Author: roovari

ಗುರುವಾಯನಕೆರೆ : ರಾಜ್ಯಮಟ್ಟದ ಪ್ರೆಸ್‌ಕ್ಲಬ್‌ ಕೌನ್ಸಿಲ್ ಬೆಂಗಳೂರು ಇವರು 2023- 24ನೇ ಸಾಲಿನ ಪ್ರಶಸ್ತಿಗಳನ್ನು ವಿವಿಧ ಕ್ಷೇತ್ರಗಳ 12 ಸಾಧಕರಿಗೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್‌ನ ಶ್ರೀ ಕೃಷ್ಣರಾಜ ಪರಿಷತ್ ಮಂದಿರದಲ್ಲಿ ಪ್ರದಾನ ಮಾಡಿದರು. ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತ ದೇಶದ 24 ಪ್ರಸಿದ್ಧ ಸಾಹಿತಿಗಳ ಪೈಕಿ ಕರ್ನಾಟಕದಿಂದ ಒಬ್ಬರಾದ ಲಕ್ಷ್ಮೀಶ ತೋಳ್ಪಾಡಿ ಅವರು ಪ್ರೆಸ್‌ಕ್ಲಬ್‌ ಅವಾರ್ಡ್ ಸ್ವೀಕರಿಸಿದ್ದಾರೆ. ಪ್ರೆಸ್‌ಕ್ಲಬ್ ಕೌನ್ಸಿಲ್‌ ಅಧ್ಯಕ್ಷ ರಾಘವೇಂದ್ರಾಚಾರ್ “ನಿರ್ಭೀತಿಯಿಂದ ಸತ್ಯವನ್ನು ಪ್ರಕಟಿಸುತ್ತಾ ಬಂದಿರುವುದರಿಂದ ಈ ಪ್ರಶಸ್ತಿ ಸ್ವೀಕರಿಸಲು ಒಪ್ಪಿ ಬಂದಿದ್ದೇನೆ. ಮಾಧ್ಯಮಗಳು ಸತ್ಯವನ್ನು ಸ್ಪಷ್ಟವಾಗಿ, ಸರಳವಾಗಿ ಯಾವುದೇ ಸಂಕೋಚ ಇಲ್ಲದೇ ಹೇಳಬೇಕು” ಎಂದು ಹೇಳಿದರು. ಕೌನ್ಸಿಲ್‌ನ ಪ್ರಶಸ್ತಿ ಪುರಸ್ಕೃತ ನಗೆ ಭಾಷಣಕಾರ, ಬರಹಗಾರ ಎಂ.ಎಸ್. ನರಸಿಂಹಮೂರ್ತಿ ಪ್ರಶಸ್ತಿ ಸ್ವೀಕರಿಸಿ, ಕೌನ್ಸಿಲ್‌ನ ಕಾರ್ಯಚಟುವಟಿಕೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ಹಾಸ್ಯದಿಂದ ಸಭಿಕರನ್ನು ನಗಿಸುತ್ತಾ ತೋಳ್ಪಾಡಿಯವರಿಗೆ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದ್ದು ಕರ್ನಾಟಕಕ್ಕೆ ಹೆಮ್ಮೆ ಎಂದರು. ಕೌನ್ಸಿಲ್ ಪ್ರಧಾನ ಕಾರ್ಯದರ್ಶಿ ಆಶಾ ಸೀನಪ್ಪ, ನಾಗರಿಕ…

Read More

ಮಂಗಳೂರು : ಶ್ರೀಮತಿ ಶಕುಂತಲಾ ಮತ್ತು ತಂಡದಿಂದ ‘ಜಾಂಬವತಿ ಕಲ್ಯಾಣ’ ಪ್ರಸಂಗದ ಯಕ್ಷಗಾನ ಪ್ರದರ್ಶನವು ದಿನಾಂಕ 11-01-2024ರಂದು ಮಂಗಳೂರಿನ ಚಿಲಿಂಬಿಯ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ನಡೆಯಿತು. ಪ್ರದರ್ಶನವನ್ನು ವೀಕ್ಷಿಸಿದ ಅವಧೂತ ಶ್ರೀ ವಿನಯ್ ಗುರೂಜಿ ಮಾತನಾಡಿ “ಇಂದು ಯುಕ್ಷಗಾನದ ಸಂದೇಶಗಳ ಮೂಲಕ ಸಮಾಜ ಪರಿವರ್ತನೆ ಮಾಡಲು ಸಾಧ್ಯವಿದೆ. ಅಸತ್ಯದ ವಿರುದ್ಧ ಸತ್ಯ ಗೆಲ್ಲುತ್ತದೆ. ಧರ್ಮ ಸಾರಲ್ಪಡುತ್ತದೆ. ಆ ದೃಷ್ಟಿಯಲ್ಲೂ ಯಕ್ಷಗಾನ ಕಲೆ ಎಲ್ಲೆಡೆ ಮಾನ್ಯತೆ ಪಡೆದಿದೆ.” ಎಂದರು. ಶ್ರೀ ಶಿರಡಿ ಸಾಯಿಬಾಬಾ ಮಂದಿರದ ಅಧ್ಯಕ್ಷ ಶ್ರೀ ವಿಶ್ವಾಸ್ ಕುಮಾರ್ ದಾಸ್ ಮಾತನಾಡಿ “ಯುಕ್ಷಗಾನ ಕಲೆ ರಾಜಕಲೆ. ಅದಕ್ಕೆ ಕಲಾ ಸಂಘಟಕರು ಹಾಗೂ ಕಲಾ ಪೋಷಕರು ನಿರಂತರ ಪ್ರೋತ್ಸಾಹ ನೀಡಬೇಕು. ಆ ನಿಟ್ಟಿನಲ್ಲಿ ಶಕುಂತಳಾ ತಂಡಕ್ಕೆ ನಾವಿಲ್ಲಿ ಕಾರ್ಯಕ್ರಮ ನಡೆಸಲು ಅವಕಾಶ ಮಾಡಿಕೊಟ್ಟಿದ್ದೇವೆ. ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಅನೇಕ ಕಾರ್ಯಕ್ರಮಗಳನ್ನು ನಡೆಸಲು ಅವಕಾಶಗಳಿವೆ. ಅದರಲ್ಲಿ ಇದೂ ಒಂದು. ಇನ್ನು ಮುಂದೆಯೂ ಈ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಾವು…

Read More

ಮಂಗಳೂರು : ಗೋವಿಂದ ದಾಸ ಕಾಲೇಜು, ಸುರತ್ಕಲ್‌ನ ಯಕ್ಷಗಾನ ಮತ್ತು ಲಲಿತ ಕಲಾ ಅಧ್ಯಯನ ಕೇಂದ್ರದ ವತಿಯಿಂದ ಪ್ರೊ. ಯಚ್.ಜಿ.ಕೆ. ರಾವ್‌ ದತ್ತಿನಿಧಿ, ವಿದ್ಯಾದಾಯಿನೀ ಹಳೆವಿದ್ಯಾರ್ಥಿ ಸಂಘ, ಬಿ.ಎ.ಎಸ್.ಎಫ್. ಬಾಳ, ಸುರತ್ಕಲ್‌ ಗೋವಿಂದ ದಾಸ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶ, 1982ರ ವಿಜ್ಞಾನ ತಂಡದ ದತ್ತಿನಿಧಿ, ರಕ್ಷಕ ಶಿಕ್ಷಕ ಸಂಘ, ಗೋವಿಂದ ದಾಸ ಕಾಲೇಜು ಅಲ್ಯುಮ್ನಿ ಅಸೋಸಿಯೇಶನ್‌ಗಳ ಸಹಭಾಗಿತ್ವದಲ್ಲಿ ನೀನಾಸಂ ತಿರುಗಾಟ ನಾಟಕೋತ್ಸವ -2024 ಗೋವಿಂದ ದಾಸ ಕಾಲೇಜಿನ ರಂಗ ಮಂದಿರದಲ್ಲಿ ದಿನಾಂಕ 14-01-2024 ಮತ್ತು 15-01-2024ರಂದು ನಡೆಯಿತು. ನೀನಾಸಂ ನಾಟಕೋತ್ಸವವನ್ನು ಹಿಂದೂ ವಿದ್ಯಾದಾಯಿನೀ ಸಂಘದ ಕಾರ್ಯದರ್ಶಿ ಶ್ರೀರಂಗ ಹೊಸಬೆಟ್ಟು ಉದ್ಘಾಟಿಸಿ ಶುಭ ಹಾರೈಸಿದರು.ರಂಗನಟಿ ಗೀತಾ ಸುರತ್ಕಲ್ ನಿರಂತರ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಯಿಂದ ವಿದ್ಯಾರ್ಥಿಗಳಲ್ಲಿ ಮತ್ತು ಜನತೆಯಲ್ಲಿ ಸಾಂಸ್ಕೃತಿಕ ಅಭಿರುಚಿ ಒಡಮೂಡಲು ಸಾಧ್ಯವಿದೆ ಎಂದರು. ಕಾಲೇಜಿನ ಪ್ರಾಚಾರ್ಯ ಪ್ರೊ. ಕೃಷ್ಣಮೂರ್ತಿ ಪಿ. ಮಾತನಾಡಿ “ನೀನಾಸಂ ನಾಟಕೋತ್ಸವ ನಿರಂತರವಾಗಿ ನಡೆಯುವ ಮೂಲಕ ಹೊಸ ಪ್ರೇಕ್ಷಕ ಸಮುದಾಯ ಸೃಷ್ಟಿಗೊಂಡಿದೆ” ಎಂದರು. ಹಿಂದೂ ವಿದ್ಯಾದಾಯಿನೀ…

Read More

ಬೆಂಗಳೂರು : ಬೆಂಗಳೂರಿನ ಶ್ರೀ ಮುರಳೀಧರ ಸಂಗೀತ ನೃತ್ಯ ಮಹಾವಿದ್ಯಾಲಯ ಮತ್ತು ಮೋಹನ ತರಂಗಿಣಿ ಸಂಗೀತ ಸಭಾ ಜಂಟಿಯಾಗಿ ಪ್ರಸ್ತುತ ಪಡಿಸುವ ‘76ನೇ ವಾರ್ಷಿಕ ಸಾಂಸ್ಕೃತಿಕ ಸಂಗೀತ ನೃತ್ಯ ಮಹೋತ್ಸವ’ದ ಅಂಗವಾಗಿ ‘ಭರತನಾಟ್ಯ ಮತ್ತು ಸಂಗೀತ ಕಛೇರಿ’ಯು ದಿನಾಂಕ 21-01-2024ರಂದು ಮಧ್ಯಾಹ್ನ 3 ಗಂಟೆಗೆ ನಾದಬ್ರಹ್ಮ ಶಾರದ ಮಂದಿರದ ವಿದ್ಯಾಲಯದಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಆಯೋಧ್ಯೆಯಲ್ಲಿ ಶ್ರೀರಾಮ ದೇವರ ಪ್ರಾಣ ಪ್ರತಿಷ್ಠಾಪನಾ ಅರ್ಪಣೆಯ ಪ್ರಯುಕ್ತ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ಅಕ್ಷಯ ನಗರದ ಆನಂದಿ ನೃತ್ಯ ಶಾಲೆಯ ಗುರು ವಿದುಷಿ ಶ್ರೀಮತಿ ಶ್ವೇತಾ ರಾಘವೇಂದ್ರ ಶಿಷ್ಯ ವೃಂದದವರಿಂದ ಭರತನಾಟ್ಯ ಮತ್ತು ಉಡುಪಿಯ ವಿದುಷಿ ಶ್ರೀಮತಿ ಜ್ಯೋತಿಲಕ್ಷ್ಮೀ ವಿಶ್ವನಾಥ ಮತ್ತು ಬೆಂಗಳೂರಿನ ವಿದುಷಿ ಶ್ರೀಮತಿ ಸುಮಾ ವೆಂಕಟೇಶ್ ಇವರ ಹಾಡುಗಾರಿಕೆಗೆ ವಿದ್ವಾನ್ ಶ್ರೀ ಅಭಯ್ ಸಂಪಿಗೆತಾಯ ಪಿಟೀಲು ಮತ್ತು ವಿದ್ವಾನ್ ಶ್ರೀ ಸುಧೀಂದ್ರ ಸಿ. ಆಪ್ಟೆ ಮೃದಂಗದಲ್ಲಿ ಸಾಥ್ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ತುಮಕೂರಿನ ಡಾ. ಶ್ರೀ ಲಕ್ಷ್ಮಣ ದಾಸ್ (ಕಥಾ ಕೀರ್ತನ),…

Read More

ಮಂಗಳೂರು : ‘ಆರ್ಟಿಸ್ಟ್ಸ್ ಕಂಬೈನ್ಸ್’ ವತಿಯಿಂದ ಚಿತ್ರಕಲಾ ಪ್ರದರ್ಶನ ಹಾಗೂ ಅಭಿನಂದನಾ ಸಮಾರಂಭವು ದಿನಾಂಕ 15-01-2024ರಂದು ಬಲ್ಲಾಳ್ ಭಾಗ್ ಇಲ್ಲಿರುವ ಪ್ರಸಾದ ಆರ್ಟ್ ಗ್ಯಾಲರಿಯಲ್ಲಿ ನಡೆಯಿತು. ಗಲ್ಫ್ ಬಿಸಿನೆಸ್ ಮೆಷಿನ್ಸ್ (ಐಬಿಎಂ) ಕಂಪನಿಯ ನಿವೃತ್ತ ಹಣಕಾಸು ವ್ಯವಸ್ಥಾಪಕ ಸಿ.ಎ. ಜೋಸೆಫ್ ರಾಡ್ರಿಗಸ್ ಇವರು ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಚಿತ್ರಕಲಾವಿದ ಉಡುಪಿ ಆರ್ಟಿಸ್ಟ್ಸ್ ಫೋರಂ ಅಧ್ಯಕ್ಷ ಯು.ರಮೇಶ್ ರಾವ್ ಮಾತನಾಡುತ್ತಾ “ಇಂದಿನ ಸೂಕ್ಷ್ಮ ವಾತಾವರಣದಲ್ಲಿ ಕಲಾವಿದರಿಗೆ ರಕ್ಷಣೆ ಕೊಡಲು ಕಲಾವಿದರದ್ದೇ ಆದ ಸಂಘಟನೆಗಳು ಬೇಕೇ ಬೇಕು. ಕಲೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಹಾಗೂ ಜೀವನಕ್ಕಾಗಿ ಕಲೆಯನ್ನು ಅವಲಂಬಿಸಿರುವ ಚಿತ್ರ ಕಲಾವಿದರು ಇದ್ದಾರೆ. ಕಲೆಗಾಗಿಯೇ ಜೀವನವನ್ನು ಮುಡಿಪಾಗಿಟ್ಟವರಿಗೆ ಸಂಘಟನೆ ಅತ್ಯಗತ್ಯ. ಕಲಾವಿದ ಗಣೇಶ ಸೋಮಯಾಜಿ, 1981ರಲ್ಲಿ ಸ್ಥಾಪನೆಯಾದ ಆರ್ಟಿಸ್ಟ್ಸ್ ಕಂಬೈನ್‌ಗೆ ಸತತ 42 ವರ್ಷಗಳಿಂದಲೂ ಟ್ರೆವರ್ ಪಿಂಟೊ ಅಧ್ಯಕ್ಷರು. ಈ ಸಂಘಟನೆಯ ಕಾರ್ಯದರ್ಶಿ ಹಾಗೂ ಖಜಾಂಚಿಗಳೂ ಬದಲಾಗಿಲ್ಲ. ಸಂಘಟನೆಗಾಗಿ ಈ ಮೂವರ ಬದ್ಧತೆ ಅಷ್ಟಿದೆ. ಕಲಾವಿದ ಬೆಳೆಯಲು ಮನೆಯವರ,…

Read More

ಉಡುಪಿ : ಪ್ರತಿ ವರ್ಷದಂತೆ ಮಕರ ಸಂಕ್ರಾಂತಿಯ ಪುಣ್ಯ ದಿನ ದಿನಾಂಕ 14-01-2024ರಂದು ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವತಿಯಿಂದ ನಡೆಯುತ್ತಿರುವ ಸಮುದ್ರ ಮಧ್ಯದಲ್ಲಿರುವ ಮಲ್ತಿ ದ್ವೀಪದಲ್ಲಿನ ಶೀ ಆದಿಪರಾಶಕ್ತಿ ಸನ್ನಿಧಾನದಲ್ಲಿ ಮಕರ ಸಂಕ್ರಾಂತಿ ಪೂಜೆಯ ನಂತರ ಶ್ರೀ ಭೈರವನಾಥೇಶ್ವರ ಸೇವಾ ಸಮಿತಿ (ರಿ) ಪೆರ್ಡೂರು ಹಾಗೂ ಮಲ್ಪೆಯ ಮತ್ಸ್ಯರಾಜ್ ಗ್ರೂಪ್ ವತಿಯಿಂದ ಶಿವರಾತ್ರಿ ಸಂದರ್ಭದಲ್ಲಿ ದಿನಾಂಕ 10-03-2024ರಂದು ಉಡುಪಿ ಬನ್ನಂಜೆ ನಾರಾಯಣಗುರು ಆಡಿಟೋರಿಯಂನಲ್ಲಿ ಹಮ್ಮಿಕೊಂಡಿರುವ ಅವಿಭಜಿತ ಉಡುಪಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಆಹ್ವಾನಿತ ತಂಡಗಳ ಭಜನಾ ಸ್ಪರ್ಧೆ ಭಿತ್ತಿ ಪತ್ರ ಅನಾವರಣಗೊಳಿಸುವ ಕಾರ್ಯಕ್ರಮ ನೆರವೇರಿಸಲಾಯಿತು. ಸಮಿತಿ ಅಧ್ಯಕ್ಷರು ಸತೀಶ್ ಕೋಟ್ಯಾನ್ ಮಲ್ಪೆ, ಕೊಡವೂರು ಶಂಕರನಾರಾಯಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಸಾಧು ಸಾಲಿಯಾನ್ ಮತ್ತು ಸದಸ್ಯರು, ಮತ್ಸ್ಯರಾಜ್ ಗ್ರೂಪ್ ಮಲ್ಪೆ ಇದರ ಪಾಲುದಾರರು, ಹಿರಿಯ ಪತ್ರಕರ್ತ ನಟರಾಜ್ ಮಲ್ಪೆ, ಹಿರಿಯ ಕಲಾವಿದ ಸುಧೀರ್ ರಾವ್ ಹಾಗೂ ಭೈರವನಾಥೇಶ್ವರ ಸೇವಾ ಸಮಿತಿ ಪದಾಧಿಕಾರಿಗಳು ಮತ್ತು ಸದಸ್ಯರ ಸಹಯೋಗದೊಂದಿಗೆ ನೂರಾರು ಭಕ್ತರ…

Read More

ಸುರತ್ಕಲ್ : ಸಮಗ್ರ ಗ್ರಾಮೀಣ ಆಶ್ರಮ ಪೆರ್ನಾಲು ಉಡುಪಿ ಜಿಲ್ಲೆ, ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟ (ರಿ) ಕರ್ನಾಟಕ ಮತ್ತು ಕೇರಳ, ಕರಾವಳಿ ಲೇಖಕಿಯರ ವಾಚಕಿಯರ ಸಂಘ (ರಿ) ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕಾಸರಗೋಡು ಹಾಗೂ ಗೋವಿಂದ ದಾಸ ಕಾಲೇಜು ಸುರತ್ಕಲ್‌ ಇದರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ‘ಬುಡಕಟ್ಟು ಯುವ ಬರಹಗಾರರ ಕಮ್ಮಟ’ವು ದಿನಾಂಕ 13-01-2024ರಂದು ಉದ್ಘಾಟಣೆಗೊಂಡಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಪುಣೆಯ ಸಿಂಬಿಯೋಸಿಸ್ ಅಂತರಾಷ್ಟ್ರೀಯ ಡೀಮ್ಡ್ ಕಾನೂನು ವಿಶ್ವವಿದ್ಯಾನಿಲಯದ ನಿರ್ದೇಶಕರಾದ ಡಾ. ಶಶಿಕಲಾ ಗುರುಪುರ ಮಾತನಾಡಿ “ಸಾಹಿತ್ಯವು ಸಮಾಜವನ್ನು ಕಟ್ಟುವ ಮೂಲಕ ಅಂಕುಡೊಂಕುಗಳನ್ನು ತಿದ್ದುವುದರೊಂದಿಗೆ ಬರಹಗಾರನ ಶಕ್ತಿಯಾಗಿಯೂ ಹೊರಹೊಮ್ಮುತ್ತದೆ. ಕಣ್ಣೀರಿನ ಕಥೆಗಳು ಗೋಳಿನ ಕಥೆಗಳಾಗದೆ, ಶಕ್ತಿಯಾಗಬೇಕಾದ ಅವಶ್ಯಕತೆ ಇದೆ. ಹೆಣ್ಣು ಅನುಭವಿಸುವ ಸಂಕೀರ್ಣತೆಗಳು ಬರಹದ ಮೂಲವಾಗಬೇಕು.” ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟ (ರಿ) ಕರ್ನಾಟಕ ಹಾಗೂ ಕೇರಳದ ಅಧ್ಯಕ್ಷೆ ಸುಶೀಲ ನಾಡ ಮಾತನಾಡಿ “ಚಳುವಳಿಗಳೊಂದಿಗೆ ಅನುಭವದ ಬರಹಗಳು ಮುಖ್ಯ.” ಎಂದರು. ನಮ್ಮ ನ್ಯಾಯ…

Read More

ಮಂಗಳೂರು : ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ‘ಅಯೋಧ್ಯೆಯಲ್ಲಿ ರಾಮಮಂದಿರ-ಮನೆಮನಗಳಲ್ಲಿ ಶ್ರೀರಾಮ ಚಂದಿರ’ ವಿಷಯದ ಬಗ್ಗೆ ದ.ಕ. ಜಿಲ್ಲಾ ಮಟ್ಟದ ಕವನ ಸ್ಪರ್ಧೆ ಏರ್ಪಡಿಸಲಾಗಿದೆ. ಕನಿಷ್ಠ 60 ಪದಗಳು, ಗರಿಷ್ಠ 100 ಪದಗಳು. ವಯೋಮಿತಿ ಇಲ್ಲ. ಸ್ಪಧೆಯಲ್ಲಿ ಆಯ್ಕೆಯಾದ ಮೊದಲ ಮೂರು ಕವಿತೆಗಳಿಗೆ ನಗದು ಸಹಿತ ಪ್ರಮಾಣಪತ್ರ ನೀಡಲಾಗುವುದು. ವಿಜೇತರಿಗೆ ಹಾಗೂ ಆಯ್ದ ಕವಿಗಳಿಗೆ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಕವನ ವಾಚನಕ್ಕೆ ಅವಕಾಶ ಕಲ್ಪಿಸಲಾಗುವುದು. ಕವನಗಳನ್ನು ಪ್ರಧಾನ ಕಾರ್ಯದರ್ಶಿ, ಅ.ಭಾ.ಸಾ.ಪ., ದ.ಕ. ಜಿಲ್ಲಾ ಸಮಿತಿ, 2ನೇ ಮಹಡಿ, ರಘು ಬಿಲ್ಡಿಂಗ್, ಕವಿತಾ ರೆಸಿಡೆನ್ಸಿ ಮುಂಭಾಗ, ಉರ್ವಸ್ಟೋರ್, ಅಂಚೆ: ಅಶೋಕನಗರ, ಮಂಗಳೂರು-6 ಈ ವಿಳಾಸಕ್ಕೆ ದಿನಾಂಕ 22-01-2024ರೊಳಗೆ ಕಳುಹಿಸಬೇಕು. ಕವನ ಕಳುಹಿಸುವವರು ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸಬೇಕು.

Read More

ಮಂಗಳೂರು : ಭರತನಾಟ್ಯ ಕಲೆಯನ್ನು ಅಕಾಡೆಮಿಕ್ ಆಗಿ ಬೋಧಿಸುತ್ತಿರುವ ಕಲಾ ಸಂಸ್ಥೆಗಳಲ್ಲಿ ಉರ್ವದ ನಾಟ್ಯಾರಾಧನಾ ಕಲಾ ಕೇಂದ್ರ (ರಿ.) ಸಂಸ್ಥೆಯು ಪ್ರಮುಖವಾದದ್ದು. ಸಂಸ್ಥೆಯು 1994 ಸೆಪ್ಟೆಂಬರ್‌ 8ರಂದು ಸುರತ್ಕಲ್ ಕೆ.ಆರ್.ಇ.ಸಿ.ಯಲ್ಲಿ ಗುರು ವಿದುಷಿ ಸುಮಂಗಲಾ ರತ್ನಾಕರ್ ರಾವ್ ಅವರ ಕನಸಿನ ಕೂಸಾಗಿ ಆರಂಭವಾಗಿದ್ದು, ಇದೀಗ ನಾಟ್ಯಾರಾಧನಾಕ್ಕೆ 30ನೇ ವರ್ಷಾಚರಣೆಯ ಸಂಭ್ರಮದ ಹೊನಲು. ಈ ಹಿನ್ನೆಲೆಯಲ್ಲಿ ನಾಟ್ಯಾರಾಧನಾ ತ್ರಿಂಶೋತ್ಸವ ಸಮಿತಿ ಮತ್ತು ತ್ರಿಂಶೋತ್ಸವ ವಿದ್ಯಾರ್ಥಿ ಸಮಿತಿಯ ಬೆಂಬಲದೊಂದಿಗೆ ದಿನಾಂಕ 18-01-2024 ಗುರುವಾರದಂದು ಸಂಜೆ 4.45ಕ್ಕೆ ಮಂಗಳೂರು ಪುರಭವನದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ‘ನಾಟ್ಯಾರಾಧನಾ ತ್ರಿಂಶೋತ್ಸವ’ ಸಂಭ್ರಮದ ಉದ್ಘಾಟನಾ ಸಮಾರಂಭವನ್ನು ಆಯೋಜಿಸಿದೆ. ಶ್ರೀ ಎಡನೀರು ಮಠದ ಜಗದ್ಗುರು ಶ್ರೀಶಂಕರಾಚಾರ್ಯ ಸಂಸ್ಥಾನ ಇದರ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಭರತನಾಟ್ಯ ಗುರುಗಳೂ ವಿದ್ವಾಂಸರೂ ಆದ ಗುರು ಶ್ರೀ ಉಳ್ಳಾಲ ಮೋಹನ್ ಕುಮಾರ್, ವಿ. ಚಂದ್ರಶೇಖರ ನಾವಡ ಸುರತ್ಕಲ್, ವಿ. ಶ್ರೀಮತಿ ಶಾರದಾಮಣಿ ಶೇಖರ್, ವಿ. ಗೀತಾ ಸರಳಾಯ ಕದ್ರಿ, ವಿ. ಕಾವ್ಯ…

Read More

ಲಕ್ಕೋ : ಖ್ಯಾತ ಉರ್ದು ಕವಿ ಮುನಾವ್ವರ್ ರಾಣಾ ಅವರು ಹೃದಯಾಘಾತದಿಂದ ದಿನಾಂಕ 14-01-2024ರ ಭಾನುವಾರದ ರಾತ್ರಿ ಉತ್ತರ ಪ್ರದೇಶದ ಲಕ್ಕೋದಲ್ಲಿ ನಿಧನ ಹೊಂದಿದರು. ಅವರಿಗೆ (71) ವರ್ಷ ವಯಸ್ಸಾಗಿತ್ತು. ಮೂತ್ರಪಿಂಡ ಮತ್ತು ಉಸಿರಾಟ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ರಾಣಾರನ್ನು ಲಕ್ಕೋದ ಸಂಜಯ್ ಗಾಂಧಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಅವರು ಕೊನೆ ಯುಸಿರೆಳೆದಿದ್ದಾರೆ. ಶ್ರೀಯುತರು ಪತ್ನಿ, ನಾಲ್ವರು ಪುತ್ರಿಯರು ಹಾಗೂ ಒಬ್ಬ ಪುತ್ರನನ್ನು ಅಗಲಿದ್ದಾರೆ. ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ 26-11-1952ರಂದು ಜನಸಿದ ರಾಣಾ ಅವರು, ಉರ್ದು ಘಜಲ್ ಗಳಿಂದ ಖ್ಯಾತರಾಗಿದ್ದರು. ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಅಮೀರ್ ಖುಸ್ರೋ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದಾರೆ. ಅವರ ನಿಧನಕ್ಕೆ ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.

Read More