Subscribe to Updates
Get the latest creative news from FooBar about art, design and business.
Author: roovari
ಕರಾವಳಿ ಕರ್ನಾಟಕದ ಮನೋಹರವಾದ ಕಲಾಪ್ರಕಾರ ಒಂದನ್ನು ನೋರವಾಗಿ ನೋಡಿ ಆಸ್ವಾದಿಸುವ ಸದವಕಾಶವು ಕಳೆದ 26 ಜನವರಿ 2025ರ ಭಾನುವಾರದಂದು ಒದಗಿ ಬಂದಿತು. ಮೈಸೂರು ಅಸೋಸಿಯೋಷನ್, ಮಾತಂಗ ಮತು ಕನ್ನಡ ವಿಭಾಗ, ಮಂಬಯಿ ವಿಶ್ವವಿದ್ಯಾಲಯಗಳ ಸಂಯುಕ್ತ ಆಶ್ರಯದಲ್ಲಿ ಮೈಸೂರು ಅಸೋಸಿಯೋಷನ್ ‘ಬಂಗಾರ ಹಬ್ಬ 2025’ರ ಅಂಗವಾಗಿ ನಡೆದ ‘ಕೃಷ್ಣ ಸಂಧಾನ’ವೆಂಬ ತಾಳಮದದ್ದಳೆಯ ಪ್ರಸಂಗವದು. ಅರ್ಥದಾರಿಗಳಾಗಿ ಕೃಷ್ಣನ ಭೂಮಿಕೆಯನ್ನು ಡಾ. ಎಂ. ಪ್ರಭಾಕರ್ ಜೋಶಿಯವರು ಮತ್ತು ಕೌರವನ ಭೂಮಿಕೆಯನ್ನು ಶ್ರೀ ಪ್ರಕಾಶ್ ಪಣಿಯೂರು ನಿರ್ವಸಿದರು. ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟರ ಸಿರಿಕಂಠದಲ್ಲಿ ಭಾಗವತಿಕೆ ನೆರವೇರಿತು. ಉತ್ತರ ಕರ್ನಾಟಕದ ಕಲಬುರ್ಗಿಯಲ್ಲಿ ಹುಟ್ಟಿ ಬೆಳೆದ ನಾನು ಕರಾವಳಿ ಕರ್ನಾಟಕದ ಈ ಕಲಾ ಪ್ರಭೇಧಗಳ ಹೆಸರುಗಳನ್ನು ಕೇಳಿ ತಿಳಿದಿದ್ದೇನೇ ಹೊರತು ಪ್ರತ್ಯಕ್ಷವಾಗಿ ನೋಡಿ ಅವುಗಳ ಸಬಗನ್ನು ಆಸ್ವಾದಿಸಿರಲಿಲ್ಲ. ಭಾನುವಾರದ ಕಾರ್ಯಕ್ರಮವು ನನಗೆ ಹೊಸ ಜಗತ್ತೊಂದನ್ನು ಪರಿಚಯಿಸಿತು. ಯಾವ ಹೆಚ್ಚಿನ ರಂಗ ಸಜ್ಜಿಕೆಯಿಲ್ಲ, ವೇಷಭೂಷಣಗಳ ಅಬ್ಬರವಿಲ್ಲ, ಇಬ್ಬರೇ ಪಾತ್ರಧಾರಿಗಳ ನಡುವೆ ನಡೆದ ಈ ‘ಕೃಷ್ಣ ಸಂಧಾನ’ದ ಪ್ರಕರಣವು ಪ್ರೇಕ್ಷಕರನ್ನು ನಿಜಕ್ಕೂ ದ್ವಾಪರಯುಗದ…
ಮಂಗಳೂರು : ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ರಾಜ್ಯ ಶಾಖೆ ಮತ್ತು ಕನ್ನಡ ವೈದ್ಯ ಬರಹ ಗಾರರ ಸಮಿತಿ ವತಿಯಿಂದ ಕಥಾ ಕಮ್ಮಟ ಕಾರ್ಯಾಗಾರ ಆನ್ ಲೈನ್ ಕಾರ್ಯಕ್ರಮವು ದಿನಾಂಕ 09 ಫೆಬ್ರವರಿ 2025ರಂದು ಮುಂಜಾನೆ 11-00 ಗಂಟೆಗೆ ನಡೆಯಲಿದೆ. ಬೆಳಗಾವಿ ಮ.ನ.ರ ಸಂಘದ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ನಿರ್ಮಲಾ ಬಟ್ಟಲ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ. ಕಥಾವಸ್ತುವಿನ ಆಯ್ಕೆ, ಕಥೆಯಲ್ಲಿ ಬಳಸುವ ಭಾಷಾ ಶೈಲಿ, ಕಥೆಯ ಆರಂಭ ಮತ್ತು ಅಂತ್ಯ ಮತ್ತು ಕಥೆ ಬರೆಯಲು ಪೂರ್ವ ತಯಾರಿ ಇವುಗಳ ಬಗ್ಗೆ ಮಾಹಿತಿ ನೀಡಲಾಗುವುದು. ತರಬೇತಿ ಪೂರ್ವ ಚಟುವಟಿಕೆಗಳನ್ನು ದಿನಾಂಕ 01ರಿಂದ 08 ಫೆಬ್ರವರಿ 2025ರವರೆಗೆ ಹಮ್ಮಿಕೊಳ್ಳಲಾಗಿದೆ. ನೋಂದಾಯಿಸಿಕೊಳ್ಳಲು ಕೊನೆಯ ದಿನಾಂಕ 31 ಜನವರಿ 2025 ಆಗಿರುತ್ತದೆ.
ಕೋಟ : ಬೆಂಗಳೂರಿನ ಪ್ರಸಿದ್ದ ಯಕ್ಷಗಾನ ತಂಡವಾದ ಯಕ್ಷದೇಗುಲ ತಂಡದವರ ಪರಿಕಲ್ಪನೆಯಲ್ಲಿ ‘ಯಕ್ಷಗಾನ ಪ್ರಾತ್ಯಕ್ಷಿಕೆ’ ದಿನಾಂಕ 14 ಫೆಬ್ರವರಿ 2025ರಂದು ಸಂಜೆ 6-00 ಗಂಟೆಗೆ ದೊಂಬ್ಲೂರು ಬೆಂಗಳೂರು ಇಂಟರ್ ನ್ಯಾಷನಲ್ ಸೆಂಟರಿನಲ್ಲಿ ನಡೆಯಲಿದೆ. ವಾಚಿಕ, ಅಂಗಿಕ, ಸಾತ್ವಿಕ, ಆಹಾರ್ಯಗಳನ್ನೊಳಗೊಂಡ ಪರಿಪೂರ್ಣ ಕಲೆಯೆನಿಸಿರುವ ಯಕ್ಷಗಾನದ ಮೂಲ ಸತ್ತ್ವವನ್ನು ಹೊಸ ತಲೆಮಾರಿನವರಿಗೆ ತಿಳಿಸುವ ಸಲುವಾಗಿ ನಮ್ಮ ಸಂಸ್ಥೆಯು ‘ಯಕ್ಷಾಂತರಂಗ’ವನ್ನು ಪರಿಚಯಿಸುವ ವಿನೂತನ ಪ್ರಯತ್ನಕ್ಕೆ ನಾಂದಿ ಹಾಡಿದೆ. ಹೆಜ್ಜೆಗಾರಿಕೆ, ಪದಾಭಿನಯ, ಬಣ್ಣದ ವೇಷದ ಮುಖ ವರ್ಣಿಕೆ, ಅಟ್ಟೆ ಕ್ಯಾದಿಗೆ ಮುಂದಲೆ ಕಟ್ಟುವ ಕ್ರಮ, ವಸ್ತ್ರ ವಿನ್ಯಾಸಗಳ ಕುರಿತು ಮಾಹಿತಿ ಮತ್ತು ಪೌರಾಣಿಕ ಪ್ರಸಂಗಗಳ ಕೆಲವು ಸನ್ನಿವೇಷಗಳ ಪ್ರಸ್ತುತಿಯನ್ನು ಪ್ರಾತ್ಯಕ್ಷಿಕೆ ಒಳಗೊಂಡಿದೆ. ಈಗಾಗಲೇ ಉಡುಪಿ ಜಿಲ್ಲೆ, ಮೈಸೂರಿನಲ್ಲಿ ಹಲವಾರು ಪ್ರಾತ್ಯಕ್ಷಿಕೆ ನೀಡಿರುತ್ತೇವೆ.
ಪಾಂಬೂರು : ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸುವ ಪಾಂಬೂರಿನ ಪರಿಚಯ ಪ್ರತಿಷ್ಠಾನವು ‘ರಂಗೋತ್ಸವ – 2025’ ನಾಟಕ ಪ್ರದರ್ಶನವನ್ನು ದಿನಾಂಕ 10 ಫೆಬ್ರವರಿ 2025ರಿಂದ 16 ಫೆಬ್ರವರಿ 2025ರವರೆಗೆ ಪಾಂಬೂರು ರಂಗಪರಿಚಯದಲ್ಲಿ ಹಮ್ಮಿಕೊಂಡಿದೆ. ದಿನಾಂಕ 10 ಫೆಬ್ರವರಿ 2025ರಂದು ಸಂಜೆ ಗಂಟೆ 6-15ಕ್ಕೆ ಗಣೇಶ್ ಮಂದಾರ್ತಿ ಮತ್ತು ಶ್ರವಣ್ ಹೆಗ್ಗೋಡು ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಮೈಸೂರಿನ ರಂಗಾಯಣ ಪ್ರಸ್ತುತ ಪಡಿಸುವ ಕನ್ನಡ ನಾಟಕ ‘ಮೈ ಫ್ಯಾಮಿಲಿ’, ದಿನಾಂಕ 11 ಫೆಬ್ರವರಿ 2025ರಂದು ಸಂಜೆ ಗಂಟೆ 6-30ಕ್ಕೆ ವಿದ್ದು ಉಚ್ಚಿಲ್ ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ ಉಡುಪಿಯ ಸುಮನಸಾ ಕೊಡವೂರು ತಂಡದವರು ಪ್ರಸ್ತುತ ಪಡಿಸುವ ತುಳು ನಾಟಕ ‘ಈದಿ’, ದಿನಾಂಕ 12 ಫೆಬ್ರವರಿ 2025ರಂದು ಸಂಜೆ ಗಂಟೆ 6-30ಕ್ಕೆ ಸ್ವೀಡಲ್ ಡಿ’ಸೋಜಾ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ‘ಪಯ್ಣ್’ ಕೊಂಕಣಿ ನಾಟಕವನ್ನು ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ರಂಗ ಅಧ್ಯಯನ ಕೇಂದ್ರ ಮತ್ತು ಅಸ್ತಿತ್ವ (ರಿ.) ಇವರು ಪ್ರದರ್ಶನ…
ಮಂಗಳೂರು : ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ.) ಪ್ರಸ್ತುತ ಪಡಿಸುವ ಆನ್ಲೈನ್ ಸಂಗೀತ ಕಾರ್ಯಾಗಾರವು ದಿನಾಂಕ 08, 09, 15 ಮತ್ತು 16 ಫೆಬ್ರುವರಿ 2025ರಂದು ಬೆಳಿಗ್ಗೆ 7-00 ಗಂಟೆಗೆ ವಿದುಷಿ ಶುಭಾ ಸಂತೋಷ್ ಇವರಿಂದ ನಡೆಯಲಿದೆ. ವೀಣೆಯಲ್ಲಿ ಜನಪ್ರಿಯ ದಾಸರ ಪದಗಳ ಜೊತೆಗೆ ವೀಣಾ ವಾದನ, ಅಭ್ಯಾಸ ತಂತ್ರ ಮತ್ತು ಮನೋಧರ್ಮಗಳನ್ನು ಕಳಿಸಿಕೊಡಲಾಗುವುದು. ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ +91 7411916098 ವಿಭು ರಾವ್ ಇವರನ್ನು ಸಂಪರ್ಕಿಸಬಹುದು.
ಕಾಸರಗೋಡು : ಕಾಸರಗೋಡು ಜಿಲ್ಲಾ 7ನೇ ಚುಟುಕು ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಕವಿ, ಅಧ್ಯಾಪಕ, ಸಂಘಟಕ, ಹವ್ಯಾಸಿ ಯಕ್ಷಗಾನ, ನಾಟಕ ಕಲಾವಿದ ಹರೀಶ ಸುಲಾಯ ಒಡ್ಡಂಬೆಟ್ಟು ಇವರನ್ನು ಆಯ್ಕೆಮಾಡಲಾಗಿದೆ ಎಂದು ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವರಾಮ ಕಾಸರಗೋಡು ತಿಳಿಸಿದ್ದಾರೆ. ಕಾಸರಗೋಡಿನ ಕನ್ನಡ ಗ್ರಾಮದಲ್ಲಿ ದಿನಾಂಕ 27 ಮಾರ್ಚ್ 2025 ಗುರುವಾರದಂದು ನಡೆಯುವ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ರಾಜ್ಯಮಟ್ಟದ ಚುಟುಕು ಗೋಷ್ಠಿ, ರಾಜ್ಯ ಮಟ್ಟದ ವಿದ್ಯಾರ್ಥಿ ಚುಟುಕು ಗೋಷ್ಠಿ, ರಾಜ್ಯ ಮಟ್ಟದ ಚುಟುಕು ಕಥಾ ಗೋಷ್ಠಿಯು ಸಾಹಿತ್ಯಿಕ, ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿರುವುದು. ತುಳು, ಕನ್ನಡ ದ್ವಿಬಾಷಾ ಕವಿ ಹರೀಶ್ ಸುಲಾಯ ಒಡ್ಡಂಬೆಟ್ಟು ಅವರು ಈಗಾಗಲೇ ‘ಬೆಳಕು’, ‘ಉದಿಪು ಸುರಗಿ’, ‘ದನಿಯಾದ ಹನಿಗಳು’, ‘ಮಿಠಾಯಿ ಡಬ್ಬ’ ಎಂಬ ಕೃತಿಗಳನ್ನು ಸಾರಸ್ವತ ಲೋಕಕ್ಕೆ ನೀಡಿರುವುದಲ್ಲದೆ ಹಲವಾರು ಪುಸ್ತಕಗಳಿಗೆ ಮುನ್ನುಡಿ ಮತ್ತು ಬೆನ್ನುಡಿಗಳನ್ನು ಕೂಡ ಬರೆದಿರುವರು. ಇವರು ಸುಮಾರು ಐದು ಸಾವಿರಕ್ಕಿಂತಲೂ ಹೆಚ್ಚು…
ಧಾರವಾಡ : ಗದಗ, 4ನೇ ಕ್ರಾಸ್, ಪಂಚಾಕ್ಷರಿ ನಗರದಲ್ಲಿರುವ ಕಲಾ ವಿಕಾಸ ಪರಿಷತ್ (ರಿ.) ಇದರ ವತಿಯಿಂದ ‘ಗಾನಯೋಗಿ ಪಂ. ಪಂಚಾಕ್ಷರಿ ಗವಾಯಿಗಳವರ 133ನೇ ಜಯಂತೋತ್ಸವ ಪ್ರಯುಕ್ತ ‘ಅಮರಸ್ವರ ಸಮಾರೋಹ’ ಕಾರ್ಯಕ್ರಮವನ್ನು ದಿನಾಂಕ 02 ಫೆಬ್ರವರಿ 2025ರಂದು ಬೆಳಿಗ್ಗೆ 10-30 ಗಂಟೆಗೆ ಧಾರವಾಡದ ಸಾಧನಕೇರಿಯಲ್ಲಿರುವ ಡಾ. ದ.ರಾ. ಬೇಂದ್ರೆ ಭವನದಲ್ಲಿ ಆಯೋಜಿಸಲಾಗಿದೆ. ಧಾರವಾಡದ ಹಿರಿಯ ರಂಗಕರ್ಮಿ ಡಾ. ಶಶಿಧರ ನರೇಂದ್ರ ಇವರ ಅಧ್ಯಕ್ಷತೆಯಲ್ಲಿ ಹಿರಿಯ ಹಿಂದೂಸ್ತಾನಿ ಶಾಸ್ತ್ರೀಯ ಗಾಯಕರಾದ ಡಾ. ಶಾಂತಾರಾಮ ಹೆಗಡೆ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಅಂತರಾಷ್ಟ್ರೀಯ ಖ್ಯಾತ ತಬಲಾ ವಾದಕರಾದ ಪಂ. ಶಾಂತಲಿಂಗಪ್ಪ ಹೂಗಾರ (ದೇಸಾಯಿ ಕಲ್ಲೂರ), ಪ್ರತಿಷ್ಠಿತ ಕಲಾ ಪೋಷಕ ಸಂಸ್ಥೆ ‘ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿ’ ಮತ್ತು ಶಿರಸಿಯ ಮಹಿಳಾ ಮತ್ತು ಮಕ್ಕಳ ಯಕ್ಷಗಾನ ಮಂಡಳಿ ‘ಯಕ್ಷ ಕಲಾಸಂಗಮ’ ಇವರುಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು. ಸಂಜೆ 4-00 ಗಂಟೆಗೆ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಲಾ ವಿಕಾಸ ಪರಿಷತ್ ಇದರ…
ಬೈಂದೂರು : ಲಾವಣ್ಯ (ರಿ.) ಬೈಂದೂರು, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಬೈಂದೂರು ತಾಲೂಕು ಘಟಕ ಮತ್ತು ಅಶೋಕ ಜ್ಯುವೆಲ್ಲರ್ಸ್ ಉಪ್ಪುಂದ ಇವರ ಸಂಯುಕ್ತ ಆಶ್ರಯದಲ್ಲಿ ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರಂಗ ಅಧ್ಯಯನ ಕೇಂದ್ರ ಸಾದರ ಪಡಿಸುವ ‘ಚಾರುವಸಂತ’ ನಾಟಕ ಪ್ರದರ್ಶನವು ದಿನಾಂಕ 04 ಫೆಬ್ರವರಿ 2025ರಂದು ಸಂಜೆ 5-30 ಗಂಟೆಗೆ ಯಡ್ತರೆ-ಬೈಂದೂರು ಜೆ.ಎನ್.ಆರ್. ಹೊರಾಂಗಣ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದೆ. ನಾಡೋಜ ಹಂಪನಾ ವಿರಚಿತ ಈ ದೇಸೀ ಕಾವ್ಯದ ರಂಗರೂಪಕ್ಕೆ ಡಾ. ಜೀವನ್ ರಾಮ್ ಸುಳ್ಯ ವಿನ್ಯಾಸ ಮತ್ತು ನಿರ್ದೇಶನ ಮಾಡಿದ್ದು, ಡಾ. ನಾ. ದಾಮೋದರ ಶೆಟ್ಟಿ ಇವರು ರಂಗರೂಪ ನೀಡಿರುತ್ತಾರೆ.
ಭಾರತೀಯ ಸಂಸ್ಕೃತಿಯಲ್ಲಿ ನೃತ್ಯ ಅತ್ಯಂತ ಪ್ರೌಢವಾದ, ಶ್ರೇಷ್ಠವಾದ ಮತ್ತು ಪ್ರಾಚೀನವಾದ ಕಲೆ. ದೇವರ ವರದಾನವಾದ ಈ ಕಲೆ ಹೃದಯದ ಭಾಷೆಯಾಗಿದೆ. ಶ್ರದ್ಧಾ ಭಕ್ತಿಯಿಂದ ಇದನ್ನು ನಮ್ಮಲ್ಲಿ ಮೈಗೂಡಿಸಿಕೊಳ್ಳಬೇಕು, ಆಗ ಮಾತ್ರ ಕಲೆ ನಮಗೆ ಒಲಿಯುತ್ತದೆ. ಹಲವಾರು ಖ್ಯಾತಿವೆತ್ತ ಭರತನಾಟ್ಯ ಕಲಾವಿದರು ನಮ್ಮಲ್ಲಿದ್ದಾರೆ. ಅವರಲ್ಲಿ ಪ್ರತಿಭಾವಂತೆಯಾದ ಪ್ರತಿಭಾ ಪ್ರಹ್ಲಾದ್ ಒಬ್ಬರು. ಭರತನಾಟ್ಯ ಕಲಾವಿದೆ, ಶಿಕ್ಷಣ ತಜ್ಞೆ, ನೃತ್ಯ ಸಂಯೋಜಕಿ, ಕಲಾ ನಿರ್ವಾಹಕಿ ಮತ್ತು ಲೇಖಕಿಯಾಗಿ ಭರತ ನಾಟ್ಯಕಲೆಯನ್ನು ಮೇರು ಸ್ಥಾನಕ್ಕೆ ಕೊಂಡೊಯ್ದವರು ಪದ್ಮಶ್ರೀ ಪ್ರತಿಭಾ ಪ್ರಹ್ಲಾದ್. ನೃತ್ಯದ ಮೇಲೆ ಅಪಾರ ಆಸಕ್ತಿ ಇದ್ದ ಪ್ರತಿಭಾ ತಮ್ಮ ನಾಲ್ಕರ ಹರೆಯದಲ್ಲಿಯೇ ಯಾವುದೇ ಸಾಂಪ್ರದಾಯಿಕ ತರಬೇತಿಯಿಲ್ಲದೆ ಪ್ರತಿಭೆಯನ್ನು ಹೊರಹೊಮ್ಮಿಸಿದವರು. ಆದರೆ ಹೆತ್ತವರು ಇವರ ಪ್ರತಿಭೆಯನ್ನು ಅರಿತುಕೊಂಡು ಅದಕ್ಕೆ ಬೇಕಾದ ಪ್ರೋತ್ಸಾಹವನ್ನು ನೀಡಿದರು. ಯು. ಎಸ್. ಕೃಷ್ಣ ರಾವ್, ಕಲಾ ನಿಧಿ ನಾರಾಯಣ ಮತ್ತು ವಿ. ಎಸ್. ಮುತ್ತುಸ್ವಾಮಿ ಪಿಳ್ಳೆ ಇವರುಗಳು ಭರತನಾಟ್ಯ ಮತ್ತು ವೆಂಪಟ್ಟಿ ಚಿನ್ನ ಸತ್ಯ ಅವರು ಕೂಚಿಪುಡಿಯ ನೃತ್ಯ ಶಿಕ್ಷಣಕ್ಕೆ ಬುನಾದಿಯನ್ನು ಹಾಕಿದ…
ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಮಹಾತ್ಮ ಗಾಂಧೀಜಿಯ ಸ್ಮರಣಾರ್ಥ ಆಯೋಜಿಸಿದ ‘ಗಾಂಧಿ ಸ್ಮೃತಿ’ ಕಾರ್ಯಕ್ರಮವು ದಿನಾಂಕ 30 ಜನವರಿ 2025ರ ಗುರುವಾರದಂದು ಬೆಳಿಗ್ಗೆ ಘಂಟೆ 11.00ಕ್ಕೆ ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ನಡೆಯಲಿದೆ. ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ನಾನಿ ಅಲ್ವಾರಿಸ್ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮಾರಂಭದಲ್ಲಿ ಅಕಾಡೆಮಿಯು ಮಹಾತ್ಮ ಗಾಂಧೀಜಿಯ ಬಗ್ಗೆ ಮುದ್ರಿಸಿದ ‘ಮನ್ಯಾಸಂಸ್ರಾಚೊ ಮಹಾನ್ ಉಜ್ವಾಡ್- ಮಹಾತ್ಮ ಗಾಂಧೀಜಿ’ ಪುಸ್ತಕವನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಪಿ. ಎಲ್. ಧರ್ಮ ಇವರು ಲೋಕಾರ್ಪಣೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿಗಳಾದ ವಂದನೀಯ ಡಾ. ಪ್ರವೀಣ್ ಮಾರ್ಟಿಸ್ ಜೆ. ನ., ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಕೊ- ಅಪರೇಟಿವ್ ಸೊಸೈಟಿ ಕಾರವಾರದ ಅಧ್ಯಕ್ಷರಾದ ಶ್ರೀ ಜೋರ್ಜ್ ಎನ್. ಫರ್ನಾಂಡಿಸ್ ಭಾಗವಹಿಸಲಿರುವರು. ಡಾ. ಅಲ್ವಿನ್ ಡೆಸಾ ಪುಸ್ತಕದ ಬಗ್ಗೆ ಮಾತಾನಾಡಲಿರುವರು.