Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಕರಾವಳಿ ಲೇಖಕಿಯರ – ವಾಚಕಿಯರ ಸಂಘದ ಆಶ್ರಯದಲ್ಲಿ ಮುಂಬಯಿ ಕನ್ನಡಿತಿ ಸುನೀತಾ ಎಂ. ಶೆಟ್ಟಿ ಇವರು ಪ್ರಾಯೋಜಿಸಿರುವ ‘ತೌಳವ ಸಿರಿ ಪ್ರಶಸ್ತಿ’ ಪ್ರದಾನ ಸಮಾರಂಭವು ದಿನಾಂಕ 12 ಏಪ್ರಿಲ್ 2025ರಂದು ಸಂಘದ ಸಭಾಂಗಣದಲ್ಲಿ ನಡೆಯಿತು. ಸಮಾರಂಭದಲ್ಲಿ ತುಳು ಭಾಷೆಯ ತ್ರೈಮಾಸಿಕ ಉಡಲ್ ಪತ್ರಿಕೆಯ ಸಂಪಾದಕಿ ಮೂಡುಬಿದಿರೆಯ ಜಯಂತಿ ಎಸ್. ಬಂಗೇರ ಇವರಿಗೆ ಈ ಸಾಲಿನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಪ್ರಶಸ್ತಿ ಪ್ರದಾನ ಮಾಡಿದ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾದ ತಾರಾನಾಥ ಗಟ್ಟಿ ಕಾಪಿಕಾಡ್ ಮಾತನಾಡಿ “ಹೆಣ್ಣು ಮಕ್ಕಳು ಮನೆಯಿಂದ ಹೊರಗೆ ಬರುವುದೂ ಕಷ್ಟವಾಗಿದ್ದ ಕಾಲಘಟ್ಟದಲ್ಲಿ ಬರೆಯುವುದೇ ದೊಡ್ಡ ಸವಾಲಾಗಿತ್ತು. ಈ ಸಮಯದಲ್ಲಿ ಸಾಕಷ್ಟು ಪರಿವರ್ತನೆಗಳಾಗಿದ್ದರೂ ಹೆಣ್ಣು ಮಗಳೊಬ್ಬಳು ನಿಶ್ಚಿತ ಪೋಷಕರಿಲ್ಲದೆಯೂ 16 ವರ್ಷಗಳಿಂದ ಸೀಮಿತ ಓದುಗ ವರ್ಗವನ್ನು ಹೊಂದಿರುವ ತುಳು ತ್ರೈಮಾಸಿಕ ಪತ್ರಿಕೆಯನ್ನು ನಡೆಸುತ್ತಿರುವುದು ಒಂದು ಚಾರಿತ್ರಿಕ ಸಾಧನೆಯಾಗಿದೆ. ಜಯಂತಿ ಬಂಗೇರ ಅವರು ಸ್ವತಃ ಬೆಳೆಯುವುದರೊಂದಿಗೆ, ಪತ್ರಿಕೆಯಲ್ಲಿ ತುಳುವಿನಲ್ಲಿ ಬರೆಯುವವರಿಗೂ ವೇದಿಕೆ ಒದಗಿಸಿದರು. ಸ್ವಪ್ರಯ ತ್ನದಿಂದ ಇಂದು…
ಹತ್ತೊಂಬತ್ತನೇ ಶತಮಾನದ ಉತ್ತರಾರ್ಧದಲ್ಲಿ ಕನ್ನಡ ಸಾಹಿತ್ಯವು ಮಹತ್ವದ ಬೆಳವಣಿಗೆಯನ್ನು ಕಂಡಿತು. ಕನ್ನಡಕ್ಕೆ ವಿವಿಧ ರೀತಿಯ ಗದ್ಯ ಕಥನಗಳು ಆಗಮಿಸಿದವು. ಈ ಮೂಲಕ ಕಾದಂಬರಿ ಪ್ರಕಾರವು ಭಾರತೀಯ ಸಾಹಿತ್ಯವನ್ನು ಪ್ರವೇಶಿಸಿತು. ಮಾಸ್ತಿ ವೆಂಕಟೇಶ ಅಯ್ಯಂಗಾರ್, ಶಿವರಾಮ ಕಾರಂತ, ಕುವೆಂಪು, ಕಡೆಂಗೋಡ್ಲು ಶಂಕರ ಭಟ್ಟ, ಮಿರ್ಜಿ ಅಣ್ಣಾರಾಯ, ರಾವ್ ಬಹದ್ದೂರ ಮೊದಲಾದವರ ಸಮಕಾಲೀನರಾಗಿ ಕಾದಂಬರಿ ಪ್ರಕಾರವನ್ನು ಬೆಳೆಸಿದವರ ಪೈಕಿ ಆನಂದಕಂದ ಕಾವ್ಯನಾಮದಲ್ಲಿ ಬರೆದ ಬೆಟಗೇರಿ ಕೃಷ್ಣ ಶರ್ಮರೂ ಒಬ್ಬರು. 16 ಏಪ್ರಿಲ್ 1900 – 30 ಅಕ್ಟೋಬರ್ 1982ರ ವರೆಗೆ ಜೀವಿಸಿದ್ದ ಇವರ ಸಾಹಿತ್ಯ ಸೇವೆ ಅನನ್ಯ. ಬಹುಮುಖ ಪ್ರತಿಭೆ ಮತ್ತು ಕ್ರಿಯಾಶೀಲ ವ್ಯಕ್ತಿತ್ವ ಹೊಂದಿದ್ದ ಇವರು ಹಲವು ಅಡಚಣೆಗಳ ನಡುವೆ ‘ಜಯಂತಿ’ ಮಾಸಪತ್ರಿಕೆಯನ್ನು ನಡೆಸುವ ಮೂಲಕ ಕನ್ನಡ ಸಾಹಿತ್ಯದ ಹೊಸ ಪ್ರತಿಭೆಗಳನ್ನು ಬೆಳಕಿಗೆ ತಂದದ್ದು ಅವರು ಸ್ವೀಕರಿಸಿದ ಕನ್ನಡ ದೀಕ್ಷೆಯ ಫಲ. ಜನಪದ ಸೊಗಡನ್ನು ಹೊಂದಿದ ಸೊಗಸಾದ ಕವಿತೆಗಳಲ್ಲಿ, ಕನಕದಾಸ, ಪುರಂದರದಾಸರನ್ನು ಕುರಿತ ಪ್ರೌಢ ಕೃತಿಗಳಲ್ಲಿ, ಕನ್ನಡ ಸಂಸ್ಕೃತಿಯ ಬಗ್ಗೆ ಬರೆದ ಲೇಖನಗಳಲ್ಲಿ,…
ಬೆಂಗಳೂರು: ಕನ್ನಡದಲ್ಲಿ ಡಿಜಿಟಲ್ ಪತ್ರಿಕೋದ್ಯಮಕ್ಕೆ ಹೊಸ ದಿಕ್ಕು ತೋರಿಸಿದ ಹಿರಿಯ ಪತ್ರಕರ್ತ ಎಸ್.ಕೆ. ಶ್ಯಾಮ ದಿನಾಂಕ 14 ಏಪ್ರಿಲ್ 2025ರ ಸೋಮವಾರ ರಾತ್ರಿ ನಿಧನರಾಗಿದ್ದಾರೆ. ಇವರಿಗೆ 72ವರ್ಷ ವಯಸ್ಸಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ವಿದ್ಯಾಪೀಠ ವೃತ್ತದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ಪತ್ರಕರ್ತರ ವಲಯದಲ್ಲಿ ‘ಶ್ಯಾಮ್’ ಎಂದೇ ಗುರುತಿಸಿಕೊಂಡಿದ್ದ ಇವರು ಯುವ ಪತ್ರಕರ್ತರಿಗೆ ಸರಳವಾದ ಬರವಣಿಗೆ ಶೈಲಿಯನ್ನು ಹೇಳಿ ಕೊಡುತ್ತಿದ್ದರು. ಬರಹವನ್ನೇ ಬದುಕಾಗಿಸಿಕೊಂಡಿದ್ದ ಶ್ಯಾಮ್ ಕನ್ನಡ ಪತ್ರಿಕೋದ್ಯಮದಲ್ಲಿ 39 ವರ್ಷಗಳಿಗೂ ಹೆಚ್ಚು ವರ್ಷ ಅನುಭವ ಹೊಂದಿದ್ದರು. ‘ಎದ್ದೇಳು ಮಂಜುನಾಥ’ ಚಲನಚಿತ್ರದಲ್ಲಿ ಬ್ಯಾಂಕ್ ಮ್ಯಾನೇಜರ್ ಪಾತ್ರ ನಿರ್ವಹಿಸಿ, ಸಿನಿ ರಂಗದಲ್ಲಿಯೂ ಗುರುತಿಸಿಕೊಂಡಿದ್ದರು. ನಾನಾ ಮಾಧ್ಯಮ ಸಂಸ್ಥೆಗಳಲ್ಲಿ ಹಲವು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದರು.
ಇತ್ತೀಚಿಗೆ ಗಂಗೊಳ್ಳಿಯ ಶ್ರೀ ಸೀತಾರಾಮಚಂದ್ರ ಸಭಾಭವನದಲ್ಲಿ ವೀರ ಸಾವರ್ಕರ್ ದೇಶಪ್ರೇಮಿಗಳ ಬಳಗದ ಪ್ರಾಯೋಜಕತ್ವದಲ್ಲಿ ನಡೆದ ರಂಗಭೂಮಿ ಟ್ರಸ್ಟ್ ಕೊಡಗು ಇವರ ಸಂಯೋಜನೆಯ ನಾಟಕ ‘ಸತ್ಯವನ್ನೇ ಹೇಳುತ್ತೇನೆ’ ಪರಿಣಾಮಕಾರಿಯಾಗಿ ಮೂಡಿಬಂದು ಜನರ ಮನಸ್ಸನ್ನು ಮುಟ್ಟುವಲ್ಲಿ ಯಶಸ್ವಿಯಾಯಿತು. ಕಾಲ್ಪನಿಕ ನ್ಯಾಯಾಲಯದಲ್ಲಿ ಸಾಮಾನ್ಯ ರೈತನೊಬ್ಬನು ನ್ಯಾಯಾಧೀಶನಾಗಿ ಕುಳಿತುಕೊಂಡು ಭಾರತದ ಇತಿಹಾಸದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದಂತಹ ಭಾರತದ ಸ್ವಾತಂತ್ರ್ಯ ಕಾಲಘಟ್ಟದ ಐತಿಹಾಸಿಕ ವ್ಯಕ್ತಿಗಳಾದ ಮಹಾತ್ಮ ಗಾಂಧೀಜಿ, ಜವಾಹರ್ ಲಾಲ್ ನೆಹರು, ಸರ್ದಾರ್ ವಲ್ಲಭಬಾಯಿ ಪಟೇಲ್, ಸುಭಾಷ್ ಚಂದ್ರ ಬೋಸ್, ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ವೀರ ಸಾವರ್ಕರ್ ಇವರನ್ನು ವಿಚಾರಣೆಗೆ ಒಳಪಡಿಸುವ ಆ ಮೂಲಕ ಐತಿಹಾಸಿಕ ಸತ್ಯಗಳನ್ನು ದರ್ಶಿಸುವ ವಿಶಿಷ್ಟವಾದ ಕಥಾನಕವುಳ್ಳ ಈ ನಾಟಕ ಪ್ರೇಕ್ಷಕರನ್ನು ಕೊನೆಯ ತನಕ ಗಂಭೀರವಾಗಿ ಹಿಡಿದಿಟ್ಟಿತು. ಗಾಂಧಿಯಲ್ಲಿದ್ದ ಇಬ್ಬಂದಿತನ, ನೆಹರು ಅವಕಾಶವಾದಿತ್ವ, ಪಟೇಲರ ಬಲಹೀನತೆ, ನೇತಾಜಿ ಅವರ ಮರಣದ ಗೊಂದಲಗಳು, ದೇಶ ವಿಭಜನೆ, ಹಿಂದುತ್ವ ಕುರಿತಂತೆ ಅಂಬೇಡ್ಕರ್ ಮತ್ತು ಸಾವರ್ಕರ್ ಅವರ ಪ್ರಖರ ವಿಚಾರಗಳು ಹೀಗೆ ಹಲವು ಅಂಶಗಳನ್ನು…
ಮಂಗಳೂರು : ಮಂಗಳೂರಿನ ಬಜ್ಪೆಯಲ್ಲಿರುವ ಥಂಡರ್ ಗೈಸ್ ಬಳಗದ ಆಶ್ರಯದಲ್ಲಿ ಶಾಲಾ ಮಕ್ಕಳಿಗೆ ಆಯೋಜಿಸಿದ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭವು ದಿನಾಂಕ 11 ಏಪ್ರಿಲ್ 2025ರಂದು ನಡೆಯಿತು. ಈ ಶಿಬಿರವನ್ನು ಥಂಡರ್ ಗೈಸ್ ಸಂಸ್ಥೆಯ ಮುಖ್ಯಸ್ಥರಾದ ಸೂರಜ್ ಶೆಟ್ಟಿ ಹಾಗೂ ಮಂಗಳೂರಿನ ಕಣಚೂರು ಆಯುರ್ವೇದ ವೈದ್ಯಕೀಯ ವಿದ್ಯಾಲಯದ ವೈದ್ಯಕೀಯ ನಿರ್ದೇಶಕರು ಹಾಗೂ ಶಸ್ತ್ರಚಿಕಕಿತ್ಸಕರಾದ ಡಾ. ಸುರೇಶ ನೆಗಳಗುಳಿಯವರು ಉದ್ಘಾಟಿಸಿದರು. ಶಿಬಿರದಲ್ಲಿ ಮಕ್ಕಳಿಗೆ ನೀತಿ ಸಾರುವ ಎಜು ಮ್ಯಾಜಿಕ್ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಮಂಗಳೂರಿನ ‘ಕಲಾಸೃಷ್ಟಿ’ ಬಳಗದ ಸಂಸ್ಥಾಪಕಿ, ರಾಷ್ಟ್ರೀಯ ಜಾದೂ ಪ್ರಶಸ್ತಿ ವಿಜೇತೆ, ಮಂಗಳೂರಿನ ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರೊ. ಮುಬೀನಾ ಪರವೀನ್ ತಾಜ್ ಹಾಗೂ ಕಲಾಸೃಷ್ಟಿ ತಂಡದ ನಿರ್ದೇಶಕಿ, ಅಂತರಾಷ್ಟ್ರೀಯ ಜಾದೂ ಪ್ರಶಸ್ತಿ ವಿಜೇತೆ ಕು. ಶಮಾ ಪರವೀನ್ ತಾಜ್ ಜಂಟಿಯಾಗಿ ಹಲವಾರು ನೀತಿಪ್ರದ ಮಾಯಾತಂತ್ರಗಳನ್ನು ಮಾಡಿ ಅವುಗಳನ್ನು ಮಾಡುವ ವಿಧಾನವನ್ನು ಹೇಳಿಕೊಟ್ಟರು. ಸುಮಾರು ಐವತ್ತು ಚಿಣ್ಣರು ಉತ್ಸಾಹದಿಂದ ವೇದಿಕೆಯೇರಿ ಜಾದೂ ತಂತ್ರ ವೀಕ್ಷಿಸಿ, ಮಾಡಲು ಕಲಿತರು.
ಕುಳಾಯಿ : ಯನೋಪೊಯ ಇನ್ಸ್ಟಿಟ್ಯೂಟ್ ಅಫ್ ಅರ್ಟ್ಸ್, ಸೈನ್ಸ್, ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ಬಲ್ಮಠ ಇದರ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಪ್ರಾಥಮಿಕ ಶಾಲೆ ಫಿಶರಿಶ್ ಚಿತ್ರಾಪುರ ಕುಳಾಯಿ ಇಲ್ಲಿನ ವಿದ್ಯಾರ್ಥಿಗಳಿಗೆ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆ ಸಲುವಾಗಿ ಹಮ್ಮಿಕೊಂಡ ಅಂಬೇಡ್ಕರ್ ಚಿತ್ರ ರಚನೆ ಸ್ಪರ್ಧೆಯು ದಿನಾಂಕ 14 ಏಪ್ರಿಲ್ 2025 ರಂದು ನಡೆಯಿತು. ಸ್ಪರ್ಧೆಯ ವಿಜೇತರಿಗೇ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮಾಧವ ಸುವರ್ಣ ಬಹುಮಾನ ವಿತರಿಸಿದರು. ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಕೃಷ್ಣಮೂರ್ತಿ ಇವರು ಅಂಬೇಡ್ಕರ್ ಸಾಧನೆ ಕುರಿತು ಮಾತನಾಡಿದರು. ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಅರುಣ್ ದಾಸ್, ವಿಜಯಲಕ್ಷ್ಮೀ ಹಳೆ ವಿದ್ಯಾರ್ಥಿ ಸಂಘದ ಜೊತೆ ಕಾರ್ಯದರ್ಶಿ ಕುಮಾರ್ ಚಿತ್ರಾಪುರ, ಶ್ರೀನಿವಾಸ್ ಪುತ್ರನ್, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷೆ ಮಂಜುಳಾ, ಸದಸ್ಯೆ ಶಶಿಕಲಾ, ಶಿಕ್ಷಕಿ ಸುಕೇಶಿನಿ, ಸಿಂತಿಯ, ನೀತ ತಂತ್ರಿ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶಾಲಾ ಪ್ರವೇಶ ಮಾಹಿತಿ…
ಕಟಪಾಡಿ : ಸಾಹಿತಿ ಶ್ರೀಮತಿ ಕುಶಲಾಕ್ಷಿ.ವಿ.ಕುಲಾಲ್ ಕಣ್ವತೀರ್ಥ ಇವರ ಹತ್ತನೇಯ ತುಲು ಕೃತಿ ‘ಪತ್ತ್’ ತುಲು ಕಬಿತೆಲೆ ತಂಚಿ ಎಂಬ ಕವನ ಸಂಕಲನದ ಲೋಕರ್ಪಣಾ ಸಮಾರಂಭವು ದಿನಾಂಕ 13 ಏಪ್ರಿಲ್ 2025ರಂದು ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಸಪ್ತಪದಿ ಸಭಾ ಮಂಟಪದಲ್ಲಿ ನಡೆದ ‘ತುಳುನಾಡ್ ಕನ್ಕ್ಲೇವ್ -2025’ ತುಲುವ ಜವನೆರೆ ಆಯನೊ ಎಂಬ ವಿಶಿಷ್ಟ ಕಾರ್ಯಕ್ರಮದಲ್ಲಿ ನಡೆಯಿತು. ಸಮಾರಂಭದಲ್ಲಿ ಅಖಿಲ ಭಾರತ ಆಕಾಶವಾಣಿ ಮಂಗಳೂರು ಕೇಂದ್ರದಲ್ಲಿ ಹಿರಿಯ ಶ್ರೇಣಿ ಪ್ರಸಾರಕರಾಗಿ ಸೇವೆ ಸಲ್ಲಿಸಿದ ಸಾಹಿತ್ಯ, ಸಂಗೀತ, ರಂಗಭೂಮಿ, ಪತ್ರಿಕೋದ್ಯಮ ಹೀಗೆ ಹಲವು ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡ ಶ್ರೀಯುತ ಮುದ್ದು ಮೂಡುಬೆಳ್ಳೆ ಕೃತಿಯನ್ನು ಲೋಕಾರ್ಪಣೆಗೊಳಿಸಿದರು. ಬಳಿಕ ಮಾತನಾಡಿದ ಅವರು “ಒಬ್ಬ ಗೃಹಿಣಿಯಾಗಿ ಸಾಹಿತ್ಯ ಕ್ಷೇತ್ರದಲ್ಲಿ ಕುಶಲಾಕ್ಷಿ ಕಣ್ವತೀರ್ಥರವರ ಸಾಧನೆ ಮೆಚ್ಚುವಂತದ್ದು, ತುಳು ಸಾಹಿತ್ಯದ ಹತ್ತು ಕೃತಿಗಳನ್ನು ಪ್ರಕಟಿಸುವುದೆಂದರೆ ಸಾಮಾನ್ಯವೇನಲ್ಲ,ಇವರ ಕವನಗಳಲ್ಲಿ ಪರಿಸರ ಕಾಳಜಿ,ಸಮಾಜಕ್ಕೆ ಸಂದೇಶಗಳು ತುಂಬಿಕೊಂಡಿದ್ದು ಕೆಲವು ಕವನಗಳು ರಾಗವಾಗಿ ಹಾಡಲು ಬರುವಂತಿದೆ. ಕಿರಿಯ ಬರಹಗಾರರನ್ನು ತಿದ್ದಿ ತೀಡಿ ಮುನ್ನಡೆಸುವ ಅವರ ಕೆಲಸ…
ಉಳ್ಳಾಲ: ಅಂಬುರುಹ ಯಕ್ಷಸದನ ಪ್ರತಿಷ್ಠಾನ ಬೊಟ್ಟಿಕೆರೆ ಮಂಜನಾಡಿ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ಆಯೋಜಿಸಿದ ‘ಯಕ್ಷಶಿಕ್ಷಣ ಶಿಬಿರ’ದ ಉದ್ಘಾಟನಾ ಸಮಾರಂಭವು ದಿನಾಂಕ 11 ಏಪ್ರಿಲ್ 2025ರಂದು ಬೊಟ್ಟಿಕೆರೆಯಲ್ಲಿ ನಡೆಯಿತು. ಶಿಬಿರವನ್ನು ಉದ್ಘಾಟಿಸಿದ ಜಾನಪದ ವಿದ್ವಾಂಸರಾದ ಕೆ. ಚಿನ್ನಪ್ಪ ಗೌಡ ಮಾತನಾಡಿ “ಯಕ್ಷಗಾನ ಸ್ಪಂದನಶೀಲ ಗುಣವುಳ್ಳ ವಿಶೇಷ ಕಲೆಯಾಗಿದ್ದು, ಇದಕ್ಕೆ ದೀರ್ಘವಾದ ಪರಂಪರೆ ಇದೆ. ಈ ಪರಂಪರೆಯನ್ನು ಹಿರಿಯ ಕಲಾವಿದರು ಸೇರಿ ಕಟ್ಟಿ ಬೆಳೆಸುತ್ತಾ ಬಂದಿದ್ದಾರೆ. ಯಕ್ಷಗಾನವು ಎಲ್ಲರೂ ಸೇರಿ ಪ್ರದರ್ಶಿಸುವ ಸಾಮೂಹಿಕ ಹಾಗೂ ಚಲನಶೀಲತೆ ಇರುವ ಕಲೆಯಾಗಿದೆ. ಯಕ್ಷ ಶಿಕ್ಷಣ ಶಿಬಿರದ ಮೂಲಕ ಈ ಶ್ರೀಮಂತ ಕಲೆಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಕಾರ್ಯ ಮಹತ್ವದ್ದಾಗಿದೆ. ವಾಸ್ತವಿಕವಾಗಿ ಜನಪದೀಯ, ಶಾಸ್ತ್ರೀಯ ಎನ್ನುವಂತಹದ್ದು ವಿರುದ್ಧ ನೆಲೆಗಳಲ್ಲ. ಎಲ್ಲಾ ಶಾಸ್ತ್ರೀಯ ಕಲೆಗಳು ಮೂಲತಃ ಜಾನಪದೀಯವಾಗಿರುತ್ತದೆ. ಜನಪದೀಯವಾಗಿರುವ ಕಲೆಗಳು ಮೌಖಿಕವಾಗಿದ್ದರೆ, ಶಾಸ್ತ್ರೀಯ ಕಲೆಗಳು ಲಿಖಿತವಾಗಿರುತ್ತದೆ. ಆದ್ದರಿಂದ ಯಕ್ಷಗಾನವನ್ನು ಎರಡು ನೆಲೆಯಲ್ಲೂ ವಿಸ್ತರಿಸಿ ನೋಡಬಹುದು. ಯಕ್ಷಗಾನವನ್ನೇ ಬದುಕನ್ನಾಗಿಸಿದ…
ಕುಮಟಾ : ಕುಮಟಾ ತಾಲೂಕಿನ ಬರ್ಗಿಯ ಶ್ರೀ ವೀರಾಂಜನೇಯ ದೇವಾಲಯದಲ್ಲಿ ದಿನಾಂಕ 12 ಏಪ್ರಿಲ್ 2025ರಂದು ಆಯೋಜನೆಗೊಂಡ ‘ಹನುಮ ಜಯಂತಿ’ಯಲ್ಲಿ ಸಾಧಕದ್ವಯರಿಗೆ ಶ್ರೀ ವೀರಾಂಜನೇಯ ಪುರಸ್ಕಾರ – 2025ನ್ನು ಪ್ರದಾನ ಮಾಡಲಾಯಿತು. ವೃತ್ತಿಯಲ್ಲಿ ಅಧ್ಯಾಪಕರಾದರೂ ಪ್ರವೃತ್ತಿಯಿಂದ ಯಕ್ಷಗಾನ ರಂಗಭೂಮಿಯಲ್ಲಿ ಸರಿಸುಮಾರು ಆರು ದಶಕಗಳಿಗೂ ಮಿಕ್ಕಿ ದೀರ್ಘಕಾಲಿಕವಾಗಿ ಭಾಗವತರಾಗಿ, ಕಲಾವಿದರಾಗಿ, ಗುರುವಾಗಿ ಬಾಳಿಕೆಯಾಗಿದ್ದ ಯಕ್ಷಸಿರಿ ಪ್ರಶಸ್ತಿ ಪುರಸ್ಕೃತ ಅಡಿಗೋಣ ಬೀರಣ್ಣ ಮಾಸ್ತರರಿಗೆ ‘ಕಲಾ ಸಿಂಧು’ ಉಪಾದಿಯನ್ನಿತ್ತು ಗೌರವಿಸಲಾಯಿತು. ತನ್ನ ಅಪೂರ್ವವಾದ ಮೇಧಾ ಶಕ್ತಿಯಿಂದ, ಜನ್ಮಜಾತವಾದ ಪ್ರತಿಭೆಯಿಂದ ಹಾಗೂ ವಿಶೇಷವಾದ ಅಭ್ಯಾಸಬಲದಿಂದ ವಯೋಮಾನಕ್ಕೆ ಮಿಗಿಲಾದ ಸಾಧನೆಯ ಮೂಲಕವಾಗಿ ವಿಶ್ವಮನ್ನಣೆಗೆ ಪಾತ್ರರಾದ ಏಳರ ಹರೆಯದ ಕನ್ನಡದ ಕುವರಿ ಹಿತ್ತಲಮಕ್ಕಿಯ ಸರ್ಕಾರಿ ಕನ್ನಡ ಶಾಲೆಯ ವಿದ್ಯಾರ್ಥಿನಿಯಾದ ಆರಾಧ್ಯ ತಿಮ್ಮಣ್ಣ ನಾಯಕರವರಿಗೆ ‘ಅಭಿನವ ಭಾರತಿ’ ಉಪಾದಿಯೊಂದಿಗೆ ನಗದು ಸಹಿತವಾಗಿ ‘ಶ್ರೀ ವೀರಾಂಜನೇಯ ಪುರಸ್ಕಾರ’ವನ್ನಿತ್ತು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ದ್ವಿತೀಯ ಪಿಯುಸಿಯಲ್ಲಿ ರಾಜ್ಯಮಟ್ಟದಲ್ಲಿ ರ್ಯಾಂಕ್ ವಿಜೇತಳಾದ ಬರ್ಗಿಯ ಸ್ನೇಹಾ ಬಾಲಕೃಷ್ಣ ಗಾಂವಕರರವರಿಗೆ ಪ್ರೋತ್ಸಾಹಕ ನಿಧಿಯೊಂದಿಗೆ ಸನ್ಮಾನಿಸಲಾಯಿತು. ಪುರಸ್ಕಾರಕ್ಕೆ ಭಾಜನರಾದ ಹಿರಿಯ…
ಮಂಗಳೂರು : ತುಳು ಕೂಟ (ರಿ.) ಕುಡ್ಲ ಇದರ ವತಿಯಿಂದ ‘ಬಿಸು ಪರ್ಬ’ ಸಂಭ್ರಮ ಕಾರ್ಯಕ್ರಮವು ದಿನಾಂಕ 14 ಏಪ್ರಿಲ್ 2025ರಂದು ಮಂಗಳಾದೇವಿ ದೇವಸ್ಥಾನದ ರಾಜಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ವಿಷುವಿನ ವಿಶೇಷತೆಯ ಬಗ್ಗೆ ಉಪನ್ಯಾಸ ನೀಡಿದ ಬಿ.ಸಿ. ರೋಡ್ ನಲ್ಲಿರುವ ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರ (ರಿ.) ಇದರ ನಿರ್ದೇಶಕ ಡಾ. ತುಕಾರಾಂ ಪೂಜಾರಿಯವರು “ತುಳುವರಲ್ಲಿ ವಿಶಿಷ್ಟವಾದ ಆಚರಣೆಗಳಿವೆ. ಅವು ಈ ಮಣ್ಣಿನ ವಿಶೇಷತೆಗಳನ್ನು ಸಾರುತ್ತವೆ. ಕೆಲವೊಂದು ಶಬ್ದಗಳು, ಗಾದೆಗಳು ಇಲ್ಲಿನ ಬದುಕನ್ನು ತೆರೆದಿಡುತ್ತವೆ. ಇದನ್ನು ನಮ್ಮ ಮುಂದಿನ ಪೀಳಿಗೆ ತಿಳಿಯಬೇಕು. ನಮ್ಮ ಹೊಸ ವರ್ಷ, ಹೊಸ ದಿನ, ಹೊಸಾನ್ನ ಈ ಪದ್ಧತಿಗಳೆಲ್ಲ ಅವರಿಗೆ ವರ್ಗಾಯಿಸಲ್ಪಡಬೇಕು. ಆಗ ಮಾತ್ರ ತುಳು ಜೀವನ ಪದ್ಧತಿ ಉಳಿದುಕೊಳ್ಳಲು ಸಾಧ್ಯ” ಎಂದು ಹೇಳಿದರು. ಇನ್ನೋರ್ವ ಪ್ರಮುಖ ಭಾಷಣಗಾರ, ತುಳು ವಿದ್ವಾಂಸ ಶ್ರೀ ಮುದ್ದು ಮೂಡುಬೆಳ್ಳೆಯವರು ಮಾತನಾಡಿ “ಕುಡ್ಲದ ಈ ತುಳುಕೂಟವು ಅನೇಕ ತುಳು ಸಂಘಟನೆಗಳಿಗೆ ತವರು ಮನೆಯಿದ್ದಂತೆ. ಬಿಸು ಪರ್ಬದಂತಹಾ ತುಳುನಾಡಿನ ಮಹತ್ವದ ಹಬ್ಬವನ್ನು…