Author: roovari

ಮಂಗಳೂರು : ‘ನಿರ್ದಿಗಂತ’ವು ಮಂಗಳೂರಿನ ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ) ಕಾಲೇಜಿನ ಆವರಣದಲ್ಲಿ ದಿನಾಂಕ 20-03-2024ರಿಂದ 25-03-2024ರ ತನಕ ‘ನೇಹದ ನೆಯ್ಗೆ’ ಎಂಬ ಆರು ದಿನಗಳ ರಂಗೋತ್ಸವವನ್ನು ನಡೆಸಲಿದೆ. ನಾಟಕಗಳು, ವಿಚಾರ ಸಂಕಿರಣಗಳು, ಕವನ, ಸಂಗೀತ, ಚಿತ್ರ, ಚಲನಚಿತ್ರ ಮೊದಲಾದ ಹಲವು ಬಗೆಯ ಸೌಂದರ್ಯ ವಿಜ್ಞಾನ ಶಾಖೆಗಳ ಸಂವಾದಗಳು ಇಲ್ಲಿ ನಡೆಯಲಿವೆ. ಈ ಆರು ದಿನಗಳೂ ನಮ್ಮೊಡನಿದ್ದು ಉತ್ಸವದಲ್ಲಿ ಕ್ರಿಯಾತ್ಮಕವಾಗಿ ತೊಡಗಿಕೊಳ್ಳಲಿಚ್ಚಿಸುವ ರಂಗಭೂಮಿಯ ಆಸಕ್ತ 50 ಪ್ರತಿನಿಧಿಗಳಿಗೆ ನಿರ್ದಿಗಂತವು ಆಹಾರ ಹಾಗೂ ವಸತಿಯ ವ್ಯವಸ್ಥೆಯನ್ನು ಕಲ್ಪಿಸಲಿದೆ. ಈ ಆರೂ ದಿನಗಳ ಕಾಲ ಉತ್ಸವದಲ್ಲಿ ಪೂರ್ಣಾವಧಿ ತೊಡಗಿಕೊಳ್ಳಲಿಚ್ಛಿಸುವ ರಂಗಾಸಕ್ತರು ತಮ್ಮ ಪರಿಚಯ ಪತ್ರದೊಂದಿಗೆ ಈ ಕೆಳಕಂಡ ವಿಳಾಸದಲ್ಲಿ ಹೆಸರು ನೊಂದಾಯಿಸಿಕೊಳ್ಳಲು ಆಹ್ವಾನಿಸುತ್ತಿದೆ. ಸಂಪರ್ಕ ವಿಳಾಸ : ಕ್ರಿಸ್ಟೋಫರ್ ಡಿ’ಸೋಜ, ರಂಗ ಅಧ್ಯಯನ ಕೇಂದ್ರದ ನಿರ್ದೇಶಕರು ಸಂತ ಅಲೋಶಿಯಸ್ ಕಾಲೇಜು, ಸಂತ ಅಲೋಶಿಯಸ್ ಕಾಲೇಜ್ ರಸ್ತೆ, ಕೊಡಿಯಾಲ್ ಬೈಲ್ ಪಿ.ಬಿ. ನಂ.720, ಮಂಗಳೂರು -575003, ಕರ್ನಾಟಕ ಮೊ. ನಂ. 9113226234 ಇ-ಮೇಲ್ [email protected]

Read More

ಬೆಂಗಳೂರು : ವಿಜಯನಗರ ಸಂಗೀತಸಭಾ ಟ್ರಸ್ಟ್ (ರಿ.) ಇದರ ವತಿಯಿಂದ 33ನೇ ವರ್ಷದ ‘ದಾಸವರೇಣ್ಯರ ಮತ್ತು ತ್ಯಾಗರಾಜರ ಆರಾಧನಾ ಮಹೋತ್ಸವ 2024’ವು ದಿನಾಂಕ 10-03-2024ರಂದು ವಿಜಯನಗರದ ಬಿ.ಬಿ.ಎಂ.ಪಿ. ಪಾಲಿಕೆ ಭವನದಲ್ಲಿ ನಡೆಯಲಿದೆ. ಬೆಳಿಗ್ಗೆ ಗಂಟೆ 9.30ಕ್ಕೆ ವೀಣಾ ವಾದಕರು, ಪರಿಸರವಾದಿ ಹಾಗೂ ಭೂ ವಿನ್ಯಾಸಗಾರರಾದ ಶ್ರೀಮತಿ ರೇವತಿ ಕಾಮತ್ ಇವರಿಂದ ಈ ಮಹೋತ್ಸವವು ಉದ್ಘಾಟನೆಗೊಳ್ಳಲಿದೆ. ಗಾನಕಲಾಭೂಷಣ ವಿದುಷಿ ಡಾ. ಸುಮಾ ಸುಧೀಂದ್ರ ಇವರ ವೀಣಾ ವಾದನಕ್ಕೆ ವಿದ್ವಾನ್ ಮತ್ತೂರು ಶ್ರೀನಿಧಿ ಪಿಟೀಲಿನಲ್ಲಿ, ವಿದುಷಿ ಸುಕನ್ಯಾ ರಾಮ್ ಗೋಪಾಲ್ ಘಟಂನಲ್ಲಿ ಮತ್ತು ಗಾನಕಲಾಭೂಷಣ ವಿಜಯಸಂಗೀತಶ್ರೀ ವಿದ್ವಾನ್ ಸಿ. ಚಲುವರಾಜ್ ಇವರು ಮೃದಂಗದಲ್ಲಿ ಸಾಥ್ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಗಾನಕಲಾಭೂಷಣ ವಿದುಷಿ ಸುಮಾ ಸುಧೀಂದ್ರ ಇವರನ್ನು ಸನ್ಮಾನಿಸಲಾಗುವುದು ಮತ್ತು ಹಿರಿಯ ಸಂಸ್ಥಾಪಕ ಸದಸ್ಯರಾದ ವಿದುಷಿ ಮಾಲತಿ ನರಸಿಂಹಮೂರ್ತಿ ಇವರಿಗೆ ಗೌರವ ಸಮರ್ಪಣೆ ಮಾಡಲಾಗುವುದು. ಮಧ್ಯಾಹ್ನ ಗಂಟೆ 12.15ಕ್ಕೆ ಗಾನಕಲಾಭೂಷಣ ವಿಜಯಸಂಗೀತಶ್ರೀ ಡಾ. ಆರ್.ಕೆ. ಪದ್ಮನಾಭ ಇವರ ನೇತೃತ್ವದಲ್ಲಿ ಶ್ರೀ ತ್ಯಾಗರಾಜರ ಪಂಚರತ್ನ ಕೃತಿಗಳ ಗೋಷ್ಠಿ…

Read More

ಮಂಗಳೂರು : ದ. ಕ. ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಅವರ ಶ್ರದ್ಧಾಂಜಲಿ ಸಭೆಯು ದಿನಾಂಕ 02-03-2024ರಂದು ಮಂಗಳೂರಿನ ಎಸ್‌. ಡಿ. ಎಂ. ಕಾನೂನು ಕಾಲೇಜು ಆವರಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ದ.ಕ. ಜಿಲ್ಲಾಧ್ಯಕ್ಷ ಡಾ. ಎಂ. ಪಿ. ಶ್ರೀನಾಥ್ “ಕರಾವಳಿಯ ಉದ್ದಕ್ಕೂ ಇರುವ ಎಲ್ಲಾ ಭಾಷೆಯ, ಸಂಸ್ಕೃತಿಯ ಬಗ್ಗೆ ನಿರರ್ಗಳವಾಗಿ ಮಾತನಾಡಬಲ್ಲ ಸಮರ್ಥ ಪತ್ರಕರ್ತ, ನಿರೂಪಕ, ಸಾಹಿತಿ ಮನೋಹರ ಪ್ರಸಾದ್ ಅವರಿಗೆ ಪರ್ಯಾಯ ಹೆಸರಿಲ್ಲ.” ಎಂದರು. ಪ್ರಮುಖರಾದ ಎಚ್‌. ವಿನಯ ಆಚಾರ್ಯ, ರಾಜೇಶ್ವರಿ ಎಂ., ಪ್ರೊ. ಪುಷ್ಪರಾಜ್ ಕೆ., ಚಂದ್ರಶೇಖರ ನಾವಡ, ವರ್ಕಾಡಿ ರವಿ ಅಲೆವೂರಾಯ, ದಯಾನಂದ ರಾವ್ ಕಾವೂರು, ಪಿ. ಮಹಮ್ಮದ್, ತೋನ್ಸೆ ಪುಷ್ಕಳ್ ಕುಮಾರ್, ಅರುಣಾ ನಾಗರಾಜ್, ರತ್ನಾವತಿ ಜೆ. ಬೈಕಾಡಿ, ಡಾ. ಮೀನಾಕ್ಷಿ ರಾಮಚಂದ್ರ, ರೇಮಂಡ್ ಡಿಕೂನಾ ತಾಕೊಡೆ, ಚಂದ್ರಹಾಸ ಶೆಟ್ಟಿ, ಪೂವಪ್ಪ ನೇರಳಕಟ್ಟೆ, ಡಾ ಸುರೇಶ ನೆಗಳಗುಳಿ, ಜಗದೀಶ್ ಯಡಪಡಿತ್ತಾಯ, ಮಾಧವ ಎಂ. ಕೆ.,…

Read More

ವರ್ತಮಾನದ ಸಾಮಾಜಿಕ ತಲ್ಲಣಗಳನ್ನು ಒಳಹೊಕ್ಕು ನೋಡುವ ಮೂಲಕ ಅಲ್ಲಿ ಅವಿತಿರಬಹುದಾದ ನೆಲಮೂಲದ ಸಾಂಸ್ಕೃತಿಕ ಬೇರುಗಳನ್ನು ಶೋಧಿಸುವ ಹಾದಿಯಲ್ಲಿ ರಂಗಭೂಮಿ ತನ್ನದೇ ಆದ ವಿಶಿಷ್ಟ ಮಾರ್ಗಗಳನ್ನು ಅನುಸರಿಸುತ್ತಾ ಬಂದಿದೆ. ಮಾನವ ಚರಿತ್ರೆಯ ಆದಿಮ ಕಾಲದಿಂದ ಇವತ್ತಿನ ಡಿಜಿಟಲ್‌ ಯುಗದವರೆಗೂ ವಿಸ್ತರಿಸುವ ಮನುಜ ಸಮಾಜದ ಹೆಜ್ಜೆಗಳು ಪ್ರತಿಯೊಂದು ಕಾಲಘಟ್ಟದಲ್ಲೂ ತನ್ನದೇ ಆದ ವಿಶಿಷ್ಟ ಗುರುತುಗಳನ್ನು ಮೂಡಿಸುವುದನ್ನು ಇತಿಹಾಸದುದ್ದಕ್ಕೂ ಗಮನಿಸಬಹುದು. ಪುರಾಣ, ಐತಿಹ್ಯ, ದಾಖಲಿತ ಚರಿತ್ರೆ, ಮೌಖಿಕ-ಜನಪದ ಪರಂಪರೆ ಈ ಹಲವು ಆಯಾಮಗಳಲ್ಲಿ ಆಧುನಿಕ ಜಗತ್ತಿಗೆ ಮುಖಾಮುಖಿಯಾಗುವ ಪ್ರಾಚೀನ ಅಥವಾ ಮಧ್ಯಕಾಲೀನ ಸಮಾಜ ನಮ್ಮ ನಡುವೆ ಜಿಜ್ಞಾಸೆಗಳನ್ನು ಸೃಷ್ಟಿಸುವಂತೆಯೇ ಹಲವು ಜಟಿಲ ಸವಾಲುಗಳನ್ನೂ ತಂದಿರಿಸುತ್ತದೆ. ಮಾನವ ಸಮಾಜ ಮುನ್ನಡೆಯ ಹಾದಿಯಲ್ಲಿ ಹಿಂತಿರುಗಿ ನೋಡುವಾಗಲೆಲ್ಲಾ ಈ ಸವಾಲುಗಳೊಡನೆ ಅನುಸಂಧಾನ ಮಾಡುತ್ತಾ ತನ್ನ ಮೂಲ ಸಾಂಸ್ಕೃತಿಕ ಬೇರುಗಳನ್ನು ಮರುಶೋಧ ಮಾಡುತ್ತಾ ಸಾಗುತ್ತದೆ. ಈ ಮರುಶೋಧದ ಪ್ರಕ್ರಿಯೆಗೆ ಒಂದು ವಿಶಿಷ್ಟ, ವಿಭಿನ್ನ ಆಯಾಮವನ್ನು ನೀಡುವ ಕ್ಷಮತೆ ಹಾಗೂ ಬೌದ್ಧಿಕ ಸ್ವಾಯತ್ತತೆ ರಂಗಭೂಮಿಗೆ ಇರುವುದರಿಂದಲೇ ಈ ಸಾಂಸ್ಕೃತಿಕ ಪ್ರಕಾರವು ಅತ್ಯಾಧುನಿಕ ತಂತ್ರಜ್ಞಾನಗಳ…

Read More

ಶ್ರೇಷ್ಠ ಕವಿ ಕಲಾವಿದರಿಗೆ ಪ್ರಕೃತಿ ಸೃಷ್ಟಿಯೇ ಪ್ರೇರಣೆ ಎಂಬುದರಲ್ಲಿ ಎರಡು ಮಾತಿಲ್ಲ. ಈ ಪ್ರಕೃತಿಯಲ್ಲಿ ಯಾವುದೇ ವಸ್ತು ನಗಣ್ಯವಲ್ಲ. ಅದರದೇ ಆದ ಸೃಷ್ಟಿ ವಿಶೇಷತೆಯನ್ನು ಹೊಂದಿರುತ್ತದೆ. ನಮ್ಮ ಸುತ್ತಮುತ್ತ ಅದೆಷ್ಟೋ ಪುಷ್ಪ-ಪತ್ರೆಗಳು ಅರಳಿ, ಒಣಗಿ ಬಿದ್ದು ಭೂ ಮಡಿಲಲ್ಲಿ ಜೀರ್ಣವಾಗಿ ಹೋಗುವುದು ಪ್ರಕೃತಿ ಕ್ರಿಯೆ, ನಿಯಮ. ಇವೆಲ್ಲ ಸಾಮಾನ್ಯ ಕಸವಾಗಿ, ಅನುಪಯುಕ್ತ ವಸ್ತುವಾಗಿ ಕಂಡರೂ, ಚಿತ್ರ ಕಲಾವಿದನ ದೃಷ್ಟಿ, ಚಿಂತನೆ ಬೇರೆಯೇ ಇರುವುದು. ಅವುಗಳನ್ನೆ ಆಯ್ದು, ಹೆಕ್ಕಿ, ಉಪಯೋಗಿಸಿಕೊಂಡು ಒಂದೊಂದಾಗಿ ಸಂಯೋಜಿಸಿ, ಕಲಾವಿದನ ಅದ್ಭುತ ಕೈಚಳಕದಿಂದ ಸೃಷ್ಟಿಸಲ್ಪಡುವ ಕೃತಿಗಳು ಜನ ಸಾಮಾನ್ಯರ ಊಹೆಗೂ ನಿಲುಕದ್ದು ; ಇಂತಹ ವಸ್ತುಗಳನ್ನು ಉಪಯೋಗಿಸಿಕೊಂಡು ಸೃಷ್ಟಿಸಿದ ಚಿತ್ರಕಲಾ ಕೃತಿಗಳಿಗೂ ಹೊಸ ರೂಪ, ಜೀವಂತಿಕೆ ಕೊಡಬಹುದೆಂಬುದನ್ನು ಕಂಡು ಅರೆ ಘಳಿಗೆ ಮೂಕ ವಿಸ್ಮಿತರಾಗುವುದು ಸಹಜವೇ. ಇಂತಹ ವಿಶಿಷ್ಟ ಪುಷ್ಪ-ಚಿತ್ರ ಕಲಾವಿದೆ ತಮ್ಮ ಅಪೂರ್ವ ಚಿತ್ರಕಲಾ ಸಾಧನೆಯಿಂದಲೇ ಕಳೆದ ಐದು ವರ್ಷಗಳಲ್ಲಿ ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಪ್ರಸಿದ್ಧಿ ಪಡೆದವರು ನಮ್ಮ ಅವಿಭಜಿತ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ಪಡುಬಿದ್ರೆ ಶ್ರೀಮತಿ…

Read More

ರೋಹಿಣಿ…. ಪೋ… ಉಲಾಯಿ….. ನಾಟಕಕಾರ ದೇವದಾಸ್ ಕಾಪಿಕಾಡರ ಯಶಸ್ವೀ ನಾಟಕ ‘ಗಂಟೇತಾಂಡ್‌’ನಲ್ಲಿ ಒಂದು ಅಜ್ಜಿ… ಮೌನವಾಗಿ ಬುಸು ಗುಟ್ಟುತ್ತ, ನಿರ್ಗಮಿಸುತ್ತ… ನಗೆ ಉಕ್ಕಿಸುವ ರೋಹಿಣಿಯಕ್ಕನ ಪಾತ್ರದಲ್ಲಿ, ಜೀವ ತುಂಬಿದವರು ರೋಹಿಣಿಯಕ್ಕನೇ. ಆವರೇ ತುಳುವಿನ ಪ್ರಬುದ್ಧ ಕಲಾವಿದೆ. ಶ್ರೀಮತಿ ರೋಹಿಣಿ ಜಗರಾಂ…! ಅದೇ ರೋಹಿಣಿಯಕ್ಕ ಶಾರದಾ ಶಾಸ್ತ್ರಿಯವರ ಕೆಲವು ಪ್ರಯೋಗ ಕಂಡ ಚಾರಿತ್ರಿಕ ನಾಟಕ. ಸೀತಾರಾಮ್ ಕುಲಾಲ್ ನಿರ್ದೇಶನದ ‘ನಾಟ್ಯರಾಣಿ ಶಾಂತಲಾ’ದಲ್ಲಿ ಶಾಂತಲೆಯಾಗಿ ಗೆಜ್ಜೆಯ ಧ್ವನಿಯೊಂದಿಗೆ ನೃತ್ಯ ಮಾಡಿದವರು. ಅವರು ನೀಡುವ ನಾಟ್ಯಭಂಗಿ,,ಮುದ್ರೆ, ಚಿಮ್ಮಿದ ಗೆಡ್ಡೆಯ ಧ್ವನಿ, ಶಿಲ್ಪಿಯೊಬ್ಬನಿಗೆ ನೀಡುವ ಸ್ಫೂರ್ತಿಯ ಸಂದರ್ಭ. ಬೇಲೂರ ದೇವಾಲಯದ ಕಂಬ ಕಂಬಗಳಲ್ಲಿದ್ದ ಶಿಲಾ ಬಾಲಿಕೆಯರ ಕೆತ್ತನೆಗೆ ನೀಡಿದ ಮಾದರಿ ಶಾಂತಲೆಯ ಪಾತ್ರದಲ್ಲಿ. ಅರಸು ಉಡುಗೆಗೆ ಬೇಕಾದ ಮೈಮಾಟ ಹಾಗೂ ಮುಖ ವರ್ಚಸ್ಸು, ನೃತ್ಯ ಹಾಗೂ ಗಾಯನ ಪರಿಣತಿ ಪಡೆದವರು. ಪರಿಪೂರ್ಣವಾಗಿ ಅಲ್ಲದಿದ್ದರೂ ದೊರೆತ ಪಾತ್ರಕ್ಕೆ ಜೀವ ತುಂಬುವಷ್ಟು ನೃತ್ಯ ಹಾಗೂ ಸಂಗೀತ ತಿಳಿದಿದೆ ಎನ್ನುವ ಅವರನ್ನು ನಾನು ಮೊದಲು ಕಂಡಿದ್ದು ಹಿನ್ನೆಲೆ ಗಾಯಕಿಯಾಗಿ. ತಂದೆಯವರಿಗಿದ್ದ ಸಂಗೀತ…

Read More

ಮಹಿಳಾ ಯಕ್ಷರಂಗಕ್ಕೊಂದು ಮೈಲುಗಲ್ಲು. ಅದರಲ್ಲೂ ಭಾಗವತಿಕೆಗೆ ಸದಾ ಪ್ರಾತಃಸ್ಮರಣೀಯರು ಲೀಲಕ್ಕನವರು, ಅವರ ಹಿಂದೂ ಆಗಲಿಲ್ಲ; ಜೊತೆಗೆ ಇನ್ನು ಆಗುವುದೂ ದೂರದ ಮಾತು. ಹೇಳಿಕೇಳಿ ಲೀಲಕ್ಕನವರ ಯಕ್ಷ ಮೆರವಣಿಗೆಯ ಆ ಕಾಲ ತೀರಾ ಮಡಿವಂತಿಕೆಯದ್ದು. ಅದನ್ನು ಮೆಟ್ಟಿ ನಿಂತು ಸಾಧಿಸಿದ ಅಪೂರ್ವ ಮಹಿಳಾ ಭಾಗವತರು ಈಕೆ. ಯಕ್ಷರಂಗಕ್ಕೊಂದು ಅಪೂರ್ವ ದಾಂಪತ್ಯದ ಜೋಡಿ ಹರಿ-ಲೀಲಾ. ಕಡಬದ ಹರಿನಾರಾಯಣ ಬೈಪಾಡಿತ್ತಾಯರು ಲೀಲಕ್ಕನನ್ನು ಮದುವೆಯಾದಾಗ ಲೀಲಕ್ಕನಿಗೆ ಯಕ್ಷರಂಗದ ಕಂಪು ಇರಲಿಲ್ಲ. ಆದರೆ ಸಂಗೀತವನ್ನು ಶಾಸ್ತ್ರೀಯವಾಗಿ ಅಭ್ಯಸಿಸಿದ ಮಧೂರಿನ ಪ್ರತಿಭೆ ಆಕೆ. ಪ್ರಾಯಶಃ ಆ ಸಂಗೀತ ಜ್ಞಾನವೇ ಅವರಿಂದ ಭಾಗವತಿಕೆಯನ್ನು ಮಾಡಿಸಿತು ಎಂದರೂ ಸರಿಯೇ. ಅಲ್ಲದೇ, ಆಕೆಯೊಳಗಿರುವ ಕಲಾವಿದೆಯನ್ನು ಸೊರಗಲು ಬಿಡಬಾರದು ಎಂದು ಗಂಡ ಹರಿನಾರಾಯಣ ಬೈಪಾಡಿತ್ತಾಯರು ಅವರನ್ನು ಯಕ್ಷಗಾನಕ್ಕೆ ತಂದರು. ಪತಿಯೇ ಗುರುವಾಗಿ ನಿಂತು ಕಲಿಸಿದರು. ಶ್ರದ್ದೆಯಿಂದ ಲೀಲಕ್ಕನೂ ಕಲಿತರು ಪರಸ್ಪರರ ಯಕ್ಷಗಾನಾಸಕ್ತಿ ಒಂದು ಸುಂದರ ಯಕ್ಷ ಹೂತೋಟವನ್ನು ಬೆಳೆಸಿತು. ಆ ವೃಕ್ಷ ಇಂದು ಬೃಹತ್ತಾಗಿ ಬೆಳೆದು ನಿಂತು ಅನೇಕ ಕಲಾಸಕ್ತರಿಗೆ ನೆರಳೀವ ಕಲ್ಪವೃಕ್ಷವಾಯಿತು. ನಂತರ ಅವರ…

Read More

ಪಕ್ವ ಭಾಷೆ, ಸರಳ ಶೈಲಿ ಎತ್ತಿಕೊಂಡ ವಸ್ತು ವಿಷಯಗಳ ಕುರಿತು ಆಮೂಲಾಗ್ರ ಚಿಂತನೆ, ಅಷ್ಟೇ ನಿಖರವಾಗಿ ಮತ್ತು ಸಮಯಬಂಧಿತವಾಗಿ ಬರೆವಣಿಗೆಯನ್ನು ಮುಗಿಸುವುದು. ಇದು ಬರೆಹಗಾರನಲ್ಲಿರಬೇಕಾದ ಶಿಸ್ತು ಮತ್ತು ಧೋರಣೆ. ವಿಶ್ರಾಂತ ಪ್ರಾಧ್ಯಾಪಕಿ ಡಾ. ಪ್ರಮೀಳಾ ಮಾಧವ್ ಕಾಸರಗೋಡು ಕೂಡ್ಲಿನಿಂದ ಉದ್ಯೋಗಕ್ಕಾಗಿ ಕರ್ನಾಟಕಕ್ಕೆ ಹೋದವರು ಕನ್ನಡ ಪ್ರಾಧ್ಯಾಪಕಿಯಾಗಿ ಈಗ ಏಳು ವರ್ಷಗಳ ಹಿಂದೆ ನಿವೃತ್ತರಾದ ಮೇಲೆ ಮತ್ತೆ ಮಣ್ಣಿಗೆ ಮರಳಿದರು. ಕನ್ನಡ ಭಾಷೆ, ಸಾಹಿತ್ಯದ ಮೇಲೆ ಕಾಸರಗೋಡು ಸರಕಾರಿ ಕಾಲೇಜಿನಿಂದ 1974ರಲ್ಲಿ ಎಂ.ಎ. ಪ್ರಥಮ ರ್ಯಾಂ ಕ್ ನೊಂದಿಗೆ ಹೊರಬಂದ ಪ್ರಮೀಳ ಅವರು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಕೆಲ ವರ್ಷ ದುಡಿದಿದ್ದರು. ಬೆಂಗಳೂರಿನ ಆಚಾರ್ಯ ಕಾಲೇಜು ಕರೆದಿತ್ತು. ಇಷ್ಟರಲ್ಲೆ ‘ಗಿರಿಜಾ ಕಲ್ಯಾಣ‌’ ಮತ್ತು ‘ಕುಮಾರ ಸಂಭವ‌ ತೌಲನಿಕ’ ಅಧ್ಯಯನ ಮಹಾಪ್ರಬಂಧ ಸಮರ್ಪಿಸಿ ಡಾಕ್ಟರೇಟ್ ಹೊಂದಿದವರು ಮುಂದೆ ಈ ತನಕ ಐವತ್ತಕ್ಕೂ ಮಿಕ್ಕು ಕೃತಿಗಳನ್ನು ಸಾರಸ್ವತ ಲೋಕಕ್ಕೆ ಸಮರ್ಪಿಸಿದ್ದಾರೆ. ವಿವಿಧ ಪ್ರಕಾರಗಳಲ್ಲಿ ಅವರ ಕೊಡುಗೆ ವ್ಯಾಪಿಸಿದೆ. ‘ನಾಂದಿ’ ಮತ್ತು ‘ಇತರ ಕಥೆಗಳು’ ಎಂಬ ಸಣ್ಣ…

Read More

ಡಾ. ಶ್ರೀವಿದ್ಯಾ ಮುರಳೀಧರ್ ಭರತನೃತ್ಯದಲ್ಲಿ ಖ್ಯಾತಿವೆತ್ತ ಕಲಾವಿದೆ. ಕಲೆ ಅವರಿಗೆ ಪರಂಪರಾಗತವಾಗಿ ಬಂದ ಆಸ್ತಿ. ತಂದೆ ಶ್ರೀ ಕೆ. ರಾಮನ್ ಹಾಗೂ ಮಾತೃಶ್ರೀ ಶ್ರೀಮತಿ ಶಾರದಾ ರಾಮನ್ ಕಲೆಯಲ್ಲಿ ಅತಿಯಾದ ಆಸಕ್ತಿಯಿಂದ, ಮಗಳನ್ನು ಮೂರನೆಯ ವಯಸ್ಸಿನಲ್ಲಿಯೇ ಪಂದನಲ್ಲೂರು ಶೈಲಿಯ ಭರತ ನೃತ್ಯ ಕಲಿಕೆಗೆ ಗೆಜ್ಜೆ ಕಟ್ಟಿಸಿದರು. ಪ್ರಥಮ ಗುರು ಅಂಬಳೆ ರಾಜೇಶ್ವರಿ ಸುಬ್ಬರಾವ್ ಇವರು. ಬಳಿಕ ಗೆಜ್ಜೆಯ ಹೆಜ್ಜೆಗೆ ನಾದ ತುಂಬಿದವರು ನಾಟ್ಯಾಚಾರ್ಯ ಶ್ರೀ ಕೆ. ಮುರಳೀಧರ ರಾಯರು. 1986ರಲ್ಲಿ ಮೈಸೂರಿನ ಭಾರತೀಯ ಸಂಗೀತ ಸಭಾದವರು ನಡೆಸಿದ ರಾಜ್ಯಮಟ್ಟದ ಭರತನೃತ್ಯ ಸ್ಪರ್ಧೆಯಲ್ಲಿ ಮೊದಲಿಗರಾಗಿ, ಮಹಾರಾಜಾ ಶ್ರೀ ಶ್ರೀಕಂಠದತ್ತ ಒಡೆಯರ್ ಅವರಿಂದ ಚಿನ್ನದ ಪದಕ ಪಡೆದಾಗ ಶ್ರೀವಿದ್ಯಾ ಇನ್ನೂ ಎಂಟರ ಹರೆಯದ ಬಾಲೆ. ಆ ಮೇಲಿನ ಎರಡು ವರ್ಷಗಳಲ್ಲಿ ಇಂಡಿಯನ್ ಫಿಲಂ ಅಂಡ್ ಟಿವಿ ಇನ್ಸ್ಟಿಟ್ಯೂಟ್ ನವರು ನಡೆಸಿದ ರಾಜ್ಯ ಮಟ್ಟದ ಭರತನಾಟ್ಯ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಗಳಿಸಿ ಬಂಗಾರದ ಪದಕ ಪಡೆದ ಈ ಪ್ರತಿಭಾವಂತೆ ವಿದ್ಯುಕ್ತವಾಗಿ ರಂಗ ಪ್ರವೇಶ ಮಾಡಿದ್ದು ಮಡಿಕೇರಿಯ…

Read More

ಒಂದು ಕಾಲವಿತ್ತು. ಮಹಿಳೆಯರು ಏನಿದ್ದರೂ ಮನೆಯ ಒಳಗೆ, ಮನೆವಾರ್ತೆ ಮಾಡುವುದಕ್ಕಷ್ಟೇ ಸೀಮಿತ ಎಂಬ ಧೋರಣೆ ಇತ್ತು. ಆದರೆ ಈಗ ಹಾಗಲ್ಲ. ಮಹಿಳೆಯರು ಮನೆಯ ಹೊರಗೂ ಏನೇನೆಲ್ಲಾ ಸಾಧನೆಗಳನ್ನು ಮಾಡಬಹುದೆಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಅಂಥವರಲ್ಲಿ ಬಹುಮುಖ ಪ್ರತಿಭಾ ಸಂಪನ್ನರಾಗಿ ಸಾಧನೆಯ ಶಿಖರದತ್ತ ಏರುತ್ತಿರುವ ಶ್ರೀಮತಿ ವಿದುಷಿ ಸುಮಂಗಲಾ ರತ್ನಾಕರರನ್ನು ಹೆಸರಿಸಲೇಬೇಕು. ಸಂಸ್ಕಾರವಂತ ಮನೆತನದಲ್ಲಿ ಜನಿಸಿ, ಹಾಗೆಯೇ ಸಂಸ್ಕಾರವಂತ ಮನೆತನದ ಸೊಸೆಯಾಗಿ, ಹೆತ್ತವರ ಹಾಗೂ ತನ್ನ ಪತಿ, ಅತ್ತೆ, ಮಾವಂದಿರ ಪೂರ್ಣ ಪ್ರೋತ್ಸಾಹ, ಸಹಾಯ, ಬೆಂಬಲದಿಂದ ಓರ್ವ ಕಲಾ ಸಾಧಕಿಯಾಗಿ ಗುರುತಿಸಿಕೊಂಡಿದ್ದಾರೆ ಸುಮಂಗಲಾ ರತ್ನಾಕರ್. ಇವರು ಕಲೆಯನ್ನು ಆರಾಧಿಸುವ ಮನೋಭಾವ ಉಳ್ಳವರಾಗಿದ್ದುದರಿಂದಲೇ ತಾನು ಮೂವತ್ತು ವರುಷಗಳ ಹಿಂದೆ ಪ್ರಾರಂಭಿಸಿದಂತಹ ನೃತ್ಯ ತರಬೇತಿ ಕೇಂದ್ರಕ್ಕೆ ‘ನಾಟ್ಯಾರಾಧನಾ ಕಲಾಕೇಂದ್ರ’ ಎಂದು ನಾಮಕರಣ ಮಾಡಿರುತ್ತಾರೆ. ಇವರು ಕೇವಲ ಭರತನಾಟ್ಯ ಕಲಾವಿದೆ ಮಾತ್ರವಲ್ಲ. ಯಕ್ಷಗಾನ ಕಲಾವಿದೆಯೂ ಆಗಿ ಸಾಧನೆ ಮಾಡಿದ್ದಾರೆ. ‘ಯಕ್ಷಾರಾಧನಾ ಕಲಾಕೇಂದ್ರ’ ಸ್ಥಾಪನೆ ಮಾಡಿ ಕಳೆದ ಹದಿನೈದು ವರ್ಷಗಳಿಂದ ಮಕ್ಕಳಿಗೆ, ಮಹಿಳೆಯರಿಗೆ ಯಕ್ಷಗಾನದಲ್ಲಿ ತರಬೇತಿ ನೀಡುವ ‘ಯಕ್ಷಗುರು’ ಎಂದೆನಿಸಿಕೊಂಡಿದ್ದಾರೆ.…

Read More