್ಪುಂದ ಇದರ ಅಧ್ಯಕ್ಷರಾದ ಶ್ರೀ ಪ್ರಕಾಶ್ ಚಂದ್ರ ಶೆಟ್ಟಿ ಶುಭಶಂಸನೆಗೈದು, ಡಾ. ವೆಂಕಟೇಶ್ ಮೂರ್ತಿ ಇವರ ಸಾಹಿತ್ಯ ಸಾಧನೆಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಎಚ್. ಎಸ್. ವಿ. ಯವರ ಕುರಿತು “ನುಡಿ ನಮನ” ಸಲ್ಲಿಸಿದ ಅಧ್ಯಾಪಕ ಸಂದೀಪ ದೇವಾಡಿಗ ಎಚ್.ಎಸ್‌.ವಿ ಅವರ ಬಗ್ಗೆ ನುಡಿ ನಮನದಲ್ಲಿ ಮಾತನಾಡುತ್ತಾ ಎಚ್.ಎಸ್‌.ವಿ ಯವರು “ಅಜರಾಮರ” ಎನ್ನುವ ಮಾತನ್ನು ಹೇಳಿದರು. ಆಶಯ ನುಡಿಗಳನ್ನಾಡಿದ…

Read More

ನವದೆಹಲಿ: ಕೇಂದ್ರ ಸಾಹಿತ್ಯ ಅಕಾಡೆಮಿಯ 2025ನೇ ಸಾಲಿನ ‘ಯುವ ಪುರಸ್ಕಾರ’ಕ್ಕೆ ಯುವ ಲೇಖಕ ಆ‌ರ್. ಅವರ ‘ಪಚ್ಚೆಯ ಜಗುಲಿ’ ವಿಮರ್ಶಾ ಸಂಕಲನ ಹಾಗೂ ‘ಬಾಲ ಸಾಹಿತ್ಯ ಪುರಸ್ಕಾರ’ಕ್ಕೆ ಲೇಖಕ ಕೆ. ಶಿವಲಿಂಗಪ್ಪ ಹಂದಿಹಾಳು ಅವರ ‘ನೋಟ್ ಬುಕ್’ ಮಕ್ಕಳ ಕಥಾಸಂಕಲನ ಆಯ್ಕೆಯಾಗಿದೆ. ಈ ಪ್ರಶಸ್ತಿಗಳು ತಲಾ ರೂಪಾಯಿ 50 ಸಾವಿರ ನಗದು ಹಾಗೂ ಫಲಕಗಳನ್ನು ಪಡೆಯಲಿದ್ದಾರೆ. ಶಿವಲಿಂಗಪ್ಪ ಹಂದಿಹಾಳು ಇವರು ಬಳ್ಳಾರಿ ಜಿಲ್ಲೆಯ ಹಂದಿ ಹಾಳು ಗ್ರಾಮದವರು. ಹಂದಿ ಹಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ‘ನಾನು ಮತ್ತು ಕನ್ನಡಕ’ (ಕವನ ಸಂಕಲನ), ‘ಎಳೆಬಿಸಿಲು’ (ಮಕ್ಕಳ ಸಾಹಿತ್ಯ ಸಂಪದ), ‘ಶಾವೋಲಿನ್’ (ಇಂಗ್ಲಿಷ್ ಮೂಲ ಮಕ್ಕಳ ಕತೆಗಳು), ‘ಆನಂದಾವಲೋಕನ’ (ಭಾರತೀಯ ಮಕ್ಕಳ ಸಾಹಿತ್ಯ ಕುರಿತು), ‘ಬಳ್ಳಾರಿಯ ಬೆಡಗು’ (ಕಥಾ ಸಂಕಲನ), ‘ದಿ ಯಂಗ್ ಸೈಂಟಿಸ್ಟ್’ (ಮಕ್ಕಳ ಕಾದಂಬರಿ) ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ. ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕನ್ನಡ ವಿಭಾಗದಲ್ಲಿ ಬಾಲ ಸಾಹಿತ್ಯ ಪುರಸ್ಕಾರಕ್ಕೆ ಲೇಖಕರಾದ…

Read More

ಬಹುಷ: ನಾವು ಎಂಟನೆಯಲ್ಲಿ ಓದುತ್ತಿದ್ದ ಸಮಯ. ಸದಾನಂದನೆಂಬ ಕಿಲಾಡಿ ಹುಡುಗನೊಬ್ಬ ಒಂದು ದಿನ ವಿಶೇಷ ವಸ್ತುವೊಂದನ್ನು ತಂದ. ಗೋಲಾಕರದ ಸಣ್ಣ ವಿಕ್ಸ್ ಆಕಾರದ ಡಬ್ಬಿಯದು. ಅದಕ್ಕೆ ಮುಚ್ಚಳ ಮುಚ್ಚಿತ್ತು. ಗೆಳೆಯರಿಗೆ ತೋರಿಸಿಯೂ ತೋರಿಸದವನ ಹಾಗೆ ಡಬ್ಬ ಹಿಡಿದುಕೊಂಡು ಡೌಲಿನಿಂದ ಒಡಾಡುತ್ತಿದ್ದ. ನಮಗೆಲ್ಲ ಅಪರಿಮಿತ ಕುತೂಹಲ. ಕೊನೆಗೂ ಸಂಜೆ ಶಾಲೆ ಬಿಟ್ಟ ಮೇಲೆ ಆ ಡಬ್ಬಿಯ ರಹಸ್ಯ ಬಯಲಾಯ್ತು. ಸಂಜೆ ಆಪ್ತ ಗೆಳೆಯರ ಸಮ್ಮುಖದಲ್ಲಿ ಡಬ್ಬಿಯ ಮುಚ್ಚಳ ತೆಗೆಯಲಾಯಿತು. ಒಂಥರಾ ಕಪ್ಪು ಅಂಟಿನಂಥಾ ವಸ್ತು ತುಂಬಿದ ಡಬ್ಬಿ ಅದು. ಅದನ್ನ ‘ಅಂಜನ’ ಅಂತ ಹೇಳ್ತಾರೆ ಅಂತ ಸದಾನಂದ ಹೇಳುತ್ತಿದ್ದ. ಅದರಲ್ಲಿ ಕಣ್ಣಿಟ್ಟು ನೋಡಿದರೆ ಕೋರಿಕೊಂಡದ್ದೆಲ್ಲ ಕಾಣುತ್ತದಂತೆ. ಹಾಗಂತ ಎಲ್ಲರಿಗೂ ಕಾಣೋದಿಲ್ಲ. ಸ್ವತ: ಸದಾನಂದನಿಗೂ ಏನೂ ಕಾಣುತ್ತಿರಲಿಲ್ಲ. ನನಗೂ. ಒಬ್ಬೊಬ್ಬರಾಗಿ ನೋಡುತ್ತ ಹೋದೆವು. ಕೊನೆಗೂ ಹರಿ ಎಂಬ ಹುಡುಗ ‘ನನಗೆ ಕಾಣ್ತದೆ’ ಅಂತ ಚೀರಿದ. ‘ನಮ್ಮಪ್ಪ ಎಲ್ಲಿದಾರೆ’ ಅಂತ ಕೇಳಿದರೆ ‘ಪೇಟೇಲಿ’ ಅಂದ. ಸದಾನ ಅಣ್ಣ ಏನು ಮಾಡುತ್ತಿದ್ದಾನೆ ಅಂತ ಕೇಳಿದರೆ ‘ಸೈಕಲ್ ಹೊಡೀತಿದಾನೆ’…

Read More

ಪುತ್ತೂರು : ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮೈಸೂರು 2024- 25ನೇ ಸಾಲಿನಲ್ಲಿ ಪ್ರಥಮ ಬಾರಿಗೆ ಯಕ್ಷಗಾನ ಸರ್ಟಿಫಿಕೇಟ್ ಮತ್ತು ಡಿಪ್ಲೋಮಾ ಕೋರ್ಸ್ ಗಳಿಗೆ ಇತ್ತೀಚೆಗೆ ಪರೀಕ್ಷೆಗಳನ್ನು ಬೆಂಗಳೂರಿನಲ್ಲಿ ನಡೆಸಿದ್ದು, ಬೆಂಗಳೂರಿನ ಕಲಾ ಕದಂಬ ಆರ್ಟ್ ಸೆಂಟರ್ ಮೂಲಕ ಪ್ರಥಮ ಸೆಮಿಸ್ಟ‌ರ್ ಡಿಪ್ಲೋಮಾ ಪರೀಕ್ಷೆಗೆ ಹಾಜರಾದ ದಿವಾಕರ ಆಚಾರ್ಯ ಗೇರುಕಟ್ಟೆ ಡಿಸ್ಟಿಂಕ್ಷನ್ ಶ್ರೇಣಿಯಲ್ಲಿ (ಎ+) ಉತ್ತೀರ್ಣರಾಗಿರುತ್ತಾರೆ. ದಿವಾಕರ ಆಚಾರ್ಯ ಇವರು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾಗಿದ್ದು, ಹವ್ಯಾಸಿ ಕಲಾವಿದರಾಗಿ ಸಂಘಟಕರಾಗಿ ನಾಲ್ಕು ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಇವರು ಯಕ್ಷಭಾರತಿ (ರಿ.) ಬೆಳ್ತಂಗಡಿ ಕಾರ್ಯದರ್ಶಿಯಾಗಿ, ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಸಂಘದ ಅಧ್ಯಕ್ಷರಾಗಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಹವ್ಯಾಸಿ ಕಲಾವಿದರ ಘಟಕದ ಉಪಾಧ್ಯಕ್ಷರಾಗಿ, ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.

Read More

ಇಳಕಲ್ : ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘ (ರಿ.) ಕಮತಗಿ ಇದರ ವತಿಯಿಂದ 2025ನೇ ಸಾಲಿನ ‘ಮೇಘರತ್ನ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮವನ್ನು ದಿನಾಂಕ 21 ಜೂನ್ 2025ರಂದು ಸಂಜೆ 5-00 ಗಂಟೆಗೆ ಇಳಕಲ್ ಸ್ನೇಹರಂಗ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಲಾಗಿದೆ. ರಂಗ ಸಂಘಟಕರಾದ ಡಾ. ವಿಶ್ವನಾಥ ಕೆ. ವಂಶಾಕೃತಮಠ ಇವರ ಅಧ್ಯಕ್ಷತೆಯಲ್ಲಿ ವಿಶ್ರಾಂತ ನಿರ್ದೇಶಕರಾದ ಎಸ್.ಆರ್. ಮನಹಳ್ಳಿ ಇವರು ಉದ್ಘಾಟನೆ ಹಾಗೂ ಪ್ರಶಸ್ತಿ ಪ್ರದಾನ ಮಾಡಲಿರುವರು. ಹಿರಿಯ ರಂಗಕರ್ಮಿ ಹಾಗೂ ಕಲಾವಿದರಾದ ಮಹಾಂತೇಶ ಮಹಾಂತಪ್ಪ ಗಜೇಂದ್ರಗಡ ಇವರಿಗೆ ‘ಮೇಘರತ್ನ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಇದೇ ಸಂದರ್ಭದಲ್ಲಿ ಮಹಾಂತಪ್ಪ ವೀರಪ್ಪ ಅದ್ರಸನ್ನವರ್, ಮಹಾಂತೇಶ ಹಳ್ಳೂರ, ಶ್ರೀಮತಿ ರೇಣವ್ವ ನಾಗಪ್ಪ, ಶ್ರೀಮತಿ ನೀಲಮ್ಮ ಬಸನಗೌಡ ಹಿರೇಗೌಡರ, ಕು. ಮಲಿಕ್ ಶಬೀಲ್ ನಾಗನೂರ ಇವರನ್ನು ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಚಾಮರಾಜ ನೃತ್ಯ ಕಲೆ ಮತ್ತು ಸಾಂಸ್ಕೃತಿಕ ಸಂಘ (ರಿ.) ಇವರಿಂದ ವಚನ ನೃತ್ಯ ಮತ್ತು ಕುಮಾರಿ ಸನ್ನಿಧಿ ಚಂದ್ರ ಶೇಖರ ಕಲ್ಮನಿ ಇವರಿಂದ ಏಕಾ ಪಾತ್ರ…

Read More

ಬೆಳಗಾವಿ : ಶ್ರೀ ಮಹಾರಾಜ ಸಿದ್ದು ಹಳ್ಳೂರ ಇವರ ‘ಎಷ್ಟ ಚಂದಿತ್ತ ಆವಾಗ’ ಕವನ ಸಂಕಲನ ಲೋಕಾರ್ಪಣೆ ಕಾರ್ಯಕ್ರಮವನ್ನು ದಿನಾಂಕ 22 ಜೂನ್ 2025 ರಂದು ಮುಂಜಾನೆ 10-00 ಗಂಟೆಗೆ ಮೂಡಲಗಿ ಶ್ರೀ ಮಂಜುನಾಥ ಸೈನಿಕ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಶ್ರೀ ಮಂಜುನಾಥ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಲಕ್ಷ್ಮಣ ಯ. ಅಡಿಹುಡಿ ಇವರ ಅಧ್ಯಕ್ಷತೆಯಲ್ಲಿ ಮಾಜಿ ಸಚಿವರಾದ ಬಾಲಚಂದ್ರಣ್ಣಾ ಲ. ಜಾರಕಿಹೊಳಿ ಇವರು ಉದ್ಘಾಟನೆ ಮಾಡಲಿದ್ದಾರೆ. ಖ್ಯಾತ ಜಾನಪದ ಗಾಯಕರಾದ ಗುರುರಾಜ ಹೊಸಕೋಟಿ ಇವರು ಕೃತಿ ಲೋಕಾರ್ಪಣೆಗೊಳಿಸಲಿದ್ದು, ಸಾಹಿತಿ ದುರ್ಗಪ್ಪ ದಾಸನ್ನವರ ಇವರು ಕೃತಿ ಪರಿಚಯ ಮಾಡಲಿರುವರು.

Read More