Author: roovari

ಮಂಡ್ಯ : ಶ್ರೀ ಲಕ್ಷ್ಮೀನಾರಾಯಣ ದೇವರ ನೂತನ ಮೂರ್ತಿ ಪ್ರತಿಷ್ಠಾ ಕಾರ್ಯಕ್ರಮದ ಪ್ರಯುಕ್ತ ಶ್ರೀ ಕ್ಷೇತ್ರ ಪಂಚಲಿಂಗದಲ್ಲಿ ದಿನಾಂಕ 25 ಮತ್ತು 26 ಮೇ 2025ರಂದು ಕಿರು ನಾಟಕ, ನೃತ್ಯ ನಮನ ಮತ್ತು ಯಕ್ಷಗಾನ ಪ್ರದರ್ಶನವನ್ನು ಆಯೋಜಿಸಲಾಗಿದೆ. ದಿನಾಂಕ 25 ಮೇ 2025ರಂದು ರಾತ್ರಿ 10-00 ಗಂಟೆಗೆ ಸ್ಥಳೀಯ ಕಲಾವಿದರಿಂದ ಆರ್.ಟಿ. ಹೆಗಡೆ ತೀರ್ಥಗಾನ ಇವರ ನಿರ್ದೇಶನದಲ್ಲಿ ‘ವೃದ್ಧಾಶ್ರಮ’ ಕಿರು ನಾಟಕ ಪ್ರದರ್ಶನ ಹಾಗೂ ದಿನಾಂಕ 26 ಮೇ 2025ರಂದು ರಾತ್ರಿ 8-30 ಗಂಟೆಗೆ ವಿದುಷಿ ಜಯಶ್ರೀ ಹೆಗಡೆ, ವಿದುಷಿ ಅನುರಾಧಾ ಹೆಗಡೆ ಹಾಗೂ ವಿದ್ಯಾರ್ಥಿಗಳಿಂದ ‘ನೃತ್ಯ ನಮನ’ ಮತ್ತು 9-30 ಗಂಟೆಗೆ ‘ದಕ್ಷಯಜ್ಞ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

Read More

ಭಾಷೆ, ಭಾಷಾ ಸಮಸ್ಯೆಗಳು, ದೇಶದ ಸಮಸ್ಯೆಗಳು, ಸಾಮಾಜಿಕ ಸಮಸ್ಯೆಗಳ ಕುರಿತು ಐವತ್ತಕ್ಕೂ ಹೆಚ್ಚಿನ ಕೃತಿಗಳನ್ನು ಪ್ರಕಟಿಸಿರುವ ಅಜಕ್ಕಳ ಗಿರೀಶ ಭಟ್ ಕನ್ನಡದ ಬಹು ಮುಖ್ಯ ಲೇಖಕರು. ಇವರು ಇತ್ತೀಚೆಗೆ ಹೊರತಂದಿರುವ ‘ವ್ಯಥೆ ಕಥೆ’ ಕನ್ನಡಕ್ಕೆ ವಿಶಿಷ್ಟವಾದ ಒಂದು ಕಿರು ಕಾದಂಬರಿ ‘Imagined Reality’ ಅನ್ನುವ ಪ್ರಕಾರದಡಿ ಬರುವಂತಹ ಒಂದು ಕೃತಿ ಎಂದು ಅವರೇ ಹೇಳಿಕೊಂಡಿದ್ದಾರೆ. ಕಟ್ಟುಕಥೆ ಮತ್ತು ಕಲ್ಪನೆಗಳ ಸಹಾಯದಿಂದ ನಿಜವಲ್ಲದೆ ಇರುವ ಒಂದು ಭೌತಿಕ ಜಗತ್ತನ್ನು ಕಟ್ಟುವ ಮತ್ತು ಹಾಗೆ ಕಟ್ಟಿದ ವಿಚಾರಗಳು ನಿಜವಾಗಬಹುದಾದ ಸಾಧ್ಯತೆ ಇರುವಂತಹ ಮತ್ತು ಕಥೆಯ ಸಂದರ್ಭದಲ್ಲಿ ವಿಶ್ವಸನೀಯವಾಗಿರಬಹುದಾಗಿದ್ದರೆ ಅದು ಈ ತಂತ್ರಕ್ಕೆ ಸರಿ ಹೊಂದುತ್ತದೆ. ದೇಶದ ನ್ಯಾಯಾಂಗ ವ್ಯವಸ್ಥೆಯ ಲೋಪದೋಷಗಳ ಕುರಿತಾದ ಈ ಕೃತಿ ಓದುಗನ ಕಣ್ಣು ತೆರೆಸುತ್ತದೆ ಮಾತ್ರವಲ್ಲದೆ ಚಿಂತನೆಗೆ ಹಚ್ಚುತ್ತದೆ. ಎಲ್ಲಾ ಕಾದಂಬರಿಗಳಂತೆ ಸಾಮಾನ್ಯ ರೀತಿಯಲ್ಲಿ ಕಥಾನಾಯಕನ ಉತ್ತಮ ಪುರುಷ ನಿರೂಪಣೆಯೊಂದಿಗೆ ಆರಂಭವಾಗುವ ಕಾದಂಬರಿಯು ಆತನ ಪ್ರಸ್ತುತ ಪರಿಸ್ಥಿತಿಯ ಕುರಿತು ಒಂದಷ್ಟು ವಿಚಾರಗಳನ್ನು ಹೇಳುತ್ತದೆ. ಆತ ರೆವೆನ್ಯೂ ಇಲಾಖೆಯಲ್ಲಿ ಕೆಲಸ ಮಾಡಿ…

Read More

ಬೆಂಗಳೂರು : ಡ್ರಾವಿಡ ಭಾಷಾ ಅನುವಾದಕರ ಸಂಘದ ವತಿಯಿಂದ ‘ಭಾಷಾಂತರ ಪ್ರಶಸ್ತಿ’ಗೆ ಕೃತಿಗಳನ್ನು ಆಹ್ವಾನಿಸಿದೆ. ಈ ಪ್ರಶಸ್ತಿ ತಮಿಳು, ಮಲಯಾಳಂ, ತೆಲುಗು ಅಥವಾ ತುಳು ಭಾಷೆಗಳಿಂದ ಕನ್ನಡಕ್ಕೆ ಭಾಷಾಂತರ ಮಾಡಿರುವ ಕಾದಂಬರಿಗೆ ನೀಡಲಾಗುವುದು. ಕೃತಿಗಳು 2023 ಅಥವಾ 2024ರಲ್ಲಿ ಪ್ರಕಟವಾಗಿರಬೇಕು. ಅರ್ಜಿದಾರರು ಮೂಲ ಕೃತಿಯ ಒಂದು ಪ್ರತಿ ಹಾಗೂ ಭಾಷಾಂತರಿತ ಕನ್ನಡ ಆವೃತ್ತಿಯ ಮೂರು ಪ್ರತಿಗಳನ್ನು ದಿನಾಂಕ 20 ಜೂನ್ 2025ರ ಒಳಗಾಗಿ ಅಧ್ಯಕ್ಷರು, ಡಿ.ಬಿ.ಟಿ.ಎ., ಶ್ರೀ ಭೈರವೇಶ್ವರ ನಿಲಯ, ಇಮ್ಮಡಿ ಹಳ್ಳಿ ಮುಖ್ಯ ರಸ್ತೆ, ಹಗದೂರು, ವೈಟ್ ಫೀಲ್ಡ್, ಬೆಂಗಳೂರು-560066 ಎಂಬ ವಿಳಾಸಕ್ಕೆ ಕಳುಹಿಸಬಹುದು. ಈ ಪ್ರಶಸ್ತಿಗೆ ರೂ.11,111/- ನಗದು ಪುರಸ್ಕಾರವಿದ್ದು, ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಸಂಘದ ನಾಲ್ಕನೇ ವಾರ್ಷಿಕ ಮಹಾಸಭೆಯ ವೇಳೆ ಪ್ರದಾನ ಮಾಡಲಾಗುವುದು ಎಂದು ಸಂಸ್ಥಾಪಕ ಅಧ್ಯಕ್ಷೆ ಡಾ. ಸುಷ್ಮಾ ಶಂಕರ್ ಇವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಅಧ್ಯಕ್ಷರು: 9901041889, ಕಾರ್ಯದರ್ಶಿ: 9731561354 ಸಂಖ್ಯೆಯನ್ನು ಸಂಪರ್ಕಿಸಬಹುದು.

Read More

ನಂದಳಿಕೆ : ವಿಶಾಲ ಯಕ್ಷ ಕಲಾ ಬಳಗ ನಂದಳಿಕೆ ಕಾರ್ಕಳ ತಾಲೂಕು ಇದರ ವತಿಯಿಂದ ಹಮ್ಮಿಕೊಂಡ ‘ತಾಳಮದ್ದಳೆ ಜ್ಞಾನಯಜ್ಞ’ ಕಾರ್ಯಕ್ರಮವು ದಿನಾಂಕ 26 ಮೇ 2025ರಂದು ಬೆಳಿಗ್ಗೆ 9-30 ಗಂಟೆಗೆ ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ. ಪ್ರಸಂಗ ಸಾಹಿತ್ಯ ‘ಸುಧಾಮ ಚರಿತ್ರೆ’ಯಲ್ಲಿ ಭಾಗವತರಾಗಿ ಬೊಟ್ಟಿಕೆರೆ ಪುರುಷೋತ್ತಮ ಪೂಂಜ, ಹಿಮ್ಮೇಳದಲ್ಲಿ ಲಕ್ಷ್ಮೀನಾರಾಯಣ ಹೊಳ್ಳ ಕೃಷ್ಣಾಪುರ, ಸ್ಕಂಧರಾಜ ಮಯ್ಯ ವರ್ಕಾಡಿ, ಕುಮಾರ ಮಯ್ಯ ವರ್ಕಾಡಿ ಹಾಗೂ ಅರ್ಥಗಾರಿಕೆಯಲ್ಲಿ ಡಾ. ವಾದಿರಾಜ ಕಲ್ಲೂರಾಯ, ಸುಬ್ರಹ್ಮಣ್ಯ ಬೈಪಾಡಿತ್ತಾಯ ಮತ್ತು ಶಾಂತಾ ಬೈಪಾಡಿತ್ತಾಯ ಸಹಕರಿಸಲಿದ್ದಾರೆ.

Read More

ಮೈಸೂರು : ಹಿರಿಯ ಸಾಹಿತಿ ಸವಿತಾ ನಾಗಭೂಷಣ ಇವರ ‘ದಿನದ ಪ್ರಾರ್ಥನೆ’ ಕವನ ಸಂಕಲನವು 2025ನೇ ಸಾಲಿನ ‘ಡಾ. ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ’ಗೆ ಆಯ್ಕೆಯಾಗಿದೆ. ಸವಿತಾರವರೇ ಮುನ್ನಡೆಸುವ ಶಿವಮೊಗ್ಗದ ‘ನುಡಿ’ ಪ್ರಕಾಶನವು 2024ರಲ್ಲಿ ಈ ಸಂಕಲನವನ್ನು ಪ್ರಕಟಿಸಿದೆ. ರೂ.25,000/- ನಗದು ಮತ್ತು ಫಲಕವನ್ನು ಈ ಪ್ರಶಸ್ತಿಯು ಒಳಗೊಂಡಿದೆ. ದಿನಾಂಕ 01 ಜೂನ್ 2025ರಂದು ಮೈಸೂರಿನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ಕೇಂದ್ರದ ಅಧ್ಯಕ್ಷೆ ಡಾ. ಸಬಿಹಾ ಭೂಮಿಗೌಡ ತಿಳಿಸಿದ್ದಾರೆ. ಮೈಸೂರಿನ ಸಮತಾ ಅಧ್ಯಯನ ಕೇಂದ್ರವು 2022ರಲ್ಲಿ ಸ್ಥಾಪಿಸಿರುವ ಈ ಪ್ರಶಸ್ತಿಗೆ 2020-24 ಸಾಲಿಗೆ ಲೇಖಕಿಯರು ಪ್ರಕಟಿಸಿದ ಕವನ ಸಂಕಲನಗಳನ್ನು ಆಹ್ವಾನಿಸಿತ್ತು. ಲೇಖಕಿಯರು/ಪ್ರಕಾಶಕರಿಂದ ಒಟ್ಟು 110 ಸಂಕಲನಗಳು ಬಂದಿದ್ದವು. ತೀರ್ಪುಗಾರರಾಗಿ ಹಿರಿಯ ಕವಿಗಳಾದ ಪ್ರೊ. ಚ.ಸರ್ಮಮಂಗಳ, ಜಿ.ಪಿ. ಬಸವರಾಜು, ಡಾ. ಎಂ.ಎಸ್. ವೇದಾ ಇವರಿದ್ದ ಸಮಿತಿಯು, ಸವಿತಾ ನಾಗಭೂಷಣ ಅವರ ‘ದಿನದ ಪ್ರಾರ್ಥನೆ’ ಸಂಕಲನವನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಸವಿತಾ ಹುಟ್ಟಿದ್ದು ಚಿಕ್ಕಮಗಳೂರಿನಲ್ಲಿ. ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಅಂಚೆ…

Read More

ಮಡಿಕೇರಿ : ಕೊಡಗು ಕಲಾವಿದರ ಸಂಘದ ವತಿಯಿಂದ ಕೊಡವ ಸಾಹಿತ್ಯ ರಚನೆಕಾರ, ಸಂಗೀತ ನಿರ್ದೇಶಕ, ಹಾಡುಗಾರ, ಹಿರಿಯ ಕಲಾವಿದ ಚೆಕ್ಕೆರ ತ್ಯಾಗರಾಜ ಅಪ್ಪಯ್ಯ ಇವರನ್ನು ದಿನಾಂಕ 22 ಮೇ 2025ರಂದು ಮೈಸೂರು ಕೊಡವ ಸಮಾಜದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಈ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಕಲಾವಿದರ ಸಂಘದ ಅಧ್ಯಕ್ಷ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ “ಕಲಾವಿದರ ಕಲಾ ಸೇವೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಸನ್ಮಾನ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಚೆಕ್ಕೆರ ತ್ಯಾಗರಾಜರ ಕಲಾ ಸೇವೆ ಅಪಾರವಾಗಿದ್ದು, ಇತರರಿಗೆ ಮಾದರಿಯಾಗಿದೆ. ಸಂಘದ ವತಿಯಿಂದ ಮೊದಲ ಬಾರಿಗೆ ಚೆಕ್ಕೆರ ತ್ಯಾಗರಾಜ ಇವರನ್ನು ಗುರುತಿಸಿ ಸನ್ಮಾನಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಧಕರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಗುವುದು. ಈ ಕಾರ್ಯಕ್ರಮ ನಿರಂತರವಾಗಿ ನಡೆಯಲಿದ್ದು, ಇದಕ್ಕೆ ಸರ್ವ ಕಲಾಭಿಮಾನಿಗಳು ಸಹಕರಿಸಬೇಕು” ಎಂದು ಮನವಿ ಮಾಡಿದರು. ಹಿರಿಯ ಕಲಾವಿದ ಹಾಗೂ ಆಯೋಜಕ ನೆರವಂಡ ಉಮೇಶ್ ಮಾತನಾಡಿ “ತ್ಯಾಗರಾಜ ಅವರಂತೆ ಅವರ ತಂದೆ ಅಪ್ಪಯ್ಯರವರು ಕೂಡ ಕಲಾ ಕ್ಷೇತ್ರಕ್ಕೆ ದೊಡ್ಡ ಕೊಡುಗೆಯನ್ನೇ…

Read More

ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದ ಡಾ. ಪಿ. ದಯಾನಂದ ಪೈ ಮತ್ತು ಶ್ರೀ‌ ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ಕೊಡಮಾಡುವ 2023-24ನೇ ಸಾಲಿನ ಯಕ್ಷಮಂಗಳ ಪ್ರಶಸ್ತಿಗೆ ಯಕ್ಷಗಾನ ರಂಗದ ಹಿರಿಯ ಅರ್ಥಧಾರಿ ವಿದ್ವಾಂಸರಾಗಿರುವ ಡಾ. ರಮಾನಂದ ಬನಾರಿ ಕಾಸರಗೋಡು, ಹಿರಿಯ ಯಕ್ಷಗಾನ ಕಲಾವಿದ ವಿದ್ವಾಂಸ ಪ್ರೊ. ಎಂ.ಎಲ್. ಸಾಮಗ ಉಡುಪಿ ಹಾಗೂ ತೆಂಕುತಿಟ್ಟು ಯಕ್ಷಗಾನದ ಹಿರಿಯ ಬಣ್ಣದ ವೇಷಧಾರಿ ಸದಾಶಿವ ಶೆಟ್ಟಿಗಾರ್ ಸಿದ್ಧಕಟ್ಟೆ ಇವರುಗಳು ಆಯ್ಕೆಯಾಗಿದ್ದಾರೆ. ‘ಯಕ್ಷಮಂಗಳ ಕೃತಿ ಪ್ರಶಸ್ತಿ’ಗೆ ಲೇಖಕ, ಪತ್ರಕರ್ತ ಶಿರಸಿಯ ಅಶೋಕ ಹಾಸ್ಯಗಾರ ಅವರ ‘ದಶರೂಪಕಗಳ ದಶಾವತಾರ’ ಕೃತಿಯು ಆಯ್ಕೆಯಾಗಿದೆ. ಯಕ್ಷಮಂಗಳ ಪ್ರಶಸ್ತಿಯು ರೂ.25,000/- ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಮತ್ತು ಸನ್ಮಾನಗಳನ್ನೊಳಗೊಂಡಿದೆ. ‘ಯಕ್ಷಮಂಗಳ ಕೃತಿ ಪ್ರಶಸ್ತಿ’ಯು ರೂ.10,000/- ನಗದು, ಪ್ರಶಸ್ತಿ ಮತ್ತು ಸ್ಮರಣಿಕೆಗಳನ್ನೊಳಗೊಂಡಿದೆ. ಜಾನಪದ ವಿದ್ವಾಂಸರಾದ ಡಾ. ಕೆ. ಚಿನ್ನಪ್ಪ ಗೌಡ ಇವರ ಅಧ್ಯಕ್ಷತೆಯಲ್ಲಿ ಪ್ರೊ. ಪಾದೆಕಲ್ಲು ವಿಷ್ಣುಭಟ್, ಯಕ್ಷಗಾನ ಸಂಘಟಕ ಮುರಲೀ ಕಡೇಕಾರ್ ಹಾಗೂ ಕೇಂದ್ರದ ನಿರ್ದೇಶಕರಾದ‌ ಡಾ. ಧನಂಜಯ…

Read More

ಬಾಗಲಕೋಟೆ : ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನವನಗರ ಬಾಗಲಕೋಟೆ, ನಾಟಕ ವಿಭಾಗ ಕನ್ನಡ ವಿಶ್ವವಿದ್ಯಾಲಯ ಹಂಪಿ ವಿದ್ಯಾರಣ್ಯ, ರಾಷ್ಟ್ರೀಯ ಸಂಶೋಧನಾ ವೇದಿಕೆ (ರಿ.) ಗುಳೇದಗುಡ್ಡ ಇವರ ಸಹಯೋಗದಲ್ಲಿ ‘ಕನ್ನಡ ನಾಟಕಗಳ ವಿಭಿನ್ನ ನೆಲೆಗಳು’ ಒಂದು ದಿನದ ರಾಜ್ಯ ಮಟ್ಟದ ಸಂಶೋಧನಾ ಕಮ್ಮಟವನ್ನು ದಿನಾಂಕ 27 ಮೇ 2025ರಂದು 9-00 ಗಂಟೆಗೆ ಕಾಲೇಜು ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಬಾಗಲಕೋಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಅರುಣಕುಮಾರ ಗಾಳಿ ಇವರ ಅಧ್ಯಕ್ಷತೆಯಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯ ಕುಲಪತಿಗಳಾದ ಡಾ. ಡಿ.ವಿ. ಪರಮಶಿವಮೂರ್ತಿ ಇವರು ಉದ್ಘಾಟನೆ ಮಾಡಲಿದ್ದಾರೆ. ಮುಂಜಾನೆ 10-00 ಗಂಟೆಯಿಂದ ನಡೆಯಲಿರುವ ಗೋಷ್ಠಿ 01ರಲ್ಲಿ ‘ಕುವೆಂಪು ಅವರ ಶೂದ್ರ ತಪಸ್ವಿ ನಾಟಕ’ ಎಂಬ ವಿಷಯದ ಬಗ್ಗೆ ಸಹಾಯಕ ಪ್ರಾಧ್ಯಾಪಕರಾದ ಡಾ. ಸದಾಶಿವ ದೊಡ್ಡಮನಿ, ಗೋಷ್ಠಿ 02ರಲ್ಲಿ ‘ಡಾ. ಚಂದ್ರಶೇಖರ ಕುಂಬಾರ ಅವರ ಶಿವರಾತ್ರಿ ನಾಟಕ’ದ ಬಗ್ಗೆ ಮುಖ್ಯಸ್ಥರಾದ ಡಾ. ರಾಜಶೇಖರ ಬಿರಾದಾರ, ಗೋಷ್ಠಿ 03ರಲ್ಲಿ ‘ಡಾ. ಗಿರೀಶ್ ಕಾರ್ನಾಡ…

Read More

ಉಡುಪಿ : ಉಡುಪಿಯ ರಾಗ ಧನ ಸಂಸ್ಥೆಯ ಆಶ್ರಯದಲ್ಲಿ ಪುತ್ತೂರಿನ ‘ಬಹುವಚನಂ’ ಸಭಾಂಗಣದಲ್ಲಿ ದಿನಾಂಕ 18 ಮೇ 2025 ಭಾನುವಾರದಂದು ಕುಮಾರಿ ತನ್ಮಯಿ ಉಪ್ಪಂಗಳ ಇವರ ಹಾಡುಗಾರಿಕೆ ಕಛೇರಿಯು ಉತ್ತಮವಾಗಿ ನಡೆಯಿತು. ವಯೊಲಿನ್ ನಲ್ಲಿ ಶ್ರೀ ಜನಾರ್ದನ್ ಎಸ್. ಹಾಗೂ ಮೃದಂಗದಲ್ಲಿ ಶ್ರೀ ಸುನಾದ ಕೃಷ್ಣ ಅಮೈ ಅಚ್ಚುಕಟ್ಟಾಗಿ ಸಹಕರಿಸಿದರು. ಚಲಮೇಲ ದರ್ಬಾರ್ ಆದಿತಾಳದ ವರ್ಣವನ್ನು ತ್ರಿಶ್ರದಲ್ಲಿ ಪ್ರಸ್ತುತ ಪಡಿಸಿದ ಕುಮಾರಿ ತನ್ಮಯಿ ‘ರಾಗವರ್ಧನಿ’ ಎಂಬ ಅಪರೂಪದ ‘ಸುಂದರ ವಿನಾಯಕ’ ಕೃತಿಯನ್ನು ಸವಿಸ್ತಾರವಾಗಿ ಪ್ರಸ್ತುತಪಡಿಸಿ ಸಭಿಕರ ಪ್ರಶಂಸೆಗೆ ಪಾತ್ರರಾದರು. ಮುಂದೆ ‘ಮಾಮವ ಸದಾ ವರದೇ’ ನಾಟಕುರಂಜಿ ರೂಪಕ ತಾಳದಲ್ಲಿ ಸ್ವರಪ್ರಸ್ತಾರ ಮುಕ್ತಾಯಗಳೊಂದಿಗೆ ಸೊಗಸಾಗಿ ಮೂಡಿ ಬಂತು. ಆಭೋಗಿಯ ರಾಗದಲ್ಲಿ ಸುಂದರವಾದ ಚಿಟ್ಟೆಸ್ವರದೊಂದಿಗೆ ‘ನನು ಬ್ರೋವವೇ’ ಕೃತಿಯ ಸೊಗಸೇ ಬಲುಚಂದವಾಗಿತ್ತು. ತದನಂತರ ಕನ್ನಡಗೌಳದ ಚಂದದ ಆಲಾಪನೆಯೊಂದಿಗೆ ‘ಸೊಗಸುಜೂಡತರಮಾ’ ಕೃತಿಯು ಹೊರಹೊಮ್ಮಿದ್ದು ಕೇಳುಗರಿಗೆ ತುಂಬಾ ಹಿಡಿಸಿದ್ದಂತೂ ನಿಜ. ವಸಂತ ರಾಗಾಲಾಪನೆಯ ಝಲಕ್ ನ್ನು ನೀಡಿ ‘ರಾಮಚಂದ್ರ ಭಾವಯಮಿ’ ಕೃತಿ ನಿರೂಪಣೆಯೂ ಮುದ್ದಾಗಿತ್ತು. ಹರಿಕಾಂಬೋಜಿಯ ಆಲಾಪನೆ…

Read More

ಮಂಡ್ಯ : ನೆಲದನಿ ಬಳಗ (ರಿ.) ಮಂಗಲ ಮಂಡ್ಯ ತಾಲೂಕು ಇದರ ವತಿಯಿಂದ ಬೆಂಗಳೂರಿನ ಪ್ರವರ ಥಿಯೇಟರ್ ಪ್ರಸ್ತುತ ಪಡಿಸುವ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ‘ಅಣ್ಣನ ನೆನಪು’ ಸಾಕ್ಷ್ಯ ನಾಟಕವನ್ನು ದಿನಾಂಕ 24 ಮೇ 2025ರಂದು ಸಂಜೆ ಗಂಟೆ 6-30ಕ್ಕೆ ಮಂಡ್ಯದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ. ಈ ನಾಟಕದ ರಂಗರೂಪ ಕರಣಂ ಪವನ್ ಪ್ರಸಾದ್ ಮಾಡಿದ್ದು, ಸಂಗೀತ ಅಕ್ಷಯ್ ಭೊಂಸ್ಲೆ ಮತ್ತು ಬೆಳಕು ವಿನ್ಯಾಸ ಮಂಜು ನಾರಾಯಣ್ ನೀಡಿದ್ದು, ಹನು ರಾಮಸಂಜೀವ ಇವರು ವಿನ್ಯಾಸ ಮತ್ತು ನಿರ್ದೇಶನ ಮಾಡಿರುತ್ತಾರೆ. ಮಹೇಶ್ ಎಸ್.ಪಿ., ಹನು ರಾಮಸಂಜೀವ, ನಾಗಶ್ರೀ ಪುಟ್ಟರಾಜು, ಸುಶಾಂತ್ ರಾಜ್ ಆರಾಧ್ಯ, ಋತ್ವಿಕ್ ಕೆ.ಸಿ., ಅಂಬಿಕಾ ಶೆಟ್ಟಿ, ಅಜಯ್ ಕುಮಾರ್, ಸಂಜೀವಿನಿ, ಚಂದನ್ ರಾಮಚಂದ್ರೇಗೌಡ, ಶ್ರೀನಾಥ್ ಎನ್., ಪ್ರವೀಣ್ ಭಟ್, ಚರಣ್ ಗೌಡ, ದಿಲೀಪ್ ಮಹದೇವ್, ಭರಣಿ ವಿನಾಯಕ್, ಲೇಖನ, ಹರ್ಷಿತಾ, ಯಶಸ್ವಿನಿ, ಮನ್ವಿತ್ ವಿನಯ್ ಕುಮಾರ್ ರಂಗದ ಮೇಲೆ ರಂಜಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9620174111 ಸಂಖ್ಯೆಯನ್ನು…

Read More