Author: roovari

ಉಡುಪಿ : ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಳದ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಎಂ.ಜಿ.ಎಂ. ಕಾಲೇಜು ಉಡುಪಿ ಸಹಕಾರದಲ್ಲಿ ರಂಗಭೂಮಿ ಉಡುಪಿ ಆಯೋಜಸಿರುವ ಡಾ. ನಿ.ಬೀ. ಅಣ್ಣಾಜಿ ಬಲ್ಲಾಳ್ ಅವರ ಸ್ಮರಣಾರ್ಥ ‘ಅಂಬಲಪಾಡಿ ನಾಟಕೋತ್ಸವ’ವು ದಿನಾಂಕ 12 ಜನವರಿ 2025ರಂದು ಎಂ.ಜಿ.ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ಉದ್ಘಾಟನೆಗೊಂಡಿತು. ಈ ನಾಟಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ. ಎನ್.ಬಿ. ವಿಜಯ ಬಲ್ಲಾಳ್ “ನಾಟಕಗಳು ನಮ್ಮ ಜೀವ, ಜೀವನದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಹಾಸುಹೊಕ್ಕಾಗಿವೆ. ಸಾಮಾಜಿಕ, ಐತಿಹಾಸಿಕ, ಧಾರ್ಮಿಕ ವಿಷಯಗಳಲ್ಲಿ ರಂಗಭೂಮಿ ಇಂದು ಬೆಳೆದು ಸಮೃದ್ಧವಾಗಿದೆ. ಉತ್ತಮ ಜೀವನ ಸಂದೇಶವನ್ನು ಭಿತ್ತರಿಸುವ ಈ ರಂಗಭೂಮಿ ಆರೋಗ್ಯವಂತ ಸಮಾಜದ ಪ್ರತಿಬಿಂಬವೂ ಹೌದು. ಬ್ರಿಟೀಷರ ಕಾಲದಲ್ಲಿ ಅವರ ವಿರುದ್ಧ ಹೋರಾಡಲು ನಾಟಕಗಳ ಮೂಲಕ ಪರಿಣಾಮಕಾರಿ ಜಾಗೃತಿ ಮೂಡಿಸಲಾಗಿತ್ತು. ರಂಗಭೂಮಿಗೆ ಬಿ.ವಿ. ಕಾರಂತ, ಗುಬ್ಬಿ ವೀರಣ್ಣ, ಕಾರ್ನಾಡ್ ಇವರ ಕೊಡುಗೆಯನ್ನು ಮರೆಯುವಂತಿಲ್ಲ. ನೀನಾಸಂ ಹೆಗ್ಗೋಡಿನ ಕೆ.ವಿ. ಸುಬ್ಬಣ್ಣರವರನ್ನು ಇಲ್ಲಿ ನೆನೆಯಲೇಬೇಕು.…

Read More

ಉಳ್ಳಾಲ : ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ 2025ರ ಫೆಬ್ರವರಿ ತಿಂಗಳ 3ನೇ ವಾರದಲ್ಲಿ ಜರಗುವ ವೀರರಾಣಿ ಅಬ್ಬಕ್ಕ ಉತ್ಸವದಲ್ಲಿ ಓರ್ವ ಮಹಿಳಾ ಸಾಧಕರಿಗೆ ‘ವೀರರಾಣಿ ಅಬ್ಬಕ್ಕ ಪ್ರಶಸ್ತಿ’ ಮತ್ತು ಓರ್ವ ಮಹಿಳಾ ಸಾಧಕರಿಗೆ ‘ವೀರರಾಣಿ ಅಬ್ಬಕ್ಕ ಪುರಸ್ಕಾರ’ ನೀಡಲು ನಿರ್ಧರಿಸಲಾಗಿದೆ. ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ ನೀಡಲಾಗುವ ಈ ಪ್ರಶಸ್ತಿಗಳು ನಗದು ಮತ್ತು ಪ್ರಶಸ್ತಿ ಫಲಕಗಳನ್ನು ಒಳಗೊಂಡಿದ್ದು, ಪ್ರಶಸ್ತಿ ಮತ್ತು ಪುರಸ್ಕಾರಗಳಿಗೆ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪ್ರಶಸ್ತಿ, ಪುರಸ್ಕಾರಗಳಿಗೆ ಅರ್ಜಿ ಸಲ್ಲಿಸುವವರಿಗೆ ಮಾನದಂಡಗಳು : ‘ವೀರರಾಣಿ ಅಬ್ಬಕ್ಕ ಪ್ರಶಸ್ತಿ’ – ತುಳುನಾಡಿನಲ್ಲಿ ಹುಟ್ಟಿ ಸಾಹಿತ್ಯ, ಸಂಸ್ಕೃತಿ ಮತ್ತು ಸಂಶೋಧನಾ ವಿಭಾಗಗಳಲ್ಲಿ ಗಣನೀಯ ಸಾಧನೆ ಮಾಡಿದ ಓರ್ವ ಮಹಿಳೆಗೆ ಈ ಪ್ರಶಸ್ತಿ ಮೀಸಲಾಗಿದೆ. ನಾಡು, ನುಡಿ ಹಾಗೂ ಪರಂಪರೆಗೆ ನೀಡಿದ ಮಹತ್ವದ ಸೇವೆಯನ್ನು ಇಲ್ಲಿ ಪರಿಗಣಿಸಲಾಗುವುದು. ‘ವೀರರಾಣಿ ಅಬ್ಬಕ್ಕ ಪುರಸ್ಕಾರ’ – ತುಳು ಸಂಸ್ಕೃತಿಯ ಹಿನ್ನೆಲೆಯೊಂದಿಗೆ ಕಲೆ, ಕ್ರೀಡೆ, ಸಮಾಜಸೇವೆ ಇತ್ಯಾದಿ ಕ್ಷೇತ್ರಗಳಲ್ಲಿ ಮಹತ್ವದ ಸಾಧನೆ…

Read More

ರಾಷ್ಟ್ರೀಯ ಮಟ್ಟದ ತಬಲವಾದಕ ಪಂಡಿತ್ ರಘುನಾಥ್ ನಾಕೋಡ್ ಇವರು 17 ಜನವರಿ 1954ರಲ್ಲಿ ಹುಬ್ಬಳ್ಳಿಯ ಸಂಗೀತಗಾರರ ಮನೆತನದ ಪ್ರಸಿದ್ಧ ಹಿಂದೂಸ್ತಾನಿ ಸಂಗೀತಗಾರರಾದ ಅರ್ಜುನ್ ಸಾ ನಾಕೊಡ್ ಹಾಗೂ ಅನಸೂಯಾ ನಾಕೊಡ್ ದಂಪತಿಗಳ ಸುಪುತ್ರನಾಗಿ ಜನಿಸಿದರು. ಎಸ್. ಎಸ್. ಎಲ್. ಸಿ. ವರೆಗೆ ವಿದ್ಯಾಭ್ಯಾಸವನ್ನು ಮಾಡಿದ ರಘುನಾಥರಿಗೆ ಸಂಗೀತದ ಪ್ರಥಮ ಗುರು ತಂದೆಯಾಗಿದ್ದರು. ಮುಂದಕ್ಕೆ ಅವರು ಆರಿಸಿಕೊಂಡದ್ದು ಸಂಗೀತವಾದ್ಯಗಳಲ್ಲಿ ಒಂದಾದ ತಬಲಾವಾದನ. ಗುರು ವೀರಣ್ಣ ಕುಮಾರ್ ಇವರ ತಾಳ – ಲಯದ ಗುರು ಆಗಿದ್ದರು. ಮುಂದೆ ಬಸವರಾಜ ಬೆಂಡಿಗೇರಿ ಇವರಲ್ಲಿ ಶ್ರಮಪಟ್ಟು ಹೆಚ್ಚಿನ ಅಭ್ಯಾಸವನ್ನು ಮಾಡಿ ತಬಲ ವಾದನವನ್ನು ಕರಗತಗೊಳಿಸಿಕೊಂಡರು . ಹೈದರಾಬಾದಿನ ಉಸ್ತಾದ್ ಶೇಕ್ ದಾವೂದ್ ಇವರ ಮಗ ತಬ್ಬೀರ್ ದಾವೂದ್, ಗುರುಬಂಧು ನಂದಕುಮಾರ್ ಮುಂತಾದವರ ಬಳಿ ಹೆಚ್ಚಿನ ಶಿಕ್ಷಣವನ್ನು ಪಡೆದು ಈ ಕಲೆಯನ್ನು ಮೈಗೂಡಿಸಿಕೊಂಡರು. ತಾನು ಪಡೆದ ಅಗಾಧ ಜ್ಞಾನದಿಂದಾಗಿ ಪಂಡಿತ್ ಪುಟ್ಟರಾಜ ಗವಾಯಿಗಳು, ಪಂಡಿತ್ ಸೋಮನಾಥ ಮರಡೂರ, ಪಂಡಿತ್ ವೆಂಕಟೇಶ್ ಕುಮಾರ್, ಪಂಡಿತ್ ರಾಜೀವ್ ತಾರಾನಾಥ್, ಡಾ. ಗಂಗೂಬಾಯಿ…

Read More

ಮಂಡ್ಯ : ಮಂಡ್ಯದ ಸ್ಪೋರ್ಟ್ಸ್ ಆಂಡ್ ಕಲ್ಚರಲ್ ಅಕಾಡೆಮಿ ಫಾರ್ ಡಿಫರೆಂಟ್ಲಿ ಏಬಲ್ಡ್ (ರಿ.) (ಸಕಾಡ) ಹಾಗೂ ಮಂಡ್ಯ ಜಿಲ್ಲೆಯ ಆಶಾಸದನ ವಿಶೇಷ ಶಾಲೆಯ ಸಹಯೋಗದೊಂದಿಗೆ ಆಯೋಜಿಸಿದ ‘ಸಕಾಡೋತ್ಸವ-2025’ ಭಿನ್ನ ಸಾಮರ್ಥ್ಯದ ಮಕ್ಕಳ ರಾಜ್ಯಮಟ್ಟದ ಜನಪದ ನೃತ್ಯ ಸ್ಪರ್ಧೆ ಕಾರ್ಯಕ್ರಮವು ದಿನಾಂಕ 11 ಮತ್ತು 12 ಜನವರಿ 2025 ರಂದು ಮಂಡ್ಯ ಜಿಲ್ಲೆಯ ಸುಭಾಷ್‌ನಗರದಲ್ಲಿರುವ ಡಾ. ಬಿ. ಆರ್. ಅಂಬೇಡ್ಕರ್ ಸಭಾಭವನದಲ್ಲಿ ನಡೆಯಿತು. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಒಟ್ಟು 30 ಸಂಸ್ಥೆಗಳು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಮಂಗಳೂರಿನ ಶಕ್ತಿನಗರದಲ್ಲಿರುವ ಸಾನಿಧ್ಯ ಸಂಸ್ಥೆ ಅತ್ಯುತ್ತಮ ಪ್ರದರ್ಶನವನ್ನು ನೀಡಿದ್ದು ಮಾತ್ರವಲ್ಲ, ಪ್ರಥಮ ಬಹುಮಾನವನ್ನು ಪಡೆದುಕೊಂಡಿದೆ. ಈ ಪ್ರಶಸ್ತಿಯು ಫಲಕ ಹಾಗೂ ನಗದು ಬಹುಮಾನವನ್ನು ಒಳಗೊಂಡಿದೆ. ಈ ಸಂದರ್ಭದಲ್ಲಿ ಬ್ಯಾಂಡ್ ಮಾಸ್ಟರ್ ಶ್ರೀ ಪ್ರೇಮ್ ಮೋರಸ್‌ ಇವರ ನೇತೃತ್ವದಲ್ಲಿ ಸಾನಿಧ್ಯ ವಿಶೇಷ ಮಕ್ಕಳ ತಂಡವು ಬ್ಯಾಂಡ್ ನುಡಿಸಿ ಜನರ ಮೆಚ್ಚುಗೆ ಗಳಿಸಿತು.

Read More

ಮೈಸೂರು: ಯಶಸ್ವೀ ಕಲಾವೃಂದ ಕೊಮೆ, ತೆಕ್ಕಟ್ಟೆಯ ಮಕ್ಕಳ ಯಕ್ಷಗಾನ ‘ಕೃಷ್ಣಾರ್ಜುನರ ಕಾಳಗ’ವು ದಿನಾಂಕ 16 ಜನವರಿ 2025ರಂದು ಮೈಸೂರಿನ ರಂಗಾಯಣದ ‘ವನರಂಗ’ದಲ್ಲಿ ನಡೆಯುತ್ತಿರುವ ಬಹುರೂಪಿ ನಾಟಕೋತ್ಸವದಲ್ಲಿ ‘ಸಿನ್ಸ್ 1999 ಶ್ವೇತಯಾನ-99’ ಕಾರ್ಯಕ್ರಮದಲ್ಲಿ ನಡೆಯಿತು. ಕಾರ್ಯಕ್ರಮದ ಬಳಿಕ ತಂಡವನ್ನು ಅಭಿನಂದಿಸಿದ ಮೈಸೂರು ರಂಗಾಯಣದ ನಿರ್ದೇಶಕರಾದ ಸತೀಶ್ ತಿಪಟೂರು ಮಾತನಾಡಿ “ಕರಾವಳಿಯ ರಂಗ ಸೊಗಡು ಯಕ್ಷಗಾನ ಉಡುಗೆಗಳು ಕಲಾ ಪ್ರಕಾರಗಳಲ್ಲಿಯೇ ಶ್ರೀಮಂತವಾದದ್ದು. ಅದರಲ್ಲಿಯೂ ಮಕ್ಕಳು ರಂಗದಲ್ಲಿ ಅಭಿನಯಿಸುವಾಗ ಮಕ್ಕಳೆಂದು ಎಣಿಸಲಾಗದೇ ಇದ್ದದ್ದು ಸೋಜಿಗ. ಕೃಷ್ಣಾರ್ಜುನರಾಗಿ, ಸುಭದ್ರೆ-ರುಕ್ಮಿಣಿಯಾಗಿ, ಭೀಮ-ದಾರುಕರಾಗಿ, ಅಭಿಮನ್ಯುವಾಗಿಯೇ ಕಾಣಿಸಿಕೊಂಡು ಪ್ರೇಕ್ಷಕರಿಗೆ ಸಿಹಿ ಕಹಿಯಾಗಿ ಉಣಿಸಿ ಗೆದ್ದು ವಿಜೃಂಬಿಸಿದರು. ಇದು ಕರಾವಳಿಯ ಯಕ್ಷಗಾನದ ವಿಷೇಷ” ಎಂದರು. ರಂಗ ನಿರ್ದೇಶಕ ಪ್ರಸನ್ನ, ಭಾಗವತರಾಗಿ ಲಂಬೋದರ ಹೆಗಡೆ ಮತ್ತು ಪ್ರಾಚಾರ್ಯರಾದ ದೇವದಾಸ್ ರಾವ್ ಕೂಡ್ಲಿ, ಚರಿತಾ ಭಾರದ್ವಾಜ್, ಶ್ರೀಷ ಭಟ್ ತೆಕ್ಕಟ್ಟೆ ಉಪಸ್ಥಿತರಿದ್ದರು.

Read More

ಮೈಸೂರು: ಮೈಸೂರಿನ ಮಂಡ್ಯ ರಮೇಶ್ ಇವರ ‘ನಟನ’ ರಂಗಶಾಲೆಯಲ್ಲಿ ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆಯ ಮಕ್ಕಳ ‘ಹೂವಿನಕೋಲು’ ಯಕ್ಷಗಾನ ಕಲಾಪ್ರಕಾರದ ಕಾರ್ಯಕ್ರಮ ದಿನಾಂಕ 16 ಡಿಸೆಂಬರ್ 2025ರಂದು ನಡೆಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ‘ನಟನ’ದ ಪ್ರಾಂಶುಪಾಲ ಮೇಘಸಮೀರ “ಅಭಿಮಾನದಿಂದ ‘ನಟನ’ದ ಸುತ್ತ ಒಂದಷ್ಟು ಕಾಲ ಸುತ್ತಿ ಕರಾವಳಿಯ ಸಾಂಪ್ರದಾಯಿಕ ಸೊಗಡನ್ನು ನಟನದ ರಂಗಶಾಲೆಯಲ್ಲಿ ಪ್ರದರ್ಶಿಸಿ ತನ್ಮೂಲಕ ಯಶಸ್ವಿ ಕಲಾವೃಂದ ಹಾಗೂ ನಟನ ರಂಗಶಾಲೆಯ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವಂತೆ ಮಾಡಿದ್ದು ಸೊಗಸು. ಕಲಾ ಪ್ರಸ್ತುತಿಯಿಂದ ನಮ್ಮಲ್ಲಿಯ ಅನೇಕ ಶಿಷ್ಯರನ್ನು ಉತ್ತೇಜಿಸಿ ಗೆದ್ದಿದ್ದಾರೆ” ಎಂದು ಮೆಚ್ಚುಗೆ ಮಾತನ್ನಾಡಿದರು. ಕಾರ್ಯಕ್ರಮದಲ್ಲಿ ರಂಗ ಶಿಕ್ಷಕಿ ದಿಶಾ ಮಂಡ್ಯ ರಮೇಶ್, ಪ್ರಾಚಾರ್ಯ ದೇವದಾಸ್ ರಾವ್ ಕೂಡ್ಲಿ, ಯಕ್ಷಗುರು ಲಂಬೋದರ ಹೆಗಡೆ ನಿಟ್ಟೂರು, ಕಾರ್ಯದರ್ಶಿ ವೆಂಕಟೇಶ ವೈದ್ಯ, ರಾಹುಲ್ ಕುಂದರ್, ಗೋಪಾಲ ಪೂಜಾರಿ ಹಾಗೂ ನಟನ ರಂಗಶಾಲೆಯ ಶಿಷ್ಯರು ಉಪಸ್ಥಿತರಿದ್ದರು.

Read More

ಕರ್ನಾಟಕ ಜಾನಪದ ಅಧ್ಯಯನಕ್ಕೆ, ಸಂಶೋಧನೆಗೆ ನಾಂದಿ ಹಾಡಿ ಡಾ. ಬಿ.ಎಸ್. ಗದ್ದಗಿಮಠ ಅವರು ನಾಡು ಕಂಡ ಅಪೂರ್ವ ಜಾನಪದ ವಿದ್ವಾಂಸರು, ಕನ್ನಡ ಸಾಹಿತ್ಯದ ನವೋದಯ ಕಾಲದಲ್ಲಿ ಜಾನಪದ ಸಾಹಿತ್ಯದ ಬಗ್ಗೆ ಅಧಿಕೃತವಾಗಿ ಮಾತನಾಡಿದ ಧೀಮಂತ ವ್ಯಕ್ತಿ. ಜಾನಪದ ಸಾಹಿತ್ಯವನ್ನು ಉಸಿರಾಗಿಸಿಕೊಂಡಿದ್ದ ಇವರು ಜಾನಪದ ಸಾಹಿತ್ಯದ ಮೌಲಿಕತೆಯನ್ನು ಸಾಂಸ್ಕೃತಿಕ ವಿಕಾಸವನ್ನು ತೋರಿಸಿಕೊಟ್ಟವರು. 07 ಜನವರಿ 1917ರಂದು ಬಿಜಾಪುರ ಜಿಲ್ಲೆ ಕೆರೂರಿನಲ್ಲಿ ಡಾ. ಬಿ.ಎಸ್. ಗದ್ದಗಿಮಠ ಇವರ ಜನನವಾಯಿತು. ಜಾನಪದ ಗೀತೆಗಳನ್ನು ಹಾಡುತ್ತಿದ್ದ ತಮ್ಮ ತಂದೆಯಿಂದ ಪ್ರಭಾವಿತರಾದ ಇವರು ಬೆಳೆಯುತ್ತಾ ಬೆಳೆಯುತ್ತಾ ಜಾನಪದ ಕ್ಷೇತ್ರದೊಂದಿಗೆ ತೀವ್ರವಾದ ಒಲವನ್ನು ಬೆಳೆಸಿಕೊಂಡರು. ಕನ್ನಡದಲ್ಲಿ ಎಂ. ಎ. ಪದವಿ ಪಡೆದ ಇವರು ಉತ್ತರ ಕರ್ನಾಟಕದ ನಾನಾ ಭಾಗಗಳಲ್ಲಿ ಸಂಚರಿಸುತ್ತಾ ಜಾನಪದ ಗೀತೆಗಳನ್ನು ಸಂಶೋಧಿಸುತ್ತಾ, ಸಂಗ್ರಹಿಸುತ್ತಾ ಪ್ರೌಢ ಪ್ರಬಂಧವನ್ನು ಬರೆದರು. ‘ಕನ್ನಡ ಜನಪದ ಗೀತೆಗಳು’ ಎಂಬ ಈ ಸಂಶೋಧನಾತ್ಮಕ ಪ್ರಬಂಧಕ್ಕೆ ಕರ್ನಾಟಕ ವಿಶ್ವ ವಿದ್ಯಾಲಯದಿಂದ ಪಿ.ಎಚ್.ಡಿ. ಪದವಿ ದೊರೆಯಿತು. ಇದು ಜಾನಪದ ಕ್ಷೇತ್ರಕ್ಕೆ ಪ್ರಥಮವಾಗಿ ದೊರೆತ ಪಿ.ಎಚ್.ಡಿ. ಪದವಿಯಾಗಿತ್ತು. ಬಾಗಲಕೋಟೆ…

Read More

ಕೊಪ್ಪಳ : ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಇದರ ವತಿಯಿಂದ “ಗೌರವ ಪ್ರಶಸ್ತಿ 2022’, ‘ಸಾಹಿತ್ಯಶ್ರೀ ಪ್ರಶಸ್ತಿ 2022 ಮತ್ತು ‘ಪುಸ್ತಕ ಬಹುಮಾನ 2021’ ಪ್ರದಾನ ಸಮಾರಂಭವನ್ನು ದಿನಾಂಕ 20 ಜನವರಿ 2025ರಂದು ಸಂಜೆ 4-00 ಗಂಟೆಗೆ ಕೊಪ್ಪಳ ಹೊಸಪೇಟೆ ರಸ್ತೆ ಹೊಟೇಲ್ ಬಿ.ಎಸ್. ಪವಾರ್ ಗ್ರ್ಯಾಂಡ್ ಹತ್ತಿರವಿರುವ ಶ್ರೀ ಶಿವಶಾಂತ ಮಂಗಲ ಭವನದಲ್ಲಿ ಆಯೋಜಿಸಲಾಗಿದೆ. ಸುಗಮ ಸಂಗೀತ ಕಾರ್ಯಕ್ರಮದೊಂದಿಗೆ ಪ್ರಾರಂಭವಾಗುವ ಈ ಸಮಾರಂಭದಲ್ಲಿ ಮಾನ್ಯ ಸಚಿವರಾದ ಶ್ರೀ ಶಿವರಾಜ ಎಸ್. ತಂಗಡಗಿ ಇವರು ಗೌರವ ಪ್ರಶಸ್ತಿ, ಸಾಹಿತ್ಯಶ್ರೀ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನ ಪ್ರದಾನ ಮಾಡಲಿರುವರು. ಪ್ರೊ. ಆರ್.ಕೆ. ಹುಡಗಿ, ಅಗ್ರಹಾರ ಕೃಷ್ಣಮೂರ್ತಿ, ಡಾ. ಇಂದಿರಾ ಹೆಗ್ಗಡೆ, ರಂಜಾನ್ ದರ್ಗಾ ಮತ್ತು ತುಂಬಾಡಿ ರಾಮಯ್ಯ ಇವರುಗಳು 2022ನೆಯ ವರ್ಷದ ಗೌರವ ಪ್ರಶಸ್ತಿ ಪುರಸ್ಕೃತರು, ಡಾ. ಬಂಜಗೆರೆ ಜಯಪ್ರಕಾಶ, ಡಾ. ಎಂ.ಜಿ. ಮಂಜುನಾಥ, ಡಾ. ರಾಜಶೇಖರ ಹತಗುಂದಿ, ದಾಸನೂರು ಕೂಸಣ್ಣ, ಡಾ. ಅನಸೂಯ ಕಾಂಬಳೆ, ಬಿ. ಮಹೇಶ್ ಹರವೆ, ಎಚ್.ಎನ್. ಆರತಿ,…

Read More

ಮಡಿಕೇರಿ : ಕೊಡವ ಮಕ್ಕಡ ಕೂಟದ 108ನೇ ಮತ್ತು ಲೇಖಕಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ರಚಿತ 10ನೇ ಪುಸ್ತಕ ‘ಜೇನು ಗೂಡು’ ಇದರ ಲೋಕರ್ಪಣಾ ಸಮಾರಂಭವು ದಿನಾಂಕ 12 ಜನವರಿ 2025ರಂದು ಮಡಿಕೇರಿಯ ಪತ್ರಿಕಾ ಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳಿಸಿದ ‘ಬ್ಲೂ ಡಾರ್ಟ್’ ಸಲಹೆಗಾರ ಹಾಗೂ ಹಿರಿಯ ಕ್ರೀಡಾಪಟು ಬಾಳೆಯಡ ಕಾಳಪ್ಪ ಮಾತನಾಡಿ “ಬರವಣಿಗೆಗೆ ಮನುಷ್ಯನ ಜೀವನವನ್ನು ಬದಲಾಯಿಸುವ ಅದ್ಭುತವಾದ ಶಕ್ತಿ ಇದೆ. ಪುಸ್ತಕಗಳು ಮನುಷ್ಯನ ಜೀವನದಲ್ಲಿ ಬದಲಾವಣೆಯನ್ನು ತರಲು ಶಕ್ತವಾಗಿವೆ. ಬರಹಗಾರರು ತಮಗಾಗಿ ಅಥವಾ ಸಮಾಜದ ಕಲ್ಯಾಣಕ್ಕಾಗಿ ಪುಸ್ತಕಗಳನ್ನು ಬರೆಯಬಹುದು. ಆದರೆ ಬರವಣಿಗೆಯಲ್ಲಿರುವ ಶಕ್ತಿ ಸಾಮಾಜಿಕ ಪರಿವರ್ತನೆಗೆ ಸಹಕಾರಿಯಾಗಿದೆ. ಪುಸ್ತಕಗಳನ್ನು ಹೆಚ್ಚು ಓದುವ ಮೂಲಕ ಉತ್ತಮ ಸಂದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಬರೆಯುವುದರಿಂದ ಅಥವಾ ಓದುವ ಹವ್ಯಾಸದಿಂದ ಜೀವನದ ಕುಂದು ಕೊರತೆ ಮತ್ತು ವ್ಯತ್ಯಾಸಗಳು ದೂರವಾಗುತ್ತವೆ. ಮಕ್ಕಳ ಜೀವನದಲ್ಲಿ ತಂದೆ ತಾಯಿಗಳ ಪಾತ್ರ ದೊಡ್ಡದಾಗಿರುತ್ತದೆ. ತಂದೆ ನಂಬಿಕೆಯಾದರೆ ತಾಯಿ ಸತ್ಯವಾಗುತ್ತಾಳೆ ಇವರಿಬ್ಬರು ದೇವರಿಗೆ ಸಮಾನರು. ಇಂದು ಬಿಡುಗಡೆಯಾದ ‘ಜೇನು…

Read More

ಬೆಂಗಳೂರು : ತರಬೇತಿ ಮತ್ತು ಪ್ರದರ್ಶನ ಸೇವಾ ಸಂಸ್ಥೆ ಯಕ್ಷತರಂಗ ಬೆಂಗಳೂರು (ರಿ.) ಇದರ ವತಿಯಿಂದ ಸುರೇಂದ್ರ ಪೂಜಾರಿ ಮತ್ತು ಸ್ನೇಹಿತರ ಸೇವೆಯಾಟ ಪ್ರಯುಕ್ತ ‘ಶ್ರೀ ದೇವಿ ಮಹಾತ್ಮೆ’ ಕನ್ನಡ ಯಕ್ಷಗಾನ ಪುಣ್ಯ ಕಥಾ ಪ್ರಸಂಗ ಪ್ರದರ್ಶನವನ್ನು ದಿನಾಂಕ 18 ಜನವರಿ 2025ರಂದು ಸಂಜೆ 5-00 ಗಂಟೆಗೆ ಬೆಂಗಳೂರಿನ ಗುಬ್ಬಲಾಳ ಕನಕಪುರ ರಸ್ತೆಯಲ್ಲಿರುವ ಹೊಟೇಲ್ ಸಿಂಧೂರ ಗಾರ್ಡೇನಿಯಾ ಪಾರ್ಕಿಂಗ್ ಸ್ಥಳದಲ್ಲಿ ಆಯೋಜಿಸಲಾಗಿದೆ.

Read More