Subscribe to Updates
Get the latest creative news from FooBar about art, design and business.
Author: roovari
ಶ್ರೀಮತಿ ವೈ.ಕೆ. ಸಂಧ್ಯಾ ಶರ್ಮ ಅವರು ಹುಟ್ಟಿದ್ದು ಬೆಂಗಳೂರು ಆದರೂ ಅವರ ಹಿರಿಯರು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಯಲಗಲವಾಡಿಗೆ ಸೇರಿದವರು. ತಂದೆ ಶ್ರೀ ವೈ.ಕೆ. ಕೇಶವಮೂರ್ತಿಯವರು, ಆಗಿನ ಮೈಸೂರು ರಾಜ್ಯದ ಲೋಕೋಪಯೋಗಿ ಇಲಾಖೆಯಲ್ಲಿ ಮುಖ್ಯ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದವರು. ತಾಯಿ ಅಂಬಾಬಾಯಿ. ಸಂಪ್ರದಾಯಸ್ಥ ಕುಟುಂಬವಾದರೂ, ಆಧುನಿಕ ಮನೋಭಾವದ ಮನೆತನ. ತಂದೆ-ತಾಯಿಯರಿಂದ ದೊರೆತ ಸಂಸ್ಕಾರ ಅವರಿಗೆ ಸಾಹಿತ್ಯ-ಕಲೆಗಳಲ್ಲಿ ಆಸಕ್ತಿಯನ್ನು ಮೂಡಿಸಿತ್ತು. ಬಾಲಕಿಯಾಗಿದ್ದಾಗಲೇ ತಮ್ಮ ಪ್ರೌಢ ಶಾಲಾ ದಿನಗಳಲ್ಲಿಯೇ ಸಂಧ್ಯಾ ನಾಟಕವನ್ನು ಬರೆದಿದ್ದರು. ಆಗ ಅವರಿಗೆ ದೊರೆತ ಪ್ರೋತ್ಸಾಹದಿಂದ ಶಾಲಾ-ಕಾಲೇಜುಗಳ ದಿನಗಳಲ್ಲಿಯೇ ಓದಿನ ಜೊತೆಗೆ ಸಾಹಿತ್ಯದ ಓದು ಹಾಗೂ ಬರವಣಿಗೆ ಹವ್ಯಾಸವಾಯಿತು. ಮುಂದೆ ಸಂಧ್ಯಾ ಅವರು ಪದವಿಗೆ ಬಂದಾಗ ಕನ್ನಡ ಸಾಹಿತ್ಯದ ವಿದ್ಯಾರ್ಥಿನಿಯಾಗಿ ಕನ್ನಡ ಬಿ.ಎ. ಆನರ್ಸ್, ಕನ್ನಡ ಎಂ.ಎ. ಪದವಿಗಳಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ಪದವಿಯನ್ನು ಪಡೆದುಕೊಂಡರು. ಜೊತೆ ಜೊತೆಗೆ ಸಾಹಿತ್ಯ ಕೃಷಿಯೂ ಸಾಗಿತ್ತು. ಸಾಹಿತ್ಯಕ್ಕೆ ಸಂಬಂಧಿಸಿದ ಉದ್ಯೋಗಗಳಲ್ಲೇ ಆಸಕ್ತಿ ತೋರಿದ ಸಂಧ್ಯಾ ಅವರು ಪ್ರಜಾಮತ, ಪ್ರಜಾಪ್ರಭುತ್ವ, ಇಂಚರ…
ಪುತ್ತೂರು : ಪುತ್ತೂರಿನ ಶ್ರೀ ಮೂಕಾಂಬಿಕ ಕಲ್ಚರಲ್ ಅಕಾಡಮಿ ಅರ್ಪಿಸುವ ವಾರ್ಷಿಕ ರಾಷ್ಟ್ರೀಯ ನೃತ್ಯೋತ್ಸವ ‘ನರ್ತನಾವರ್ತನಾ’ ದಿನಾಂಕ 03-03-2024 ರಂದು ಪುತ್ತೂರಿನ ಜೈನ ಭವನದಲ್ಲಿ ಸಂಜೆ ಘಂಟೆ 5.00 ರಿಂದ ನಡೆಯಿತು. ಕಾರ್ಯಕ್ರಮದ ಆರಂಭದಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಶಾಂತಲಾ ನೃತ್ಯ ಪ್ರಶಸ್ತಿ ಪುರಸ್ಕೃತ ನಾಟ್ಯಗುರು ಶ್ರೀ ಉಳ್ಳಾಲ ಮೋಹನ್ ಕುಮಾರ್ ದೀಪ ಪ್ರಜ್ವಲನೆಗೈದು ಶುಭಹಾರೈಸಿದರು. ಇದೇ ವೇದಿಕೆಯಲ್ಲಿ ಪುತ್ತೂರಿನ ಡಾ. ಹರಿಕೃಷ್ಣ ಪಾಣಾಜೆ ಇವರಿಗೆ ಈ ಸಾಲಿನ ‘ಕಲಾಶ್ರಯ’ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಪುತ್ತೂರಿನ ಪ್ರಖ್ಯಾತ ವೈದ್ಯ, ಎಸ್. ಡಿ. ಪಿ. ರೆಮಿಡೀಸ್ ಎಂಡ್ ರಿಸರ್ಚ್ ಸೆಂಟರ್ ಇದರ ಆಡಳಿತ ನಿರ್ದೇಶಕ ಹಾಗೂ ಪುತ್ತೂರಿನಲ್ಲಿ ತನ್ನದೇ ಪರಿಕಲ್ಪನೆಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ, ಭರತನಾಟ್ಯ ಹಾಗೂ ಯಕ್ಷಗಾನವನ್ನೊಳಗೊಂಡ 3 ದಿನಗಳ ವಿಶಿಷ್ಟ ‘ಕಲೋಪಾಸನಾ’ ನೃತ್ಯೋತ್ಸವವನ್ನು ಕಳೆದ 20 ವರ್ಷಗಳಿಂದ ಆಚರಿಸಿಕೊಂಡು ಬಂದಿರುವ ಹಾಗೂ ಕಲಾಪೋಷಕರಾದ ಇವರ ಕಲಾ ಪೋಷಣೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಯಿತು. ಅಭ್ಯಾಗತರಾಗಿ ಆಗಮಿಸಿದ ಶ್ರೀಮತಿ ಸುಧಾ ಶ್ರೀಪತಿ ರಾವ್ ಕಾರ್ಯಕ್ರಮಕ್ಕೆ…
ಡಾ. ಟಿ.ಎಸ್. ಸತ್ಯವತಿ ಇವರ ಹೆಸರು ಕರ್ನಾಟಕ ಕಂಡ ಪ್ರಚಂಡ ಪಾಂಡಿತ್ಯ ಮತ್ತು ವಾಗ್ವಿಲಾಸವುಳ್ಳ ಮಹಿಳೆ. ಸಂಸ್ಕೃತ ಮತ್ತು ಕರ್ನಾಟಕ ಸಂಗೀತ ಇವರ ಇಡಾ-ಪಿಂಗಳ ನಾಡಿಗಳಂತೆ. ಹುಟ್ಟಿದಾರಭ್ಯ ವಾಗೀಶ್ವರಿಯ ಕೃಪೆ ಇವರಿಗೆ. ಕೇವಲ ಎರಡು ವರ್ಷದ ಬಾಲಕಿಯಾಗಿದ್ದಾಗಲೇ ಸತ್ಯವತಿಯವರು ಮೈಸೂರು ಮಹಾರಾಣಿಯವರ ಎದುರು ಹಾಡಿ ಪ್ರಶಂಸೆ ಪಡೆದವರು. ಕುಶಾಗ್ರಮತಿ, ವಿವೇಕಶೀಲೆ, ವಿನಯ ಸಂಪನ್ನೆ, ಏಕ ಸಂಧಿಗ್ರಾಹಿ, ಸಂಸ್ಕೃತ ಮತ್ತು ಕರ್ನಾಟಕ ಸಂಗೀತದಲ್ಲಿ ಪ್ರಗಲ್ಭ ಪಾಂಡಿತ್ಯ ಸಾಧಿಸಿದ ಕರ್ನಾಟಕದ ಹೆಮ್ಮೆಯ ವಿದುಷಿ ಸತ್ಯವತಿ. ಸಂಸ್ಕೃತದ ಸಾಹಿತ್ಯ, ಕಾವ್ಯಗಳ ಮೇಲೆ ಅಸಾಧಾರಣ ಹಿಡಿತ. ಸಂಗೀತದ ಲಕ್ಷ್ಯ ಲಕ್ಷಣಗಳೆರಡರಲ್ಲೂ ಸಾಟಿಯೇ ಇಲ್ಲದಷ್ಟು ಪ್ರತಿಭೆ. ವೇದಿಕೆ ಹತ್ತಿ ನಿಂತರೆ ಸಾಕು ಕನ್ನಡವೋ, ಸಂಸ್ಕೃತವೋ, ಇಂಗ್ಲೀಷೋ… ಅವುಗಳ ವಾಗ್ಝರಿ, ಆಯ್ಕೆಯ ಪದಗಳು, ಆತ್ಮವಿಶ್ವಾಸದ ಮಾತುಗಳು…., ಸ್ಪಟಿಕದಷ್ಟು ಶುದ್ಧವಾದ ಭಾಷಾ ಲಾಲಿತ್ಯವನ್ನು ತನ್ನ ಶ್ರೀಮಂತ ಕಂಠದಲ್ಲಿ, ಸ್ಪಷ್ಟ ಉಚ್ಚಾರದೊಂದಿಗೆ ಬೆರೆಸುವ ಅವರ ಅಸ್ಖಲಿತ ಕನ್ನಡದ ಮೇಲಿನ ವಿದ್ವತ್ ಪೂರ್ಣ ಪ್ರಭುತ್ವಕ್ಕೆ ನಿಬ್ಬೆರಗಾಗದ ಶ್ರೋತೃವಿಲ್ಲ. ಅವರ ಕುಟುಂಬವೇ ಪ್ರತಿಭಾವಂತರ ಸಂಸಾರ. ತಂದೆ…
ಬೆಂಗಳೂರಿನ ಖ್ಯಾತ ‘ಸಾಧನ ಸಂಗಮ’ ನೃತ್ಯಸಂಸ್ಥೆ ಎರಡು ದಿನಗಳ ಕಾಲ ನಡೆಸಿದ ‘ಯುಗಳ’ ಮತ್ತು ‘ಬಹುಳ’ ನೃತ್ಯೋತ್ಸವಗಳು ವರ್ಣರಂಜಿತವಾಗಿ ನೆರೆದ ಕಲಾರಸಿಕರ ಮನರಂಜಿಸಿತು. ‘ಯುಗಳ’ದಲ್ಲಿ ಹಲವು ಜೋಡಿ ಕಲಾವಿದೆಯರ ಪ್ರತಿಭಾ ಪ್ರದರ್ಶನ ಕಣ್ತುಂಬಿದರೆ, ‘ಬಹುಳ’ ಕಾರ್ಯಕ್ರಮದಲ್ಲಿ ಶೀರ್ಷಿಕೆಯೇ ಸೂಚಿಸುವಂತೆ ಬಹು ಕಲಾವಿದರ ತಂಡ ಅರ್ಪಿಸುವ ಎರಡು ನೃತ್ಯರೂಪಕಗಳಿಗೆ ಅವಕಾಶವನ್ನು ಕಲ್ಪಿಸಲಾಗಿತ್ತು. ಸಂಸ್ಥೆ, ಪ್ರತಿವರ್ಷ ತಪ್ಪದೆ ನಡೆಸಿಕೊಂಡು ಬರುತ್ತಿರುವ ನೃತ್ಯೋತ್ಸವಗಳಲ್ಲಿ ‘ಸಾಧನ ಸಂಗಮ’ದ ಆಶ್ರಯದಲ್ಲಿ ನಾಡಿನ ಬಹುತೇಕ ನೃತ್ಯತಂಡಗಳು ಈ ತಮ್ಮ ಕಲಾನೈಪುಣ್ಯವನ್ನು ಪ್ರದರ್ಶಿಸಿ, ಜನಮೆಚ್ಚುಗೆ ಗಳಿಸಿವೆ ಅಷ್ಟೇ ಅಲ್ಲದೆ ಇದರಲ್ಲಿ ಭಾಗವಹಿಸುವುದು ಒಂದು ಪ್ರತಿಷ್ಠೆಯ ಸಂಗತಿಯೂ ಆಗಿದೆ. ಇತ್ತೀಚೆಗೆ ಬೆಂಗಳೂರಿನ ‘ರಂಗೋಪನಿಷತ್’ ಸಭಾಂಗಣದಲ್ಲಿ ಸಾಧನ ಸಂಗಮದ ‘ನಾಟ್ಯ ನಿಪುಣ’ ಹಿರಿಯ ಶಿಷ್ಯೆಯರ ತಂಡ ಅಭಿನಯಿಸಿದ ಮಹಾಭಾರತದ ಒಂದು ಪ್ರಮುಖ ಸನ್ನಿವೇಶದ ಸುತ್ತ ಹೆಣೆದ ರಸವತ್ತಾದ ‘ಪ್ರೇಕ್ಷಾಗೃಹ’- ಮನೋಜ್ಞ ನೃತ್ಯರೂಪಕ ಮನರಂಜನೆಯೊಡನೆ ಗಾಢ ಪರಿಣಾಮ ಬೀರಿತು. ದೇವಲೋಕಕ್ಕೆ ಆಗಮಿಸಿದ್ದ ಸುಂದರಾಂಗ ಅರ್ಜುನನನ್ನು ಕಂಡು ಊರ್ವಶಿ, ಅವನಲ್ಲಿ ಮೋಹಗೊಂಡಾಗ, ಅದನ್ನವನು, ನಿರಾಕರಿಸಿ ಅವಳಿಂದ ಶಾಪಗ್ರಸ್ತನಾಗಿ…
ಮಂಗಳೂರು: ಧ್ಯಾನಸಂಗೀತ ಅಕಾಡೆಮಿ ಕಲಾ ಟ್ರಸ್ಟ್ ವತಿಯಿಂದ ಸಂಗೀತ ವಿದ್ಯಾರ್ಥಿಗಳು ಮತ್ತು ಸಂಗೀ ತಾಸಕ್ತರಿಗಾಗಿ ‘ದಾಸ ನಮನ’ ಸಂಗೀತ ಕಾರ್ಯಾಗಾರ ದಿನಾಂಕ 09-03-2024 ರಂದು ಆಯೋಜಿಸಲಾಗಿದೆ. ಮಂಗಳೂರು ವಿ.ಟಿ ರಸ್ತೆಯಲ್ಲಿರುವ ಶ್ರೀಕೃಷ್ಣ ಮಂದಿರ ಸಭಾಂಗಣದಲ್ಲಿ ಸಂಜೆ ಘಂಟೆ 4.00ರಿಂದ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಸಂಗೀತ ಕಲಾವಿದರಾದ ಹುಬ್ಬಳ್ಳಿಯ ಪಂಡಿತ್ ಮಲ್ಲಿಕಾರ್ಜುನ ಸಂಶಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾರ್ಗದರ್ಶನ ನೀಡಲಿರುವರು. ಕಾರ್ಯಾಗಾರದಲ್ಲಿ ಶುಲ್ಕರಹಿತವಾಗಿ ಹೆಸರು ನೋಂದಾಯಿಸಿಕೊಳ್ಳಲು 9886914748 ಈ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.
ಮಂಗಳೂರು : ಕರ್ನಾಟಕ ಅಧ್ಯಯನ ಕೇಂದ್ರ ಹಾಗೂ ಬಂಟಮಲೆ ಅಕಾಡೆಮಿ (ರಿ) ಗುತ್ತಿಗಾರು ಸುಳ್ಯ ಇವರ ವತಿಯಿಂದ ಪುಸ್ತಕ ಬಿಡುಗಡೆ ಹಾಗೂ ‘ಕುವೆಂಪು ಬಂಟಮಲೆ ಪ್ರಶಸ್ತಿ’ ಪ್ರದಾನ ಸಮಾರಂಭವು ದಿನಾಂಕ 09-03-2024ರಂದು ಸಂಜೆ 4-00 ಗಂಟೆಗೆ ಮಂಗಳೂರಿನ ಸಹೋದಯ ಸಭಾಂಗಣದಲ್ಲಿ ನಡೆಯಲಿದೆ. ಈ ಸಮಾರಂಭದ ಅಧ್ಯಕ್ಷತೆಯನ್ನು ವಿಧಾನ ಪರಿಷತ್ ಸದಸ್ಯರಾದ ಶ್ರೀ ಬಿ.ಕೆ. ಹರಿಪ್ರಸಾದ್ ಇವರು ವಹಿಸಲಿದ್ದು, ಸಾಹಿತಿ ಪಾರ್ವತೀಶ ಬಿಳಿದಾಳೆ ಇವರು ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದಾರೆ. ಕಲ್ಲೆ ಶಿವೋತ್ತಮ ರಾವ್ ಇವರ ‘ಬದುಕು ಹಾಗೂ ಕೊಡುಗೆ’ ಬಗ್ಗೆ ಬರಹಗಾರರಾದ ಡಾ. ಪುರುಷೋತ್ತಮ ಬಿಳಿಮಲೆ ಹಾಗೂ ‘ಬಂಟಮಲೆ ಅಕಾಡೆಮಿ ಹಾಗೂ ಪ್ರಶಸ್ತಿ’ ಕುರಿತು ನಾಟಕಕಾರರು ಹಾಗೂ ಸಾಮಾಜಿಕ ಚಿಂತಕರಾದ ಎ.ಕೆ. ಹಿಮಕರ ಇವರು ಉಪನ್ಯಾಸ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಕಲ್ಲೆ ಶಿವೋತ್ತಮ ರಾವ್ ಇವರಿಗೆ ‘ಕುವೆಂಪು ಬಂಟಮಲೆ ಪ್ರಶಸ್ತಿ’ಯನ್ನು ಪುತ್ತೂರಿನ ಖ್ಯಾತ ಶಿಕ್ಷಣ ತಜ್ಞರಾದ ಡಾ. ಎನ್. ಸುಕುಮಾರ ಗೌಡ ಇವರು ಪ್ರದಾನ ಮಾಡಿ ಸನ್ಮಾನಿಸಲಿದ್ದಾರೆ ಹಾಗೂ ಕಲ್ಲೆ ಶಿವೋತ್ತಮ ರಾವ್ ಇವರ…
ನವ್ಯ ಕತೆಗಳು ತರುಣ ಜನಾಂಗದವರಲ್ಲಿ ಜನಪ್ರಿಯವಾಗುತ್ತಾ ಹೋಗಿದ್ದ ಕಾಲ. ಅನಂತಮೂರ್ತಿ, ಯಶವಂತ ಚಿತ್ತಾಲ, ಲಂಕೇಶರು ಆಗಲೇ ಉತ್ತಮ ಕತೆಗಾರರೆಂದು ಗುರುತಿಸಿಕೊಂಡಿದ್ದರು. ನವ್ಯ ಕತೆಗಳ ಹಾದಿಯು ಹೆಚ್ಚು ಕಡಿಮೆ ಸ್ಪಷ್ಟವಾಗಿತ್ತು. ವಸ್ತು, ತಂತ್ರ, ವೈಚಾರಿಕತೆ ಮತ್ತು ಶೈಲಿಗೆ ಖಚಿತ ರೂಪ ಬಂದಿತ್ತು. ತಕ್ಕಮಟ್ಟಿಗಿನ ಪ್ರಬುದ್ಧತೆಯನ್ನೂ ಸಾಧಿಸಿಕೊಂಡಿತ್ತು. ತಾವು ಅರ್ಥಮಾಡಿಕೊಂಡಿದ್ದ ರೀತಿಯಲ್ಲಿ ನವ್ಯಕತೆಗಳ ಸಂಪ್ರದಾಯವನ್ನು ಮುಂದುವರಿಸಿದ್ದ ಶ್ರೀಕೃಷ್ಣ ಆಲನಹಳ್ಳಿ, ಆರ್ಯ ಮೊದಲಾದವರು ಕತೆಯ ವೈಲಕ್ಷಣ್ಯಗಳಿಗೆ ಸ್ಥಿರತೆಯನ್ನು ತಂದುಕೊಟ್ಟಿದ್ದರೂ ವಸ್ತು ಮತ್ತು ತಂತ್ರಗಳಲ್ಲಿ ಹೊಸ ಸಾಧ್ಯತೆಗಳು ಹುಟ್ಟಿಕೊಂಡಿರಲಿಲ್ಲ. ನವ್ಯ ಮತ್ತು ಈ ಪೀಳಿಗೆಯ ತರುಣ ಕತೆಗಾರರನ್ನು ಆಳವಾಗಿ ಪ್ರಭಾವಿಸಿದ ಕೆ.ವಿ. ತಿರುಮಲೇಶರು ಅನೇಕ ದೃಷ್ಟಿಯಿಂದ ಕನ್ನಡದ ಸಣ್ಣಕತೆಯ ಕಲಾತ್ಮಕ- ವೈಚಾರಿಕ ಆಯಾಮಗಳನ್ನು ಬದಲಿಸಿದರು. ಸಿದ್ಧ ಮಾನದಂಡಗಳಿಲ್ಲದೆ ನೇರವಾಗಿ ಆರಂಭಗೊಳ್ಳುವ ಇವರ ಕತೆಗಳು ಆಪ್ತವೆನಿಸುವ ನಿರೂಪಣ ವಿಧಾನವನ್ನು ಹೊಂದಿವೆ. ನಿರೂಪಣೆಗೆ ಸೂಕ್ತವಾದ ವಿಕಸನಶೀಲ ಭಾಷೆಯಿದೆ. ಸವಕಲು ಹಾದಿಯಿಂದ ಹೊಸ ಹಾದಿಯೊಳಗೆ ತವಕದಿಂದ ಮುನ್ನುಗ್ಗುವ ವೇಗವಿದೆ. ಹಲವಾರು ವರ್ಷಗಳಿಂದ ಬರೆಯುತ್ತಲೇ ಇರುವ ತಿರುಮಲೇಶರು ಸದಾ ಹೊಸತನ್ನೇ ಕಾಣಿಕೆಯಾಗಿ ನೀಡುತ್ತಿದ್ದಾರೆ.…
ಮಂಗಳೂರು : ‘ಪಯಣ ಬೆಂಗಳೂರು’ ತಂಡವು ಸಮಾನತೆಯೆಡೆಗೆ ಎಂಬ ಶೀರ್ಷಿಕೆಯಲ್ಲಿ ಅಭಿನಯಿಸಿದ ನಾಟಕ ‘ತಲ್ಕಿ’. ಈ ನಾಟಕದ 9ನೇ ಪ್ರಯೋಗ ದಿನಾಂಕ 05-03-2024ರ ಮಂಗಳವಾರ ಸಂಜೆ ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜಿನಲ್ಲಿ ಪ್ರದರ್ಶನಗೊಂಡಿತು. ಆಯನ ನಾಟಕದ ಮನೆ ಆಯೋಜಿಸಿದ್ದ ಎರಡು ದಿನದ ನಾಟಕೋತ್ಸವದಲ್ಲಿ ಪ್ರದರ್ಶನಗೊಂಡ ಈ ನಾಟಕದ ಎಲ್ಲಾ ಪಾತ್ರಧಾರಿಗಳು ತೃತೀಯ ಲಿಂಗಿಗಳೇ. ಅದೂ 55 ವರ್ಷ ದಾಟಿದವರು. ಇದು ಯಾವುದೇ ಕಥೆಯನ್ನು ಆಧರಿಸಿದ ನಾಟಕವಾಗಿರದೆ ಅವರ ಬದುಕಿನ ಕಥೆಯನ್ನೇ, ಅವರು ಬಾಲ್ಯದಲ್ಲಿ ಕಂಡ ಕನಸುಗಳನ್ನೇ ನಾಟಕವಾಗಿಸಿದ ಈ ನಾಟಕ. ಅವರ ವಿಶಿಷ್ಟ ಖಾದ್ಯವಾದ ‘ತಲ್ಕಿ’ ಎಂಬ ಹೆಸರಿನಿಂದ ರೂಪುಗೊಂಡ ಈ ನಾಟಕ, ಅವರ ಬದುಕಿನ ತೊಳಲಾಟಗಳು, ಅವರೊಳಗೆ ಒಬ್ಬರು ಇನ್ನೊಬ್ಬರನ್ನು ಹೇಗೆ ಸಂಬೋಧಿಸುತ್ತಾರೆ, ಅವರ ಬದುಕಿನಲ್ಲಿರುವ ಆಚಾರ ವಿಚಾರಗಳು, ಅವರ ಪ್ರೀತಿ, ಪ್ರೇಮ, ನೋವು, ನಲಿವು, ಬದುಕಬೇಕೆಂಬ ಆಸೆ ಮತ್ತು ಅವರ ಕುಟುಂಬ ಅವರನ್ನು ನಡೆಸಿಕೊಂಡ ರೀತಿ ಇದೆಲ್ಲವನ್ನೂ ಒಂದು ಕಥೆಯಾಗಿ ಹೇಳಿಕೊಳ್ಳುತ್ತಾ ಸಾಗುತ್ತದೆ. 55 ವರ್ಷ ದಾಟಿದ ಈ…
ಬೈಂದೂರು : ಬೈಂದೂರು ಶ್ರೀ ಶಾರದಾ ವೇದಿಕೆಯಲ್ಲಿ ‘ಲಾವಣ್ಯ’ದ ರಂಗಪಂಚಮಿ-2024 ಐದು ದಿನಗಳ ನಾಟಕೋತ್ಸವದ ಎರಡನೇ ದಿನದ ಸಮಾರಂಭವು ದಿನಾಂಕ 03-03-2024ರಂದು ನಡೆಯಿತು. ಈ ಸಮಾರಂಭದಲ್ಲಿ ಶುಭಾಶಂಸನೆಗೈದ ಚಲನಚಿತ್ರ ಸಾಹಿತಿ ಪ್ರಮೋದ್ ಮರವಂತೆ “ಕರಾವಳಿಯ ಭಾಗಗಳಲ್ಲಿ ಸಾಂಪ್ರದಾಯಿಕ ಕಂಬಳ, ಹಬ್ಬ ಹರಿದಿನಗಳು, ಯಕ್ಷಗಾನ, ರಥೋತ್ಸವ ಮುಂತಾದವುಗಳಿಗೆ ಹೆಚ್ಚಿನ ಪ್ರಾಧಾನ್ಯತೆ ಇರುವಾಗ ರಂಗಭೂಮಿಯ ಅಸ್ಥಿತ್ವಕ್ಕಾಗಿ 47 ವರ್ಷಗಳಿಂದ ನಿರಂತರ ಚಟುವಟಿಕೆಯಲ್ಲಿರುವ ಲಾವಣ್ಯದ ಕಾರ್ಯ ಶ್ಲಾಘನೀಯವಾದದ್ದು. ರಂಗಭೂಮಿ, ಸಿನೇಮಾ, ಇನ್ನಿತರ ಕಲಾಪ್ರಕಾರಗಳಿಗೆ ಮೂಲ ಎನ್ನುವುದು ಬರವಣಿಗೆ ಹಾಗೂ ಸಾಹಿತ್ಯ. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಮೊಬೈಲ್ನಿಂದಾಗಿ ಸಾಹಿತ್ಯಾಭಿರುಚಿ ಕಡಿಮೆಯಾಗುತ್ತಿದೆ. ಪ್ರತಿದಿನ ಮನೆಯಲ್ಲಿ ದಿನಪತ್ರಿಕೆ, ವಾರಪತ್ರಿಕೆಗಳನ್ನು ತರಿಸಿಕೊಂಡು ಓದುವ ಹವ್ಯಾಸ ಬೆಳೆಸಿಕೊಳ್ಳುವುದರ ಮೂಲಕ ಮಕ್ಕಳಿಗೂ ಓದಿನ ಕಡೆ ಗಮನಹರಿಸುವಂತೆ ಮಾಡುವುದು ಇಂದಿನ ಅನಿವಾರ್ಯ. ಹೆತ್ತವರು ಸಂಜೆ ವೇಳೆಯಲ್ಲಿ ಧಾರಾವಾಹಿಗಳನ್ನು ನೋಡುವುದನ್ನು ಕಡಿಮೆ ಮಾಡಿಕೊಂಡು ಆ ಸಮಯವನ್ನು ಓದುವುದರ ಬಗ್ಗೆ ಗಮನಹರಿಸಬೇಕು. ನಮ್ಮೊಳಗಿನ ಸೆಲೆಯನ್ನು ಅಲೆಯಾಗಿಸುವುದೇ ಕಲೆಯಾಗಿದ್ದು ಇದರೊಂದಿಗೆ ನಮ್ಮ ಸಂಸ್ಕೃತಿ, ಸಾಹಿತ್ಯವನ್ನು ಉಳಿಸಿ ಬೆಳೆಸಿ ಪ್ರೋತ್ಸಾಹಿಸಿ” ಎಂದು…
ಪುತ್ತೂರು : ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ ಕರ್ನಾಟಕ ಸಂಘ, ಪುತ್ತೂರು ಕನ್ನಡ ವಿಭಾಗ, ವಿವೇಕಾನಂದ ಕಾಲೇಜು (ಸ್ವಾಯತ್ತ) ಪುತ್ತೂರು ಇದರ ಸಹಯೋಗದಲ್ಲಿ ‘ನೆನಪಾಗಿ ಉಳಿದವರು’ ಕೃತಿ ಲೋಕಾರ್ಪಣಾ ಸಮಾರಂಭವು ದಿನಾಂಕ 29-02-2024ರಂದು ಪುತ್ತೂರಿನ ಅನುರಾಗ ವಠಾರದಲ್ಲಿ ನಡೆಯಿತು. ಈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕಿನ ಅಧ್ಯಕ್ಷ ಉಮೇಶ್ ನಾಯಕ್ ಇವರು ಮಾತನಾಡಿ “ಸಾಹಿತ್ಯಕವಾಗಿ ಬಹಳ ಸಮೃದ್ಧ ಮತ್ತು ಫಲ ಭರಿತವಾದ ಕ್ಷೇತ್ರ ಪುತ್ತೂರು. ಇದಕ್ಕೆ ಬಹಳ ಹಿಂದಿನ ಒಂದು ಸಾಕ್ಷಿ ಅಥವಾ ಎಲ್ಲರೂ ತಿಳಿದಿರುವಂತಹ ಹಾಗೂ ನೋಡಿರುವಂತಹ ಹಿರಿಯ ಸಾಹಿತಿಗಳು ಇಲ್ಲಿ ಮಾಡಿರುವಂತಹ ಕೃಷಿ ಇದಕ್ಕೆ ಪೂರಕವಾದ ಅಂಶವಾಗಿದೆ. ಅನೇಕ ಸಾಹಿತಿಗಳು ಇಲ್ಲಿಗೆ ಬಂದು ಸಾಹಿತ್ಯ ಕೃಷಿಯನ್ನು ಮಾಡಿ ಪ್ರಶಸ್ತಿಯನ್ನು ಪಡೆದು ಪುತ್ತೂರಿಗೆ ಗೌರವವನ್ನು ತಂದಿದ್ದಾರೆ” ಎಂದು ಹೇಳಿದರು. ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ಮಾತನಾಡಿ “ಬದಲಾಗುತ್ತಿರುವ ಈ ವ್ಯವಸ್ಥೆಯಲ್ಲಿ ಹಿಂದೆ ಅನುಭವಿಸಿ…