Author: roovari

ಮಂಗಳೂರು : ತುಳು ಪರಿಷತ್ ವತಿಯಿಂದ ಇತ್ತೀಚೆಗೆ ನಿಧನ ಹೊಂದಿದ ಖ್ಯಾತ ಕಾದಂಬರಿಕಾರ, ಭಾಷಾ ತಜ್ಞ ಕೆ.ಟಿ.ಗಟ್ಟಿಯವರಿಗೆ ದಿನಾಂಕ 24-02-2024ರಂದು ಮ್ಯಾಪ್ಸ್ ಕಾಲೇಜಿನಲ್ಲಿ ನುಡಿನಮನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕ ಪ್ರೊ. ಬಿ. ಶಿವರಾಮ ಶೆಟ್ಟಿ ಮಾತನಾಡಿ “ಕೆ.ಟಿ.ಗಟ್ಟಿ ಅವರ ಕಾದಂಬರಿಗಳ ಪಾತ್ರಗಳಲ್ಲಿ ಓದುಗರು ತಮ್ಮ ಬಿಂಬವನ್ನೇ ಕಾಣುತ್ತಿದ್ದರು. ಒಂದು ಕಾಲ ಘಟ್ಟದಲ್ಲಿ ಶಿವರಾಮ ಕಾರಂತ ಹಾಗೂ ಎಸ್.ಎಲ್. ಭೈರಪ್ಪ ಅವರಿಗಿಂತಲೂ ದೊಡ್ಡ ಓದುಗ ವರ್ಗವನ್ನು ಹೊಂದಿದ್ದ ಕಾದಂಬರಿಕಾರ ಕೆ.ಟಿ. ಗಟ್ಟಿ ಆಗಿದ್ದರು. ತಮ್ಮ ಕಾದಂಬರಿಗಳಲ್ಲಿ ಬಡತನ, ನೋವು, ಸಂಕಟ ಹಾಗೂ ಬದುಕಿನ ಸಂಬಂಧಗಳ ಚಿತ್ರಣದೊಂದಿಗೆ ಅವರು ಕಟ್ಟಿಕೊಟ್ಟ ಭಾವ ಪ್ರಪಂಚ ಜನರನ್ನು ಆಕರ್ಷಸಿತ್ತು” ಎಂದು ಅಭಿಪ್ರಾಯಪಟ್ಟರು. ಮೂಲ್ಕಿ ಸರಕಾರಿ ಕಾಲೇಜಿನ ಪ್ರಾಂಶುಪಾಲ ಡಾ. ವಾಸುದೇವ ಬೆಳ್ಳೆ ಮಾತನಾಡಿ, “ಗಟ್ಟಿ ಅವರ ಬದುಕು ಬಾಲ್ಯದ ಕಹಿ ಘಟನೆಗಳು, ಜಾತಿಯ ಕಾರಣಕ್ಕೆ ಎದುರಿಸಿದ ಅವಮಾನಗಳಿಂದ ಮಾಗಿತ್ತು. ಹಾಗಾಗಿಯೇ ಅವರ ಬರಹಗಳಲ್ಲಿ ಬಡ ಮಧ್ಯಮ ವರ್ಗದ ಜನರ ಬವಣೆ, ಹೆಣ್ಣಿನ ಶೋಷಣೆಗಳನ್ನು…

Read More

ಶಿವಮೊಗ್ಗ : ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಜಿಲ್ಲಾ ಘಟಕದ ವತಿಯಿಂದ ಚಾಲುಕ್ಯ ನಗರದ ಸಾಹಿತ್ಯ ಗ್ರಾಮದಲ್ಲಿ ಆಯೋಜಿಸಿದ್ದ 222ನೇ ತಿಂಗಳ ‘ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮ’ವು ದಿನಾಂಕ 25-02-2024ರಂದು ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ಣಾಟಕ ಬ್ಯಾಂಕ್ ಪ್ರಾದೇಶಿಕ ಜಿಲ್ಲಾ ಕಚೇರಿ ಸಹಾಯಕ ಪ್ರಬಂಧಕ ಎಚ್.ಎ. ನಾಗರಾಜ್‌ ಇವರು ಮಾತನಾಡಿ “ಸಾಹಿತ್ಯದ ಒಲವು ಕಡಿಮೆಯಾಗುತ್ತಿರುವ ಈ ಹೊತ್ತಿನಲ್ಲಿ ಸೃಜನಶೀಲತೆಯ ವೃದ್ಧಿಗೆ ಸಾಹಿತ್ಯ ಹುಣ್ಣಿಮೆ ಪ್ರೇರಣಾದಾಯಕ. ಸಾಹಿತ್ಯ ಕ್ಷೇತ್ರಕ್ಕೆ ಶಿವಮೊಗ್ಗ ಜಿಲ್ಲೆಯ ಕೊಡುಗೆ ಅಪಾರ. ಹೊಸತನದ ಪ್ರಬುದ್ಧತೆಗೆ ಸಾಹಿತ್ಯ ಸಾಕಾರವಾಗಿದ್ದು, ಮುಂದಿನ ದಿನಗಳಲ್ಲಿ ಕರ್ಣಾಟಕ ಬ್ಯಾಂಕ್ ವತಿಯಿಂದ ಸಾಹಿತ್ಯ ಹುಣ್ಣಿಮೆ ನಡೆಸಲು ಅನುವು ಮಾಡಿಕೊಡಬೇಕು” ಎಂದು ಕೋರಿದರು. “2004ರಲ್ಲಿ ಪ್ರಾರಂಭವಾದ ಸಾಹಿತ್ಯ ಹುಣ್ಣಿಮೆಯನ್ನು ನಿರಂತರವಾಗಿ ಆಯೋಜಿಸಲಾಗುತ್ತಿದೆ. ಸಾಹಿತ್ಯ ಹಾಗೂ ಸಾಂಸ್ಕೃತಿಕ ಮನಸ್ಸುಗಳನ್ನು ಕಟ್ಟುವಲ್ಲಿ ಸಾಹಿತ್ಯ ಹುಣ್ಣಿಮೆಯನ್ನು ಪ್ರೇರಕ ವೇದಿಕೆಯಾಗಿ ರೂಪಿಸುತ್ತಾ ಬಂದಿದ್ದೇವೆ” ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಡಿ. ಮಂಜುನಾಥ ಹೇಳಿದರು. ಕಾರ್ಯಕ್ರಮದಲ್ಲಿ ಹಾಸ್ಯ…

Read More

ಕಾಸರಗೋಡು : ಕನ್ನಡ ಭವನ ಗ್ರಂಥಾಲಯ, ಕನ್ನಡ ಭವನ ಪ್ರಕಾಶನದ ಸಾರಥ್ಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಮತ್ತು ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ಹಾಗೂ ಪ್ರದೀಪ್ ಕುಮಾರ್ ಕಲ್ಕೂರ ಸಹಕಾರದಲ್ಲಿ ಕಾಸರಗೋಡು ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ ಸಭಾಂಗಣದಲ್ಲಿ ದಿನಾಂಕ 22-02-2024ರಂದು ಶ್ರೀಮಾನ್ ಪಂಜೆ ಮಂಗೇಶರಾಯರ 150ನೇ ಜನ್ಮದಿನ ಸಂಭ್ರಮದ ಕಾರ್ಯಕ್ರಮಗಳು ನಡೆಯಿತು. ನಿವೃತ್ತ ಪ್ರಾಧ್ಯಾಪಕ ಡಾ. ಪಿ. ಶ್ರೀಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದರು. ಕ.ಸಾ.ಪ. ದ.ಕ. ಜಿಲ್ಲಾ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಕಾರ್ಯಕ್ರಮ ಉದ್ಘಾಟಿಸಿದರು. ಡಾ. ಎಂ.ಪಿ. ಶ್ರೀನಾಥ್, ಡಾ. ಜಯಪ್ರಕಾಶ್ ನಾರಾಯಣ್, ಡಾ. ಕೆ. ಕಮಲಾಕ್ಷ, ಡಾ. ಯು. ಮಹೇಶ್ವರಿ, ಪ್ರೊ. ಪಿ.ಎನ್. ಮೂಡಿತ್ತಾಯ, ಪ್ರೊ. ಎ. ಶ್ರೀನಾಥ್, ಕವಿ ವಿ.ಬಿ. ಕುಳಮರ್ವ, ನ್ಯಾಯವಾದಿ ಥೋಮಸ್ ಡಿ’ಸೋಜಾ, ಕಥಾಬಿಂದು ಪ್ರಕಾಶನದ ರೂವಾರಿ ಸಾಹಿತಿ ಪಿ.ವಿ. ಪ್ರದೀಪ್ ಕುಮಾರ್, ಡಾ. ಪಿ. ಕೃಷ್ಣ ಭಟ್,…

Read More

ಉಡುಪಿ : ಉಡುಪಿಯ ಅಜ್ಜರಕಾಡು ಭುಜಂಗ ಪಾರ್ಕ್‌ ಇದರ ಬಯಲು ರಂಗಮಂದಿರಲ್ಲಿ ಸುಮನಸಾ ಕೊಡವೂರು ಉಡುಪಿ ಇವರು ಆಯೋಜಿಸಿದ್ದ ವಾರಗಳ ಕಾಲ ನಡೆಯಲಿರುವ ಥಿಯೇಟರ್ ಫೆಸ್ಟಿವಲ್‌ನ 12ನೇ ರಂಗಹಬ್ಬವು ದಿನಾಂಕ 25-02-2024ರಂದು ಪ್ರಾರಂಭವಾಯಿತು. ಈ ರಂಗಹಬ್ಬವನ್ನು ಮೈಸೂರು ರಂಗಾಯಣದ ಮಾಜಿ ನಿರ್ದೇಶಕ ಎಚ್. ಜನಾರ್ದನ್ (ಜನ್ನಿ) ಇವರು ಉದ್ಘಾಟಿಸಿ ಮಾತನಾಡುತ್ತಾ “ರಂಗದಲ್ಲಿ ಪ್ರದರ್ಶಿಸುವ ನಾಟಕಗಳ ಸಂದೇಶ ಸಂಬಂಧಗಳನ್ನು ಬೆಸೆಯುವಂತೆ ಇರಬೇಕು. ರಂಗಭೂಮಿಯು ಸತ್ಯವನ್ನು ಪ್ರತಿಪಾದಿಸುವ ರಂಗಾವರಣವಾಗಿದೆ” ಎಂದು ಹೇಳಿದರು. ರಂಗ ಸಾಧಕಿ ಗೀತಾ ಸುರತ್ಕಲ್ ಸನ್ಮಾನ ಸ್ವೀಕರಿಸಿ ಮಾತನಾಡಿ, “ರಂಗಭೂಮಿಗೆ ಕಲಾವಿದರಿಗಿಂತ ಪ್ರೇಕ್ಷಕರೇ ಪ್ರಮುಖರಾಗಿದ್ದಾರೆ. ಎಷ್ಟೇ ಖ್ಯಾತ ಕಲಾವಿದರಿದ್ದರೂ ಅವರ ಅಭಿನಯ ನೋಡಲು ಪ್ರೇಕ್ಷರಿಲ್ಲದಿದ್ದರೆ ರಂಗಭೂಮಿ ನಡೆಯದು. ರಂಗಭೂಮಿಯತ್ತ ಪ್ರೇಕ್ಷಕರನ್ನು ಆಕರ್ಷಿಸುವ ಕಾರ್ಯ ಮಾಡುತ್ತಿರುವ ಉಡುಪಿಯ ಸುಮನಸಾ ಸಂಸ್ಥೆಯ ಕಾರ್ಯ ಶ್ಲಾಘನೀಯ” ಎಂದರು. ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿಗಳಾದ ಸಾಧು ಸಾಲ್ಯಾನ್, ನವೀನ್ ಅಮೀನ್ ಶಂಕರಪುರ, ಕೊಡಂಕೂರಿನ ಶಿರಡಿ ಸಾಯಿಬಾಬಾ ಮಂದಿರದ…

Read More

ಬೆಂಗಳೂರು : ಬೆಂಗಳೂರಿನ ಮಲತ್ತಹಳ್ಳಿಯ ಕಲಾ ಗ್ರಾಮ ಸಮುಚ್ಚಯ ಭವನದಲ್ಲಿ ‘ಪದ’ ಪ್ರಸ್ತುತ ಪಡಿಸಿದ ‘ಕರ್ನಾಟಕ ಜಾನಪದ ಉತ್ಸವ’ದ ಎರಡನೇ ದಿನದ ಕಾರ್ಯಕ್ರಮವು ದಿನಾಂಕ 20-02-2024ರಂದು ನಡೆಯಿತು. ಸುಮಾ ಆರ್. ಕಂಠಿ ನಿರ್ದೇಶನದ ಜಾನಪದ ನೃತ್ಯ ನಡೆಯಿತು. ಜಾನಪದ ನೃತ್ಯ ಹಳೆಯ ಮೂಲ ಜಾನಪದಗಳ ಮೆಲುಕು ಸೊಗಡು ನೋಡುಗರ ಮನ ತುಂಬಿತು. ದಿನಾಂಕ 21-02-2024ರಂದು ನಡೆದ ಜಾನಪದ ಉತ್ಸವದಲ್ಲಿ ಮೂಲ ಜಾನಪದ ಗಾಯನವನ್ನು ಪದ ದೇವರಾಜ್ ಶಂಕರ್, ಭಾರತಿಪುರ ಮಂಜುನಾಥ್ ಕೆ.ಎಸ್., ರಾಜೇಶ್ವರಿ ದಿವ್ಯ ಬಸವರಾಜ್, ಜಯಂತಿ ಶ್ರೀನಿವಾಸ್ ಹಾಗೂ ಚನ್ನಯ್ಯ ಗಾಯನವನ್ನು ಪ್ರಸ್ತುತಪಡಿಸಿದರು. ಸಮಾರೋಪ ನುಡಿಯನ್ನು ಡಾ. ಅಪ್ಪುಗೆರೆ ತಿಮ್ಮರಾಜು ಮಾತನಾಡಿ “ಪ್ರತಿ ಜಿಲ್ಲೆಗೊಬ್ಬರು ಜನಪದಗೋಸ್ಕರವಾಗಿ ದುಡಿದಂತಹ ಮಹನೀಯರಿದ್ದಾರೆ. ಅವರೆಲ್ಲ ಈಗ ಕಣ್ಮರೆಯಾಗಿದ್ದಾರೆ. ಸೋಬಾನೆ ಚಿಕ್ಕಮ್ಮನಂತವರು ಇಂದು ನಮ್ಮ ಜೊತೆ ಇಲ್ಲ. ಅನೇಕ ಜನರು ಜನಮನಗಳಿಂದ ದೂರವಾದ ಜನಪದ ಆಗಿದ್ದಾರೆ. ಸರ್ಕಾರಗಳು ಮಾಡಬೇಕಾದ ಕೆಲಸವನ್ನು ‘ಪದ’ ದೇವರಾಜ್ ಮಾಡುತ್ತಿದ್ದಾರೆ. ಸರ್ಕಾರಗಳು ಈಗಾಗಲೇ ಜನಪದಕ್ಕೆ ನೀಡಬೇಕಾದ ಸೌಲತ್ತುಗಳನ್ನು ನೀಡದೆ ವಂಚಿಸಿದೆ. ಜಿಲ್ಲೆಗಳಲ್ಲಿ…

Read More

ಮೈಸೂರು : ‘ಅಭಿಯಂತರರು’ ಪ್ರಸ್ತುತ ಪಡಿಸುವ ‘ರಾಷ್ಟ್ರೀಯ ರಂಗ ಉತ್ಸವ’ವು ದಿನಾಂಕ 28-02-2024ರಿಂದ 03-03-2024ರವರೆಗೆ ಮೈಸೂರಿನ ಕಿರು ರಂಗಮಂದಿರದಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಹಿರಿಯ ಕವಿ ಹಾಗೂ ಸಾಹಿತಿಗಳಾದ ಪ್ರೊ. ಎಸ್.ಜಿ. ಸಿದ್ಧರಾಮಯ್ಯರವರ ಅಧ್ಯಕ್ಷತೆಯಲ್ಲಿ ನಾಟಕ ಕಾರ ಹಾಗೂ ಸಾಹಿತಿಗಳಾದ ಡಾ. ಕೆ.ವೈ. ನಾರಾಯಣ ಸ್ವಾಮಿಯವರು ಉದ್ಘಾಟಿಸಲಿದ್ದಾರೆ. ದಿನಾಂಕ 28-02-2024ರಂದು ಆದಿಶಕ್ತಿ ಪುದುಚರಿ ಅರ್ಪಿಸುವ ವಿನಯ್ ಕುಮಾರ್ ನಿರ್ದೇಶನದಲ್ಲಿ ‘ಭೂಮಿ’ ಇಂಗ್ಲೀಷ್ ನಾಟಕ, ದಿನಾಂಕ 29-02-2024ರಂದು ಬೆಂಗಳೂರಿನ ಸುಸ್ಥಿರ ಪ್ರತಿಷ್ಠಾನ ಅರ್ಪಿಸುವ ಜೋಸೆಫ್ ಜಾನ್ ನಿರ್ದೇಶನದಲ್ಲಿ ‘ಸರಸ ವಿರಸ ಸಮರಸ’ ಕನ್ನಡ ನಾಟಕ, ದಿನಾಂಕ 01-03-2024ರಂದು ಕಾರ್ತಿಕ್ ಹೆಬ್ಬಾರ್ ನಿರ್ದೇಶನದಲ್ಲಿ ಬೆಂಗಳೂರಿನ ಧೀಮಹಿ ಸೆಂಟರ್ ಆಫ್ ಆರ್ಟ್ಸ್ ಅರ್ಪಿಸುವ ‘# 36 ಸತಿ ಸಾವಿತ್ರಿ ನಿವಾಸ’ ಕನ್ನಡ ನಾಟಕ, ದಿನಾಂಕ 02-03-2024ರಂದು ಆಕ್ಟ್ ರಿಯಾಕ್ಟ್ ಅರ್ಪಿಸುವ ಕೃಷ್ಣಮೂರ್ತಿ ಹನೂರು ರಚಿಸಿರುವ ನವೀನ್ ಸಾಣೇಹಳ್ಳಿ ನಿರ್ದೇಶನದಲ್ಲಿ ‘ಅಜ್ಞಾತನೊಬ್ಬನ ಆತ್ಮಚರಿತ್ರೆ’ ಕನ್ನಡ ನಾಟಕ ಮತ್ತು ದಿನಾಂಕ 03-03-2024ರಂದು ಮುಂಬೈ ಅಭಿನಯ ಕಲ್ಯಾಣ್ ಅರ್ಪಿಸುವ ಅನಿಕೇತ್…

Read More

ಮಂಗಳೂರು : ಸಂಗೀತ ಪರಿಷತ್ ಮಂಗಳೂರು ಆಶ್ರಯದಲ್ಲಿ ತ್ರಿಂಶತ್ ಸಂಭ್ರಮದ ಪ್ರಯುಕ್ತ ಕೇರಳದ ವಿವೇಕ್ ಮೂಝಿಕುಳಮ್ ಅವರಿಂದ ವಿದ್ವತ್ ಪೂರ್ಣ ಸಂಗೀತ ಕಛೇರಿಯು ಮಂಗಳೂರಿನ ಶಾರದಾ ವಿದ್ಯಾಲಯದ ಧ್ಯಾನ ಮಂದಿರದಲ್ಲಿ ದಿನಾಂಕ 24-02-2024ರಂದು ನಡೆಯಿತು. ಉತ್ತಮ ಶಾರೀರ ಹಾಗೂ ಕೃತಿಗಳ ಪ್ರಸ್ತುತಿಯು ಕೇಳುಗರನ್ನು ಕೊನೆಯವರೆಗೂ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಯಿತು. ಇವರಿಗೆ ಪಕ್ಕವಾದ್ಯದಲ್ಲಿ ಕೇಶವ ಮೋಹನ್ ಕುಮಾರ್ ಬೆಂಗಳೂರು ಪಿಟೀಲು, ಸುನಾದಕೃಷ್ಣ ಅಮೈ ಮಂಗಳೂರು ಮೃದಂಗ, ಬಾಲಕೃಷ್ಣ ಹೊಸಮನೆ ಪುತ್ತೂರು ಮೋರ್ಸಿಂಗ್ ಅವರ ಸಹಕಾರವು ಉತ್ತಮವಾಗಿತ್ತು. ಇದಕ್ಕೂ ಮೊದಲು ಉಡುಪಿಯ ಶ್ರೀಯುತ ರಾಘವೇಂದ್ರ ರಾಯರ ಶಿಷ್ಯ ಯುವ ಪ್ರತಿಭೆ ಪ್ರಣವ್ ಅಡಿಗ ಅವರಿಂದ ಕೊಳಲು ವಾದನ ಕಛೇರಿಯು ಮಂಗಳೂರಿನ ಗೌತಮ್ ಭಟ್ ಪಿಟೀಲು ಹಾಗೂ ಕಟೀಲಿನ ಶೈಲೇಶ್ ರಾವ್ ಮೃದಂಗ ಸಹಕಾರದೊಂದಿಗೆ ನಡೆಯಿತು. ಸಂಗೀತ ಪರಿಷತ್ತಿನ ಸದಸ್ಯೆ ಸೀತಾಲಕ್ಷ್ಮಿ ಸ್ವಾಗತಿಸಿ ಕಲಾವಿದರನ್ನು ಪರಿಚಯಿಸಿದರು. ಖಜಾಂಚಿ ಸುಬ್ರಹ್ಮಣ್ಯ ಉಡುಪ ವಂದಿಸಿದರು. ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಭಾರತೀಯ ವಿದ್ಯಾಭವನ ಸಂಯೋಗದೊಂದಿಗೆ ಈ…

Read More

ಪುತ್ತೂರು : ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ ನೇತೃತ್ವದಲ್ಲಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಗ್ರಾಮ ಪಂಚಾಯತ್ ನಿಡ್ಪಳ್ಳಿ ಸಹಕಾರದಲ್ಲಿ ಮಿತ್ರಂಪಾಡಿ ಜಯರಾಮ ರೈ ಅಬುದಾಬಿ ಇವರ ಮಹಾಪೋಷಕತ್ವದಲ್ಲಿ ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಇದರ ಸಂಯೋಜನೆಯಲ್ಲಿ ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಅಭಿಯಾನದಂಗವಾಗಿ ‘ಗ್ರಾಮ ಸಾಹಿತ್ಯ ಸಂಭ್ರಮ 2024’ ಸರಣಿ ಕಾರ್ಯಕ್ರಮ-13 ದಿನಾಂಕ 24-02-2024ರಂದು ನಿಡ್ಪಳ್ಳಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಮುಖ್ಯವಾಗಿ ಯುವಜನತೆಯನ್ನು ಸಾಹಿತ್ಯ ಲೋಕದತ್ತ ಬರಮಾಡಿಕೊಂಡು ಅವರಿಗೊಂದು ವೇದಿಕೆಯನ್ನು ಕಲ್ಪಿಸುವ ಹಾಗೂ ಅವರಲ್ಲಿ ಪುಸ್ತಕ ಓದುವ ಹವ್ಯಾಸವನ್ನು ಬೆಳೆಸುವ ನಿಟ್ಟಿನ ಜೊತೆಗೆ ಕ.ಸಾ.ಪ. ರಾಜ್ಯಾಧ್ಯಕ್ಷರಾದ ಡಾ. ಮಹೇಶ್ ಜೋಶಿ ಅವರ ಧ್ಯೇಯ ವಾಕ್ಯವಾದ ಸಾಹಿತ್ಯ ಪರಿಷತ್ತು ಜನಸಾಮಾನ್ಯರ ಪರಿಷತ್ತನ್ನಾಗಿಸುವಲ್ಲಿ ಒಂದು ಅರ್ಥಪೂರ್ಣ ಕಾರ್ಯಕ್ರಮವನ್ನು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಡ್ಪಳ್ಳಿ ಗ್ರಾಮ ಸಾಹಿತ್ಯ ಸಂಭ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು. ಖಂಡಿತವಾಗಿಯೂ ಈ ಕಾರ್ಯಕ್ರಮದಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ಸಾಹಿತ್ಯದಲ್ಲಿ ಆಸಕ್ತಿ ಇಲ್ಲದ…

Read More

ಪುತ್ತೂರು : ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ, ಕರ್ನಾಟಕ ಸಂಘ ಪುತ್ತೂರು ಹಾಗೂ ಕನ್ನಡ ವಿಭಾಗ ವಿವೇಕಾನಂದ ಕಾಲೇಜು (ಸ್ವಾಯತ್ತ) ಪುತ್ತೂರು ಇದರ ಸಹಯೋಗದಲ್ಲಿ ಡಾ. ಶ್ರೀಧರ ಎಚ್. ಜಿ. ಅವರ ‘ನೆನಪಾಗಿ ಉಳಿದವರು’ ಕೃತಿ ಲೋಕರ್ಪಣಾ ಸಮಾರಂಭವು ದಿನಾಂಕ 29-02-2024ರ ಸಂಜೆ ಘಂಟೆ 4.30 ರಿಂದ ಪುತ್ತೂರಿನ ಅನುರಾಗ ವಠಾರದಲ್ಲಿ ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ ಪುತ್ತೂರು ಉಮೇಶ್ ನಾಯಕ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ಕುವೆಂಪು ಭಾಷಾ ಭಾರತಿಯ ಮಾಜಿ ಅಧ್ಯಕ್ಷರು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಿದ್ಧಕಟ್ಟೆ ಇಲ್ಲಿನ ಪ್ರಾಂಶುಪಾಲರಾದ ಡಾ. ಗಿರೀಶ್ ಭಟ್ ಅಜಕ್ಕಳ ಕೃತಿ ಲೋಕಾರ್ಪಣೆ ಗೊಳಿಸಲಿರುವರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿವೇಕಾನಂದ ಕಾಲೇಜು ಪುತ್ತೂರು ಇಲ್ಲಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರೊ. ಶ್ರೀಪತಿ ಕಲ್ಲೂರಾಯ, ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಬಿ. ಪುರಂದರ ಭಟ್, ಹಾಗೂ…

Read More

ತೆಕ್ಕಟ್ಟೆ: ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆಯ ‘ಸಿನ್ಸ್-1999 ಶ್ವೇತಯಾನ’ ರಜತ ಸಂಭ್ರಮದ ಉದ್ಘಾಟನಾ ಸಮಾರಂಭವು ದಿನಾಂಕ 18-02-2024 ರಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ರಾಜ್ಯ ಹಿಂದುಳಿದ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ ಹೆಗ್ಡೆ ಮಾತನಾಡಿ “ಕಲಾಭಿಮಾನಿಗಳ ಆಸಕ್ತಿಯನ್ನು ಗುರುತಿಸಿ, ಯಶಸ್ವಿ ಸಂಸ್ಥೆ ಪ್ರದರ್ಶನಗಳನ್ನು ನೀಡುತ್ತಿರುವುದು ಶ್ಲಾಘನೀಯ. ಸಂಸ್ಥೆಯ ಬೆನ್ನೆಲುಬಾಗಿದ್ದ ಸದಸ್ಯರನ್ನು ರಜತ ಸಂಭ್ರಮದಲ್ಲಿ ನೆನಪಿಸುವ ಕೆಲಸ ಮಾಡುತ್ತಿರುವ ಕಲಾವೃಂದ ಬಹಳಷ್ಟು ಎತ್ತರಕ್ಕೆ ಏರುವ ಸಾಧ್ಯತೆಗಳಿವೆ. ಕಲಾ ಪೋಷಕರಿಗೆ ವೇದಿಕೆ ನಿರ್ಮಿಸಿ, ಅವರನ್ನು ಪ್ರದರ್ಶನಕ್ಕೆ ಸಿದ್ಧಗೊಳಿಸುವ ಕಾರ್ಯ ಸಾಧರಣವಲ್ಲ. ಬಹು ಕ್ಲಿಷ್ಟವಾದ ಸಾಹಸವೆನ್ನಿಸುವ ಕೆಲಸವನ್ನೇ ಕೈಗೆತ್ತಿಕೊಂಡು ಮುನ್ನುಗ್ಗುತ್ತಿರುವ ಸಂಸ್ಥೆ ಇಂದು ಇಪ್ಪತೈದನೇ ಸಂಭ್ರಮಕ್ಕೆ ನಾಂದಿ ಹಾಡುತ್ತಿದೆ. 108 ಕಾರ್ಯಕ್ರಮದ ಯೋಜನೆ ಸಾವಿರದಷ್ಟು ಆಗಲಿ” ಎಂದು ಶುಭಹಾರೈಸಿದರು. ಶುಭಾಶಂಸನೆಗಾಗಿ ಆಗಮಿಸಿದ ಯಕ್ಷ ಸಾಹಿತಿ ಪವನ್ ಕಿರಣ್‌ಕೆರೆ ಮಾತನ್ನಾಡಿ “ಯಶಸ್ವಿ ಸಂಸ್ಥೆ ಯಕ್ಷಗಾನವನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಿತ್ತೇ ಹೊರತು ಯಕ್ಷಗಾನದಿಂದ ತಾನು ಮುಖ್ಯ ವಾಹಿನಿಗೆ ಬರುವ ಯಾವ ಪ್ರಯತ್ನವನ್ನು ಮಾಡಿರಲಿಲ್ಲ. ಇಪ್ಪತ್ತೆತೈದು ವರ್ಷದ ಈ…

Read More