Author: roovari

ಮೂಡುಬಿದಿರೆ : ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ (ರಿ.) ಬೆಂಗಳೂರು ಇದರ ವತಿಯಿಂದ ‘ವಿಶ್ವ ಬನ್ನಂಜೆ 90ರ ನಮನ’ ಸಮಾರಂಭವನ್ನು ದಿನಾಂಕ 20 ಸೆಪ್ಟಂಬರ್ 2025ರಂದು ಸಂಜೆ 5-00 ಗಂಟೆಗೆ ಮೂಡುಬಿದಿರೆ ಅಲಂಗಾರು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ವಿದ್ವಾಂಸರಾದ ವಿಜಯಸಿಂಹ ಆಚಾರ್ಯರು ಉಪನ್ಯಾಸ ನೀಡಲಿದ್ದು, ಬನ್ನಂಜೆ ಯವರ ಜೊತೆ ಮೂಡುಬಿದಿರೆಯ ಅನುಬಂಧದ ಬಗ್ಗೆ ಬಾಲಕೃಷ್ಣ ಭಟ್ ಮಾತನಾಡಲಿದ್ದಾರೆ. ಶ್ರೀಮತಿ ಕವಿತಾ ಉಡುಪ ಮತ್ತು ಶ್ರೀಮತಿ ಸುಮಾ ಶಾಸ್ತ್ರಿ ಇವರಿಂದ ಬನ್ನಂಜೆಯವರ ಹಾಡುಗಬ್ಬ ಹಾಗೂ ದೇವೀದಾಸ ವಿರಚಿತ ‘ಜೀವ ಭಾವ’ ಪ್ರಸಂಗದ ಯಕ್ಷಗಾನ ತಾಳಮದ್ದಲೆ ನಡೆಯಲಿದೆ. ಹಿಮ್ಮೇಳದಲ್ಲಿ ರವಿಚಂದ್ರ ಕನ್ನಡಿಕಟ್ಟೆ, ಚೈತನ್ಯಕೃಷ್ಣ ಪದ್ಯಾಣ ಮತ್ತು ಶ್ರೀಧರ ವಿಟ್ಲ ಹಾಗೂ ಮುಮ್ಮೇಳದಲ್ಲಿ ವಿದ್ಯಾವಾಚಸ್ಪತಿ ಶ್ರೀ ಕೆರೆಕೈ ಉಮಾಕಾಂತ ಭಟ್ಟ, ಸುಣ್ಣಂಬಳ ವಿಶ್ವೇಶ್ವರ ಭಟ್ಟ ಮತ್ತು ವಾಸುದೇವ ರಂಗಭಟ್ಟ ಮಧೂರು ಇವರುಗಳು ಸಹಕರಿಸಲಿದ್ದಾರೆ.

Read More

ಬೆಂಗಳೂರು : ‘ಬೆನಕ’ ಇದರ ಸುವರ್ಣ ಸಂಭ್ರಮದ ಪುತಿನ ಇವರ ಮೇರುಕೃತಿ ‘ಗೋಕುಲ ನಿರ್ಗಮನ’ ನಾಟಕ ಪ್ರದರ್ಶನವನ್ನು ದಿನಾಂಕ 18 ಮತ್ತು 19 ಸೆಪ್ಟೆಂಬರ್ 2025ರಂದು ಸಂಜೆ 7-00 ಗಂಟೆಗೆ ಬೆಂಗಳೂರು ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ. ಬಿ.ವಿ. ಕಾರಂತ ಇವರ ಸಂಗೀತ ಮತ್ತು ನಿರ್ದೇಶನದ ಈ ನಾಟಕವನ್ನು ಡಾ. ಟಿ.ಎಸ್. ನಾಗಾಭರಣ ಇವರು ಮರು ವಿನ್ಯಾಸ ಮಾಡಿರುತ್ತಾರೆ.

Read More

ಬೆಂಗಳೂರು : ವಿಜಯನಗರ ಬಿಂಬ (ರಿ.) ರಂಗ ಶಿಕ್ಷಣ ಕೇಂದ್ರ ಹಿರಿಯರ ವಿಭಾಗದ ವತಿಯಿಂದ ಒಂದು ವರ್ಷದ ರಂಗಭೂಮಿ ಡಿಪ್ಲೋಮೋ ತರಗತಿಗೆ ದಾಖಲಾತಿ ಪ್ರಾರಂಭವಾಗಿದೆ. ನಟನೆ, ರಂಗ ಚರಿತ್ರೆ, ವಸ್ತ್ರಾಲಂಕಾರ, ಪ್ರಸಾದನ, ಬೆಳಕು ವಿನ್ಯಾಸ, ರಂಗ ಗೀತೆಗಳ ಬಗ್ಗೆ ನುರಿತ ರಂಗತಜ್ಞರಿಂದ ವಾರಾಂತ್ಯ ತರಗತಿಗಳು ನಡೆಯಲಿದ್ದು, ಆಸಕ್ತರು ಹೆಚ್ಚಿನ ಮಾಹಿತಿಗಾಗಿ 9845265967, 9844152967, 9845734967, 9844017881 ಮತ್ತು 9880033018 ಸಂಖ್ಯೆಯನ್ನು ಸಂಪರ್ಕಿಸಿರಿ.

Read More

ಮಂಜೇಶ್ವರ : ಮೀಯಪದವು ಶ್ರೀಗುರುನರಸಿಂಹ ಯಕ್ಷಬಳಗ ಕಲಾಸಂಸ್ಥೆ ಹಾಗೂ ಚಿಗುರುಪಾದೆ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಸಹಯೋಗದೊಂದಿಗೆ ಶ್ರೀಕ್ಷೇತ್ರದ ವಠಾರದಲ್ಲಿ ದಿನಾಂಕ 13 ಸೆಪ್ಟೆಂಬರ್ 2025ರಂದು ‘ಯಕ್ಷಚಿಗುರು -2025’ ಸಮಾರಂಭವನ್ನು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ರಂಜನೀಯವಾಗಿ ಹಮ್ಮಿಕೊಂಡಿತ್ತು. ಕುಣಿತ ಭಜನೆ, ಸಭಾ ಸಮಾರಂಭ, ಯಕ್ಷಚಿಗುರು 2025 ಪ್ರಶಸ್ತಿ ಪ್ರದಾನ, ತಾಳಮದ್ದಳೆ, ಯಕ್ಷಗಾನ ಬಯಲಾಟ ಪ್ರಸ್ತುತಿಗೊಂಡಿತು. ಶ್ರೀ ಮಹಾಲಿಂಗೇಶ್ವರ ಕುಣಿತ ಭಜನಾ ಸಂಘ ಮೀಯಪದವು ತಂಡದ ಸದಸ್ಯರಿಂದ ಕುಣಿತ ಭಜನೆಯನ್ನು ಚಿಗುರುಪಾದೆ ದೇವಸ್ಥಾನದ ಆಡಳಿತ ಮೊಕ್ತೇಸರ ವಸಂತ ಭಟ್ ತೊಟ್ಟೆತ್ತೋಡಿ ದೀಪಬೆಳಗಿಸಿ ಉದ್ಘಾಟಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀಮದ್ ಎಡನೀರು ಮಠದ ಶ್ರೀಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು ಆಶೀರ್ವಚನಗೈದು, ಯಕ್ಷಚಿಗುರು-2025 ಪ್ರಶಸ್ತಿಯನ್ನು ‘ಶ್ರೀ ಧನ್ವಂತರೀ ಯಕ್ಷಗಾನ ಸಂಘ ಉಳಿಯ ಮಧೂರು’ ಸಂಘಟನೆಗೆ ಪ್ರದಾನಗೈದು ಮಾತನಾಡಿ, “ಭಾರತೀಯ ಸಂಸ್ಕೃತಿಯನ್ನು ಉಳಿಸುವಲ್ಲಿ ಯಕ್ಷಗಾನದ ಕೊಡುಗೆ ಮಹತ್ತರವಾದದ್ದು. ಯಕ್ಷಗಾನ, ತಾಳಮದ್ದಳೆ ಪ್ರಕಾರಗಳು ಇಂದಿಗೂ ಆ ಕಾರಣಕ್ಕಾಗಿಯೇ ತನ್ನ ಮೌಲ್ಯವನ್ನು ಉಳಿಸಿಕೊಂಡಿದೆ. ಯಕ್ಷಗಾನ ರಂಗಕ್ಕೆ ಹವ್ಯಾಸಿ ಯಕ್ಷಗಾನ ತಂಡಗಳು, ಸಂಸ್ಥೆಗಳು ಅತಿದೊಡ್ಡ…

Read More

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಆಧಾರಸ್ತಂಭಗಳಲ್ಲಿ ಒಬ್ಬರಾದ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯನವರ ಜನ್ಮದಿನಾಚರಣೆ ಮತ್ತು ವಿವಿಧ ದತ್ತಿಪುರಸ್ಕಾರಗಳ ಪ್ರದಾನ ಕಾರ್ಯಕ್ರಮವನ್ನು ದಿನಾಂಕ 17 ಸೆಪ್ಟಂಬರ್ 2025ರಂದು ಸಂಜೆ 5-00 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಏರ್ಪಡಿಸಲಾಗಿದೆ. ಕಾರ್ಯಕ್ರಮದ ಉದ್ಘಾಟನೆ ಮತ್ತು ಪ್ರಶಸ್ತಿ ಪ್ರದಾನವನ್ನು ಹಿರಿಯ ವಿದ್ವಾಂಸರಾದ ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರೀಗಳು ಮಾಡಲಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ವಹಿಸುತ್ತಾರೆ. ಹಿರಿಯ ಚಿಂತಕರಾದ ಮಂಡಗದ್ದೆ ಶ್ರೀನಿವಾಸಯ್ಯನವರು ‘ಸರ್ ಎಂ.ವಿಶ್ವೇಶ್ವರಯ್ಯ’ನವರ ಕುರಿತು ವಿಶೇಷ ಉಪನ್ಯಾಸವನ್ನು ನೀಡಲಿದ್ದು ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕರಲ್ಲೊಬ್ಬರಾದ ಕರ್ಪೂರ ಶ್ರೀನಿವಾಸ ರಾವ್ ಅವರ ಮರಿಮೊಮ್ಮಗ ಪ್ರಸನ್ನ ಕರ್ಪೂರ್ ಮತ್ತು ದತ್ತಿ ದಾನಿಗಳಾದ ಡಾ. ವರದಾ ಶ್ರೀನಿವಾಸ್ ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ. ಕಾರ್ಯಕ್ರಮದಲ್ಲಿ ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರೀ ವಿದ್ವತ್ ದತ್ತಿ ಪ್ರಶಸ್ತಿಯನ್ನು ಹಿರಿಯ ವಿದ್ವಾಂಸರಾದ ಡಾ. ಬಿ.ಎಸ್. ಪ್ರಣತಾರ್ತಿಹರನ್ ಇವರಿಗೆ, ಶ್ರೀಮತಿ ಮನೋಹರಿ…

Read More

ಬೆಂಗಳೂರು : ವಿಜಯನಗರ ಬಿಂಬ (ರಿ.) ಇದರ ರಂಗ ಶಿಕ್ಷಣ ಕೇಂದ್ರ ಚೊಟಾಣಿ ವಿಭಾಗದ ವತಿಯಿಂದ ‘ಚೊಟಾಣಿ ನಾಟಕೋತ್ಸವ’ವನ್ನು ದಿನಾಂಕ 19 ಮತ್ತು 20 ಸೆಪ್ಟೆಂಬರ್ 2025ರಂದು ಪ್ರತಿ ದಿನ ಸಂಜೆ 6-00 ಗಂಟೆಗೆ ವಿಜಯನಗರ ಬಿಂಬದ ಸರಳಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. 3ರಿಂದ 8 ವರ್ಷದ ಪುಟಾಣಿಗಳಿಂದ 2 ಹೊಸ ಚೊಟಾಣಿ ನಾಟಕಗಳ ಪ್ರದರ್ಶನ ನೀಡಲಿದ್ದಾರೆ. ದಿನಾಂಕ 19 ಸೆಪ್ಟೆಂಬರ್ 2025ರಂದು ಡಾ. ಬೃಂದ ಇವರ ರಚನೆ ಮತ್ತು ನಿರ್ದೇಶನದಲ್ಲಿ ‘ಕಾನನಕೀಯ’ ಮತ್ತು ದಿನಾಂಕ 20 ಸೆಪ್ಟೆಂಬರ್ 2025ರಂದು ಡಾ. ಸುಷ್ಮಾ ಎಸ್.ವಿ. ಇವರ ರಚನೆ ಮತ್ತು ನಿರ್ದೇಶನದಲ್ಲಿ ‘ಅರಿ ಜಂಭ ಮುರಿ’ ನಾಟಕಗಳು ಪ್ರದರ್ಶನಗೊಳ್ಳಲಿದೆ. ಹೆಚ್ಚಿನ ಮಾಹಿತಿಗಾಗಿ 9845265967, 9844152967, 9845734967, 9880033018 ಮತ್ತು 9844017881 ಸಂಖ್ಯೆಯನ್ನು ಸಂಪರ್ಕಿಸಿರಿ.

Read More

ಕಾರ್ಕಳ : ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನ ಇವರ ವತಿಯಿಂದ ದಿನಾಂಕ 19 ಸೆಪ್ಟೆಂಬರ್ 2025ರಂದು ಬೆಳಿಗ್ಗೆ 10-00 ಗಂಟೆಗೆ ನೃತ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಂಗೀತ ನಾಟಕ ಅಕಾಡೆಮಿ ಗೌರವ ಹಿರಿಯ ಪಂಡಿತ್ ಗುರು ರವೀಂದ್ರ ಕುಮಾರ್ ಅದಿತ್ ಬೂದಿ ಇವರ ಶಿಷ್ಯ ‘ನೃತ್ಯ ರಥ’ ಪ್ರಶಸ್ತಿ ಪಡೆದ ಮುಂಬೈಯ ಕೃತಿಯ ನರ್ಸಿಂಗ್ ರಾಣ ಇವರಿಂದ ಒಡಿಸ್ಸಿ ನೃತ್ಯ ಪ್ರದರ್ಶನ ನೀಡಲಿದ್ದಾರೆ.

Read More

ಮಂಗಳೂರು : ಮಂಗಳೂರು ಬೆಸೆಂಟ್ ನ್ಯಾಷನಲ್ ಪದವಿ ಪೂರ್ವ ಕಾಲೇಜು ನಲ್ಲಿ ಆಯೋಸಿದ್ದ ಗಿಳಿವಿಂಡು ಯಾನ…. ಮರಳಿ ಮನೆಗೆ…. ಬಾರಿಸು ಕನ್ನಡ ಡಿಂಡಿಮವ…. ಅರಿವಿನ ವಿಸ್ತರಣೆ ಸಮಾರಂಭವು ದಿನಾಂಕ 15 ಸೆಪ್ಟೆಂಬರ್ 2025ರಂದು ನಡೆಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಲು ಆಗಮಿಸಿದ ಮಂಗಳೂರು ವಿಶ್ವವಿದ್ಯಾಲಯದ ಎಸ್. ವಿ. ಪಿ. ಕನ್ನಡ ಅಧ್ಯಯನ ಸಂಸ್ಥೆಯ ನಿವೃತ್ತ ಅಧ್ಯಕ್ಷರು ಮತ್ತು ಗಿಳಿವಿಂಡು ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿಗಳ ಒಕ್ಕೂಟ ) ಅಧ್ಯಕ್ಷರಾದ ಪ್ರೊ. ಶಿವರಾಮ ಶೆಟ್ಟಿ ಬಿ. ಮಾತನಾಡಿ “ಬಾಳಿನಲ್ಲಿ ಭರವಸೆಯೊಂದಿಗೆ ನಿರ್ದಿಷ್ಟ ಗುರಿಯನ್ನು ಇರಿಸಿಕೊಂಡು ಮುನ್ನಡೆಯಬೇಕು. ಸಂಪಾದನೆಗಿಂತ ಸಾಧನೆ ಮುಖ್ಯವಾಗಿದ್ದು, ಸಾಹಿತ್ಯ ನಮ್ಮ ಜೀವನಕ್ಕೆ ಅಗತ್ಯವಾದ ಮಾನವೀಯ ಮೌಲ್ಯಗಳನ್ನು ತಿಳಿಸಿ ಕೊಡುತ್ತವೆ. ಅಸಮಾನತೆಯ ಸಮಾಜದಿಂದ ಸಮಾನತೆಯ ಸಮಾಜದತ್ತ ಸಾಗ ಬೇಕೆಂಬ ಎಚ್ಚರವನ್ನು ಸಾಹಿತ್ಯಲೋಕ ನೀಡುತ್ತಾ ಬಂದಿದೆ” ಎಂದರು. ಗಿಳಿವಿಂಡು ಸದಸ್ಯ ಮತ್ತು ಗೋವಿಂದದಾಸ ಕಾಲೇಜು ಸುರತ್ಕಲ್ ಇಲ್ಲಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ. ಕೃಷ್ಣ ಮೂರ್ತಿ ಮಾತನಾಡಿ “ಗಿಳಿವಿಂಡು ಯಾನ ಹಿರಿಯ ತಲೆಮಾರಿನ…

Read More

ವಿಕ್ರಮ್ ಕಾಂತಿಕೆರೆ ಈಗಾಗಲೇ ತಮ್ಮ ಉತ್ತಮ ಗುಣಮಟ್ಟದ ಅನುವಾದಗಳಿಂದ ಓದುಗರ ಗಮನ ಸೆಳೆದವರು. ಅತ್ಯಂತ ಕ್ಲಿಷ್ಟಕರವೆನ್ನಿಸಿದ ಕೃತಿಗಳ ಅನುವಾದವನ್ನೂ ತಮ್ಮ ಅದ್ಭುತ ಪ್ರತಿಭೆಯಿಂದ ಸರಳವೂ ಸುಂದರವೂ ಆದ ಭಾಷೆಯಲ್ಲಿ ಸುಲಲಿತವಾಗಿ ಅನುವಾದಿಸಿದ ಜಾಣ್ಮೆ ಅವರದ್ದು. ಮಲೆಯಾಳದ ಹಳೆಯ ಶೈಲಿಯಲ್ಲಿರುವ ‘ಉಮಾಕೇರಳಂ’ ಅನ್ನುವ ಕಾವ್ಯಕೃತಿ ಇವರ ಕೈಯಲ್ಲಿ ಚಂದದ ಒಂದು ಕನ್ನಡ ಕಾವ್ಯವಾಗಿ ಅರಳಿದ್ದನ್ನು ಮರೆಯುವಂತಿಲ್ಲ. ಈಗ ಮಲೆಯಾಳದ ಪ್ರಸಿದ್ಧ ಲೇಖಕಿ ಕೆ.ಆರ್. ಮೀರಾ ಇವರ ‘ಭಗವಾಂಡೆ ಮರಣಂ’ ಅನ್ನುವ ವಿಶಿಷ್ಟ ಶೀರ್ಷಿಕೆಯ ಒಂದು ಕಥಾಸಂಕಲನವನ್ನು ಅವರು ‘ಭಗವಂತನ ಸಾವು’ ಎಂಬುದಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಸಂಕಲನದಲ್ಲಿ ಆರು ಕಥೆಗಳಿವೆ. ಎಡಪಂಥೀಯ ಚಿಂತಕರಾದ ಕೆ.ಆರ್. ಮೀರಾ ಇವತ್ತು ಮಲೆಯಾಳದಲ್ಲಿ ಬಹುಬೇಡಿಕೆಯ ಲೇಖಕಿ. ಅವರು ಏನಾದರೂ ಬರೆದ ತಕ್ಷಣ ಅವರ ಕೃತಿಗಳು ಮಲೆಯಾಳ ಪುಸ್ತಕ ಮಾರುಕಟ್ಟೆಯಲ್ಲಿ ‘ಹಾಟ್ ಕೇಕ್’ ಆಗಿ ಮಾರಾಟವಾಗುತ್ತವೆ. ಅವರ ಬೃಹತ್ ಕಾದಂಬರಿ ‘ಆರಾಚ್ಚಾರ್’ (The Hang woman ಅಥವಾ ಕೊಲೆಗಡುಕಿ) ಕೆಲವು ವರ್ಷಗಳ ಹಿಂದೆ ಲಕ್ಷಗಟ್ಟಲೆ ಮಾರಾಟವಾಗಿತ್ತು. ಅಷ್ಟೊಂದು ಆಕರ್ಷಕ…

Read More

ಮಂಚಿ : ನೃತ್ಯ ಪರಂಪರೆಯನ್ನು ಶುದ್ಧ ಶಾಸ್ತ್ರಿಯ ಚೌಕಟ್ಟಿನಲ್ಲಿ ಭವಿಷ್ಯದ ಯುವ ಕಲಾವಿದರಿಗೆ ಪರಿಚಯಿಸಬೇಕಾದರೆ ನೃತ್ಯ ಸರಣಿಗಳ ಆಯೋಜನೆ ಬಹು ಮುಖ್ಯ ಎನಿಸುತ್ತದೆ. ಕಲಾವಿದನೊಬ್ಬ ಕಲೆಯ ಆಳ, ಅಗಲ, ಎತ್ತರಗಳನ್ನು ತಿಳಿದುಕೊಂಡು, ತನ್ನುಸಿರಿನಂತೆ ಆರಾಧಿಸಿಕೊಂಡು ನೃತ್ಯ ಕ್ಷೇತ್ರದಲ್ಲಿ ಸಾಧನೆಗೈಯಲು ಸರಣಿ ಕಾರ್ಯಕ್ರಮಗಳು ಒಂದು ಬುನಾದಿಯನ್ನು ಹಾಕಿಕೊಡುತ್ತವೆ. ಆ ನೆಲೆಗಟ್ಟಿನಲ್ಲಿ ಪುತ್ತೂರಿನ ಶ್ರೀಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯಿಂದ ಪ್ರೇರಿತಗೊಂಡು, ಅದರ ಅಂಗ ಸಂಸ್ಥೆಯಾದ ವಸುಧಾರಾ ಕಲಾಕೇಂದ್ರ ಬೋಳಂತೂರು ಮಂಚಿ ಇವರು ಆಯೋಜಿಸಿದ ನೃತ್ಯಸರಣಿ ಮಾಲಿಕೆಯೇ ‘ಕಲಾಧಾರಾ’. ಇದರ ಮೊದಲ ಉದ್ಘಾಟನಾ ನೃತ್ಯವು ಕಲಾದೀಪ ನಾಮಧೇಯದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದ ದಂಪತಿಗಳಾದ ವಿದ್ವಾನ್ ದೀಪಕ್ ಕುಮಾರ್ ಹಾಗೂ ವಿದುಷಿ ಪ್ರೀತಿಕಲಾ ಪುತ್ತೂರು ಇವರಿಂದ ಲಯನ್ಸ್ ಕ್ಲಬ್ ಕೊಳ್ನಾಡು ಸಾಲೆತ್ತೂರು ಹಾಗೂ ಲಯನ್ಸ್ ಸೇವಾ ಟ್ರಸ್ಟ್ (ರಿ) ಮಂಚಿ ಇವರ ಸಹಯೋಗದಲ್ಲಿ ಸಂಪನ್ನಗೊಂಡಿತು. ದಿನಾಂಕ 05 ಸೆಪ್ಟೆಂಬರ್ 2025ರ ಶುಕ್ರವಾರ ಮಂಚಿ ಲಯನ್ಸ್ ಕ್ಲಬ್ ಇಲ್ಲಿ ಕಾರ್ಯಕ್ರಮವು ಯಶಸ್ವಿಯಾಗಿ ಉದ್ಘಾಟನೆಗೊಂಡ ಈ ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ದೀಪ…

Read More