Author: roovari

ಉಡುಪಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಉಡುಪಿ ತಾಲೂಕು ಘಟಕ ಹಾಗೂ ಅಮ್ಮ ಪ್ರಕಾಶನ ಕಟಪಾಡಿ ಇವರ ಸಹಯೋಗದಲ್ಲಿ ರಂಗಭೂಮಿ ಹಾಗೂ ಸಿನೆಮಾ ಕ್ಷೇತ್ರದಲ್ಲಿ ಸಕ್ರೀಯವಾಗಿರುವ ಸಾಹಿತಿ ಬಾಸುಮ ಕೊಡಗುರವರ ‘ನಡುರಾತ್ರಿಯ ಸ್ವಾತಂತ್ರ್ಯ’ ಕವನ ಸಂಕಲನ ಲೋಕಾರ್ಪಣೆ ಸಮಾರಂಭವು ದಿನಾಂಕ 22 ಜೂನ್ 2025ರ ಭಾನುವಾರ ಸಂಜೆ 4-30 ಗಂಟೆಗೆ ಉಡುಪಿಯ ಮಥುರಾ ಕಂಫರ್ಟ್ಸ್ ಸಭಾಂಗಣದಲ್ಲಿ ನಡೆಯಲಿದೆ. ಖ್ಯಾತ ವ್ಯೆದ್ಯರೂ ಸಾಹಿತಿಗಳೂ ಆಗಿರುವ ಡಾ. ಭಾಸ್ಕರಾನಂದ ಕುಮಾರ್ ಕೃತಿ ಬಿಡುಗಡೆ ಮಾಡಲಿದ್ದು, ಕ.ಸಾ.ಪ. ಉಡುಪಿ ಘಟಕ ಆಯೋಜಿಸಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರವಿರಾಜ್ ಎಚ್.ಪಿ.ಯವರು ವಹಿಸಲಿದ್ದಾರೆ. ಡಾ. ನಿಕೇತನರವರು ಕೃತಿ ಪರಿಚಯ ಮಾಡಲಿದ್ದು, ಸಂಕಲನಕ್ಕೆ ಬೆನ್ನುಡಿ ಬರೆದಿರುವ ಶ್ರೀಮತಿ ಜಾನಕಿ ಬ್ರಹ್ಮಾವರ, ಕವಯತ್ರಿ ಪೂರ್ಣಿಮಾ ಸುರೇಶ್ ಅತಿಥಿಗಳಾಗಿ ಉಪಸ್ಥಿತರಿರುತ್ತಾರೆ. ಕಟಪಾಡಿಯ ವನಸುಮ ಟ್ರಸ್ಟ್ ಮತ್ತು ವನಸುಮ ವೇದಿಕೆ ಹಾಗೂ ಅಮ್ಮ ಪ್ರಕಾಶನದ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿರುತ್ತಾರೆ. ಆರಂಭದಲ್ಲಿ ಗಾನಪಲ್ಲವಿ ತಂಡದಿಂದ ಬಾಸುಮ ಕೊಡಗು ರಚನೆಯ ಹಾಡುಗಳ ಗಾಯನ…

Read More

ಉಡುಪಿ : ಕಾಪು ಮಂಥನ ರೆಸಾರ್ಟ್ ನಲ್ಲಿ ದಿನಾಂಕ 16 ಜೂನ್ 2025ರಂದು ಪೂರ್ವಾಹ್ನ ಶಾಸಕರಾದ ಶ್ರೀ ಗುರ್ಮೆ ಸುರೇಶ್ ಶೆಟ್ಟಿಯವರ ನೇತೃತ್ವದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಯಕ್ಷಶಿಕ್ಷಣ ಶಾಲೆಗಳ ಮುಖ್ಯಶಿಕ್ಷಕರ ಸಭೆಯು ನಡೆಯಿತು. ಅಪರಾಹ್ನ ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕುಂದಾಪುರ ಮತ್ತು ಬೈಂದೂರು ವಿಧಾನಸಭಾ ಕ್ಷೇತ್ರದ ಯಕ್ಷಶಿಕ್ಷಣ ಶಾಲೆಗಳ ಮುಖ್ಯಶಿಕ್ಷಕರ ಸಭೆ, ಶಾಸಕರಾದ ಶ್ರೀ ಕಿರಣ್ ಕುಮಾರ್ ಕೊಡ್ಗಿ ಹಾಗೂ ಗುರುರಾಜ್ ಗಂಟಿಹೊಳೆಯವರ ಸಮ್ಮುಖದಲ್ಲಿ ನಡೆಯಿತು. ಸಭೆಯಲ್ಲಿ ಕುಂದಾಪುರ, ಬೈಂದೂರು, ಬ್ರಹ್ಮಾವರದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು. ಯಕ್ಷಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಮುರಲಿ ಕಡೆಕಾರ್ ಉಭಯ ಸಭೆಗಳಲ್ಲಿ ಈ ಬಾರಿಯ ಯಕ್ಷಶಿಕ್ಷಣದ ಒಟ್ಟು ಸಿದ್ಧತೆಗಳ ಕುರಿತು ಮಾಹಿತಿ ನೀಡಿದರು. ಎರಡೂ ಸಭೆಗಳಲ್ಲಿ ಟ್ರಸ್ಟಿಗಳಾದ ವಿ.ಜಿ. ಶೆಟ್ಟಿ ಮತ್ತು ಗಣೇಶ್ ಬ್ರಹ್ಮಾವರ ಭಾಗವಹಿಸಿದ್ದರು.

Read More

ಉಡುಪಿ : ರಾಗ ಧನ ಉಡುಪಿ (ರಿ.) ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸುತ್ತಿರುವ ರಾಗರತ್ನಮಾಲಿಕೆ – 38ನೇ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯು ದಿನಾಂಕ 22 ಜೂನ್ 2025ರಂದು ಅಪರಾಹ್ನ 3-00 ಗಂಟೆಗೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮೊದಲಿಗೆ ರಾಗ ಧನ ಸಂಸ್ಥೆಯ ವಾರ್ಷಿಕ ಮಹಾಸಭೆ ನಡೆಯಲಿದ್ದು, ಸಂಜೆ 4-45 ಗಂಟೆಗೆ ಬೆಂಗಳೂರಿನ ಶ್ರೀಮತಿ ಕಲಾವತಿ ಅವಧೂತ್ ಇವರ ಹಾಡುಗಾರಿಕೆಗೆ ಬೆಂಗಳೂರಿನ ಬಿ.ಕೆ. ರಘು ಇವರಿಂದ ವಯೋಲಿನ್, ಬೆಂಗಳೂರಿನ ಕೆ.ಯು. ಜಯಚಂದ್ರ ರಾವ್ ಇವರು ಮೃದಂಗ ಮತ್ತು ಪುತ್ತೂರಿನ ಬಾಲಕೃಷ್ಣ ಹೊಸಮನೆ ಇವರು ಮೋರ್ಸಿಂಗ್ ನಲ್ಲಿ ಸಹಕರಿಸಲಿದ್ದಾರೆ ಎಂದು ರಾಗ ಧನ ಸಂಸ್ಥೆಯ ಕಾರ್ಯದರ್ಶಿ ಉಮಾಶಂಕರಿ ತಿಳಿಸಿದ್ದಾರೆ.

Read More

ಬೆಂಗಳೂರು : ಕಲಾ ಗಂಗೋತ್ರಿ ಅಭಿನಯಿಸುವ ‘ಮನೆ ಮನೆ ಕಥೆ’ ನಾಟಕ ಪ್ರದರ್ಶನವನ್ನು ದಿನಾಂಕ 18 ಜೂನ್ 2025ರಂದು ಸಂಜೆ 7-30 ಗಂಟೆಗೆ ಬೆಂಗಳೂರಿನ ಜೆ.ಪಿ. ನಗರದಲ್ಲಿರುವ ರಂಗ ಶಂಕರದಲ್ಲಿ ಹಮ್ಮಿಕೊಳ್ಳಲಾಗಿದೆ. ಭಾರ್ಗವಿ ನಾರಾಯಣ್ ರಂಗ ರೂಪ ನೀಡಿದ್ದು, ಡಾ. ಬಿ.ಎ. ರಾಜಾರಾಂ ನಿರ್ದೇಶನ ಮಾಡಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 99723 98931 ಶ್ರೀನಿವಾಸ ಕೈವಾರ ಮತ್ತು 99864 83097 ದುರ್ಗಾದಾಸ್ ಇವರನ್ನು ಸಂಪರ್ಕಿಸಿರಿ.

Read More

ಡಾ. ಎ. ಎನ್. ಮೂರ್ತಿರಾವ್ ಎಂದೇ ಪ್ರಸಿದ್ಧರಾದವರು ಕನ್ನಡದ ಖ್ಯಾತ ವಿಮರ್ಶಕ, ಸಾಹಿತಿ ಹಾಗೂ ಶ್ರೇಷ್ಠ ಪ್ರಬಂಧಕಾರ ಅಕ್ಕಿಹೆಬ್ಬಾಳು ನರಸಿಂಹ ಮೂರ್ತಿರಾಯರು.  103 ವರ್ಷಗಳ ತುಂಬ ಜೀವನ ನಡೆಸಿ ಶತಾಯುಷಿ ಎಂದು ಕರೆಸಿಕೊಂಡವರು. 16 ಜೂನ್ 1900ರಲ್ಲಿ ಎಂ. ಸುಬ್ಬರಾವ್ ಮತ್ತು ಪುಟ್ಟಮ್ಮ ದಂಪತಿಗಳ ಮಗನಾಗಿ ಮಂಡ್ಯ ಜಿಲ್ಲೆಯ ಅಕ್ಕಿಹೆಬ್ಬಾಳು ಎಂಬಲ್ಲಿ ಜನಿಸಿದರು. ಇವರ ಬಾಲ್ಯದ ದಿನಗಳು ಮೇಲುಕೋಟೆ, ನಾಗಮಂಗಲಗಳಲ್ಲಿ ಕಳೆಯಿತು. 1913ರಲ್ಲಿ ಮೈಸೂರಿನ ವೆಸ್ಲಿಯನ್ ಮಿಷನ್ ಹೈಸ್ಕೂಲ್ನಲ್ಲಿ ಶಾಲಾ ಶಿಕ್ಷಣ ಮುಗಿಸಿ, ಮೈಸೂರು ಮಹಾರಾಜ ಕಾಲೇಜಿನಲ್ಲಿ ಬಿ. ಎ. ಮತ್ತು ಎಂ.ಎ. ಪದವಿಯನ್ನು ಪಡೆದರು. 1924ರಲ್ಲಿ ಮಹಾರಾಜ ಕಾಲೇಜಿನ ಟ್ಯೂಟರ್ ಆಗಿ ಸೇರುವ ಮೂಲಕ ವೃತ್ತಿ ಜೀವನಕ್ಕೆ ಪಾದಾರ್ಪಣೆ ಮಾಡಿದರು. ಮುಂದೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ಮುಂದೆ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಭಡ್ತಿ ಹೊಂದಿ ಸೇವೆ ಸಲ್ಲಿಸಿ ಅಲ್ಲಿಂದ ಮುಂದೆ ಶಿವಮೊಗ್ಗದ ಸರಕಾರಿ ಕಾಲೇಜಿನಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು. 1943ರಲ್ಲಿ ಆಕಾಶವಾಣಿಯ ನಿರ್ದೇಶಕರಾದರು. ಚಿತ್ರದುರ್ಗ ಕಾಲೇಜಿನಲ್ಲಿ  ಮುಖ್ಯಸ್ಥರಾಗಿ ಅನನ್ಯ ಸೇವೆ…

Read More

ಮಂಗಳೂರು : ಭರತಾಂಜಲಿ ಕೊಟ್ಟಾರ ಆಯೋಜಿಸಿದ ಎಂ. ಆರ್. ಪಿ. ಎಲ್. ಸಂಸ್ಥೆಯ ನಿವೃತ್ತ ಜನರಲ್ ಮ್ಯಾನೇಜರ್ ವಿ. ಎನ್. ಎಸ್. ವೆಂಕಟರಮಣ ಮತ್ತು ಪದ್ಮ ರಂಜಿನಿ ದಂಪತಿಗಳ ಸುಪುತ್ರಿ ಗುರುಗಳಾದ ವಿದುಷಿ ಪ್ರತಿಮಾ ಶ್ರೀಧರ್, ಶ್ರೀಧರ ಹೊಳ್ಳ ಮತ್ತು ವಿದುಷಿ ಪ್ರಕ್ಷಿಲ ಜೈನ್ ಇವರುಗಳ ಶಿಷ್ಯೆ ವಿ. ಹರಿಣಿ ಇವರ ರಂಗಪ್ರವೇಶ ಕಾರ್ಯಕ್ರಮ ದಿನಾಂಕ 14 ಜೂನ್ 2025 ರಂದು ಮಂಗಳೂರಿನ ಡಾನ್ ಬಾಸ್ಕೋ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಎಮ್. ಆರ್. ಪಿ. ಎಲ್. ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಗ್ರೂಪ್ ಜನರಲ್ ಮ್ಯಾನೇಜರ್ ಕೃಷ್ಣ ಹೆಗ್ಡೆ ಮಿಜಾರ್ ಮಾತನಾಡಿ “ನೃತ್ಯ ಕಲಾವಿದರು ಸಮಾಜಕ್ಕೆ ನೃತ್ಯದ ಮೂಲಕ ತಮ್ಮ ಸಂದೇಶವನ್ನು ತಲುಪಿಸುತ್ತಾರೆ ನೃತ್ಯವು ಕೇವಲ ಒಂದು ಕಲೆಯಲ್ಲ ಅದು ಸಮಾಜದ ಪ್ರತಿಬಿಂಬವಾಗಿದೆ” ಎಂದು ನುಡಿದರು. ಎಂ. ಆರ್. ಪಿ. ಎಲ್. ವ್ಯವಸ್ಥಾಪಕ ನಿರ್ದೇಶಕರಾದ ಮುಂಡ್ಕೂರು ಶಾಮ್ ಪ್ರಸಾದ್ ಕಾಮತ್ ಮಾತನಾಡಿ “ನೃತ್ಯ ಕಲಾವಿದರು ತಮ್ಮ ಕಲೆಯ…

Read More

ಬೆಂಗಳೂರು : ಕರ್ನಾಟಕ ಜಾನಪದ ಅಕಾಡೆಮಿಯು 2024ನೇ ಸಾಲಿನಲ್ಲಿ 01 ಜನವರಿ 2024ರಿಂದ 31 ಡಿಸೆಂಬರ್ 2024ರವರೆಗೆ ಪ್ರಥಮ ಆವೃತ್ತಿಯಲ್ಲಿ ಮುದ್ರಣಗೊಂಡಿರುವ (ತಾಂತ್ರಿಕ ಹಾಗೂ ಪೂರ್ವಭಾವಿ ಪುಟಗಳನ್ನು ಹೊರತುಪಡಿಸಿ) ಕನಿಷ್ಠ 150 ಪುಟಗಳಿಗೂ ಮೇಲ್ಪಟ್ಟಿರುವಂತೆ ಜನಪದ ಗದ್ಯ, ಜನಪದ ಪದ್ಯ, ಜನಪದ ವಿಚಾರ-ವಿಮರ್ಶೆ-ಸಂಶೋಧನೆ, ಜನಪದ ಸಂಕೀರ್ಣ ಪ್ರಕಾರಗಳ ಕುರಿತು ಅತ್ಯುತ್ತಮ ಜಾನಪದ ಕೃತಿಗಳಿಗೆ ಪುಸ್ತಕ ಬಹುಮಾನ ಯೋಜನೆಯಡಿಯಲ್ಲಿ ಆಯ್ಕೆಮಾಡಲು ಜಾನಪದ ಕೃತಿಗಳನ್ನು ಆಹ್ವಾನಿಸಲಾಗಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿಯ ರಿಜಿಸ್ಟ್ರಾ‌ರ್ ತಿಳಿಸಿದ್ದಾರೆ. ಆಸಕ್ತ ಲೇಖಕರು, ಪ್ರಕಾಶಕರು ಅಥವಾ ಸಂಪಾದಕರು ತಮ್ಮ ಒಂದು ಕೃತಿಯನ್ನು ರಿಜಿಸ್ಟ್ರಾರ್, ಕರ್ನಾಟಕ ಜಾನಪದ ಅಕಾಡೆಮಿ, 2ನೇ ಮಹಡಿ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು-560002 ಗೆ ದಿನಾಂಕ 30 ಜೂನ್ 2025ರೊಳಗಾಗಿ ತಲುಪುವಂತೆ ಖುದ್ದಾಗಿ, ಕೊರಿಯ‌ರ್ ಅಥವಾ ಅಂಚೆ ಮೂಲಕ ಸಲ್ಲಿಸಬಹುದು.

Read More

ಮೂಲ್ಕಿ : ಹೊಸ ಅಂಗಣ ಪ್ರಕಾಶನ ಮೂಲ್ಕಿ ಆಯೋಜಿಸುವ ಲೇಖಕ ಹರಿಶ್ಚಂದ್ರ ಪಿ. ಸಾಲಿಯಾನ್‌ ಇವರ “ನುಡಿಮುತ್ತು” ಕೃತಿಲೋಕರ್ಪಣಾ ಸಮಾರಂಭವು ದಿನಾಂಕ 18 ಜೂನ್ 2025ನೇ ಬುಧವಾರ ಸಂಜೆ ಗಂಟೆ 5-00ಕ್ಕೆ ಮೂಲ್ಕಿಯ ಸ್ವಾಗತ್ ಹೊಟೇಲ್ ಸಭಾಂಗಣದಲ್ಲಿ ನಡೆಯಲಿದೆ. ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಡಾ. ತಲ್ಲೂರು ಶಿವರಾಮ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ , ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ಇದರ ಮಾಜಿ ರಾಜ್ಯಾಧ್ಯಕ್ಷರಾದ ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು ಕೃತಿ ಲೋಕಾರ್ಪಣೆಗೊಳಿಸಲಿರುವರು. ಮುಖ್ಯ ಅತಿಥಿಗಳಾಗಿ ಮೂಲ್ಕಿಯ ಖ್ಯಾತ ವೈದ್ಯರಾದ ಡಾ. ಅರುಣ್ ಕುಡ್ವ, ಮೂಲ್ಕಿ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀ ನಿಶಾಂತ್ ಶೆಟ್ಟಿ, ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘ ಇದರ ಅಧ್ಯಕ್ಷರಾದ ಶ್ರೀ ವಾಮನ ಕೋಟ್ಯಾನ್, ಶ್ರೀ ನಾರಾಯಣಗುರು ಆಂಗ್ಲ ಮಾಧ್ಯಮ ವಿದ್ಯಾ ಸಂಸ್ಥೆ ಮೂಲ್ಕಿ ಇದರ ಸಂಚಾಲಕರಾದ ಶ್ರೀ ಹರೀಂದ್ರ ಸುವರ್ಣ, ಕಥಾಬಿಂದು ಸಂಸ್ಥೆ ಮಂಗಳೂರು ಇದರ ಮಾಲಿಕರಾದ ಶ್ರೀ ಪಿ. ವಿ.…

Read More

ಮಂಗಳೂರು : ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಆ್ಯಂಡ್ ಕಲ್ಚರಲ್ ಹೆರಿಟೇಜ್ (ಇಂಟಾಕ್)ನ ಮಂಗಳೂರು ಶಾಖೆ, ಆರ್ಟ್ ಕೆನರಾ ಟ್ರಸ್ಟ್ ಮತ್ತು ಚಿರಂತನ ಚಾರಿಟೇಬಲ್ ಟ್ರಸ್ಟ್ ಇದರ ಸಹಯೋಗದೊಂದಿಗೆ ಪ್ರಸ್ತುತ ಪಡಿಸುವ ಕರ್ನಾಟಕದ ಸಂಗೀತ ಪರಂಪರೆ ಸರಣಿ 7ರಲ್ಲಿ ವಿಶ್ವ ಸಂಗೀತ ದಿನದಂದು ಬೈಠಕ್ @ ಕೊಡಿಯಾಲ್‌ಗುತ್ತು ಸಂಗೀತ ಕಛೇರಿಯನ್ನು ದಿನಾಂಕ 21 ಜೂನ್ 2025ರಂದು ಸಂಜೆ 5-30 ಗಂಟೆಗೆ ಕೊಡಿಯಾಲ್‌ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಹಿಂದೂಸ್ತಾನಿ ಗಾಯಕಿ ವಿಭಾ ಎಸ್. ನಾಯಕ್ ಇವರ ಹಾಡುಗಾರಿಕೆಗೆ ರಾಜೇಶ್ ಭಾಗವತ್ ತಬಲಾ ಹಾಗೂ ಕುಮಾರಿ ಮೇಧಾ ಭಟ್ ಇವರು ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ.

Read More

ಸ್ವಾತಂತ್ರ್ಯಪ್ರಿಯರ ಮನಸ್ಸನ್ನು ಪ್ರಚೋದಿಸುವ ಕಮ್ಯೂನಿಸ್ಟ್ ಪಕ್ಷವು ನಡೆಸಿದ ಲೋಕೋತ್ತರ ಹೋರಾಟಗಳಲ್ಲಿ ಕಯ್ಯೂರು ರೈತ ಹೋರಾಟವೂ ಒಂದು. ಅಲ್ಲಿನ ರೈತಾಪಿ ಸಂಗಾತಿಗಳಾದ ಮಠತ್ತಿಲ್ ಅಪ್ಪು, ಕೋಯಿತ್ತಾಟಿಲ್ ಚಿರುಕಂಡನ್, ಪೊಡೋರ ಕುಂಞಂಬು ನಾಯರ್ ಮತ್ತು ಅಬೂಬಕ್ಕರನ್ನು ಬ್ರಿಟಿಷ್ ಸಾಮ್ರಾಜ್ಯಶಾಹಿ ಆಡಳಿತವು 1943 ಮಾರ್ಚ್ 29ರಂದು ಗಲ್ಲಿಗೇರಿಸಿತು. ಕಯ್ಯೂರು ತೇಜಸ್ವಿನಿ ನದಿಯ ತೀರವು ಈ ಕ್ರಾಂತಿಕಾರಿಗಳ ಸಮರ ಗೀತೆಯನ್ನು ಇಂದಿಗೂ ಹಾಡುತ್ತಿದೆ. ಕಯ್ಯೂರಿನ ಚರಿತ್ರೆಯು ಕಾದಂಬರಿಯಾಗಿ, ಕ್ರಾಂತಿಗೀತೆಯಾಗಿ, ಚಲನಚಿತ್ರವಾಗಿ ಜನರ ನಡುವೆ ಹರಿದಾಡುತ್ತಿದೆ. ಭಾರತ ದೇಶದ ಸ್ವಾತಂತ್ರ್ಯ ಹೋರಾಟದ ಪುಟಗಳಲ್ಲಿ ಕಯ್ಯೂರು ಹೋರಾಟಕ್ಕೆ ದೊರಕಬೇಕಾದ ಸ್ಥಾನ ದೊಡ್ಡದು. ಸ್ವಾತಂತ್ರ್ಯಕ್ಕಾಗಿ ನಡೆಸಿದ ಕಯ್ಯೂರು ಸಮರವೇ ಈ ಕಾದಂಬರಿಯ ವಸ್ತು. ಈ ಹೋರಾಟಕ್ಕೆ ಸಮೀಪದ ನಿರೀಕ್ಷಕರಾಗಿದ್ದ ಕನ್ನಡ ಪ್ರಗತಿಶೀಲ ಲೇಖಕ ನಿರಂಜನರು ಬ್ರಿಟಿಷ್ ಏಕಾಧಿಪತ್ಯದ ಕರಾಳ ವ್ಯವಸ್ಥೆಯ ವಿರುದ್ಧ ದಂಗೆಯೆದ್ದ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ನಾಲ್ವರು ಹೋರಾಟಗಾರರ ವೀರಗಾಥೆಯನ್ನು ಸರಳ ಭಾಷೆಯಲ್ಲಿ, ಓದುಗರ ಕುತೂಹಲವನ್ನು ಕೆರಳಿಸುವಂತೆ, ದೇಶಪ್ರೇಮ ಹಾಗೂ ಕ್ರಾಂತಿಯನ್ನು ಬಡಿದೆಬ್ಬಿಸುವಂತೆ ವಿವರಿಸಿದ್ದಾರೆ. ಈ ಕಾದಂಬರಿಯ ಮುಖ್ಯ…

Read More