Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಪರಮಪದ ಮತ್ತು ಕರ್ನಾಟಕ ವಾಣಿಜ್ಯ ತೆರಿಗೆಗಳ ಸೇವಾ (ಅಧಿಕಾರಿಗಳ) ಸಂಘ (ನೋಂ) ಇವರ ಸಹಯೋಗದೊಂದಿಗೆ ‘ಕಾಣದ ಕಡಲಿಗೆ’ ಗಾನದಲೆಗಳ ಮಧುರ ಸಂಜೆ ಕಾರ್ಯಕ್ರಮವನ್ನು ದಿನಾಂಕ 30 ಜನವರಿ 2026ರಂದು ಸಂಜೆ 5-30 ಗಂಟೆಗೆ ಮಂಗಳೂರಿನ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಖ್ಯಾತ ಗಾಯಕ ರಾಮಚಂದ್ರ ಹಡಪದ ಇವರೊಂದಿಗೆ ಮೇಘನಾ ಕುಂದಾಪುರ ಮತ್ತಿತರಿಂದ ಈ ಕಾರ್ಯಕ್ರಮ ಪ್ರಸ್ತುತಗೊಳ್ಳಲಿದೆ.
ಮುಂಬೈ : ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಆಶ್ರಯದಲ್ಲಿ ದಿನಾಂಕ 23 ಜನವರಿ 2026ರಂದು ವಿದ್ಯಾನಗರಿ ಕಲೀನ ಕ್ಯಾಂಪಸ್ ನ ರಾನಡೆ ಭವನದಲ್ಲಿ ಸಂವಾದ ಕಾರ್ಯಕ್ರಮ ನಡೆಯಿತು. ಈ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಾ ಖ್ಯಾತ ಕವಿ, ಚಿಂತಕ, ರಾಜಕೀಯ ನೇತಾರ ದಿನಕರ ದೇಸಾಯಿಯವರ ಮೊಮ್ಮಗ ಉದ್ಯಮಿ ರಣಜಿತ್ ಪ್ರಧಾನ್ “ಐವತ್ತರ ದಶಕದಲ್ಲಿ ಅಂಕೋಲಾದಲ್ಲಿ ಬಹುತೇಕ ಹಿಂದುಳಿದ ವರ್ಗದವರು ಹಾಗೂ ಆದಿವಾಸಿ ಜನರು ಅವಿದ್ಯಾವಂತರಾಗಿದ್ದರು. ಆ ಕೊರತೆಯನ್ನು ಮನಗಂಡು ಅಲ್ಲಿನ ಸ್ಥಳೀಯ ಜನರು ಶಿಕ್ಷಣ ಸಂಸ್ಥೆಯೊಂದನ್ನು ತೆರೆಯುವ ಉದ್ದೇಶದಿಂದ ದಿನಕರ ದೇಸಾಯಿಯವರ ಸಹಕಾರವನ್ನು ಕೋರಿದರು. ದೇಸಾಯಿಯವರು ಅದಕ್ಕೆ ಒಪ್ಪಿಗೆ ಸೂಚಿಸಿದ ಮೇಲೆ ‘ಕೆನರಾ ವೆಲ್ಫೇರ್ ಟ್ರಸ್ಟ್’ ಎಂಬ ಸಂಸ್ಥೆಯನ್ನು ಎಲ್ಲರ ಸಹಕಾರದೊಂದಿಗೆ ಸ್ಥಾಪಿಸುವ ಕಾರ್ಯ ಯೋಜನೆಯನ್ನು ಕೈಗೊಂಡು, ಆ ಮೂಲಕ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಲಾಯಿತು. ಆ ಮುಖಾಂತರ ಗ್ರಾಮೀಣ ಭಾಗದಲ್ಲಿ ಹೊಸ ಬೆಳಕು ಮೂಡಿತು. ದೇಸಾಯಿಯವರು ಭಾರತ ಸೇವಕ ಸಮಾಜದ ಆಜೀವ ಸದಸ್ಯರಾಗಿದ್ದು ಸಮಾಜವಾದಿ ಚಿಂತಕರಾಗಿ ಮಾಡಿದ ಸಮಾಜ ಸೇವೆಗೆ ಬಹು…
ಮಂಗಳೂರು : ಸಾಹಿತಿ ಎಂ.ಜಿ. ಹೆಗಡೆ ಇವರ ‘ಮಿನುಗು ನೋಟ-ಗಾಂಧಿ ಕುರಿತ ಪ್ರಶ್ನೆ-ಉತ್ತರ’ ಕೃತಿಗೆ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ‘ಗಾಂಧಿ ಸಾಹಿತ್ಯ ಪ್ರಶಸ್ತಿ’ಯನ್ನು ಘೋಷಿಸಲಾಗಿದೆ. ಸರ್ವೋದಯ ದಿನಾಚರಣೆ ಅಂಗವಾಗಿ ದಿನಾಂಕ 30 ಜನವರಿ 2026ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಕಾರ್ಯದರ್ಶಿ ಎಂ.ಸಿ. ನರೇಂದ್ರ ತಿಳಿಸಿದ್ದಾರೆ. ಪ್ರಸ್ತುತ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಡಾ. ಎ.ವಿ. ಬಾಳಿಗಾ ಕಾಲೇಜಿನ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾಗಿರುವ ಡಾ. ಎಂ.ಜಿ. ಹೆಗಡೆ ವಿಮರ್ಶಕ, ಪುಸ್ತಕಗಳ ಸಂಪಾದಕ ಮತ್ತು ತಾಳಮದ್ದಲೆಯ ಅರ್ಥಧಾರಿ. ನಾಲ್ಕು ನಾಟಕಗಳನ್ನು ಬರೆದಿದ್ದಾರೆ. ‘ಗೌರೀಶ್ ಕಾಯ್ಕಿಣಿ’, ‘And Where Shall I Roost’ ಇವರ ಪ್ರಕಟಿತ ಪುಸ್ತಕಗಳಾಗಿವೆ. ಅವರು ಕೆಲಕಾಲ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಭಾಷಾ ನಿಕಾಯದ ನಿರ್ದೇಶಕರಾಗಿಯೂ ಹಾಗೂ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾಗಿಯೂ ಕೆಲಸ ಮಾಡಿದ್ದಾರೆ. ಅವರು ಸಂಪಾದಿಸಿದ ಮುಖ್ಯ ಪುಸ್ತಕಗಳು ‘ಸಹಯಾನ’, ‘ಕಟಾಂಜನ’, ‘ಅಮೃತಬಿಂದು’, ‘ಗೌರೀಶರ…
ಮಂಗಳೂರು : ಸಾಹಿತ್ಯ ಕ್ಷೇತ್ರದ ವಿಶಿಷ್ಟ ಸಾಧನೆಗಾಗಿ ಡಾ. ವಸಂತಕುಮಾರ ಪೆರ್ಲ ಇವರನ್ನು ಮಂಗಳೂರು ಹವ್ಯಕ ಸಭೆಯು ತನ್ನ ವಾರ್ಷಿಕೋತ್ಸವ ಸಂದರ್ಭದಲ್ಲಿ ದಿನಾಂಕ 19 ಜನವರಿ 2026ರಂದು ನಂತೂರಿನ ಶ್ರೀಭಾರತಿ ಕಾಲೇಜು ಸಭಾಂಗಣದಲ್ಲಿ ಸನ್ಮಾನಿಸಿತು. ಹವ್ಯಕ ಸಭಾದ ಅಧ್ಯಕ್ಷೆ ಗೀತಾದೇವಿ ಚೂಂತಾರು, ಪೂರ್ವಾಧ್ಯಕ್ಷ ಡಾ. ರಾಜೇಂದ್ರ ಪ್ರಸಾದ್, ದ.ಕ. ಕಾಸರಗೋಡು ಹವ್ಯಕ ಮಹಾಸಭೆಯ ಅಧ್ಯಕ್ಷ ಗಿರೀಶ್ಚಂದ್ರ ಎ.ಟಿ., ಮುಖ್ಯ ಅತಿಥಿ ಡಾ. ಶಿವಶಂಕರ ಭಟ್ ಅಂಗ್ರಿ, ಹವ್ಯಕ ಸಭೆಯ ಸದಸ್ಯ ಅನಂತ ಶರ್ಮ ಮತ್ತು ದಿವಾಣ ಕೇಶವ ಭಟ್ ಉಪಸ್ಥಿತರಿದ್ದರು.
ಉಡುಪಿ : ಸಂತೆಕಟ್ಟೆ ಕಲ್ಯಾಣಪುರದ ಶ್ರೀ ಆದಿಶಕ್ತಿ ವೀರಭದ್ರ ದೇವಸ್ಥಾನದ ಸಭಾಂಗಣದಲ್ಲಿ ಅಮ್ಮುಂಜೆ ಶ್ರೀ ಭ್ರಾಮರೀ ನಾಟ್ಯಾಲಯದ ರಜತ ವರ್ಷದ ಗೆಜ್ಜೆಯೊಂದಿಗೆ ಬೆಳ್ಳಿ ಹೆಜ್ಜೆ…3 ‘ಬಾಲ ಯುಗ್ಮ ನೃತ್ಯ’ ಭರತನಾಟ್ಯ ಪ್ರಸ್ತುತಿ ದಿನಾಂಕ 26 ಜನವರಿ 2026ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ನಡೆಯಿತು. ಈ ಕಾರ್ಯಕ್ರಮವು ಪ್ರಾಜ್ಞರಾದ ಕೆಮ್ಮಣ್ಣು ಪಡುಕುದ್ರು ಗಣಪತಿ ಮಠದ ಶ್ರೀ ನೆಂಪು ಶ್ರೀಧರ್ ಭಟ್ ಇ ವರ ಅಮೃತ ಹಸ್ತದಿಂದ ಉದ್ಘಾಟನೆಗೊಂಡು ನೃತ್ಯ ಪರಂಪರೆ ಬಗ್ಗೆ ಮಾತನಾಡುತ್ತಾ ತಾವೇ ನೃತ್ಯ ಸಂಬಂಧಿ ಸಂಸ್ಕೃತ ಶ್ಲೋಕಗಳನ್ನು ರಾಗಬದ್ಧವಾಗಿ ಹಾಡಿ ವಿವರಿಸಿದರು. ಪುರಾಣ ನೃತ್ಯ ಪ್ರಕಾರ ಲಲಿತಕಲೆಗಳಿಂದ ಧರ್ಮ ಸಂಸ್ಕೃತಿ ಉಳಿವು ಸಾಧ್ಯ ಎಂಬ ಸಂದೇಶ ನೀಡಿದರು. ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸಿದ್ಧಕಟ್ಟೆ ನಾಟ್ಯಾಯನ ಸಂಸ್ಥೆಯ ನಿರ್ದೇಶಕರಾದ ವಿದ್ವಾನ್ ಕೆ.ವಿ. ರಮಣಾಚಾರ್ಯರು ಸಭೆಯನ್ನು ಕುರಿತು “ಭರತನಾಟ್ಯಂತಹ ಕಲೆಗಳು ಗುರು ಪರಂಪರೆ ಇಂದು ಬಂದಿದ್ದು ಈ ಪರಂಪರೆಯನ್ನು ಮುಂದುವರಿಸುವ ಜವಾಬ್ದಾರಿ ಎಲ್ಲಾ ನೃತ್ಯ ಕಲಾವಿದರ ಮೇಲೆ…
ನೆಲಮಂಗಲ : 12ನೇ ಶತಮಾನದ ಬಸವಾದಿ ಶರಣರ ವಚನ ಕಂಠಪಾಠ ಸ್ಪರ್ಧೆಯನ್ನು ವ್ಯಕ್ತಿತ್ವ ವಿಕಸನಕ್ಕಾಗಿ ಬಸವಣ್ಣ ದೇವರಮಠದಲ್ಲಿ ಆಯೋಜನೆ ಮಾಡಲಾಗಿದೆ. ಸಾವಿರಕ್ಕೂ ಹೆಚ್ಚು ವಚನ ಹೇಳಿದವರಿಗೆ ಒಂದು ಲಕ್ಷ ರೂ. ಬಹುಮಾನ ನೀಡುವುದಾಗಿ ಬಸವಣ್ಣ ದೇವರ ಮಠದ ಶ್ರೀಸಿದ್ದಲಿಂಗ ಸ್ವಾಮೀಜಿ ಘೋಷಣೆ ಮಾಡಿದ್ದಾರೆ. ನೆಲಮಂಗಲದ ಬಸವಣ್ಣ ದೇವರಮಠದಲ್ಲಿ ದಿನಾಂಕ 19 ಏಪ್ರಿಲ್ 2026ರಂದು ಭಾನುವಾರ ಅಂತಾರಾಜ್ಯ ವಚನ ಕಂಠಪಾಠ ಸ್ಪರ್ಧೆಯನ್ನು ಬಸವ ಜಯಂತಿ ಪ್ರಯುಕ್ತ ಸತತ 3ನೇ ಬಾರಿಗೆ ಆಯೋಜಿಸಲಾಗಿದ್ದ ಒಂದು ಸಾವಿರಕ್ಕೂ ಹೆಚ್ಚು ವಚನ ಹೇಳಿದ ಪ್ರಥಮ ಸ್ಥಾನಕ್ಕೆ ರೂ.ಒಂದು ಲಕ್ಷ, ದ್ವಿತೀಯ ಸ್ಥಾನಕ್ಕೆ ರೂ.75 ಸಾವಿರ, ತೃತೀಯ ಸ್ಥಾನಕ್ಕೆ ರೂ.50 ಸಾವಿರ ಹಾಗೂ ಸಮಾಧಾನಕರ ಬಹುಮಾನ ನೀಡಲಿದೆ. ದೇಶ, ವಿದೇಶದ ಕನ್ನಡಿಗರು ಸಹ ಭಾಗವಹಿಸಬಹುದಾಗಿದ್ದು, ವಚನ ಕಂಠಪಾಠ ಸ್ಪರ್ಧೆಗೆ ಬರುವ ಸ್ಪರ್ಧಿಗಳು ಮೊದಲೇ ನೋಂದಣಿ ಮಾಡಿಕೊಳ್ಳಬೇಕಾಗಿದ್ದು, ಅಭಿಲಾಷ್ ಎಂ.ಆರ್ಬ. ಮೊ. 8147395591, ಜ್ಞಾನೇಶ್ ಟಿ. ಮೊ. 9845454536, ಷಣ್ಮುಖಪ್ಪ ಮೊ. 9980496763ಗೆ ಕರೆಮಾಡಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಕಾಸರಗೋಡಿನ ಅಪೂರ್ವ ವೈದ್ಯ, ವಿಶ್ವ ಆರೋಗ್ಯ ಸಂಸ್ಥೆಯಿಂದ ಗುರುತಿಸಿಕೊಂಡ ಡಾಕ್ಟರ್ ನರಹರಿಯವರ ಸಾಧನೆ ಮತ್ತು ಸಂಘಟಿತ ಶುಶ್ರೂಷಾ ವಿಧಾನ ಹಾಗೂ ಅದರ ಫಲಶ್ರುತಿಗೆ ಸಂಬಂಧಿಸಿ ಡಾ. ಯು. ಮಹೇಶ್ವರಿಯವರು ‘ಸಂಯೋಜಿತ ಚಿಕಿತ್ಸೆಯ ಹರಿಕಾರ- ಡಾ. ನರಹರಿ ಮತ್ತು ಐ.ಎ.ಡಿ.’ ಎಂಬ ಮಹತ್ವದ ಕೃತಿಯನ್ನು ಬರೆದಿದ್ದಾರೆ. ಕಾಂತಾವರ ಕನ್ನಡ ಸಂಘ ಪ್ರಕಟಿಸಿದ ಈ ಪುಸ್ತಕವು ಸಂಸ್ಕೃತಿ ಸಂವರ್ಧನ ಚಿಂತನ ಮಾಲೆಯ ಆರನೇ ಕೃತಿಯಾಗಿದೆ. ಅಂತರ್ ಶಿಸ್ತೀಯ ಅಧ್ಯಯನದ ಫಲಶ್ರುತಿಯಾಗಿ ಮೂಡಿ ಬಂದಿರುವ ಈ ಕೃತಿಯು ವೈದ್ಯಕೀಯ, ಸಂಸ್ಕೃತಿ, ವಿಜ್ಞಾನ, ಸಮಾಜ ವಿಜ್ಞಾನ ಮುಂತಾದ ವಿಚಾರಗಳನ್ನೊಳಗೊಂಡಿದ್ದು ಆನೆಕಾಲು ರೋಗ ನಿರ್ಮೂಲನೆಯ ಕುರಿತು ಅಧಿಕೃತವಾಗಿ ಮಾತನಾಡುತ್ತದೆ. ಈ ಕೃತಿಯು ಸಮಕಾಲೀನ ಸಮುದಾಯಕ್ಕೆ ವೈದ್ಯ ವಿಜ್ಞಾನವನ್ನು ಕುರಿತ ಅರಿವು ದಾಟಿಸುವ ರೀತಿಯನ್ನು ನೋಡಿದಾಗ ಬಿ.ಜಿ.ಎಲ್. ಸ್ವಾಮಿಯವರ ‘ಹಸಿರು ಹೊನ್ನು’ ನೆನಪಾಗುತ್ತದೆ. ಹಾರುವ ಓತಿಯ ಅನ್ವೇಷಣೆಯನ್ನು ಒಳಗೊಂಡ ತೇಜಸ್ವಿಯವರ ಕಾದಂಬರಿಯ ನಿರೂಪಣಾ ರೀತಿಯೂ ಇಲ್ಲಿದೆ. ಆನೆಕಾಲು ರೋಗದ ನಿರ್ಮೂಲನ ವಿಧಾನಗಳಲ್ಲಿ ಐ.ಎ.ಡಿ.ಯ ಕೊಡುಗೆಯ ವೈಶಿಷ್ಟ್ಯದ ಬಗ್ಗೆ ಈ ಕೃತಿಯು…
ಮಂಗಳೂರು : ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ (ರಿ.) ಅಶೋಕನಗರ, ಉರ್ವಸ್ಟೋರ್ ಮಂಗಳೂರು ಇದರ ವತಿಯಿಂದ ಕರ್ನಾಟಕ ರಾಜ್ಯ ಮಹಿಳಾ ಜಾನಪದ ಕ್ರೀಡೋತ್ಸವ ಹಾಗೂ ಸಾಂಸ್ಕೃತಿಕ ಸಮ್ಮೇಳನ ‘ಮಹಿಳಾ ವೈಭವ -2026’ ಕಾರ್ಯಕ್ರಮವನ್ನು ದಿನಾಂಕ 01 ಮತ್ತು 02 ಫೆಬ್ರುವರಿ 2026ರಂದು ಬೆಳಿಗ್ಗೆ 9-30 ಗಂಟೆಗೆ ಮಂಗಳೂರಿನ ನೆಹರು ಮೈದಾನ ಮತ್ತು ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆಯೋಜಿಸಲಾಗಿದೆ. ದಿನಾಂಕ 01 ಫೆಬ್ರುವರಿ 2026ರಂದು ಮಂಗಳೂರಿನ ನೆಹರು ಮೈದಾನದ ಅಬ್ಬಕ್ಕ ವೇದಿಕೆಯಲ್ಲಿ ಈ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು, ‘ಮಹಿಳಾ ರತ್ನ’ ಪ್ರಶಸ್ತಿ ಪ್ರದಾನ, ಸ್ಮರಣ ಸಂಚಿಕೆ ಬಿಡುಗಡೆಗೊಳ್ಳಲಿದೆ. ಬೆಳಿಗ್ಗೆ 8-30 ಗಂಟೆಗೆ ಮಹಿಳಾ ಜಾಥಾ, ಧ್ವಜಾರೋಹಣ ಮತ್ತು ಜಾನಪದ ಕ್ರೀಡೋತ್ಸವ ನಡೆಯಲಿದೆ. ಕುದ್ಮುಲ್ ರಂಗರಾವ್ ಪುರಭವನದಲ್ಲಿ ವಿಚಾರಗೋಷ್ಠಿಗಳು, ಸಾಂಸ್ಕೃತಿಕ ಸ್ಪರ್ಧೆಗೆ ಚಾಲನೆ, ಆರೋಗ್ಯ ಶಿಬಿರ, ಮಾರಾಟ ಮಳಿಗೆ ಉದ್ಘಾಟನೆ ನಡೆಯಲಿದೆ. ದಿನಾಂಕ 02 ಫೆಬ್ರುವರಿ 2026ರಂದು ಸಂಜೆ 3-00 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಸನ್ಮಾನ್ಯ ಜೈಜುನ್ನೀಸಾ ಇವರು ದೀಪ ಪ್ರಜ್ವಲನೆ…
ಮೂಡುಬಿದಿರೆ : ಸುರಸಾರವ ಸಂಗೀತ ಶಾಲೆಯ ದ್ವಿತೀಯ ವರ್ಷದ ಸಂಗೀತೋತ್ಸವ-2026 ‘ದಣಿದ ದನಿಗೆ ರಾಗದ ಬೆಸುಗೆ’ ಕಾರ್ಯಕ್ರಮವು ದಿನಾಂಕ 25 ಜನವರಿ 2026ರಂದು ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ನಡೆಯಿತು. ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಸುದರ್ಶನ್ ಎಂ. ಉದ್ಘಾಟಿಸಿ ಮಾತನಾಡಿ, “ರಾಗ-ತಾಳಗಳ ಮೂಲಕ ಭಗವಂತನನ್ನು ಸಾಕ್ಷಾತ್ಕಾರಗೊಳಿಸಬಹುದಾಗಿದೆ. ಸಂಗೀತದ ಮೂಲಕ ದೈವಾನುಭವ ಪಡೆಯಲು ಸಾಧ್ಯ, ಸಂಗೀತ ಒಂದು ದೈವಿಕ ಕಲೆ. ಇದು ಮನಸ್ಸು, ದೇಹ ಹಾಗೂ ಪ್ರಕೃತಿಯೊಂದಿಗೂ ಸಂಯೋಜನೆ ಸಾಧಿಸಿ ಮಾನವನ ಬದುಕನ್ನು ಹಸನಾಗಿಸುತ್ತದೆ” ಎಂದು ಹೇಳಿದರು. ಕಲಾ ಪೋಷಕ ಕೆ. ಶ್ರೀಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಯಶವಂತ್ ಎಂ.ಜಿ. ಪ್ರಸ್ತಾವಿಕವಾಗಿ ಮಾತನಾಡಿ, “ತಮ್ಮ ಸಂಗೀತ ಸಾಧನೆಯನ್ನು ವೈಯಕ್ತಿಕ ಮಟ್ಟಕ್ಕೆ ಸೀಮಿತಗೊಳಿಸದೆ ಸಮಾಜದ ಮಕ್ಕಳಿಗೆ ಉಪಯೋಗವಾಗುವ ಉದ್ದೇಶದಿಂದ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಪ್ರಾರಂಭದಲ್ಲಿ ಸ್ವಗೃಹದಲ್ಲೇ ಸಂಗೀತ ತರಗತಿಗಳನ್ನು ಆರಂಭಿಸಿದ್ದು, ಇಂದು ಅನೇಕ ವಿದ್ಯಾರ್ಥಿಗಳು ಸಂಗೀತ ಶಿಕ್ಷಣ ಪಡೆಯುತ್ತಿದ್ದಾರೆ. ಜಿ ಕನ್ನಡ ವಾಹಿನಿಯ ‘ಸರಿಗಮಪ’ ರಿಯಾಲಿಟಿ ಶೋ ನಂತರ ದೊರೆತ ಅನುಭವಗಳು ಕಲಾವಿದರಿಗೆ ಸೂಕ್ತ…
ಮಂಗಳೂರು : ನಂತೂರು ಶ್ರೀ ಭಾರತಿ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮಂಗಳೂರು ತಾಲೂಕು ಘಟಕ, ಹವ್ಯಕ ಸಭಾ ಮಂಗಳೂರು ಹಾಗೂ ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಇವುಗಳು ಜಂಟಿಯಾಗಿ ಆಯೋಜಿಸಿದ ‘ಕೌಟುಂಬಿಕ ಹಾಗೂ ಸಾಮಾಜಿಕ ಮೌಲ್ಯಗಳ ಅನಿವಾರ್ಯತೆ’ ಎಂಬ ವಿಚಾರಗೋಷ್ಠಿಯು ದಿನಾಂಕ 25 ಜನವರಿ 2026ರಂದು ನಡೆಯಿತು. ಈ ವಿಚಾರಗೋಷ್ಠಿಯಲ್ಲಿ ಸಂಪನ್ನೂಲ ವ್ಯಕ್ತಿಯಾಗಿ ಮಾತನಾಡಿದ ಮಾಯಾಮೃಗ ಖ್ಯಾತಿಯ ಹಿರಿಯ ಖ್ಯಾತ ನಟ ಹಾಗೂ ಆದಾಯ ತೆರಿಗೆ ಇಲಾಖೆಯ ನಿವೃತ್ತ ಸಹ ಆಯುಕ್ತರಾದ ಸೇತುರಾಮ್ “ನಾವು ಅಪ್ರಾಮಾಣಿಕರಾದರೆ ನಮ್ಮ ಸುತ್ತಲಿನವರೂ ನಮಗೆ ಅಪ್ರಾಮಾಣಿಕರಾಗಿಯೇ ಕಾಣುತ್ತಾರೆ. ಅದೇ ನಾವು ಪ್ರಾಮಾಣಿಕರಾಗಿದ್ದರೆ ಎಲ್ಲರೂ ಪ್ರಾಮಾಣಿಕರೇ. ಸಮಾಜದಲ್ಲಿ ಮೌಲ್ಯಗಳು ಸತ್ತಿವೆ ಎನ್ನುವುದು ಸರಿಯಲ್ಲ. ಮೌಲ್ಯಗಳು ಸತ್ತಿದ್ದರೆ ಲಂಚ ತೆಗೆದುಕೊಳ್ಳುವವರು ಯಾಕೆ ನೇರವಾಗಿ ತೆಗೆದುಕೊಳ್ಳುತ್ತಿಲ್ಲ. ಅವರೊಳಗಿನ ಅಂತಸ್ಸಾಕ್ಷಿ ಅದು ಸರಿ ಅಲ್ಲ ಎನ್ನುವ ಕಾರಣದಿಂದಲ್ಲವೇ? ನಮಗೆ ಈಗ ಯಾರ ಬಗ್ಗೆಯೂ ಯಾರ ಬಗ್ಗೆಯೂ ನಂಬಿಕೆ ಇಲ್ಲ. ಮೆಷೀನ್ ಗಳನ್ನು ನಂಬುವ ನಾವು ಮನುಷ್ಯರನ್ನು ನಂಬುವುದಿಲ್ಲ. ಬೃಹತ್ ನಗರಗಳಿಗೆ…