Author: roovari

ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡಮಿ (ರಿ) ಮತ್ತು ನಾಗರಿಕ ಸಲಹಾ ಸಮಿತಿ ಸುರತ್ಕಲ್‌ ಇವುಗಳ ಸಹಯೋಗದೊಂದಿಗೆ 50ನೇ ಉದಯರಾಗ ಕಾರ್ಯಕ್ರಮ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಸಂಬಂಧಿತ ಕೃತಿಗಳಾಧಾರಿತ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯ 26ನೇ ಮಂಜುನಾದ ಕಾರ್ಯಕ್ರಮವು ದಿನಾಂಕ 18-02-2024 ರಂದು ಸುರತ್ಕಲ್ ಫ್ಲೈ ಓವರ್ ಕೆಳಗಡೆ ನಡೆಯಿತು. ಕಾರ್ಯಕ್ರಮಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆನುವಂಶಿಕ ಮೊಕ್ತೇಸರ ವೇದಮೂರ್ತಿ ಐ. ರಮಾನಂದ ಭಟ್ ಮಾತನಾಡಿ “ಉದಯರಾಗ ಸಂಗೀತ ಕಾರ್ಯಕ್ರಮದ ಪರಿಕಲ್ಪನೆ ಅನನ್ಯವಾದುದು. ಶಾಸ್ತ್ರೀಯ ಸಂಗೀತ ದೈವಿಕ ಕಲೆಯಾಗಿದ್ದು ಸಂಗೀತ ಸೇವೆಯಿಂದ ದೈವಾನುಗ್ರಹ ಪ್ರಾಪ್ತವಾಗುತ್ತದೆ.” ಎಂದರು. ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯೆ ಸರಿತಾ ಶಶಿಧರ್ ಶುಭ ಹಾರೈಸಿದರು. ಮಣಿಕೃಷ್ಣಸ್ವಾಮಿ ಅಕಾಡೆಮಿಯ ಗೌರವಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಮಾತನಾಡಿ “ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸಕ್ತ ಶಾಸ್ತ್ರೀಯ ಸಂಗೀತದ ಆಸಕ್ತಿ ವರ್ಧಿಸಿದ್ದು ಉದಯೋನ್ಮುಖ ಕಲಾವಿದರಿಗೆ ಹೆಚ್ಚಿನ ಅವಕಾಶ ಲಭ್ಯವಾಗತ್ತಿದೆ. ಪಿ. ನಿತ್ಯಾನಂದ ರಾವ್‌ ಇವರ ಶಾಸ್ತ್ರೀಯ…

Read More

ಕಲಬುರಗಿ : ಕಲಬುರಗಿ ಜಿಲ್ಲೆಯ ಪಾಳಾದ ಶುಭಾಶ್ಚಂದ್ರ ಪಾಟೀಲ ಸ್ಮಾರಕ ಜನಕಲ್ಯಾಣ ಟ್ರಸ್ಟ್‌ ವತಿಯಿಂದ 6ನೇ ವರ್ಷದ ರಾಜ್ಯಮಟ್ಟದ ‘ಬಸವ ಪುರಸ್ಕಾರ’ಕ್ಕೆ 2023ರಲ್ಲಿ ಪ್ರಕಟವಾದ ನಾನಾ ಪ್ರಕಾರಗಳ ಸಾಹಿತ್ಯ ಕೃತಿಗಳನ್ನು ಆಹ್ವಾನಿಸಲಾಗಿದೆ. ಕಥೆ, ಕವನ, ಕಾದಂಬರಿ, ನಾಟಕ, ಪ್ರಬಂಧ, ವಿಮರ್ಶೆ, ಪ್ರವಾಸ ಕಥನ, ವಚನ, ಮಕ್ಕಳ ಕಥೆ, ಚುಟುಕು, ಹಾಯ್ಕು, ಗಝಲ್ ಸೇರಿ ವಿವಿಧ ಸಾಹಿತ್ಯ ಕೃತಿಗಳ ಎರಡು ಪ್ರತಿಗಳನ್ನು  ದಿನಾಂಕ 30-03-2024ರ ಒಳಗೆ ಕಳುಹಿಸಬೇಕು. ವಿಳಾಸ: ಶರಣಗೌಡ ಪಾಟೀಲ ಪಾಳಾ  ಅಧ್ಯಕ್ಷರು, ಶುಭಾಶ್ಚಂದ್ರ ಪಾಟೀಲ ಸ್ಮಾರಕ ಜನಕಲ್ಯಾಣ ಟ್ರಸ್ಟ್, ಶಿವಶರಣ ಸಂಕೀರ್ಣ ಅಪಾರ್ಟ್‌ಮೆಂಟ್, 3ನೇ ಮಹಡಿ, ಬಿ-1, ಖುಬಾ ಪ್ಲಾಟ್ ಕೋರ್ಟ್ ರಸ್ತೆ, ಕಲಬುರಗಿ – 585102

Read More

ವಿಜಯಪುರ : ವಿಜಯಪುರದ ಶ್ರೀ ಕುಮಾರವ್ಯಾಸ ಭಾರತ ವೇದಿಕೆಯಡಿಯಲ್ಲಿ ದಾಸಶ್ರೇಷ್ಠ ಕನಕದಾಸರ ಜಯಂತಿಯನ್ನು ದಿನಾಂಕ 18-02-2024ರಂದು ಗುಜ್ಜರಗಲ್ಲಿಯ `ಶ್ರೀ ಗುರುವಿಠ್ಠಲ ಕೃಪಾ’ ಭವನದಲ್ಲಿ ವೈಭವದಿಂದ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ, ದೀಪ ಬೆಳಗಿ ಉದ್ಘಾಟಿಸಿದ ಶ್ರೀಮತಿ ಭೂದೇವಿ ಕುಲಕರ್ಣಿಯವರು ಗದುಗಿನ ಭಾರತದ ಪೀಠಿಕಾ ಸಂಧಿಯ ಐದು ಪದ್ಯಗಳನ್ನು ವಾಚಿಸಿ ಕುಮಾರವ್ಯಾಸರು ಹಾಗೂ ಕನಕದಾಸರ ಮೂರ್ತಿಗಳಿಗೆ ಮಾಲಾರ್ಪಣೆ ಮಾಡಿದರು. ಬಳಿಕ ಮಾತನಾಡಿದ ಅವರು “ಕನಕದಾಸರು ಜ್ಞಾನ, ಭಕ್ತಿ ಹಾಗೂ ವೈರಾಗ್ಯದೊಂದಿಗೆ ಕನ್ನಡಿಗರಿಗೆ ಭಕ್ತಿಗೀತೆ, ಮಹಾಕಾವ್ಯ ನೀಡಿದ ಮಹನೀಯರು.  ಕನಕದಾಸರು ಭಕ್ತಿ ಸಾಮ್ರಾಜ್ಯದ ಮಹಾನ್ ನಾಯಕರು.” ಎಂದು ತಿಳಿಸಿದರು.  ಕಾರ್ಯಕ್ರಮದ ಉದ್ಘಾಟನೆಯ ಬಳಿಕ ಕನಕದಾಸರ `ನಳಚರಿತ್ರೆ’ ಕಾವ್ಯದ `ನಳ ದಮಯಂತಿ’ ಪರಿಣಯ ಪ್ರಸಂಗದ ಗಮಕ ವಾಚನ ವ್ಯಾಖ್ಯಾನವನ್ನು ಹಿರಿಯ ಗಮಕಿ ಶ್ರೀಮತಿ ಶಾಂತಾ ಕೌತಾಳ ಹಾಗೂ ಕಲ್ಯಾಣರಾವ್ ದೇಶಪಾಂಡೆ ಇವರುಗಳು ನಡೆಸಿಕೊಟ್ಟರು.  ಕಥೆಯಲ್ಲಿ ಕಾಣಬರುವ ನಳನ ಸದ್ಗುಣಗಳು, ದಮಯಂತಿಯ ಭಕ್ತಿ ಹಾಗೂ ವಿನಯವಂತಿಕೆ ಕೇಳುಗರ ಮನ ಸೆಳೆದವು. ಅತಿಥಿಗಳಾದ ಶ್ರೀಮತಿ ಭೂದೇವಿಯರಿಗೆ, ವೇದಿಕೆಯ…

Read More

ಬೆಂಗಳೂರು : ಬೆಂಗಳೂರಿನ ವಸಂತ ಆರ್ಟ್‌ ಆಯೋಜಿಸಿದ ಸಮೂಹ ಚಿತ್ರಕಲಾ ಪ್ರದರ್ಶನ ‘ಕಲರ್ಸ್ ಬ್ರಿಜ್’ ದಿನಾಂಕ 16-02-2024 ರಿಂದ 20-02-2024ರ ವರೆಗೆ ಬೆಂಗಳೂರಿನ ಬಸವನಗುಡಿಯ ಇಂಡಿಯನ್ ಇನ್ಸಿಟ್ಯೂಟ್ ಆಪ್ ವರ್ಲ್ಡ್ ಕಲ್ಟರ್ ಸಭಾಂಗಣದಲ್ಲಿ ನಡೆಯಿತು. ದಿನಾಂಕ 16-02-2024 ರಂದು ನಡೆದ ಉದ್ಘಾಟನಾ ಸಮಾರಂಭದಲ್ಲಿ ಲೋಕೋಪಯೋಗಿ ಇಲಾಖೆಯ ಯೋಜನಾ ಮತ್ತು ಆಸ್ತಿ ನಿರ್ವಹಣಾ ಕೇಂದ್ರದ ಮುಖ್ಯ ಇಂಜಿನಿಯರ್ ಆಗಿರುವ ಪ್ರದೀಪ್ ಮಿತ್ರ ಮಂಜುನಾಥ್ ಪ್ರದರ್ಶನವನ್ನು ಉದ್ಘಾಟಿಸಿ ಕಲಾವಿದರಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಬೋದಿ ಸಂಸ್ಥೆಯ ನಿರ್ದೇಶಕರಾದ ಶಿವಾನಂದ ಬಸವಂತಪ್ಪ ಹಾಗೂ ಉದ್ಯಮಿಯಾದ ಕೋಲಿ ಶೆಟ್ಟಿ ಉಪಸ್ಥಿತರಿದ್ದರು. ರಾಜ್ಯ ಸೇರಿದಂತೆ ವಿವಿಧ ರಾಜ್ಯಗಳ ಒಟ್ಟು ಹದಿನೆಂಟು ಚಿತ್ರಕಲಾವಿದರು ತಮ್ಮ ಕೈ ಚಳಕದಿಂದ ತಯಾರಿಸಿದ ಚಿತ್ರಗಳು ಇಲ್ಲಿ ಪ್ರದರ್ಶನಗೊಂಡವು.

Read More

ಬೆಂಗಳೂರು : ವಿರಾಜಪೇಟೆಯ ಅಪ್ಪಯ್ಯಸ್ವಾಮಿ ರಸ್ತೆಯಲ್ಲಿರುವ ಮಹಾಗಣಪತಿ ಆಂಜನೇಯ ದೇವಸ್ಥಾನದಲ್ಲಿ ನಡೆಸಲಾಗುತ್ತಿರುವ ‘ನಾಟ್ಯ ಮಯೂರಿ’ ನೃತ್ಯ ಶಾಲೆಯ ವತಿಯಿಂದ ‘ರಾಜ್ಯ ಮಟ್ಟದ ನೃತ್ಯೋತ್ಸವ’ವು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಕನ್ನಡ ಭವನದ ನಯನ ಸಭಾಂಗಣದಲ್ಲಿ ದಿನಾಂಕ 04-02-2024ರಂದು ನಡೆಯಿತು. ಕಾರ್ಯಕ್ರಮದ ಸಾನ್ನಿಧ್ಯವನ್ನು ಕುಂದಾಪುರದ ಶ್ರೀ ಶನೇಶ್ವರ ದೇವಸ್ಥಾನದ ಧರ್ಮದರ್ಶಿಯಾದ ಡಾ. ಅಶೋಕ್ ಶೆಟ್ಟಿ ವಹಿಸಿದ್ದರು. ನಟ ಸುಧೀರ್ ಅವರ ಪತ್ನಿ ಮಾಲತಿ ಸುಧೀರ್ ಕಾರ್ಯಕ್ರಮದ ಉದ್ಘಾಟನೆ ಮಾಡಿದರು. ‘ನಾಟ್ಯ ಮಯೂರಿ’ ನೃತ್ಯ ಶಾಲೆಯ ಸಂಸ್ಥಾಪಕರಾದ ವಿದುಷಿ ಪ್ರೇಮಾಂಜಲಿ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ‘ಸುವರ್ಣ ಸಂಭ್ರಮ ಕನ್ನಡಿಗ ಪ್ರಶಸ್ತಿ’ ಹಾಗೂ ‘ಸುವರ್ಣ ಶ್ರೀ ಕನ್ನಡ ಪ್ರಶಸ್ತಿ’ ಪ್ರದಾನ ಸಮಾರಂಭ ನಡೆಯಿತು. ಖ್ಯಾತ ಗಾಯಕರಾದ ಶಶಿಧರ್ ಕೋಟೆ, ಸಮಾಜ ಸೇವಕ ಸೋಮನ್ ಎನ್.ಕೆ., ಷಣ್ಮುಗಂ ಎಂ., ಡಾ. ಮಮತಾ ಅಶೋಕ್, ಡಾ. ಪಿ. ಶ್ರೀಧರ್, ಶ್ರೀ ಮಹೇಂದರ್ ಮುಣೋತ್, ಬಾಲ ಪ್ರತಿಭೆ ಅಮೋಘ…

Read More

ಪುತ್ತೂರು : ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ, ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಮತ್ತು ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಇದರ ಆಶ್ರಯದಲ್ಲಿ ಪ್ರಿಯ ಸುಳ್ಯರವರ ‘ಬಾಳಿಗೆ ಬೆಳಕು’ ಕವನ ಸಂಕಲನ ಬಿಡುಗಡೆ ಸಮಾರಂಭವು ದಿನಾಂಕ 25-02-2024ರಂದು ಪುತ್ತೂರಿನ ಜೈನ ಭವನ ರಸ್ತೆಯಲ್ಲಿರುವ ‘ಮನಿಷಾ ಸಭಾಂಗಣ’ದಲ್ಲಿ ನಡೆಯಲಿದೆ. ಕ.ಸಾ.ಪ. ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ ಪುತ್ತೂರು ಉಮೇಶ್ ನಾಯಕ್ ಇವರ ಅಧ್ಯಕ್ಷತೆಯಲ್ಲಿ ಸಾಹಿತಿ ಮತ್ತು ವಿಮರ್ಶಕರಾದ ಶ್ರೀ ಭಾಸ್ಕರ ಕೋಡಿಂಬಾಳ ಇವರು ಸಮಾರಂಭ ಉದ್ಘಾಟನೆ ಮಾಡಲಿದ್ದಾರೆ. ಪಡ್ನೂರು ಸ.ಹಿ.ಪ್ರಾ. ಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿ ಕು. ಮಣಿ ಕೃತಿ ಬಿಡುಗಡೆ ಮಾಡಲಿದ್ದು, ಬೆಂಗಳೂರಿನ ಪತ್ರಕರ್ತರಾದ ಶ್ರೀ ರಾಜು ಕೃತಿಗಾರರ ಪರಿಚಯ ಹಾಗೂ ಸಾಹಿತಿ ಮತ್ತು ವಿಮರ್ಶಕರಾದ ಶ್ರೀಮತಿ ವಿಂಧ್ಯಾ ಎಸ್. ರೈ ಇವರು ಕೃತಿ ಪರಿಚಯ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ 11-30 ಗಂಟೆಗೆ ನಡೆಯಲಿರುವ ‘ಬಾಳಿಗೆ ಬೆಳಕು ಕವನಕೆ ಹೊಳಪು’ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಯುವ…

Read More

ಮಂಗಳೂರು : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ಮಂಗಳೂರು ಸಮೀಪದ ಕೋಟೆಕಾರು ಬಳಿ ಶ್ರೀ ಕೊಲ್ಯ ಮಠದ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ 36ನೆಯ ಪ್ರತಿಷ್ಠಾ ವಾರ್ಷಿಕೋತ್ಸವದ ಅಂಗವಾಗಿ ದಿನಾಂಕ 20-02-2023ನೇ ಮಂಗಳವಾರ ‘ದಕ್ಷಯಜ್ಞ’ ಎಂಬ ತಾಳಮದ್ದಳೆ ಶ್ರೀ ದೇವಳದ ಪ್ರಾಂಗಣದಲ್ಲಿ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ನಾರಾಯಣ ಶಬರಾಯ ಹಾಗೂ ಚೆಂಡೆ ಮದ್ದಳೆಗಳಲ್ಲಿ ಪದ್ಯಾಣ ಜಯರಾಮ ಭಟ್, ಮುರಳೀಧರ ಕಲ್ಲೂರಾಯ ಸಹಕರಿಸಿದರು. ಮುಮ್ಮೇಳದಲ್ಲಿ ಶುಭಾ ಜೆ.ಸಿ. ಅಡಿಗ (ಈಶ್ವರ), ಕಿಶೋರಿ ದುಗ್ಗಪ್ಪ ನಡುಗಲ್ಲು (ದಾಕ್ಷಾಯಿಣಿ). ಶುಭಾ ಗಣೇಶ್ (ದಕ್ಷ), ಜಯಂತಿ ಹೆಬ್ಬಾರ್ (ವೀರಭದ್ರ), ಗಾಯತ್ರಿ ಹೆಬ್ಬಾರ್ (ವೃದ್ಧ ಬ್ರಾಹ್ಮಣ) ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ಕಾರ್ಯಕ್ರಮದ ಸಂಯೋಜಕ ಹರಿದಾಸ ಕೂಡ್ಲು ಮಹಾಬಲ ಶೆಟ್ಟಿ (ದೇವಕೀ ತನಯ) ವಂದಿಸಿದರು.

Read More

ಉಡುಪಿ : ತುಳುಕೂಟ ಉಡುಪಿ ವತಿಯಿಂದ ನೀಡಲಾಗುವ ಎಸ್.ಯು. ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿಗೆ ತುಳು ಕಾದಂಬರಿಗಳ ಹಸ್ತಪ್ರತಿ ಆಹ್ವಾನಿಸಲಾಗಿದೆ. ಪ್ರಶಸ್ತಿಯು 8 ಸಾವಿರ ರೂ. ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಇದುವರೆಗೆ ಯಾವುದೇ ಪ್ರಶಸ್ತಿ, ಬಹುಮಾನಕ್ಕೆ ಆಯ್ಕೆಯಾಗದ, ಮುದ್ರಿತವಾಗದ, ಕ್ರೌನ್ 1/8 ಆಕಾರದಲ್ಲಿ 120 ಪುಟ ಮೀರಿರುವ ಕೃತಿಯಾಗಿರಬೇಕು. ತುಳುನಾಡಿನ ಭೌಗೋಳಿಕ ಚಿತ್ರಣ, ತುಳು ಸಂಸ್ಕೃತಿ ಬಿಂಬಿಸುವ ಅಂಶಗಳಿಂದ ಕೂಡಿರಬೇಕು. ದಿನಾಂಕ 30-03-2024ರ ಒಳಗೆ ಪಣಿಯಾಡಿ ಪ್ರಶಸ್ತಿ ಸಂಚಾಲಕಿ, ತಾರಾ ಉಮೇಶ್ ಆಚಾರ್ಯ, ವೆಂಕಟರಮಣ ಕಲ್ಮಂಜೆ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹತ್ತಿರ, ಮಣಿಪುರ ಪೋಸ್ಟ್, ಉಡುಪಿ -576120 ವಿಳಾಸಕ್ಕೆ ಕಳುಹಿಸಬೇಕು. ಮೊ. 98445 32629 ಸಂಪರ್ಕಿಸಲು ತುಳುಕೂಟ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದ್ದಾರೆ.

Read More

ಮಲ್ಪೆ : ಕಡೆಕಾರು ಕಿದಿಯೂರು ಶ್ರೀ ಬ್ರಹ್ಮಬೈದರ್ಕಳ ಧೂಮಾವತಿ ಯಕ್ಷಗಾನ ಕಲಾ ಮಂಡಳಿಯ ವಜ್ರ ಮಹೋತ್ಸವ ಸಮಾರಂಭ ದಿ. ತೋನ್ಸೆ ಜಯಂತ್ ಕುಮಾರ್ ನಿರ್ದೇಶಿಸಲ್ಪಟ್ಟ ಆಯ್ದ ಹವ್ಯಾಸಿ ಯಕ್ಷಗಾನ ಸಂಘಗಳ ಯಕ್ಷಗಾನ ಸ್ಪರ್ಧೆಯ ಸಮಾರೋಪವು ದಿನಾಂಕ 10-02-2024ರಂದು ಕಿದಿಯೂರು ಗರಡಿ ವಠಾರದಲ್ಲಿ ಜರಗಿತು. ಯಕ್ಷಗಾನ ಸ್ಪರ್ಧೆಯಲ್ಲಿ ಕುತ್ಪಾಡಿಯ ಶ್ರೀ ರಾಮಕೃಷ್ಣ ಯಕ್ಷಗಾನ ಕಲಾ ಮಂಡಳಿ ಪ್ರಥಮ ಸ್ಥಾನ ಹಾಗೂ ತೊಟ್ಟಂ ಗಜಾನನ ಯಕ್ಷಗಾನ ಕಲಾ ಮಂಡಳಿ ದ್ವಿತೀಯ ಸ್ಥಾನವನ್ನು ಗೆದ್ದುಕೊಂಡಿದೆ. ಅತ್ಯುತ್ತಮವಾಗಿ ಅಭಿನಯಿಸಿದ ಕಲಾವಿದರಿಗೆ ವೈಯಕ್ತಿಕ ಪ್ರಶಸ್ತಿಗಳನ್ನು ನೀಡಲಾಗಿದೆ. ಕಲ್ಮಾಡಿ ಬ್ರಹ್ಮಬೈದರ್ಕಳ ಗರೋಡಿಯ ಆಡಳಿತ ಸಮಿತಿಯ ಅಧ್ಯಕ್ಷ ಅಚ್ಚುತ ಅಮೀನ್ ಕಲ್ಮಾಡಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಬಣ್ಣದ ವೇಷಧಾರಿ ಎಲ್ಲಂಪಳ್ಳಿ ಜಗನ್ನಾಥ ಆಚಾರ್ ಅವರಿಗೆ ವಜ್ರ ಮಹೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಯಕ್ಷಗಾನ ಗುರು ಕೆ. ರತ್ನಾಕರ ಆಚಾರ್ಯ ಅವರಿಗೆ ಗುರುವಂದನೆ ನೀಡಲಾಯಿತು. ಸಂಘದ ಹಿರಿಯ ಸದಸ್ಯರಾದ 13 ಮಂದಿಯನ್ನು ಸಮ್ಮಾನಿಸಲಾಯಿತು. ಕಡೆಕಾರು ಮತ್ತು ಕಿದಿಯೂರು ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ…

Read More

ಬಂಟ್ವಾಳ : ಶ್ರೀಕ್ಷೇತ್ರ ಒಡಿಯೂರಿನಲ್ಲಿ ‘ಸಿರಿರಾಮೆ’ ಎಂಬ ಪರಿಕಲ್ಪನೆಯಡಿಯಲ್ಲಿ 24ನೇ ‘ತುಳು ಸಾಹಿತ್ಯ ಸಮ್ಮೇಳನ’ವು ಮಣಿಪಾಲದ ಹಿರಿಯ ಬರಹಗಾರ, ಯಕ್ಷಗಾನ ಕಲಾವಿದ ಹಾಗೂ ಜನಪ್ರಿಯ ವೈದ್ಯ ಡಾ. ಭಾಸ್ಕರಾನಂದಕುಮಾರ್ ಅವರ ಅಧ್ಯಕ್ಷತೆಯಲ್ಲಿ ದಿನಾಂಕ 18-02-2024ರಂದು ಜರಗಿತು. ಸಮ್ಮೇಳನದ ಅಂಗವಾಗಿ ಪುಸ್ತಕ ಬಿಡುಗಡೆ, ವಿದ್ವಾಂಸರಿಂದ ‘ರಾಮಾಯಣ’ ಬಗ್ಗೆ ‘ತುಲಿಪು’ ಎಂಬ ವಿಚಾರಸಂಕಿರಣ, ಅರವತ್ತು ಮಂದಿ ಕವಿಗಳ ಚುಟುಕು ಕವಿಗೋಷ್ಠಿ, ಕಬಿತೆ-ಪದೊ-ಚಿತ್ರ ಎಂಬ ಕಾರ್ಯಕ್ರಮ, ವಿವಿಧ ಕ್ಷೇತ್ರಗಳ ಹನ್ನೆರಡು ಮಂದಿ ಸಾಧಕರಿಗೆ ‘ತುಳುಸಿರಿ’ ಪ್ರಶಸ್ತಿ ಪ್ರದಾನ ಮೊದಲಾದ ಕಾರ್ಯಕ್ರಮಗಳು ಜರಗಿದವು. ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಗುರುದೇವಾನಂದ ಸ್ವಾಮೀಜಿಯವರು ತುಳು ಲಿಪಿಯಲ್ಲಿ ಬರೆದ ಅಧ್ಯಾತ್ಮ ರಾಮಾಯಣದ ‘ಸುಂದರಕಾಂಡ’ ಎಂಬ ಕೃತಿ ಹಾಗೂ ಡಾ. ವಸಂತಕುಮಾರ ಪೆರ್ಲ ಅವರು ಬರೆದ ತುಳುನಾಡಿನ ಸಾಹಿತ್ಯ ಹಾಗೂ ಸಂಸ್ಕೃತಿ ಕುರಿತ ಲೇಖನಗಳ ಸಂಕಲನ ‘ತೂಪರಿಕೆ’ ಬಿಡುಗಡೆಗೊಂಡವು. ಶ್ರೀ ಗುರುದೇವಾನಂದ ಸ್ವಾಮೀಜಿಯವರು ಸಮ್ಮೇಳನವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ವಗೆನಾಡು ಸುಬ್ರಾಯ ದೇವಸ್ಥಾನದ ಆಡಳಿತ ಮೊಕ್ತೇಸರ ಮುಗುಳಿ ತಿರುಮಲೇಶ್ವರ ಭಟ್ ಮತ್ತು ಕನ್ಯಾನದ…

Read More