Author: roovari

ಮಂಗಳೂರು : ಭರತಾಂಜಲಿ (ರಿ.) ಕೊಟ್ಟಾರ ಮಂಗಳೂರು ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ನಗರದ ಪುರಭವನದಲ್ಲಿ ಇದೇ ದಿನಾಂಕ 27-01-2024 ಶನಿವಾರ ಸಂಜೆ ಗಂಟೆ 5.15ಕ್ಕೆ ‘ನೃತ್ಯಾಮೃತಂ 2024’ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತಾರೆ. ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರತಿಷ್ಠಿತ ನೃತ್ಯ ಸಂಸ್ಥೆಗಳಾದ ನಾಟ್ಯ ನಿಕೇತನ (ರಿ) ಕೊಲ್ಯ, ಸನಾತನ ನಾಟ್ಯಾಲಯ (ರಿ) ಮಂಗಳೂರು, ಕಲಾನಿಕೇತನ ಡ್ಯಾನ್ಸ್ ಫೌಂಡೇಶನ್ (ರಿ) ಕಲ್ಲಡ್ಕ, ನೃತ್ಯ ಸುಧಾ (ರಿ) ಮೇರಿಹಿಲ್ ಮತ್ತು ನೃತ್ಯೋಪಾಸನಾ ಕಲಾ ಅಕಾಡೆಮಿ (ರಿ) ಪುತ್ತೂರು ಸಂಸ್ಥೆಗಳ ಕಲಾವಿದರುಗಳಿಂದ ಸಮೂಹ ನೃತ್ಯ ಪ್ರದರ್ಶನಗಳನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷರಾದ ಪಿ.ಬಿ. ಹರೀಶ್ ರೈ ಮಾಡಲಿದ್ದು, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀ ರಾಜೇಶ್ ಜಿ.ಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು ಎಂದು ಭರತಾಂಜಲಿಯ ನೃತ್ಯ ಗುರುಗಳಾದ ವಿದುಷಿ ಪ್ರತಿಮಾ ಶ್ರೀಧರ್ ತಿಳಿಸಿರುತ್ತಾರೆ.

Read More

ಉಡುಪಿ : ತುಳುಕೂಟ ಉಡುಪಿ (ರಿ.) ವತಿಯಿಂದ 22ನೇ ವರ್ಷದ ‘ಕೆಮ್ತೂರು ತುಳು ನಾಟಕ ಪ್ರಶಸ್ತಿ’ ಪ್ರದಾನ ಸಮಾರಂಭ ಹಾಗೂ ನಾಟಕ ಪ್ರದರ್ಶನವು ದಿನಾಂಕ 28-01-2024ರಂದು ಸಂಜೆ ಗಂಟೆ 5.30ಕ್ಕೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಳುಕೂಟದ ಅಧ್ಯಕ್ಷರಾದ ಶ್ರೀ ಬಿ. ಜಯಕರ ಶೆಟ್ಟಿ ಇಂದ್ರಾಳಿ ಇವರು ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಹಿರಿಯ ರಂಗ ಕಲಾವಿದರಾದ ಶ್ರೀ ದಯಾನಂದ ಶೆಟ್ಟಿ ಹೇರೂರು ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ‘ಕೆಮ್ತೂರು ತುಳು ನಾಟಕ ಪ್ರಶಸ್ತಿ -2024’ ವಿಜೇತ ತಂಡ ಮಣಿಪಾಲದ ‘ಸಂಗಮ ಕಲಾವಿದರು’ ಇವರಿಂದ ರೋಹಿತ್ ಎಸ್. ಬೈಕಾಡಿ ನಿರ್ದೇಶನದ ‘ಮರಣ ಗೆಂದಿನಾಯೆ’ ನಾಟಕ ಪ್ರದರ್ಶನ ನಡೆಯಲಿದೆ.

Read More

ಕಾಸರಗೋಡು: ರಂಗಚಿನ್ನಾರಿ( ರಿ) ಕಾಸರಗೋಡು ಇದರ ಸಂಗೀತ ಘಟಕ ‘ಸ್ವರ ಚಿನ್ನಾರಿ’ಯ ಸರಣಿ ಕಾರ್ಯಕ್ರಮದ ನಾಲ್ಕನೇ ಹಂತವಾಗಿ ‘ಕನ್ನಡ ಧ್ವನಿ’ ಕನ್ನಡ ನಾಡಗೀತೆ ಭಾವಗೀತೆಗಳ ಕಲಿಕಾ ಶಿಬಿರವು ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ 5,6 ಮತ್ತು 7 ನೇ ತರಗತಿ ವಿದ್ಯಾರ್ಥಿಗಳಿಗೆ ದಿನಾಂಕ 23-01-2024 ರಂದು ಬೆಳಿಗ್ಗೆ ಘಂಟೆ 10.00 ರಿಂದ ಯಶಸ್ವಿಯಾಗಿ ನಡೆಯಿತು. ಶಾಲಾ ಮ್ಯಾನೇಜರ್ ಶ್ರೀ ಜಯಪ್ರಕಾಶ್ ಪಜಿಲ ದೀಪ ಬೆಳಗಿಸಿ ಉದ್ಘಾಟಿಸಿದ ಈ ಕಾರ್ಯಕ್ರಮದಲ್ಲಿ ಪ್ರಾಸ್ತವಿಕ ಮಾತನ್ನಾಡಿದ ರಂಗಚಿನ್ನಾರಿ ನಿರ್ದೇಶಕರಲ್ಲಿ ಒಬ್ಬರಾದ ಶ್ರೀ ಸತೀಶ್ಚಂದ್ರ ಭಂಡಾರಿ “ಶಾಲಾ ವಿದ್ಯಾರ್ಥಿಗಳನ್ನು ನೋಡುವಾಗ ತಮ್ಮ ಬಾಲ್ಯದ ಗೆಳೆತನ ನೆನಪಾಗುತ್ತಿದೆ. ನಾಲ್ಕು ಜನರ ಗೆಳೆತನ ‘ರಂಗಚಿನ್ನಾರಿ’ ಎಂಬ ಪ್ರತಿಷ್ಠಿತ ಸಂಸ್ಥೆಯನ್ನು ಹುಟ್ಟು ಹಾಕಿ, ಕನ್ನಡದ ಉಳಿವಿನ ಹಾಗೂ ಪ್ರತಿಭೆಗಳ ಪ್ರದರ್ಶನಕ್ಕೆ ವೇದಿಕೆಗಳನ್ನು ರೂಪಿಸಿ ಕೊಡುವ ಸದುದ್ದೇಶ ಹೊಂದಿದ್ದು, ಸಂಸ್ಥೆ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ವಿದ್ಯಾರ್ಥಿಗಳು ಕಲಿಕೆ ಎಂಬುದನ್ನು ವಿದ್ಯೆ ಮತ್ತು ಪ್ರತಿಭೆ ಎರಡಕ್ಕೂ ಸಮಾನ ರೀತಿಯಲ್ಲಿ ಹಂಚುತ್ತಾ ಜೀವನದಲ್ಲಿ ಸಾಧನೆಯತ್ತ ಸಾಗಬೇಕು.”…

Read More

ಬೆಂಗಳೂರು : ಅಂತರಂಗದಿಂದ ಬಹಿರಂಗದೆಡೆಗೆ ‘ಕೊಬಾಲ್ಟ್ ಕಲಾ ಸಂಪರ್ಕ’ ಕಾರ್ಯಕ್ರಮ ಇಂತಹ ಒಂದು ಅಭೂತಪೂರ್ವ ಅನುಭವವನ್ನು ನೀಡಿತ್ತು. ಸ್ವಚ್ಛಂದ ಹಸಿರಿನ ನಡುವೆ ಕಲಾ ರಚನೆ ಮುದ ನೀಡುವಂತಹುದು. ಕಲಾ ಸಂಪರ್ಕ ಇಂತಹ ಒಂದು ಪರಿಸರದಲ್ಲಿ ನಡೆದಿತ್ತು. ಕಲಾವಿದರು ಮತ್ತು ಕಲಾಕೃತಿಗಳು ಸಾರ್ವಜನಿಕರನ್ನು ತಲುಪಿದಷ್ಟು ಕಲೆ ಬೆಳೆಯುತ್ತದೆ. ಕಲಾಕೃತಿಗಳನ್ನು ನೋಡಿ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದಾಗ ಕಲಾವಿದನಿಗೂ ಸಮಾಧಾನ. ಒಂದು ಕಲಾಕೃತಿ ರಚನೆ ಆಯ್ತು ಅಂದರೆ ಒಂದು ಸಂತಾನ ಆದ ಹಾಗೆ ಎಂಬ ಮಾತಿದೆ. ಹೆಣ್ಣು ಮಕ್ಕಳು ಹೇಗೆ ತವರು ಮನೆಯಿಂದ ಇನ್ನೊಂದು ಮನೆಗೆ ಹೋಗಿ ಆ ಮನೆಯ ಪ್ರೀತಿ ವಿಶ್ವಾಸ ಗಳಿಸಿ ಆ ಕುಟುಂಬದವರಲ್ಲಿ ಒಬ್ಬಳಾಗಿ ಆ ಮನೆಯನ್ನು ಬೆಳಗುವ ಹಾಗೆ ಕಲಾವಿದನ ಕಲಾಕೃತಿಗಳು ಕೂಡ ಕಲಾಪ್ರಿಯರ ಮನೆ, ಮನ ಬೆಳಗುತ್ತ ಅಲಂಕಾರಗೊಳಿಸುತ್ತದೆ. ಆ ಕಲಾಕೃತಿಗಳ ಬಗ್ಗೆ ಮನೆಗೆ ಬಂದ ಅತಿಥಿಗಳ ಜೊತೆ ಪರಸ್ಪರ ವಿಚಾರ ವಿನಿಮಯ ನಡೆಯುತ್ತದೆ. ಅಲ್ಲಿ ಸಕಾರಾತ್ಮಕ ಶಕ್ತಿ ನೆಲೆಗೊಂಡಿರುತ್ತದೆ. ಅದಕ್ಕೆ ಕಲಾವಿದ ಕಲಾಕೃತಿಗಳನ್ನು ರಚಿಸಿದ ಮೇಲೆ ತನ್ನದು…

Read More

ಮುಡಿಪು : ಮಂಗಳೂರು ವಿ.ವಿ.ಯ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಆವರಣದಲ್ಲಿ ಕರಾವಳಿ ಜಾನಪದ ಸಂಸ್ಕೃತಿಯನ್ನು ಅನಾವರಣಗೊಳಿಸುವ ‘ಸಂಸ್ಕೃತಿ ಸಿರಿ’ ಕಾರ್ಯಕ್ರಮವು ದಿನಾಂಕ 19-01-2024ರ ಶುಕ್ರವಾರದಂದು ನಡೆಯಿತು. ಕರಾವಳಿಯ ಕೃಷಿ ಪದ್ಧತಿಯನ್ನು ಪರಿಚಯಿಸುವ ಪುಟ್ಟ ಗದ್ದೆ ನಿರ್ಮಾಣ, ಅದರಲ್ಲಿ ನೇಜಿ, ಪಕ್ಕದಲ್ಲೇ ತುಳುನಾಡಿನ ಕ್ರೀಡೆ ಮೂಡಯಿ ಪಡ್ಡಾಯಿ ಎಂಬ ಕಂಬಳದ ಗದ್ದೆ, ಇನ್ನೊಂದೆಡೆ ಯಕ್ಷಗಾನದ ರಂಗಸ್ಥಳ, ಮತ್ತೊಂದೆಡೆ ತುಳುನಾಡಿನ ಆಚರಣೆಯನ್ನು ಪರಿಚಯಿಸುವ ದೈವದ ಕೊಡಿಯಡಿ, ನಾಗಬನದ ನಿರ್ಮಾಣ, ಮಧ್ಯದ ವೇದಿಕೆಗೆ ಹೆಣೆದ ಮಡಲು ಮತ್ತು ಮುಳಿ ಹುಲ್ಲು ಹಾಸಿ ಮಾಡಿದ ಮನೆ. ಅದರೊಳಗೆ ಒಲೆಯಲ್ಲಿ ಹಾಲು ಕಾಯಿಸಿ ವಿದ್ಯಾರ್ಥಿಗಳು ಸಂಭ್ರಮಿಸಿದರು. ಸ್ವತ: ವಿವಿಯ ಕುಲಪತಿಗಳೇ ಒಲೆಗೆ ಕಟ್ಟಿಗೆಯಿಟ್ಟು ಬೆಂಕಿ ಹಚ್ಚಿದರು. ಪುಟ್ಟ ಮೆರವಣಿಗೆಯಲ್ಲಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ಕುಲಪತಿ ಪ್ರೊ. ಜಯರಾಜ್ ಅಮೀನ್, ಸಿಂಡಿಕೇಟ್ ಸದಸ್ಯ ಅಚ್ಯುತ ಗಟ್ಟಿ, ಜಾನಪದ ವಿದ್ವಾಂಸ ಡಾ. ಗಣೇಶ್ ಅಮೀನ್ ಸಂಕಮಾರ್, ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಡಾ. ಸೋಮಣ್ಣ ಹೊಂಗಳ್ಳಿ, ಪ್ರಾಧ್ಯಾಪಕರುಗಳಾದ…

Read More

ಕೋಟ : ವಿಶ್ವ ವಿಖ್ಯಾತ ಸಾಲಿಗ್ರಾಮ ಮಕ್ಕಳ ಮೇಳದ ಹಿರಿಯ ಕಲಾವಿದರಿಂದ ದಿನಾಂಕ 20-01-2024ರಂದು ಕೋಟೇಶ್ವರ ಬೀಜಾಡಿ ಸಮೀಪದ ಯುವ ಸ್ಯಾಂಡ್ಸ್ ಬೀಚ್ ರೆಸಾರ್ಟ್ನಲ್ಲಿ ಪಂಚಕರ್ಮ ಚಿಕಿತ್ಸೆಗಾಗಿ ಬಂದ ಅಮೇರಿಕಾದ ಪ್ರಜೆಗಳಿಗಾಗಿ ಕಲಾವಿದರೂ, ಉಪನ್ಯಾಸಕರೂ ಆದ ಸುಜಯೀಂದ್ರ ಹಂದೆ ಎಚ್. ನಿರ್ದೇಶನದಲ್ಲಿ ಇಂಗ್ಲಿಷ್ ಭಾಷಾ ಸಂವಹನದೊಂದಿಗೆ ಕರ್ನಾಟಕದ ಶ್ರೀಮಂತ ಕಲೆ ಯಕ್ಷಗಾನದ ಬಡಗುತಿಟ್ಟಿನ ಪ್ರಾತ್ಯಕ್ಷಿಕೆ ನಡೆಯಿತು. ತೆರೆಯ ಮರೆಯ ಚೌಕಿಯಲ್ಲಿ ನಡೆಯುವ ಸಾಂಪ್ರಾಯಿಕ ಮುಖವರ್ಣಿಕೆ, ವೇಷಕಟ್ಟುವ ಕ್ರಮ, ಕೇದಗೆಮುಂದಲೆ ಮತ್ತು ಕಿರೀಟ ವೇಷಗಳ ಸಿದ್ಧತೆಯನ್ನು ರಂಗದಲ್ಲೇ ತೋರಿಸುವುದರೊಂದಿಗೆ ವಿವಿಧ ತಾಳ, ಹಸ್ತಾಭಿನಯ ಮುದ್ರೆ, ರಸ ಭಾವಗಳ ಕುಣಿತ, ಯುದ್ಧ ಕುಣಿತಗಳ ಆಂಗಿಕಾಭಿನಯ, ಆಹಾರ್ಯಾಭಿನಯ, ವಾಚಿಕಾಭಿನಯ, ಸಾತ್ವಿಕಾಭಿನಯಗಳನ್ನು ಪ್ರದರ್ಶಿಸಲಾಯಿತು. ಕುಮಾರಿ ಕಾವ್ಯ ಹಂದೆ ಎಚ್. ನಿರೂಪಣೆಯಲ್ಲಿ ನವೀನ್ ಕೋಟ, ಮನೋಜ್ ಆಚಾರ್, ಆದಿತ್ಯ ಹೊಳ್ಳ, ಭಾಗವತ ದೇವರಾಜ ದಾಸ್, ಮದ್ದಳೆವಾದಕರಾದ ರಾಘವೇಂದ್ರ ಹೆಗಡೆ ಯಲ್ಲಾಪುರ, ಚಂಡೆವಾದಕರಾದ ಸುದೀಪ ಉರಾಳ ಮುಮ್ಮೇಳ ಹಿಮ್ಮೇಳ ಕಲಾವಿದರಾಗಿ ಭಾಗವಹಿಸಿದರು.

Read More

ಮಂಗಳೂರು : ಉರ್ವಮಾರ್ಕೆಟ್ ನಲ್ಲಿರುವ ನಾಟ್ಯಾರಾಧನಾ ಕಲಾ ಕೇಂದ್ರದ 30ನೇ ವರ್ಷಾಚರಣೆಯ ಸಂಭ್ರಮದ ಹಿನ್ನೆಲೆಯಲ್ಲಿ ನಾಟ್ಯಾರಾಧನಾ ತ್ರಿಂಶೋತ್ಸವ ಸಮಿತಿ ಮತ್ತು ನಾಟ್ಯಾರಾಧನಾ ವಿದ್ಯಾರ್ಥಿ ಸಮಿತಿಯ ಸಹಯೋಗದಲ್ಲಿ ‘ನಾಟ್ಯಾರಾಧನಾ ತ್ರಿಂಶೋತ್ಸವ ಸಂಭ್ರಮ ಉದ್ಘಾಟನಾ ಸಮಾರಂಭ’ವು ದಿನಾಂಕ 18-01-2024ರಂದು ಪುರಭವನದಲ್ಲಿ ಜರುಗಿತು. ಈ ಸಮಾರಂಭದ ಉದ್ಘಾಟನೆ ಮಾಡಿ ಆಶೀರ್ವಚನ ನೀಡಿದ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ “ಭಾರತೀಯತೆ ನಿಂತಿರುವುದು ಧರ್ಮ ಮತ್ತು ಸಂಸ್ಕೃತಿಯ ನೆಲೆಯಲ್ಲಿ. ಅವೆರಡೂ ಬೆರೆತರೆ ಮಾನವ ಆಸ್ತಿಕನಾಗುತ್ತಾನೆ. ಪೂಜೆ ದೇವರನ್ನು ಸಂತೃಪ್ತಿಗೊಳಿಸಿದರೆ ಗಾಯನ ನರ್ತನಗಳು ದೇವರನ್ನು ಪ್ರಸನ್ನಗೊಳಿಸುತ್ತದೆ. ನಾಟ್ಯಾರಾಧನಾ ಕಲಾ ಕೇಂದ್ರದ ಗುರು ವಿದುಷಿ ಸುಮಂಗಲಾ ರತ್ನಾಕರ್ ರಾವ್ 30 ವರ್ಷಗಳ ಹಿಂದೆ ಆರಂಭಿಸಿದ ಸಂಸ್ಥೆಯ ನೆರಳಲ್ಲಿ ಭರತನಾಟ್ಯ ಕಲಿಸುವ ಮೂಲಕ ಭಾರತೀಯ ಸಂಸ್ಕೃತಿಯ ಉಳಿವಿಗಾಗಿ ಶ್ರಮಿಸಿದ್ದಾರೆ. ಅವರು ಭರತನಾಟ್ಯದ ಜತೆಗೆ ಯಕ್ಷಗಾನದಲ್ಲೂ ಗುರುತಿಸಿಕೊಂಡಿರುವುದು ಸ್ತುತ್ಯರ್ಹ” ಎಂದು ಶುಭ ಹಾರೈಸಿದರು. ಮಧ್ಯಂತರದಲ್ಲಿ ಮಾತನಾಡಿದ ಮಹಾಗುರು ಶ್ರೀ ಮೋಹನ್ ಕುಮಾರ್ ಉಳ್ಳಾಲ್ ಅವರು ವಿದ್ಯಾರ್ಥಿಗಳ ರೇಖಾಬದ್ಧ ಅಂಗಶುದ್ಧಿ ಭಾವಶುದ್ಧಿಯಿಂದ…

Read More

ಮುಡಿಪು : ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ‌. ಕನ್ನಡ ಅಧ್ಯಯನ ಸಂಸ್ಥೆ ಮತ್ತು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಳ್ಳಾಲ ತಾಲೂಕು ಘಟಕದ ವತಿಯಿಂದ ವಿ.ವಿ.ಯ ಹಳೆಸೆನೆಟ್ ಸಭಾಂಗಣದಲ್ಲಿ ‘ಮಹಾಭಾರತದಲ್ಲಿ ದಾರ್ಶನಿಕತೆ’ ಎಂಬ ವಿಷಯದಲ್ಲಿ ಉಪನ್ಯಾಸ ಕಾರ್ಯಕ್ರಮ ದಿನಾಂಕ 17-01-2024ರಂದು ನಡೆಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶ್ರೀ ಲಕ್ಷ್ಮೀಶ ತೋಳ್ಪಾಡಿಯವರು ಮಾತನಾಡಿ “ಶಾಂತಿ ನಿಜವಾಗಿ ಯಾರಿಗೂ ಬೇಡ. ಎಲ್ಲರಿಗೂ ಅವರವರ ಧ್ವಜ ಹಾರಬೇಕು ಅಷ್ಟೇ. ಇದು ನಮ್ಮ ಸಾಮಾಜಿಕ, ರಾಜಕೀಯ, ಧಾರ್ಮಿಕ ಕ್ಷೇತ್ರಗಳ ಸ್ಥಿತಿಗತಿ. ಎಲ್ಲ ಜಾತಿ ಧರ್ಮಗಳಲ್ಲೂ ಇಂದು ಕ್ಷತ್ರಿಯರೇ ಹೆಚ್ಚಾಗಿದ್ದಾರೆ. ಅವರಿಗೆ ಮಹಾಭಾರತದ ಕೊನೆಯಲ್ಲಿ ಬರುವ ಧರ್ಮರಾಯನ ಪಶ್ಚಾತ್ತಾಪದ ಅರಿವು ಒದಗಬೇಕಿದೆ. ದೇವರಿಗೆ ನಟಿಸಲಾಗುವುದಿಲ್ಲ. ಮನುಷ್ಯನಿಗೆ ನಟಿಸದೇ ಇರಲಾಗುವುದಿಲ್ಲ. ನಟನೆ ತರುವ ಸಂಕಟ ವಿಷಾದಕ್ಕೆ ದಾರಿ ಮಾಡುತ್ತದೆ. ನರನಿಗೆ ವಿಷಾದ ಉಂಟಾಗದೇ ದೇವರ ಪ್ರಸಾದವಿಲ್ಲ. ಸಂಸ್ಕೃತಿಗೆ ಬಾಲ್ಯವನ್ನು ವಿಸ್ತಾರಗೊಳಿಸುವ ಹಂಬಲ ನಾಗರಿಕತೆಗೆ ಬಾಲ್ಯವನ್ನು ನಾಶ ಮಾಡುವ ಧಾವಂತ. ಕವಿ ಯಾವ ಪೂರ್ವಾಗ್ರಹವೂ…

Read More

ಮಂಗಳೂರು : ಕುಳಾಯಿ ಹೊಸಬೆಟ್ಟಿನ ಶ್ರೀ ಶಾರದಾ ನಾಟ್ಯಾಲಯ ಮತ್ತು ಸುರತ್ಕಲ್ ಗೋವಿಂದ ದಾಸ ಕಾಲೇಜಿನ ಲಲಿತಕಲಾ ಸಂಘ ಇವರ ಸಹಯೋಗದಲ್ಲಿ ಶೀಲಾ ದಿವಾಕರ್ ಇವರಿಗೆ ಅರ್ಪಿಸುವ ಗುರುವಿಗೊಂದು ನಾಟ್ಯ ನಮನ ‘ಗಾನ ಶಾರದೆಗೆ ನಮನ’ ಕಾರ್ಯಕ್ರಮವು ದಿನಾಂಕ 26-01-2024ರಂದು ಸುರತ್ಕಲ್ಲಿನ ಗೋವಿಂದ ದಾಸ ಕಾಲೇಜಿನ ರಂಗ ಮಂದಿರದಲ್ಲಿ ನಡೆಯಲಿದೆ. ಈ ಕಾರ್ಯಕ್ರಮವು ಸುರತ್ಕಲ್ಲಿನ ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೃಷ್ಣಮೂರ್ತಿ ಪಿ. ಇವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ವಿದುಷಿ ಶ್ರೀಮತಿ ಪ್ರಣತಿ ಸತೀಶ್, ವಿದುಷಿ ಶ್ರೀಮತಿ ಪೂರ್ಣಿಮಾ ತೇಜಸ್ ರಾನಡೆ, ವಿದುಷಿ ಕುಮಾರಿ ವೈಷ್ಣವಿ ಡಿ., ವಿದುಷಿ ಕುಮಾರಿ ದೀಪಾಲಿ ಡಿ.ಕೆ., ಕುಮಾರಿ ಶ್ರದ್ಧಾ ಎಮ್., ಕುಮಾರಿ ಅಮೃತಾ ರಾವ್, ಕುಮಾರಿ ಚಿನ್ಮಯೀ ಎಸ್. ರಾವ್ ಮತ್ತು ಮಾಸ್ಟರ್ ತನ್ಮಯ್ ಸುರೇಶ್ ಇವರುಗಳು ನೃತ್ಯ ನಮನ ನಡೆಸಿಕೊಡಲಿದ್ದು, ನಟುವಾಂಗ ಹಾಗೂ…

Read More

ಉಡುಪಿ : ರಂಗಭೂಮಿ (ರಿ.) ಉಡುಪಿ ಇದರ ವತಿಯಿಂದ ಮೂರು ದಿನಗಳ ‘ರಂಗಭೂಮಿ ರಂಗೋತ್ಸವ’ ಮತ್ತು ‘ರಂಗಭೂಮಿ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮವನ್ನು ದಿನಾಂಕ 25-01-2024ರಿಂದ 27-01-2024ರವರೆಗೆ ಉಡುಪಿ, ಎಂ.ಜಿ.ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವು ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್, ಮಣಿಪಾಲ ಫೌಂಡೇಶನ್, ಉಡುಪಿಯ ಎಂ.ಜಿ.ಎಂ. ಕಾಲೇಜು, ಮಂಗಳೂರಿನ ಪಿ.ವಿ.ಎಸ್. ಸಮೂಹ ಸಂಸ್ಥೆಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ-ಬೆಂಗಳೂರು ಮತ್ತು ಉಡುಪಿಯ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ (ರಿ.) ಇವರ ಸಹಕಾರದೊಂದಿಗೆ ನಡೆಯಲಿದೆ. ದಿನಾಂಕ 25-01-2024ರಂದು ‘ರಂಗಭೂಮಿ ರಂಗೋತ್ಸವ’ ಉದ್ಘಾಟನಾ ಸಮಾರಂಭ ಹಾಗೂ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಇವರ ಸಹಯೋಗದಲ್ಲಿ ಕರ್ನಾಟಕ ಜಾನಪದ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ. ಕೆ. ಜಿನ್ನಪ್ಪ ಗೌಡ ಇವರಿಗೆ ‘ಜಾನಪದ ಪ್ರತಿಭಾ ಪ್ರಶಸ್ತಿ’ ಪ್ರದಾನ ನಡೆಯಲಿದೆ. ರಂಗಭೂಮಿಯ ಗೌರವಾಧ್ಯಕ್ಷರಾದ ಡಾ. ಹೆಚ್.ಎಸ್. ಬಲ್ಲಾಳ್ ಇವರು ಸಭಾಧ್ಯಕ್ಷತೆ ವಹಿಸಲಿದ್ದು, ಉಡುಪಿ ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಡಾ. ಕೆ. ವಿದ್ಯಾ…

Read More