Author: roovari

ಕಾಸರಗೋಡು : ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘ (ರಿ.) ಇದರ ವತಿಯಿಂದ ಕೀರಿಕ್ಕಾಡು ವನಮಾಲ ಕೇಶವ ಭಟ್ಟ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ದಿನಾಂಕ 26 ಆಗಸ್ಟ್ 2024ರಂದು ಸಂಜೆ 6-00 ಗಂಟೆಗೆ ಸಂಘದ ಕೀರಿಕ್ಕಾಡು ಮಾಸ್ತರ್ ಸ್ಮಾರಕ ಸಭಾಭವನದಲ್ಲಿ ನಡೆಯಲಿದೆ. ಸಂಘದ ನಿಕಟ ಪೂರ್ವ ಅಧ್ಯಕ್ಷರಾದ ಕೀರಿಕ್ಕಾಡು ವನಮಾಲ ಕೇಶವ ಭಟ್ಟ ಸಂಸ್ಮರಣೆಯನ್ನು ಶ್ರೀ ನಾರಾಯಣ ದೇಲಂಪಾಡಿ ಇವರು ನಡೆಸಿಕೊಡಲಿದ್ದು, ಸುಳ್ಯದ ಶ್ರೀ ವೆಂಕಟ ರಾಮ ಭಟ್ಟ ಇವರಿಗೆ ‘ಕೀರಿಕ್ಕಾಡು ವನಮಾಲ ಕೇಶವ ಸಾಧನಾ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಇದೇ ಸಂದರ್ಭದಲ್ಲಿ ‘ಶ್ರೀ ಕೃಷ್ಣ ಜನನ – ರಾಜಸೂಯ’ ಎಂಬ ಪ್ರಸಂಗದ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.

Read More

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪ್ರೊ. ಜಿ. ವೆಂಕಟಸುಬ್ಬಯ್ಯನವರ 112ನೆಯ ಜನ್ಮದಿನೋತ್ಸವ ಕಾರ್ಯಕ್ರಮವು ದಿನಾಂಕ 23 ಆಗಸ್ಟ್ 2024ರಂದು ಜರಗಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು “ಕಟ್ಟಡ ಭವ್ಯವಾಗಿ ನಿಂತ ನಂತರ ಕೆಳಗಡೆ ಇರುವ ಭದ್ರ ಅಡಿಪಾಯ ಮರೆಯಾಗಿರುತ್ತದೆ. ಆದರೆ ಕಟ್ಟಡ ಸುಭದ್ರವಾಗಿ ನಿಲ್ಲಲು ಅಡಿಪಾಯವೇ ಮುಖ್ಯವೆನ್ನುವುದನ್ನು ನಾವು ಮರೆಯಬಾರದು. ಅದೇ ರೀತಿಯಲ್ಲಿ ಪ್ರೊ. ಜಿ. ವೆಂಕಟಸುಬ್ಬಯ್ಯನವರು ಕನ್ನಡ ಸಾಹಿತ್ಯ ಪರಿಷತ್ತಿನ ಅಡಿಪಾಯವನ್ನು ಭದ್ರಗೊಳಿಸಿದವರು. ಹೀಗಾಗಿ ಅವರ ಸ್ಮರಣೆಗೆ ವಿಶೇಷ ಮಹತ್ವವಿದೆ. ಕನ್ನಡ ಸಾಹಿತ್ಯ ಪರಿಷತ್ ಜೊತೆಗಿನ ವೆಂಕಟಸುಬ್ಬಯ್ಯನವರ ಒಡನಾಟಕ್ಕೆ ಸುದೀರ್ಘ ಪರಂಪರೆ ಇದೆ. ಮೈಸೂರು ಪ್ರಾಂತ್ಯಕ್ಕೆ ಹೆಚ್ಚು ಸೀಮಿತವಾಗಿದ್ದ ಪರಿಷತ್ತಿಗೆ ಅಖಿಲ ಕರ್ನಾಟಕದ ಸ್ವರೂಪ ನೀಡಿದ್ದೂ ಕೂಡ ಜಿ.ವಿ.ಯವರ ಹೆಗ್ಗಳಿಕೆ.   ಜಿ.ವಿಯವರಿಗೆ ಎಲ್ಲಾ ರೀತಿಯ ಗೌರವಗಳು ಬಹಳ ವಿಳಂಬವಾಗಿಯೇ ಬಂದರೂ ಇದರ ಕುರಿತು ಎಂದಿಗೂ ಅವರು ಆಕ್ಷೇಪ ವ್ಯಕ್ತಪಡಿಸಲಿಲ್ಲ. ಕನ್ನಡದಲ್ಲಿ ನಿಘಂಟು ಎನ್ನುವ ಪದ ಕೇಳಿದ ಕೂಡಲೇ ನೆನಪಾಗುವುದೇ…

Read More

ಬೆಂಗಳೂರು : ಪ್ರಜಾಕವಿ, ಪ್ರಜಾಗಾಯಕ ಗದ್ದರ್ ಪ್ರಥಮ ಪರಿನಿಬ್ಬಾಣ ಕಾರ್ಯಕ್ರಮವನ್ನು ದಿನಾಂಕ 26 ಆಗಸ್ಟ್ 2024ರಂದು ಸಂಜೆ 4-00 ಗಂಟೆಗೆ ಬೆಂಗಳೂರಿನ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಸಾಹಿತಿ ಡಾ. ಎಲ್. ಹನುಮಂತಯ್ಯ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಜನಪರ ಗಾಯಕರಾದ ರಾಯ ಚೂರಿನ ಶ್ರೀ ಅಂಬಣ್ಣ ಅರೋಲಿಕರ್ ಆಶಯ ನುಡಿಗಳನ್ನಾಡಲಿದ್ದಾರೆ. ಹಿರಿಯ ದಲಿತ ಹೋರಾಟಗಾರರಾದ ಶ್ರೀ ಎನ್. ವೆಂಕಟೇಶ್ ಇವರು ಪರಿನಿಬ್ಬಾಣದ ಚಾಲನೆ ಮಾಡಲಿದ್ದು, ಸಂಸ್ಕೃತಿ ಚಿಂತಕರಾದ ಕೋಲಾರದ ಶ್ರೀ ಕೋಟಿಗಾನಹಳ್ಳಿ ರಾಮಯ್ಯ ಇವರು ನುಡಿಯ ಗುಡಿಗಾರ ಗದ್ದರ್ ಗೆ ನುಡಿ ನಮನ ಸಲ್ಲಿಸಲಿರುವರು. ಸಂಸ್ಕೃತಿ ಚಿಂತಕರಾದ ಬೆಂಗಳೂರಿನ ಡಾ. ಬಂಜಗೆರೆ ಜಯಪ್ರಕಾಶ್ ಇವರು ‘ಗದ್ದರ್ ಹೋರಾಟದ ಬದುಕು ಬೌದ್ಧತ್ವದೆಡೆಗೆ ಪಯಣ’ ಎಂಬ ವಿಷಯ ಬಗ್ಗೆ ವಿಚಾರ ಮಂಡನೆ ಮಾಡಲಿದ್ದಾರೆ.

Read More

ಮಂಗಳೂರು :  ಸಂಸ್ಕೃತ ಭಾರತೀ ಮಂಗಳೂರು ಇದರ ವತಿಯಿಂದ ಹತ್ತು ದಿನಗಳವರೆಗೆ ಉರ್ವ ಮಾರಿಗುಡಿ ದೇವಾಲಯದ ಆವರಣದಲ್ಲಿ ನಡೆದ ಉಚಿತ ಸಂಸ್ಕೃತ ಸಂಭಾಷಣಾ ಶಿಬಿರದ ಸಮಾರೋಪ ಸಮಾರಂಭವು ದಿನಾಂಕ 20 ಆಗಸ್ಟ್ 2024ರಂದು ನಡೆಯಿತು. ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಶಾರದಾ ಪದವಿ ಪೂರ್ವ ಕಾಲೇಜಿನ ಸಂಸ್ಕೃತ ಪ್ರಾಧ್ಯಾಪಕ ರಮೇಶ್ ಆಚಾರ್ಯ ಮಾತನಾಡಿ “ದೇವ ಭಾಷೆಯೆಂದು ಪರಿಗಣಿಸಲ್ಪಟ್ಟ ಸಂಸ್ಕೃತದ ಮಹತ್ವವನ್ನು ವಿವರಿಸಿ ಅದರ ಕಲಿಕೆ ಹಾಗೂ ಪ್ರಚಾರಕ್ಕೆ ಒತ್ತು ನೀಡಬೇಕು.” ಎಂದು ಕರೆ ನೀಡಿದರು. ಉರ್ವ ಮಾರಿಯಮ್ಮ ದೇವಾಲಯದ ಆಡಳಿತ ಮೊಕ್ತೇಸರರಾದ ಲಕ್ಷ್ಮಣ ಅಮೀನ್ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಆಗಮಿಸಿದ ರಾಧಾಕೃಷ್ಣ ಅಶೋಕನಗರ ಮಾತನಾಡಿದರು. ಮಣ್ಣಗುಡ್ಡೆ ಗುರ್ಜಿ ಸಮಿತಿಯ ಅಧ್ಯಕ್ಷರಾದ ರಮಾನಂದ ಪಾಂಗಾಳ ಪ್ರಸ್ತಾವಿಸಿ, ಶಿಬಿರಾರ್ಥಿ ಗಣೇಶ್ ಶೆಣೈ ನಿರ್ವಹಿಸಿದರು. ಬಳಿಕ ಶಿಬಿರಾರ್ಥಿಗಳಿಂದ ಸಮೂಹ ಸಂಸ್ಕೃತ ಗೀತ ಗಾಯನ ಪ್ರಹಸನದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಶಿಬಿರಾರ್ಥಿಯಾದ ದರ್ಶನ್ ನೀಡಿದ ಶಿಬಿರದ ಅನುಭವ ಕಥಾನಕದೊಂದಿಗೆ ಈ ಶಿಬಿರ ಮುಕ್ತಾಯಗೊಂಡಿತು.…

Read More

ಮಂಡ್ಯ : ರಂಗ ಬಂಡಿ ಮಳವಳ್ಳಿ ಹಮ್ಮಿಕೊಂಡ ಮಳವಳ್ಳಿ ಸುಂದರಮ್ಮ ಸ್ಮರಣಾರ್ಥ ರಂಗೋತ್ಸವದ ಉದ್ಘಾಟನಾ ಸಮಾರಂಭವು 21 ಆಗಸ್ಟ್ 2024ರಂದು ಮಳವಳ್ಳಿಯ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ರಂಗ ಸನ್ಮಾನ ಸ್ವೀಕರಿಸಿದ ರಂಗಭೂಮಿ ಹಾಗೂ ಚಲನಚಿತ್ರ ರಂಗದ ಹಿರಿಯ ನಟಿ ಉಮಾಶ್ರೀ ಮಾತನಾಡಿ “ಪೌರಾಣಿಕ ನಾಟಕಗಳಲ್ಲಿ ಸ್ತ್ರೀ ಪಾತ್ರಗಳನ್ನು ಪುರುಷರೇ ನಿರ್ವಹಿಸುತ್ತಿದ್ದ ಕಾಲಘಟ್ಟದಲ್ಲಿ ಚಂದನವನಕ್ಕೆ ಮೊಟ್ಟಮೊದಲ ಬಾರಿಗೆ ಕಾಲಿಟ್ಟ ಮಳವಳ್ಳಿ ಸುಂದ್ರಮ್ಮ ರಂಗಭೂಮಿ ಕಲೆಯಲ್ಲಿ ಹೊಸ ಇತಿಹಾಸಕ್ಕೆ ನಾಂದಿಯಾಡಿದ ಕಲಾವಿದೆಯಾಗಿದ್ದರು. 1905ರಲ್ಲಿ ಮಳವಳ್ಳಿಯಲ್ಲಿ ಜನಿಸಿದ ಸುಂದ್ರಮ್ಮ ತಮ್ಮ ಪ್ರತಿಭೆಯ ಮೂಲಕ ನಾಟಕ ರಂಗ ಪ್ರವೇಶ ಮಾಡಿದರು. ಉತ್ತರ ಕರ್ನಾಟಕದಲ್ಲಿ ಪ್ರಥಮ ಮಹಿಳಾ ನಾಟಕ ಕಂಪನಿಯನ್ನು ಪ್ರಾರಂಭಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.  ಇವರ ನಾಟಕ ರಂಗದ ಸಾಧನೆಗೆ “ನಾಟ್ಯ ಶಾರದೆ” ಎಂಬ ಬಿರುದು ನೀಡಿ ಸನ್ಮಾನಿಸಲಾಗಿತ್ತು. ಜೊತೆಗೆ ಹಲವು ಕನ್ನಡ ಚಲನಚಿತ್ರಗಳಲ್ಲಿಯೂ ತಮ್ಮಅಭಿನಯದ ಮೂಲಕ ಗಮನಸೆಳೆದಿದ್ದಾರೆ. ಜಾನಪದ, ರಂಗಭೂಮಿ ಕಲೆ ಹಾಗೂ ಕಲಾವಿದರನ್ನು ಉಳಿಸುವ  ಹಾಗೂ ಬೆಳೆಸುವ ಜವಾಬ್ದಾರಿ…

Read More

ಆಂಧ್ರಪ್ರದೇಶ: ಆಂಧ್ರಪ್ರದೇಶದ ಮಂತ್ರಾಲಯದಲ್ಲಿರುವ ಜಗದ್ಗುರು ಶ್ರೀಮದ್ ಮಧ್ವಾಚಾರ್ಯ ಮೂಲ ಮಠ ಸಂಸ್ಥಾನಂ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿ ವತಿಯಿಂದ ‘ನೃತ್ಯೋಹಂ’ ಭರತನಾಟ್ಯ ಕಾರ್ಯಕ್ರಮ 19 ಆಗಸ್ಟ್ 2024ರಂದು ನಡೆಯಿತು. ಶ್ರೀ ರಾಘವೇಂದ್ರ ತೀರ್ಥ ಗುರು ಸಾರ್ವಭೌಮರ 353ನೇ ಆರಾಧನಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಕಲಾ ಅಕಾಡೆಮಿ ಗುರು ವಿದುಷಿ ಶಾಲಿನಿ ಆತ್ಮಭೂಷಣ್ ಮಾರ್ಗದರ್ಶನದಲ್ಲಿ ನೃತ್ಯ ತಂಡದ ಕಲಾವಿದರು ಶಾಸ್ತ್ರೀಯ ನೃತ್ಯ ಪ್ರದರ್ಶನ ನೀಡಿದರು. ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ 108 ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರು ನೃತ್ಯ ತಂಡದ ಕಲಾವಿದರಿಗೆ ಫಲಮಂತ್ರಾಕ್ಷತೆ ನೀಡಿ ಹರಸಿದರು. ವೇದಿಕೆಯಲ್ಲಿ ಶ್ರೀಮಠದ ಆನಂದ ರಾವ್, ಪದ್ಮನಾಭ ಆಚಾರ್, ಜಯಪ್ರಕಾಶ್ ಮತ್ತಿತರರಿದ್ದರು. ಕಲಾ ತಂಡದ ಕಲಾವಿದರಾದ ಹಂಸಾನಂದಿನಿ, ಪೃಥ್ವಿಶ್ರೀ, ಶ್ರದ್ಧಾ ಎ., ತನುವಿ, ಫಲ್ಗುಣಿ ತೇಜಸ್ವೀ  ರಾಜ್, ಭಾರತೀ, ನಿಹಾರಿಕಾ, ಶ್ರೀಮಾ, ಧನ್ಯಶ್ರೀ, ವೈಷ್ಣವೀ ವಿನಯ್ ಶರ್ಮಾ ನೃತ್ಯ ಪ್ರದರ್ಶನ ನೀಡಿದರು.

Read More

ಬದಿಯಡ್ಕ: ಶ್ರೀ ವಿಘ್ನೇಶ್ವರ ಯಕ್ಷಗಾನ ಕಲಾಸಂಘ ನೀರ್ಚಾಲು ಇವರ ನೇತೃತ್ವದಲ್ಲಿ ಅಗ್ರಮಾನ್ಯ ಕಲಾವಿದರ ಕೂಡುವಿಕೆಯ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮವು 25 ಆಗಸ್ಟ್ 2024ರಂದು ಅಪರಾಹ್ನ 2 ಗಂಟೆಗೆ ನೀರ್ಚಾಲು ಶಾಲಾ ಸಭಾಂಗಣದಲ್ಲಿ ಜರಗಲಿದೆ. ಕಾರ್ಯಕ್ರಮವನ್ನು ನೀರ್ಚಾಲು ಶಾಲಾ ಪ್ರಬಂಧಕ ಜಯದೇವ ಖಂಡಿಗೆ ಉದ್ಘಾಟಿಸಲಿದ್ದಾರೆ. ‘ಊರ್ವಶಿ ಶಾಪ’ ಹಾಗೂ ‘ಉತ್ತರನ ಪೌರುಷ’ ಪ್ರಸಂಗದ ತಾಳಮದ್ದಳೆ ನಡೆಯಲಿದ್ದು, ಭಾಗವತರಾಗಿ ಬಲಿಪ ಶಿವಶಂಕರ ಭಟ್ ಹಾಗೂ ಚಿನ್ಮಯ ಭಟ್ ಕಲ್ಲಡ್ಕ, ಚೆಂಡೆ ಮದ್ದಳೆಯಲ್ಲಿ ಗಣೇಶ್ ಭಟ್ ಬೆಳಾಲು, ಲಕ್ಷ್ಮೀಶ ಬೇಂತ್ರೋಡಿ ಜೊತೆಗೂಡಲಿದ್ದಾರೆ. ಅರ್ಥದಾರಿಗಳಾಗಿ ಸರ್ವ ಶ್ರೀ ಸುಣ್ಣಂಬಳ ವಿಶ್ವೇಶ್ವರ ಭಟ್, ಉಜಿರೆ ಅಶೋಕ ಭಟ್, ಪವನ್ ಕಿರಣೆರೆ, ಪಕಳಕುಂಜ ಶ್ಯಾಮ ಭಟ್, ವೈಕುಂಠ ಹೇರ್ಳೆ, ಬಾಲಕೃಷ್ಣ ಆಚಾರ್ಯ ನೀರ್ಚಾಲು ಪಾತ್ರನಿರ್ವಹಣೆ ಮಾಡಲಿದ್ದಾರೆ.

Read More

ಮೈಸೂರು : ಮೈಸೂರು ರಂಗಾಯಣವು ಕರ್ನಾಟಕ ಸರ್ಕಾರದಿಂದ ಸ್ಥಾಪಿತವಾದ ಅಧಿಕೃತ ರೆಪರ್ಟರಿಯಾಗಿದ್ದು, ಕಲಾಮಂದಿರದ ಆವರಣದಲ್ಲಿ ಕಚೇರಿಯನ್ನು ಹೊಂದಿದ್ದು, ರಂಗಶಿಕ್ಷಣ, ರಂಗತರಬೇತಿ, ನಾಟಕಗಳ ಸಿದ್ದತೆ, ಪ್ರದರ್ಶನ, ರಂಗಶಿಬಿರಗಳು ಹೀಗೆ ಸಂಪೂರ್ಣ ರಂಗಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. 35 ವರ್ಷಗಳಿಂದ ನಿರಂತರವಾಗಿ ರಂಗಚಟುವಟಿಕೆಗಳು ನಡೆಯುತ್ತಿವೆ. ರಂಗಾಯಣವು ಸಿದ್ಧಪಡಿಸುವ ನಾಟಕಗಳಿಗೆ ಹಾಗೂ ರಂಗ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ರಂಗಭೂಮಿಯಲ್ಲಿ ಅನುಭವವಿರುವ ಅಭ್ಯರ್ಥಿಗಳು ರಾಷ್ಟ್ರೀಯ ನಾಟಕ ಶಾಲೆಯ ಪದವಿ / ರಾಜ್ಯದ ಯಾವುದೇ ರಂಗಶಿಕ್ಷಣ ಕೇಂದ್ರದಿಂದ ರಂಗಶಿಕ್ಷಣ ಪದವಿ / ಡಿಪ್ಲೊಮೋ ಪಡೆದವರಾಗಿರಬೇಕು. ರಂಗಭೂಮಿ ಅನುಭವ ಅಪೇಕ್ಷಣೀಯ, ಅರ್ಹತೆಯುಳ್ಳ 22ರಿಂದ 35 ವರ್ಷದೊಳಗಿನ ವಯೋಮಿತಿಯುಳ್ಳ ಆಸಕ್ತ ಕಲಾವಿದರನ್ನು ರಂಗಾಯಣದ ನಿಯಮಾನುಸಾರ ತಾತ್ಕಾಲಿಕವಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ದಿನಾಂಕ 28 ಆಗಸ್ಟ್ 2024ರ ಒಳಗೆ ತಲುಪುವಂತೆ ನಿರ್ದೇಶಕರು, ರಂಗಾಯಣ, ವಿನೋಬಾ ರಸ್ತೆ, ಮೈಸೂರು-05 ಈ ವಿಳಾಸಕ್ಕೆ ಅರ್ಜಿ ಸಲ್ಲಿಸುವುದು. ಸಂದರ್ಶನದ ದಿನಾಂಕವನ್ನು ನಂತರದಲ್ಲಿ ತಿಳಿಸಲಾಗುವುದು. ನಮೂನೆಯನ್ನು ರಂಗಾಯಣದ ವೆಬ್‌ಸೈಟ್ rangayanamysore.karnataka.gov.in ನಿಂದ ಡೌನ್‌ ಲೋಡ್ ಮಾಡಿಕೊಳ್ಳಬಹುದಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ರಂಗಾಯಣದ ನಿಯಮ ಹಾಗೂ ಷರತ್ತುಗಳಿಗೆ…

Read More

ಮಂಗಳೂರು : ನಾಟ್ಯಾರಾಧನಾ ಕಲಾ ಕೇಂದ್ರದ ತ್ರಿಂಶೋತ್ಸವದ ಅಂಗವಾಗಿ ನಡೆಯುತ್ತಿರುವ ಸರಣಿ ಕಾರ್ಯಕ್ರಮ ನೃತ್ಯಾಮೃತ -8 ‘ಪದ್ಮ ಪಲ್ಲವ’ ವೈವಿಧ್ಯಮಯ ಭರತನಾಟ್ಯ ಕಾರ್ಯಕ್ರಮವು ದಿನಾಂಕ 18 ಆಗಸ್ಟ್ 2024ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಸಭಾಭವನದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು ಇವರು ಉದ್ಘಾಟಿಸಿ “ಭರತನಾಟ್ಯದಂತಹ ಶಾಸ್ತ್ರೀಯ ಕಲೆಗಳು ಉಳಿಯಬೇಕು ಮತ್ತು ಗುರುಪರಂಪರೆಯಲ್ಲಿ ಮುಂದುವರಿಯಬೇಕು. ಶಾಸ್ತ್ರೀಯ ಕಲೆಗಳು ಭಾರತೀಯ ಸಂಸ್ಕೃತಿಯ ಬೇರು. ಮುಂದಿನ ಜನಾಂಗಕ್ಕೆ ಭಾರತೀಯತೆಯ ವೈಶಿಷ್ಯಪೂರ್ಣ ವಿಚಾರಧಾರೆ ತಿಳಿಸುವಲ್ಲಿ ನಾಟ್ಯಾರಾಧನಾ ಕಲಾ ಕೇಂದ್ರದ ಮೂಲಕ ವಿದುಷಿ ಸುಮಂಗಲಾ ರತ್ನಾಕರ್ ರಾವ್ ಇವರ ಸಾಧನೆ ಶ್ಲಾಘನೀಯ ಎಂದು ನುಡಿದರು. ಈ ಸಂದರ್ಭದಲ್ಲಿ ಮುಖ್ಯ ಅಭ್ಯಾಗತರಾಗಿ ಆಗಮಿಸಿದ್ದ ಶ್ರೀ ಶೇಖರ್ ಡಿ. ಶೆಟ್ಟಿಗಾರ್ ದುಬೈ ಇವರು ಯು.ಎ.ಇ.ಯಲ್ಲಿ ನಡೆಸುತ್ತಿರುವ ಶಿಸ್ತುಬದ್ಧ ಚೌಕಟ್ಟಿನಿಂದ ಕೂಡಿದ ತೆಂಕುತಿಟ್ಟು ಯಕ್ಷಗಾನದ ದಕ್ಷ ಗುರುತ್ವಕ್ಕೆ “ಯಕ್ಷಾಭಿವಂದನಾ ಪುರಸ್ಕಾರ” ನೀಡಿ ಅಭಿನಂದಿಸಲಾಯಿತು. ಸಮಾರಂಭದಲ್ಲಿ ಧರ್ಮಸ್ಥಳದ ಮಾಜಿ ಜಮಾ ಉಗ್ರಾಣ ಅಧಿಕಾರಿಗಳಾದ ಶ್ರೀ ಭುಜಬಲಿ ಧರ್ಮಸ್ಥಳ, ದುಬೈ ಬ್ರಾಹ್ಮಣ…

Read More

ಬೆಂಗಳೂರು : ‘ಗುರುತು’ ಅನ್ನುವುದು ಕೆಲವರಿಗೆ ಹೆಮ್ಮೆಯಾದರೆ, ಕೆಲವರಿಗದು ಅಸಹ್ಯ, ಹಿಂಸೆ, ಜೀವನದ್ದುದ್ದಕ್ಕೂ ಹೊತ್ತು ತಿರುಗಬೇಕಾದ ಹೆಣಭಾರದ ಚಾಕರಿ. ಹಲವು ಬಾರಿ ‘ಉಳಿವಿಗಾಗಿ’ ಗುರುತುಗಳನ್ನು ಮುಚ್ಚಿಡುತ್ತಾ ಸಾಗುವುದೇ’ ಬದುಕು’ ಅನ್ನಿಸಿಕೊಂಡು ಹರಿಯುತ್ತಾ ಹಗುರಾಗುವುದು ಸಾಗದ ದಾರಿಯಾಗಿ ಕಂಡು ದಣಿವಾಗುತ್ತದೆ. ದಣಿವಾಗುತ್ತದೆ ಎಂಬ ಕಾರಣಕ್ಕೆ ಹಾರಾಡುವ ಬಯಕೆಯನ್ನು ಬಿಡುವಂತೆಯೂ ಇರುವುದಿಲ್ಲ. ಕತ್ತಲ ದಾರಿಯಲ್ಲಿ ಮಿಂಚುಹುಳುಗಳಿಗಾಗಿ ಜೀವ ಆತುಕೊಳ್ಳಬೇಕಾಗುತ್ತದೆ. ಆಗ ಕತ್ತಲೊಂದು ಸಂಭ್ರಮ ಬೆಳಕೊಂದು ಸಂಭ್ರಮ. ಹೀಗೆ ಗುರುತಿನ ಸುತ್ತ ಇರುವ ಹಲವು ಸಂಕೀರ್ಣ ವೀರೋಧಭಾಸಗಳನ್ನು ಎದುರುಗೊಳ್ಳುವ ಕಥನಗಳ ಗೊಂಚಲು’ ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ’. ಇಲ್ಲಿ ‘ಬಾಬಾ ಸಾಹೇಬ್ ಅಂಬೇಡ್ಕರ್ ಅವರ ‘Waiting for a Visa’ ಒಂದು ರೂಪಕವಾಗಿ ಕಂಡು ಅವರು ನಿಜಕ್ಕೂ ಪ್ರವೇಶ ಕೇಳುತ್ತಿರುವುದು ಎಲ್ಲಿಗೆ ? ಅನ್ನುವ ಪ್ರಶ್ನೆ ಮುಖ್ಯವಾಗುತ್ತದೆ. ಜಂಗಮ ಕಲೆಕ್ಟಿವ್ ಬೆಂಗಳೂರು ಪ್ರಸ್ತುತ ಪಡಿಸುವ ಈ ನಾಟಕದ ಪಠ್ಯ ಆಕರ : ಎನ್.ಕೆ. ಹನುಮಂತಯ್ಯ, ಚಂದ್ರಶೇಕರ್ ಕೆ., ರಚನೆ, ವಿನ್ಯಾಸ, ನಿರ್ದೇಶನ : ಲಕ್ಷ್ಮಣ್ ಕೆ.ಪಿ.…

Read More