Subscribe to Updates
Get the latest creative news from FooBar about art, design and business.
Author: roovari
‘ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?’ ಇತ್ತೀಚಿಗೆ ಬಿಡುಗಡೆಯಾದ ಡಾ. ಬಿ. ಜನಾರ್ದನ ಭಟ್ ಇವರ ಹೊಸ ಕಾದಂಬರಿ. ಹಲವು ವೈಶಿಷ್ಟ್ಯಗಳನ್ನೊಳಗೊಂಡ ಇದು ತನ್ನ ಗಟ್ಟಿಯಾದ ಚೌಕಟ್ಟಿನೊಳಗಿನ ಅನೇಕ ಚಿಂತನಾರ್ಹ ವಿಚಾರಗಳಿಂದ ಮೈದುಂಬಿ ನಿಂತಿದೆ. ಸಾಂಸ್ಕೃತಿಕ-ಐತಿಹಾಸಿಕ ಪರಿಪ್ರೇಕ್ಷ್ಯದಲ್ಲೇ ತಮ್ಮ ಕಥನಗಳನ್ನು ಕಟ್ಟಿಕೊಡುವ ಜನಾರ್ದನ ಭಟ್ ಇಲ್ಲಿಯೂ ಅದೇ ವಿಧಾನವನ್ನು ಮುಂದುವರಿಸಿದ್ದಾರೆ. ಇಲ್ಲಿ ಅದಕ್ಕೆ ಆಧ್ಯಾತ್ಮಿಕತೆಯೂ ಸೇರಿಕೊಂಡಿದೆ ಅನ್ನುವುದು ಒಂದು ವಿಶೇಷ. ಅಲ್ಲದೆ ಅಂದಿನ ಬ್ರಾಹ್ಮಣ ಸಮಾಜದಲ್ಲಿನ ಪದ್ಧತಿ, ನಂಬಿಕೆ, ಸಂಪ್ರದಾಯ, ಆಚರಣೆಗಳನ್ನೂ ಅವರು ಅಲ್ಲಲ್ಲಿ ಸಾಂದರ್ಭಿಕವಾಗಿ ಚಿತ್ರಿಸುತ್ತಾರೆ. ಉಡುಪಿಯ ಸಮೀಪದ ಬೆಳಂಜಾಲು ಅನ್ನುವ ಒಂದು ಗ್ರಾಮೀಣ ಪ್ರದೇಶವು ಕಥೆಯ ಕೇಂದ್ರ. ಕಥಾನಾಯಕ ಬೆಳಂಜಾಲು ಅನಂತರಾಮ ಉಡುಪರು ಹುಟ್ಟಿ ಬೆಳೆದ ಮನೆಯೇ ಈ ಕಾದಂಬರಿಯ ಶೀರ್ಷಿಕೆಯಲ್ಲಿ ಉಲ್ಲೇಖವಾಗಿರುವ ಮನೆ. (ಮನೆ ಅನ್ನುವುದು ಮನುಷ್ಯನ ದೇಹವೇ ಅನ್ನುವ ಅರ್ಥ ಆಮೇಲಿನದ್ದು.) ಕಥೆ ನಡೆಯುವ ಕಾಲ 20ನೇ ಶತಮಾನದ ಆದಿಭಾಗದಿಂದ 1993ರವರೆಗೆ. ವಸಾಹತುಶಾಹಿ ಮತ್ತು ಸ್ವತಂತ್ರ ಭಾರತ ಎರಡೂ ಇಲ್ಲಿವೆ. ಕಟ್ಟಾ ಸಂಪ್ರದಾಯಸ್ಥ ಕುಟುಂಬವೊಂದರಲ್ಲಿ ವೇದ, ಅಗಮ,…
ಮೈಸೂರು : ನಟನ ರಂಗಶಾಲೆಯ ವತಿಯಿಂದ ನಡೆಯುವ ಸುಬ್ಬಣ್ಣ ಸ್ಮರಣೆ 2025 ಪ್ರಯುಕ್ತ ನಟನ ಪಯಣ ರೆಪರ್ಟರಿ ತಂಡದ ಪ್ರಯೋಗ ‘ಕಣಿವೆಯ ಹಾಡು’ ನಾಟಕ ಪ್ರದರ್ಶನವನ್ನು ದಿನಾಂಕ 20 ಜುಲೈ 2025ರಂದು ಸಂಜೆ 6-30 ಗಂಟೆಗೆ ಮೈಸೂರಿನ ರಾಮಕೃಷ್ಣ ನಗರ, ನಟನ ರಂಗಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಈ ನಾಟಕದ ಮೂಲ ರಚನೆ ಅತೊಲ್ ಫ್ಯೂಗಾರ್ಡ್ ಇವರದ್ದು, ಕನ್ನಡಕ್ಕೆ ಡಾ. ಮೀರಾ ಮೂರ್ತಿ ಅನುವಾದಿಸಿದ್ದು, ಅನುಷ್ ಶೆಟ್ಟಿ ಮತ್ತು ಮುನ್ನ ಮೈಸೂರು ಇವರು ಸಂಗೀತ ನೀಡಿದ್ದು, ಡಾ. ಶ್ರೀಪಾದ ಭಟ್ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಮೇಘ ಸಮೀರ ಮತ್ತು ದಿಶಾ ರಮೇಶ್ ಅಭಿನಯಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 7259537777, 9480468327 ಮತ್ತು 9845595505 ಸಂಪರ್ಕಿಸಿರಿ.
ಕಾಸರಗೋಡು : ಪಣಂಬೂರು ವೆಂಕಟರಾಯ ಐತಾಳ ಪ್ರತಿಷ್ಠಾನದ ವತಿಯಿಂದ ತೆಂಕುತಿಟ್ಟಿನ ಅಗ್ರಮಾನ್ಯ ಭಾಗವತರಾದ ಕುರಿಯ ಗಣಪತಿ ಶಾಸ್ತ್ರಿಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 15 ಜುಲೈ 2025 ರಂದು ಕಾಶರಗೋದಡಿನ ಕುರಿಯದಲ್ಲಿರುವ ಅವರ ಸ್ವಗೃಹದಲ್ಲಿ ನಡೆಯಿತು. ಪ್ರತಿಷ್ಠಾನದ ಪರವಾಗಿ ಪಣಂಬೂರು ವಾಸುದೇವ ಐತಾಳ, ಡಾ. ಸುನಿಲ್ ಮುಂಡ್ಕೂರು, ಮುರಲಿ ಕಡೆಕಾರ್, ರವಿಚಂದ್ರ ಭಟ್ ರೂಪಾಯಿ 10,000 ನಗದನ್ನೊಳಗೊಂಡ ಪ್ರಶಸ್ತಿಯನ್ನು ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸ್ತ್ರಿಗಳು “ವೆಂಕಟ್ರಾಯ ಐತಾಳರು ಯಕ್ಷಗಾನದ ಸರ್ವಾಂಗವನ್ನು ಬಲ್ಲ ಶ್ರೇಷ್ಠ ಗುರುವಾಗಿದ್ದರು. ನೂರಾರು ಕಲಾವಿದರ ಬೆಳವಣಿಗೆಗೆ ಕಾರಣೀಕರ್ತರಾಗಿದ್ದರು. ಐತಾಳರಿಂದ ತಾನು ಕೂಡ ಉಪಕೃತನಾಗಿದ್ದೆ. ಎಂಟು ವರ್ಷಗಳ ಹಿಂದೆ, ತನ್ನ ತಂದೆಯ ಹೆಸರಿನಲ್ಲಿ ಪ್ರತಿಷ್ಠಾನವನ್ನು ಸ್ಥಾಪಿಸಿದ ಐತಾಳರ ಸುಪುತ್ರಿ ಶ್ರೀಮತಿ ಗೋಪಿಕಾ ಮಯ್ಯ ಮತ್ತು ಅವರ ಸಹೋದರಿ ಅಭಿನಂದನಾರ್ಹರು” ಎಂದರು. ಬಳಿಕ ಪ್ರತಿಷ್ಠಾನದ ತಂಡ ಕುರಿಯ ವಿಠಲ ಶಾಸ್ತ್ರಿಗಳ ಮೂಲ ಮನೆಗೆ ಭೇಟಿ ನೀಡಿತು.
ಮೂಡಬಿದರೆ : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು, ಐ. ಸಿ. ವೈ. ಎಮ್. ಹೊಸ್ಪೆಟ್ ಘಟಕ ಇವರ ಸಹಯೋಗದಲ್ಲಿ ಕೊಂಕಣಿ ಸಾಹಿತ್ಯ ಕಾರ್ಯಗಾರವು ದಿನಾಂಕ 20 ಜುಲೈ 2025ರಂದು ಭಾನುವಾರ ಬೆಳಿಗ್ಗೆ ಘಂಟೆ 10.00 ರಿಂದ ಸಂಜೆ ಘಂಟೆ 5.00ರ ತನಕ ಮೂಡುಬಿದರೆಯ ಹೊಸ್ಪೆಟ್ ಚರ್ಚ್ ಇದರ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಗಾರದಲ್ಲಿ ಶ್ರೀಮತಿ ಫೆಲ್ಸಿ ಲೋಬೊ, ದೆರೆಬೈಲ್ ಇವರು ಕವನ ಬರೆಯುವ ಕುರಿತು ತರಬೇತಿ ನೀಡಲಿದ್ದು, ಕೊಂಕಣಿ ಇತಿಹಾಸ ಮತ್ತು ಸಾಹಿತ್ಯದ ಬಗ್ಗೆ ಡಾ. ಜೊಯರ್ ರುಡೋಲ್ಪ್ ನೊರೊನ್ಹಾ ಹಾಗೂ ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಬಗ್ಗೆ ಶ್ರೀ ರೊನಿ ಕ್ರಾಸ್ತಾ, ಕೆಲರಾಯ್ ಉಪನ್ಯಾಸ ನೀಡಲಿದ್ದಾರೆ. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಹೊಸ್ಪೆಟ್ ಚರ್ಚ್ ಇದರ ಧರ್ಮ ಗುರುಗಳಾದ ಅ. ವಂ. ಗ್ರೆಗೊರಿ ಡಿಸೋಜರವರು ಭಾಗವಹಿಸಲಿದ್ದು, ಐ. ಸಿ. ವೈ. ಎಮ್ ಹೊಸ್ಪೆಟ್ ಘಟಕದ…
ಕೋಲಾರ : ಮೇಘ ಮೈತ್ರಿ ಕನ್ನಡ ಸಾಹಿತ್ಯ ಸಂಘ (ರಿ.) ಕಮತಗಿ ಹಾಗೂ ಕಾಸರಗೋಡು ಕನ್ನಡ ಭವನ ಮತ್ತು ಗ್ರಂಥಾಲಯದ ಜಿಲ್ಲಾ ಘಟಕ ಕೋಲಾರ ವತಿಯಿಂದ ‘ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳನ-2025’ವನ್ನು ದಿನಾಂಕ 19 ಜುಲೈ 2025ರ ಶನಿವಾರ ಬೆಳಗ್ಗೆ 9-30 ಗಂಟೆಗೆ ಕೋಲಾರದ ಪತ್ರಕರ್ತರ ಭವನದಲ್ಲಿ ಆಯೋಜಿಸಲಾಗಿದೆ. ಈ ಸಮ್ಮೇಳನ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಹಾಗೂ ರಂಗ ನಿರ್ದೇಶಕರಾದ ಡಾ.ಇಂಚರ ನಾರಾಯಣ ಸ್ವಾಮಿ ಆಯ್ಕೆ ಆಗಿದ್ದು, ಸಮ್ಮೇಳನದಲ್ಲಿ ಕನ್ನಡ ಧ್ವಜಾರೋಹಣ, ಮೆರವಣಿಗೆ, ಪುಸ್ತಕ ಮಳಿಗೆ ಉದ್ಘಾಟನೆ, ಪುಸ್ತಕ ಬಿಡುಗಡೆ, ಕವಿಗೋಷ್ಠಿ, ವಿಚಾರಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ವಿಜಯಪುರ : ವಿಜಯಪುರ ನಗರದ ಗುಜ್ಜರಗಲ್ಲಿಯ `ಗುರುವಿಟ್ಠಲ ಕೃಪಾ’ ಭವನದಲ್ಲಿ ಶ್ರೀ ಕುಮಾರವ್ಯಾಸ ಭಾರತ ವೇದಿಕೆಯಿಂದ ಶ್ರೀ ವ್ಯಾಸರಾಯರ ಸ್ಮರಣೆ ಕಾರ್ಯಕ್ರಮ ದಿನಾಂಕ 13 ಜುಲೈ 2025ರ ರವಿವಾರದಂದು ನಡೆಯಿತು. ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಶ್ರೀ ರಾಘವೇಂದ್ರ ಭಜನಾ ಮಂಡಳಿ ಇದರ ಉಪಾಧ್ಯಕ್ಷರಾದ ಶ್ರೀಮತಿ ವಿದ್ಯಾ ದೇಶಪಾಂಡೆ ಮಾತನಾಡಿ “ಶ್ರೀ ವ್ಯಾಸರಾಯರು ಜ್ಞಾನಿಗಳು, ತ್ಯಾಗ ಜೀವಿಗಳು, ತಪೋಧನರು. ಪುರಂದರದಾಸರು, ವಾದಿರಾಜರು, ಕನಕದಾಸರಂತಹ ಮಹಾನ್ ದಾಸವರೇಣ್ಯರಿಗೆ ಗುರುಸ್ಥಾನದಲ್ಲಿದ್ದು, ಕನ್ನಡದಾಸ ಪರಂಪರೆಗೆ ನಾಂದಿ ಹಾಡಿದರು. ಒಂದು ಬಾರಿ ತಿರುಪತಿಯ ಬೆಟ್ಟವನ್ನು ಮೊಳಕಾಲಿನಿಂದ ಏರಿ ಶ್ರೀ ವೆಂಕಟೇಶ್ವರನ ಪೂಜೆ ಸಲ್ಲಿಸಿದರು. 732 ಹನುಮಂತ ದೇವರ ವಿಗ್ರಹ ಸ್ಥಾಪಿಸಿ ಕರ್ನಾಟಕದ ಭಕ್ತಿ ಪರಂಪರೆಗೆ ದೊಡ್ಡ ಕಾಣಿಕೆ ಸಲ್ಲಿಸಿದರು. ವಿಜಯನಗರದ ಅರಸು ಶ್ರೀಕೃಷ್ಣದೇವರಾಯನು ವ್ಯಾಸರಾಯರಿಗೆ ರತ್ನಾಭಿಷೇಕ ಮಾಡಿಸಿದನು. ಇಂತಹ ವ್ಯಾಸರಾಯರು ಪ್ರಾತಃಸ್ಮರಣೀಯರು” ಎಂದು ತಿಳಿಸಿದರು ಅನಂತರ ನಡೆದ ಗಮಕ ಕಾರ್ಯಕ್ರಮವನ್ನು ಗಮಕ ವಿದುಷಿ ಶ್ರೀಮತಿ ಶಾಂತಾ ಕೌತಾಳ ಹಾಗೂ ಕಲ್ಯಾಣರಾವ್ ದೇಶಪಾಂಡೆಯವರು ನಡೆಸಿಕೊಟ್ಟರು. ಪ್ರಸ್ತುತಪಡಿಸಿದ ಗಮಕ ಪ್ರಸಂಗವೆಂದರೆ…
ಬೆಂಗಳೂರು : ರಂಗಸ್ಥಳ ಯಕ್ಷ ಮಿತ್ರ ಕೂಟ (ರಿ.) ಬೆಂಗಳೂರು ಇದರ ರಜತ ಪರ್ವ -2025 ಇದರ ಉದ್ಘಾಟನಾ ಸಮಾರಂಭ ಮತ್ತು ವಿಚಾರ ಸಂಕಿರಣ ಕಾರ್ಯಕ್ರಮವನ್ನು ದಿನಾಂಕ 19 ಜುಲೈ 2025ರಂದು ಮಧ್ಯಾಹ್ನ 3-00 ಗಂಟೆಗೆ ಬೆಂಗಳೂರಿನ ನಾಗರಬಾವಿಯಲ್ಲಿರುವ ಶ್ರೀ ವೇಣುಗೋಪಾಲಕೃಷ್ಣ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಕರ್ಣಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ಸಹಯೋಗದೊಂದಿಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ‘ನಡುತಿಟ್ಟಿನ ಹಾರಾಡಿ/ಮಟಪಾಡಿ ಶೈಲಿಗಳಲ್ಲಿನ ಸಾಮ್ಯತೆ, ಭಿನ್ನತೆ ಮತ್ತು ವೈಶಿಷ್ಟ್ಯತೆ’ ಎಂಬ ವಿಷಯದ ಬಗ್ಗೆ ವಿಚಾರ ಸಂಕಿರಣ ನಡೆಯಲಿದೆ. ಸಂಜೆ 4-00 ಗಂಟೆಗೆ ಎಚ್. ಸುಜಯೀಂದ್ರ ಹಂದೆ ಮತ್ತು ತಂಡದವರಿಂದ ಹಾರಾಡಿ ಶೈಲಿ ಮತ್ತು ಮಟಪಾಡಿ ಶೈಲಿಯ ಪ್ರಾತ್ಯಕ್ಷಿಕೆ ಪ್ರಸ್ತುತಗೊಳ್ಳಲಿದೆ. ಸಂಜೆ 5-00 ಗಂಟೆಗೆ ವೃತ್ತಿ ಕಲಾವಿದರಿಂದ ‘ಮೀನಾಕ್ಷಿ ಕಲ್ಯಾಣ’ ಎಂಬ ಪ್ರಸಂಗ ನಡುತಿಟ್ಟಿನ ಶೈಲಿಯಲ್ಲಿ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಬೆಂಗಳೂರು : ಚೇತನ ಮೀಡಿಯಾ ಇವೆಂಟ್ಸ್ ಆ್ಯಂಡ್ ಪಬ್ಲಿಸಿಟಿ ಪಾರ್ಟನರ್ ಇವರು ಚೇತನ ಫೌಂಡೇಶನ್ ಕರ್ಣಾಟಕ ಇದರ ಸಹಯೋಗದಲ್ಲಿ ಆಯೋಜಿಸಿರುವ ರಾಷ್ಟ್ರೀಯ ಶಿಕ್ಷಣ, ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನ ಕಾರ್ಯಕ್ರಮವು ದಿನಾಂಕ 20 ಜುಲೈ 2025ರಂದು ರವಿವಾರ ಬೆಂಗಳೂರಿನ ಜೆ ಎಸ್ ಎಸ್ ಕ್ಯಾಂಪಸ್ಸಿನ ಶ್ರೀ ಶಿವರಾತ್ರಿ ದೇಶೀಕೇಂದ್ರ ಚಿಂತನ ಮಂಟಪದಲ್ಲಿ ನಡೆಯಲಿದೆ. ಶಿಕ್ಷಣ, ಸಾಹಿತ್ಯ, ನಾಡು ನುಡಿ ಸೇವೆ, ವೈದ್ಯಕೀಯ, ಸಮಾಜ ಸೇವೆ, ಸಾಂಸ್ಕೃತಿಕ ಸಂಘಟನೆ ಸೇರಿದಂತೆ ವಿವಿಧ ಕ್ಷೇತ್ರದ 25 ಸಾಧಕರಿಗೆ ರಾಷ್ಟ್ರೀಯ ಅತ್ಯುತ್ತಮ ಶಿಕ್ಷಕ/ಕಿ ಪ್ರಶಸ್ತಿ, ನಾಡಪ್ರಭು ಕೆಂಪೇಗೌಡ ರಾಷ್ಟ್ರೀಯ ಪ್ರಶಸ್ತಿ ಹಾಗೂ ಕವಿ ಮುದಲ್ ವಿಜಯ್ ಕಾವ್ಯ ಪ್ರದಾನ ಮಾಡಲಾಗುವುದು. ಸಾಧಕರು ತಮ್ಮ ಸ್ವ-ವಿವರ ಹಾಗೂ ಭಾವಚಿತ್ರವನ್ನು 9986821096 ವಾಟ್ಸಾಪ್ ಮೂಲಕ ಕಳಿಸಲು ಕೋರಿಕೆ. ಪ್ರಶಸ್ತಿ ಪುರಸ್ಕೃತರ ಜೊತೆಯಲ್ಲಿ ಒಬ್ಬ ಸದಸ್ಯರಿಗೆ ಮಾತ್ರ ಪ್ರವೇಶವಿದ್ದು, ಪ್ರವೇಶ ಪಾಸು ಕಡ್ಡಾಯವಾಗಿದೆ.
ಬೆಂಗಳೂರು : ಸಾಲಿಗ್ರಾಮ ಮಕ್ಕಳ ಮೇಳ (ರಿ.) ಕೋಟ ಇದರ ವತಿಯಿಂದ ನಡೆಯುವ ಸುವರ್ಣ ಪರ್ವ -12ರ ಸರಣಿಯಲ್ಲಿ ಕೆ. ಎಂ. ಶೇಖರ್ ಸಾರಥ್ಯದ ರಂಗಸ್ಥಳ ಮತ್ತು ಯಕ್ಷ ಮಿತ್ರ ಕೂಟ (ರಿ.) ಬೆಂಗಳೂರು ಇದರ ರಜತ ಪರ್ವ -2025ರ ಅಂಗವಾಗಿ ಹಾರಾಡಿ – ಮಟಪಾಡಿ ತಿಟ್ಟುಗಳ ‘ಯಕ್ಷಗಾನ ಪ್ರಾತ್ಯಕ್ಷಿಕೆ’ಯನ್ನು ದಿನಾಂಕ 19 ಜುಲೈ 2025ರಂದು ಸಂಜೆ 3-00 ಗಂಟೆಗೆ ಬೆಂಗಳೂರಿನ ನಾಗರಬಾವಿಯಲ್ಲಿರುವ ಶ್ರೀ ವೇಣುಗೋಪಾಲಕೃಷ್ಣ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಹೆಚ್. ಸುಜಯೀಂದ್ರ ಹಂದೆ ಮತ್ತು ಬಳಗದವರಿಂದ ಈ ಕಾರ್ಯಕ್ರಮ ನಡೆಯಲಿದೆ.
ಮುಂಬಯಿ : ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದಲ್ಲಿ ಸಂವಾದ ಕಾರ್ಯಕ್ರಮವು ದಿನಾಂಕ 14 ಜುಲೈ 2025ರ ಸೋಮವಾರದಂದು ನಡೆಯಿತು. ಸಮಾರಂಭದಲ್ಲಿ ‘ಬಿಲ್ಲವರಲ್ಲಿ ಜಾತಿ ಧರ್ಮ ಮತ್ತು ಸಾಮಾಜಿಕ ಚಲನಶೀಲತೆಯ ಸಮಸ್ಯೆಗಳ ಪರಿಹಾರ’ ಈ ವಿಷಯದ ಕುರಿತು ಅಧ್ಯಯನವನ್ನು ಕೈಗೊಂಡಿರುವ ಸ್ವಿಟ್ಜರ್ಲ್ಯಾಂಡ್ನ ಜುರಿಕ್ ವಿಶ್ವವಿದ್ಯಾಲಯದ ಸಂಶೋಧಕ, ಸಹಾಯಕ ಪ್ರಾಧ್ಯಾಪಕರಾದ ಡಾ. ಮುಕೇಶ್ ಕುಮಾರ್ ಮಾತನಾಡಿ “ಒಂದು ಕಾಲದಲ್ಲಿ ಮೇಲ್ವರ್ಗದವರಿಂದ ಅಸ್ಪ್ರಶ್ಯರೆನಿಸಿಕೊಂಡು ಸಮಾಜದಿಂದ ಬಹಿಷ್ಕೃತರಾದ ಬಿಲ್ಲವರು ಶ್ರೀಮಂತವಾದ ಸಾಂಸ್ಕೃತಿಕ ಹಿನ್ನೆಲೆಯಿಂದ ಬಂದವರು. ದಾರ್ಶನಿಕ ನಾರಾಯಣ ಗುರುಗಳ ಮಾರ್ಗದರ್ಶನವನ್ನೇ ಸ್ಫೂರ್ತಿಯಾಗಿಸಿಕೊಂಡು ಹಲವಾರು ಸಂಘರ್ಷಗಳನ್ನು ಎದುರಿಸಿಯೂ ಬಿಲ್ಲವರು ಉನ್ನತ ಸ್ಥಾನಮಾನವನ್ನು ಗಳಿಸಿಕೊಂಡರು. ಬಾಸೆಲ್ ಮಿಶನ್ ವರದಿಯಲ್ಲಿ ದಾಖಲಾಗಿರುವ ಬಿಲ್ಲವರ ಕುರಿತು ಓದಿ ಆಸಕ್ತಿಯಿಂದ ಅಧ್ಯಯನವನ್ನು ನಡೆಸುತ್ತಿರುವೆ. ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಮಂಗಳೂರಿಗೆ ಭೇಟಿ ನೀಡುತ್ತಿದ್ದೇನೆ. ತಳಮಟ್ಟಕ್ಕೆ ತಳ್ಳಲ್ಪಟ್ಟ ಈ ಸಮಾಜವು ನಾರಾಯಣ ಗುರುಗಳ ಪ್ರೇರಣೆಯಿಂದ ಹೇಗೆ ಉನ್ನತಿಯನ್ನು ಕಂಡಿತು ಎಂದು ತಿಳಿಯುವುದು ನನ್ನ ಅಧ್ಯಯನದ ಮುಖ್ಯ ಉದ್ದೇಶವಾಗಿದೆ. ಬಿಲ್ಲವ ಸಮುದಾಯ ಕಳೆದ ನೂರು ವರ್ಷಗಳಲ್ಲಿ ಮಾಡಿರುವ…