Author: roovari

ಕಾಸರಗೋಡು : ಚಿನ್ಮಯ ಮಿಷನಿನ ಸಂಸ್ಥಾಪಕ ಚಿನ್ಮಯಾನಂದ ಸ್ವಾಮೀಜಿಯವರ 108ನೇ ಜಯಂತಿಯ ಪ್ರಯುಕ್ತ ಚಿನ್ಮಯ ವಿದ್ಯಾಲಯದಲ್ಲಿ ‘ಚಿನ್ಮಯ ಮಾತೃ ಸಂಸ್ಕೃತಿ ಸೇವಾ ಸಮಿತಿ’ ಯ ಸಂಯುಕ್ತ ಆಶ್ರಯದೊಂದಿಗೆ “ಮೆಗಾ ತಿರುವಾದಿರ”ವು ದಿನಾಂಕ 06-03-2024 ರಂದು ಪ್ರದರ್ಶನಗೊಂಡಿತು. ಕೇರಳ ಚಿನ್ಮಯ ಮಿಷನಿನ ಮುಖ್ಯಸ್ಥ ಹಾಗೂ ಕಾಸರಗೋಡು ಚಿನ್ಮಯ ವಿದ್ಯಾಲಯದ ಅಧ್ಯಕ್ಷರಾದ ಸ್ವಾಮಿ ವಿವಿಕ್ತಾನಂದ ಸರಸ್ವತಿಯವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಮಾತೃ ಸಂಸ್ಕೃತಿ ಸೇವಾ ಸಮಿತಿಯ ಸದಸ್ಯರು, ವಿದ್ಯಾಲಯದ ಅಧ್ಯಾಪಿಕೆಯರು, ಮಾತೆಯರು ಮತ್ತು ವಿದ್ಯಾರ್ಥಿನಿಯರನ್ನೊಳಗೊಂಡ 108ಸದಸ್ಯರ ‘ಮೆಗಾ ತಿರುವಾದಿರ’ವು ನೋಡುಗರ ಕಣ್ಮನವನ್ನು ಸೆಳೆಯಿತು. ಬ್ರಹ್ಮಚಾರಿಣಿ ದಿಶಾ ಚೈತನ್ಯ, ಚಿನ್ಮಯ ಮಿಷನಿನ ಸದಸ್ಯರು, ಪ್ರಾಂಶುಪಾಲರಾದ ಸುನಿಲ್ ಕುಮಾರ್ ಕೆ. ಸಿ, ಉಪ ಪ್ರಾಂಶುಪಾಲರಾದ ಪ್ರಶಾಂತ್ ಬೆಳಿಂಜ, ಮುಖ್ಯೋಪಾಧ್ಯಾಯಿನಿಯರಾದ ಪೂರ್ಣಿಮಾ ಎಸ್. ಆರ್. ಮತ್ತು ಸಿಂಧು ಶಶೀಂದ್ರನ್ ಉಪಸ್ಥಿತರಿದ್ದರು. ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳು, ಪೋಷಕರು, ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ವೀಕ್ಷಿಸಿದರು. ‘ಮೆಗಾ ತಿರುವಾದಿರ’ದಲ್ಲಿ ಭಾಗವಹಿಸಿದವರೆಲ್ಲರಿಗೂ ಕೇರಳ ಚಿನ್ಮಯ ಮಿಷನಿನ ಮುಖ್ಯಸ್ಥ ಹಾಗೂ ಕಾಸರಗೋಡು…

Read More

ಮಂಗಳೂರು : ಕರಾವಳಿ ಲೇಖಕಿಯರ, ವಾಚಕಿಯರ ಸಂಘ (ರಿ.) ಅವಿಭಜಿತ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆ ಇವರು ಮಂಗಳೂರಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಇದರ ಸಹಯೋಗದೊಂದಿಗೆ ಆಯೋಜಿಸಿದ ದತ್ತಿ ಪ್ರಶಸ್ತಿ ಮತ್ತು ದತ್ತಿ ಬಹುಮಾನ ಪ್ರದಾನ ಸಮಾರಂಭವು ದಿನಾಂಕ 20-03-2024ರಂದು ಅಪರಾಹ್ನ 1.30ರಿಂದ ಮಂಗಳೂರಿನ ಬಲ್ಮಠದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಇದರ ಸಭಾಂಗಣದಲ್ಲಿ ನಡೆಯಲಿದೆ. ಮಂಗಳೂರು , ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇದರ ಪ್ರಾಂಶುಪಾಲರಾದ ಡಾ. ಜಗದೀಶ್ ಬಾಳ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಯಾದ ಡಾ. ವಿದ್ಯಾ ಕುಮಾರಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕ.ಲೇ.ವಾ. ಸಂಘದ ಅಧ್ಯಕ್ಷರಾದ ಡಾ. ಜ್ಯೋತಿ ಚೇಳಾರ್ರು ಸ್ವಾಗತ ಮತ್ತು ಪ್ರಸ್ತಾವನೆ ಗೈಯ್ಯಲಿದ್ದು, ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ವಿಶ್ರಾಂತ ಪ್ರಾಂಶುಪಾಲರಾದ ಡಾ. ಇಸ್ಮಾಯಿಲ್, ತುಳು ಮತ್ತು ಕನ್ನಡ ಲೇಖಕರಾದ ಶ್ರೀ ಬೆನೆಟ್ ಜಿ. ಅಮ್ಮನ್ನ ಹಾಗೂ ಹಿರಿಯ ಲೇಖಕಿಯಾದ ಶ್ರೀಮತಿ ಮಮತಾ ರಾವ್ ಭಾಗವಹಿಸಲಿದ್ದಾರೆ.…

Read More

ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮವು ದಿನಾಂಕ 18-03-2024ರಂದು ಸಂಜೆ ಗಂಟೆ 6.25ಕ್ಕೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಈ ದಿನದ ಸರಣಿ ಕಾರ್ಯಕ್ರಮದಲ್ಲಿ ಬೆಂಗಳೂರಿನ ಶ್ರದ್ಧಾ ಶ್ರೀನಿವಾಸ್ ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ. ಶ್ರೀಮತಿ ವಿದ್ಯಾ ಮತ್ತು ಶ್ರೀ ಕೆ.ಪಿ. ಶ್ರೀನಿವಾಸ್‌ ದಂಪತಿಗಳ ಸುಪುತ್ರಿಯಾಗಿರುವ ಶ್ರದ್ಧಾರವರು ಮೂಲತಃ ಕರ್ನಾಟಕ ಶೈಲಿಯ ಗಾಯನ, ಭರತನಾಟ್ಯ ಮತ್ತು ಯೋಗ ಮುಂತಾದ ಕಲಾ ಪ್ರಕಾರಗಳನ್ನು ಪ್ರೋತ್ಸಾಹಿಸುವ ದಕ್ಷಿಣ ಕನ್ನಡ ಕುಟುಂಬ ವರ್ಗದ ಹಿನ್ನಲೆಯಿಂದ ಬಂದವರು. ಏಳನೇ ವರ್ಷದಿಂದಲೇ ಗುರುಗಳಾದ ಶ್ರೀಯುತ ಕಿರಣ್‌ ಸುಬ್ರಹ್ಮಣ್ಯಮ್ ಹಾಗೂ ಶ್ರೀಮತಿ ಸಂಧ್ಯಾ ಕಿರಣ್‌ ಇವರ ಮಾರ್ಗದರ್ಶನದಲ್ಲಿ ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರವಾದ ಭರತನಾಟ್ಯವನ್ನು ಕಲಿಯಲು ಪ್ರಾರಂಭಿಸಿದರು. ಗುರುಗಳ ತಂಡದೊಂದಿಗೆ ಭಾರತದ ಅನೇಕ ಪ್ರಖ್ಯಾತ ಸ್ಥಳಗಳಲ್ಲಿ ನಡೆದ ಭರತನಾಟ್ಯ ಕಾರ್ಯಕ್ರಮ ಹಾಗೂ ಉತ್ಸವಗಳಲ್ಲಿ…

Read More

ಮಂಗಳೂರು : ಅಡ್ಯಾರ್ ಗಾರ್ಡನ್‌ನಲ್ಲಿ ದಿನಾಂಕ 26-05-2024ರಂದು ನಡೆಯಲಿರುವ ‘ಯಕ್ಷಧ್ರುವ ಪಟ್ಲ ಸಂಭ್ರಮ’ದ ಸಿದ್ಧತೆ ಕುರಿತು ಕರೆದಿದ್ದ ಪೂರ್ವಭಾವಿ ಸಭೆಯು ದಿನಾಂಕ 05-03-2024ರಂದು ಪತ್ತುಮುಡಿ ಸೌಧದಲ್ಲಿ ನಡೆಯಿತು. ಈ ಸಭೆಯಲ್ಲಿ ಮಾತನಾಡಿದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ “ಯಕ್ಷಧ್ರುವ ಯಕ್ಷ ಶಿಕ್ಷಣದ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿದೆ. ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ನಡೆದ ಯಕ್ಷ ಶಿಕ್ಷಣದಲ್ಲಿ ಸುಮಾರು 4,000 ಮಕ್ಕಳು ಭಾಗವಹಿಸಿದ್ದರು. ಯಕ್ಷ ಕಲೆ ಪಸರಿಸುವ ದೃಷ್ಟಿಯಿಂದ ಯುರೋಪ್ ರಾಷ್ಟ್ರದಲ್ಲಿ ಈ ವರ್ಷ ಪಟ್ಲ ಫೌಂಡೇಶನ್ ಟ್ರಸ್ಟಿನ ಘಟಕ ರಚನೆಯಾಗಲಿದೆ. ಪಟ್ಲ ಫೌಂಡೇಶನ್ ಟ್ರಸ್ಟ್ ಈವರೆಗೆ 24 ಮನೆಗಳನ್ನು ನಿರ್ಮಿಸಿ ಕಲಾವಿದರಿಗೆ ಹಸ್ತಾಂತರಿಸಿದೆ. ಯಕ್ಷಾಶ್ರಯ ವಸತಿ ಯೋಜನೆಯಡಿ 25ನೇ ಮನೆಯ ಹಸ್ತಾಂತರ ದಿನಾಂಕ 22-03-2024ರಂದು ಕುಂಬಳೆಯ ಸಮೀಪ ನಡೆಯಲಿದೆ. ಸುಮಾರು 200 ಮನೆಗಳ ದುರಸ್ತಿಗೆ ಆರ್ಥಿಕ ಸಹಾಯ ಮಾಡಲಾಗಿದೆ. ಆರೋಗ್ಯ, ವಿದ್ಯಾರ್ಥಿವೇತನ, ಶಿಕ್ಷಣ, ವೈದ್ಯಕೀಯ ಸೇರಿದಂತೆ ಕಲಾವಿದರಿಗೆ ಕೋಟ್ಯಂತರ ರೂಪಾಯಿ ನೆರವು ನೀಡಲಾಗಿದೆ.…

Read More

ಉಡುಪಿ : ಕರ್ನಾಟಕ ಗಮಕ ಕಲಾ ಪರಿಷತ್ತು (ರಿ.) ಬೆಂಗಳೂರು, ಕರ್ನಾಟಕ ಗಮಕ ಕಲಾ ಪರಿಷತ್ತು ಉಡುಪಿ ಜಿಲ್ಲೆ ಇವರು ಉಡುಪಿ ತಾಲೂಕು ಘಟಕದ ಮೂಲಕ ಸಂಯೋಜಿಸಿರುವ ‘ಜಿಲ್ಲಾ ಮಟ್ಟದ ಗಮಕ ಸಮ್ಮೇಳನ’ವು ದಿನಾಂಕ 23-03-2024ರಂದು ಉಡುಪಿಯ ಶ್ರೀ ಕೃಷ್ಣ ಮಠದ ರಾಜಾಂಗಣ ವೇದಿಕೆಯಲ್ಲಿ ನಡೆಯಲಿದೆ. ಈ ಗಮಕ ಸಮ್ಮೇಳನವನ್ನು ಬೆಳಿಗ್ಗೆ 9-00 ಗಂಟೆಗೆ ಉಡುಪಿ ಗಮಕಿ ಶ್ರೀಮತಿ ಯಾಮಿನಿ ಭಟ್ ಇವರ ಸಮ್ಮೇಳನಾಧ್ಯಕ್ಷತೆಯಲ್ಲಿ ಉಡುಪಿ ಪುತ್ತಿಗೆ ಶ್ರೀಕೃಷ್ಣ ಮಠ ಪರ್ಯಾಯ ಪೀಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರು ಮತ್ತು ಶ್ರೀ ಶ್ರೀ ಸುಶೀಂದ್ರ ತೀರ್ಥ ಶ್ರೀಪಾದಂಗಳವರು ಉದ್ಘಾಟನೆ ಮಾಡಲಿದ್ದಾರೆ. ಪೂರ್ವಾಹ್ನ 10.30ಕ್ಕೆ ಗಮಕ ವಾಚನ ವ್ಯಾಖ್ಯಾನ ‘ಸಾವಿತ್ರಿ ಚರಿತ್ರೆ’ ಕಾರ್ಕಳ ಹಿರಿಯಂಗಡಿಯ ಎಸ್.ಎನ್.ವಿ. ಪ್ರೌಢ ಶಾಲೆಯ ವಿದ್ಯಾರ್ಥಿನಿ ಕುಮಾರಿ ಆಶ್ರಿತಾ ವಾಚನ ಹಾಗೂ ಮಣಿಪಾಲ ಮಾಧವ ಕೃಪಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಸಂಹಿತಾ ವ್ಯಾಖ್ಯಾನ ನೀಡಲಿದ್ದಾರೆ. ಗಮಕ ವಾಚನ ವ್ಯಾಖ್ಯಾನ ‘ಪದ್ಮವ್ಯೂಹದಲ್ಲಿ ಅಭಿಮನ್ಯು’ ಇನ್ನಂಜೆ ಶ್ರೀ…

Read More

ಬೆಂಗಳೂರು : ಬೆಂಗಳೂರಿನ ದ್ವಾರನಕುಂಟೆ ಪಾತಣ್ಣ ಪ್ರತಿಷ್ಠಾನ (ರಿ) ಕೊಡಮಾಡುವ 2023ರ ಸಾಲಿನ ‘ಅತ್ಯುತ್ತಮ ಕಾದಂಬರಿ ಪ್ರಶಸ್ತಿ’ ಪ್ರದಾನ ಸಮಾರಂಭವು ದಿನಾಂಕ 14-03-2024 ರಂದು ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಶೇಷಾದ್ರಿಪುರಂ ಕಾಲೇಜಿನ ಶಿಕ್ಷಣದತ್ತಿ ಸಭಾಂಗಣದಲ್ಲಿ ನಡೆಯಲಿದೆ. ದ್ವಾರನಕುಂಟೆ ಪಾತಣ್ಣ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಬಿ.ಎಂ. ಹನೀಫ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ವಿಮರ್ಶಕರಾದ ಶ್ರೀ ಎಸ್.ಆರ್. ವಿಜಯಶಂಕರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಪ್ರಧಾನ ಕಾರ್ಯದರ್ಶಿಯಾದ ನಾಡೋಜ ಡಾ. ವೂಡೇ ಪಿ. ಕೃಷ್ಣ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, 2023ರ ‘ಭರತ ಕಲ’ ಕಾದಂಬರಿ ರಚನೆಗಾಗಿ ಡಾ. ಆರ್. ಸುನಂದಮ್ಮ ಇವರಿಗೆ ‘ಅತ್ಯುತ್ತಮ ಕಾದಂಬರಿ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು. ಸ್ಪರ್ಧೆಯ ತೀರ್ಪುಗಾರರರಾದ ಖ್ಯಾತ ಕಾದಂಬರಿಕಾರ ಶ್ರೀ ಕಾ.ತ. ಚಿಕ್ಕಣ ತೀರ್ಪಿನ ಬಗ್ಗೆ ಮಾತನಾದಲಿದ್ದು, ಹಿರಿಯ ಕಾದಂಬರಿಕಾರರಾದ ಶ್ರೀ ದ್ವಾರನಕುಂಟೆ ಪಾತಣ್ಣ ಉಪಸ್ಥಿತರಿರುವರು. ಪ್ರೊ.ಆರ್.ಸುನಂದಮ್ಮ : 22-08-1960 ರಲ್ಲಿ ಕೋಲಾರ ಜಿಲ್ಲೆಯ ವೆಂಕಟಾಪುರ ಗ್ರಾಮದಲ್ಲಿ ರಾಮಯ್ಯ ಹಾಗೂ…

Read More

ಕೋಟ : ಸಾಲಿಗ್ರಾಮದ ಗೆಂಡೆಕೆರೆಯಲ್ಲಿ ಪಿ.ವಿ. ಆನಂದ ಸಾಲಿಗ್ರಾಮರವರಿಗೆ ಅವರ 50ನೇ ಯಕ್ಷಗಾನ ಪ್ರಸಂಗವಾದ ‘ಆವರ್ಸೆ ಶ್ರೀ ಶಂಕರ ನಾರಾಯಣ ಮಹಾತ್ಮೆ’ ಪ್ರಸಂಗದ 50ನೆಯ ಪ್ರಯೋಗದ ಸಂದರ್ಭದಲ್ಲಿ ಹುಟ್ಟೂರ ಸನ್ಮಾನವು ದಿನಾಂಕ 03-03-2024ರಂದು ನಡೆಯಿತು. ಈ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ನರೇಂದ್ರ ಕುಮಾರ್ ಕೋಟ ಮಾತನಾಡಿ “ಸಾಮಾನ್ಯ ಬಡ ಕುಟುಂಬದಲ್ಲಿ ಜನಿಸಿದ ಪಿ.ವಿ. ಆನಂದ ಸಾಲಿಗ್ರಾಮ ಅವರು ಕವಿ, ಸಮೀಕ್ಷಕ, ನಿರೂಪಕ, ಯಕ್ಷಗಾನ ಪ್ರಸಂಗಕರ್ತ, ಕಲಾವಿದ, ರಾಜ್ಯ ಮಟ್ಟದಲ್ಲಿ ಶಿಕ್ಷಕರಿಗೆ ತರಬೇತಿ ನೀಡುವ ಶಿಕ್ಷಕ, ಸಾಹಿತ್ಯ ಪರಿಷತ್ತಿನ ಸಂಘಟಕ, ನಾಟಕಕಾರ ಹೀಗೆ ಹತ್ತು ಹಲವಾರು ಕ್ಷೇತ್ರಗಳಲ್ಲಿ ಪ್ರಬುದ್ಧತೆಯನ್ನು ಗಳಿಸಿಕೊಂಡ ಅನನ್ಯ ಪ್ರತಿಭೆ. ಐವತ್ತಮೂರು ಯಕ್ಷಗಾನ ಪ್ರಸಂಗಗಳನ್ನು ಕಿರಿಯ ವಯಸ್ಸಿನಲ್ಲಿ ರಚಿಸಿದ ಸಾಧನೆ ಬೆರಗು ಮೂಡಿಸುವಂತದ್ದು, ಅವರ ಸಾಧನೆ ಸಾಲಿಗ್ರಾಮಕ್ಕೆ ದೊಡ್ಡ ಹೆಮ್ಮೆ” ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಲಿಗ್ರಾಮ ಪುರಸಭೆಯ ಮಾಜಿ ಉಪಾಧ್ಯಕ್ಷರಾದ ಶ್ರೀನಿವಾಸ ಐತಾಳ ವಹಿಸಿದ್ದರು. ಆವರ್ಸೆ ಶ್ರೀ ಶಂಕರ ನಾರಾಯಣ ದೇವಳದ ಮೊಕ್ತೇಸರ…

Read More

ಬೆಂಗಳೂರು : ರಂಗಮಂಡಲ ಸಿವಗಂಗ ಟ್ರಸ್ಟ್ ವತಿಯಿಂದ ‘ಬಣ್ಣದ ಬೇಸಿಗೆ’ ಮಕ್ಕಳ ರಂಗ ಶಿಬಿರವನ್ನು ದಿನಾಂಕ 07-04-2024ರಿಂದ 12-05-2024ರವರೆಗೆ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1-00ರವರೆಗೆ ‘ಸಿವಗಂಗ ರಂಗಮಂದಿರ’ದಲ್ಲಿ ಆಯೋಜಿಸಿದೆ. ಶಿಬಿರದಲ್ಲಿ ನಟನೆ, ನೃತ್ಯ, ಸಂಗೀತ, ಚಿತ್ರಕಲೆ, ಮ್ಯಾಜಿಕ್, ಬೊ೦ಬೆಯಾಟ ಕಥಾಪ್ರಸ್ತುತಿ, ಮೂಕಾಭಿನಯ, ಮಕ್ಕಳ ಕವಿತಾವಾಚನ ಕ್ಲೇ-ಮಾಡೆಲಿಂಗ್, ಒರಿಗಾಮಿ, ಗಾಳಿಪಟ, ಯೋಗ-ಧ್ಯಾನ ನಿರೂಪಣಾ ಕಲಿಕೆ ಹಾಗೂ ಮೂಡಲಪಾಯ ಯಕ್ಷಗಾನ, ನಾಟಕ ಕಲಿಕೆ ಮತ್ತು ಪ್ರದರ್ಶನವಿದೆ. ರಂಗನಿರ್ದೇಶಕರು ಹಾಗೂ ಕಲಾವಿದರುಗಳಾದ ನಿರ್ಮಲ ನಾದನ್, ಪ್ರಶಾಂತ ಸಿದ್ಧಿ, ಅರಳಗುಪ್ಪೆ ಪುಟ್ಟಸ್ವಾಮಿ, ವಿಶ್ವನಾಥ ಗುಂಡೀಗೆರೆ, ಮಧು ಆರ್ಯ, ಜಲಜ ಕುಂದಾಪುರ ಇನ್ನಿತರ ರಂಗಭೂಮಿ, ಸಾಹಿತ್ಯ, ಸಿನಿಮಾ, ಸಾಂಸ್ಕೃತಿಕ ವಲಯದ ಸಾಧಕರು ತರಗತಿಗಳನ್ನು ನಡೆಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9448970731, 8197958129 ಇವರನ್ನು ಸಂಪರ್ಕಿಸಿರಿ.

Read More

ಹಟ್ಟಿಕುದ್ರು : ದಿಮ್ಸಾಲ್, ಧಮನಿ ಉಭಯ ಸಂಸ್ಥೆಯ ಸಹಯೋಗದೊಂದಿಗೆ ಯಶಸ್ವೀ ಕಲಾವೃಂದದ ‘ಶ್ವೇತಯಾನ’ದ ಐದನೆಯ ಕಾರ್ಯಕ್ರಮದ ಅಂಗವಾಗಿ ‘ಗಾನವೈಭವ’ ಕಾರ್ಯಕ್ರಮವು ದಿನಾಂಕ 05-03-2024ರಂದು ನಡೆಯಿತು. ಶ್ರೀ ಕ್ಷೇತ್ರದಲ್ಲಿ ನಡೆದ ಏಕದಶೋತ್ತರ ಶತಾಧಿಕ ಸಹಸ್ರ ನಾರೀಕೇಳ ಮಹಾಗಣಪತಿ ಯಾಗದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಅತಿಥಿಯಗಿ ಭಾಗವಹಿಸಿದ ಶ್ರೀಪಾದ ಉಳ್ಳೂರ ಹಟ್ಟಿಕುದ್ರು ಮಾತನಾಡಿ “ಸಂಸ್ಥೆಯ ಪ್ರೌಢಾವಸ್ಥೆಯ ಕಾಲವನ್ನು ಸಂಭ್ರಮಿಸಬೇಕಾದವರು ಕಲಾಸಕ್ತರು. ಕಲಾ ಪ್ರೋತ್ಸಾಹಕರ ನೆರಳಲ್ಲಿ ಬೆಳೆಯಬೇಕಾದ ಸಂಸ್ಥೆ 25 ಸಂವತ್ಸರಗಳನ್ನು ದಾಟಿ ಆಯೋಜಿಸಿಕೊಂಡ ಕಾರ್ಯಕ್ರಮಗಳಿಗೆ ಕಲಾ ಪೋಷಕರು ಕೈಗೆತ್ತಿಕೊಂಡು ನಡೆಸಬೇಕಾದುದು ಜವಾಬ್ದಾರಿ. ಕಲಾಪೋಷಕರು ಯಶಸ್ವಿಯ ಸಾಧನೆಯನ್ನು ಮನಗಂಡು ಯಾನವನ್ನು ಪೂರ್ಣಗೊಳಿಸುತ್ತಾರೆ.” ಎಂದು ಹೇಳಿದರು. ಉಪನ್ಯಾಸಕ ರಾಘವೇಂದ್ರ ತುಂಗ, ದುಂಡಿರಾಜ್, ಲಂಬೋದರ ಹೆಗಡೆ, ವೆಂಕಟೇಶ ವೈದ್ಯ, ಅಕ್ಷಯ್ ಆಚಾರ್, ನಿನಾದ ಪುರಪ್ಪನಮನೆ, ಚಂದ್ರಯ್ಯ ಆಚಾರ್, ಪೂಜಾ ಆಚಾರ್, ಕಿಶನ್ ಕುಂದಾಪುರ ಉಪಸ್ಥಿತರಿದ್ದರು.

Read More

ಕಟೀಲು: ಮಂಗಳೂರಿನ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಜನಪದ ವಿಚಾರ, ಕಲೆ ಮತ್ತು ಸಂಸ್ಕೃತಿಯ ಮೆಲುಕು ಜನಪದ ನುಡಿತೋರಣ’ ಕಾರ್ಯಕ್ರಮವು ದಿನಾಂಕ 01-03-2024 ರಂದು ಕನ್ನಡ ಸಾಹಿತ್ಯ ಸಂಘದ ವತಿಯಿಂದ ನಡೆಯಿತು. ಕಟೀಲು ದೇವಳದ ಆನುವಂಶಿಕ ಮುಕ್ತೇಸರರಾದ ಸನತ್ ಕುಮಾರ್ ಕೊಡೆತ್ತೂರು ಗುತ್ತು ಕಾರ್ಯಕ್ರಮವನ್ನು ಉದ್ಘಾಟಿಸಿ, ಶುಭಹಾರೈಸಿದರು.ಜಾನಪದ ವಿದ್ವಾಂಸರಾದ ಸಾಹಿತಿ ಮುದ್ದು ಮೂಡುಬೆಳ್ಳೆ ಜನಪದ ಮತ್ತು ಜಾನಪದ ನಡುವಿನ ವ್ಯತ್ಯಾಸವನ್ನು ತಿಳಿಸಿ ಜನಪದ ವಿಚಾರ ಕಲೆ ಸಂಸ್ಕೃತಿಯ ಬಗೆಗೆ ಸವಿವರವಾದ ಮಾಹಿತಿ ನೀಡಿದರು. ಬಿಪಿನ್ ಚಂದ್ರ ಶೆಟ್ಟಿ, ಪ್ರವೀಣ್ ಭಂಡಾರಿ, ವಿದ್ಯಾರ್ಥಿ ನಾಯಕ ಕೆ. ದೀಪಕ್, ಎಲ್. ಕೃಷ್ಣರಾಜ್ ಐತಾಳ್, ಪುಷ್ಪರಾಜ್ ಶೆಟ್ಟಿ, ಕಾರ್ಯದರ್ಶಿ ಬಿ. ನಿಶಾ, ಕನ್ನಡ ಸಾಹಿತ್ಯ ಸಂಘದ ಪ್ರತಿನಿಧಿಗಳಾದ ತ್ರಿಷಾ ಶೆಟ್ಟಿ, ವಿಶಾಖ ಮತ್ತು ವೈಶಾಖ್ ಉಪಸ್ಥಿತರಿದ್ದರು. ವೈಷ್ಣವಿ, ನಾಗರಾಜ್, ವೈಶಾಖ್ ಸಂವಾದದಲ್ಲಿ ಭಾಗಿಯಾದರು. ವಿದ್ಯಾರ್ಥಿನಿ ಬಿಂದ್ಯಾ ಅವರ ಸ್ವರಚಿತ ಕಥೆಯನ್ನು ಹೇಮಲತಾ ವಾಚಿಸಿದರು. ವಿದ್ಯಾರ್ಥಿಗಳಾದ ಲಕ್ಷ್ಮೀಪತಿ ಮತ್ತು ಮೋಹಿತ್ ಪ್ರಾರ್ಥಿಸಿ, ರಂಜನಾ…

Read More