Author: roovari

ಮಂಗಳೂರು : ಹಿಂದೂಸ್ತಾನೀ ಶಾಸ್ತ್ರೀಯ ಸಂಗೀತವನ್ನು ಯುವ ಜನತೆಯಲ್ಲಿ ಜನಪ್ರಿಯಗೊಳಿಸುವ ಉದ್ದೇಶದಿಂದ ಮಂಗಳೂರಿನ ಸಂಗೀತ ಭಾರತಿ ಫೌಂಡೇಶನ್ ಸಂಸ್ಥೆಯು ದಿನಾಂಕ 08 ಮತ್ತು 09 ಫೆಬ್ರವರಿ 2025ರಂದು ‘ಯುವ ಮಹೋತ್ಸವ 2025’ವನ್ನು ಆಯೋಜಿಸಿದೆ. ಈ ಯುವ ಮಹೋತ್ಸವದಲ್ಲಿ ರಾಷ್ಟ್ರಮಟ್ಟದ ಸಂಗೀತ ಸ್ಪರ್ಧೆ ಹಾಗೂ ವಿಜೇತರಿಗೆ ಪುರಸ್ಕಾರ ಸಮಾರಂಭವನ್ನು ಮಂಗಳೂರಿನ ಡಾನ್ ಭಾಸ್ಕೋ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಇದೊಂದು ರಾಷ್ಟ್ರಮಟ್ಟದ ಸ್ಪರ್ಧೆಯಾಗಿದ್ದು, ಕೊನೆಯ ಸುತ್ತಿನಲ್ಲಿ 18ರಿಂದ 30 ವರ್ಷದೊಳಗಿನ 24 ಯುವ ಸಂಗೀತಗಾರರು ಭಾಗವಹಿಸುತ್ತಿದ್ದಾರೆ. ನೋಂದಾಯಿತ ಸ್ಪರ್ಧಿಗಳನ್ನು ಆನ್‌ಲೈನ್‌ನಲ್ಲಿ ಆಯ್ಕೆ ಮಾಡಿ ಕೊನೆಯ ಸುತ್ತಿನ ಸ್ಪರ್ಧೆಗೆ 24 ಮಂದಿ ಕಲಾವಿದರನ್ನು ಆಯ್ಕೆ ಮಾಡಲಾಗಿದೆ. ವಾದ್ಯ ವಾದನ (ತಬ್ಲಾ ಮತ್ತು ಪಕವಾಜ್ ಹೊರತುಪಡಿಸಿ) ಹಾಗೂ ಹಾಡುಗಾರಿಕೆ ವಿಭಾಗದಲ್ಲಿ ಪ್ರತ್ಯೇಕ ಸ್ಪರ್ಧೆ ಇದ್ದು, ಪ್ರಥಮ ಸ್ಥಾನಿಗೆ ರೂ.60,000/-, ದ್ವಿತೀಯ ಸ್ಥಾನಿಗೆ ರೂ.40,000/- ಹಾಗೂ ತೃತೀಯ ಸ್ಥಾನಿಗೆ ರೂ.20,000/- ನಗದು ಬಹುಮಾನ ನೀಡಲಾಗುವುದು. ಇದಲ್ಲದೆ ಪ್ರಥಮ ಸ್ಥಾನ ವಿಜೇತರಿಗೆ ಸ್ವರ ಭಾರತಿ ಬಿರುದು ಪ್ರದಾನ ಮಾಡಲಾಗುವುದು. ಅಂತಾರಾಷ್ಟ್ರೀಯ ಮಟ್ಟದ…

Read More

ನಂಜನಗೂಡು : ನಂಜನಗೂಡಿನ ಶಂಕರ ಮಠದಲ್ಲಿ ಶ್ರೀ ಗುರುಚರಿತ್ರೆ ಪಾರಾಯಣ ಸಪ್ತಾಹ ದಿನಾಂಕ 02 ಫೆಬ್ರವರಿ 2025 ರಿಂದ 09 ಫೆಬ್ರವರಿ 2025ರ ವರೆಗೆ ನಡೆಯಲಿದ್ದು, ಇದರ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಶ್ರೀ ಕ್ಷೇತ್ರದಲ್ಲಿ ನಡೆಯಲಿದೆ. ದಿನಾಂಕ 02 ಫೆಬ್ರವರಿಯಂದು ವಿದ್ವಾನ್ ನಾಗಚೇತನ್ ಇವರಿಂದ ‘ಶ್ರೀ ಮದ್ವಾಲ್ಮೀಕಿ ರಾಮಾಯಣ’ದ ಸಂಗೀತ ಪ್ರವಚನ ನಡೆಯಲಿದ್ದು, ಫೆಬ್ರವರಿ 3 ರಂದು ವಿದ್ವಾನ್ ಎಂ. ಎಸ್. ದೀಪಕ್ ಮತ್ತು ತಂಡದವರಿಂದ ಹಾಡುಗಾರಿಕೆ ನಡೆಯಲಿದೆ. ಫೆಬ್ರವರಿ 4ರಂದು ವಿದುಷಿ ಶ್ರೀಮತಿ ರಕ್ಷಿತಾ ವಿಕ್ರಂ ಸಿಂಹ ಇವರಿಂದ ತಂಜಾವೂರಿನ ಶೈಲಿಯ ಭರತನಾಟ್ಯ ನಡೆಯಲಿದ್ದು, ಫೆಬ್ರವರಿ 5ರಂದು ಕುಮಾರಿ ಅಮೃತವರ್ಷಿಣಿ ಭಾರ್ಗವ ಹಾಗೂ ವಿಶ್ವೇಶ್ವರ ಭಾರ್ಗವ ಇವರಿಂದ ಹಾಡುಗಾರಿಕೆ, ಫೆಬ್ರವರಿ 6ರಂದು ಕುಮಾರಿ ಎಮ್. ಎಸ್. ಕೀರ್ತನ ಇವರಿಂದ ಹಾಡುಗಾರಿಕೆ, ಫೆಬ್ರವರಿ 07 ರಂದು ವಿದ್ವಾನ್ ಶ್ರೀ ರಾಮಶಾಸ್ತ್ರೀ ಮತ್ತು ತಂಡದವರಿಂದ ಹಾಡುಗಾರಿಕೆ ಹಾಗೂ ದಿನಾಂಕ 08 ಫೆಬ್ರವರಿ 2025ರಂದು ವಿದ್ವಾನ್ ಅಂಬಾಪ್ರಸಾದ್ ಇವರಿಂದ ವಯಲಿನ್ ವಾದನ ನಡೆಯಲಿದೆ.

Read More

ಉಡುಪಿ : ರಾಗ ಧನ ಉಡುಪಿ (ರಿ) ಇವರು ನಡೆಸುವ 37ನೆಯ ಶ್ರೀ ಪುರಂದರದಾಸರು ಮತ್ತು ಸಂಗೀತ ತ್ರಿಮೂರ್ತಿಗಳ ಸಂಗೀತೋತ್ಸವವನ್ನು ದಿನಾಂಕ 07, 08 ಮತ್ತು 09 ಫೆಬ್ರವರಿ 2025ರಂದು ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾಗಿದೆ. ದಿನಾಂಕ 07 ಫೆಬ್ರವರಿ 2025 ಶುಕ್ರವಾರ ಸಂಜೆ 5-00 ಗಂಟೆಗೆ ಖ್ಯಾತ ನಾಗಸ್ವರ ವಿದ್ವಾಂಸರ ಶ್ರೀ ನಾಗೇಶ್ ಬಪ್ಪನಾಡು ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಡುಪಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶ್ರೀಮತಿ ಪೂರ್ಣಿಮಾ, ಎಂ.ಜಿ.ಎಂ. ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ, ವಿದ್ವಾನ್ ಯು. ರಾಘವೇಂದ್ರ ರಾವ್ ಭಾಗವಹಿಸಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಡಾ. ಶ್ರೀಕಿರಣ ಹೆಬ್ಬಾರ್ ವಹಿಸಲಿದ್ದಾರೆ. ಭಾಷಾ ವಿಜ್ಞಾನಾದಿ ನಾನಾ ಕ್ಷೇತ್ರಗಳ ವಿದ್ವಾಂಸರೂ, ಸಂಗೀತ ಪ್ರಿಯರೂ ಆದ ಡಾ. ಸುಶೀಲಾ ಉಪಾಧ್ಯಾಯ ಇವರ ಸಂಸ್ಮರಣೆಯಲ್ಲಿ ಇವರ ಪತಿ ಡಾಕ್ಟರ್ ಯು.ಪಿ. ಉಪಾಧ್ಯಾಯ ಇವರು ಸ್ಥಾಪಿಸಿದ ‘ರಾಗ ಧನ ಪಲ್ಲವಿ’ ಪ್ರಶಸ್ತಿಯನ್ನು ಸ್ಥಳೀಯ ಪ್ರತಿಭಾವಂತ…

Read More

ಕೊಲ್ಯ : ನಾಟ್ಯನಿಕೇತನ ಕೊಲ್ಯ ಸೋಮೇಶ್ವರ ಇವರ ನಾಟ್ಯನಿಕೇತನ ಅಂಗಣದಲ್ಲಿ ‘ನಾಟ್ಯ ಮೋಹನ ನವತ್ಯುತ್ಸವ ನೃತ್ಯ ಸರಣಿ 13’ ಹಾಗು ‘ನಾಟ್ಯಾಂಜಲಿ ನಲವತ್ತರ ನಲಿವು’ ಕಾರ್ಯಕ್ರಮವು ದಿನಾಂಕ 29 ಜನವರಿ 2025ರಂದು ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಲಾಪೋಷಕ ಹಾಗೂ ಯುವ ಉದ್ಯಮಿಗಳಾದ ಗೋಪಿನಾಥ ಶೇಟ್ ಮಾತನಾಡಿ “ಭಾರತೀಯ ಲಲಿತ ಕಲೆಗಳಲ್ಲಿ ನೃತ್ಯವು ಇಂದ್ರಿಯಗಳು ಮೆಚ್ಚುವ ಕಲೆ. ಓರ್ವ ಸಮರ್ಥ ಗುರುಗಳ ಮಾರ್ಗದರ್ಶನ ಸಿಕ್ಕಿದಾಗ ಕಲಾವಿದ ಪರಿಪೂರ್ಣನಾಗಲು ಸಾಧ್ಯ. ಅಂತಹ ಸೃಜನಶೀಲ ಕಲಾವಿದರನ್ನು ಸಮಾಜಕ್ಕೆ ಕೊಟ್ಟ ಕೀರ್ತಿ ಗುರುಗಳಾದ ಉಲ್ಲಾಳ ಮೋಹನ್ ಕುಮಾರ್ ಹಾಗೂ ಅವರ ಸುಪುತ್ರಿ ರಾಜಶ್ರೀ ಇವರಿಗೆ ಸಲ್ಲಲೇ ಬೇಕು.” ಎಂದರು. ಇನ್ನೋರ್ವ ಮುಖ್ಯ ಅತಿಥಿ ಕೊಲ್ಯ ಶ್ರೀ ಮೂಕಾಂಬಿಕಾ ಕ್ಷೇತ್ರದ ಧರ್ಮದರ್ಶಿ ಮಧುಸೂಧನ ಅಯ್ಯರ್ ಮಾತನಾಡಿ “ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೃತ್ಯ ಕಲೆಯ ಶ್ರೀಮಂತಿಕೆಯನ್ನು ಬೆಳಗಿಸಿದ ಹಾಗೂ ಕಲಾ ಕ್ಷೇತ್ರದಲ್ಲಿ 68 ವರ್ಷಗಳನ್ನು ಪೂರೈಸಿದ ಹೆಮ್ಮೆಯ ಸಂಸ್ಥೆ ಇದ್ದಾಗಿದೆ” ಎಂದರು. ನಾಟ್ಯಾಚಾರ್ಯ ಮೋಹನ ಕುಮಾರ್ ನಟರಾಜ…

Read More

ಬೆಂಗಳೂರು : ಸಂಸ್ಕೃತಿ ಸಚಿವಾಲಯ ಭಾರತ ಸರ್ಕಾರ, ರಾಷ್ಟ್ರೀಯ ನಾಟಕ ಶಾಲೆ ನವದೆಹಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಇವರ ಸಹಯೋಗದೊಂದಿಗೆ ‘ಭಾರತ ರಂಗ ಮಹೋತ್ಸವ ಅಂತರಾಷ್ಟ್ರೀಯ ನಾಟಕೋತ್ಸವ’ವನ್ನು ದಿನಾಂಕ 01 ಫೆಬ್ರವರಿ 2025ರಿಂದ 08 ಫೆಬ್ರವರಿ 2025ರವರೆಗೆ ಸಂಜೆ 4-30 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 01 ಫೆಬ್ರವರಿ 2025ರಂದು ಬಿ.ವಿ. ಕಾರಂತ ವೇದಿಕೆಯಲ್ಲಿ ಸಚಿವರಾದ ಶ್ರೀ ಶಿವರಾಜ ಎಸ್. ತಂಗಡಗಿ ಇವರು ಉದ್ಘಟನಾ ಸಮಾರಂಭವನ್ನು ನಡೆಸಿಕೊಡಲಿದ್ದಾರೆ. ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್ ಇವರು ರಂಗ ಹೊತ್ತಿಗೆ ಬಿಡುಗಡೆ ಮಾಡಲಿದ್ದು, ಹಿರಿಯ ನಾಟಕಕಾರರಾದ ಡಾ. ಹೆಚ್.ಎಸ್. ಶಿವಪ್ರಕಾಶ್ ಇವರಿಗೆ ಉತ್ಸವ ಗೌರವ ನೀಡಲಾಗುವುದು. ಪ್ರಮೋದಿನಿ ಮತ್ತು ತಂಡದವರಿಂದ ಪೂಜಾ ಕುಣಿತ ಜನಪದ ಪ್ರದರ್ಶನ ನಡೆಯಲಿದ್ದು, ಶ್ರೀ ಶ್ರವಣ್ ಹೆಗ್ಗೋಡು ಇವರ ರಂಗರೂಪ ಮತ್ತು ನಿರ್ದೇಶನದಲ್ಲಿ ಮಂಗಳೂರಿನ ಕಲಾಭಿ ಥಿಯೇಟರ್ ತಂಡದವರು ‘ಎ ಫ್ರೆಂಡ್ ಬಿಯಾಂಡ್ ದ ಫೆನ್ಸ್’…

Read More

ವರಕವಿ ಎಂದೇ ಪ್ರಸಿದ್ಧರಾದ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು 20ನೇ ಶತಮಾನದ ಕನ್ನಡದ ಖ್ಯಾತ ಕವಿ ಮತ್ತು ಕಾದಂಬರಿಕಾರರು. ಸಾಮಾನ್ಯವಾಗಿ ಇವರ ಹೆಸರನ್ನು ದ. ರಾ. ಬೇಂದ್ರೆ ಅಥವಾ ಬೇಂದ್ರೆ ಎಂದೇ ಕರೆಯುವುದು ವಾಡಿಕೆ. ಆದರೆ ‘ಅಂಬಿಕಾತನಯದತ್ತ’, ‘ದತ್ತ ರಾಮ ಬೇಂದ್ರೆ’, ‘ಸದಾನಂದ ಜಂಗಮ’, ‘ಬೆಂ. ದ. ರಾ’, ‘ಬೆಂದರೇ’ ಹೀಗೆ ಬೇರೆ ಬೇರೆ ಕಾವ್ಯನಾಮಗಳಿಂದಲೂ ಇವರು ಸಾಹಿತ್ಯ ರಚನೆ ಮಾಡಿದ್ದಾರೆ. ರಾಮಚಂದ್ರ ಭಟ್ಟ ಮತ್ತು ಪಾರ್ವತಿ ಬಾಯಿ ದಂಪತಿಯ ಹಿರಿಯ ಮಗನಾದ ಬೇಂದ್ರೆಯವರು ಚಿತ್ಪಾವನ ಕುಟುಂಬದಲ್ಲಿ 31 ಜನವರಿ 1896 ರಂದು ಧಾರವಾಡದಲ್ಲಿ ಜನಿಸಿದರು. ರಾಮಚಂದ್ರ ಭಟ್ಟರ ಅಜ್ಜ, ಅಪ್ಪಾ ಶಾಸ್ತ್ರಿಯವರು ವೈದಿಕ ವಿದ್ವಾಂಸರಾಗಿದ್ದು ಮರಾಠಿಯಲ್ಲಿ ಹಲವಾರು ಕೀರ್ತನೆಗಳನ್ನು ರಚಿಸಿದ್ದಾರೆ. ಬೇಂದ್ರೆಯವರ ತಂದೆಯವರೂ ಸಂಸ್ಕೃತ ವಿದ್ವಾಂಸರಾಗಿದ್ದು, ಬೇಂದ್ರೆಯವರ 12ನೇ ವರ್ಷ ವಯಸ್ಸಿನಲ್ಲಿ ತೀರಿಕೊಂಡರು. ಆದ್ದರಿಂದ ತಾಯಿ ಮತ್ತು ಅಜ್ಜಿಯ ಆಶ್ರಯದಲ್ಲಿ ಬೇಂದ್ರೆಯವರು ಬೆಳೆಯಬೇಕಾಯಿತು. ತನ್ನ ಪ್ರಾರಂಭಿಕ ಶಿಕ್ಷಣವನ್ನು ಹುಟ್ಟೂರಾದ ಧಾರವಾಡದಲ್ಲಿ ಪೂರೈಸಿದ ಬೇಂದ್ರೆಯವರು ಮುಂದಿನ ವಿದ್ಯಾಭ್ಯಾಸಕ್ಕಾಗಿ 1913ರಲ್ಲಿ ಪುಣೆಯ ‘ಫರ್ಗುಸನ್’ ಕಾಲೇಜಿಗೆ…

Read More

ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಸಂತ ಎಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯವು ಜಂಟಿಯಾಗಿ ಆಯೋಜಿಸಿದ ‘ಗಾಂಧಿ ಸ್ಮೃತಿ’ ಕಾರ್ಯಕ್ರಮವು ದಿನಾಂಕ 30 ಜನವರಿ 2025 ರಂದು ಮಂಗಳೂರಿನ ಸಂತ ಎಲೋಶಿಯಸ್ ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಂತ ಎಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಪತಿಗಳಾದ ವಂದನೀಯ ಡಾ. ಪ್ರವೀಣ್ ಮಾರ್ಟಿಸ್ ಮಾತನಾಡಿ “ಗಾಂಧೀಜಿಯವರ ತತ್ವಗಳು ನಮ್ಮ ಜೀವನದ ಎಲ್ಲಾ ಹಂತಗಳಲ್ಲಿ ಮಾರ್ಗದರ್ಶನ ನೀಡುವಂತಹವು” ಎಂದು ತಿಳಿಸಿದರು. ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲರಾದ ಡಾ. ಗಣಪತಿ ಗೌಡ ಇವರು ಗಾಂಧೀಜಿಯವರ ಜೀವನ ಸಿದ್ಧಾಂತ ಮತ್ತು ಸಾಹಿತ್ಯದ ಕುರಿತು ವಿಸ್ತ್ರತವಾದ ಪ್ರಬಂಧ ಮಂಡನೆ ಮಾಡಿದರು. ಇದೇ ಸಂದರ್ಭದಲ್ಲಿ ಸ್ವೀವನ್ ಕ್ವಾಡ್ರಸ್ ಪೆರ್ಮುದೆ ಇವರು ಮಹಾತ್ಮ ಗಾಂಧೀಜಿಯವರ ಕುರಿತು ಬರೆದ ಪುಸ್ತಕದ ಲೋಕಾರ್ಪಣೆ ನಡೆಯಿತು. ಪುಸ್ತಕದ ತಯಾರಿಯಲ್ಲಿ ಧನಸಹಾಯ ಮಾಡಿದ ಮಿಲಾಗ್ರಿಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಶ್ರೀಯುತ ಜಾರ್ಜ್ ಎನ್. ಫರ್ನಾಂಡಿಸ್ ಮಾತನಾಡಿ “ಗಾಂಧೀಜಿಯವರ ಜೀವನ ಆದರ್ಶಗಳು…

Read More

ಮಂಗಳೂರು : ಕೊಂಕಣಿ ಲೇಖಕ್ ಸಂಘ್ ಕೊಡಮಾಡುವ 2025ನೇ ಸಾಲಿನ ಸಾಹಿತ್ಯ ಪ್ರಶಸ್ತಿಗೆ ಖ್ಯಾತ ಕೊಂಕಣಿ ಲೇಖಕಿ ಆಲಿಸ್ ಫೆರ್ನಾಂಡಿಸ್ (ಶಾಲಿನಿ ವಲೆನ್ಸಿಯಾ) ಅವರು ಆಯ್ಕೆಗೊಂಡಿದ್ದಾರೆ. ಕೊಂಕಣಿ ಲೇಖಕ್ ಸಂಘ್ ಕರ್ನಾಟಕ, ಕೊಂಕಣಿ ಭಾಷೆ ಮತ್ತು ಸಾಹಿತ್ಯವನ್ನು ಉತ್ತೇಜಿಸಿ ಬೆಳೆಸುವ ಉದ್ದೇಶದಿಂದ 2018ರಲ್ಲಿ ಆರಂಭಗೊಂಡಿತು. 2022ರಲ್ಲಿ ಕೊಂಕಣಿ ಸಾಹಿತ್ಯಕ್ಕೆ ವಿಶೇಷ ಕೊಡುಗೆ ನೀಡಿದ ಲೇಖಕರನ್ನು ಆಯ್ಕೆ ಮಾಡಿ ಗೌರವಿಸಲು ಕೊಂಕಣಿ ಲೇಖಕ್ ಸಂಘ್ ನಿರ್ಧರಿಸಿತು. ಈ ಪ್ರಶಸ್ತಿಯು ರುಪಾಯಿ 25000/- ನಗದು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ. ಈ ಪ್ರಶಸ್ತಿ ಪ್ರದಾನ ಸಮಾರಂಭವು 15 ಫೆಬ್ರವರಿ 2025ನೇ ಶನಿವಾರ ಸಂಜೆ 6.30ಕ್ಕೆ ಮಂಗಳೂರಿನ ಬಜ್ಜೋಡಿಯಲ್ಲಿರುವ ಸಂದೇಶ ಪ್ರತಿಷ್ಠಾನದ ಸಭಾಂಗಣದಲ್ಲಿ ನಡೆಯಲಿದೆ. ಆಲಿಸ್ ಫೆರ್ನಾಂಡಿಸ್ : ತನ್ನ 16ನೇ ವಯಸ್ಸಿನಲ್ಲೇ ಲೇಖನಿ ಹಿಡಿದರು ಸಾಹಿತ್ಯ ಸೇವೆ ಆರಂಭಿಸಿದ ಆಲಿಸ್ ಫೆರ್ನಾಂಡಿಸ್ ಇವರ ಅನೇಕ ಲೇಖನಗಳು ಕೊಂಕಣಿಯ ‘ಮಿತ್ರ್’, ‘ಝೆಲೊ’, ‘ರಾಕ್ಣೊ’, ‘ಕಾಣಿಕ್’, ‘ವಾವ್ರಾಡ್ಯಾಂಚೊ ತಾಳೊ’ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡವು. ಇವರ ಸರಿಸುಮಾರು…

Read More

ಬೆಂಗಳೂರು : ಗಾನಚಂದ್ರಿಕಾ ಕಲ್ಚರಲ್ ಫೌಂಡೇಷನ್ (ರಿ.) ಇದರ ದಶಮಾನೋತ್ಸವ ಪ್ರಯುಕ್ತ ಸಂಪದ ಪ್ರತಿಷ್ಠಾನದ ಸಹಯೋಗದೊಂದಿಗೆ ‘ಸಂಗೀತ ರಸಗ್ರಹಣ ಶಿಬಿರ’ವನ್ನು ದಿನಾಂಕ 08 ಮತ್ತು 09 ಫೆಬ್ರವರಿ 2025ರಂದು ಬೆಳಗ್ಗೆ 10-00 ಗಂಟೆಗೆ ಬೆಂಗಳೂರಿನ ಸಂಪದ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಈ ಶಿಬಿರದಲ್ಲಿ ಭಾವ, ಜಾನಪದ ಹಿನ್ನೆಲೆ ಗಾಯನಗಳ ಕಾರ್ಯಕಾರವು ನಡೆಯಲಿದೆ. ಪ್ರಖ್ಯಾತ ಜಾನಪದ ಗಾಯಕರು ಹಾಗೂ ಸಂಗೀತ ಸಂಯೋಜಕರಾದ ಶ್ರೀ ಕೆ. ಯುವರಾಜ್, ಪ್ರಖ್ಯಾತ ಗಾಯಕಿ ಹಾಗೂ ಸಂಗೀತ ಸಂಯೋಜಕಿ ಶ್ರೀಮತಿ ನಾಗಚಂದ್ರಿಕಾ ಭಟ್, ಪ್ರಖ್ಯಾತ ಗಾಯಕರು ಪತ್ರಕರ್ತರಾದ ಶ್ರೀ ಅಚ್ಚುತ ಸಂಕೇತಿ ಮತ್ತು ಆಯುರ್ವೇದ ವೈದ್ಯೆ ಕುಮಾರಿ ಅನಘ ಎಚ್.ಎ. ಇವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ಹೆಚ್ಚಿನ ಮಾಹಿತಿ ಹಾಗೂ ನೋಂದಾವಣೆಗಾಗಿ 9480231345 ಸಂಖ್ಯೆಯನ್ನು ಸಂಪರ್ಕಿಸಿರಿ.

Read More

ಹೂವಿನಕೆರೆ: ಕೋಟೇಶ್ವರದ ಹೂವಿನಕೆರೆ ವಾದಿರಾಜ ಮಠದ ಗೌರಿಗೆದ್ದೆಯಲ್ಲಿ ಶ್ರೀ ಮಧ್ವ ಪುರಂದರೋತ್ಸವ ಕಾರ್ಯಕ್ರಮದ ಅಂಗವಾಗಿ ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆಯ ಮಕ್ಕಳ ಮೇಳದ ಯಕ್ಷಗಾನ ಕಾರ್ಯಕ್ರಮವು ದಿನಾಂಕ 28 ಜನವರಿ 2025ರಂದು ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಶ್ರೀ ರಾಮಚಂದ್ರ ದಾಸರು ಮಾತನಾಡಿ “ಶ್ರೀಮದ್ ಆಚಾರ್ಯರ ಕಾಲದಿಂದಲೂ ಭಗವಂತನ ಲೀಲೆ ಹಾಗೂ ಮಹಿಮೆಗಳನ್ನು ಅತಿ ವೇಗವಾಗಿ ಮನ ಮುಟ್ಟುವಂತ ಮಾಡುವ ಕಲೆ ಯಕ್ಷಗಾನ. ಇದು ಯಕ್ಷಗಾನದ ವೈಶಿಷ್ಯತೆ . ಪೂರ್ವ ನಿಗದಿತ ಸಂಭಾಷಣೆಗಳಿಲ್ಲದ, ಕರ್ನಾಟಕದಲ್ಲಿ ಶುದ್ಧವಾದ ಕನ್ನಡದ ಪರಿಕಲ್ಪನೆಯ ಏಕೈಕ ಕಲೆ ಯಕ್ಷಗಾನ. ಇಂತಹ ಕಲೆಯಲ್ಲಿ ಪ್ರಭುದ್ಧತೆಯನ್ನು ಸಾಧಿಸಿ, ನಿರಂತರ ಚಟುವಟಿಕೆಯಿಂದ ಸಮಾಜಮುಖಿಯಾಗಿ ಮೆರೆದ ‘ಯಶಸ್ವಿ ಕಲಾವೃಂದ’ದ ಸಾಧನೆ ಅನನ್ಯ” ಎಂದರು. ಯಕ್ಷಗುರು ಲಂಬೋದರ ಹೆಗಡೆ, ರಾಘವೇಂದ್ರ ಹೆಗಡೆ ಯಲ್ಲಾಪುರ, ಕುಮಾರ್ ಅಮೀನ್ ಕೊಕ್ಕರ್ಣಿ, ಕಾರ್ಯದರ್ಶಿ ವೆಂಕಟೇಶ ವೈದ್ಯ ಉಪಸ್ಥಿತರಿದ್ದರು. ಯಕ್ಷಗಾನ ಪ್ರಸಂಗ ‘ಕಂಸ ವಧೆ’ ರಂಗ ಪ್ರಸ್ತುತಿಗೊಂಡಿತು.

Read More