Author: roovari

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಏರ್ಪಾಟಾಗಿದ್ದು ವರಕವಿ ದ.ರಾ. ಬೇಂದ್ರೆಯವರ 129ನೆಯ ಜನ್ಮದಿನದ ಕಾರ್ಯಕ್ರಮವು ದಿನಾಂಕ 31 ಜನವರಿ 2025ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ಮಾತನಾಡಿ “ಬೇಂದ್ರೆಯವರ ದೃಷ್ಟಿ ‘ಬಡತನ ಸಿರಿತನ ಕಡೇತನಕ ಉಳಿದಾವೇನ’ ಎಂಬುದು. ಅಲ್ಲದೆ ಅವರ ಕಾವ್ಯದ ಮೂಲದೃಷ್ಟಿ – ಎನ್ನಪಾಡೆನಗಿರಲಿ ಅದರ ಹಾಡನ್ನಷ್ಟೇ ನೀಡುವೆನು ರಸಿಕ ನಿನಗೆ – ಎಂಬ ರಸಯೋಗಿಯ ಸಂಕಲ್ಪದಿಂದ ಪ್ರಚೋದಿತವಾದದ್ದು. ‘ರಸವೇ ಜನನ ವಿರಸವೇ ಮರಣ ಸಮರಸವೇ ಜೀವನ’ ಎಂದು ಬದುಕನ್ನು ಎದೆಗಪ್ಪಿಕೊಂಡು ಅರಳಿದ ಕಾವ್ಯಚೇತನ ಅವರದ್ದು. ಬೇಂದ್ರೆಯವರ ಕಾವ್ಯದ ಮತ್ತೊಂದು ವೈಶಿಷ್ಟ್ಯ ಎಂದರೆ ಬದುಕೇ ಕಾವ್ಯವಾಗುತ್ತ ಹೋಗುವ ಪವಾಡಸದೃಶ ಶಕ್ತಿ. ಬದುಕೇ ಕಾವ್ಯವಾಗುವ ಸಹಜ ಕವಿ ಹೃದಯವನ್ನು ಇಂಥ ಕಡೆ ಗುರುತಿಸಬಹುದು. ಬದುಕಿಗೆ ತೀವ್ರವಾಗಿ ಸ್ಪಂದಿಸುವ ಕವಿಚೇತನವಾದದ್ದರಿಂದಲೇ ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ, ಪಾತರಗಿತ್ತಿ ಪಕ್ಕಗಳ ವೈಭವಗಳು ನವಿಲು ಗರಿಗೆದರಿದಂತೆ ಮೈತೆರೆಯುತ್ತಾ ಹೋಗುತ್ತದೆ. ಶ್ರಾವಣವಾಗಲಿ, ಧಾರವಾಡದ ಚೆಲುವಾಗಲಿ…

Read More

ಕವಿ ಸಿದ್ದಲಿಂಗಯ್ಯನವರು ದೇವಯ್ಯ ಮತ್ತು ವೆಂಕಟಮ್ಮ ದಂಪತಿಯ ಪುತ್ರ. 1954 ರ ಫೆಬ್ರವರಿ 3ರಂದು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಮಂಚನಬೆಲೆಯಲ್ಲಿ ಜನಿಸಿದರು. ಎಳವೆಯಿಂದಲೇ ಇವರಿಗೆ ಕವಿತೆಗಳನ್ನು ಬರೆಯುವ ಹವ್ಯಾಸವಿತ್ತು ಮತ್ತು ವಿದ್ಯಾರ್ಥಿ ದೆಸೆಯಿಂದಲೇ ಉತ್ತಮ ಭಾಷಣಕಾರರಾಗಿದ್ದರು. ಅಂಬೇಡ್ಕರ್, ಪೆರಿಯಾರ್, ವಸುದೇವ, ಭೂಪಾಲ, ಲೋಹಿಯಾ ಮೊದಲಾದವರ ವಿಚಾರಧಾರೆಗಳಿಂದ ಪ್ರೇರಿತರಾದ ಇವರು ಸಮಾಜದಲ್ಲಿನ ಅಸಮಾನತೆಗಳ ಬಗ್ಗೆ ತಮ್ಮ ಸಿಟ್ಟು ಆಕ್ರೋಶಗಳನ್ನು ಅಭಿವ್ಯಕ್ತಿಗೊಳಿಸಲು ಕಾವ್ಯದ ಮಾಧ್ಯಮವನ್ನು ಆಯ್ಕೆ ಮಾಡಿಕೊಂಡರು. ಸಾಮಾಜಿಕ ಅಸಮಾನತೆಗಳನ್ನು ಖಂಡಿಸಿ, ಸಮಾನತೆಗಳಿಗಾಗಿ ದಲಿತ ಬರವಣಿಗೆ ಮತ್ತು ದಲಿತ ಹೋರಾಟ ಮಾಡಿದ ಸಿದ್ದಲಿಂಗಯ್ಯನವರು ‘ದಲಿತ ಕವಿ’ ಎಂದೇ ಪ್ರಸಿದ್ಧರಾದರು. ದಲಿತ ಸಂಘರ್ಷ ಸಮಿತಿ ಮತ್ತು ಬಂಡಾಯ ಸಾಹಿತ್ಯ ಸಂಘಟನೆಗಳ ಸ್ಥಾಪಕರಲ್ಲಿ ಇವರೂ ಒಬ್ಬರು. ಸಿದ್ದಲಿಂಗಯ್ಯನವರು ಬರವಣಿಗೆಯ ಜೊತೆಗೆ ನಿರಂತರವಾಗಿ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡವರು. ಅಂಬೇಡ್ಕರ್ ಮತ್ತು ರಾಮ ಮನೋಹರ ಲೋಹಿಯಾ ಇವರುಗಳ ಕೃತಿಗಳ ಕನ್ನಡ ಭಾಷಾಂತರ ಮತ್ತು ಸಂಪಾದನಾ ಸಮಿತಿ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಮಂಡಳಿ, ಜಾನಪದ ಸಾಹಿತ್ಯ…

Read More

ವೃತ್ತಿ ರಂಗಭೂಮಿಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ನಾಟಕದ ಪಾತ್ರಗಳಿಗೆ ಸಹಜವಾದ ವೇಷಭೂಷಣಗಳನ್ನು ಅಳವಡಿಸಿ, ಸೃಜನಶೀಲತೆಯೊಂದಿಗೆ ರಂಗ ಪ್ರದರ್ಶನ ಮಾಡಿ, ಕನ್ನಡ ರಂಗಭೂಮಿಯನ್ನು ಜನಪ್ರಿಯಗೊಳಿಸಿದ ಖ್ಯಾತಿ ಎ. ವಿ. ವರದರಾಜರದ್ದು. ಎ. ವಿ. ವರದಾಚಾರ್ಯ ಎಂದೇ ಪ್ರಸಿದ್ಧರಾದ ಅನಮಲಪಲ್ಲಿ ವೆಂಕಟ ವರದಾಚಾರ್ಯರು 02 ಫೆಬ್ರವರಿ 1869ರಲ್ಲಿ ಜನಿಸಿದ್ದು ಚಿತ್ರದುರ್ಗದಲ್ಲಿ. ತಂದೆ ಶಿರಸ್ತೆದಾರ್ ರಂಗಸ್ವಾಮಿ ಅಯ್ಯಂಗಾರ್ ಸಂಗೀತ ಪ್ರಿಯರಾಗಿದ್ದರು. ಎಳವೆಯಲ್ಲಿಯೇ ಮಗನಲ್ಲಿದ್ದ ಸಂಗೀತ ಆಸಕ್ತಿಯನ್ನು ಕಂಡುಕೊಂಡು, ಸಾಂಪ್ರದಾಯಿಕ ಶಿಕ್ಷಣದೊಂದಿಗೆ ವಿದ್ವಾನ್ ವೆಂಕಟೇಶ ಶಾಸ್ತ್ರಿಗಳಲ್ಲಿ ಬಾಲ್ಯದಿಂದಲೇ ಸಂಗೀತ ಶಿಕ್ಷಣ ಕೊಡಿಸಿದರು. ವಿದ್ಯಾಭ್ಯಾಸದಲ್ಲಿಯೂ ಮುಂದಿದ್ದ ವರದಾಚಾರ್ಯರು ತಮ್ಮ ಚುರುಕು ಬುದ್ಧಿ ಮತ್ತು ಉತ್ತಮ ಕಂಠಸಿರಿಯ ವರ್ಚಸ್ಸಿನಿಂದ ಎಲ್ಲರ ಪ್ರೀತಿಗೆ ಪಾತ್ರರಾದರು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿದ ಮೇಲೆ ತನ್ನ ಸುಂದರ ದೇಹದಾರ್ಢ್ಯ ಹಾಗೂ ಕಂಠಸಿರಿಯಿಂದ ಕಲಾರಸಿಕರ ಗಮನ ಸೆಳೆದರು. ಈ ಮಧ್ಯೆ ಅವರ ತಾಯಿಯ ಮರಣದಿಂದಾಗಿ ನಿರುತ್ಸಾಹದಿಂದ ಕುಗ್ಗಿ ಹೋಗಿ, ಸಂಗೀತ ಕಛೇರಿ ನಾಟಕಗಳಲ್ಲಿಯೇ ಕಾಲಕಳೆಯತೊಡಗಿದರು. ತಾವಾಗಿಯೇ ವಿವಿಧ ಕಂಪನಿ ನಾಟಕಗಳಲ್ಲಿ ಕೇಳಿಕೊಂಡು ಮಾಡಿದ…

Read More

ಉಡುಪಿ : ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಆಯೋಜಿಸಿದ ಸಂಸ್ಕೃತಿ ಉತ್ಸವದ ಎರಡನೇ ದಿನದ ಕಾರ್ಯಕ್ರಮ ದಿನಾಂಕ 31 ಜನವರಿ 2025ನೇ ಶುಕ್ರವಾರದಂದು ಉಡುಪಿ ಕುಂಜಿಬೆಟ್ಟುವಿನ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಉಡುಪಿ ಪಂಚಮಿ ಟ್ರಸ್ಟ್ ಪ್ರಾಯೋಜಿತ ಪಂಚಮಿ ಪುರಸ್ಕಾರ ಸ್ವೀಕರಿಸಿ‌ದ ಖ್ಯಾತ ರಂಗ ನಿರ್ದೇಶಕ ಹಾಗೂ ಚಿತ್ರನಟ ಮಂಡ್ಯ ರಮೇಶ್‌ ಮಾತನಾಡಿ “ಜಗತ್ತಿನ ಎಲ್ಲ ಕಲೆಗಳ ಮೂಲ ಅಸ್ತಿತ್ವ ಜಾನಪದದಲ್ಲಿದೆ. ರಾಮಾಯಣ, ಮಹಾಭಾರತಗಳು ಬದುಕಿನ ರೂಪಕಗಳು. ರಂಗ ಕಲಾವಿದನಾಗುವುದು ಸುಲಭದ ಮಾತಲ್ಲ. ಅದು ಸಾಹಸದ ಕೆಲಸ. ಗಾಂಧಿಯನ್ನು ಬದಲಾಯಿಸಿರುವುದೂ ಇದೇ ರಂಗಭೂಮಿ” ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಮಾತನಾಡಿ “ನಾಟಕ, ಕಲೆ, ಸಂಗೀತ ಮನುಷ್ಯತ್ವ ಸಂಬಂಧ ಬೆಳೆಸಲು ಸಹಾಯ ಮಾಡುತ್ತದೆ. ಮನುಷ್ಯತ್ವದ ನೆಲೆಯಲ್ಲಿ ಸಂಬಂಧ ಗಟ್ಟಿಗೊಳಿಸುವುದು ಇಂದಿನ ಅಗತ್ಯ. ಮಕ್ಕಳು ಹಾಗೂ ಯುವಜನರಲ್ಲಿ ಮಾನವೀಯ ಮೌಲ್ಯಗಳನ್ನು ಉಳಿಸಿ, ಬೆಳೆಸಿಕೊಳ್ಳಬೇಕಾದರೆ ಅವರು ಕಲೆಯಲ್ಲಿ ತೊಡಗಿಕೊಳ್ಳಬೇಕು.…

Read More

ಶಿವಮೊಗ್ಗ : ಸುಮುಖ ಕಲಾ ಕೇಂದ್ರ (ರಿ.) ಇದರ ಏಳನೇ ವಾರ್ಷಿಕೋತ್ಸವ ಮತ್ತು ದಿ.ಹಳ್ಳಾಡಿ ಸುಬ್ರಾಯ ಮಲ್ಯ ಸ್ಮಾರಕ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 08 ಫೆಬ್ರವರಿ 2025ರ ಶನಿವಾರದಂದು ಶಿವಮೊಗ್ಗದ ಸುವರ್ಣ ಸಂಸ್ಕೃತಿ ಭವನದಲ್ಲಿ ನಡೆಯಲಿದೆ. ಸುಮುಖ ಕಲಾ ಕೇಂದ್ರದ ಅಧ್ಯಕ್ಷರಾದ ಎಂ. ಎಂ. ರವಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಶಿವಮೊಗ್ಗದ ಸಲಹಾ ವೈದ್ಯರಾದ ಡಾ. ರತ್ನಾಕರ ಇವರು ಉದ್ಘಾಟಿಸಲಿದ್ದಾರೆ. ಭದ್ರಾವತಿಯ ಭದ್ರಾ ನರ್ಸಿಂಗ್ ಹೋಮ್ ಇದರ ಡಾ. ಟಿ. ನರೇಂದ್ರ ಭಟ್, ಕರ್ನಾಟಕ ಕೊಂಕಣಿ ಅಕಾಡಮಿಯ ಮಾಜಿ ಸದಸ್ಯರಾದ ಬಿ. ಎಸ್. ಕಾಮತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಕೆ. ಜಿ. ರಾಮರಾವ್ ಸಾಕೇಶ ಕಲಾವಿದರು ಕೆಳಮನೆ ಇವರಿಗೆ ದಿ. ಹಳ್ಳಾಡಿ ಸುಬ್ರಾಯ ಮಲ್ಯ ಸ್ಮಾರಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಅಭ್ಯುದಯ ಶಿವಮೊಗ್ಗ ಇದರ ಅಧ್ಯಕ್ಷರಾದ ಶ್ರೀ ಲಕ್ಷ್ಮೀನಾರಾಯಣ ಕಾಶಿ ಅಭಿನಂದನಾ ಭಾಷಣಗೈಯ್ಯಲ್ಲಿದ್ದಾರೆ. ಸಭಾಕಾರ್ಯಕ್ರಮದ ಬಳಿಕ ಶಿವಮೊಗ್ಗದ ಕಿರಣ ಆರ್. ಪೈ ಇವರ ನಿರ್ದೇಶನದಲ್ಲಿ…

Read More

ಸುಳ್ಯ: ಇತ್ತೀಚೆಗೆ ಅಗಲಿದ ಹಿರಿಯ ಪತ್ರಕರ್ತ ಗುರುವಪ್ಪ ಎನ್.ಟಿ.ಬಾಳೆಪುಣಿ ಅವರಿಗೆ ಸುಳ್ಯ ಪ್ರೆಸ್ ಕ್ಲಬ್ ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮವು ದಿನಾಂಕ 31 ಜನವರಿ 2025ರಂದು ನಡೆಯಿತು. ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಮೌನ ಪ್ರಾರ್ಥನೆ ನಡೆಸಿ ನುಡಿನಮನ ಸಲ್ಲಿಸಲಾಯಿತು. ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷರಾದ ಹರೀಶ್ ಬಂಟ್ವಾಳ್ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ. ಪ್ರೆಸ್ ಕ್ಲಬ್ ಕಾರ್ಯದರ್ಶಿ ಜಯಪ್ರಕಾಶ್ ಕುಕ್ಕೇಟ್ಟಿ, ದ. ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಗಂಗಾಧರ ಕಲ್ಲಪಳ್ಳಿ, ಕಾರ್ಯನಿರತ ಪತ್ರಕರ್ತರ ಸಂಘದ ಸುಳ್ಯ ತಾಲೂಕು ಅಧ್ಯಕ್ಷರಾದ ಲೋಕೇಶ್ ಪೆರ್ಲಂಪಾಡಿ, ಪತ್ರಕರ್ತರಾದ ದುರ್ಗಾಕುಮಾರ್ ನಾಯರ್‌ಕೆರೆ, ಗಣೇಶ್ ಮಾವಂಜಿ ನುಡಿನಮನ ಸಲ್ಲಿಸಿದರು. ಪ್ರೆಸ್ ಕ್ಲಬ್ ಕೋಶಾಧಿಕಾರಿ ರಮೇಶ್ ನೀರಬಿದಿರೆ, ಕರ್ನಾಟಕ ಜರ್ನಲಿನ್ಸ್ ಯೂನಿಯನ್ ಅಧ್ಯಕ್ಷೆಯಾದ ಜಯಶ್ರೀ ಕೊಯಿಂಗೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರೆ ಪತ್ರಕರ್ತರಾದ ಗಂಗಾಧರ ಮಟ್ಟಿ,ಶಿವ ಪ್ರಸಾದ್ ಕೇರ್ಪಳ, ಶರೀಫ್ ಜಟ್ಟಿಪಳ್ಳ, ತೇಜೇಶ್ವರ ಕುಂದಲ್ಪಾಡಿ, ಹಸೈನಾರ್ ಜಯನಗರ, ಮಿಥುನ್ ಕರ್ಲಪ್ಪಾಡಿ, ಪೂಜಾಶ್ರೀ ವಿತೇಶ್ ಕೋಡಿ, ಪ್ರಜ್ಞಾ ಎನ್.ನಾರಾಯಣ್,…

Read More

ಮಹಿಳೆಯರ ಶೋಷಣೆ ಮತ್ತು ಸ್ತ್ರೀಯರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ತಮ್ಮ ಖಚಿತ ಅಭಿಪ್ರಾಯ ಮಂಡಿಸಿರುವ ಡಾ. ವಿಜಯಶ್ರೀ ಸಬರದ ಇವರು 1957 ಫೆಬ್ರವರಿ 01ರಂದು ಬೀದರ್ ನಲ್ಲಿ ಗುಣವಂತ ರಾವ್ ಪಾಟೀಲ್ ಮತ್ತು ಸಂಗಮ್ಮನವರ ಪುತ್ರಿಯಾಗಿ ಜನಿಸಿದರು. ಕನ್ನಡದ ಬಂಡಾಯ ಸಾಹಿತ್ಯದ ಸಂದರ್ಭದಲ್ಲಿ ಮಹಿಳಾ ಶೋಷಣೆಯ ಬಗ್ಗೆ ತಮ್ಮ ಬರವಣಿಗೆಯ ಮೂಲಕ ಕನ್ನಡ ಸಾಹಿತ್ಯಾಭಿಮಾನಿಗಳ ಚಿತ್ತದಲ್ಲಿ ಹೊಸದೊಂದು ಆಯಾಮ ಸೃಷ್ಟಿಸಿದ್ದಾರೆ. ಪ್ರಾರಂಭಿಕ ಶಿಕ್ಷಣ ಹಾಗೂ ಕಾಲೇಜು ಪದವಿ ಶಿಕ್ಷಣವನ್ನು ಬೀದರ್ ನಲ್ಲಿ ಪಡೆದ ಇವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. ‘ಅನುಪಮಾ ನಿರಂಜನರ ಕಾದಂಬರಿಗಳು – ಒಂದು ಅಧ್ಯಯನ’ ಎಂಬ ಪ್ರಬಂಧ ಮಂಡಿಸಿ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ. ಪದವಿ ಪಡೆದರು. ಬೀದರಿನ ಅಕ್ಕಮಹಾದೇವಿ ಮಹಿಳಾ ವಿದ್ಯಾಲಯದಲ್ಲಿ ಉಪನ್ಯಾಸಕಿಯಾಗಿ ವೃತ್ತಿ ಜೀವನ ಆರಂಭಿಸಿದರು. ನಂತರ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರವಾಚಕರಾಗಿ ಕಾರ್ಯ ನಿರ್ವಹಿಸಿದರು. ಸದ್ಯ ಇವರು ವಿಜಯಪುರ ಮಹಿಳಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕಿಯಾಗಿ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರಾಗಿ…

Read More

ಧಾರವಾಡ : ವರಕವಿ ಡಾ. ದ.ರಾ. ಬೇಂದ್ರೆಯವರ 129ನೆಯ ಜನ್ಮದಿನವಾದ ದಿನಾಂಕ 31 ಜನವರಿ 2025ರಂದು ಧಾರವಾಡದ ಕಡಪಾ ಮೈದಾನದಲ್ಲಿ ಇರುವ ಪುತ್ಥಳಿಗೆ (ಪುತ್ಥಳಿಯ ಕೆಳಗೆ ಅವರ ಚಿತಾಭಸ್ಮ ತುಂಬಿದ ಕಲಶವೂ ಇದೆ) ಧಾರವಾಡದ ಸಾಧನಕೇರಿ ಮತ್ತು ಬೇಂದ್ರೆ ಅಭಿಮಾನಿ ಬಳಗದ ವತಿಯಿಂದ ಮಾಲಾರ್ಪಣೆ ಮಾಡಿ ನುಡಿ ನಮನದ ಮೂಲಕ ಗೌರವ ಸಲ್ಲಿಸಲಾಯಿತು. ಸಾಹಿತಿ ಡಾ. ಶ್ಯಾಮಸುಂದರ ಬಿದರಕುಂದಿ, ಧಾರವಾಡ ಮಹಾನಗರಪಾಲಿಕೆ ಸದಸ್ಯ ಸುರೇಶ ಬೇದ್ರೆ, ಶಂಕರ ಕುಂಬಿ, ಡಾ. ಹ.ವೆಂ. ಕಾಖಂಡಿಕಿ, ಮಲ್ಲಿಕಾರ್ಜುನ ಹಿರೇಮಠ ಮತ್ತು ರಾಜೀವ ಪಾಟೀಲ ಕುಲಕರ್ಣಿ ಮುಂತಾದವರು ಮಾತನಾಡಿ ಕೇವಲ ಧಾರವಾಡಕಷ್ಟೇ ಅಲ್ಲ, ಈ ನಾಡು, ಈ ರಾಷ್ಟ್ರ, ಹೊರ ರಾಷ್ಟ್ರಗಳೂ ಸೇರಿದಂತೆ ‘ವಿಶ್ವಕವಿ’ ಎನಿಸಿಕೊಂಡ ವರಕವಿಯ ಇಲ್ಲಿಯ ಪುತ್ಥಳಿ ತೀರ ಚಿಕ್ಕದಾಗಿದ್ದು, ಧಾರವಾಡದ ಸಾಂಸ್ಕೃತಿಕ ರಂಗದ ಮೇರು ವ್ಯಕ್ತಿ, ಭಾವಗೀತೆಗಳ ಚಕ್ರವರ್ತಿಗೆ ಸೂಕ್ತ ಸ್ಮಾರಕವಾಗುವಂತೆ ಮೂರ್ತಿಯನ್ನು ಇನ್ನಷ್ಟು ಎತ್ತರಗೊಳಿಸಿ ಈ ಪವಿತ್ರ ಸ್ಥಳವನ್ನು ಸೌಂದರ್ಯೀಕರಣಗೊಳಿಸಿ ಇಂತಹ ಜಾಗೆ ಆಕ್ರಮಿಸಿಕೊಂಡ ಅನೇಕ ಕಟೌಟ ಮತ್ತು ಬೋರ್ಡುಗಳನ್ನು…

Read More

ಲಿಂಗ ವ್ಯತ್ಯಾಸದ ಹೆಸರಿನಲ್ಲಿ ಸಮಾಜವು ಅನ್ಯಾಯ, ತಾರತಮ್ಯ ಹಾಗೂ ಅಸಮಾನ ಅವಕಾಶಗಳ ನೆಲೆವೀಡು ಆಗಬಾರದು ಅನ್ನುವುದು ಸ್ತ್ರೀವಾದಿ ಹೋರಾಟದ ಮುಖ್ಯ ಉದ್ದೇಶ. ಈ ಅಸಮಾನತೆಯ ಬೇರುಗಳನ್ನು ಕಿತ್ತೊಗೆದು ಹೊಸದೊಂದು ವ್ಯವಸ್ಥೆಯನ್ನು ಹುಟ್ಟು ಹಾಕುವ ಉದ್ದೇಶವನ್ನಿಟ್ಟುಕೊಂಡು ಕಳೆದ ಶತಮಾನದಿಂದೀಚೆಗೆ ಜಗತ್ತಿನ ಎಲ್ಲ ಮೂಲೆಗಳಲ್ಲೂ ಹೋರಾಟಗಳು ನಡೆದಿವೆ. ಸ್ತ್ರೀಪುರುಷರಾದಿಯಾಗಿ ಅನೇಕರು ಈ ಬಗ್ಗೆ ಚಿಂತನೆಗಳನ್ನು ಮಾಡಿದ್ದಾರೆ. ಲೇಖನಗಳನ್ನು ಬರೆದಿದ್ದಾರೆ. ಚರ್ಚೆಗಳನ್ನು ನಡೆಸಿದ್ದಾರೆ. ಇವುಗಳ ಹೊರತಾಗಿ ನಮ್ಮ ಜನಪದರು ಹೋರಾಟದ ಯಾವ ಅರಿವೂ ಇಲ್ಲದೆಯೇ ರಚಿಸಿದ ಮೌಖಿಕ ಸಾಹಿತ್ಯಗಳನ್ನೂ ಬೆಳಕಿಗೆ ತರುವ ಪ್ರಯತ್ನಗಳಾಗಿವೆ. ಅಲ್ಲದೆ ಸ್ತ್ರೀಯರಿಗೆ ಪ್ರಾಮುಖ್ಯ ಕೊಟ್ಟಿದ್ದ ಮಾತೃಮೂಲೀಯ ಪದ್ಧತಿಯ ಬಗ್ಗೆ ಮರು ಚಿಂತನೆಗಳಾಗಿವೆ. ಪಾಶ್ಚಾತ್ಯರಲ್ಲಿ ಆರಂಭವಾದ ಸ್ತ್ರೀವಾದಿ ಚಳುವಳಿಯು ಭಾರತದಲ್ಲೂ ತನ್ನ ನೆಲೆಗಳನ್ನು ಸ್ಥಾಪಿಸಿಕೊಂಡಾಗ ಸ್ತ್ರೀಯರ ಪರವಾಗಿ ದೇಶದಲ್ಲಿ ಒಂದು ಹೊಸ ಜಾಗೃತಿಯ ಅಲೆಯುಂಟಾದದ್ದು ಇಂದು ಇತಿಹಾಸ. ಇದರ ಪರಿಣಾಮವಾಗಿ ಸ್ತ್ರೀಯರ ಪರವಾಗಿ ಅವರ ರಕ್ಷಣೆಗೋಸ್ಕರ ಕಾನೂನುಗಳು ಹುಟ್ಟಿಕೊಂಡವು. ಅವರಿಗೆ ಹತ್ತಾರು ಬಗೆಯಲ್ಲಿ ಸೌಕರ್ಯ-ಸವಲತ್ತುಗಳಿಗಾಗಿ ಸರಕಾರವು ಅವಕಾಶಗಳನ್ನು ರೂಪಿಸಿತು. ಅವುಗಳ ಸದ್ವಿನಿಯೋಗಗಳ ಜತೆಗೇ…

Read More

ಕಾಸರಗೋಡು : ಕಾಸರಗೋಡು ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದಲ್ಲಿ ದಿನಾಂಕ 02 ಫೆಬ್ರವರಿ 2025 ರಂದು ಅಪರಾಹ್ನ 1-00 ಗಂಟೆಗೆ ಕನ್ನಡ ಪುಸ್ತಕ ಪ್ರಾಧಿಕಾರದ ಬಹುನಿರೀಕ್ಷಿತ ‘ಮನೆಗೊಂದು ಗ್ರಂಥಾಲಯ’ ಲಕ್ಷ ಗ್ರಂಥಾಲಯಗಳ ಯೋಜನೆಯ ಪ್ರಚಾರ ಹಾಗೂ ಕರಪತ್ರ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಗಡಿನಾಡು ಕಾಸರಗೋಡಿನಲ್ಲಿ ಈ ಕಾರ್ಯಕ್ರಮವನ್ನು ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರದ ಅಧ್ಯಕ್ಷರಾದ ಡಾ. ಮಾನಸ ಇವರು ಕನ್ನಡ ಭವನ ಮತ್ತು ಕಾಸರಗೋಡಿನ ವಿವಿಧ ಸಂಸ್ಥೆಗಳನ್ನು ಸಂಪರ್ಕಿಸುವ ಉದ್ದೇಶವನ್ನು ಇಟ್ಟುಕೊಂಡು ಹಮ್ಮಿಕೊಂಡಿದ್ದಾರೆ. ಪ್ರಾಧಿಕಾರ ಅಧ್ಯಕ್ಷರಾದ ಡಾ. ಮಾನಸ ಲಕ್ಷ ಗ್ರಂಥಾಲಯ ಯೋಜನೆ, ಮನೆಗೊಂದು ಗ್ರಂಥಾಲಯ ರೂಪು ರೇಷೆ ವಿವರಿಸಲಿದ್ದಾರೆ, ಕನ್ನಡ ಭವನ ರೂವಾರಿಗಳಾದ ಡಾ. ವಾಮನ್ ರಾವ್ ಬೇಕಲ್ -ಸಂದ್ಯಾ ರಾಣಿ ದಂಪತಿಗೆ ಪುಸ್ತಕ ನೀಡಿ ಗಡಿನಾಡು ಕಾಸರಗೋಡಿನಲ್ಲಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಡಾ. ವಾಮನ್ ರಾವ್ ಬೇಕಲ್ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅಥಿತಿಯಾಗಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಎ.ಆರ್. ಸುಬ್ಬಯ್ಯಕಟ್ಟೆ,…

Read More