Author: roovari

ಬೆಂಗಳೂರು : ಶ್ರೀ ಮುರಳೀಧರ ಸಂಗೀತ ನೃತ್ಯ ಮಹಾವಿದ್ಯಾಲಯ ಹಾಗೂ ಮೋಹನ ತರಂಗಿಣಿ ಸಂಗೀತ ಸಭಾ ಇದರ ‘76ನೇ ವಾರ್ಷಿಕ ಸಾಂಸ್ಕೃತಿಕ ಸಂಗೀತ ನೃತ್ಯ ಮಹೋತ್ಸವ’ದ ಸರಣಿ ಕಾರ್ಯಕ್ರಮವು ದಿನಾಂಕ 11-02-2024ರ ಭಾನುವಾರ ಸಂಜೆ ಘಂಟೆ 3.00 ರಿಂದ ನಡೆಯಲಿದೆ. ಬೆಂಗಳೂರಿನ ಶ್ರೀ ಮುರಳೀಧರ ಸಂಗೀತ ನೃತ್ಯ ಮಹಾವಿದ್ಯಾಲಯದ 2ನೇ ಮಹಡಿಯಲ್ಲಿರುವ ನಾದಬ್ರಹ್ಮ ಶಾರದ ಮಂದಿರದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ, ಕರ್ನಾಟಕ ಸಂಗೀತ ಕ್ಷೇತ್ರದ ಹಾಡುಗಾರಿಕೆಯಲ್ಲಿ ಸಾಧನೆ ಮಾಡಿದ ವಿದ್ವಾನ್ ಶ್ರೀ ಆರ್. ಕೆ. ಪ್ರಸನ್ನ ಕುಮಾರ್, ಕರ್ನಾಟಕ ಸಂಗೀತ ಪಿಟೀಲು ಕ್ಷೇತ್ರದ ಸಾಧನೆಗಾಗಿ ವಿದ್ವಾನ್ ಶ್ರೀ ಎಂ. ಎಸ್. ರಾಜೀವಲೋಚನ ಹಾಗೂ ಮೃದಂಗ ಕ್ಷೇತ್ರದ ಸಾಧನೆಗಾಗಿ ವಿದುಷಿ ಶ್ರೀಮತಿ ಶಶಿಕಲಾ. ಕೆ ಇವರಿಗೆ ‘ಮಂಜುದಾಸ ರಾಜ್ಯ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು. ಕಾರ್ಯಕ್ರಮದಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಹೆಚ್.ಎಸ್. ಸುಧೀಂದ್ರ ಕುಮಾ‌ರ್ ಉಪಸ್ಥಿತರಿರುವರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಂಗಳೂರಿನ ‘ಪ್ರೇಂಕಣ’ ನೃತ್ಯಾಲಯದ ವಿದುಷಿ ಶ್ರೀಮತಿ…

Read More

ಉಡುಪಿ : ಶ್ರೀ ಮಹತೋಭಾರ ಶ್ರೀ ಶಂಕರ ನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯ ನಿಕೇತನ ಕೊಡವೂರು ಇದರ ಜಂಟಿ ಆಶ್ರಯದಲ್ಲಿ ಆರಂಭಗೊಂಡ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮವು ದಿನಾಂಕ 12-2-2024ರ ಸೋಮವಾರ ಸಂಜೆ ಕೊಡವೂರು ಶ್ರೀ ಶಂಕರ ನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಉಡುಪಿ ಪುತ್ತೂರಿನ ಸುಬ್ರಹ್ಮಣ್ಯ ನಗರದ ಕುಮಾರಿ ಯಶಸ್ವಿನಿ ಪ್ರದರ್ಶನ ನೀಡಲಿದ್ದು, ಈ ಕಾರ್ಯಕ್ರಮವು ಸಂಜೆ ಗಂಟೆ 6.25 ರಿಂದ ನಡೆಯಲಿದೆ. ವಿಜಯ ಸನಿಲ್ ಮತ್ತು ಸುಮ ಸನಿಲ್ ದಂಪತಿಗಳ ಸುಪುತ್ರಿಯಾದ ಕುಮಾರಿ ಯಶಸ್ವಿ, ಉಡುಪಿಯ ಅಜ್ಜರ ಕಾಡಿನಲ್ಲಿರುವ ಜಿ. ಶಂಕರ್ ಮಹಿಳಾ ಕಾಲೇಜಿನಲ್ಲಿ ತನ್ನ ಪ್ರಥಮ ವರ್ಷದ ಎಂ. ಕಾಂ. ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ. ಭರತನಾಟ್ಯವನ್ನು ಅಮ್ಮುಂಜೆಯ ಭ್ರಾಮರಿ ನಾಟ್ಯಾಲಯ (ರಿ) ಇದರ ನಿರ್ದೇಶಕರಾದ ವಿದ್ವಾನ್ ಕೆ. ಭವಾನಿ ಶಂಕರ್ ಇವರಲ್ಲಿ ಕಳೆದ 15 ವರ್ಷಗಳಿಂದ ಕಲಿಯುತ್ತಿದ್ದು, ಈಗ ಅಂತಿಮ ವಿದ್ವತ್ತನ್ನು ಕಲಿಯುತ್ತಿದ್ದಾರೆ. ಇವರು ಭರತನಾಟ್ಯದಲ್ಲಿ ಉಡುಪಿ ಜಿಲ್ಲಾ ಮಟ್ಟದ ಯುವಜನೋತ್ಸವದಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.…

Read More

ಉಪ್ಪಿನಂಗಡಿ : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ,ಪುತ್ತೂರು. ಇವರ ವತಿಯಿಂದ ಶ್ರೀ ಮಹಾವಿಷ್ಣು ದೇವಸ್ಥಾನ ಹಾಗೂ ಪರಿವಾರ ದೈವಗಳ ನಾಲ್ಕನೇ ವರ್ಷದ ಪ್ರತಿಷ್ಠಾ ಮಹೋತ್ಸವ ಹಾಗೂ ನೇಮೋತ್ಸವದ ಅಂಗವಾಗಿ ‘ಕದಂಬ ಕೌಶಿಕೆ’ ಎಂಬ ತಾಳಮದ್ದಳೆ ಕಾರ್ಯಕ್ರಮವು ದಿನಾಂಕ 08/02/2023 ನೇ ಗುರುವಾರದಂದು ನಡೆಯಿತು. ಕಾರ್ಯಕ್ರಮದ ಹಿಮ್ಮೇಳದಲ್ಲಿ ಭಾಗವತರಾಗಿ ಸರ್ವ ಶ್ರೀ ಪದ್ಮನಾಭ ಕುಲಾಲ್ ಹಾಗೂ ಚೆಂಡೆ ಮದ್ದಳೆಗಳಲ್ಲಿ ಪದ್ಯಾಣ ಶಂಕರನಾರಾಯಣ ಭಟ್, ಶ್ರೀಪತಿ ಭಟ್ ಉಪ್ಪಿನಂಗಡಿ, ಅಚ್ಯುತ ಪಾಂಗಣ್ಣಾಯ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀಮತಿ ಕಿಶೋರಿ ದುಗ್ಗಪ್ಪ ನಡುಗಲ್ಲು (ಕೌಶಿಕೆ), ಶ್ರೀಮತಿ ಶುಭಾ. ಜೆ. ಸಿ. ಅಡಿಗ(ರಕ್ತಬೀಜ), ಶ್ರೀ ಭಾಸ್ಕರ ಶೆಟ್ಟಿ ಸಾಲ್ಮರ(ಸುಗ್ರೀವ), ಶ್ರೀಮತಿ ಹರಿಣಾಕ್ಷಿ.ಜೆ.ಶೆಟ್ಟಿ(ಶುಂಭ) ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ವಂದಿಸಿದರು. ಕಾರ್ಯಕ್ರಮಕ್ಕೆ ಶಿವರಾಮ ಗೌಡ, ಬೊಮ್ಮಣ್ಣ ಗೌಡ, ಮನೋಹರ ಶೆಟ್ಟಿ ಮತ್ತು ಪ್ರಶಾಂತ್ ಪೈ ಸಹಕಾರವಿತ್ತರು.

Read More

ಯಕ್ಷಗಾನವಂತೂ ಗಂಡುಕಲೆಯೆಂದೇ ಪ್ರಸಿದ್ಧವಾಗಿದೆ. ವೃತ್ತಿ ಕಲಾವಿದರು, ಹವ್ಯಾಸೀ ಕಲಾವಿದರು ರಂಗವೇರಿ ಮಿಂಚುತ್ತಿದ್ದಾರೆ. ಇಂತಹ ಶ್ರೀಮಂತ ಕಲೆಯಾದ ಯಕ್ಷಗಾನದಲ್ಲಿ ಕಲಾ ಸೇವೆಯನ್ನು ಮಾಡುತ್ತಿರುವ ಯುವ ಕಲಾವಿದೆ ಇಂಚರ ಪೂಜಾರಿ ಶಿವಪುರ. ಉಡುಪಿ ಜಿಲ್ಲೆಯ ಹೆಬ್ರಿಯ ಶಿವಪುರದ ಶಂಕರ್ ಪೂಜಾರಿ ಹಾಗೂ ಉಷಾ ದಂಪತಿಯರ ಮಗಳಾಗಿ 10.02.2001ರಂದು ಜನನ. ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಬಿ.ಕಾಂ ಪದವಿಯನ್ನು ಪೂರೈಸಿರುತ್ತಾರೆ. ತಂದೆ ಹವ್ಯಾಸಿ ವೇಷಧಾರಿ ಹಾಗೂ ಮನೆಯಲ್ಲಿ ಯಕ್ಷಗಾನದ ವಾತಾವರಣ ಇದುದರಿಂದ ಯಕ್ಷಗಾನ ಕಲಿಯಲು ಪ್ರೇರಣೆಯಾಯಿತು. ಮೂರನೇ ತರಗತಿಯಲ್ಲಿ ಇರುವಾಗ ಮಹಾಬಲೇಶ್ವರ ಅಡಿಗ ಗುರುಗಳ ಬಳಿ ಯಕ್ಷಗಾನದ ಹೆಜ್ಜೆಗಾರಿಕೆಯನ್ನು ಕಲಿತ ನಂತರ ರಂಗದ ತಾಳ, ಪೂರ್ವರಂಗ ಹಾಗೂ ವೇಷಗಾರಿಕೆ ಬಗ್ಗೆ ಕೇಂದ್ರದ ಗುರುಗಳಾದ ಸುಬ್ರಮಣ್ಯ ಪ್ರಸಾದ್ ಮುದ್ರಾಡಿ ಬಳಿ ಕಲಿತು ಪ್ರಸ್ತುತ ಮಹೇಶ್ ಕುಮಾರ ಮಂದಾರ್ತಿ ಬಳಿ ಯಕ್ಷಗಾನದ ಭಾಗವತಿಕೆಯನ್ನು ಅಭ್ಯಾಸ ಮಾಡುತ್ತಿದ್ದಾರೆ. ರಂಗಕ್ಕೆ ಹೋಗುವ ಮೊದಲು ಗುರುಗಳ ಹತ್ತಿರ ಆ ದಿನದ ಪ್ರಸಂಗದ ಬಗ್ಗೆ ಕೇಳಿ ಹಾಗೂ ಪ್ರಸಂಗ ಪುಸ್ತಕವನ್ನು ನೋಡಿ ಪ್ರಸಂಗದ ಬಗ್ಗೆ ತಯಾರಿಯನ್ನು…

Read More

ಮೂಡಬಿದರೆ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ಯಕ್ಷಗಾನ ಕಲೆಯಾಧಾರಿತ ರಾಜ್ಯಮಟ್ಟದ ಸ್ಪರ್ಧೆ ‘ಯಕ್ಷಧ್ರುವ ವಿದ್ಯಾರ್ಥಿ ಸಮ್ಮಿಲನ’ ದಿನಾಂಕ 06-02-2024ರ ಮಂಗಳವಾರದಂದು ನಡೆಯಿತು. ಯಕ್ಷರೂಪಕ ಸ್ಪರ್ಧೆಗಳಲ್ಲಿ ಮುಲ್ಲಕಾಡು ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ (ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವೇದಿಕೆ) ತಂಡ ಹಾಗೂ ಪಂಜದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ (ಪ್ರೊ.ಎಂ.ಎ.ಹೆಗಡೆ ವೇದಿಕೆ) ತಂಡಗಳು ಪ್ರಥಮ ಪ್ರಶಸ್ತಿಯನ್ನು ಪಡೆದುಕೊಂಡವು. ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವೇದಿಕೆಯಲ್ಲಿ ನಡೆದ ಯಕ್ಷರೂಪಕ ಸ್ಪರ್ಧೆಯಲ್ಲಿ ಮುಲ್ಲಕಾಡು ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ರಾಕೇಶ್ ರೈ ಅಡ್ಕ ನೇತೃತ್ವದ ತಂಡವು ‘ದಶಾವತಾರ’ ಆಖ್ಯಾನಕ್ಕೆ ಪ್ರಥಮ ತಂಡ ಪ್ರಶಸ್ತಿ ಪಡೆಯಿತು. ಗುರುಪುರದ ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ ದೀವಿತ್ ಎಸ್. ಕೆ. ಪೆರಾಡಿ ನೇತೃತ್ವದ ತಂಡವು ‘ಶ್ರೀ ರಾಮಾಯಣ ದರ್ಶನಂ’ ಆಖ್ಯಾನಕ್ಕೆ ದ್ವಿತೀಯ ಹಾಗೂ ಹರೇಕಳದ ರಾಮಕೃಷ್ಣ ಅನುದಾನಿತ ಪ್ರೌಢಶಾಲೆಯ ಅಶ್ವತ್ ಮಂಜನಾಡಿ ನೇತೃತ್ವದ ತಂಡವು ‘ಕ್ಷೀರಾಬ್ಧಿ ಮಥನ’ ಆಖ್ಯಾನಕ್ಕೆ ತೃತೀಯ ತಂಡ ಪ್ರಶಸ್ತಿ…

Read More

ಸುರತ್ಕಲ್ : ವೀರಲೋಕ ಬುಕ್ಸ್, ಬೆಂಗಳೂರು ಮತ್ತು ಗೋವಿಂದ ದಾಸ ಕಾಲೇಜಿನ ಸಾಹಿತ್ಯ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ ಯುವ ಕಥೆಗಾರರಿಗೆ ಆಯೋಜಿಸಿದ್ದ ಎರಡು ದಿನಗಳ ‘ದೇಸಿ ಜಗಲಿ ಕಥಾಕಮ್ಮಟ’ದ ಉದ್ಘಾಟನಾ ಸಮಾರಂಭವು ದಿನಾಂಕ 03-02-2024 ರಂದು ಸುರತ್ಕಲ್ಲಿನ ಗೋವಿಂದ ದಾಸ ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಖ್ಯಾತ ಕಥೆಗಾರ ರಮೇಶ್ ಭಟ್ ಬೆಳಗೋಡು “ಸಾಹಿತ್ಯ ಪ್ರಕಾರಗಳಲ್ಲಿ ಕಥೆ ನಿಜವಾದ ಸಾಮಾಜಿಕ ಅಭಿವ್ಯಕ್ತಿಯಾಗಿದೆ. ಸೂಕ್ಷ್ಮವಾಗಿ ಸಮಾಜವನ್ನು ಗಮನಿಸಿದರೆ ನೂರಾರು ಸಣ್ಣಕಥೆಗಳು ಸೃಷ್ಟಿಗೊಳ್ಳಬಹುದು.” ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಗೋವಿಂದ ದಾಸ ಕಾಲೇಜಿನ ಪ್ರಾಚಾರ್ಯ ಪ್ರೊ. ಪಿ. ಕೃಷ್ಣಮೂರ್ತಿ ಮಾತನಾಡಿ “ಕನ್ನಡ ಕಥನ ಪರಂಪರೆ ಅನನ್ಯವಾಗಿದ್ದು ಮಾನವೀಯ ಮೌಲ್ಯಗಳನ್ನು ಚಿತ್ರಿಸುವ ಕಥೆಗಳು ಮೂಡಿಬರಬೇಕು.” ಎಂದರು. ಮುಖ್ಯ ಅತಿಥಿಯಾಗಿದ್ದ ಗೋವಿಂದ ದಾಸ ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ಪ್ರೊ. ರಮೇಶ್ ಕುಳಾಯಿ ಮಾತನಾಡಿ “ಸಾಹಿತ್ಯ ಸೃಷ್ಟಿ ವಿಶಿಷ್ಟ ಅನುಭವವಾಗಿದ್ದು ಉದಯೋನ್ಮುಖ ಕಥೆಗಾರರು ಹಿರಿಯರ ಮಾರ್ಗದರ್ಶನವನ್ನು ಪಡೆಯಬೇಕು ಎಂದರು.” ಹಿರಿಯ ಕವಿ ರಘುರಾಮ ರಾವ್ ಬೈಕಂಪಾಡಿ…

Read More

ಮಂಗಳೂರು : ಮಾಂಡ್ ಸೊಭಾಣ್ ಪ್ರವರ್ತಿತ ತಿಂಗಳ ವೇದಿಕೆ ಸರಣಿಯ 266ನೇ ಕಾರ್ಯಕ್ರಮ ದಿನಾಂಕ 04-02024ರಂದು ಶಕ್ತಿನಗರದ ಕಲಾಂಗಣದಲ್ಲಿ ನಡೆಯಿತು. ಅನಿವಾಸಿ ರಂಗಕರ್ಮಿ ಆಲ್ವಿನ್ ಪಿಂಟೊ, ದುಬಾಯ್ ಘಂಟೆ ಬಾರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗುರಿಕಾರ ಎರಿಕ್ ಒಝೇರಿಯೊ, ಖಜಾಂಚಿ ಎಲ್ರೊನ್ ರೊಡ್ರಿಗಸ್ ವೇದಿಕೆಯಲ್ಲಿದ್ದರು. ನಂತರ ನಾಟಕ ಕಲಾಕುಲ್ ರೆಪರ್ಟರಿ ಹಾಗೂ ಮಾಂಡ್ ತಂಡದ ಕಲಾವಿದರುಗಳು ದಿ. ಜಾರ್ಜ್ ಪಿಂಟೊ ಐಕಳ ಇವರು ರಚಿಸಿದ 3 ಕಿರುನಾಟಕಗಳಾದ ಸಯ್ರಿಕ್, ಬಾಂದ್ ಹಾಗೂ ಭಿಜುಡ್ ಇವುಗಳನ್ನು ಪ್ರದರ್ಶಿಸಿದರು. ಈ ನಾಟಕಗಳನ್ನು ವಿಕಾಸ್ ಕಲಾಕುಲ್ ನಿರ್ದೇಶಿಸಿದ್ದರು. ನಾಟಕಗಳ ನಡುವೆ ಆಲ್ರಿಶಾ ರೊಡ್ರಿಗಸ್ ಕೈಕಂಬ ಮತ್ತು ಸೃಜನಾ ಮತಾಯಸ್ ಜಾರ್ಜ್ ಇವರ ಕವಿತೆಗಳನ್ನು ವಾಚಿಸಿದರು. ಕಲಾಕುಲ್ ರೆಪರ್ಟರಿಯ ವೆನಿಶ, ವಿನ್ಸನ್, ಡಾರ್ವಿನ್, ವರ್ಷಿತಾ, ಜೊಯ್ಸನ್ ಹಾಗೂ ಮಾಂಡ್ ನಾಟಕ ತಂಡದ ಸದಸ್ಯರಾದ ಸಂದೀಪ್, ಸವಿತಾ, ರಾಹುಲ್, ಕೇರನ್ ಮತ್ತು ವೆರಿನಾ ನಟಿಸಿದರು. ಜ್ಯಾಕ್ಸನ್ ಡಿಕುನ್ಹಾ ವೇದಿಕೆ ವಿನ್ಯಾಸ ಮಾಡಿದರೆ, ಜೀವನ್ ಸಿದ್ದಿ ಸಂಗೀತ ಹಾಗೂ ಆಮ್ರಿನ್…

Read More

ಕಾಸರಗೋಡು : ಕಾಸರಗೋಡಿನ ಗಡಿನಾಡು ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ ನೀಡುವ ‘ಕಲಾ ಚೈತನ್ಯ’ ಪ್ರಶಸ್ತಿಗೆ ಸುಳ್ಯದ ಕಲಾ ಪ್ರತಿಭೆ ಅವನಿ ಎಂ. ಎಸ್. ಆಯ್ಕೆಯಾಗಿದ್ದಾಳೆ. ದ.ಕ ಜಿಲ್ಲೆ ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ನೀರಬಿದಿರೆ ನಿವಾಸಿಗಳಾದ ಮೋಂಟಡ್ಕ ಶಶಿಧರ ಎಂ. ಜೆ. ಮತ್ತು ರೇಷ್ಮಾ ದಂಪತಿಗಳ ಮುದ್ದಿನ ಪುತ್ರಿಯಾದ ಕು. ಅವನಿ ಎಂ. ಎಸ್. ಪ್ರಸ್ತುತ ಸುಳ್ಯದ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 5ನೇ ತರಗತಿಯಲ್ಲಿ ವ್ಯಾಸಾಂಗಮಾಡುತ್ತಿದ್ದಾಳೆ. ತನ್ನ ಒಂಬತ್ತನೆಯ ವಯಸ್ಸಿನಲ್ಲಿಯೇ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಮುಡಿಗೇರಿಸಿಕೊಂಡು ಎಲ್ಲರ ಪ್ರಶಂಸೆಗೆ ಪಾತ್ರರಾಗಿರುವ ಇವಳು ಎಲ್.ಕೆ.ಜಿ ಓದುತ್ತಿರುವಾಗಲೇ ಹಲವಾರು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ, ಪುರಸ್ಕಾರಗಳನ್ನು ಗಿಟ್ಟಿಸಿಕೊಂಡಿದ್ದಾಳೆ. ಸಂಗೀತ, ಯೋಗ, ನೃತ್ಯ, ಚೆಸ್, ಚಿತ್ರಕಲೆ ಭರತನಾಟ್ಯ, ನಟನೆ, ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಇವಳ ಹವ್ಯಾಸವಾಗಿದೆ. ತನ್ನ 4ನೇ ವಯಸ್ಸಿನಿಂದ ಸುಗಮ ಸಂಗೀತವನ್ನು ಗುರುಗಳಾದ ಡಾ. ಕಿರಣ್ ಕುಮಾರ್ ಗಾನಸಿರಿ ಪುತ್ತೂರು ಇವರಿಂದ ತರಬೇತಿಯನ್ನು ಪಡೆಯುತ್ತಿರುವ ಈಕೆ, ವಿದ್ವಾನ್ ಕಾಂಚನಾ…

Read More

ಮಂಗಳೂರು : ಅಲೆವೂರಾಯ ಪ್ರತಿಷ್ಠಾನ ಏರ್ಪಡಿಸಿದ್ದ ‘ಯಕ್ಷ ತ್ರಿವೇಣಿ’ ಕಾರ್ಯಕ್ರಮವನ್ನು ದಿನಾಂಕ 01-02-2024ರಂದು ಶ್ರೀಕ್ಷೇತ್ರ ಶರವಿನ ಶಿಲೆಶಿಲೆ ಮೊಕ್ತೇಸರರಾದ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಉದ್ಘಾಟಿಸಿದರು. ಅವರು ಮಾತನಾಡಿ “ಯಕ್ಷಗಾನಕ್ಕೆ ಜಾನಪದೀಯ-ಪಾರಂಪರಿಕ ಸೊಗಡಿದೆ. ಅದನ್ನು ಬೆಳೆಸಲು ಹಿಂದಿನವರು ಬಹಳ ಪ್ರಯತ್ನಿಸಿದ್ದಾರೆ. ಅದನ್ನು ಉಳಿಸಿ ಬೆಳೆಸುವಲ್ಲಿ ದಿ. ಲಕ್ಮೀನಾರಾಯಣ ಅಲೆವೂರಾಯರಂತಹಾ ಕಲಾವಿದರು ಬಹಳ ಕೊಡುಗೆ ಕೊಟ್ಟಿದ್ದಾರೆ. ಅಂತಹವರ ಸಂಸ್ಮರಣೆಯನ್ನು ಅಲೆವೂರಾಯ ಸಹೋದರರು ಮಾಡುತ್ತಾ ಬರುತ್ತಿದ್ದಾರೆ. ಈ ಏಳನೇ ವರ್ಷದಲ್ಲೂ ಹಿರಿಯರನ್ನು ಗೌರವಿಸುವ ಕಾರ್ಯ ಸ್ತುತ್ಯರ್ಹ. ಅದಕ್ಕೆ ನಮ್ಮ ಕಡೆಯಿಂದ ಸಂಪೂರ್ಣ ನೆರವು ನೀಡುತ್ತೇವೆ” ಎಂದು ನುಡಿದರು. “ಶ್ರೀಕ್ಷೇತ್ರ ಶರವು ಎಲ್ಲಾ ಕಾರ್ಯಕ್ರಮಗಳಿಗೆ ತವರು ಮನೆ, ಯಕ್ಷಗಾನ – ನಾಟಕ- ಸಿನಿಮಾವೇ ಮೊದಲಾದ ಕಾರ್ಯಕ್ರಮಕ್ಕೆ ಶುಭಾರಂಭಿಕ ಆಶ್ರಯ ತಾಣ. ಶಾಸ್ತ್ರಗಳು ತಾವೇ ಮುಂಚೂಣಿಯಲ್ಲಿ ನಿಂತು ಎಲ್ಲದಕ್ಕೂ ಮಾರ್ಗದರ್ಶನ ಮಾಡಿ ಹರಸುತ್ತಾರೆ. ಅವರ ಉದಾರತೆ, ಕಲೆಯ ಮೇಲಿನ ಪ್ರೀತಿ ಅಲೆವೂರಾಯ ಪ್ರತಿಷ್ಠಾನದ ಕಾರ್ಯಕ್ರಮಕ್ಕೆ ಅವಕಾಶ ನೀಡಿದ್ದಾರೆ. ಅವರನ್ನು ಅಭಿನಂದಿಸುತ್ತಾ, ಅವರನ್ನು ಸನ್ಮಾನಿಸಲು ನಾವು ಹೆಮ್ಮೆಪಡುತ್ತೇವೆ” ಎಂದು ಪ್ರತಿಷ್ಠಾನದ…

Read More

ಧಾರವಾಡ : ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ಡಾ. ದ.ರಾ. ಬೇಂದ್ರೆ ಭವನದಲ್ಲಿ ದಿನಾಂಕ 31-01-2024ರಂದು ನಡೆದ ಡಾ. ದ.ರಾ. ಬೇಂದ್ರೆಯವರ 128ನೇ ಜನ್ಮದಿನಾಚರಣೆಯಲ್ಲಿ ಬೆಂಗಳೂರಿನ ಪ್ರೊ. ಬಸವರಾಜ ಕಲ್ಗುಡಿ ಅವರಿಗೆ 2024ನೇ ಸಾಲಿನ ‘ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಅವರು ಪ್ರೊ. ಬಸವರಾಜ ಕಲ್ಗುಡಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಯು ಒಂದು ಲಕ್ಷ ನಗದು, ಪ್ರಶಸ್ತಿ ಫಲಕ ಮತ್ತು ಫಲಪುಷ್ಪ ಒಳಗೊಂಡಿದೆ. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರೊ. ಬಸವರಾಜ ಕಲ್ಗುಡಿ ಅವರು, “ಕುವೆಂಪು, ಡಾ. ದ.ರಾ. ಬೇಂದ್ರೆ ಅವರಿಗಿದ್ದ ಭಾಷೆಯ ಹೊಳಹು ಇಂದಿನ ದಿನಗಳಲ್ಲಿ ಅಗತ್ಯವಾಗಿದೆ. ಈ ಭಾಗದ ಕರ್ನಾಟಕ ಛಿದ್ರ ಛಿದ್ರವಾಗಿತ್ತು. ಎಲ್ಲೆಡೆ ಮರಾಠಿಮಯವಾಗಿದ್ದ ಅಂದಿನ ಕಾಲದಲ್ಲಿ ಕನ್ನಡದ ಅಸ್ಮಿತೆ ಎನ್ನುವುದು ತುಂಬಾ ವಿರಳ. ಒಂದು ಭಾಷೆಯನ್ನು ಸಾಮಾಜಿಕವಾಗಿ ಬಹುದಿನಗಳವರೆಗೆ ಬಳಕೆ ಮಾಡದೇ ಇದ್ದರೆ ಅದು ತನ್ನ ಅಸ್ಮಿತೆಯನ್ನೇ ಕಳೆದುಕೊಂಡು ಬಿಡುತ್ತದೆ.…

Read More