Subscribe to Updates
Get the latest creative news from FooBar about art, design and business.
Author: roovari
ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇವರ ವತಿಯಿಂದ ನಡೆಯುವ ತಿಂಗಳ ಸರಣಿ ತಾಳಮದ್ದಳೆ ಕಾರ್ಯಕ್ರಮ ದಿನಾಂಕ 05-01-2024ರಂದು ನಡೆಯಿತು. ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪಾರ್ತಿಸುಬ್ಬ ವಿರಚಿತ ‘ವಾಲಿ ಮೋಕ್ಷ’ ಪ್ರಸಂಗದ ತಾಳಮದ್ದಳೆ ನಡೆಯಿತು. ಕಾರ್ಯಕ್ರಮದ ಹಿಮ್ಮೇಳದಲ್ಲಿ ಭಾಗವತರಾಗಿ ಸರ್ವಶ್ರೀ ಲಕ್ಷ್ಮೀ ನಾರಾಯಣ ಭಟ್ ಬಟ್ಯಮೂಲೆ, ಸತೀಶ್ ಇರ್ದೆ ಹಾಗೂ ಚೆಂಡೆ ಮದ್ದಳೆಗಳಲ್ಲಿ ಪದ್ಯಾಣ ಶಂಕರನಾರಾಯಣ ಭಟ್, ಪ್ರೊ. ದಂಬೆ ಈಶ್ವರ ಶಾಸ್ತ್ರೀ, ಮುರಳೀಧರ ಕಲ್ಲೂರಾಯ, ಅಚ್ಯುತ ಪಾಂಗಣ್ಣಾಯ ಮತ್ತು ಮಾ.ಪರೀಕ್ಷಿತ್ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ಪೂಕಳ ಲಕ್ಷ್ಮೀ ನಾರಾಯಣ ಭಟ್ ಮತ್ತು ಶ್ರೀಮತಿ ಶುಭಾ ಅಡಿಗ (ಶ್ರೀ ರಾಮ), ಗುಂಡ್ಯಡ್ಕ ಶ್ರೀ ಈಶ್ವರ ಭಟ್ (ವಾಲಿ), ಶ್ರೀ ಗುಡ್ಡಪ್ಪ ಬಲ್ಯ ಮತ್ತು ಶ್ರೀಮತಿ ಜಯಂತಿ ಹೆಬ್ಬಾರ್ (ಸುಗ್ರೀವ), ಶ್ರೀ ಭಾಸ್ಕರ ಬಾರ್ಯ (ಲಕ್ಷ್ಮಣ), ಮಾಂಬಾಡಿ ಶ್ರೀ ವೇಣುಗೋಪಾಲ್ ಭಟ್ (ತಾರೆ) ಪಾತ್ರದಲ್ಲಿ ಸಹಕರಿಸಿದರು. ಸಂಘದ ನಿರ್ದೇಶಕ ಶ್ರೀ…
ಮಂಗಳೂರು : 2024ನೇ ಸಾಲಿನ ಕೊಂಕಣಿ ಲೇಖಕ್ ಸಂಘ್ ಸಾಹಿತ್ಯ ಪ್ರಶಸ್ತಿಗೆ ಖ್ಯಾತ ಕೊಂಕಣಿ ಸಾಹಿತಿ ಡಾ. ಜೆರಾಲ್ಡ್ ಪಿಂಟೊ (ಜೆರಿ, ನಿಡ್ಡೋಡಿ) ಇವರನ್ನು ಆಯ್ಕೆ ಮಾಡಲಾಗಿದೆ. ಜೆರಿ ನಿಡ್ಡೋಡಿ ಅವರ 6 ಕಾದಂಬರಿಗಳು, 75 ಕತೆಗಳು ಹಾಗೂ 900ಕ್ಕೂ ಮೇಲ್ಪಟ್ಟು ಲೇಖನಗಳು ಕೊಂಕಣಿ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ‘ಕುಡ್ಮಿ ಕೊಂಕ್ಣಿ ಲೋಕ್ವೇದ್’ ಎಂಬ ಸಂಶೋಧನಾ ಗ್ರಂಥ ಹಾಗೂ ‘ವಿಸಾವ್ಯಾ ಶೆಕ್ಡ್ಯಾಚೆ ಕೊಂಕ್ಣಿ ಮ್ಹಾನ್ ಮನಿಸ್’ ಎಂಬ ಕೃತಿಯನ್ನು ಕರ್ನಾಟಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಪ್ರಕಟಿಸಿದ್ದಾರೆ. ಅವರು ಬರೆದ ಇನ್ನಿತರ ಪುಸ್ತಕಗಳಲ್ಲಿ ತುಜೆಂ ಶಿಕಾಪ್, ತುಜಿ ವೃತ್ತಿ, ಗ್ಯಾಲಕ್ಸಿ, ವಿಶ್ವ್ ವಿಜ್ಞಾನ್ ಪ್ರಮುಖವಾದವುಗಳು. ಶ್ರೀಯುತರ ಸಾಹಿತ್ಯ ಸೇವೆಗೆ ಕೊಂಕ್ಣಿ ಕುಟಮ್ ಬಾಹ್ರೇಯ್ನ್ , ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ದಾಯ್ಜಿ ದುಬಾಯ್, ದಿವೊ ಸಾಹಿತ್ಯ ಪ್ರಶಸ್ತಿ ಮೊದಲಾದ ಪ್ರಶಸ್ತಿಗಳು ಲಭಿಸಿವೆ. ‘ರಾಕ್ಣೊ’ ಸಂಪಾದಕೀಯ ಮಂಡಳಿಯ ಸದಸ್ಯರಾಗಿ, ‘ಆಮ್ಚೊ ಸಂದೇಶ್’ ಪತ್ರಿಕೆಯ ಸಂಪಾದಕರಾಗಿ, ‘ಮಿಲಾರ್ಚಿಂ ಲ್ಹಾರಾಂ’ ತ್ರೈ ಮಾಸಿಕದ ಸಂಪಾದಕರಾಗಿ ಸೇವೆ…
ಮಂಗಳೂರು : ನೃತ್ಯಾಂಗನ್ ಪ್ರಸ್ತುತ ಪಡಿಸುವ 11ನೇ ಆವೃತ್ತಿಯ ನೃತ್ಯ ಪ್ರದರ್ಶನ ‘ಸಮರ್ಪಣ್ 2024’ ಭಾರತೀಯ ಶಾಸ್ತ್ರೀಯ ನೃತ್ಯಕ್ಕೆ ಗೌರವ ದಿನಾಂಕ 10-02-2024 ಮತ್ತು ದಿನಾಂಕ 11-02-2024ರಂದು ಸಂಜೆ 5.45 ಗಂಟೆಗೆ ಮಂಗಳೂರಿನ ಡಾನ್ ಬೊಸ್ಕೋ ಹಾಲಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಕರ್ನಾಟಕ ಕಲಾಶ್ರೀ ಗುರು ಶ್ರೀಮತಿ ರಾಜಶ್ರೀ ಉಳ್ಳಾಲ್ ಇವರು ದೀಪ ಪ್ರಜ್ವಲಿಸಿ ಉದ್ಘಾಟಿಸಲಿರುವರು. ಈ ಕಾರ್ಯಕ್ರಮದಲ್ಲಿ ಚೆನ್ನೈಯ ಮೇಧಾ ಹರಿ, ಬೆಂಗಳೂರಿನ ಅವಿಜಿತ್ ದಾಸ್, ಉಡುಪಿಯ ಪಿ.ಜಿ. ಪನ್ನಗ ರಾವ್, ಬೆಂಗಳೂರಿನ ಪಿ. ಸ್ನಾವಜ ಕೃಷ್ಣನ್, ಕಾವ್ಯಾ ಗಣೇಶ್ ಮತ್ತು ಪ್ರೀತಂ ದಾಸ್ ಇವರುಗಳು ಭರತನಾಟ್ಯ ಪ್ರದರ್ಶನ ನೀಡಲಿದ್ದಾರೆ.
ಮಂಗಳೂರು : ಕದ್ರಿಯಲ್ಲಿರುವ ನೃತ್ಯ ಭಾರತಿ (ರಿ.) ಇದರ ವತಿಯಿಂದ ‘ನೃತ್ಯ ಯಜ್ಞ’ ಕಾರ್ಯಕ್ರಮವು ದಿನಾಂಕ 12-02-2024ರಂದು ಸಂಜೆ 5 ಗಂಟೆಗೆ ಪುರಭವನದಲ್ಲಿ ನಡೆಯಲಿದೆ. ಕದ್ರಿ ಮಲ್ಲಿಕಾ ಕಲಾ ವೃಂದ ಇದರ ಅಧ್ಯಕ್ಷರಾದ ಶ್ರೀ ಸುಧಾಕರ್ ರಾವ್ ಪೇಜಾವರ ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಉರ್ವ ನಾಟ್ಯಾಲಯದ ನಿರ್ದೇಶಕಿಯಾದ ಕಲಾಶ್ರೀ ವಿದುಷಿ ಶ್ರೀಮತಿ ಕಮಲಾ ಭಟ್, ಬಿಜೈಯ ಸನಾತನ ನಾಟ್ಯಾಲಯದ ನಿರ್ದೇಶಕಿಯಾದ ಕಲಾಶ್ರೀ ವಿದುಷಿ ಶ್ರೀಮತಿ ಶಾರದಾಮಣಿ ಶೇಖರ್, ಬೆಂಗಳೂರಿನ ಕರ್ನಾಟಕ ಸಂಗೀತ ನೃತ್ಯ ಕಲಾ ಒಕ್ಕೂಟದ ಅಧ್ಯಕ್ಷರಾದ ವಿದ್ವಾನ್ ಸಾಯಿ ನಾರಾಯಣ, ಮಂಗಳೂರಿನ ಶ್ರೀಮತಿ ರೂಪಲಕ್ಷ್ಮೀ ಎಚ್. ರಾವ್, ಶ್ರೀ ಮಂಜುನಾಥ ನೃತ್ಯ ಕಲಾಶಾಲೆಯ ನಿರ್ದೇಶಕರಾದ ವಿದ್ವಾನ್ ಮಂಜುನಾಥ್ ಪುತ್ತೂರು ಮುಂತಾದವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು. ಈ ಕಾರ್ಯಕ್ರಮದಲ್ಲಿ ನೃತ್ಯ ಭಾರತಿ ಸಂಸ್ಥೆಯ ಹಿರಿಯ ಮತ್ತು ಕಿರಿಯ ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ನೀಡಲಿದ್ದಾರೆ.
ಬಜಪೆ : ಭ್ರಾಮರಿ ಹವ್ಯಾಸಿ ಯಕ್ಷಗಾನ ಬಳಗದ 9ನೇ ವಾರ್ಷಿಕೋತ್ಸವವು ದಿನಾಂಕ 25-01-2024ರಂದು ಎಕ್ಕಾರು ಶ್ರೀ ಕುಂಭಕಂಠಿಣೀ ದೈವಸ್ಥಾನದ ಬಳಿಯಲ್ಲಿ ನಡೆಯಿತು. ಸಹಕಾರ ರತ್ನ ಪ್ರಶಸ್ತಿ ಪಡೆದ ಮೋನಪ್ಪ ಶೆಟ್ಟಿ ಎಕ್ಕಾರು ಹಾಗೂ ಸಮಾಜ ಸೇವಕ ಸಂತೋಷ್ ಕುಮಾರ್ ಹೆಗ್ಡೆ ಎಳತ್ತೂರುಗುತ್ತು ಅವರನ್ನು ಗೌರವಿಸಲಾಯಿತು. ಎಕ್ಕಾರು ಶ್ರೀಕೊಡಮಣಿತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ನಿತಿನ್ ಹೆಗ್ಡೆ ಕಾವರಮನೆ, ಭ್ರಾಮರಿ ಹವ್ಯಾಸಿ ಯಕ್ಷಗಾನ ಬಳಗದ ಅಧ್ಯಕ್ಷ ಭರತೇಶ್ ಶೆಟ್ಟಿ ಮಾಡರಮನೆ ಎಕ್ಕಾರು, ರತ್ನಾಕರ ಶೆಟ್ಟಿ ಬಡಕರೆ ಬಾಳಿಕೆ, ಸಂಪತ್ ಶೆಟ್ಟಿ ನಡ್ಯೋಡಿಗುತ್ತು, ಸಂತೋಷ್ ಶೆಟ್ಟಿ ಮಿತ್ತೊಟ್ಟು ಬಾಳಿಕೆ, ಶ್ಯಾಮ್ ಶೆಟ್ಟಿ ಮೇಲೆಕ್ಕಾರು, ಉದಯ ಪ್ರಕಾಶ್ ನಾಯಕ್ ಎಕ್ಕಾರು ಮತ್ತು ಗಣೇಶ್ ಪೂಜಾರಿ ನೆಲ್ಲಿತೀರ್ಥ ಭಾಗವಹಿಸಿದ್ದರು. ಭರತೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ರವಿಕುಮಾರ್ ಮುಂಡಾಜೆ ನಿರ್ದೇಶನದಲ್ಲಿ ಶ್ಯಾಮ ಶೆಟ್ಟಿ ಮೇಲೆಕ್ಕಾರು ಅವರ ಸಂಯೋಜನೆಯಲ್ಲಿ ಶ್ರೀಭ್ರಾಮರಿ ಹವ್ಯಾಸಿ ಯಕ್ಷಗಾನ ಬಳಗದ ಸದಸ್ಯರಿಂದ ‘ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನಗೊಂಡಿತು.
ಕಾಸರಗೋಡು : ಧಾರವಾಡದ ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆ ಮತ್ತು ಬೆಂಗಳೂರಿನ ಶಂಪಾ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ಧಾರವಾಡ ಕಟ್ಟೆ ಮತ್ತು ಕಾಸರಗೋಡಿನ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಸಹಕಾರದೊಂದಿಗೆ ದಿನಾಂಕ 16-03-2024 ಮತ್ತು 17-03-2024ರಂದು ಕಾಸರಗೋಡಿನಲ್ಲಿ ಎರಡು ದಿನಗಳ ‘ಸಾಹಿತ್ಯ ಹಬ್ಬ’ವನ್ನು ಆಯೋಜಿಸಲಾಗಿದೆ. ಇದರಲ್ಲಿ ನಾಡಿನ ಖ್ಯಾತ ಸಾಹಿತಿಗಳು ಮತ್ತು ವಿದ್ವಾಂಸರು ಪಾಲ್ಗೊಳ್ಳಲಿದ್ದಾರೆ. ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಕುರಿತು ವಿಶೇಷ ಉಪನ್ಯಾಸ, ವಿಚಾರ ಗೋಷ್ಠಿ ಮತ್ತು ಸಂವಾದಗಳು ನಡೆಯಲಿವೆ. ಈ ಸಾಹಿತ್ಯ ಹಬ್ಬದಲ್ಲಿ ನೋಂದಾಯಿತ ಪ್ರತಿನಿಧಿಗಳು ಮಾತ್ರ ಭಾಗವಹಿಸಬಹುದು. * ಸಾಮಾನ್ಯ ಪ್ರತಿನಿಧಿ ಪ್ರವೇಶ ಶುಲ್ಕ ರೂ.1000/- * ವಿದ್ಯಾರ್ಥಿ ಪ್ರತಿನಿಧಿ ಪ್ರವೇಶ ಶುಲ್ಕ ರೂ.500/- * ಪದವಿ, ಸ್ನಾತಕೋತ್ತರ ಪದವಿ ಮತ್ತು ಸಂಶೋಧನ ವಿದ್ಯಾರ್ಥಿಗಳು ತಮ್ಮ ಕಾಲೇಜಿನ ಪ್ರಾಂಶುಪಾಲರು ಮತ್ತು ವಿಭಾಗ ಮುಖ್ಯಸ್ಥರಿಂದ ಪಡೆದ ದೃಢೀಕರಣ ಪತ್ರ ನೀಡಿದಲ್ಲಿ ಮಾತ್ರ ರೂ.500/- ಶುಲ್ಕ ಪಾವತಿಸಬಹುದು. ಇಲ್ಲದಿದ್ದರೆ ರೂ.1000/- ಶುಲ್ಕ ಪಾವತಿಸಬೇಕಾಗುವುದು. * ನೋಂದಾಯಿತ…
ಮಂಗಳೂರು : ಯಕ್ಷಗಾನ ಕಲಾವಿದ, ಯಕ್ಷಗುರು ವರ್ಕಾಡಿ ಶ್ರೀ ರವಿ ಅಲೆವೂರಾಯರ ಷಷ್ಠ್ಯಬ್ದಿ ಪ್ರಯುಕ್ತ ‘ಅಭಿನಂದನಾ ಕಾರ್ಯಕ್ರಮ’ವು ದಿನಾಂಕ 11-02-2024ರಂದು ಬೆಳಿಗ್ಗೆ 9 ಗಂಟೆಯಿಂದ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ. ಅಂದು ಬೆಳಗ್ಗೆ 9ರಿಂದ ಪೊರ್ಕೋಡಿಯ ಶ್ರೀ ಸೋಮನಾಥೇಶ್ವರ ಯಕ್ಷನಿಧಿ ತಂಡದಿಂದ ಯಕ್ಷಗಾನ ಬಯಲಾಟ ‘ಶ್ರೀ ಮಾತೇ ಭದ್ರಕಾಳಿ’, 11ರಿಂದ ಕೊಮೆ ತೆಕ್ಕಟ್ಟೆಯ ಯಶಸ್ವಿ ಕಲಾವೃಂದ ಮಕ್ಕಳ ಮೇಳದಿಂದ ‘ಕೃಷ್ಣಾರ್ಜುನ’ ಯಕ್ಷಗಾನ ತಾಳಮದ್ದಳೆ, ಮಧ್ಯಾಹ್ನ 12ರಿಂದ ಕದ್ರಿಯ ಯಕ್ಷ ಮಂಜುಳಾ ಮಹಿಳಾ ಯಕ್ಷಗಾನ ತಾಳಮದ್ದಳೆ ಬಳಗದಿಂದ ‘ಮೋಕ್ಷ ಸಂಗ್ರಾಮ’ ಯಕ್ಷಗಾನ ತಾಳಮದ್ದಳೆ, ಮಧ್ಯಾಹ್ನ 1ರಿಂದ ರಥಬೀದಿಯ ನವಭಾರತ ಯಕ್ಷಗಾನ ಅಕಾಡೆಮಿಯಿಂದ ‘ಶ್ರೀದೇವಿ ಮಹಿಷಮರ್ದಿನಿ’ ಯಕ್ಷಗಾನ ತಾಳಮದ್ದಳೆ, ಮಧ್ಯಾಹ್ನ 2.30ರಿಂದ ಅತಿಥಿ ಕಲಾವಿದರು ಹಾಗೂ ಸರಯೂ ಯಕ್ಷವೃಂದ ಕಲಾವಿದರ ಕೂಡುವಿಕೆಯಿಂದ ರವಿ ಅಲೆವೂರಾಯ ವರ್ಕಾಡಿ ವಿರಚಿತ ‘ಇಳಾರಜತ’ ಯಕ್ಷಗಾನ ಬಯಲಾಟ ನಡೆಯಲಿರುವುದು. ಸಂಜೆ 5.30ರಿಂದ ಅಲೆವೂರಾಯಾಭಿನಂದನಮ್ 60 ಸಭಾ ಕಾರ್ಯಕ್ರಮ ನಡೆಯಲಿದ್ದು, ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ತೀರ್ಥ ಸ್ವಾಮೀಜಿಗಳವರು…
ಮಂಗಳೂರು : ನಾಟ್ಯಾರಾಧನಾ ಕಲಾ ಕೇಂದ್ರ (ರಿ) ಉರ್ವ, ಮಂಗಳೂರು ಇದರ ಸುರತ್ಕಲ್ ಗೋವಿಂದದಾಸ ಕಾಲೇಜು ಶಾಖೆ, ನಾಟ್ಯಾರಾಧನಾ ತ್ರಿಂಶೋತ್ಸವ ಸಮಿತಿ ಮತ್ತು ನಾಟ್ಯಾರಾಧನಾ ತ್ರಿಂಶೋತ್ಸವ ವಿದ್ಯಾರ್ಥಿ ಸಮಿತಿ ಪ್ರಸ್ತುತಪಡಿಸುವ ‘ನಾಟ್ಯಾರಾಧನಾ ತ್ರಿಂಶೋತ್ಸವ – 1994-2024’ ಸರಣಿ ನೃತ್ಯ ಕಾರ್ಯಕ್ರಮಗಳು ದಿನಾಂಕ 10-02-2024ರ ಶನಿವಾರ ಸಂಜೆ ಘಂಟೆ 5.00ರಿಂದ ಸುರತ್ಕಲ್ ಗೋವಿಂದದಾಸ ಕಾಲೇಜಿನ ಕಲಾ ಮಂದಿರದಲ್ಲಿ ನಡೆಯಲಿದೆ. ಲಲಿತ ಕಲಾ ಸಂಘ, ಗೋವಿಂದದಾಸ ಕಾಲೇಜು, ಸುರತ್ಕಲ್ ಇವರ ಸಹಯೋಗದೊಂದಿಗೆ ನಡೆಯಲಿರುವ ಈ ಸರಣಿ ನೃತ್ಯ ಕಾರ್ಯಕ್ರಮದಲ್ಲಿ ನೃತ್ಯಾಮೃತ-1 ‘ಭರತನಾಟ್ಯ ರಸಗ್ರಹಣ’ ಈ ಅವಧಿಯಲ್ಲಿ ಭರತನಾಟ್ಯ ಕಲೆಯ ಅರ್ಥೈಸುವಿಕೆ ಮತ್ತು ಪ್ರೇಕ್ಷಕ ದೃಷ್ಟಿಯೆಂಬ ವಿಷಯದ ಬಗ್ಗೆ ನೃತ್ಯ ಪ್ರಾತ್ಯಕ್ಷಿಕೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ಕಲಾವಿದರಾಗಿ ಪುತ್ತೂರಿನ ಶ್ರೀ ಮೂಕಾಂಬಿಕ ಕಲ್ಬರಲ್ ಅಕಾಡೆಮಿ ರಿ. ಇದರ ನಿರ್ದೇಶಕರಾದ ವಿದ್ವಾನ್ ದೀಪಕ್ ಕುಮಾರ್ ಪುತ್ತೂರು, ಮಂಗಳೂರಿನ ಗಾನ ನೃತ್ಯ ಅಕಾಡೆಮಿ ಇದರ ನಿರ್ದೇಶಕರಾದ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಹಾಗೂ ಮಂಗಳೂರಿನ ನಾಟ್ಯಾರಾಧನಾ ಕಲಾ ಕೇಂದ್ರ…
ಅಂದು ಮೈಸೂರು ಅರಮನೆಯಲ್ಲಿ ಮಹಾರಾಜಪುರ ವಿಶ್ವನಾಥ ಅಯ್ಯರ್ ಕಛೇರಿ. ಇದಕ್ಕೆ ಚೌಡಯ್ಯ ಅವರದ್ದು ಪಿಟೀಲು ಮತ್ತು ತಂಜಾವೂರು ವೈದ್ಯನಾಥ ಅಯ್ಯರ್ ಮೃದಂಗ ಸಾಥ್ ಇತ್ತು. ಈ ದಿಗ್ಗಜರೊಂದಿಗೆ ವೇದಿಕೆ ಏರಿದ ಹತ್ತರ ಹುಡುಗ ತನ್ನ ಪುಟಾಣಿ ಕೈಗಳಿಂದಲೇ ಮೃದಂಗ ನುಡಿಸಾಣಿಕೆ ಮೂಲಕ ಮೋಡಿ ಮಾಡಿದ. ಮಹಾರಾಜರು ಖುಷಿಯಾಗಿ ಒಂದು ಸಾವಿರ ರೂ. ಬಹುಮಾನ ನೀಡಿದರು. ಇದೇ ಹುಡುಗ ತಾನು ಓದುತ್ತಿದ್ದ ತಿರುವನಂತಪುರದ ಶಾಲೆಯಲ್ಲಿಯೂ ಚಿಥಿರಾ ತಿರುನಾಳ್ ಮಹಾರಾಜರೆದುರು ಮೃದಂಗ ನುಡಿಸಿ ರಾಜರಿಂದ ಚಿನ್ನದ ಪದಕ ಪಡೆದಿದ್ದ. ನುಡಿಸಾಣಿಕೆಯಿಂದಲೇ ಬೆರಗುಗೊಳಿಸುತ್ತಿದ್ದ ಆ ಹುಡುಗನ ಹೆಸರು ತನು ಕೃಷ್ಣ ಮೂರ್ತಿ (ಟಿ.ಕೆ. ಮೂರ್ತಿ). ಅವರೀಗ ಶತಾಯುಷಿ. ಕಳೆದ 90 ವರ್ಷದಿಂದ ನಿರಂತರವಾಗಿ ದೇಶ-ದೇಶದಾಚೆಗೂ ನುಡಿಸಿ ಜನಮಾನಸದಲ್ಲಿ ನೆಲೆಸಿರುವ ಈ ನಾದಸಂತರಿಗೆ ಬೆಂಗಳೂರಿನಲ್ಲಿ ಶಿಷ್ಯವೃಂದದಿಂದ ಅಭಿನಂದನಾ ಸಮಾರಂಭ ನಡೆಯಿತು. ಪ್ರಸ್ತುತ ಚೆನ್ನೈ ನಿವಾಸಿಯಾಗಿರುವ ಟಿ.ಕೆ. ಮೂರ್ತಿಯವರ ಹುಟ್ಟೂರು ತಿರುವನಂತಪುರ. ಅವರ ಕುಟುಂಬದವರೂ ರಾಜರ ಆಸ್ಥಾನಗಳಲ್ಲಿ ಕಲಾವಿದರಾಗಿದ್ದವರು. ಮಗನಿಗೆ ಮೂರು ತುಂಬಿದಾಗಲೇ ಅಮ್ಮ ಅನ್ನಪೂರ್ಣಿ ಮೂರು ರೂಪಾಯಿಗೆ…
ಉಡುಪಿ : ಅಂಬಲಪಾಡಿ ಶ್ರೀಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾಮಂಡಳಿಯ 66ನೇ ವಾರ್ಷಿಕೋತ್ಸವವು ಕಂಬ್ಳಕಟ್ಟದ ಶ್ರೀ ಜನಾರ್ದನ ಮಂಟಪದಲ್ಲಿ ದಿನಾಂಕ 03-02-2024ರಂದು ನಡೆಯಿತು. ಈ ಸಂದರ್ಭದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಜಯಕರ ಶೆಟ್ಟಿ ಅವರಿಗೆ ‘ನಿಡಂಬೂರು ಶ್ರೀ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಉಡುಪಿ ಶಾಸಕ ಶ್ರೀ ಯಶ್ ಪಾಲ್ ಎ. ಸುವರ್ಣ ಪ್ರಶಸ್ತಿ ಪ್ರದಾನಿಸಿ, “ಕರಾವಳಿ ಕರ್ನಾಟಕದ ಅಪೂರ್ವ ಕಲೆ ಯಕ್ಷಗಾನ ಉಳಿಸಿ ಬೆಳೆಸುವಲ್ಲಿ ಅಂಬಲಪಾಡಿ ಸಂಘದ ಕೊಡುಗೆ ಬಹಳ ಮಹತ್ವದ್ದು” ಎಂದರು. ನಿಡಂಬೂರು ಬೀಡು ಅಣ್ಣಾಜಿ ಬಲ್ಲಾಳ ಸ್ಮರಣಾರ್ಥ ಶ್ರೀ ರಾಜರಾಜೇಶ್ವರೀ ದೇವರ ಅನುಗ್ರಹದೊಂದಿಗೆ ಡಾ. ವಿಜಯ ಬಲ್ಲಾಳ ಪ್ರಾಯೋಜಕತ್ವದ ಬೆಳ್ಳಿಯ ಫಲಕ ಹಾಗೂ ತಲಾ 10 ಸಾವಿರ ರೂ. ನಗದು ಸಹಿತ ನಿಡಂಬೂರು ಬೀಡು ಬಲ್ಲಾಳ ಪ್ರಶಸ್ತಿಯನ್ನು ಬೆಂಗಳೂರಿನ ಶ್ರೀ ಕರ್ನಾಟಕ ಕಲಾದರ್ಶಿನಿ ತಂಡಕ್ಕೆ ನೀಡಲಾಯಿತು. ಕಲಾದರ್ಶಿನಿ ಸಂಸ್ಥೆ ಅಧ್ಯಕ್ಷ ಶ್ರೀನಿವಾಸ ಸಾಸ್ತಾನ ಪ್ರಶಸ್ತಿ ಸ್ವೀಕರಿಸಿದರು. ತಲಾ 8 ಸಾವಿರ ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡ ‘ಕಿದಿಯೂರು ಜನಾರ್ದನ…