Author: roovari

ಮಂಗಳೂರು : ಅವಿಭಜಿತ ದ.ಕ. ಜಿಲ್ಲೆ ಮತ್ತು ಕಾಸರಗೋಡು ವ್ಯಾಪ್ತಿಯ ಕರಾವಳಿ ಲೇಖಕಿ – ವಾಚಕಿಯರ ಸಂಘವು 2018ರ ಜನವರಿಯಿಂದ ಡಿಸೆಂಬರ್ ಅವಧಿಯಲ್ಲಿ ಪ್ರಕಟವಾಗಿರುವ ಕಥಾ ಸಂಕಲನಗಳ ಸ್ಪರ್ಧೆ ಹಾಗೂ ಪ್ರಕಟಣೆಗೆ ಸಿದ್ಧವಾಗಿರುವ ಏಕಾಂಕ ನಾಟಕ ಹಸ್ತ ಪ್ರತಿ ಸ್ಪರ್ಧೆಗಳಿಗಾಗಿ ಕೃತಿಗಳನ್ನು ಆಹ್ವಾನಿಸಿದೆ. ಸಣ್ಣ ಕಥಾ ಸಂಕಲನಗಳ ಸ್ಪರ್ಧೆಗೆ ದ.ಕ., ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ಲೇಖಕಿಯರಿಂದ 2023ರ ಜನವರಿಯಿಂದ ಡಿಸೆಂಬರ್ ಅವಧಿಯಲ್ಲಿ ಪ್ರಕಟಿತವಾಗಿರುವ ಕಥಾ ಸಂಕಲನಗಳು. ಏಕಾಂಕ ನಾಟಕ ಹಸ್ತಪ್ರತಿ ಸ್ಪರ್ಧೆಗೆ 3 ಜಿಲ್ಲೆಗಳ ಲೇಖಕಿಯರಿಂದ ರಚಿತವಾದ 1 ಗಂಟೆ ಅವಧಿಯ (ಡಿಟಿಪಿ ಮಾಡಿದ 30 ರಿಂದ 35 ಪುಟಗಳ ಸಾಮಾಜಿಕ ಚಾರಿತ್ರಿಕ ಅಥವಾ ಪೌರಾಣಿಕ ನಾಟಕ ಕೃತಿಯ ಹಸ್ತ ಪ್ರತಿ ಆಹ್ವಾನಿಸಲಾಗಿದೆ. ಸ್ಪರ್ಧಿಗಳು ಪ್ರಕಟಿತ ಕಥಾಸಂಕಲನದ ಹಾಗೂ ಸ್ವರಚಿತ ಏಕಾಂಕ ನಾಟಕದ ಹಸ್ತಪ್ರತಿಗಳ ಎರಡೆರಡು ಪ್ರತಿಗಳನ್ನು ದಿನಾಂಕ 29-02-2024ರ ಒಳಗೆ ತಲುಪುವಂತೆ, ಕಾರ್ಯದರ್ಶಿ/ ಅಧ್ಯಕ್ಷೆ ಕರಾವಳಿ ಲೇಖಕಿ – ವಾಚಕಿಯರ ಸಂಘ, ಸಾಹಿತ್ಯ ಸದನ, ಉರ್ವಾ ಸ್ಟೋ‌ರ್, ಅಶೋಕನಗರ,…

Read More

ಮಂಗಳೂರು : ಚಿತ್ರಕಲಾ ಶಿಕ್ಷಕ ದಿ. ಬಿ.ಜಿ. ಮಹಮ್ಮದ್ ಅವರ 103ನೇ ಜನ್ಮದಿನಾಚರಣೆ ಅಂಗವಾಗಿ ಬಿ.ಜಿ.ಎಂ. ಆರ್ಟ್ ಟ್ರಸ್ಟ್ ವತಿಯಿಂದ ಚಿತ್ರಕಲಾ ಸ್ಪರ್ಧೆ ಮತ್ತು ‘ಬಿ.ಜಿ.ಎಂ. ಜೀವಮಾನ ಸಾಧನಾ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮವು ದಿನಾಂಕ 14-01-2024ರಂದು ಮಂಗಳೂರಿನ ಮಿನಿ ಟೌನ್ ಹಾಲ್ ನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ‘ಬಿ.ಜಿ.ಎಂ. ಜೀವಮಾನ ಸಾಧನೆ’ ಪ್ರಶಸ್ತಿ ಸ್ವೀಕರಿಸಿದ ಚಿತ್ರಕಲಾವಿದ ಗಣೇಶ ಸೋಮಯಾಜಿ ಬಿ. ಇವರು ಮಾತನಾಡುತ್ತಾ, “ವ್ಯಕ್ತಿತ್ವವನ್ನು ಸೃಜನಶೀಲವಾಗಿ ರೂಪಿಸಿಕೊಳ್ಳಲು ಚಿತ್ರಕಲೆಯ ಅಭ್ಯಾಸ ನೆರವಾಗುತ್ತದೆ. ಚಿತ್ರಕಲೆಯನ್ನು ಅಭ್ಯಾಸ ಮಾಡಿದರೆ, ಯಾವುದೇ ಹುದ್ದೆಯನ್ನು ನಿಭಾಯಿಸುವಾಗಲೂ ಒಂದಿಲ್ಲ ಒಂದು ರೀತಿಯಲ್ಲಿ ಅದು ನೆರವಿಗೆ ಬರುತ್ತದೆ. ವಿದ್ಯೆ ಕಲಿಯುವಾಗ ವ್ಯಾಕರಣಗಳ ಜೊತೆ ಗುರುಗಳ ಪ್ರೀತಿ ಅಭಿಮಾನ ಹೃತ್ಪೂರ್ವಕವಾಗಿ ಸಿಕ್ಕಿದರೆ ಖಂಡಿತಾ ನಾವು ಯಶಸ್ವಿಯಾಗುತ್ತೇವೆ. ಜಲವರ್ಣ ಕಲೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಬಂದಿದ್ದರೆ ಬಿಜಿಎಂ ಅವರೇ ಕಾರಣ. ಬಿ.ಜಿ.ಮಹಮ್ಮದ್ ಶಿಷ್ಯಂದಿರು ಸೇರಿಕೊಂಡು 1974ರಲ್ಲಿ ಸ್ಪೂಡೆಂಟ್ಸ್ ಅಸೋಸಿಯೇಷನ್ ಆರಂಭಿಸಿದ್ದೆವು. ಕಲಾವಿದ ಯಶಸ್ಸಿನ ಮೆಟ್ಟಿಲೇರುತ್ತಾ ಸಾಗಿದಂತೆ ಒಬ್ಬಂಟಿ ಆಗುತ್ತಾ ಹೋಗುತ್ತಾನೆ. ಆತನಿಂದ ಮನೆಯವರು…

Read More

ಬೆಂಗಳೂರು : ಕರ್ನಾಟಕ ಸಾಹಿತ್ಯ ಅಕಾಡೆಮಿಯ 2022ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗಾಗಿ ಕನ್ನಡ ಪುಸ್ತಕಗಳನ್ನು ಸಲ್ಲಿಸಲು ಅರ್ಜಿ ಆಹ್ವಾನಿಸಲಾಗಿದೆ. 2022ನೇ ಜನವರಿ 1ರಿಂದ ಡಿಸೆಂಬರ್ 31ರ ಒಳಗೆ ಪ್ರಥಮ ಆವೃತ್ತಿಗಾಗಿ ಪ್ರಕಟವಾಗಿರುವ ಕೃತಿಗಳಾಗಿರಬೇಕು. ಪ್ರತಿಯಲ್ಲಿ ಪ್ರಥಮ ಮುದ್ರಣ 2022 ಎಂದು ಮುದ್ರಿತವಾಗಿರಬೇಕು. ಕಾವ್ಯ, ನವ ಕವಿಗಳ ಪ್ರಥಮ ಕವನ ಸಂಕಲನ (ದೃಢೀಕರಣ ಪತ್ರದೊಂದಿಗೆ), ಕಾವ್ಯ ಹಸ್ತಪ್ರತಿ, ಕಾದಂಬರಿ, ಸಣ್ಣ ಕಥೆ, ನಾಟಕ, ಲಲಿತ ಪ್ರಬಂಧ, ಪ್ರವಾಸ ಸಾಹಿತ್ಯ, ಜೀವನ ಚರಿತ್ರೆ/ ಆತ್ಮಕಥೆ, ಸಾಹಿತ್ಯ ವಿಮರ್ಶೆ, ಗ್ರಂಥ ಸಂಪಾದನೆ, ಮಕ್ಕಳ ಸಾಹಿತ್ಯ, ವಿಜ್ಞಾನ ಸಾಹಿತ್ಯ, ಮಾನವಿಕ, ಸಂಶೋಧನೆ, ವೈಚಾರಿಕ/ ಅಂಕಣ ಬರಹ, ಅನುವಾದ, ಲೇಖಕರ ಮೊದಲ ಸ್ವಾತಂತ್ರ್ಯ ಕೃತಿ, ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದ, ದಾಸಸಾಹಿತ್ಯ, ಸಂಕೀರ್ಣಕ್ಕೆ ಸಂಬಂಧಿಸಿದ ಪುಸ್ತಕಗಳ ಪ್ರಕಾರಗಳನ್ನು ಬಹುಮಾನಕ್ಕೆ ಪರಿಗಣಿಸಲಾಗುತ್ತದೆ. ಮರು ಮುದ್ರಣವಾದ ಪುಸ್ತಕಗಳು, ಪಿಎಚ್‌ಡಿ ಪದವಿಗಾಗಿ ಸಿದ್ದಪಡಿಸಿದ ಸಂಶೋಧನ ಗ್ರಂಥಗಳು, ಪಠ್ಯಪುಸ್ತಕಗಳು, ಅಕಾಡೆಮಿಯ ಗೌರವ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಕೃತಿಗಳು, ಈಗಾಗಲೇ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಮೂರು…

Read More

ಮಂಗಳೂರು : ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕ ಏರ್ಪಡಿಸಿದ ಅಭಿನಂದನಾ ಸಭೆಯು ದಿನಾಂಕ 12-01-2024ರಂದು ಮಂಗಳೂರಿನ ಬಿಜೈಯಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂಮಾನ ಸ್ವೀಕರಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಕಾಸರಗೋಡು ಗಡಿನಾಡು ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಇವರು ಮಾತನಾಡುತ್ತಾ “ಕಾಸರಗೋಡಿನ ಮಣ್ಣಿನ ಕಣ ಕಣದಲ್ಲಿ ಕನ್ನಡಮ್ಮನ ಪ್ರೀತಿ ಹರಿಯುತ್ತಿದೆ ಮತ್ತು ಇಲ್ಲಿನ ಎಲ್ಲ ಕನ್ನಡ ಮನಸ್ಸುಗಳು ಒಂದಾಗಿ ತಾಯಿ ಭುವನೇಶ್ವರಿಯ ಸೇವೆಗೈಯುತ್ತಿದ್ದಾರೆ. ಸರಳ ಸಜ್ಜನ, ನುರಿತ ಸಂಘಟಕ ಎಸ್.ವಿ. ಭಟ್ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಹಿರಿಯ ಕಿರಿಯ ಮನಸ್ಸುಗಳೆಲ್ಲ ಸೇರಿಕೊಂಡು ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಅಲ್ಲಿನ ಎಲ್ಲ ಸಂಘಟನೆಗಳೊಂದಿಗೆ ನನಗೆ ನಿಕಟ ಸಂಪರ್ಕ ಇದೆ. ಎಲ್ಲರನ್ನೂ ಜೊತೆಗೂಡಿಸಿಕೊಂಡು ಕನ್ನಡಮ್ಮನ ಸೇವೆಯಲ್ಲಿ ತೊಡಗಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ” ಎಂದು ಹೇಳಿದರು. ಕ.ಸಾ.ಪ. ಕೇಂದ್ರ ಮಾರ್ಗದರ್ಶಿ ಸಮಿತಿ ಸದಸ್ಯ ಡಾ. ಮುರಲೀಮೋಹನ್ ಚೂಂತಾರು ಅಭಿನಂದನೆಯ ನುಡಿಗಳನ್ನಾಡಿದರು. ಘಟಕದ ಕೋಶಾಧಿಕಾರಿ ಎನ್. ಸುಬ್ರಾಯ…

Read More

ಮುಡಿಪು : ಮಂಗಳೂರು ವಿಶ್ವವಿದ್ಯಾನಿಲಯದ ಡಾ. ಪಿ. ದಯಾನಂದ ಪೈ ಮತ್ತು ಶ್ರೀ ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ಕುರಿಯ ಮನೆಯಲ್ಲಿ ದಿನಾಂಕ 10-01-2024ರಂದು ಕಲಾವಿದರ ಯಕ್ಷಪಯಣದ ಸ್ವಗತ ‘ಯಕ್ಷಾಯಣ-ದಾಖಲೀಕರಣ’ ಸರಣಿಯ ಎರಡನೇ ಕಾರ್ಯಕ್ರಮವು ನಡೆಯಿತು. ಈ ಕಾರ್ಯಕ್ರಮದಲ್ಲಿ ತೆಂಕುತಿಟ್ಟಿನ ಹಿರಿಯ ಭಾಗವತರಾದ ಕುರಿಯ ಗಣಪತಿ ಶಾಸ್ತ್ರಿ ಅವರು ತಮ್ಮ ಯಕ್ಷ ಪಯಣದ ಅನುಭವ ಕಥನವನ್ನು ಹಂಚಿಕೊಂಡರು. “ಹಲವು ದಶಕಗಳ ಹಿಂದೆಯೇ ಅಂದರೆ‌ ಅಜ್ಜ, ತಂದೆ, ದೊಡ್ಡಪ್ಪರ‌‌ ಕಾಲದಲ್ಲಿ‌ಯೇ ಕುರಿಯ ಮನೆ ಅನೇಕ ಯಕ್ಷಗಾನಾಸಕ್ತರಿಗೆ ಆಶ್ರಯ ನೀಡಿದ್ದರೊಂದಿಗೆ ಅನೇಕ ಪ್ರತಿಭಾನ್ವಿತ ಕಲಾವಿದರನ್ನು ನಾಡಿಗೆ ನೀಡಿದೆ. ಕುರಿಯ ಮನೆಯಲ್ಲಿದ್ದ ಯಕ್ಷಗಾನದ ವಾತಾವರಣವೇ ನನ್ನ ಮೇಲೆ ಅಗಾಧವಾದ‌‌ ಪರಿಣಾಮ ಬೀರಿ‌ ಯಕ್ಷಗಾನದೆಡೆಗೆ ನನ್ನನ್ನು ಆಕರ್ಷಿಸುವಂತೆ ಮಾಡಿತ್ತು. ಯಕ್ಷಗಾನಕ್ಕೆ ಪಠ್ಯ ಇಲ್ಲದಿದ್ದರೂ ಹಿಂದಿನ ಕಾಲದಲ್ಲಿ ಯಕ್ಷಗಾನವನ್ನು ನೋಡಿ ಅನುಭವಿಸಿ ಕಲಿತು ಕಲಾವಿದರಾಗುತ್ತಿದ್ದರು. ಆದರೆ ಇತ್ತೀಚೆಗೆ ಕಲಾವಿದರೇ ಇಡೀ ಯಕ್ಷಗಾನ ನೋಡದೆ ತಮ್ಮ ಪಾತ್ರ ಮುಗಿಸಿ ಹೋಗುವವರೇ ಹೆಚ್ಚು. ಯಕ್ಷಗಾನ ಮತ್ತು ಅದರ…

Read More

ಪುತ್ತೂರು : ಪುತ್ತೂರಿನ ಮಾನ್ಯ ಸಹಾಯಕ ಆಯುಕ್ತರಾದ ಶ್ರೀ ಜುಬಿನ್ ಮಹಾಪಾತ್ರ ಐ.ಎ.ಎಸ್. ಅವರ ಮಾರ್ಗದರ್ಶನದ ಪ್ರಕಾರ ಗಣರಾಜ್ಯೋತ್ಸವದ ಮಹತ್ವ ಯುವ ಜನತೆಗೆ ತಿಳಿಯಪಡಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಪುತ್ತೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಇವುಗಳ ನೇತೃತ್ವದಲ್ಲಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಂಚಾಲಕತ್ವದಲ್ಲಿ ‘ಗಣರಾಜ್ಯೋತ್ಸವದ’ ಪ್ರಯುಕ್ತ ಪುತ್ತೂರು ತಾಲೂಕಿನ ಪ್ರಾಥಮಿಕ, ಪ್ರೌಢಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ , ಚಿತ್ರಕಲಾ ಸ್ಪರ್ಧೆ, ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ನಿಯಮಗಳು ಇಂತಿವೆ : 1. ಈ ಮೂರು ಸ್ಪರ್ಧೆಗಳ ವಿಷಯ ಪ್ರಜಾಪ್ರಭುತ್ವ ದಿನಾಚರಣೆ ಹಾಗೂ ಅದರ ಮಹತ್ವ. 2. ಪ್ರಬಂಧ 400ರಿಂದ 600 ಪದಗಳ ಮಿತಿಯಲ್ಲಿರಬೇಕು. 3. ಚಿತ್ರವನ್ನು ಕಪ್ಪು ಬಿಳುಪು ಅಥವಾ ಬಣ್ಣದ ಪೆನ್ಸಿಲ್/ ವಾಟರ್ ಕಲರ್ / ಇತ್ಯಾದಿ ಉಪಯೋಗಿಸಬಹುದು. 4 ಭಾಷಣಕ್ಕೆ ಮೂರು ನಿಮಿಷದ ಕಾಲಾವಕಾಶ. ಶಿಕ್ಷಕರಿಗೆ ಸೂಚನೆ: ಸ್ಪರ್ಧೆಯನ್ನು ಆಯಾ ಶಾಲಾ ಮಟ್ಟದಲ್ಲಿ ಆಯಾ ಕ್ಷೇತ್ರದಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ…

Read More

ಕೋಟ : ಕಾರ್ಕಡ ಸುಬ್ರಾಯ ಹೊಳ್ಳ ಮತ್ತು ಜಲಜಾಕ್ಷಿ ಹೊಳ್ಳ ಕುಟುಂಬದ ಪೂರ್ವಜರ ಹರಕೆಯಾಟವಾಗಿ ಕಾರ್ಕಡದ ಮೂಲ ಮನೆ ‘ಸದಾನಂದ’ದಲ್ಲಿ ಕೋಟ ಅಮೃತೇಶ್ವರಿ ಮೇಳದ ಪ್ರದರ್ಶನ ದಿನಾಂಕ 13-01-2024ನೇ ಶನಿವಾರದಂದು ನಡೆಯಿತು. ಇದೇ ಸಂದರ್ಭದಲ್ಲಿ ಮೇಳದ ಹಿರಿಯ ಸ್ತ್ರೀ ವೇಷ ಕಲಾವಿದ ಮೊಳಹಳ್ಳಿ ಕೃಷ್ಣ ನಾಯಕ್ ಮತ್ತು ಎರಡನೇ ವೇಷಧಾರಿ ಕೋಟ ಸುರೇಶ್ ಅವರನ್ನು ಹೊಳ್ಳ ಕುಟುಂಬದ ಪರವಾಗಿ ಗೌರವ ಧನದೊಂದಿಗೆ ಸನ್ಮಾನಿಸಲಾಯಿತು. ಸ್ಥಳೀಯ ಯುವ ಪ್ರತಿಭೆ ಅಮೃತೇಶ್ವರಿ ಮೇಳದ ಸಂಗೀತಗಾರ ಚಂದ್ರಕಾಂತ್ ಅವರನ್ನು ಗುರುತಿಸಿ ಪ್ರೋತ್ಸಾಹಿಸಲಾಯಿತು. ಕಲಾವಿದರನ್ನು ಗೌರವಿಸಿದ ಬಳಿಕ ಮಾತನಾಡಿದ ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ “ಕಲೆ ಮತ್ತು ಸಾಹಿತ್ಯ ಬದುಕಿನ ಜೀವಾಳ. ಧಾರ್ಮಿಕ ಆರಾಧನೆಯಷ್ಟೇ ಕಲಾರಾಧನೆಯು ಮುಖ್ಯ. ಹರಕೆ ಬಯಲಾಟಗಳ ಮೂಲಕ ಭಗವತ್ ಕೃಪೆಯನ್ನು ಹೊಂದುವ ಸನಾತನ ಸಂಸ್ಕೃತಿ ನಮ್ಮದಾಗಿದೆ. ಕಲೆ ಮತ್ತು ಕಲಾವಿದರನ್ನು ಗೌರವಿಸುವ ಮೂಲಕ ನಮ್ಮ ಸಾಂಸ್ಕೃತಿಕ ಜಗತ್ತು ಜೀವಂತವಾಗಿಡುವಲ್ಲಿ ನಮ್ಮೆಲ್ಲರ ಹೊಣೆಗಾರಿಕೆ ಗುರುತರವಾದುದು.” ಎಂದರು. ಕಲಾ ಸಾಹಿತಿ ಎಚ್.…

Read More

ಮಂಗಳೂರು: ಭಾರತ್ ಫೌಂಡೇಶನ್ ವತಿಯಿಂದ ಮಿಥಿಕ್ ಸೊಸೈಟಿ ಸಹಯೋಗದಲ್ಲಿ ‘ಮಂಗಳೂರು ಲಿಟ್ ಫೆಸ್ಟ್‌’ನ ಆರನೇ ಆವೃತ್ತಿ ಜನವರಿ 19, 20 ಮತ್ತು 21 ರಂದು ಮಂಗಳೂರಿನ ಟಿ. ಎಂ. ಎ. ಪೈ ಇಂಟರ್‌ನ್ಯಾಷನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಲಿದೆ. ಒಟ್ಟು 29 ಕಲಾಪಗಳನ್ನೊಳಗೊಂಡ ವಿಚಾರ ಸಂಕಿರಣದಲ್ಲಿ 60ಕ್ಕೂ ಅಧಿಕ ಮಂದಿ ಸಾಹಿತಿ, ವಾಗ್ಮಿಗಳು ಭಾಗವಹಿಸಲಿದ್ದಾರೆ. ಜನವರಿ 19ರಂದು ಸಂಜೆ ಉದ್ಘಾಟನೆ ನಡೆಯಲಿದ್ದು, ಮುಖ್ಯ ಅತಿಥಿಯಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಪಾತ್ರರಾದ ಹಿರಿಯ ಸಾಹಿತಿ ಲಕ್ಷ್ಮೀಶ ತೋಳ್ಪಾಡಿ, ಹೆಸರಾಂತ ಕಲಾವಿದೆ ರಾಧೆ ಜಗ್ಗಿ, ನಿಟ್ಟೆ ವಿಶ್ವವಿದ್ಯಾಲಯದ ಡಾ. ವಿನಯ್ ಹೆಗ್ಡೆ, ಮಿಥಿಕ್ ಸೊಸೈಟಿಯ ಕಾರ್ಯದರ್ಶಿ ರವಿ ಹಾಗೂ ವನಿತಾ ಸೇವಾ ಸಮಾಜ ಧಾರವಾಡದ ಕಾರ್ಯದರ್ಶಿ ಮಧುರಾ ಹೆಗಡೆ ಭಾಗವಹಿಸಲಿದ್ದಾರೆ. ಭಾರತೀಯ ಸಮಾಜ ವಿಜ್ಞಾನ ಸಂಶೋಧನಾ ಸಂಸ್ಥೆ ( ಐ. ಸಿ. ಎಸ್‌. ಎಸ್. ಆರ್. ) ಸದಸ್ಯ ಕಾರ್ಯದರ್ಶಿ ಡಾ. ಧನಂಜಯ ಸಿಂಗ್, ರಕ್ಷಣಾ ಸಚಿವರ ಸಲಹೆಗಾರ ಲೆ. ಜ. ವಿನೋದ ಖಂಡಾರೆ…

Read More

ತೆಕ್ಕಟ್ಟೆ: ಉಳ್ತೂರು ಮೂಡುಬೆಟ್ಟಿನ ಚಿತ್ತೇರಿ ನಾಗಬ್ರಹ್ಮ, ಶ್ರೀ ನಂದಿಕೇಶ್ವರ ಸಪರಿವಾರ ದೈವಸ್ಥಾನ ವಾರ್ಷಿಕ ಹಾಲು ಹಬ್ಬ ಹಾಗೂ ಗೆಂಡಸೇವೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಯಶಸ್ವೀ ಕಲಾವೃಂದ ಕೊಮೆ, ತೆಕ್ಕಟ್ಟೆಯ ಮಕ್ಕಳ ಮೇಳದ ತಾಳಮದ್ದಳೆ ಪ್ರಸ್ತುತಿಯು ದಿನಾಂಕ 15-01-2024 ರಂದು ನಡೆಯಿತು. ತಂಡವನ್ನು ಗೌರವಿಸಿ ಮಾತನಾಡಿದ ಕಲಾ ಪೋಷಕರಾದ ರಮೇಶ್ ಅಡಿಗ ಉಳ್ತೂರು “ಕಲೆಗಳು ಮಕ್ಕಳಲ್ಲಿ ಬೆರೆತಾಗ ಕಲೆಯೂ ಬೆಳೆಯುತ್ತದೆ. ತೆಕ್ಕಟ್ಟೆಯಲ್ಲಿ ಸಾಂಸ್ಕೃತಿಕ ಕಲಾತಾಣವಾಗಿ ಹೆಮ್ಮರವಾಗಿ ಬೆಳೆದ ಯಶಸ್ವೀ ಕಲಾವೃಂದದ ಪುಟಾಣಿಗಳ ಪ್ರತಿಭೆ ಅಸಾಧಾರಣವಾದದ್ದು. ‘ದ್ರೌಪದಿ ಪ್ರತಾಪ’ ಯಕ್ಷಗಾನ ತಾಳಮದ್ದಳೆ ಪ್ರಸ್ತುತಿಯ ಮೂಲಕ ಪ್ರಬುದ್ಧ ಕಲಾ ಪ್ರತಿಭೆಯನ್ನು ಹೊರ ಹಾಕಿ ಜನಮನವನ್ನು ಗೆದ್ದ ಮಕ್ಕಳು ಭವಿಷ್ಯದ ಕಲಾ ಪ್ರತಿಭೆಯ ರೂವಾರಿಗಳು.” ಎಂದು ಅಭಿಪ್ರಾಯಪಟ್ಟರು. ಆಡಳಿತ ಮುಕ್ತೇಸರರಾದ ರಾಜೀವ ಶೆಟ್ಟಿ ಚಿಣ್ಣರ ಕಲಾ ಪ್ರತಿಭೆಯನ್ನು ಪ್ರೋತ್ಸಾಹಿಸಿ ಹುರಿದುಂಬಿಸಿ ಮಾತನಾಡಿ “ಮಕ್ಕಳಲ್ಲಿನ ಪ್ರತಿಭೆ ಎನ್ನುವುದು ಹರಿಯುವ ನೀರು. ನಿಂತ ನೀರಲ್ಲ. ಪ್ರತಿಭೆ ಅರಳಿ ಹಂಚಿ ಪಸರಿಸಿದಲ್ಲಿ ಅವರು ಸಮಾಜದ ಕಲಾ ಶಕ್ತಿಗಳು. ಇಂತಹ ಮಕ್ಕಳನ್ನು ಪ್ರೋತ್ಸಾಹಿಸುವುದು ಸಮಾಜದ…

Read More

ಕಾರ್ಕಳ : ಕಾಂತಾವರ ಕನ್ನಡ ಸಂಘ, ಅಲ್ಲಮಪ್ರಭು ಪೀಠ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ತಾಲೂಕು ಘಟಕ ಇವುಗಳ ಸಂಯುಕ್ತ ಆಶ್ರಯದಲ್ಲಿ ‘ತಿಂಗಳ ಉಪನ್ಯಾಸ ಮಾಲೆ’ ಕಾರ್ಯಕ್ರಮವು ದಿನಾಂಕ 13-01-2024 ರಂದು ಕಾರ್ಕಳದ ಹೋಟೇಲ್ ಪ್ರಕಾಶ್ ಇದರ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ದಿಕ್ಸೂಚಿ ಭಾಷಣ ಮಾಡಿದ ಬೆಂಗಳೂರಿನ ವೇದವಿಜ್ಞಾನ ಶೋಧ ಸಂಸ್ಥಾನದ ನಿರ್ದೇಶಕರಾಗಿರುವ ಪ್ರೊ. ರಾಮಚಂದ್ರ ಜಿ. ಭಟ್ “ಮನುಷ್ಯ ಜನ್ಮದ ಶ್ರೇಷ್ಠತೆಯನ್ನು ವಿಜ್ಞಾನದ ವಿವರಣೆಯೊಂದಿಗೆ ಕರಾರುವಕ್ಕಾಗಿ ಉಪನಿಷತ್ತುಗಳಲ್ಲಿ ವಿವರಿಸಲಾಗಿದೆ. ಪಂಚಕೋಶಗಳ ಬಗ್ಗೆ ಅಲ್ಲಿರುವ ವಿವರಣೆಗಳು ವೈಜ್ಞಾನಿಕವಾಗಿಯೂ ಸತ್ಯ ಎಂಬುದು ಸಾಬೀತಾಗಿದೆ.” ಎಂದು ತಿಳಿಸಿದರು. ವೇದ ಮೂಲವಾಗಿ 108 ಉಪನಿಷತ್ತುಗಳಿದ್ದರೂ ಅದರಲ್ಲಿ ವೇದಮಂಥನದಿಂದ ರೂಪತಾಳಿದ ದಶ ಉಪನಿಷತ್ತುಗಳು ಮುಖ್ಯವಾಗಿರುವಂಥಾದ್ದು. ಉಪನಿಷತ್ತುಗಳಲ್ಲಿ ವಿದ್ಯೆಯ ಬಗ್ಗೆ ವಿಶೇಷ ಉಲ್ಲೇಖವಿದ್ದು ಇಂತಹ ಉಪನಿಷತ್ತುಗಳು ಇಂದು ಪ್ರವಚನಕ್ಕಷ್ಟೇ ಸೀಮಿತವಾಗಿದ್ದು ಶಿಕ್ಷಣದಲ್ಲಿಯೂ ಇದು ಸೇರ್ಪಡೆಗೊಂಡು ಎಲ್ಲರೂ ಇದನ್ನು ಅಧ್ಯಯನ ನಡೆಸಿ ತಮ್ಮ ಜೀವನವನ್ನು ಉತ್ತಮಗೊಳಿಸಬಹುದು ಎಂಬುದಾಗಿಯೂ ತಿಳಿಸಿದರು. ಇದೇ ಸಂದರ್ಭದಲ್ಲಿ ಡಾ.ಬಿ.ಭಾಸ್ಕರ ರಾವ್ ಅವರ…

Read More