Subscribe to Updates
Get the latest creative news from FooBar about art, design and business.
Author: roovari
ಕುಂದಾಪುರ : ಕರ್ನಾಟಕ ಗಮಕ ಕಲಾ ಪರಿಷತ್ತು ಉಡುಪಿ ಜಿಲ್ಲೆ ಮತ್ತು ಕರ್ನಾಟಕ ಗಮಕ ಕಲಾ ಪರಿಷತ್ತು ಕುಂದಾಪುರ ಘಟಕ ಇವರ ಸಹಯೋಗದಲ್ಲಿ ಕನಕ ಜಯಂತಿಯ ಪ್ರಯುಕ್ತ ಹಮ್ಮಿಕೊಂಡಿದ್ದ ಕನಕದಾಸ ಕೀರ್ತನೆಗಳ ಗಾಯನ ಮತ್ತು ಗಮಕ ವಾಚನ ವ್ಯಾಖ್ಯಾನ ಕಾರ್ಯಕ್ರಮವು ದಿನಾಂಕ 30-11-2023ರಂದು ಕುಂದಾಪುರದ ‘ನುಡಿ’ಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕುಂದಾಪುರದ ಖ್ಯಾತ ನ್ಯಾಯವಾದಿ ಎ.ಎಸ್.ಎನ್. ಹೆಬ್ಬಾರ್ ಮಾತನಾಡಿ “ಪುರಾಣ ಹಾಗೂ ಆಧುನಿಕ ಕಾವ್ಯಗಳ ಸುಲಭ ಅರ್ಥೈಸುವಿಕೆಗೆ ಗಮಕ ಕಲೆ ಪೂರಕವಾದುದು. ಕಾವ್ಯಗಳಲ್ಲಿನ ಸಾಂದರ್ಭಿಕವಾದ ಸಾಹಿತ್ಯ ಶ್ರೀಮಂತಿಕೆಗೆ ರಸಬದ್ಧವಾದ ರಾಗಗಳ ಸಂಯೋಜನೆಯು ಶೋತೃಗಳಿಗೆ ಹೃದ್ಯವಾಗುತ್ತದೆ. ಮನೆಮನೆಗಳಲ್ಲಿ ಗಮಕ ಕಲೆ ಪ್ರಸ್ತುತಗೊಳ್ಳಬೇಕು ಯುವ ಮನಸುಗಳನ್ನು ಅರಳಿಸಬೇಕು.” ಎಂದು ಅವರು ಅಭಿಪ್ರಾಯಪಟ್ಟರು. ಗಮಕಿಯಾಗಿ ಶ್ರೀಮತಿ ಮಂಜುಳಾ ಸುಬ್ರಮಣ್ಯ ಮಂಚಿ ಹಾಗೂ ವ್ಯಾಖ್ಯಾನಕಾರರಾಗಿ ಸಂಸ್ಕೃತ ವಿದ್ವಾಂಸರಾದ ಡಾ. ರಾಘವೇಂದ್ರ ರಾವ್ ಪಡುಬಿದ್ರೆ ಇವರು ದ.ರಾ. ಬೇಂದ್ರೆಯವರ ಮೇಘದೂತ ಕಾವ್ಯ ಭಾಗವನ್ನು ಪ್ರಸ್ತುತ ಪಡಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್ತು ಉಡುಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಮಾರ್…
ಕೋಟ : ಕನಕದಾಸ ಅಧ್ಯಯನ ಸಂಶೋಧನಾ ಪೀಠ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಮಾಹೆ ಹಾಗೂ ವಿವೇಕಾ ಪದವಿಪೂರ್ವ ಕಾಲೇಜು ಕೋಟ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯುವ ವಿಸ್ತರಣಾ ಉಪನ್ಯಾಸ ಮಾಲಿಕೆಯ 6ನೇ ಉಪನ್ಯಾಸ ಕಾರ್ಯಕ್ರಮವು ದಿನಾಂಕ 17-11-2023ರಂದು ಕೋಟದ ವಿವೇಕಾ ಪದವಿಪೂರ್ವ ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ‘ಕನಕದಾಸರ ಸಾಹಿತ್ಯದ ಭಾಷೆ-ಸಮಕಾಲೀನ ಪ್ರಜ್ಞೆ’ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದ ಕುಂದಾಪುರ ಹಕ್ಲಾಡಿಯ ಸರಕಾರಿ ಪ್ರೌಢಶಾಲೆಯ ಕನ್ನಡ ಉಪನ್ಯಾಸಕರಾದ ಡಾ. ಕಿಶೋರ್ ಕುಮಾರ್ ಶೆಟ್ಟಿಯವರು “ಕನಕದಾಸರು ಕಾವ್ಯ ಮತ್ತು ಕೀರ್ತನ ಕ್ಷೇತ್ರಗಳಲ್ಲಿ ಕೃಷಿ ಮಾಡಿದವರು. ಹಿರಿಯ ಮಾನವ ಬಂಧು ಎಂಬ ವಿಚಾರವನ್ನು ಸಾಂಸಾರಿಕ ಬದುಕಿನ ಅನುಭವ ರಹಸ್ಯವನ್ನು ಸಮಾಜದ ಲೋಪ, ದೋಷಗಳನ್ನು ಸಮರ್ಥವಾಗಿ ಗುರುತಿಸಿ ಮೃದುವಾಗಿ ಟೀಕಿಸಿದವರು. ರಾಮಾಯಣ, ಮಹಾಭಾರತ, ಭಾಗವತ, ವೇದೋಪನಿಷತ್ತು ಹಾಗೂ ಪುರಾಣ ಮುಂತಾದವುಗಳನ್ನು ಚೆನ್ನಾಗಿ ಬಲ್ಲ ಕನಕದಾಸರು ಸಂಗೀತದ ಸಹಚರ್ಯೆಯ ಸರಳ ಕನ್ನಡದ ಮೂಲಕ ಸಮಕಾಲೀನ ಸಮಾಜದ ಆರ್ಥಿಕ, ಸಾಮಾಜಿಕ, ನೈತಿಕ, ತಾತ್ವಿಕ, ಆಧ್ಯಾತ್ಮಿಕ ಮೌಲ್ಯಗಳನ್ನು ಕಾವ್ಯ ಮತ್ತು…
ಮಂಗಳೂರು : ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಎಲ್.ಸಿ.ಆರ್.ಐ. ಆಡಿಟೋರಿಯಂನಲ್ಲಿ ದಿನಾಂಕ 25-11-2023ರಂದು ಮೆಲ್ಬಾ ಇವೆಂಟ್ಸ್ ಬಹು ನಿರೀಕ್ಷಿತ ಸಂಗೀತ ಸುನಾಮಿಯ 5ನೇ ಆವೃತ್ತಿಯ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲ ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ. ವಹಿಸಿ “ಸಂಗೀತ ಹೂವಿನ ತೋಟವಿದ್ದಂತೆ ಈ ತೋಟದಿಂದ ಬರುವಂತಹ ಪ್ರತಿಭೆಗಳು ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲಿ” ಎಂದು ಹಾರೈಸಿದರು. ‘ಸಾಜನ್’ ಖ್ಯಾತಿಯ ಬಾಲಿವುಡ್ ನಿರ್ದೇಶಕ ಮತ್ತು ಛಾಯಾಗ್ರಾಹಕ ಲಾರೆನ್ಸ್ ಡಿಸೋಜಾ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಅತಿಥಿಗಳೆಲ್ಲ ಸೇರಿ ಮೆಲ್ಬಾ ಇವೆಂಟ್ಸ್ ನ ಲೋಗೋವನ್ನು ಬಿಡುಗಡೆ ಮಾಡಿದರು. ಈ ಸಂಗೀತ ಸುನಾಮಿಯ ಕಾರ್ಯಕ್ರಮದಲ್ಲಿ ಅಧಿಕ ಸಂಖ್ಯೆಯಲ್ಲಿ ಸಂಗೀತಾಭಿಮಾನಿಗಳು ಭಾಗವಹಿಸಿದ್ದರು. ಉದಯೋನ್ಮಖ ಗಾಯಕಿ ರಿಶಲ್ ಕ್ರಾಸ್ತಾ ಮತ್ತು ರೋನಿ ಕ್ರಾಸ್ತಾ ನೇತೃತ್ವದಲ್ಲಿ ಪ್ರತಿಭಾವಂತ ಕಲಾವಿದರ ಬಳಗ 4 ಗಂಟೆಗಳ ಕಾರ್ಯಕ್ರಮದಲ್ಲಿ 26 ಆಕರ್ಷಕ ಹಾಡುಗಳ ಮೂಲಕ ಪ್ರೇಕ್ಷಕರನ್ನು ಮೋಡಿಮಾಡಿತು. ಈ ಕಾರ್ಯಕ್ರಮದಲ್ಲಿ ಲಯನ್ಸ್…
ಬೆಂಗಳೂರು : ಬೆಂಗಳೂರಿನ ಗಾಂಧಿ ಭವನದಲ್ಲಿ ಲೇಖಕಿ ಡಾ.ಕೆ. ಷರೀಫಾ ಅವರಿಗೆ ಮುಸ್ಲಿಮ್ ಲೇಖಕರ ಸಂಘದಿಂದ ಕೊಡಮಾಡುವ 2022ನೇ ಸಾಲಿನ ಮರ್ಹೂಮ್ ಯು.ಟಿ. ಫರೀದ್ ಸ್ಮರಣಾರ್ಥ ‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ ಪ್ರದಾನ ಮತ್ತು ಕನ್ನಡ, ಉರ್ದು ಕವಿಗೋಷ್ಠಿ ಸಮಾರಂಭವು ದಿನಾಂಕ 29-11-2023ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿದ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಮಾತನಾಡಿ “ವಾರಾಂತ್ಯಗಳಲ್ಲಿ ಪೋಷಕರು ತಮ್ಮ ಮಕ್ಕಳನ್ನು ಮಾಲ್, ಬೀಚ್ ಹಾಗೂ ವಸ್ತು ಪ್ರದರ್ಶನಗಳ ಮಳಿಗೆಗಳಿಗೆ ಭೇಟಿ ನೀಡುವಂತೆ ಸಾಹಿತ್ಯದ ಕಾರ್ಯಕ್ರಮಗಳಲ್ಲಿ ಕೂಡ ಭಾಗವಹಿಸಲು ಪ್ರೋತ್ಸಾಹ ನೀಡುವ ಮೂಲಕ ಬಾಲ್ಯದಲ್ಲಿಯೇ ಮಕ್ಕಳಿಗೆ ಸಾಹಿತ್ಯಾಸಕ್ತಿ ಬೆಳೆಸಬೇಕು. ಇಂಟರ್ನೆಟ್ನ ಈ ಯುಗದಲ್ಲಿ ಸಾಹಿತ್ಯಾಸಕ್ತಿ ಬೆಳೆಸಿಕೊಳ್ಳುವವರ ಸಂಖ್ಯೆ ಕ್ಷೀಣಿಸುತ್ತಿದೆ. ಆದರೆ, ವಾಸ್ತವವಾಗಿ ಸಾಹಿತ್ಯ ಕ್ಷೇತ್ರವು ಜೀವನದಲ್ಲಿ ಬೆಳೆಯಲು ವ್ಯಾಪಕ ಅವಕಾಶ ಒದಗಿಸುತ್ತದೆ. ಸಾಹಿತ್ಯವನ್ನು ಉಳಿಸಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ. ಹಾಗಾಗಿ, ಮನೆಯಲ್ಲಿಯೇ ಮಕ್ಕಳಿಗೆ ಬಾಲ್ಯದಿಂದಲೇ ಪೋಷಕರು ಈ ಕಾರ್ಯಕ್ಕೆ ಉತ್ತೇಜನ ನೀಡಬೇಕು. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಒಂದು ಕಾಲದಲ್ಲಿ ಮುಸ್ಲಿಮರ…
ವಾಮಂಜೂರು : ಅಂಗವಿಕಲರ ಕಲ್ಯಾಣ ಸಂಸ್ಥೆ ಮಂಗಳೂರು ಮತ್ತು ಎಸ್.ಡಿ.ಎಂ. ಮಂಗಳ ಜ್ಯೋತಿ ಸಮಗ್ರ ಶಾಲೆ ವಾಮಂಜೂರು ಇದರ ಆಶ್ರಯದಲ್ಲಿ ಕೀರ್ತಿಶೇಷ ರತ್ನಮ್ಮ ಹೆಗ್ಡೆಯವರ ಸ್ಮರಣಾರ್ಥ ವಿಶೇಷ ಸಾಮರ್ಥ್ಯವುಳ್ಳ ಮಕ್ಕಳಿಗಾಗಿ ದ.ಕ. ಮತ್ತು ಉಡುಪಿ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ‘ಕಲೋತ್ಸವ 2023’ ಕಾರ್ಯಕ್ರಮ ವಾಮಂಜೂರಿನ ಎಸ್.ಡಿ.ಎಂ. ಮಂಗಳ ಜ್ಯೋತಿ ಸಮಗ್ರ ಶಾಲೆಯಲ್ಲಿ ದಿನಾಂಕ 29-11-2023ರಂದು ನಡೆಯಿತು. ಉಜಿರೆ ಎಸ್.ಡಿ.ಎಂ. ಎಜುಕೇಶನ್ ಸೊಸೈಟಿ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಶ್ರೀಯುತ ಸೋಮಶೇಖರ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ “ಶಿಕ್ಷಣ ಎಂದರೆ ವ್ಯಕ್ತಿಯ ನಡವಳಿಕೆ. ಅದನ್ನು ರೂಪಿಸುವಲ್ಲಿ ಎಸ್.ಡಿ.ಎಂ. ಸಂಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳಿಗೆ ಸೂಕ್ತ ಅವಕಾಶ ಕಲ್ಪಿಸಿದರೆ ಮಕ್ಕಳ ಸುಪ್ತ ಪ್ರತಿಭೆಗಳು ಅನಾವರಣಗೊಳ್ಳುತ್ತವೆ” ಎಂದರು. ಮುಖ್ಯ ಅತಿಥಿಯಾಗಿ ಡಾ. ಕೆ.ದೇವರಾಜ್ ಖಜಾಂಚಿಗಳು ಅಂಗವಿಕಲರ ಕಲ್ಯಾಣ ಸಂಸ್ಥೆ (ರಿ) ಮಂಗಳೂರು ಉಪಸ್ಥಿತರಿದ್ದು “ಮಕ್ಕಳ ಪ್ರತಿಭೆಗಳಿಗೆ ಕಲೋತ್ಸವ ಒಂದು ಉತ್ತಮ ವೇದಿಕೆ ಉತ್ತಮ” ಎಂದರು. ಫ್ರೌಡಶಾಲಾ ಮುಖ್ಯೋಪಾಧ್ಯಾಯ ಶ್ರೀಯುತ ರಮೇಶ್ ಆಚಾರ್ಯ ಸ್ವಾಗತಿಸಿ, ಶಾಲಾ ಆಡಳಿತಾಧಿಕಾರಿ…
ಮಂಗಳೂರು : ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಮಂಗಳೂರು ತಾಲೂಕು ಸಮಿತಿಯ ಪದಾಧಿಕಾರಿಗಳಿಂದ ವಿವಿಧ ರಾಮಾಯಣಗಳ ಆಯ್ದ ಭಾಗಗಳ ವಾಚನ ‘ರಾಮಕಥಾ ವೈವಿಧ್ಯ’ವು ದಿನಾಂಕ 03-02-2024ರಂದು ಅಪರಾಹ್ನ 3 ಗಂಟೆಗೆ ಕೊಡಿಯಾಲಬೈಲು ಶಾರದಾ ವಿದ್ಯಾಲಯದ ಧ್ಯಾನ ಮಂದಿರದಲ್ಲಿ ನಡೆಯಲಿದೆ. ರಾಮಾಯಣ ಕೃತಿ ‘ತೊರವೆ ರಾಮಾಯಣ’ – ಶ್ರೀ ಸುರೇಶ್ ರಾವ್ ಅತ್ತೂರು, ‘ವಾಲ್ಮೀಕಿ ರಾಮಾಯಣ’ – ಶ್ರೀಮತಿ ಅಶ್ವಿನಿ, ‘ಅಧ್ಯಾತ್ಮ ರಾಮಾಯಣ’ – ಶ್ರೀಮತಿ ಉಷಾ ಅಮೃತ್ ಕುಮಾರ್, ‘ಅಧ್ಯಾತ್ಮ ರಾಮಾಯಣ’ – ಶ್ರೀಮತಿ ರವಿಕಲಾ ಸುಂದರ್, ‘ಮಂದಾರ ರಾಮಾಯಣ’, ಶ್ರೀಮತಿ ಗೀತಾ ಲಕ್ಷ್ಮೀಶ್, ‘ಶ್ರೀ ರಾಮಾಯಣ ದರ್ಶನಂ’ – ಶ್ರೀ ಚಂದ್ರಹಾಸ ಕಣಂತೂರು, ‘ತುಳಸಿ ರಾಮಾಯಣ’ – ಶ್ರೀಮತಿ ಕವಿತಾ, ‘ಜೈಮಿನಿ ಭಾರತ’ – ಶ್ರೀಮತಿ ಯಶೋದಾ ಕುಮಾರಿ, ‘ಪಂಪ ರಾಮಾಯಣ’ – ಶ್ರೀಮತಿ ಚಂದ್ರಪ್ರಭಾ, ‘ಮಂದಾರ ರಾಮಾಯಣ’ – ಶ್ರೀಮತಿ ಸಂಧ್ಯಾ ಆಳ್ವ ಇವರುಗಳು ವಾಚನ ಮತ್ತು ವ್ಯಾಖ್ಯಾನ ನಡೆಸಿಕೊಡಲಿದ್ದಾರೆ. ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಮಂಗಳೂರು ತಾಲೂಕು…
ಉಳ್ಳಾಲ : ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ವತಿಯಿಂದ ಸಾಧಕರಿಗೆ ಗೌರವ ಸನ್ಮಾನ ಕಾರ್ಯಕ್ರಮವು ಕುತ್ತಾರಿನ ಹೊಟೇಲ್ ವೆಜಿನೇಷನ್ ಸಭಾಂಗಣದಲ್ಲಿ ದಿನಾಂಕ 25-11-2023ರಂದು ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಕ.ಸಾ.ಪ. ಜಿಲ್ಲಾ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ್ ಮಾತನಾಡಿ “ಸಮಾಜ ಕಟ್ಟುವ ಕೆಲಸ ನಮ್ಮಿಂದ ಆಗಬೇಕಾಗಿದೆ. ನೃತ್ಯ ಕ್ಷೇತ್ರದಲ್ಲಿ ಹಾಗೂ ಸಾಮಾಜಿಕವಾಗಿ ಸಾಧನೆಗಳನ್ನು ಮಾಡಿದ ಸಾಧಕರು ಜಿಲ್ಲಾಡಳಿತದಿಂದ ಗುರುತಿಸಲ್ಪಟ್ಟು, ಇದೀಗ ಅಬ್ಬಕ್ಕ ಉತ್ಸವ ಸಮಿತಿ ಅವರನ್ನು ಅಭಿನಂದಿಸುವ ಕಾರ್ಯಕ್ರಮವು ಮಹತ್ತರವಾದದ್ದು” ಎಂದು ಹೇಳಿದರು. ಈ ಸಂದರ್ಭದಲ್ಲಿ ಶಾಂತಲಾ ಪ್ರಶಸ್ತಿ ಪುರಸ್ಕೃತ ನಾಟ್ಯ ರತ್ನ ವಿದ್ವಾನ್ ಮೋಹನ್ ಕುಮಾರ್ ಇವರನ್ನು ತಮ್ಮ 90ನೇ ವರ್ಧಂತಿ ಅಂಗವಾಗಿ ಹಾಗೂ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ನೃತ್ಯ ಗುರುಗಳಾದ ವಿದ್ವಾನ್ ಪ್ರಮೋದ್ ಉಳ್ಳಾಲ್ ಮತ್ತು ಪ್ರಖ್ಯಾತ ಶಿಲ್ಪ ಕಲಾಕಾರರಾದ ಕಲಾರತ್ನ ಉಮೇಶ್ ಬೋಳಾರ್ ಅವರನ್ನು ಸನ್ಮಾನಿಸಲಾಯಿತು. ಡಾ. ದೇವಕಿ .ಆರ್ ಉಳ್ಳಾಲ್, ಶ್ರೀಮತಿ ಶಶಿಕಾಂತಿ ಉಳ್ಳಾಲ್ ಹಾಗೂ ಶ್ರೀ ಮತಿ ಅನುಪಮ ಸನ್ಮಾನಿತರ…
ಭದ್ರಾವತಿ : ಭದ್ರಾವತಿ ಹಳೇನಗರದ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ವಾಚನಾಭಿರುಚಿ ಕಮ್ಮಟ ಸಾಹಿತ್ಯ-ಸಂವಾದ-ಕುಶಲತೆ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ದಿನಾಂಕ 30-11-2023ರಂದು ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾದ ಶ್ರೀ ಡಿ. ಮಂಜುನಾಥ್ “ನಿತ್ಯದ ಸಮಾಚಾರಗಳನ್ನು ತಿಳಿಸುವ ಹಾಗೂ ಜನರಲ್ಲಿ ಜ್ಞಾನ ಬೆಳಸುವ ಪತ್ರಿಕೆಗಳನ್ನು ಕೊಳ್ಳಲು ನಿರಾಸಕ್ತಿವಹಿಸುವುದು ದುರಂತ. ದಿನಸಿ ಮತ್ತು ಆಹಾರಗಳಂತೆಯೇ ಪತ್ರಿಕೆಗಳು ನಮ್ಮ ಜೀವನದ ಭಾಗವಾಗಬೇಕು. ಆಗ ಮಾತ್ರ ಜ್ಞಾನಯುತ ಸಮಾಜದ ನಿರ್ಮಾಣ ಸಾಧ್ಯ. ಸಾಹಿತ್ಯ ಕಾರ್ಯಕ್ರಮಗಳು ಉಚಿತವಾಗಿರುವುದರಿಂದ ಜನರಲ್ಲಿ ನಿರ್ಲಕ್ಷ್ಯವಿದೆ. ಸಾಹಿತ್ಯ ಕಾರ್ಯಕ್ರಮಗಳು ಜ್ಞಾನ ಹಂಚುವ ಕಾರ್ಯಕ್ರಮಗಳು. ಉಚಿತಗಳು ನಮ್ಮ ಸ್ವಾವಲಂಬನೆ ಕಸಿದುಕೊಳ್ಳುತ್ತವೆ. ವಿದ್ಯಾರ್ಥಿನಿಲಯಗಳಲ್ಲಿ ಕೇವಲ ಊಟ, ಬಟ್ಟೆ ಹಾಗು ದೈನಂದಿನ ಬಳಕೆಯ ವಸ್ತುಗಳನ್ನು ನೀಡುವುದರ ಜೊತೆಗೆ ಸಾಹಿತ್ಯ ಜ್ಞಾನ ನೀಡುವುದು ಅಗತ್ಯ. ಇಂಥದೊಂದು ಪ್ರಯತ್ನದ ಫಲವಾಗಿ…
ಮೂಡುಬಿದಿರೆ : ಭಾರತೀಯ ಜೈನ್ ಮಿಲನ್ ಮೂಡುಬಿದಿರೆ ಮತ್ತು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮೂಡುಬಿದಿರೆ ತಾಲೂಕು ಘಟಕ ಇವರ ಜಂಟಿ ಸಹಯೋಗದಲ್ಲಿ ಜೈನ್ ಮಿಲನ್ ಇದರ ನವೆಂಬರ ತಿಂಗಳ ಮಾಸಿಕ ಸಭೆಯು ಮೂಡುಬಿದಿರೆ ಜೈನ ಪ್ರೌಢ ಶಾಲಾ ಸಭಾಂಗಣದಲ್ಲಿ ದಿನಾಂಕ 26-11-2023ರಂದು ನೆರವೇರಿತು. ಜೈನ್ ಮಿಲನ್ ಅಧ್ಯಕ್ಷರಾದ ಆನಡ್ಕ ದಿನೇಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಸಂಪತ್ ಸಾಮ್ರಾಜ್ಯ, ಪುಪ್ಪರಾಜ ಶೆಟ್ಟಿ, ಜಯರಾಜ ಕಂಬಳಿ, ಶ್ವೇತಾ ಜೈನ್, ಮಂಜುಳಾ ಅಭಯಚಂದ್ರ ಜೈನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ.ಸಾ.ಪ.ದ ಮೂಡುಬಿದಿರೆ ತಾಲೂಕು ಘಟಕದ ಅಧ್ಯಕ್ಷರಾದ ಕೆ.ವೇಣುಗೋಪಾಲ ಶೆಟ್ಟಿಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ ಇದರ ವಿಶ್ರಾಂತ ಪ್ರಾಧ್ಯಾಪಕರು ಹಾಗೂ ಕುಲಸಚಿವರಾಗಿದ್ದ ಡಾ.ಬಿ.ಪಿ.ಸಂಪತ್ ಕುಮಾರ್ ಅವರು ‘ಜೈನ ಕವಿಗಳ ಜೀವನದೃಷ್ಟಿ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಜೈನ್ ಮಿಲನ್ ವಲಯ –8ರ ಜೊತೆ ಕಾರ್ಯದರ್ಶಿ, ನೋಟರಿ ಹಾಗೂ ವಕೀಲರಾದ ಶ್ರೀಮತಿ ಶ್ವೇತಾ ಜೈನ್…
ಮಂಗಳೂರು : ಸಂತ ಅಲೋಶಿಯಸ್ ಕಾಲೇಜು ಕೊಂಕಣಿ ಸಂಸ್ಥೆಯ ನೇತೃತ್ವದಲ್ಲಿ ಸಾಹಿತ್ಯ ಅಕಾಡೆಮಿ, ನವದಿಲ್ಲಿ ವಿಶ್ವ ಕೊಂಕಣಿ ಕೇಂದ್ರ ಶಕ್ತಿನಗರ, ಮೈಕಲ್ ಡಿ’ಸೋಜಾ ವಿಶನ್ ಕೊಂಕಣಿ, ರಾಕ್ಣೊ ವಾರಪತ್ರಿಕೆಯ ಸಹಯೋಗದಲ್ಲಿ ಸಂತ ಅಲೋಶಿಯಸ್ ಕಾಲೇಜಿನಲ್ಲಿ ದಿನಾಂಕ 21-11-2023ರಂದು ಕೇಂದ್ರ ಸಾಹಿತ್ಯ ಪ್ರಶಸ್ತಿ ವಿಜೇತ ಕೊಂಕಣಿಯ ಹಿರಿಯ ಸಾಹಿತಿ ಎಡ್ವಿನ್ ಜೆ.ಎಫ್. ಡಿ’ಸೋಜಾರಿಗೆ ನುಡಿ ನಮನ ಸಲ್ಲಿಸುವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂತ ಅಲೋಶಿಯಸ್ ಕಾಲೇಜು ಪ್ರಾಂಶುಪಾಲ ವಂ| ಡಾ| ಪ್ರವೀಣ್ ಮಾರ್ಟಿಸ್ ಇವರು ಮಾತನಾಡಿ ‘ಕೊಂಕಣಿ ಸಾಹಿತ್ಯಕ್ಕೆ 33ಕ್ಕಿಂತಲೂ ಹೆಚ್ಚು ಕಾದಂಬರಿ, ನೂರಕ್ಕಿಂತ ಹೆಚ್ಚು ಸಣ್ಣಕಥೆಗಳನ್ನು ನೀಡಿರುವ ಎಡ್ವಿನ್ ಡಿ’ಸೋಜಾರ ಕೊಡುಗೆಯನ್ನು ಕೊಂಕಣಿಗರು ಸ್ಮರಿಸುವುದರೊಂದಿಗೆ ಅವರ ಅಪಾರ ಸಾಹಿತ್ಯವನ್ನು ಓದುವ ಮೂಲಕ ಎಡ್ವಿನ್ ಡಿ’ಸೋಜಾ ಅವರನ್ನು ಎಂದೆಂದೂ ಜೀವಂತವಾಗಿರಿಸೋಣ’ ಎಂದು ಹೇಳಿದರು. ಎಡ್ಡಿನ್ ಡಿ’ಸೋಜಾ ಅವರ ಸಾಹಿತ್ಯದ ಅಧ್ಯಯನದ ಮೂಲಕ ಅವರನ್ನು ಹೇಗೆ ಜೀವಂತವಾಗಿರಿಸಬಹುದು ಎನ್ನುವ ಬಗ್ಗೆ ಕೊಂಕಣಿ ಸಾಹಿತಿ ಕಿಶೂ ಬಾರ್ಕೂರ್ ಮತ್ತು ಎಡ್ವಿನ್ ಡಿ’ಸೋಜಾ ಇವರ ಕೇಂದ್ರ…