Author: roovari

ತೆಕ್ಕಟ್ಟೆ : ಕೋಟದ ಕಾರಂತ ಥೀಂಪಾರ್ಕನಲ್ಲಿ ‘ತಿಂಗಳ ಸಡಗರ-ಕಾರಂತ ಬಾಲ ಪುರಸ್ಕಾರ-ಸಂವಾದ ಕಾರ್ಯಕ್ರಮದಲ್ಲಿ ಕೊಮೆ ತೆಕ್ಕಟ್ಟೆಯ ಯಶಸ್ವಿ ಕಲಾವೃಂದದ ಬಾಲ ಕಲಾವಿದರು ‘ಯಕ್ಷಗಾನ-ವೈಭವ’ವನ್ನು ದಿನಾಂಕ 26-11-2023ರಂದು ಪ್ರಸ್ತುತಗೊಳಿಸಿದರು. ಈ ಕಾರ್ಯಕ್ರಮದಲ್ಲಿ ಚಿಣ್ಣರನ್ನು ಗೌರವಿಸಿ ಕೋಟದ ಸಾಂಸ್ಕೃತಿಕ ರಾಯಭಾರಿ ನರೇಂದ್ರಕುಮಾರ್ ಕೋಟ ಮಾತನಾಡುತ್ತಾ “ಮಕ್ಕಳಿಗೆ ಕಲೆಯ ಬೆಳಕು ತೋರಿದರೆ ಸಮಾಜ ಬೆಳಗುತ್ತದೆ. ಜೊತೆಗೆ ಅವರಿಗಷ್ಟು ಅವಕಾಶ ದೊರೆತರೆ ಕಲಿತ ಕಲೆಗೆ ಸಾರ್ಥಕ್ಯ ದೊರೆತ ಹಾಗೆ. ದೇವರಂತಿರುವ ಮಕ್ಕಳಿಗೆ ಅವಕಾಶ ಕಲ್ಪಿಸಿದರೆ ಮಕ್ಕಳ ಭವಿಷ್ಯ ಭವಿತವ್ಯವಾಗಬೇಕು. ಸನ್ಮಾರ್ಗದಲ್ಲಿ ಸಮಾಜವನ್ನು ಕೊಂಡೊಯ್ಯುವ ಜವಾಬ್ದಾರಿ ಎಲ್ಲರ ಮೇಲಿದೆ. ಇಂತಹ ಕಲಾ ಪ್ರಸ್ತುತಿಯ ಮೂಲಕ ಒಂದಷ್ಟು ಹೊತ್ತು ಕುಳಿತುಕೊಳ್ಳುವ, ಕಲೆಯನ್ನು ಆಸ್ವಾದಿಸುವ ಅವಕಾಶ ಲಭ್ಯವಾಗುತ್ತದೆ” ಎಂದು ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ಯಶಸ್ವಿ ಕಲಾವೃಂದದ ಪುಟಾಣಿ ವಿ.ಬಿ. ಪರಿಣಿತ ವೈದ್ಯಳಿಗೆ ಖ್ಯಾತ ಸಾಹಿತಿ ಬಿ.ಆರ್. ಲಕ್ಷ್ಮಣ್ ರಾವ್ ‘ಬಾಲ ಪುರಸ್ಕಾರ’ ನೀಡಿ ಗೌರವಿಸಿದರು. ಮಾಜಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೆ. ಸತೀಶ್ ಕುಂದರ್,…

Read More

ಅಮೇರಿಕಾ : ಆಕಾಶವಾಣಿ ಮತ್ತು ದೂರದರ್ಶನದ ‘ಎ’ ಗ್ರೇಡ್ ಕಲಾವಿದ, ಪ್ರಸಿದ್ಧ ಸ್ಯಾಕ್ಸೋಫೋನ್ ವಾದಕ ಧರ್ಮಸ್ಥಳದ ಶ್ರೀ ಬಿ. ಪ್ರಕಾಶ ದೇವಾಡಿಗರಿಗೆ ಅಮೇರಿಕಾದ ಪುತ್ತಿಗೆ ಮಠದಲ್ಲಿ ‘ಕೃಷ್ಣಾನುಗ್ರಹ ಪತ್ರ’ ಮನ್ನಣೆ ದೊರೆತಿದೆ. ಅಮೇರಿಕಾದ ಫಿನಿಕ್ಸ್ ಇಲ್ಲಿಯ ಪುತ್ತಿಗೆ ಮಠದ ಪೀಠಾಧಿಪತಿ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಅವರ ಮೂರನೇ ಬಾರಿಯ ಅಮೆರಿಕಾ ಕಲಾ ಪ್ರವಾಸದ ವೇಳೆ ನೀಡಿದ ಕಲಾ ಸೇವೆಯನ್ನು ಗೌರವಿಸಿ ದಿನಾಂಕ 05-11-2023ರಂದು ಈ ಪುರಸ್ಕಾರ ಪತ್ರ ನೀಡಿ ಅಭಿನಂದಿಸಿದರು. ಅಮೇರಿಕಾದ ಅರಿಝೋನಾ ಎಂಬಲ್ಲಿರುವ ಸುಜ್ಞಾನ ರಿಲಿಜಿಯಸ್ ಆ್ಯಂಡ್ ಚಾರಿಟೇಬಲ್ ಫೌಂಡೇಶನ್ ವೆಂಕಟಕೃಷ್ಣ ದೇವಸ್ಥಾನದಲ್ಲಿ ದಿನಾಂಕ 28-10-2023ರಿಂದ 04-11-2023ರವರೆಗೆ ನಡೆದ ‘ಶ್ರೀ ಯಜುರ್ವೇದ ಸಂಹಿತ ಯಾಗ’ ಮತ್ತು ‘ಸಹಸ್ರ ಅಥರ್ವಶೀರ್ಷ ಮಹಾಗಣಪತಿ ಯಾಗ’ ಕಾರ್ಯಕ್ರಮದಲ್ಲಿ ಶ್ರೀ ಪ್ರಕಾಶ ದೇವಾಡಿಗರು ಭಾರತೀಯ ಸಾಂಪ್ರದಾಯಿಕ ಸ್ಯಾಕ್ಸೋಫೋನ್ ವಾದನವನ್ನು ಮನೋಜ್ಞವಾಗಿ ನಡೆಸಿಕೊಟ್ಟಿದ್ದರು. ಅವರು ಈ ಬಾರಿ ಭಾರತದಿಂದ ಆಹ್ವಾನಿತರಾಗಿ ಅಮೇರಿಕಕ್ಕೆ ಮೂರನೇ ಬಾರಿಗೆ ಪ್ರಯಾಣ ಕೈಗೊಂಡಿದ್ದರು. ಸ್ವಾಮೀಜಿಗಳು ಪುರಸ್ಕಾರ ಪ್ರದಾನ ಮಾಡುವ ವೇಳೆ ಮಠದ ಪ್ರಧಾನ…

Read More

ಮಂಗಳೂರು : ಹಿರಿಯ ನಾಟಕಕಾರರೂ ರಂಗ ನಿರ್ದೇಶಕರೂ ಆಗಿರುವ ಸದಾನಂದ ಸುವರ್ಣರಿಗೆ 2023-2024ನೇ ಸಾಲಿನ ಪ್ರತಿಷ್ಠಿತ ‘ಬಿ.ವಿ. ಕಾರಂತ ಪ್ರಶಸ್ತಿ’ಯನ್ನು ಘೋಷಿಸಲಾಗಿದೆ. ಇದೀಗ ಅವರಿಗೆ 92 ವರ್ಷ ವಯಸ್ಸು. ಕನ್ನಡ ತುಳು ರಂಗಭೂಮಿಗೆ ನೂರಾರು ಅತ್ಯುತ್ತಮ ನಾಟಕಗಳನ್ನು ನಿರ್ದೇಶಿಸಿದ ರಂಗ ತಪಸ್ವಿ ಸದಾನಂದ ಸುವರ್ಣ ಸುದೀರ್ಘ ಕಾಲದ ಮುಂಬೈ ರಂಗ ಕಾಯಕದ ಬಳಿಕ ಮಂಗಳೂರಿಗೆ ಬಂದು ಇಲ್ಲಿ ಸೃಜನಶೀಲ ರಂಗ ನಿರ್ದೇಶಕರಾಗಿ ಮುನ್ನಡೆದವರು. ಮಂಗಳೂರಿನ ಹವ್ಯಾಸಿ ನಟ ನಟಿಯರಿಗೆ ‘ಉರುಳು’, ‘ಕೋರ್ಟ್ ಮಾರ್ಷಲ್’, ‘ಮಳೆ ನಿಲ್ಲುವವರೆಗೆ’ ಮುಂತಾದ ನಾಟಕಗಳನ್ನು ನಿರ್ದೇಶಿಸಿ ಸದಭಿರುಚಿಯ ರಂಗ ಕಾಯಕ ಹೇಗಿರಬೇಕು ಎಂದು ನಿರೂಪಿಸಿದವರು. ‘ಘಟಶ್ರಾದ್ದ’, ‘ಕುಬಿ ಮತ್ತು ಇಯಾಲ’, ‘ಗುಡ್ಡೆದ ಭೂತ’ ಹಾಗೂ ಡಾ. ಶಿವರಾಮ ಕಾರಂತರನ್ನು ಕುರಿತ ದೂರದರ್ಶನಕ್ಕಾಗಿ ನಿರ್ಮಿಸಿದ 13 ಕಂತುಗಳ ಧಾರವಾಹಿಗಳು ಸುವರ್ಣರ ಸೃಜನಶೀಲತೆಗೆ ಸಾಕ್ಷಿ. ಮಂಗಳೂರಿನ ಹವ್ಯಾಸಿ ರಂಗಭೂಮಿಗೆ ಸುವರ್ಣರ ಕೊಡುಗೆ ಅನನ್ಯವಾದುದು. ಪ್ರತಿಷ್ಠಿತ ‘ಬಿ.ವಿ. ಕಾರಂತ ಪ್ರಶಸ್ತಿ’ಯನ್ನು ಸುವರ್ಣರಿಗೆ ಕೊಡಮಾಡಿರುವುದು ನಿಜಕ್ಕೂ ಅರ್ಹತೆಗೆ ಸಂದ ಗೌರವವೇ ಸರಿ.

Read More

ಉಡುಪಿ : ಎಂಜಿಎಂ ಕಾಲೇಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ವತಿಯಿಂದ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ದಿನಾಂಕ 24-01-2024ರಂದು ನಡೆದ ‘ಸಂಸ್ಕೃತಿ ಉತ್ಸವ’ದಲ್ಲಿ ಕನ್ನಡದ ಪ್ರಸಿದ್ಧ ಸಾಹಿತಿ ಜಯಂತ ಕಾಯ್ಕಿಣಿ ಅವರಿಗೆ ಪ್ರಭಾವತಿ ಉಡುಪಿ ವಿಶ್ವನಾಥ ಶೆಣೈ ಪ್ರಾಯೋಜಿತ ‘ವಿಶ್ವಪ್ರಭಾ ಪುರಸ್ಕಾರ 2024’ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿದ ಅವರು ಮಾತನಾಡಿ, “ಕರಾವಳಿಯಲ್ಲಿ ಎಲ್ಲ ಕಾರ್ಯಕ್ರಮಗಳೂ ವೈಭವದಿಂದ ನಡೆಯುತ್ತವೆ. ಮನುಷ್ಯರಿಗೆ ಮನುಷ್ಯರೇ ಬೇಡವಾಗಿರುವುದು ಒಂದು ಶಾಪ. ಕಲೆ ಸಂಯುಕ್ತ ವಿಕಸನದ ಮಾರ್ಗವಾಗಿದೆ. ಕಲೆ ಎಲ್ಲರನ್ನೂ ಒಂದುಗೂಡಿಸುವ ಮಾಧ್ಯಮವಾಗಿದೆ. ಸಾಹಿತ್ಯ, ಶಿಕ್ಷಣ ಜ್ಞಾನವರ್ಧನೆಗೆ ಪೂರಕವಾಗಿದೆ” ಎಂದರು. ಸಾಹಿತಿ ಪ್ರೊ. ಕೆ.ಪಿ. ರಾವ್ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಅಭಿನಂದನಾ ಭಾಷಣಗೈದರು. ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕ ವಿಶ್ವನಾಥ ಶೆಣೈ, ಪ್ರಭಾ ಶೆಣೈ, ಅಧ್ಯಕ್ಷ ಪ್ರೊ. ಶಂಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.…

Read More

ಮಂಗಳೂರು : ಕಾಸರಗೋಡಿನ ರಂಗ ನಿರ್ದೇಶಕ, ನಟ, ಚಲನಚಿತ್ರ ನಿರ್ದೇಶಕ, ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಕಾಸರಗೋಡು ಚಿನ್ನಾ ಅವರಿಗೆ 2023ರ ಡಾ. ಪಿ. ದಯಾನಂದ ಪೈ ವಿಶ್ವ ಕೊಂಕಣಿ ರಂಗ ಶ್ರೇಷ್ಠ ಪುರಸ್ಕಾರ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ಜೊತೆಗೆ ಸ್ಮರಣಿಕೆ, ಶಾಲು, ಫಲ ತಾಂಬೂಲವನ್ನೊಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 11-02-2024ರಂದು ಆದಿತ್ಯವಾರ ಬೆಳಿಗ್ಗೆ ಗಂಟೆ 10.30ಕ್ಕೆ ಶಕ್ತಿನಗರದಲ್ಲಿರುವ ವಿಶ್ವ ಕೊಂಕಣಿ ಕೇಂದ್ರದಲ್ಲಿ ಜರಗಲಿದೆ. ಕಾಸರಗೋಡು ಚಿನ್ನಾ ಇವರು ಐದು ದಶಕಗಳಿಂದ ಕನ್ನಡ, ತುಳು, ಕೊಂಕಣಿ, ಮಲಯಾಳಂ ಭಾಷೆಗಳ ರಂಗಭೂಮಿಯಲ್ಲಿ ತನ್ನನ್ನು ತೊಡಗಿಸಿಕೊಂಡದ್ದಲ್ಲದೆ, ಹಲವಾರು ನಾಟಕಗಳನ್ನು ವಿವಿಧ ಭಾಷೆಗಳಿಗೆ ಅನುವಾದಿಸಿದ್ದಾರೆ. ಸಾವಿರಾರು ವಿದ್ಯಾರ್ಥಿಗಳಿಗೆ ರಂಗ ತರಬೇತಿ ನೀಡುವ ಮುಖಾಂತರ ಮುಂದಿನ ಜನಾಂಗಕ್ಕೂ ರಂಗಭೂಮಿಯ ಅಭಿರುಚಿ ಬೆಳೆಸಿದ್ದಾರೆ. ಇವರು ನಿರ್ದೇಶಿಸಿದ ನಾಟಕಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಗಳಿಸಿವೆ. ಮೂಕಾಭಿನಯದಲ್ಲೂ ಪರಿಣತಿ ಹೊಂದಿರುವ ಚಿನ್ನಾ ಸುಮಾರು ಮುನ್ನೂರಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಲ್ಲದೆ ವಿದೇಶಗಳಲ್ಲೂ ನಾಟಕಗಳನ್ನು…

Read More

ಮಂಗಳಾದೇವಿ : ಸಂಗೀತ ಪರಿಷತ್ ಮಂಗಳೂರು, ಭಾರತೀಯ ವಿದ್ಯಾಭವನ ಮತ್ತು ಮಂಗಳೂರಿನ ರಾಮಕೃಷ್ಣ ಮಠದ ಸಂಯುಕ್ತ ಆಶ್ರಯದಲ್ಲಿ ನಗರದ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಗಳ ‘ಮಂಗಳೂರು ಸಂಗೀತೋತ್ಸವ-2023’ವು ದಿನಾಂಕ 22-11-2023ರಂದು ಉದ್ಘಾಟನೆಗೊಂಡಿತು. ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜೀ ಅವರ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ಕ್ಷೇತ್ರ ಶರವು ಮಹಾಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀ ಶರವು ರಾಘವೇಂದ್ರ ಶಾಸ್ತ್ರಿಯವರು ಕಾರ್ಯಕ್ರಮ ಉದ್ಘಾಟಿಸಿದರು. ಮೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕಿ ಡಿ. ಪದ್ಮಾವತಿ, ಡಾ. ಸಿ.ಆರ್ ಬಲ್ಲಾಳ್, ಎಂ.ವಿ. ಪ್ರದೀಪ್ ಉಪಸ್ಥಿತರಿದ್ದರು. ಉದ್ಘಾಟನಾ ಕಾರ್ಯಕ್ರಮದ ಬಳಿಕ ದ್ವಂದ್ವ ವೀಣಾವಾದನವನ್ನು ಗೀತಾ ರಮಾನಂದ್ ಮತ್ತು ವಿ.ಗೋಪಾಲ್ ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ಶಾಂತಾ ನರಸಿಂಹನ್ ಮತ್ತು ಶ್ರೀ ಸುನಾದಕೃಷ್ಣ ಅಮೈ ಇವರುಗಳಿಗೆ ಗೌರವಾರ್ಪಣೆ ಮಾಡಲಾಯಿತು. ದಿನಾಂಕ 23-11-2023ರಂದು ಶ್ರೀಮತಿ ರಮ್ಯಾ ಕಿರಣ್ಮಯಿ ಚಗಂಟಿಯವರಿಂದ ಹಾಡುಗಾರಿಕೆ, ದಿನಾಂಕ 24-11-2023ರಂದು ಬೆಂಗಳೂರಿನ ಶ್ರೀ ಹೇಮಂತ್ ಮತ್ತು ಶ್ರೀ ಹೇರಂಬ ಇವರಿಂದ ಕೊಳಲುವಾದನ, ದಿನಾಂಕ 25-11-2023ರಂದು…

Read More

ಚಾಮರಾಜನಗರ : ಕರ್ನಾಟಕ ರಾಜ್ಯ ಬೀದಿ ನಾಟಕ ಕಲಾತಂಡಗಳ ಒಕ್ಕೂಟ, ಜಿಲ್ಲಾ ಬೀದಿ ನಾಟಕ ಕಲಾತಂಡಗಳ ಒಕ್ಕೂಟ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಬೀದಿ ನಾಟಕ ಉತ್ಸವ, ಸಫ್ದರ್ ಹಶ್ಮಿ ಪ್ರಶಸ್ತಿ ಪ್ರದಾನ ಹಾಗೂ ವಿಚಾರ ಸಂಕಿರಣಗಳು ನಗರದ ಡಾ.ರಾಜ್ ಕುಮಾರ್ ರಂಗಮಂದಿರದಲ್ಲಿ ದಿನಾಂಕ 25-11-2023ರಂದು ನಡೆದವು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಸಿ. ಪುಟ್ಟರಂಗ ಶೆಟ್ಟಿ “ಬೀದಿ ನಾಟಕ ಕಲಾವಿದರು ಸಮಾಜದಲ್ಲಿರುವ ಮೌಡ್ಯ ಹಾಗೂ ಕಂದಾಚಾರಗಳ ವಿರುದ್ಧ ಜನರಲ್ಲಿ ನಿರಂತರವಾಗಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರದ ಯೋಜನೆ, ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವಲ್ಲಿ ಬೀದಿ ನಾಟಕ ಕಲಾವಿದರ ಪಾತ್ರ ಅಪಾರವಾಗಿದೆ. ಸರ್ಕಾರ ತನ್ನ ಯೋಜನೆಗಳ ಅನುಷ್ಠಾನಕ್ಕೆ ಕಲಾವಿದರನ್ನು ಬಳಸಿಕೊಂಡು ಮರೆಯದೇ ಅವರಿಗೆ ಸೂಕ್ತ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು. ಜಾನಪದ ಕಲೆಗಳ ತವರಾದ ಜಿಲ್ಲೆಯಲ್ಲಿ ಸಾವಿರಾರು ಕಲಾವಿದರು ಹಲವು ಕಲೆಗಳನ್ನು ಮೈಗೂಡಿಸಿಕೊಂಡಿದ್ದಾರೆ. ಜಾನಪದ ಕಲೆಯನ್ನು ಪ್ರೋತ್ಸಾಹಿಸುವಂತೆ, ಬೀದಿನಾಟಕ ಕಲಾವಿದರನ್ನು ಪ್ರೋತ್ಸಾಹಿಸುವುದು ಸರ್ಕಾರದ ಕರ್ತವ್ಯವಾಗಿದೆ” ಎಂದು ಹೇಳಿದರು.…

Read More

ಮಣಿಪಾಲ : ಮಣಿಪಾಲ ಡಾ. ಪಳ್ಳತ್ತಡ್ಕ ಕೇಶವ ಭಟ್ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಮಣಿಪಾಲ ಡಾಟ್ ಸಂಸ್ಥೆಯ ಸಹಯೋಗದಲ್ಲಿ 9ನೇ ವರ್ಷದ ‘ಪ್ರಮಾ ಪ್ರಶಸ್ತಿ 2023’ ಪ್ರದಾನ ಸಮಾರಂಭ ಮಣಿಪಾಲದಲ್ಲಿ ದಿನಾಂಕ 19-11-2023ರಂದು ನಡೆಯಿತು. ಬಾಲಪ್ರತಿಭೆಗಳಾದ ಸಿದ್ಧಾರ್ಥ್ ಎಸ್. ಅಡಿಗ ಇವರಿಗೆ ವಿಜ್ಞಾನ ಕ್ಷೇತ್ರದ ಸಾಧನೆಗಾಗಿ , ಸಮೃದ್ಧಿ ಇವರಿಗೆ ಕನ್ನಡ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ, ನೇಹ ಇವರಿಗೆ ಚಿತ್ರಕಲಾ ಕ್ಷೇತ್ರದ ಸಾಧನೆಗಾಗಿ, ಕಾದಂಬರಿ ಡಿ. ಇವರಿಗೆ ವೀಣಾವಾದನ ಕ್ಷೇತ್ರದ ಸಾಧನೆಗಾಗಿ ಹಾಗೂ ಶ್ರೇಷ್ಠ ಆರ್. ಇವರಿಗೆ ನೃತ್ಯ ಕ್ಷೇತ್ರದ ಸಾಧನೆಗಾಗಿ ‘ಪ್ರಮಾ ಪ್ರಶಸ್ತಿ’ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ “ವನ್ ಗುಡ್ ಸ್ಟೆಪ್” ಸಂಸ್ಥಾಪಕರಾದ ಶ್ರೀಮತಿ ಅಮಿತ ಪೈ ಮಾತನಾಡಿ “ಮಕ್ಕಳ ಈಗಿನ ವಿದ್ಯಾಭ್ಯಾಸವನ್ನು ಜಾಗತಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ವಿಕಸನಗೊಳಿಸಿ ಅಳವಡಿಸಿಕೊಳ್ಳಿ.” ಎಂದು ಕಿವಿಮಾತು ಹೇಳಿದರು. ಟ್ರಸ್ಟಿನ ಪರವಾಗಿ ವಿದುಷಿ ಪವನ ಬಿ. ಆಚಾರ್ ಪ್ರಸ್ತಾವನೆಗೈದರು. ಪಳ್ಳತ್ತಡ್ಕ ಕೇಶವ ಭಟ್ ಇವರ ಮೊಮ್ಮಗಳಾದ ಪ್ರಮಾಳ ಸಂಸ್ಮರಣೆ ಮಾಡಲಾಯಿತು. ಟ್ರಸ್ಟಿನ…

Read More

ತೆಕ್ಕಟ್ಟೆ: ಶ್ರೀ ಕೈಲಾಸ ಕಲಾಕ್ಷೇತ್ರ ಟ್ರಸ್ಟ್ ತೆಕ್ಕಟ್ಟೆ ಸಹಕಾರದೊಂದಿಗೆ ‘ಶ್ರೀ ಸರಸ್ವತಿ ಲಲಿತಕಲಾ ಟ್ರಸ್ಟ್, ಮಣೂರು’ ಸಂಸ್ಥೆಯ ಉದ್ಘಾಟನಾ ಸಮಾರಂಭವು ದಿನಾಂಕ 26-11-2023 ರಂದು ತೆಕ್ಕಟ್ಟೆ ಹಯಗ್ರೀವದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಡುಪಿ ಜಿಲ್ಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಪೂರ್ಣಿಮಾ “ವಿವಿಧ ಕಲೆಗಳಿಂದ ಕೂಡಿದ ಉಡುಪಿ, ಕಲಾ ವಿಭಾಗದಲ್ಲಿ ಪರಿಪೂರ್ಣತೆಯನ್ನು ಸಾಧಿಸಿದೆ. ಕುಟುಂಬದಲ್ಲಿ ಒಂದೆರಡು ಮಕ್ಕಳನ್ನು ಹೊಂದಿರುವ ಪ್ರಸ್ತುತ ಕಾಲಘಟ್ಟದಲ್ಲಿ ಓದು ಮತ್ತು ಕಲೆ ಎರಡೂ ವಿಭಾಗದಲ್ಲಿ ಬೆಳೆಯುವಂತೆ ಪೋಷಕರು ಮಕ್ಕಳನ್ನು ಬೆಳೆಸುತ್ತಾರೆ. ಹಾಗಾಗಿ ಪ್ರತೀ ಕುಟುಂಬದಲ್ಲಿಯೂ ಬೇರೆ ಬೇರೆ ಕಲಾ ವಿಭಾಗದಲ್ಲಿ ತೊಡಗಿಸಿಕೊಂಡ ಮಕ್ಕಳನ್ನು ಇಂದಿನ ಕಾಲಘಟ್ಟದಲ್ಲಿ ಕಾಣಬಹುದು. ಸಂಸ್ಕೃತಿ, ಸಂಸ್ಕಾರಗಳು ಕಲಾ ಚಟುವಟಿಕೆಯಿಂದ ವೃದ್ಧಿಸುತ್ತದೆ.” ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕರಾದ ಶ್ರೀಮತಿ ಪಾರ್ವತಿ ಜಿ. ಐತಾಳ್ ಮಾತನಾಡಿ “ತೆಕ್ಕಟ್ಟೆಯ ಪರಿಸರಕ್ಕೆ ಸಾಂಸ್ಕೃತಿಕ ರಾಯಭಾರತ್ವಕ್ಕೆ ಇನ್ನೊಂದು ಸಂಸ್ಥೆ ‘ಸರಸ್ವತಿ ಲಲಿತಕಲಾ ಟ್ರಸ್ಟ್, ಮಣೂರು’ ಸೇರಿಕೊಂಡಿದೆ. ಸಂಸ್ಕೃತಿಯನ್ನು ಮನದಟ್ಟು ಮಾಡುವ…

Read More

ಸೋಮವಾರಪೇಟೆ : ಸೋಮವಾರಪೇಟೆ ಸೃಷ್ಟಿಯ ಚಿಗುರು ಕವಿ ಬಳಗ, ವಿದ್ಯಾ ನರ್ಸಿಂಗ್‌ ತರಬೇತಿ ಸಂಸ್ಥೆಯ ವತಿಯಿಂದ ಮಾನಸ ಸಭಾಂಗಣದಲ್ಲಿ ಕರ್ನಾಟಕ ಸುವರ್ಣ ಸಂಭ್ರಮ-2023 ಪ್ರಯುಕ್ತ ಆಯೋಜಿಸಿದ್ದ ಗೀತಗಾಯನ ಮತ್ತು ಕವಿಗೋಷ್ಠಿ ಕಾರ್ಯಕ್ರಮವು ದಿನಾಂಕ 25-11-2023ರಂದು ನಡೆಯಿತು. ಈ ಕಾರ್ಯಕ್ರಮವನ್ನು ಕನ್ನಡ ಸಿರಿ ಬಳಗದ ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಇವರು ಉದ್ಘಾಟಿಸಿ ಮಾತನಾಡುತ್ತಾ “ಕನ್ನಡ ನಾಡು, ನುಡಿಗಾಗಿ ಹೋರಾಟ ಮಾಡಿದ ಮಹನೀಯರ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು. ಕನ್ನಡ ಸಾಹಿತಿಗಳು, ಕನ್ನಡಪರ ಹೋರಾಟಗಾರರು ಮತ್ತು ಪತ್ರಕರ್ತರು ಕನ್ನಡ ಏಕೀಕರಣಕ್ಕಾಗಿ ತ್ಯಾಗ ಮಾಡಿದ್ದಾರೆ. ಇವತ್ತು ಕನ್ನಡ ನಮಗೆ ಅನ್ನ ಕೊಡುತ್ತಿರುವ ಭಾಷೆಯಾಗಿದೆ. ಕನ್ನಡ ಭಾಷಿಕರನ್ನು ಒಗ್ಗೂಡಿಸಿ ಕನ್ನಡ ನಾಡಿಗಾಗಿ ಸುದೀರ್ಘ ಹೋರಾಟ ನಡೆದಿದೆ. ಇದರಲ್ಲಿ ಅನೇಕರು ಪ್ರಾಣತ್ಯಾಗವನ್ನು ಮಾಡಿದ್ದಾರೆ. ಕನ್ನಡನಾಡು ಮತ್ತು ಭಾಷೆಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಕನ್ನಡಿಗರ ಮೇಲಿದೆ” ಎಂದು ಹೇಳಿದರು. ಕುಶಾಲನಗರ ತಾಲೂಕು ಕಸಾಪ ಮಾಜಿ ಅಧ್ಯಕ್ಷ ಎಂ.ಡಿ. ರಂಗಸ್ವಾಮಿ ಮಾತನಾಡಿ, “ಗ್ರಾಮೀಣ ಭಾಗದಲ್ಲಿ ಕನ್ನಡ ಮನಸ್ಸುಗಳು ಹೆಚ್ಚಿವೆ.…

Read More