Author: roovari

ಕುಶಾಲನಗರ : ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಪಟ್ಟಣದ ರಥಬೀದಿಯಲ್ಲಿ ಆಯೋಜಿಸಿದ್ದ ‘ಸಾರ್ವಜನಿಕರಿಗೆ ರಂಗೋಲಿ ಸ್ಪರ್ಧೆ’ ಕಾರ್ಯಕ್ರಮವು ದಿನಾಂಕ 26-11-2023ರಂದು ನಡೆಯಿತು. ಈ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಮುನೀರ್ ಅಹಮದ್ “ನಾಡಿನ ಸಂಸ್ಕೃತಿ ಮತ್ತು ಕಲೆಯನ್ನು ಉಳಿಸುವಲ್ಲಿ ಹಾಗೂ ಮುಂದಿನ ಪೀಳಿಗೆಗೆ ರಂಗೋಲಿ ಸ್ಪರ್ಧೆ ಖಂಡಿತ ಸಹಕಾರಿಯಾಗಿದೆ. ಉತ್ತಮ ಸಮಾಜವನ್ನು ರೂಪಿಸುವ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪಾತ್ರ ಮಹತ್ವವಾದದ್ದು. ಇದರಲ್ಲಿ ಎಲ್ಲರೂ ಒಟ್ಟಾಗಿ ಸೇರಿ ನಮ್ಮಲ್ಲಿ ಪರಸ್ಪರ ಸಂಸ್ಕೃತಿಯನ್ನು ವಿನಿಮಯ ಮಾಡಿಕೊಳ್ಳಲು ಸಹಕಾರಿಯಾಗಿದೆ. ಕುಟುಂಬದಲ್ಲಿ ಇರುವ ಹಿರಿಯರು ಯುವ ಜನಾಂಗಕ್ಕೆ ಆಚಾರ ವಿಚಾರಗಳನ್ನು ತಿಳಿಸುವ ಮೂಲಕ ಜಾಗೃತಿ ಮೂಡಿಸಬೇಕು. ಸಾರ್ವಜನಿಕವಾಗಿ ಇಂತಹ ಕಾರ್ಯಕ್ರಮ ಮಾಡುವುದರಿಂದ ಅಸಕ್ತಿಯಿಲ್ಲದವರು ಬಂದು ನೋಡಿ ಸ್ಫೂರ್ತಿ ಪಡೆಯಲು ಅವಕಾಶ ಮೂಡಿದಂತಾಗುತ್ತದೆ ಎಂದು ಹೇಳಿದರು. ಎಷ್ಟೋ ವಿಚಾರಗಳು ಮೊಬೈಲ್ ನಿಂದ ತಮ್ಮ ಘನತೆಯನ್ನು ಕಳೆದುಕೊಳ್ಳುತ್ತಿದೆ. ಹಾಗಂತ…

Read More

ಮಂಗಳೂರು : ಕದ್ರಿಯ ನೃತ್ಯ ಭಾರತಿ (ರಿ.) ವತಿಯಿಂದ ಕರ್ನಾಟಕ ಕಲಾಶ್ರೀ ಗುರು ಗೀತಾ ಸರಳಾಯ ಮತ್ತು ವಿದುಷಿ ಶ್ರೀಮತಿ ರಶ್ಮಿ ಸರಳಾಯ ಇವರ ಶಿಷ್ಯೆ ವಿದುಷಿ ವೈಷ್ಣವಿ ವಿ. ಪ್ರಭು ಇವರ ‘ನಟರಾಜ ವಂದನಂ’ ಭರತನಾಟ್ಯ ಕಾರ್ಯಕ್ರಮವು ದಿನಾಂಕ 02-02-2024ರಂದು ಗಂಟೆ 5ಕ್ಕೆ ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಂತಲಾ ಮತ್ತು ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶ್ರೀ ಉಳ್ಳಾಲ ಮೋಹನ್ ಕುಮಾರ್ ಇವರು ನೆರವೇರಿಸಲಿದ್ದು, ಶ್ರೀ ಚಕ್ರವರ್ತಿ ಸೂಲಿಬೆಲೆ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಈ ಭರತನಾಟ್ಯ ಕಾರ್ಯಕ್ರಮವು ವಿದುಷಿ ಶ್ರೀಮತಿ ಗೀತಾ ಸರಳಾಯ ಇವರ ನಿರ್ದೇಶನದಲ್ಲಿ ನಡೆಯಲಿದ್ದು, ನೃತ್ಯ ಸಂಯೋಜನೆ ಮತ್ತು ನಟುವಾಂಗಂನಲ್ಲಿ ವಿದುಷಿ ಶ್ರೀಮತಿ ರಶ್ಮಿ ಸರಳಾಯ ಇವರು ಸಹಕರಿಸಲಿದ್ದಾರೆ. ಶ್ರೀ ಸ್ವರಾಗ ಮಾಹೆ ಇವರ ಹಾಡುಗಾರಿಕೆಗೆ ಶ್ರೀ ಪಯ್ಯನೂರು ರಾಜನ್ ಮೃದಂಗ ಹಾಗೂ ಶ್ರೀ ಗಣೇಶ್ ಕೆ.ಎಸ್. ಕೊಳಲಿನಲ್ಲಿ ಸಾಥ್ ನೀಡಲಿದ್ದಾರೆ. ಯಕ್ಷ ಮಂಜುಳ ಮತ್ತು ಕದ್ರಿ ಮಹಿಳಾ ಬಳಗದ ಅಧ್ಯಕ್ಷರಾದ ಶ್ರೀಮತಿ ಪೂರ್ಣಿಮ…

Read More

ಬೆಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ‘ಬಸವ ರಾಷ್ಟ್ರೀಯ ಪುರಸ್ಕಾರ’, ‘ಶ್ರೀ ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿ’, ‘ಟಿ. ಚೌಡಯ್ಯ ಪ್ರಶಸ್ತಿ’ ಹಾಗೂ ’ಗಾನ ಯೋಗಿ ಪಂಡಿತ್ ಪಂಚಾಕ್ಷರಿ ಗವಾಯಿ ಪ್ರಶಸ್ತಿ’ ಸಹಿತ ಒಟ್ಟು 31 ಪ್ರಶಸ್ತಿಗಳನ್ನು ಘೋಷಿಸಿದೆ. ವಿವಿಧ ಕ್ಷೇತ್ರಗಳ 75 ಸಾಧಕರಿಗೆ ದಿನಾಂಕ 31-01-2024ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಇದರಲ್ಲಿ 2019ರಿಂದ 2023ನೇ ಸಾಲಿನಲ್ಲಿ ಸಾಧಕರನ್ನು ಘೋಷಿಸಿದ್ದರೂ ವಿವಿಧ ಕಾರಣಗಳಿಂದಾಗಿ ಪ್ರದಾನ ಮಾಡಲಾಗದ ಪ್ರಶಸ್ತಿಗಳೂ ಸೇರಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ. ರೂ.10 ಲಕ್ಷ ಮತ್ತು ಪ್ರಶಸ್ತಿ ಪತ್ರವನ್ನೊಳಗೊಂಡ ಪ್ರಶಸ್ತಿ ಪುರಸ್ಕೃತರ ವಿವರ : 1. ‘ಬಸವರಾಷ್ಟ್ರೀಯ ಪುರಸ್ಕಾರ’-2023ನೇ ಸಾಲಿಗೆ ಮಹಾರಾಷ್ಟ್ರದ ಆನಂದ್ ತೆಲ್ತುಂಬಡೆ 2024ನೇ ಸಾಲಿಗೆ ಧಾರವಾಡದ ಡಾ. ಎನ್. ಜಿ. ಮಹದೇವಪ್ಪ 2. ‘ಶ್ರೀ ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿ’- 2023ನೇ ಸಾಲಿಗೆ ಧಾರವಾಡದ ಜಿನದತ್ತ…

Read More

ಬೆಂಗಳೂರು : ಸಂಸ್ಕಾರ ಭಾರತಿ ಆಯೋಜಿಸುವ ‘ಅಖಿಲ ಭಾರತೀಯ ಕಲಾಸಾಧಕ ಸಂಗಮ 2024’ ಕಾರ್ಯಕ್ರಮವು ದಿನಾಂಕ 01-02-2024ರ ಗುರುವಾರದಿಂದ 04-02-2024ರ ಭಾನುವಾರದವರೆಗೆ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಇಂಟರ್ನ್ಯಾಷನಲ್ ಸೆಂಟರಿನಲ್ಲಿ ನಡೆಯಲಿದೆ. ದಿನಾಂಕ 01-02-2024ರ ಗುರುವಾರ ಸಂಜೆ ಘಂಟೆ 4.30ಕ್ಕೆ ಯದುಕುಲತಿಲಕ ಮೈಸೂರಿನ ಶ್ರೀಮನ್ಮಹಾರಾಜ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಇವರ ಘನ ಉಪಸ್ಥಿತಿಯಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಖ್ಯಾತ ಲೋಕಕಲಾ ಕಲಾವಿದರಾದ ಪದ್ಮಶ್ರೀ ಮಂಜಮ್ಮ ಜೋಗತಿ, ಯು.ಕೆ. ಯಲ್ಲಿನ ರಾಯಲ್ ಹಿಸ್ಟಾರಿಕಲ್ ಸೊಸೈಟಿ ಇದರ ಸದಸ್ಯರು, ಲೇಖಕರು ಮತ್ತು ಇತಿಹಾಸ ತಜ್ಞರಾದ ಡಾ. ವಿಕ್ರಂ ಸಂಪತ್ ಹಾಗೂ ಖ್ಯಾತ ತಬಲಾ ವಿದ್ವಾಂಸರು ಮತ್ತು ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ ಪುರಸ್ಕೃತರಾದ ಪಂಡಿತ್ ಶ್ರೀ ರವೀಂದ್ರ ಯಾವಗಲ್ ಗೌರವ ಉಪಸ್ಥಿತರಿದ್ದು, ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ವಿಜಯನಗರ ರಾಜವಂಶಸ್ಥರಾದ ಶ್ರೀ ಕೃಷ್ಣದೇವರಾಯ ಭಾಗವಹಿಸಲಿದ್ದಾರೆ. ಕಾರ್ಯಕ್ರಮ ವಿವರ : ಫೆಬ್ರವರಿ 1 ಗುರುವಾರ ಸಂಜೆ 7.00ರಿಂದ – ‘ಈಶಾನ್ಯ ರಾಜ್ಯಗಳ ಲೋಕನೃತ್ಯ ಪ್ರಸ್ತುತಿ’…

Read More

ಮಂಗಳೂರು : ಸುವರ್ಣ ಪ್ರತಿಷ್ಠಾನ ಕರ್ನಿರೆ ವತಿಯಿಂದ 11ನೇ ವಾರ್ಷಿಕೋತ್ಸವದ ಅಂಗವಾಗಿ ಶೈಕ್ಷಣಿಕ ನೆರವಿನೊಂದಿಗೆ ಯಕ್ಷ ಕಲಾರಾಧನೆ ಮತ್ತು ಹಿರಿಯ ಕಲಾವಿದರ ಸನ್ಮಾನ ಕಾರ್ಯಕ್ರಮವು ದಿನಾಂಕ 25-01-2024ರಂದು ಜರಗಿತು. ಕರ್ನಿರೆ ಜಾರಂದಾಯ ದೈವದ ಗಡುವಾಡು ಬಳಿ ಕೊಪ್ಪಳ ತೋಟದಲ್ಲಿ ದುಬೈ ನಿವಾಸಿ – ಹವ್ಯಾಸಿ ಯಕ್ಷಗಾನ ವೇಷಧಾರಿ ಪ್ರಭಾಕರ ಡಿ. ಸುವರ್ಣ ಮತ್ತು ಕುಟುಂಬಿಕರು ಈ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಯಕ್ಷಗಾನ ಕ್ಷೇತ್ರದಲ್ಲಿ ತಾಳಮದ್ದಳೆ ಅರ್ಥಧಾರಿಗಳಾಗಿ, ವೇಷಧಾರಿಗಳಾಗಿ ಮತ್ತು ಸಂಘಟಕರಾಗಿ ಪ್ರಸಿದ್ಧರಾದ ಎಂಟು ಮಂದಿ ಸಾಧಕ ಕಲಾವಿದರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಯಕ್ಷಗಾನ ವಿದ್ವಾಂಸರಾದ ಡಾ. ಎಂ. ಪ್ರಭಾಕರ ಜೋಶಿ ಮತ್ತು ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ, ಅರ್ಥಧಾರಿ, ಸಂಘಟಕರಾದ ಉಜಿರೆ ಅಶೋಕ ಭಟ್, ವೇಷಧಾರಿಗಳಾದ ಸರಪಾಡಿ ಅಶೋಕ ಶೆಟ್ಟಿ, ಡಿ‌. ಮನೋಹರ ಕುಮಾರ್, ಶಶಿಕಾಂತ ಶೆಟ್ಟಿ ಕಾರ್ಕಳ ಹಾಗೂ ಯಕ್ಷಗಾನ ಮತ್ತು ನೃತ್ಯ ಕಲಾವಿದೆ ವಿದುಷಿ ಸುಮಂಗಲಾ ರತ್ನಾಕರ್ ಅವರನ್ನು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಲಕ್ಷ್ಮೀನಾರಾಯಣ…

Read More

ಬೆಂಗಳೂರು : ದಾವಣಗೆರೆ ಜಿಲ್ಲೆಯ ಸೊರಟೂರಿನವರಾದ ಶ್ರೀ ಸದಾಶಿವ ಸೊರಟೂರು ಅವರ ಅಪ್ರಕಟಿತ ಕಥಾಸಂಕಲನ ‘ಧ್ಯಾನಕ್ಕೆ ಕೂತ ನದಿ’ 2024ರ ಸಾಲಿನ ‘ಈ ಹೊತ್ತಿಗೆ ಕಥಾ ಪ್ರಶಸ್ತಿ’ಗೆ ಹಾಗೂ ಮಂಗಳೂರು ಜಿಲ್ಲೆಯ ಸಜಿಪನಡು ಊರಿನವರಾದ ಶ್ರೀ ನಿಝಾಮ್ ಗೋಳಿಪಡ್ಪು ಅವರ ‘ಅನಾಮಧೇಯ ಗೀರುಗಳು’ ಅಪ್ರಕಟಿತ ಕವನ ಸಂಕಲನ ಈ ಸಾಲಿನ ‘ಈ ಹೊತ್ತಿಗೆ ಕಾವ್ಯ ಪ್ರಶಸ್ತಿ’ಗೆ ಆಯ್ಕೆಯಾಗಿದೆ. ಎರಡೂ ಪ್ರಶಸ್ತಿಗಳು ತಲಾ ರೂಪಾಯಿ 10,000 ನಗದು ಹಾಗು ಪ್ರಶಸ್ತಿ ಫಲಕವನ್ನೊಳಗೊಂಡಿವೆ. ‘ಈ ಹೊತ್ತಿಗೆ ಕಥಾ ಪ್ರಶಸ್ತಿ’ ವಿಜೇತರಾದ ಶ್ರೀ ಸದಾಶಿವ ಸೊರಟೂರು ಅವರು ಪ್ರಸ್ತುತ ಹೊನ್ನಾಳಿಯಲ್ಲಿ ವಾಸವಾಗಿದ್ದು, ಹರಿಹರ ತಾಲೂಕಿನ ಮಲೇಬೆನ್ನೂರಿನಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ. ‘ಅರ್ಧ ಮಳೆ ಅರ್ಧ ಬಿಸಿಲು’ ಇವರ ಮೊದಲ ಕಥಾ ಸಂಕಲನ. ‘ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ’, ‘ಗಾಯಗೊಂಡ ಸಾಲುಗಳು’ ಇವರ ಕವನ ಸಂಕಲನಗಳು. ನಾಡಿನ ಖ್ಯಾತ ಕತೆಗಾರರು ಹಾಗೂ ಪತ್ರಕರ್ತರಾಗಿರುವ ಶ್ರೀ ದೇವು ಪತ್ತಾರ್ ಅವರು ಈ ಬಾರಿಯ ‘ಈ ಹೊತ್ತಿಗೆ ಕಥಾ ಪ್ರಶಸ್ತಿ’…

Read More

ಮಂಗಳೂರು : ದಿ. ಲಕ್ಮೀನಾರಾಯಣ ಅಲೆವೂರಾಯರು ವರ್ಕಾಡಿಯಂತಹಾ ಕುಗ್ರಾಮದಲ್ಲೂ ಯಕ್ಷಗಾನದ ಕಂಪನ್ನು ಪಸರಿಸಿದ ಎಲೆಮರೆಯ ಕಾಯಿಯಂತೆ ಇದ್ದು ಇತಿಹಾಸ ಸೇರಿದವರು. ಹಿಂದಿ ಭಾಷಾ ಪಂಡಿತರಾಗಿದ್ದು ಕನ್ನಡದ ಮೇಲೆ ಪ್ರಭುತ್ವವನ್ನು ಹೊಂದಿದ್ದು, ಅನೇಕ ಕಲಾವಿದರನ್ನು ಯಕ್ಷರಂಗಕ್ಕೆ ನೀಡಿದ್ದಾರೆ. ತಮ್ಮ ಪ್ರಬುದ್ಧ ಜಾಣ್ಮೆಯಿಂದ ಯಕ್ಷರಂಗವನ್ನು ಆಳಿದವರು. ಅವರು ಸೇರಿ ಸ್ಥಾಪಿಸಿದ ಕಾವೀಃ ಸುಬ್ರಹ್ಮಣ್ಯೇಶ್ವರ ಯಕ್ಷ ಮಂಡಳಿಗೆಗೀಗ 51 ವರ್ಷ. ಉತ್ತಮ, ಸ್ಫುಟ ಬರವಣಿಗೆಯ ಮೂಲಕ ಅನೇಕ ಹಸ್ತಪ್ರತಿಗಳನ್ನು ತಾಳೆಗರಿ ಓಲೆಯಲ್ಲಿದ್ದುದ್ದನ್ನು ಬರೆದು ಯಕ್ಷ ಕವಿ ಮತ್ತು ಯಕ್ಷ ನಿರ್ದೇಶಕರಾಗಿ ಹಲವು ಹವ್ಯಾಸಿ ಕಲಾವಿದರ ಗುರುವೂ ಆಗಿದ್ದಾರೆ. ಅವರ ಹೆಸರಿನಲ್ಲಿ ವರ್ಕಾಡಿ ರವಿ ಅಲೆವೂರಾಯ ಹಾಗೂ ಮಧುಸೂದನ ಅಲೆವೂರಾಯರು ‘ಅಲೆವೂರಾಯರ ಪ್ರತಿಷ್ಠಾನ’ವನ್ನು ಸ್ಥಾಪಿಸಿ ಇದೀಗ 7ನೇ ವರ್ಷಾಚರಣೆಯನ್ನು ದಿನಾಂಕ 01-02-2024ರಿಂದ 03-02-2024ರವರೆಗೆ ಶ್ರೀಕ್ಷೇತ್ರ ಶರವಿನಲ್ಲಿ ಮೂರು ಬಯಲಾಟ ಹಾಗೂ ಸನ್ಮಾನಗಳನ್ನು ನಡೆಸಲಿದ್ದಾರೆ. ಶ್ರೀಕ್ಷೇತ್ರ ಶರವಿನ ಶಿಲೆಶಿಲೆ ಮೊಕ್ತೇಸರರಾದ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಹಾಗೂ ಡಾ. ಸುದೇಶ್ ಶಾಸ್ತ್ರಿಗಳು ದೀಪ ಬೆಳಗಿಸಿ ಉದ್ಘಾಟಿಸಲಿದ್ದು, ಪ್ರೊ. ಎಂ.ಬಿ. ಪುರಾಣಿಕ್…

Read More

ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು, ಪುತ್ತೂರು ಇವರ ವತಿಯಿಂದ ಪಾಕ್ಷಿಕ ಕಾರ್ಯಕ್ರಮದ ಅಂಗವಾಗಿ ದಿನಾಂಕ 27-01-2024ರಂದು ಶ್ರೀ ಶಕ್ತಿ ಆಂಜನೇಯ ಮಂತ್ರಾಲಯ ಬೊಳುವಾರು ಇಲ್ಲಿ ಪಾರ್ತಿಸುಬ್ಬ ವಿರಚಿತ ‘ಕಬಂದ-ಶಬರಿ ಮೋಕ್ಷ, ಸುಗ್ರೀವ ಸಖ್ಯ’ ಎಂಬ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಲಕ್ಷ್ಮೀ ನಾರಾಯಣ ಭಟ್ ಬಟ್ಯಮೂಲೆ, ಆನಂದ ಸವಣೂರು ಹಾಗೂ ಚೆಂಡೆ ಮದ್ದಳೆಗಳಲ್ಲಿ ಪದ್ಯಾಣ ಶಂಕರನಾರಾಯಣ ಭಟ್, ಮುರಳೀಧರ ಕಲ್ಲೂರಾಯ ಮತ್ತು ಮಾ. ಪರೀಕ್ಷಿತ್ ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ ಬಾರ್ಯ ಹಾಗೂ ಮಾಂಬಾಡಿ ವೇಣುಗೋಪಾಲ್ ಭಟ್ (ಶ್ರೀ ರಾಮ), ದುಗ್ಗಪ್ಪ ನಡುಗಲ್ಲು (ಹನುಮಂತ), ಅಚ್ಯುತ ಪಾಂಗಣ್ಣಾಯ (ಸುಗ್ರೀವ), ಕಿಶೋರಿ ದುಗ್ಗಪ್ಪ ನಡುಗಲ್ಲು (ಶಬರಿ), ಹರಿಣಾಕ್ಷಿ ಜೆ. ಶೆಟ್ಟಿ (ಕಬಂಧ) ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ ವಂದಿಸಿದರು. ಪಿ.ಜಿ. ಜಗನ್ನಿವಾಸ ರಾವ್ ಪ್ರಾಯೋಜಿಸಿದರು.

Read More

ದೇರಳಕಟ್ಟೆ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ವತಿಯಿಂದ ದೇರಳಕಟ್ಟೆ ಕಂಪರ್ಟ್ಸ್ ಇನ್ ಸಭಾಂಗಣದಲ್ಲಿ ರವೀಂದ್ರ ರೈ ಕಲ್ಲಿಮಾರು ಇವರ ‘ಮೇಲೋಗರ’ ಎಂಬ ಚಿಂತನ ಸಂಕಲನದ ಲೋಕಾರ್ಪಣೆ ಕಾರ್ಯಕ್ರಮವು ದಿನಾಂಕ 27-01-2024ರಂದು ನಡೆಯಿತು. ಕೃತಿ ಬಿಡುಗಡೆಗೊಳಿಸಿದ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ಮಾತನಾಡುತ್ತಾ “ಯುವ ತಲೆಮಾರು ದಾರಿ ತಪ್ಪದಂತೆ ಮಾರ್ಗದರ್ಶನ ಮಾಡುವ ಹಾಗೂ ಯುವಕರನ್ನು ಮರುಳು ಮಾಡುವ ಸಾಮಾಜಿಕ ವ್ಯವಸ್ಥೆಯಲ್ಲಿ ಮೌಲ್ಯಯುತವಾದ ಚಿಂತನೆಗಳು ಬೇಕಾಗಿವೆ. ರವೀಂದ್ರ ರೈಗಳ ‘ಮೇಲೋಗರ’ ಕೃತಿ ಈ ಮಾರ್ಗದರ್ಶನ ನೀಡಬಲ್ಲ ಹೊತ್ತಗೆ” ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜಾನಪದ ವಿದ್ವಾಂಸರು ವಿವಿ ವಿಶ್ರಾಂತ ಕುಲಪತಿ ಪ್ರೊ. ಕೆ. ಚಿನ್ನಪ್ಪಗೌಡ ಮಾತನಾಡಿ “ಅತ್ಯುತ್ತಮ ಶಿಕ್ಷಕರಾದವರಿಗೆ ಮಾರ್ಗದರ್ಶಕ ಚಿಂತನೆಗಳನ್ನು ನೀಡಲು ಸಾಧ್ಯ. ಸಾಂದರ್ಭಿಕವೂ ಸಾಮಾಜಿಕ ಕಾಳಜಿಯನ್ನು ಹೊಂದಿದ ರವೀಂದ್ರ ರೈಗಳ ಚಿಂತನ ಕೃತಿ ಎಲ್ಲರಿಗೂ ಮಾರ್ಗದರ್ಶಿ. ಇತ್ತೀಚಿನ ಕೆಲವು ಘಟನೆಗಳನ್ನು ಗಮನಿಸುವಾಗ ಸಮಾಜದಲ್ಲಿ ನಮಗೆ ಅರಗಿಸಿಕೊಳ್ಳಲಾಗದ, ವಿವರಿಸಲಾಗದ ನೈತಿಕ ಅಧ:ಪತನ…

Read More

ಮಣಿಪಾಲ : ಮಂಗಳೂರಿನ ‘ಪಿಂಗಾರ ಸಾಹಿತ್ಯ ಬಳಗ’ದಿಂದ ಮಣಿಪಾಲದ ದಶರಥನಗರದಲ್ಲಿ ಆಂಟನಿ ಲೂವಿಸ್ ಅವರ ಅಂಗಳದಲ್ಲಿ ಇಪ್ಪತ್ತನೆಯ ವರುಷದ ‘ಸಾಹಿತ್ಯ ಸಂಭ್ರಮ ಮತ್ತು ಬಹುಭಾಷಾ ಕವಿಗೋಷ್ಠಿ’ಯು ದಿನಾಂಕ 27-01-2024ರಂದು ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ರೇಮಂಡ್ ಡಿಕುನ್ಹಾ ತಾಕೊಡೆ ಮಾತನಾಡಿ “ಯಾವುದೇ ಸಾಹಿತ್ಯದ ರಚನೆ ಮಾತೃ ಭಾಷೆಯ ಸರಿಯಾದ ಋಣ ಸಂದಾಯದ ಅವಕಾಶವಾಗಿದೆ. ನಮ್ಮ ಸುತ್ತಲಿನ ಸಹೋದರ ಭಾಷೆಯಲ್ಲಿ ಸಾಹಿತ್ಯದ ಓದುವ ಹವ್ಯಾಸ ಬಹಳಷ್ಟು ಲಾಭದಾಯಕ” ಎಂದು ನುಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಡಾ. ಸುರೇಶ ನೆಗಳಗುಳಿ ಮಾತನಾಡಿ “ಸಾಹಿತಿ ಆಗಲು ಆಶಯ, ಆಕ್ರೋಶ, ಆಶಾಭಾವಗಳು ಬೇಕು ಮತ್ತು ಓದುವ ಹವ್ಯಾಸ ಬೆಳೆಸಬೇಕು” ಎಂದು ಹೇಳಿದರು. ಕನ್ನಡ, ಕೊಂಕಣಿ, ತುಳು, ತೆಲುಗು, ಹಿಂದಿ ಪಂಚಭಾಷಾ‌ ಕವಿಗೋಷ್ಟಿಗೆ ಹಿರಿಯ ಕೊಂಕಣಿ ಸಾಹಿತಿ ಡಾ. ನಾಗೇಶ್ ಕುಮಾರ್ ಕವಿತೆ ಹಾಡಿ ಚಾಲನೆ ನೀಡಿದರು. ‘ಪನ್ವಾರ್’ ಕೊಂಕಣಿ ಮಾಸಿಕದ ಸಂಪಾದಕರಾದ ಜ್ಞಾನದೇವ್ ಮಲ್ಯಾ ಕವಿಗಳಿಗೆ ಪುಸ್ತಕ ಗೌರವ ನೀಡಿದರು. ಕವಿಗಳಾದ ವಿನೋದ…

Read More