Author: roovari

ಉಡುಪಿ : ಉಡುಪಿ ಪುತ್ತಿಗೆ ಪರ್ಯಾಯ ಮಹೋತ್ಸವದ ಸಾಂಸ್ಕೃತಿಕ ಸಪ್ತೋತ್ಸವದ ಸಮಾರೋಪದಲ್ಲಿ ಇಂಡಿಯಾಸ್ ಗಾಟ್ ಟ್ಯಾಲೆಂಟ್ ಫೈನಲಿಸ್ಟ್, ಸಚಿವರನ್ನೇ ಮಾಯ ಮಾಡಿದ ಖ್ಯಾತಿಯ ಅಂತರಾಷ್ಟ್ರೀಯ ಜಾದೂಗಾರ ಕುದ್ರೋಳಿ ಗಣೇಶ್ ಹಾಗೂ ಬಳಗದವರಿಂದ ದಿನಾಂಕ 24-01-2024ರಂದು ವಿಸ್ಮಯ ಜಾದೂ ಪ್ರದರ್ಶನಗೊಂಡಿತು. ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಜಾದೂ, ಜಾನಪದ, ರಂಗಭೂಮಿ ಹಾಗೂ ಸಂಗೀತಗಳ ಸಮ್ಮಿಲನದ ವಿಸ್ಮಯ ಜಾದೂ ವಿನೂತನ ಜಾದೂ ತಂತ್ರಗಳೊಂದಿಗೆ ಪ್ರೇಕ್ಷಕರನ್ನು ಮಂತ್ರ ಮುಗ್ದರನ್ನಾಗಿಸಿದ ಕುದ್ರೋಳಿಯವರು ನಿರಂತರ ಮೂರು ಗಂಟೆ ರಾಜಾಂಗಣದಲ್ಲಿ ಮಾಯಾಲೋಕವನ್ನೇ ನಿರ್ಮಿಸಿದ್ದರು. 2000ಕ್ಕೂ ಮಿಕ್ಕಿ ಸೇರಿದ್ದ ಪೇಕ್ಷಕರು ಗಣೇಶರವರ ಚಾಕಚಕ್ಯತೆಯನ್ನು ಮನಸಾರೆ ಕೊಂಡಾಡಿದರು. ಇಂಡಿಯಾಸ್ ಗಾಟ್ ಟ್ಯಾಲೆಂಟ್ ರಿಯಾಲಿಟಿ ಶೋ ಮೂಲಕ ವಿಶ್ವದಾದ್ಯಂತ ಪ್ರಸಿದ್ದಿಯಾದ ತುಳುನಾಡಿನ ಭೂತಾರಾಧನೆಯ ಅಂಶವನ್ನು ಒಳಗೊಂಡ ಯಕ್ಷಿಣಿ, ಸುಪ್ತ ಮನಸ್ಸಿನ ಚಮತ್ಕಾರ, ನವರಸಪೂರ್ಣ ಜಾದೂ, ಸಮಕಾಲೀನ ಮತ್ತು ಆಧುನಿಕ ಮ್ಯಾಜಿಕ್ ಇಲ್ಯೂಷನ್ ಸಂಗಮದ ಕಾರ್ಯಕ್ರಮ ಪುತ್ತಿಗೆ ಪರ್ಯಾಯಕ್ಕಾಗಿ ವಿಶೇಷವಾಗಿ ಸಿದ್ದಪಡಿಸಲಾಗಿತ್ತು. ಪರ್ಯಾಯ ಪುತ್ತಿಗೆ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಕೂಡಾ ತಮ್ಮ ಶಿಷ್ಯನೊಂದಿಗೆ…

Read More

ಉಪ್ಪಿನಕುದ್ರು ಗೊಂಬೆ ಮನೆಯಲ್ಲಿ ‘ವೈವಿಧ್ಯಮಯ ಕಾರ್ಯಕ್ರಮಗಳು’ | ಫೆಬ್ರವರಿ 11 ಕುಂದಾಪುರ : ಡಾ. ಸುಧಾಮೂರ್ತಿ ಹಾಗೂ ಡಾ. ಪಿ. ದಯಾನಂದ ಪೈ ಪ್ರಾಯೋಜಿತ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ವತಿಯಿಂದ 2024ರ ವಿನೂತನ ಕಾರ್ಯಕ್ರಮ ಸರಣಿ ‘ಪ್ರತಿಭೆ ನಿಮ್ಮದು ವೇದಿಕೆ ನಮ್ಮದು’ ಇದರ ಫೆಬ್ರವರಿ ತಿಂಗಳ ಕಾರ್ಯಕ್ರಮವು ದಿನಾಂಕ 11-02-2024ರಂದು ಉಪ್ಪಿನಕುದ್ರು ಗೊಂಬೆ ಮನೆಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಇಂದ್ರಾಳಿಯ ಶಿವಪ್ರಭಾ ಯಕ್ಷಗಾನ ಕೇಂದ್ರದವರಿಂದ ‘ವೈವಿಧ್ಯಮಯ ಕಾರ್ಯಕ್ರಮಗಳು’ ನಡೆಯಲಿರುವುದು. ಉಪ್ಪಿನಕುದ್ರು ಶ್ರೀ ದೇವಣ್ಣ ಪದ್ಮನಾಭ ಕಾಮತ್ ಮೆಮೋರಿಯಲ್ ಯಕ್ಷಗಾನ ಗೊಂಬೆಯಾಟ ಟ್ರಸ್ಟಿನ ಅಧ್ಯಕ್ಷರಾದ ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ಭಾಸ್ಕರ್ ಕೊಗ್ಗ ಕಾಮತ್ ತಮಗೆಲ್ಲರಿಗೂ ಆದರದ ಸ್ವಾಗತ ಕೋರಿದ್ದಾರೆ.

Read More

ಉಡುಪಿ : ಉಡುಪಿಯ ಎಂ.ಜಿ.ಎಂ. ಕಾಲೇಜಿನ ಆವರಣದಲ್ಲಿರುವ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ (ಮಾಹೆ) ಹಾಗೂ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಇವರ ಸಹಯೋಗದಲ್ಲಿ ‘ಸಿರಿಸಂಧಿ’ ಕೃತಿ ಬಿಡುಗಡೆ ಕಾರ್ಯಕ್ರಮವು ದಿನಾಂಕ 10-02-2024ರಂದು ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ. ಜನಪದ ಗಾಯಕ ಮಾಚಾರು ಗೋಪಾಲ ನಾಯ್ಕ ಹೇಳಿದ ತುಳು ಸಿರಿಕಾವ್ಯವನ್ನು ಪುಸ್ತಕ ರೂಪಕ್ಕಿಳಿಸಿದ ನಿವೃತ್ತ ಕುಲಪತಿ ಡಾ. ಕೆ. ಚಿನ್ನಪ್ಪ ಗೌಡ ಇವರು ಈ ಕೃತಿಯ ಲೇಖಕರಾಗಿದ್ದಾರೆ. ಉಡುಪಿಯ ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಲಕ್ಷ್ಮೀ ನಾರಾಯಣ ಕಾರಂತ ಇವರ ಉಪಸ್ಥಿತಿಯಲ್ಲಿ ಸಹ ಕುಲಾಧಿಪತಿಗಳಾದ ಡಾ. ಎಚ್.ಎಸ್. ಬಲ್ಲಾಳ್ ಇವರು ಕೃತಿ ಅನಾವರಣ ಮಾಡಲಿದ್ದಾರೆ. ವಿಮರ್ಶಕರಾದ ಡಾ. ಬಿ. ಜನಾರ್ದನ ಭಟ್ ಕೃತಿ ವಿಮರ್ಶೆ ಮಾಡಲಿದ್ದು, ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಡಾ. ಬಿ.ಎ. ವಿವೇಕ ರೈ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು. ದಿವಂಗತ ಮಾಚಾರು ಗೋಪಾಲ ನಾಯ್ಕ ಅವರು ತುಳು ಸಿರಿಕಾವ್ಯವನ್ನು ಹಲವು…

Read More

ಮಂಗಳೂರು : ಮಂಗಳೂರಿನ ಡಾನ್ ಬಾಸ್ಕೋ ಸಭಾಂಗಣದಲ್ಲಿ ದಿನಾಂಕ 04-02-2024ರಂದು ಕಲಾಸಕ್ತರಿಗೆ ಸರದೌತಣ ನೀಡುವ ಇಬ್ಬರು ಕಲಾವಿದರ ನೃತ್ಯ ಪ್ರದರ್ಶನ ನಡೆಯಿತು. ಬೆಂಗಳೂರಿನ ನೃತ್ಯಗುರು ವಿದ್ವಾನ್ ಪ್ರವೀಣ್ ಕುಮಾರ್ ಅವರ ಶಿಷ್ಯೆ ನವ್ಯಶ್ರೀ ಕೆ.ಎನ್. ಏಕವ್ಯಕ್ತಿ ಭರತನಾಟ್ಯ ಪ್ರದರ್ಶನ ನೀಡಿದರು. ಮೊದಲಿಗೆ ಕಾಂಭೋಜಿ ರಾಗ-ಆದಿತಾಳದಲ್ಲಿ ‘ವರ್ಣಂ’ ಪ್ರದರ್ಶಿಸಿದ ಅವರು ಬಳಿಕ ‘ಜಗದೋದ್ಧಾರನ ಆಡಳಿಸಿದಳು ಯಶೋದೆ’ ಎಂಬ ಪುರಂದರದಾಸರ ಕೃತಿಯನ್ನು ಉತ್ತಮವಾಗಿ ಸಾದರಪಡಿಸಿದರು. ಬಳಿಕ ನೃತ್ಯಾಂಗನ್ ಟ್ರಸ್ಟ್ ನಿರ್ದೇಶಕಿ ಹಾಗೂ ನೃತ್ಯಗುರುಗಳಾದ ವಿದುಷಿ ರಾಧಿಕಾ ಶೆಟ್ಟಿ ‘ಮಾನುಷಿ’ ಎಂಬ ವಿಷಯಾಧಾರಿತ ನೃತ್ಯವನ್ನು ಪ್ರಸ್ತುತಪಡಿಸಿದರು. ಸರಸ್ವತಿ ನದಿಯ ಅನ್ವೇಷಣೆಯಿಂದ ಆರಂಭವಾಗುವ ಈ ಪ್ರಸ್ತುತಿಯು ನದಿಯ ಹುಟ್ಟಿನಿಂದ ಹರಿವಿನವರೆಗೆಯ ಕುತೂಹಲಕಾರಿ ವ್ಯಾಖ್ಯಾನಗಳನ್ನು ಒಳಗೊಂಡಿತ್ತು. ಸರಸ್ವತಿ ಇನ್ನೂ ಹರಿಯುತ್ತಾಳೆಯೇ? ಅವಳು ಉತ್ಸಾಹಭರಿತಳೇ? ಎಂಬ ಪ್ರಶ್ನೆಗಳೊಂದಿಗೆ ಅನ್ವೇಷಣೆಯ ಪಥವನ್ನು ಮುಂದುವರಿಸುತ್ತ, ಮೀರಾಬಾಯಿಯ ಕಡೆಗೆ ಹೊರಳಿದರು. ಆಕೆಯ ಕೃಷ್ಣಾನ್ವೇಷಣೆಗೆ ಸಾಂತ್ವನ ಲಭಿಸಿತೇ ಎಂಬ ಪ್ರಶ್ನೆ ಎದುರಾಗುತ್ತ, ಮತ್ತೊಂದೆಡೆ ತಾಯ್ತನದ ವರ್ಣನಾತೀತ ಅನುಭವದಿಂದ ದೇವಕಿ ವಂಚಿತಳಾದ ಬಗ್ಗೆ ಕಲಾವಿದೆ ಬೆಳಕು ಚೆಲ್ಲುತ್ತಾರೆ.…

Read More

ಮಹಾಭಾರತ ಕತೆ ಮನುಷ್ಯ ಲೋಕದ ಎಂದೂ ಮುಗಿಯದ ಅಹಂಕಾರದ, ಮನುಷ್ಯ ಛಲದ ಹಾಗೂ ಅಧಿಕಾರ ರಾಜಕಾರಣದ ಕತೆಯಾಗಿದೆ. ಈ ಕತೆಯು ಇಂದೂ ಆಧುನಿಕ ರೂಪದಲ್ಲಿ ಹತ್ತು ಹಲವು ವರಸೆಗಳ ಮೂಲಕ ಮುಂದುವರಿಯುವುದನ್ನು ಕಾಣಬಹುದು. ಹಾಗಾಗಿ ಕುರುಕ್ಷೇತ್ರ ಯುದ್ಧ ಇನ್ನೂ ಮುಗಿದಿಲ್ಲ, ಅದು ಅವ್ಯಾಹತವಾಗಿ ಮುಂದುವರಿದಿದೆ. ಪುರುಷ ಮನೆಯ ಹೊರಗೆ ಪ್ರತಿಷ್ಠೆಯನ್ನು ಮೆರೆಯುವವನು. ಆದರೆ ಹೆಣ್ಣಿಗೆ ಮನೆ ಮುಖ್ಯ. ಆಕೆಗದು ಬೆಚ್ಚನೆ ಸುಖದ ತಾಣ. ಆಕೆಗೆ ಮನೆ ಎಂದರೆ ಕೇವಲ ನಾಲ್ಕು ಗೋಡೆಗಳ, ಕಲ್ಲು-ಇಟ್ಟಿಗೆಗಳ ಕಟ್ಟಡ ಅಲ್ಲ. ಹೆಣ್ಣಿಗೆ ಮನೆ ಎಂದರೆ ಆಕೆಯ ಗಂಡ, ಮಕ್ಕಳು ಸಂಬಂಧ, ಪ್ರೀತಿ – ಎಲ್ಲದರ ಗಾಢ ಬೆಸುಗೆ. ಅವಳಿಗೆ ಮನೆ ಎಂದರೆ ಅವಳ ಅಸ್ತಿತ್ವ, ಅವಳ ಭಾವನೆ-ಭಾವೈಕ್ಯದ ಗೂಡು. ಹಾಗಾಗಿ ಅವಳು ಮನೆಯ ರಕ್ಷಣೆಯನ್ನು ಹೊತ್ತವಳು. ಅದಕ್ಕಾಗಿ ಅವಳು ಮನೆಯನ್ನು ಸದಾ ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಲೇ ಇರುತ್ತಾಳೆ. ಆದರೆ ಪ್ರತಿಷ್ಠೆಗಾಗಿ, ಅಧಿಕಾರಕ್ಕಾಗಿ ಯುದ್ಧದ ಹಿಂದೆ ಬಿದ್ದ ಪುರುಷ ಹೆಣ್ಣಿನ ಈ ಕಾಳಜಿಯನ್ನು ಯಾವತ್ತೂ ಅರ್ಥ ಮಾಡಿಕೊಂಡಿಲ್ಲ. ಪುರುಷನಿಗೆ…

Read More

ಪುತ್ತೂರು : ಪುತ್ತೂರಿನ ನಾಟ್ಯರಂಗದ ನೃತ್ಯ ಗುರುಗಳಾದ ವಿದುಷಿ ಮಂಜುಳಾ ಸುಬ್ರಹ್ಮಣ್ಯ ಇವರು ದಿನಾಂಕ 04-02-2024ರಂದು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಶ್ರಯದಲ್ಲಿ ಶ್ರೀ ಮಹಾಲಿಂಗೇಶ್ವರ ಗೋ ಸೇವಾ ಬಳಗದ ವತಿಯಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ‘ಧರ್ಮಧೇನು’ ನೃತ್ಯ ರೂಪಕ ನೀಡಿದರು. ಗೋವಿನ ಬಗ್ಗೆ ಭಾಷಣ ಮಾಡುವುದು, ಪ್ರಬಂಧ ಬರೆಯುವುದು ಸುಲಭ. ಆದರೆ ಪ್ರಯೋಗಶೀಲ ನೃತ್ಯ ಪ್ರಸ್ತುತಿಗೆ ಕಥಾವಸ್ತುವನ್ನು ಜೋಡಿಸಿಕೊಳ್ಳುವುದು ಸವಾಲೇ ಸರಿ. ಇಲ್ಲಿ ಕ್ರಿಯಾಶೀಲ ಆಲೋಚನೆ ಮತ್ತು ದುಡಿಮೆಯ ಅಗತ್ಯವಿರುತ್ತದೆ. ಈ ನಿಟ್ಟಿನಲ್ಲಿ ‘ಧರ್ಮಧೇನು’ ನೃತ್ಯ ರೂಪಕ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಗೋ ಮಹಿಮೆಯನ್ನು ವರ್ಣಿಸುವ ಶ್ಲೋಕದೊಂದಿಗೆ ಆರಂಭವಾದ ಪ್ರಸ್ತುತಿ ಗೋಮಾತೆಯನ್ನು ಅಪಮಾನಿಸಿದರೆ ಉಂಟಾಗುವ ಕ್ಲೇಶ – ದೋಷಗಳನ್ನು ಗೋ ಸೇವೆಯಿಂದಲೇ ಮುಕ್ತವಾಗಿಸಿ ಸಂತಾನ ಭಾಗ್ಯ ಪಡೆದುಕೊಂಡ ದಿಲೀಪನ ಕಥಾ ಹಂದರವನ್ನು ಧರ್ಮಧೇನು ನೃತ್ಯ ರೂಪಕ ಹೊಂದಿತ್ತು .ಗೋ ಸೇವೆಯ ಮಹತ್ವ ಹಾಗೂ ಪಾವಿತ್ರ್ಯತೆಗೆ ‘ಧರ್ಮಧೇನು’ ನೃತ್ಯ ರೂಪಕ ಪೂರ್ವರಂಗವಾಯಿತು. ಕಾಳಿದಾಸನ ರಘುವಂಶದ ಕಥೆಯನ್ನು ಆಧರಿಸಿ ಕವಿತಾ ಅಡೂರು ಇವರ…

Read More

ಉಪ್ಪಿನಂಗಡಿ : ಕಾಂಚನ ಶ್ರೀ ಲಕ್ಷ್ಮೀನಾರಾಯಣ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್ ವತಿಯಿಂದ ‘ಕಾಂಚನೋತ್ಸವ-2024’ ಹಾಗೂ 70ನೇ ವರ್ಷದ ಶ್ರೀ ತ್ಯಾಗರಾಜ, ಶ್ರೀ ಪುರಂದರದಾಸರ ಆರಾಧನಾ ಮಹೋತ್ಸವ, ಸ್ಥಾಪಕ ಗುರುಗಳಾದ ಸಂಗೀತರತ್ನ ಕಾಂಚನ ವೆಂಕಟಸುಬ್ರಮಣ್ಯಂ ಹಾಗೂ ಕರ್ನಾಟಕ ಕಲಾಶ್ರೀ ಕಾಂಚನ ವಿ. ಸುಬ್ಬರತ್ನಂ ಅವರ ಪುಣ್ಯ ದಿನಾಚರಣೆ ದಿನಾಂಕ 03-02-2024 ಮತ್ತು 04-02-2024ರಂದು ಕಾಂಚನ ಶ್ರೀ ಲಕ್ಷ್ಮೀನಾರಾಯಣ ಸಂಗೀತ ಕಲಾ ಶಾಲೆಯಲ್ಲಿ ನಡೆಯಿತು. ದಿನಾಂಕ 03-02-2024ರಂದು ಸಂಜೆ ಅತಿಥಿ ಕಲಾವಿದರು ಮತ್ತು ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು. ದಿನಾಂಕ 04-02-2024ರಂದು ಬೆಳಿಗ್ಗೆ ಶ್ರೀ ತ್ಯಾಗರಾಜರ ಉತ್ಸವ ಸಂಪ್ರದಾಯ ಮತ್ತು ದಿವ್ಯನಾಮ ಸಂಕೀರ್ತನೆಗಳ ವಾದ್ಯ-ಗಾಯನ ಭಜನೆಯೊಂದಿಗೆ ಕಾಂಚನ ಮನೆಯಿಂದ ಸಂಗೀತ ಶಾಲೆಯ ತನಕ ಸಂಗೀತ ನಡಿಗೆ ‘ಉಂಛ ವೃತ್ತಿ’ ನಡೆಯಿತು. ಬಳಿಕ ಶ್ರೀ ಪುರಂದರ ದಾಸರ ಪಿಳ್ಳಾರಿ ಗೀತೆಗಳು ಮತ್ತು ಶ್ರೀ ತ್ಯಾಗರಾಜರ ಪಂಚರತ್ನ ಕೃತಿಗಳ ಗೋಷ್ಠಿಗಾನ ಹಾಗೂ ಅತಿಥಿ ಕಲಾವಿದರು ಮತ್ತು ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಜರಗಿತು.…

Read More

ಹಳೆಯಂಗಡಿ : ಮೂಲ್ಕಿ ಕಸಾಪ ಘಟಕ ಆಯೋಜಿಸಿದ ಸಾಹಿತಿ ವಸಂತ ಮಾಧವರ ‘ಇತಿಹಾಸ ಯಾನ ಸಾಂಸ್ಜೃತಿಕ ನೋಟಗಳು’ ಕೃತಿ ಹಾಗೂ ಡಾ. ಪದ್ಮನಾಭ ಭಟ್ ಬರೆದ ‘ಡಾ. ಕೆ. ಜಿ. ವಸಂತಮಾಧವರ ಪರಿಚಯ’ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮವು ದಿನಾಂಕ 03-02-2024ರಂದು ಪಾವಂಜೆಯ ಡಾ. ವಸಂತ ಮಾಧವರ ಮನೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜನಪದ ವಿದ್ವಾಂಸ ಕೆ. ಎಲ್. ಕುಂಡಂತಾಯ “ನಮ್ಮ ನಾಡಿನ ಹೆಮ್ಮೆಯ ಇತಿಹಾಸ ಬರಹಗಾರರಲ್ಲಿ ಡಾ. ವಸಂತ ಮಾಧವರು ಒಬ್ಬರು. ಅವರ ಬರಹಗಳು ಅನೇಕ ಸಂಗತಿಗಳತ್ತ ಬೆಳಕು ಚೆಲ್ಲಿವೆ. ಅವರ ಕೃತಿಗಳು ಅಧ್ಯಯನಕಾರರಿಗೆ ಮಾರ್ಗದರ್ಶಕವಾಗಿವೆ. ಅವರ ಆಸಕ್ತಿ ಮತ್ತು ಬರವಣಿಗೆಗೆ ವಯಸ್ಸು ಲೆಕ್ಕವೇ ಅಲ್ಲ.” ಎಂದು ಹೇಳಿದರು. ಕಸಾಪ ಮಾಜಿ ರಾಜ್ಯಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು ಮಾತನಾಡಿ “ಕೃತಿಗಳನ್ನು ದುಡ್ಡು ಕೊಟ್ಟು ಕೊಂಡು ಓದಿ. ಇತರರಿಗೂ ಓದಲು ಪ್ರೇರೇಪಿಸಿ, ಬರಹಗಾರರನ್ನು ಪ್ರೋತ್ಸಾಹಿಸಬೇಕು. ವಸಂತಮಾಧವರ ಸಂಶೋಧನೆಯ ಸಾಧನೆ ಅಭಿನಂದನೀಯ.” ಎಂದರು. ಪುಸ್ತಕ ಲೋಕಾರ್ಪಣೆಯ ಬಳಿಕ ಕೃತಿಕಾರರನ್ನು ಸಂಮಾನಿಸಲಾಯಿತು. ವಿದ್ವಾಂಸ ಡಾ.…

Read More

ಬೆಂಗಳೂರು : 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜೂನ್ 7, 8 ಮತ್ತು 9ರಂದು ಮಂಡ್ಯದಲ್ಲಿ ನಡೆಸಲು ನಿರ್ಧರಿಸಲಾಗಿದೆ. ಸಿಎಂ ಅಧ್ಯಕ್ಷತೆಯಲ್ಲಿ ದಿನಾಂಕ 01-02-2024ನೇ ಗುರುವಾರ ನಡೆದ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಸಮ್ಮೇಳನದ ರೂಪುರೇಷೆಗಳ ಬಗ್ಗೆ ಚರ್ಚಿಸಲಾಯಿತು. ಜೂನ್ ವೇಳೆ ಲೋಕಸಭಾ ಚುನಾವಣೆ ಪ್ರಕ್ರಿಯೆ ಕೊನೆಗೊಂಡು ನೀತಿ ಸಂಹಿತೆ ಕೂಡ ರದ್ದಾಗಿರುತ್ತದೆ. ಶಾಲೆಗಳೂ ಕೂಡ ಆರಂಭವಾಗಿರುತ್ತವೆ. ಮಳೆಗಾಲ ಇನ್ನೂ ಆರಂಭವಾಗಿರುವುದಿಲ್ಲ ಎಂಬ ಅಂಶಗಳನ್ನು ಆಧರಿಸಿ ಜೂನ್‌ನಲ್ಲಿಯೇ ಸಮ್ಮೇಳನ ನಡೆಯುವುದು ಸೂಕ್ತ ಎಂಬ ಬಗ್ಗೆ ಸಭೆಯಲ್ಲಿ ಅಭಿಪ್ರಾಯಕ್ಕೆ ಬರಲಾಯಿತು. ಅದಕ್ಕೆ ಸಿಎಂ ಕೂಡ ಸಮ್ಮತಿ ಸೂಚಿಸಿದರು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ “ಕನ್ನಡ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಂಡ್ಯದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಬೇಕು. ಈ ಬಾರಿಯ ಸಮ್ಮೇಳನವನ್ನು ಅದ್ಧೂರಿ ಎನ್ನುವುದಕ್ಕಿಂತ ಅರ್ಥಪೂರ್ಣವಾಗಿ ಆಚರಿಸಬೇಕು. ಜಿಲ್ಲಾಡಳಿತದ ಸಹಕಾರದೊಂದಿಗೆ, ಕನ್ನಡ ಸಂಘಟನೆಗಳನ್ನೂ ವಿಶ್ವಾಸಕ್ಕೆ ಪಡೆದುಕೊಂಡು ಜೂನ್ ಮೊದಲನೇ ವಾರದಲ್ಲಿ ಸಮ್ಮೇಳನ ಆಯೋಜಿಸಬೇಕು, ಸಮ್ಮೇಳನಾಧ್ಯಕ್ಷರನ್ನು ಆಯ್ಕೆ ಮಾಡುವಾಗ ಹಿರಿಯರು ಹಾಗೂ…

Read More

ಬೆಂಗಳೂರು : ಬೆಂಗಳೂರಿನ ಉಳ್ಳಾಲು ಗ್ರಾಮದಲ್ಲಿರುವ ತೊ. ನಂಜುಂಡಸ್ವಾಮಿ ಗೆಳೆಯರ ಬಳಗದ ವತಿಯಿಂದ ತೊಟವಾಡಿ ನಂಜುಂಡಸ್ವಾಮಿ ನೆನೆಪಿನ ಪ್ರಶಸ್ತಿ ಪ್ರದಾನ ಸಮಾರಂಭವು ಬೆಂಗಳೂರಿನ ಮಲ್ಲತ್ತಹಳ್ಳಿ ಸಾಂಸ್ಕೃತಿಕ ಸಮುಚ್ಚಯ ಆವರಣದಲ್ಲಿರುವ ಕಲಾಗ್ರಾಮದಲ್ಲಿ ದಿನಾಂಕ 10-02-2024ರಂದು ನಡೆಯಲಿರುವುದು. ಎರಡನೇ ವರ್ಷದ ಪ್ರಶಸ್ತಿಯನ್ನು ನಾಟಕಕಾರ, ಕಥೆ ಮತ್ತು ಕಾದಂಬರಿಕಾರರಾದ ಶ್ರೀ ಹೂಲಿ ಶೇಖರ್ ಇವರಿಗೆ ಪ್ರದಾನ ಮಾಡಲಾಗುವುದು. ಇದೇ ಸಂದರ್ಭದಲ್ಲಿ ಶ್ರೀ ಜೋಗಿಲ ಸಿದ್ಧರಾಜು ಮತ್ತು ತಂಡದವರಿಂದ ರಂಗಗೀತೆ ಮತ್ತು ಜನಪದ ಗಾಯನ ಹಾಗೂ ಮೈಸೂರಿನ ನಟನ ತಂಡದವರು ಶ್ರೀಪಾದ ಭಟ್ ಇವರ ನಿರ್ದೇಶನದಲ್ಲಿ ‘ಕಣಿವೆಯ ಹಾಡು’ ನಾಟಕ ಪ್ರದರ್ಶನ ನೀಡಲಿದ್ದಾರೆ.

Read More