Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಕರಾವಳಿ ಲೇಖಕಿಯರ – ವಾಚಕಿಯರ ಸಂಘದ ಸಹಯೋಗದಲ್ಲಿ ಹಿರಿಯಡಕದ ಶ್ರೀಮತಿ ಯಶೋಧಾ ಜೆನ್ನಿ ಸ್ಮೃತಿ ಸಂಚಯ ಪ್ರಾಯೋಜಿತ ‘ಸಣ್ಣ ಕಥಾಸಂಕಲನ ಸ್ಪರ್ಧೆ-2024’ರ ಕೃತಿಯ ಬಹುಮಾನಕ್ಕೆ ಗೀತಾ ಕುಂದಾಪುರ ಅವರ ‘ಪಾಂಚಾಲಿಯಾಗಲಾರೆ’ ಕಥಾಸಂಕಲನ ಆಯ್ಕೆಯಾಗಿದೆ. ಅಲ್ಲದೆ ಇಬ್ಬರು ಉದಯೋನ್ಮುಖ ಕಥೆಗಾರ್ತಿಯರಾದ ಶೋಭಾ ದಿನೇಶ್ ಉಡುಪಿ, ದೀಪ್ತಿ ಬಿ. ಮಂಗಳೂರು ಇವರು ಪ್ರೋತ್ಸಾಹಕ ಬಹುಮಾನ ಪಡೆಯಲಿದ್ದಾರೆ. ಸಂದೀಪ ಸಾಹಿತ್ಯ ಪ್ರಕಾಶನದಿಂದ ಪ್ರಾಯೋಜಿತ ಏಕಾಂಕ ನಾಟಕ ಹಸ್ತಾಕ್ಷರ ಪ್ರತಿ ಸ್ಪರ್ಧೆಗೆ ಈ ಬಾರಿ ಅಕ್ಷತಾ ರಾಜ್ ಪೆರ್ಲ ಇವರ ‘ರಾಜೀ ಪ್ರಸಂಗ’ ಸಾಮಾಜಿಕ ನಾಟಕ ಆಯ್ಕೆಯಾಗಿದೆ. ವಾರ್ಷಿಕ ಪ್ರಶಸ್ತಿ, ಬಹುಮಾನ ವಿತರಣಾ ಕಾರ್ಯಕ್ರಮ ದಿನಾಂಕ 26 ಏಪ್ರಿಲ್ 2025ರಂದು ಕರಾವಳಿ ಲೇಖಕಿಯರ ವಾಚಕಿಯರ ಸಂಘದ ‘ಸಾಹಿತ್ಯ ಸದನ’ದ ಸಭಾಭವನದಲ್ಲಿ ನಡೆಯಲಿದೆ.
ಕುಮಾರ ಗಂಧರ್ವ ಇವರ ಮೂಲ ಹೆಸರು ಶಿವಪುತ್ರ ಕೊಂಕಾಳಿ ಮಠ. 8 ಏಪ್ರಿಲ್ 1924ರಲ್ಲಿ ಬೆಳಗಾವಿ ಜಿಲ್ಲೆಯ ಸುಳೇಭಾವಿಯಲ್ಲಿ ಜನಿಸಿದರು. ಸ್ವತಃ ತಂದೆ ಸಿದ್ದರಾಮಯ್ಯನವರೇ ಪ್ರಸಿದ್ಧ ಸಂಗೀತಗಾರರಾಗಿದ್ದುದು ಮಗ ಶಿವಪುತ್ರರ ಮೇಲೆ ಗಾಢವಾದ ಪ್ರಭಾವ ಬೀರಿತು. ಇವರದೊಂದು ಸಂಗೀತ ಪರಂಪರೆಯ ಕುಟುಂಬವೆಂದೇ ಹೇಳಬಹುದು. ಸೋದರಮಾವ ಕಲ್ಲಯ್ಯ ಸ್ವಾಮಿ ಅನೇಕ ನಾಟಕ ಕಂಪನಿಗಳಲ್ಲಿ ಗಾಯಕ ನಟ ಹಾಗೂ ಕಲಾವಿದರಾಗಿದ್ದರು. ಇವರು ಕುಮಾರ ಗಂಧರ್ವರರಿಗೆ ನಾಲ್ಕನೇ ವರ್ಷದ ಎಳವೆಯಲ್ಲಿಯೇ ಸಂಗೀತ ದೀಕ್ಷೆಯನ್ನು ನೀಡಿದರು. ಬಹಳ ಅದ್ಭುತವೆಂದರೆ ಕುಮಾರ ಗಂಧರ್ವರು ಐದನೆಯ ವರ್ಷದ ಎಳವೆಯಲ್ಲಿಯೇ ದಾವಣಗೆರೆಯಲ್ಲಿ ಪ್ರಥಮ ಕಚೇರಿ ನೀಡಿದರು. ಇದೊಂದು ವಿಶೇಷ ದಾಖಲೆ. ಆರು ವರ್ಷದ ಬಾಲಕನಿರುವಾಗ ಹಾಡಿದ ಸಂಗೀತವನ್ನು ಕೇಳಿ ಗುಲ್ಬರ್ಗ ಜಿಲ್ಲೆಯ ಗುರು ಕಲ್ಮಠದ ಶಾಂತವೀರ ಸ್ವಾಮಿಗಳು “ಓಹೋ ಇವನು ಕುಮಾರ ಗಂಧರ್ವ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಲ್ಲಿಂದ ಆ ಹೆಸರೇ ಇವರಿಗೆ ಶಾಶ್ವತವಾಯಿತು. ಮಗನ ಪ್ರತಿಭೆಯೊಂದಿಗೆ ತಂದೆ ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಗದಗ ಹೀಗೆ ಕಾರ್ಯಕ್ರಮ ನೀಡುತ್ತಾ, ಕಲ್ಕತ್ತಾ, ಆಗ್ರಾ,…
ಶಿರ್ವ: ಕಟಪಾಡಿ ವನಸುಮ ವೇದಿಕೆ ಹಾಗೂ ವನಸುಮ ಟ್ರಸ್ಟ್ ಇವರು ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಆಯೋಜಿಸಿದ ‘ವನಸುಮ ರಂಗೋತ್ಸವ’ದ ಉದ್ಘಾಟನಾ ಸಮಾರಂಭವು ದಿನಾಂಕ 06 ಏಪ್ರಿಲ್ 2025ರಂದು ಕಟಪಾಡಿಯ ಎಸ್. ವಿ. ಎಸ್. ಹೈಸ್ಕೂಲ್ ಇದರ ಒಳಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿ “ನಾಟಕಗಳು ಎಲ್ಲಾ ಕಾಲಕ್ಕೂ ಪ್ರಸ್ತುತವಾಗುವ ಗುಣ ಹೊಂದಿರುತ್ತವೆ. ಒಂದು ನಾಟಕವನ್ನು ಮುರಿದುಕಟ್ಟುವ ಮೂಲಕ ಪ್ರದರ್ಶನದಲ್ಲಿ ಸಮಕಾಲೀನತೆಯನ್ನು ತರಲು ಸಾಧ್ಯವಿದೆ. ಇತರ ಪ್ರದರ್ಶನ ಕಲೆಗಳಿಗೆ ಹೋಲಿಸಿದರೆ ನಾಟಕಗಳು ಸಮಾಜದ ಮೇಲೆ ಪರಿಣಾಮಕಾರಿ ಪ್ರಭಾವವನ್ನು ಬೀರುತ್ತವೆ” ಎಂದು ಹೇಳಿದರು. ಚಲನಚಿತ್ರ ನಟ ಪ್ರಕಾಶ್ ತುಮಿನಾಡು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯದರ್ಶಿ ವಿನಯ್ ಮುಳ್ಳೂರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ರಂಗನಟ ಹಾಗೂ ನಿರ್ದೇಶಕರಾದ ಪ್ರದೀಪ್ ಚಂದ್ರ ಕುತ್ಪಾಡಿ ಇವರಿಗೆ ‘ವನಸುಮ ರಂಗಸಮ್ಮಾನ್’ ಪ್ರದಾನ ಮಾಡಲಾಯಿತು. ಶ್ರೀಕಾಂತ್ ಬಿ. ಆಚಾರ್ಯ ಕಾಪು ಹಾಗೂ ಪಲ್ಲವಿ ಕೊಡಗು ಇವರನ್ನು ಅಭಿನಂದಿಸಲಾಯಿತು. ಸಮಾರಂಭದಲ್ಲಿ ಬಾಸುಮ…
ಮಂಗಳೂರು : ಭರತಾಂಜಲಿ ನೃತ್ಯ ಸಂಸ್ಥೆಯವರು ಆಯೋಜಿಸಿದ ‘ಕಿಂಕಿಣಿ ತ್ರಿoಶತ್’ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ತಾ ಥೈ ಹ ಹ ವಿಶೇಷ ಕಾರ್ಯಕ್ರಮವು ದಿನಾಂಕ ಸೈಂಟ್ ಅಲೋಶಿಯಸ್ ಕಾಲೇಜಿನ ಎಲ್. ಸಿ. ಆರ್. ಐ. ಆಡಿಟೋರಿಯಂ ಇಲ್ಲಿ ದಿನಾಂಕ 05 ಏಪ್ರಿಲ್ 2025ರಂದು ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾತನಾಡಿ “ನಮ್ಮ ಪರಂಪರೆಯ ಶಾಸ್ತ್ರೀಯ ಕಲೆಗಳಲ್ಲಿ ಭರತನಾಟ್ಯ ಕಲೆಗೆ ಪ್ರಾಶಸ್ತ್ಯವಿದೆ. ಈ ಕಲೆಯ ಕಲಿಯುಕೆಯಿಂದ ವಿಶೇಷ ಅನುಭೂತಿಯನ್ನು ಪಡೆಯಲು ಸಾಧ್ಯವಾಗಬಹುದು ಎಂಬ ನಂಬಿಕೆಯೊಂದಿಗೆ ಈ ಕಲೆಗಳನ್ನು ಅತ್ಯಂತ ಶಾಸ್ತ್ರೀಯವಾಗಿ ಹಾಗೂ ವೈಜ್ಞಾನಿಕವಾಗಿ ಬೆಳೆಸಿಕೊಂಡು ಬಂದಿದ್ದಾರೆ. ಆತ್ಮ ಸಂಶೋಧನೆ ಕೆಲಸ ಸಹ ಈ ಕಲಾಪ್ರಕಾರದಲ್ಲಿ ಆಗುತ್ತದೆ. ಇಂದಿನ ವಿದ್ಯಾಮಾನದಲ್ಲಿ ಶಾಲೆಗಳಲ್ಲಿ ಮನೆಗಳಲ್ಲಿ ಸಿಗದಂತಹ ಸಂಸ್ಕಾರಗಳನ್ನು ಈ ಕಲೆಯು ನೀಡುತ್ತದೆ. ಹಾಗೆ ಈ ಕಲಾಪ್ರಕಾರಗಳನ್ನು ಕಲಿಸುವ ಗುರುಗಳು ಮುಂದಿನ ತಲೆಮಾರಿಗೆ ಹಸ್ತಾಂತರದ ಕೆಲಸ ಮಾಡ್ತಾ ಬಂದಿದ್ದಾರೆ. ಆತ್ಮವನ್ನು ಪರಮಾತ್ಮನೊಂದಿಗೆ ಸಮೀಕರಣ ಗೊಳಿಸುವಂತಹ ಒಂದು ವಿಶೇಷ ಅನುಭೂತಿಯನ್ನು ಈ ಕಲಾ…
ಮೈಸೂರು : ವೃತ್ತಿ ರಂಗಭೂಮಿಯ ಹಿರಿಯ ನಟಿಯರಾದ ರಾಧಾ–ರುಕ್ಕಿಣಿ ಸಹೋದರಿಯರನ್ನು ಇಲ್ಲಿನ ನಟನ ರಂಗಶಾಲೆಯಿಂದ ನೀಡುವ ‘ನಟನ ಪುರಸ್ಕಾರ-2025’ಕ್ಕೆ ಆಯ್ಕೆ ಮಾಡಲಾಗಿದೆ. ‘ನಟನ’ದ ಸಂಸ್ಥಾಪಕ ಅಧ್ಯಕ್ಷ ಎನ್. ಸುಬ್ರಹ್ಮಣ್ಯಂ ನೆನಪಿನಲ್ಲಿ ನೀಡುವ ಪುರಸ್ಕಾರ ಇದಾಗಿದೆ. ಈ ಕಲಾವಿದೆಯರು ರಂಗಭೂಮಿಗೆ ಅತಿ ದೀರ್ಘ ಅವಧಿಯಿಂದ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಆಯ್ಕೆ ಮಾಡಲಾಗಿದ್ದು, ಪ್ರಶಸ್ತಿಯು ರೂ. ಹತ್ತು ಸಾವಿರ, ಸ್ಮರಣಿಕೆ ಹಾಗೂ ಅಭಿನಂದನಾಪತ್ರ ಒಳಗೊಂಡಿದೆ. ದಿನಾಂಕ 11 ಏಪ್ರಿಲ್ 2025ರಂದು ದಟ್ಟಗಳ್ಳಿಯ ಸುಪ್ರೀಂ ಪಬ್ಲಿಕ್ ಶಾಲೆಯ ಆವರಣದಲ್ಲಿ ನಡೆಯಲಿರುವ ‘ರಜಾ-ಮಜಾ’ ಶಿಬಿರದ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು ಎಂದು ರಂಗಕರ್ಮಿ ಮಂಡ್ಯ ರಮೇಶ್ ತಿಳಿಸಿದ್ದಾರೆ. 1948ರಲ್ಲಿ ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ ಸಂಗೀತ ವಿದ್ವಾನ್ ಹನುಮಂತಾಚಾರ್- ಗೌರಮ್ಮ ದಂಪತಿಗೆ ಅವಳಿ ಮಕ್ಕಳಾಗಿ ರಾಧಾ – ರುಕ್ಕಿಣಿ ಜನಿಸಿದರು. 1961ರಲ್ಲಿ ಕೆ.ಆರ್. ನಗರ ಕ್ಯಾಂಪ್ನಲ್ಲಿ ಗುಬ್ಬಿ ವೀರಣ್ಣನವರ ನಾಟಕ ಕಂಪನಿಗೆ ಚಿಕ್ಕ ವಯಸ್ಸಿನಲ್ಲೇ ರಂಗಪ್ರವೇಶ ಮಾಡಿದರು. ‘ಲವ-ಕುಶ’ ನಾಟಕದಲ್ಲಿ ಲವಕುಶ, ‘ಕೃಷ್ಣ ಲೀಲಾ’ದಲ್ಲಿ ಕೃಷ್ಣ-ಬಲರಾಮರಾಗಿ, ‘ಗಾಜಿನ ಮನೆ’…
ಉಪ್ಪಳ : ಐಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವತಿಯಿಂದ ನಡೆಯುವ ವಿಷು ಜಾತ್ರಾಮಹೋತ್ಸವದ ಪ್ರಯುಕ್ತ ‘ಸಾಹಿತ್ಯಗಾನ ನೃತ್ಯ ವೈಭವ’ ಮತ್ತು ‘ಗಾನಾರ್ಪಣಂ’ ಕಾರ್ಯಕ್ರಮವನ್ನು ದಿನಾಂಕ 13 ಮತ್ತು 14 ಏಪ್ರಿಲ್ 2025ರಂದು ಶ್ರೀ ದುರ್ಗಾಪರಮೇಶ್ವರೀ ಕಲಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 13 ಏಪ್ರಿಲ್ 2025ರಂದು ಡಾ. ವಾಣಿಶ್ರೀ ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯವರಿಂದ ‘ಸಾಹಿತ್ಯಗಾನ ನೃತ್ಯ ವೈಭವ’ ಹಾಗೂ ದಿನಾಂಕ 14 ಏಪ್ರಿಲ್ 2025ರಂದು ಆಕಾಶವಾಣಿ ಕಲಾವಿದೆ ಸಂಗೀತ ಕಲಾಸಿರಿ ಶ್ರೀಮತಿ ಮಂಜುಳಾ ಜಿ. ರಾವ್ ಇರಾ ಇವರಿಂದ ‘ಗಾನಾರ್ಪಣಂ’ ಸಂಗೀತ ಕಾರ್ಯಕ್ರಮ ಪ್ರಸ್ತುತಗೊಳ್ಳಲಿದೆ.
ಮಂಗಳೂರು: ಕರಾವಳಿಯ ಅದ್ಭುತ ಪ್ರತಿಭೆ, ಖಳನಾಯಕ, ಸ್ತ್ರೀ ವೇಷ, ಹಾಸ್ಯ ಹೀಗೆ ಹದಿನೆಂಟಕ್ಕೂ ಅಧಿಕ ನಾಟಕಗಳಲ್ಲಿ ವಿವಿಧ ಪಾತ್ರಕ್ಕೆ ಬಣ್ಣ ಹಚ್ಚಿದ್ದ ತುಳು ರಂಗಭೂಮಿಯ ಹೆಸರಾಂತ ಕಲಾವಿದ ಸುರೇಶ್ ವಿಟ್ಲ ದಿನಾಂಕ 06 ಏಪ್ರಿಲ್ 2025ರಂದು ನಿಧನರಾಗಿದ್ದಾರೆ. ಇವರು ಮನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಇದ್ದಕಿದ್ದಂತೆ ಕುಸಿದು ಬಿದ್ದಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಪ್ರಯೋಜನವಾಗದೆ ಅಸುನೀಗಿದ್ದಾರೆ. ಇವರು ಪತ್ನಿ ಹಾಗೂ ಓರ್ವ ಪುತ್ರ ನನ್ನು ಅಗಲಿದ್ದಾರೆ. ಇವರು ಮಂಜೇಶ್ವರದ ಶಾರದಾ ಆರ್ಟ್ಸ್ ಇಲ್ಲಿ ಸುಮಾರು ಇಪ್ಪತ್ತು ವರ್ಷಗಳಿಂದ ಕೆಲಸ ನಿರ್ವಹಿಸಿಕೊಂಡಿದ್ದರು. ಸುರೇಶ್ ವಿಟ್ಲ ಇವರ ಸಾವಿಗೆ ಕಲಾಭಿಮಾನಿಗಳು, ಮನೆಯವರು, ಸಹ ಕಲಾವಿದರು ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.
ಬ್ರಹ್ಮಾವರ : ಮಂದಾರ (ರಿ.) ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ಬೈಕಾಡಿ ಬ್ರಹ್ಮಾವರ ಇವರ ನಾಲ್ಕನೇ ವರ್ಷದ ರಂಗೋತ್ಸವದ ಸಮಾರೋಪ ಸಮಾರಂಭವು ದಿನಾಂಕ 06 ಏಪ್ರಿಲ್ 2025ರಂದು ಬ್ರಹ್ಮಾವರದ ನಿರ್ಮಲ ಆಂಗ್ಲ ಮಾಧ್ಯಮ ಶಾಲಾ ವೇದಿಕೆ ಹೋಲಿ ಫ್ಯಾಮಿಲಿ ಚರ್ಚ್ ವಠಾರದಲ್ಲಿ ನಡೆಯಿತು. ರಂಗೋತ್ಸವದ ಎರಡನೇ ದಿನ ವಿಶೇಷವಾಗಿ ಮಕ್ಕಳಿಗಾಗಿ ಮೀಸಲಿಟ್ಟಿದ್ದು, ಎಸ್.ಎಮ್.ಎಸ್. ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಂದ ಆಶಯಗೀತೆ ಕಾರ್ಯಕ್ರಮ ನಡೆದು ಬಳಿಕ ‘ಧಮನಿ’ ಟ್ರಸ್ಟ್ (ರಿ.) ತಂಡದ ಮಕ್ಕಳ ಅಭಿನಯದ ರಂಜಿತ್ ಶೆಟ್ಟಿ ಕುಕ್ಕುಡೆ ನಿರ್ದೇಶನದ ‘ಸೂರ್ಯ ಬಂದ’ ನಾಟಕ ಪ್ರದರ್ಶನಗೊಂಡಿತು. ‘ರಂಗೋತ್ಸವ’ದ ಮೂರನೇ ದಿನದ ಅತಿಥಿಯಾಗಿ ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಲೇಖಕ ಹಾಗೂ ಕವಿ ಶ್ರೀ ಕಿಶೋರ್ ಗೊನ್ಸಾಲ್ವೆಸ್ ಮುಖ್ಯ ಅತಿಥಿಯಾಗಿ ಮಾತನಾಡಿ “ರಂಗಭೂಮಿ ಗುರಿತಪ್ಪಿಸುವ ವಿಚಲನೆ ಅಲ್ಲ. ಅದೊಂದು ಕನ್ನಡಿ, ಮುಖಸ್ಥುತಿ ಮಾಡದ, ತಿರುಚಿಸದ, ಸುಳ್ಳು ಹೇಳದ ದಾಕ್ಷಿಣ್ಯವಿಲ್ಲದ ಕನ್ನಡಿ, ಇದ್ದ ಹಾಗೇ ಪ್ರತಿಬಿಂಬಿಸುತ್ತದೆ” ಎಂದು ಅಭಿಪ್ರಾಯಪಟ್ಟರು. ಸಭಾ ಕಾರ್ಯಕ್ರಮದ ಬಳಿಕ ಮಂದಾರ…
ಮಂಗಳೂರು : ದ. ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಎಸ್. ಡಿ. ಎಂ. ಕಾನೂನು ಮಹಾವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದಲ್ಲಿ ‘ನೀವೂ ಸಾಹಿತಿಗಳಾಗಬೇಕೆ?’ ವಿಶೇಷ ಉಪನ್ಯಾಸ ಕಾರ್ಯಕ್ರಮ ದಿನಾಂಕ 04 ಏಪ್ರಿಲ್ 2025ರ ಶುಕ್ರವಾರದಂದು ನಡೆಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿಲು ಆಗಮಿಸಿದ ಸಾಹಿತಿ ಹಾಗೂ ವಿಶ್ರಾಂತ ಪ್ರಾಧ್ಯಾಪಿಕೆ ಡಾ. ಮೀನಾಕ್ಷಿ ರಾಮಚಂದ್ರ ಮಾತನಾಡಿ “ಗೀಚಿದ್ದೆಲ್ಲವೂ ಸಾಹಿತ್ಯವಾಗಲಾರದು. ಅನುಭವಗಳು ಮೂರ್ತ ರೂಪಗೊಂಡಾಗ ಸಾಹಿತ್ಯ ರಚನೆಯಗುತ್ತದೆ. ಸಾಹಿತಿಯಾಗಲು ಸಂವೇದನೆ ಅತೀ ಮುಖ್ಯ. ಹಾಗೂ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು” ಎಂದರು. ಕ. ಸಾ. ಪ. ಜಿಲ್ಲಾಧ್ಯಕ್ಷ ಡಾ. ಎಂ. ಪಿ. ಶ್ರೀನಾಥ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಹ ಸಂಯೋಜಕರಾದ ಡಾ. ಡಿಂಪಲ್ ಮೇಸ್ತ, ಅಪೂರ್ವ ಶೆಟ್ಟಿ, ವಿದ್ಯಾರ್ಥಿ ಸಂಯೋಜಕ ತೇಜಸ್ ಗೋಪಾಲ ಪೂಜಾರಿ ಉಪಸ್ಥಿತರಿದ್ದರು. ದ. ಕ. ಜಿಲ್ಲಾ ಕ. ಸಾ. ಪ. ಸಂಘಟನಾ ಕಾಯದರ್ಶಿ ಹಾಗೂ ಕಾರ್ಯಕ್ರಮ ಸಂಯೋಜಕ ಪುಷ್ಪರಾಜ್ ಕೆ. ಸ್ವಾಗತಿಸಿ, ಕಾನೂನು ವಿದ್ಯಾರ್ಥಿಗಳಾದ ಸ್ವಾತಿ ಶೆಟ್ಟಿ…
ಉಡುಪಿ : ಖ್ಯಾತ ವಿಮರ್ಶಕ ಪ್ರೊ. ವಿ.ಎಂ. ಇನಾಂದಾರ್ ಇವರ ನೆನಪಿನಲ್ಲಿ ನೀಡುವ ‘ಇನಾಂದಾರ್ ಪ್ರಶಸ್ತಿ’ಗೆ ಖ್ಯಾತ ಕವಿ, ನಾಟಕಕಾರ ಹಾಗೂ ರಂಗನಿರ್ದೇಶಕರಾದ ರಘುನಂದನ ಅವರ ‘ತುಯ್ತವೆಲ್ಲ ನವ್ಯದತ್ತ, ಅಂದತ್ತರಉಯ್ಯಾಲೆ ಮತ್ತು ಅದರ ಸುತ್ತ’ ವಿಮರ್ಶಾ ಕೃತಿಯು 2024ರ ಸಾಲಿಗೆ ಆಯ್ಕೆಯಾಗಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ತಿಳಿಸಿದ್ದಾರೆ. ಪ್ರಶಸ್ತಿಯನ್ನು ದಿನಾಂಕ 23 ಏಪ್ರಿಲ್ 2025ರಂದು ನಡೆಯುವ ಎಂ.ಜಿ.ಎಂ. ಕಾಲೇಜಿನ ವಾರ್ಷಿಕ ಮುದ್ದಣ ಸಾಹಿತ್ಯೋತ್ಸವದ ಸಂದರ್ಭದಲ್ಲಿ ನೀಡಿ ಗೌರವಿಸಲಾಗುತ್ತದೆ. ರಘುನಂದನ ಅವರು ವೃತ್ತಿ ನಿರತ ರಂಗ ನಿರ್ದೇಶಕರು, ರಂಗ ಕಲೆಯ ಅಧ್ಯಾಪಕರು, ಕವಿ ಹಾಗೂ ನಾಟಕಕಾರರು. ಅವರು ಮೈಸೂರಿನ ರಂಗಾಯಣ ಮತ್ತು ನೀನಾಸಂ ಸಂಸ್ಥೆಯಲ್ಲಿ ತೊಡಗಿಸಿಕೊಂಡವರು. ಇವರ ಪದ್ಯಗಳು, ಗದ್ಯಲೇಖನಗಳು ನಾಡಿನ ಹಲವಾರು ಪತ್ರಿಕೆಗಳಲ್ಲಿ, ಅಂತರ್ಜಾಲತಾಣಗಳಲ್ಲಿ ಪ್ರಕಟವಾಗಿವೆ. ಇವರ ಕವನ ಸಂಕಲನ ‘ನಾನು ಸತ್ತಮೇಲೆ’ ಈಗಾಗಲೇ ಪ್ರಕಟವಾಗಿದೆ. ಇವರಿಗೆ ಪು.ತಿ.ನ.ಕಾವ್ಯ-ನಾಟಕ ಪುರಸ್ಕಾರ ಸಂದಿದೆ. ಅಲ್ಲದೆ ನೀನಾಸಂ ಪ್ರತಿಷ್ಠಾನ ನೀಡುವ ಬಿ.ವಿ.ಕಾರಂತ ಫೆಲೋಶಿಪ್…