Author: roovari

ಬೆಂಗಳೂರು : ಶ್ರೀ ಮುರಳಿಧರ ಸಂಗೀತ ನೃತ್ಯ ಮಹಾವಿದ್ಯಾಲಯ (ರಿ.) ಮೋಹನ ತರಂಗಿಣಿ ಸಂಗೀತ ಸಭಾ (ಕಲಾಪೋಷಕ ಪ್ರಶಸ್ತಿ ಪುರಸ್ಕೃತ ಸಂಸ್ಥೆ) ಹಾಗೂ ಪಲ್ಲವಿ ಗಾನಸಭಾ (ಲ.), ಬೆಂಗಳೂರು ಇವರ ಜಂಟಿ ಆಶ್ರಯದಲ್ಲಿ ‘ಪಲ್ಲವಿ ಕಾರ್ಯಾಗಾರ’ವು ದಿನಾಂಕ 10 ಆಗಸ್ಟ್ 2025ರ ಭಾನುವಾರದಿಂದ ದಿನಾಂಕ 28 ಸೆಪ್ಟೆಂಬರ್2025ರ ಭಾನುವಾರದವರೆಗೆ ಎಂಟು ವಾರಗಳು ಭಾನುವಾರ (ಬೆಳಗ್ಗೆ ಘಂಟೆ 10 ರಿಂದ 12:30 ರವರೆಗೆ) ನಡೆಯಲಿದೆ. ಕೀರ್ತಿಶೇಷ ಲಯಯೋಗಿ ಪೂಜ್ಯ ವಿದ್ವಾನ್ ಶ್ರೀ ಪಲ್ಲವಿ ಎಸ್. ಚಂದ್ರಪ್ಪ ಇವರ ಸ್ಮರಣಾರ್ಥ ಆಯೋಜಿಸುವ ಈ ಕಾರ್ಯಕ್ರಮವನ್ನು ದಿನಾಂಕ 10 ಆಗಸ್ಟ್ 2025 ರಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾನಿಲಯ ಬಳ್ಳಾರಿ ಇಲ್ಲಿನ ಕುಲಪತಿಗಳಾದ ಡಾ. ಪ್ರೊ. ಎಂ. ಮುನಿರಾಜು ಉದ್ಘಾಟಿಸಲಿದ್ದು, ಪಲ್ಲವಿ ಗಾನಸಭಾ (ರಿ.) ಬೆಂಗಳೂರು ಇದರ ಅಧ್ಯಕ್ಷರಾದಕ ಗುರು ನಾದಬ್ರಹ್ಮ ವಿದ್ವಾನ್ ಶ್ರೀ ಪಲ್ಲವಿ ಸಿ. ವರದರಾಜ, ಮೋಹನ ತರಂಗಿಣಿ ಸಂಗೀತ ಸಭಾ ಬೆಂಗಳೂರು ಇದರ ಕಾರ್ಯದರ್ಶಿಗಳಾದ ಶ್ರೀಮತಿ ಲಕ್ಷ್ಮೀದೇವಿ ಮೋಹನಕುಮಾರ ಉಪಸ್ಥಿತರಿರುವರು. ಈ…

Read More

ಮಂಗಳೂರು : ಅಮೃತ ಪ್ರಕಾಶ ಪತ್ರಿಕೆ ಮಂಗಳೂರು ಹಾಗೂ ಮಹರ್ಷಿ ವಾಲ್ಮೀಕಿ ವಸತಿ ಶಾಲೆ ಕದ್ರಿ ಮಂಗಳೂರು ಜಂಟಿ ಆಶ್ರಯದಲ್ಲಿ 112ನೇಯ ಸಾಹಿತ್ಯ ಅಭಿರುಚಿ ಕಾರ್ಯಕ್ರಮ ‌ದಿನಾಂಕ 9 ಆಗಸ್ಟ್ 2025ರ ಶನಿವಾರ ಮಹರ್ಷಿ ವಾಲ್ಮೀಕಿ ಸಭಾಂಗಣದಲ್ಲಿ ಬೆಳಿಗ್ಗೆ 10:30 ಕ್ಕೆ ನಡೆಯಲಿದೆ. ಸಾಹಿತ್ಯ ಅಭಿರುಚಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹರ್ಷಿ ವಾಲ್ಮೀಕಿ ವಸತಿ ಶಾಲೆ ಇಲ್ಲಿನ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸುನೀತಾ ವಹಿಸಲಿದ್ದು, ಮುಖ್ಯ ಸಂಪನ್ಮೂಲ ಅತಿಥಿಗಳಾಗಿ ಕರಾವಳಿ ಡೈಲಿ ನ್ಯೂಸ್ ಇದರ ಚೀಪ್ ಎಡಿಟರ್ ಆಗಿರುವ ಮಹೇಶ್ ಕನ್ನೇಶ್ವರ, ಹಿರಿಯ ಬರಹಗಾರರಾದ ಸುಬ್ರಾಯ ಭಟ್, ದೂರದರ್ಶನ ಸುದ್ದಿ ವಾಹಿನಿಯ ಜಿಲ್ಲಾ ವರದಿಗಾರರಾದ ರಾಜೇಶ್ ದಡ್ಡಂಗಡಿ, ಲೇಖಕಿ ನಿರ್ಮಲ ಉದಯಕುಮಾರ್ ಭಾಗವಹಿಸಲಿರುವರು. ಕಾರ್ಯಕ್ರಮದ ನಿರೂಪಣೆಯನ್ನು ಸುರೇಖಾ ಯಾಳವಾರ ಮಾಡಲಿರುವರು ಎಂದು ಅಮೃತ ಪ್ರಕಾಶ ಪತ್ರಿಕೆಯ ಸಂಪಾದಕಿ ಡಾ.ಮಾಲತಿ ಶೆಟ್ಟಿ ಮಾಣೂರು ತಿಳಿಸಿದ್ದಾರೆ.

Read More

ಮಂಗಳೂರು : ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾನಿಲಯ) ಇದರ ರಂಗ ಅಧ್ಯಯನ ಕೇಂದ್ರ ಪ್ರಸ್ತುತ ಪಡಿಸುವ ‘ಮಾನ್ಸೂನ್ ರಂಗೋತ್ಸವ -2’ ದಿನಾಂಕ 09 ಮತ್ತು 10 ಆಗಸ್ಟ್ 2025ರಂದು ಸಂಜೆ ಗಂಟೆ 6-44ಕ್ಕೆ ಮಂಗಳೂರಿನ ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾನಿಲಯ) ಎಲ್.ಸಿ.ಆರ್.ಐ.‌ ಸಭಾಂಗಣದಲ್ಲಿ ನಡೆಯಲಿದೆ. ದಿನಾಂಕ 09 ಆಗಸ್ಟ್ 2025ರಂದು ಮಹೇಶ್ ದತ್ತಾನಿ ಇವರ ನಿರ್ದೇಶನದಲ್ಲಿ ‘ಯೋಗಿ ಮತ್ತು ಭೋಗಿ’ ನಾಟಕ ಪ್ರದರ್ಶನ ಹಾಗೂ ದಿನಾಂಕ 10 ಆಗಸ್ಟ್ 2025ರಂದು ತ್ರಿಶಾ ಶೆಟ್ಟಿ, ಕೃತಿಕಾ ವರ್ಮ, ಫೈಜಲ್ ಅಹ್ಮದ್, ಭವ್ಯ ಭಾರಧ್ವಾಜ್, ಸೌಮ್ಯ ಝಕಾರಿಯಾ, ಅಭಿನವ್ ಗ್ರೋವರ್ ಇವರ ನಿರ್ದೇಶನದಲ್ಲಿ ಮೂರು ಕಿರು ನಾಟಕಗಳು ಪ್ರದರ್ಶನಗೊಳ್ಳಲಿವೆ. ಎರಡೂ ದಿನ ಉಚಿತ ಪ್ರವೇಶವಾಗಿದ್ದು, ಯಾವುದೇ ಸಭಾ ಕಾರ್ಯಕ್ರಮ ಇರುವುದಿಲ್ಲ, ನಾಟಕ ಸರಿಯಾದ ಸಮಯಕ್ಕೆ ಪ್ರಾರಂಭವಾಗುತ್ತದೆ.

Read More

ಮಂಜೇಶ್ವರ : ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಕಾಸರಗೋಡು ಮತ್ತು ಕನ್ನಡ ವಿಭಾಗ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜು ಮಂಜೇಶ್ವರ ಇವರ ಸಹಭಾಗಿತ್ವದಲ್ಲಿ ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈ ಸಂಸ್ಮರಣೆ ಮತ್ತು ಕೃತಿ ಬಿಡುಗಡೆ ಕಾರ್ಯಕ್ರಮವನ್ನು ದಿನಾಂಕ 09 ಆಗಸ್ಟ್ 2025ರಂದು ಪೂರ್ವಾಹ್ನ 10-00 ಗಂಟೆಗೆ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ. ಕ.ಸಾ.ಪ. ಕೇರಳ ಗಡಿನಾಡ ಘಟಕದ ಅಧ್ಯಕ್ಷರಾದ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಶಿವಶಂಕರ ಪಿ. ಇವರು ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಮೊಹಮದ್ ಅಲಿ ಕೆ. ಇವರು ಉದ್ಘಾಟನೆ ಮಾಡಲಿದ್ದು, ಅಧೀಕ್ಷಕರಾದ ದಿನೇಶ ಕೆ. ಇವರು ಶುಭಾಶಂಸನೆಗೈಯ್ಯಲಿದ್ದಾರೆ. ಕುಮಾರಿ ದೀಕ್ಷಿತ ಇವರ ‘ಧ್ವನಿ’ ಕೃತಿ ಬಿಡುಗಡೆಗೊಳ್ಳಲಿದ್ದು, ಕೃತಿಯ ಪರಿಚಯವನ್ನು ನಿವೃತ್ತ ಮುಖ್ಯೋಪಾಧ್ಯಯರಾದ ರಾಜಾರಾಮ ರಾವ್…

Read More

ಮೂಡುಬಿದಿರೆ : ಇಂಟರ್ ನ್ಯಾಶನಲ್ ಸರ್ಕ್ಯೂಟ್ 2025ರ ಅಂತಾರಾಷ್ಟ್ರೀಯ ಸೆಲೂನ್ 3-ಫೋಟೋ ಜರ್ನಲಿಸಂ ವಿಭಾಗದಲ್ಲಿ ಡಿಜಿ ಕ್ಲಬ್ ಗೋಲ್ಡ್ ಪ್ರಶಸ್ತಿಗೆ ಛಾಯಾಗ್ರಾಹಕ ರವಿ ಕೋಟ್ಯಾನ್ ಅವರು ಪಾತ್ರರಾಗಿದ್ದಾರೆ. ಮೂಡುಬಿದಿರೆಯಲ್ಲಿ ಸುಮಾರು 3 ದಶಕಗಳ ಕಾಲ ಫೋಟೋಗ್ರಫಿಯಲ್ಲಿ ಕಾರ್ಯನಿರ್ವಹಿಸಿದ ಮಾನಸ ಡಿಜಿಟಲ್‌ನ ರವಿ ಕೋಟ್ಯಾನ್‌ರಿಗೆ ಈ ಬಾರಿ ಅಂತರ್ ರಾಷ್ಟ್ರ ಮಟ್ಟದ ಹಲವಾರು ಪ್ರಶಸ್ತಿಗಳು ಲಭಿಸಿದೆ. ವೇಣೂರು ಮಸ್ತಕಾಭಿಷೇಕ-2024ರ ಛಾಯಾಚಿತ್ರಕ್ಕಾಗಿ ಕ್ರೆಡೆನ್ಸ್: ಆಳ್ವಾಸ್ ಸಂಘಟಿಸಿದ ಸ್ಪೀಪಲ್ ಚೇಸ್ ವಾಟರ್ ಜಂಪ್ ಫೋಟೋ ಸಲ್ಲಿಕೆಗಾಗಿ ಕಲ್ಕಿ 2025 (ಡಿಜಿಟಲ್)ರ ಜ್ಯುಪಿಟರ್ ಸೊಸೈಟಿ ಆಫ್ ಫೋಟೋ ಗ್ರಫಿ (ಜೆ. ಎಸ್‌. ಸಿ. ಇಂಡಿಯಾ) ಮೆಡಲ್, ಡಿಜಿಟಲ್ ವಿಭಾಗದಲ್ಲಿ ಸಲ್ಲಿಸಿದ ಪ್ರಕೃತಿ ಚಿತ್ರಕ್ಕಾಗಿ ಹ್ಯಾಪ್ ಇಂಟರ್ ನ್ಯಾಶನಲ್ ಸ್ಯಾಲೊನ್ 2025. ಎಫ್‌. ಐ. ಪಿ. ರಿಬ್ಬನ್‌ ಮನ್ನಣೆ, ಆಳ್ವಾಸ್‌ನಲ್ಲಿ ನಡೆದ ಹರ್ಡಲ್ಸ್‌ನ ಚಿತ್ರ ಸಲ್ಲಿಕೆಗಾಗಿ ಜ್ಯೂರಿ ಚಾಯ್ಸ್-ಕಲ್ಕಿ 2025 ಡಿಜಿಟಲ್‌ನ ಜೆ. ಎಸ್‌. ಪಿ. ವರ್ಲ್ಡ್ ವೈಡ್ ಗೌರವ ಮನ್ನಣೆ, ಕ್ರಿಯೇಟಿವ್ ಐಸ್ ಇಂಟರ್ ನ್ಯಾಶನಲ್-ಸರ್ಕ್ಯೂಟ್ 2025…

Read More

ಮಂಗಳೂರು : ಮಣಿ ಕೃಷ್ಣಸ್ವಾಮಿ ಅಕಾಡೆಮಿ ವತಿಯಿಂದ ಪ್ರಸ್ತುತ ಪಡಿಸುವ ಗಾಯನ ಸಂಗೀತ ಕಾರ್ಯಾಗಾರವು ದಿನಾಂಕ 16, 17, 23 ಮತ್ತು 24 ಆಗಸ್ಟ್ 2025ರಂದು ಸಂಜೆ 7-00 ಗಂಟೆಯಿಂದ 8-15 ರವೆರೆಗೆ ಆನ್ ಲೈನ್ ನಲ್ಲಿ ನಡೆಯಲಿದೆ. ವಿದುಷಿ ಪ್ರಾರ್ಥನಾ ಸಾಯಿ ನರಸಿಂಹನ್ ಇವರು ಕಾರ್ಯಾಗಾರವನ್ನು ನಡೆಸಿಕೊಡಲಿದ್ದು, ಮತ್ತುಸ್ವಾಮಿ ದೀಕ್ಷಿತರ್ ಅಪರೂಪದ ಸಂಯೋಜನೆಯನ್ನು ಕಲಿಸಲಾಗುವುದು. ನೋಂದಾವಣೆ ಮತ್ತು ಹೆಚ್ಚಿನ ಮಾಹಿತಿಗಾಗಿ ವಿಭು ರಾವ್ 74119 16098 ಸಂಖ್ಯೆಯನ್ನು ಸಂಪರ್ಕಿಸಿರಿ.

Read More

ಸುರತ್ಕಲ್ : ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿ (ರಿ.) ಇದರ ‘ನಲ್ವತ್ತರ ನಲಿವು -14’ ಸರಣಿಯಲ್ಲಿ ಪ್ರಸ್ತುತ ಪಡಿಸುವ ‘ನೃತ್ಯೋಲ್ಲಾಸ ಕಾರ್ಯಕ್ರಮ’ವನ್ನು ದಿನಾಂಕ 10 ಆಗಸ್ಟ್ 2025ರಂದು ಸಂಜೆ ಗಂಟೆ 4-45ಕ್ಕೆ ನಾಟ್ಯಾಂಜಲಿ ಕಲಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿಯ ಗೌರವಾಧ್ಯಕ್ಷರಾದ ಕರ್ಮಯೋಗಿ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಇವರು ವಹಿಸಲಿದ್ದು, ಶಾಂತಲಾ ನಾಟ್ಯ ಪ್ರಶಸ್ತಿ ಪುರಸ್ಕೃತ ಗುರು ಉಳ್ಳಾಲ ಮೋಹನ ಕುಮಾರ್ ಇವರು ದೇವತಾ ಜ್ಯೋತಿ ಪ್ರಜ್ವಲನೆ ಮಾಡಲಿದ್ದಾರೆ. ಶ್ರೀವಿದ್ಯಾ ಇವರ ಶಿಷ್ಯೆ ಕುಮಾರಿ ರೆಮೋನ ಎವಟ್ ಪಿರೇರಾ ಇವರನ್ನು ಅಭಿನಂದಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಸಂಸ್ಥೆಯ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನಗೊಳ್ಳಲಿದೆ.

Read More

ಉಡುಪಿ : ಚಿರಂತನ ಚಾರಿಟೇಬಲ್ ಟ್ರಸ್ಟ್ ಸುರತ್ಕಲ್, ಸಪ್ತಕ ಬೆಂಗಳೂರು ಮತ್ತು ಮ್ಯಾಕ್ಸ್ ಮೀಡಿಯಾ ಉಡುಪಿ ಇವರ ಜಂಟಿ ಸಹಯೋಗದೊಂದಿಗೆ ಪ್ರಸ್ತುತ ಪಡಿಸುವ ‘ಸ್ವರ್ ಸ್ವಾದ್’ ಸಂಗೀತ ಕಛೇರಿಯನ್ನು ದಿನಾಂಕ 10 ಆಗಸ್ಟ್ 2025ರಂದು ಸಂಜೆ 4-00 ಗಂಟೆಗೆ ಉಡುಪಿಯ ಯಕ್ಷಗಾನ ಕಲಾರಂಗದ ಇನ್ಫೋಸಿಸ್ ಹಾಲ್ ನಲ್ಲಿ ಆಯೋಜಿಸಲಾಗಿದೆ. ಗಿಲಿಗುಂಡಿಯ ಕುಮಾರಿ ಸಂಗೀತ ಹೆಗ್ಡೆ ಇವರ ಹಾಡುಗಾರಿಕೆ, ತನ್ಮಯ್ ಡಿಯೊಚಾಕೆ ಇವರ ಹಾರ್ಮೋನಿಯಂ ಏಕವ್ಯಕ್ತಿ ವಾದನ ಮತ್ತು ವಿದುಷಿ ಗೌರಿ ಪತಾರೆ ಇವರ ಹಾಡುಗಾರಿಕೆಗೆ ತಬಲಾದಲ್ಲಿ ಗುರುಮೂರ್ತಿ ವೈದ್ಯ, ಆಶಾಯ್ ಕುಲಕರ್ಣಿ ಹಾಗೂ ಹಾರ್ಮೋನಿಯಂನಲ್ಲಿ ಗುರುಪ್ರಸಾದ್ ಹೆಗ್ಡೆ ಇವರು ಸಾಥ್ ನೀಡಲಿದ್ದಾರೆ.

Read More

ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಮಾಂಡ್ ಸೊಭಾಣ್ ಸಹಯೋಗದಲ್ಲಿ ಕೊಂಕಣಿ ಮಾನ್ಯತಾ ದಿನಾಚರಣೆ ಅಂಗವಾಗಿ ದಿನಾಂಕ 20 ಆಗಸ್ಟ್ 2025ರಂದು ಬೆಳಿಗ್ಗೆ ಘಂಟೆ 9.00 ರಿಂದ ಸಂಜೆ 4.00ರವರೆಗೆ ಶಕ್ತಿನಗರದ ಕಲಾಂಗಣ್ ಸಭಾಂಗಣದಲ್ಲಿ ಕೊಂಕಣಿಯ ವಿವಿಧ ಮನೋರಂಜನಾ ಸ್ಪರ್ಧೆಗಳನ್ನು ಏರ್ಪಡಿಸಿದೆ. ಬೆಳಿಗ್ಗೆ ಘಂಟೆ 9.00ಕ್ಕೆ ಉದ್ಘಾಟನಾ ಸಮಾರಂಭದೊಂದಿಗೆ ವಿವಿಧ ಸ್ಪರ್ಧೆಗಳು ನಡೆಯಲಿವೆ. ಸಂಜೆ ಘಂಟೆ 4.00ಕ್ಕೆ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಮತ್ತು ಸಮಾರೋಪ ಸಮಾರಂಭ ನಡೆಯಲಿದೆ. ಪ್ರೌಢಶಾಲೆ ಮತ್ತು ಕಾಲೇಜು ವಿಭಾಗಗಳಲ್ಲಿ (ಪಿಯುಸಿ ಮತ್ತು ಪದವಿ ಜೊತೆಯಾಗಿ ಹಾಗೂ ಇತರೆ ಕೋರ್ಸುಗಳು ಸೇರಿ) ಈ ಸ್ಪರ್ಧೆಯು ನಡೆಯಲಿದ್ದು, ಪ್ರತಿ ತಂಡಕ್ಕೆ 20 ನಿಮಿಷಗಳ ಕಾಲಾವಕಾಶ ನೀಡಲಾಗಿದೆ. ನಿರ್ದಿಷ್ಟ ತಂಡಗಳು ಕಾರ್ಯನಿರ್ವಹಣೆ, ಕಿರುನಾಟಕ, ಭಾವಗೀತೆ, ಕಾಮಿಡಿ, ವೊವಿಯೊ, ಗುಮಟ್, ಸಂಗೀತ, ನೃತ್ಯ ಇತ್ಯಾದಿಗಳನ್ನು ಪ್ರದರ್ಶಿಸಬಹುದು. ಕಾರ್ಯನಿರ್ವಾಹಕರು (ಎಂ.ಸಿ.) ಸೇರಿದಂತೆ ತಂಡದಲ್ಲಿ ಕನಿಷ್ಟ 10, ಗರಿಷ್ಟ 15 ಸದಸ್ಯರು ಇರಬೇಕು. ಕಾರ್ಯಕ್ರಮದ ದಿನದಂದು ಬೆಳಿಗ್ಗೆ ಘಂಟೆ 9.00ಕ್ಕೆ ಪ್ರದರ್ಶನದ ಅನುಕ್ರಮವನ್ನು ತಿಳಿಸಲಾಗುವುದು.…

Read More

ಮಂಡ್ಯ : ಮಂಡ್ಯ ಜಿಲ್ಲೆಯ ರಾಜ್ಯಮಟ್ಟದ ಕನ್ನಡ ಮಾಸಪತ್ರಿಕೆ ‘ಜೀವನಾಡಿ’ ಪತ್ರಿಕೆಯು ರಾಜ್ಯಮಟ್ಟದ ಕನ್ನಡ ಸಾಹಿತ್ಯ ಸ್ಪರ್ಧೆ 2025 ಏರ್ಪಡಿಸಿದ್ದು, ಕನ್ನಡ ಕಥಾ ಸ್ಪರ್ಧೆ, ಕನ್ನಡ ಪ್ರಬಂಧ ಸ್ಪರ್ಧೆ ಮತ್ತು ಕನ್ನಡ ಕವನ ಸ್ಪರ್ಧೆಗಳು ನಡೆಯಲಿವೆ. ಕಥೆ, ಪ್ರಬಂಧ, ಕವಿತೆಗಳು ಸ್ವ-ರಚನೆಯಾಗಿದ್ದು, ಬೇರೆಲ್ಲೂ ಪ್ರಕಟವಾಗಿರಬಾರದು. ಕಥೆ 2,500 ಪದಗಳಿಗೆ ಮೀರಬಾರದು. ಪ್ರಬಂಧ 2,000 ಪದಗಳಿಗೆ ಮೀರಿರಬಾರದು. ಕವಿತೆ 24 ಸಾಲುಗಳನ್ನು ಮೀರಿರಬಾರದು. ಅನುವಾದಿತ ಕಥೆ ಪ್ರಬಂಧ ಕವಿತೆಗಳಿಗೆ ಅವಕಾಶವಿಲ್ಲ. ದಿನಾಂಕ 15 ಆಗಸ್ಟ್ 2025 ಕೊನೆಯ ದಿನವಾಗಿದ್ದು, ಈ ಕೆಳಗಿನ ವಿಳಾಸಕ್ಕೆ ಕಳುಹಿಸತಕ್ಕದ್ದು. ಜೀವನಾಡಿ ಮಾಸಪತ್ರಿಕೆ, ನಂ.3, ‘ಚೈತ್ರ’, ಚಾಲುಕ್ಯ ರಸ್ತೆ, ನಾಡಪ್ರಭು ಕೆಂಪೇಗೌಡ ಬಡಾವಣೆ, ಕಿರಗಂದೂರು ಬಿ.ಒ., ಮಂಡ್ಯ. ಹೆಚ್ಚಿನ ವಿವರಗಳಿಗೆ ಡಾ. ಎಚ್.ಎಸ್. ಮುದ್ದೇಗೌಡ 98451 98098 ಅಥವಾ ಎಂ.ಪಿ. ಕೇಶವ ಕಾಮತ್ 94483 46276 ಸಂಖ್ಯೆಯನ್ನು ಸಂಪರ್ಕಿಸಿರಿ. ಸನ್ಮಾನ ಪ್ರಶಸ್ತಿ ಫಲಕ ಪ್ರಶಸ್ತಿ ಪತ್ರ ಮತ್ತು ನಗದು ಬಹುಮಾನ ನೀಡಲಾಗುವುದು.

Read More