Author: roovari

ಕಾರ್ಕಳ : ಕಾರ್ಕಳದ ಕ್ರಿಯೇಟಿವ್‌ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಹೊರತರಲಾಗುತ್ತಿರುವ ತ್ರೈಮಾಸಿಕ ಪತ್ರಿಕೆ “ನಿನಾದ” ಇದರ 5 ನೇ ಸಂಚಿಕೆಯನ್ನು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕವರ್ಗದವರ ಸಮ್ಮುಖದಲ್ಲಿ ದಿನಾಂಕ 18-12-2023 ರಂದು  ಬಿಡುಗಡೆಗೊಳಿಸಲಾಯಿತು. ಶ್ರೀ ಲಿಂಗಪ್ಪ ಮತ್ತು ಶ್ರೀಮತಿ ರತ್ನಾ ಲಿಂಗಪ್ಪ ದಂಪತಿಗಳು ತ್ರೈಮಾಸಿಕ ಪತ್ರಿಕೆಯನ್ನು ಅನಾವರಣಗೊಳಿಸಿದರು. ವಿದ್ಯಾ ಸಂಸ್ಥೆಯ ಸಂಸ್ಥಾಪಕರಾದ ಅಶ್ವತ್‌ ಎಸ್‌. ಎಲ್‌ ಮಾತನಾಡಿ “ನಿನಾದ ಪತ್ರಿಕೆ ವಿದ್ಯಾರ್ಥಿಗಳಿಗೆ ಹಾಗೂ ಯುವ ಬರಹಗಾರರಿಗೆ ಉತ್ತಮವಾದ ವೇದಿಕೆ ಒದಗಿಸುತ್ತಿದೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಒಳ್ಳೆಯ ಚಿಂತನಾತ್ಮಕ ಅಂಶಗಳನ್ನು ಬೆಳೆಸಲು ಹಾಗೂ ಕ್ರಿಯಾಶೀಲ ಮನಸ್ಸುಗಳನ್ನು ಕಟ್ಟಲು ಕ್ರಿಯೇಟಿವ್‌ ಎಂದಿಗೂ ಸಿದ್ಧವಾಗಿದೆ. ಈಗಾಗಲೇ ನಾಲ್ಕು ಸಂಚಿಕೆಗಳನ್ನು ಪೂರೈಸಿ ಐದನೇ ಸಂಚಿಕೆ ಸಿದ್ಧವಾಗಿ ಲೋಕಮುಖಕ್ಕೆ ಪ್ರಕಟಗೊಳ್ಳುತ್ತಿದೆ. ಹೊಸತನದ ಬರಹಗಳು ಓದುಗರನ್ನು ಖಂಡಿತವಾಗಿಯೂ ತಲುಪುತ್ತವೆ. ಓದುಗರೂ ಸಾಕಷ್ಟು ಇದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ಎಳವೆಯಲ್ಲಿಯೇ ಸಾಹಿತ್ಯದ ಕುರಿತು ಆಸಕ್ತಿ ಬೆಳಸಿಕೊಳ್ಳಬೇಕು.” ಎಂದು ಕರೆ ನೀಡಿದರು. ‘ನಿನಾದ’ ಸಂಚಿಕೆಯಲ್ಲಿ ಪ್ರಕಟಗೊಂಡ ಲೇಖನಗಳನ್ನು ಬರೆದ ವಿದ್ಯಾರ್ಥಿಗಳನ್ನು “ಪುಸ್ತಕ” ಬಹುಮಾನದೊಂದಿಗೆ ಗೌರವಿಸಲಾಯಿತು.…

Read More

ಬಂಟ್ವಾಳ ತಾಲೂಕಿನ ಅಡ್ಯನಡ್ಕ ಹಿರಿಯ ಪ್ರಾಥಮಿಕ‌ ಶಾಲೆಯಲ್ಲಿ 1955 ಲಾಗಾಯ್ತು ಶಿಕ್ಷಕರಾಗಿ ಸುದೀರ್ಘ ಸೇವೆ ಗೈದ ಮಹಾಲಿಂಗ ಭಟ್ಟರು ರವರು ನೆರೆಯ ಅಡ್ಕಸ್ಥಳದ ವಾಟೆ ಸುಬ್ರಾಯ ಭಟ್ಟರ ಸುಪುತ್ರರು. ಮುಳಿಯಾಲ ಮನೆತನದ ಮಹಾಲಕ್ಷ್ಮೀ ಎಂಬ ಸಾಧ್ವಿಯ ಪತಿ ಹಾಗೂ ಇಬ್ಬರು ಪುತ್ರಿಯರು ಮತ್ತು ಓರ್ವ ಪದವೀಧರನಾದರೂ ಕೃಷಿ ಕೈಂಕರ್ಯದಲ್ಲಿರುವ ಪುತ್ರನ ಹೆಮ್ಮೆಯ ಪಿತ. ಅಡ್ಯನಡ್ಕ ಹಿರಿಯ ಪ್ರಾಥಮಿಕ‌ ಶಾಲೆಯ ಹಿರಿಯ ಅಧ್ಯಾಪಕರಾಗಿ, ಅದೇ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರೂ ಆಗಿದ್ದವರು ಹಾಗೂ ಎಲ್ಲಾ ಪ್ರಕಾರದ ಸಾಹಿತ್ಯದಲ್ಲಿ ನಿಪುಣರಾಗಿದ್ದ ಮಾಲಿಂಗ ಮಾಸ್ತರ್ ಬರೆದ ಬೀಚಿ ತಿಮ್ಮನ ಮಾದರಿಯ ‘ಕಿಟ್ಟನ ಕಟ್ಲೇರಿ’ ನಗೆ ಬರಹ ಅತಿ ಜನಪ್ರಿಯ. ‘ಶ್ರೀಗಂಧ’, ‘ಭಾವ ಕುಸುಮ’, ‘ಗಮಗಮ’, ಪ್ರ’ಸಾದ’ ಹಾಗೂ ‘ಸಂಗಮ’ ಎಂಬ ಮಕ್ಕಳ ಕವನ ಸಂಕಲನಗಳೂ, ‘ಮರ್ಲ್ ಗ್ ಮರ್ದ್’ ಎಂಬ ತುಳು‌ನಾಟಕ, ‘ನಾಮ‌ ನಂದಿನಿ’ ಎಂಬ ಹಲವು ಹೆಸರುಗಳ ಪ್ರಕಟಿತ ಸಂಕಲನವೂ ವಿಶಿಷ್ಡ ವಿಭಿನ್ನ. ‘ರಡ್ಡತ್ತ್ ಒಂಜಿ’, ‘ಬೊಲ್ಪಾಂಡ್’, ‘ಕಲ್ತಿ ಮಗೆ’, ‘ಜಾತಿ ತೂವಡೆ’ ಎಂಬ…

Read More

ಮಂಗಳೂರು : ಕಥಾ ಕೀರ್ತನದ ಮೇರು ನಾಡೋಜ ಸಂತ ಭದ್ರಗಿರಿ ಅಚ್ಯುತದಾಸರು ಹಾಗೂ ಕೀರ್ತನಾಚಾರ್ಯ ಲಕ್ಷ್ಮಣದಾಸ ವೇಲಣಕರ್ ಅವರ ಸ್ಮರಣಾರ್ಥ ಬೆಂಗಳೂರಿನ ಷಡ್ಜ ಕಲಾ ಕೇಂದ್ರ ಹಾಗೂ ರಾಮಕೃಷ್ಣ ಮಠ ಮಂಗಳೂರು ಜಂಟಿಯಾಗಿ ಆಯೋಜಿಸಿದ್ದ ‘ಕಥಾ ಕೀರ್ತನ ವೈಭವ -2023’ ಮತ್ತು ‘ಅಚ್ಯುತಶ್ರೀ ರಾಷ್ಟ್ರೀಯ ಪುರಸ್ಕಾರ’ ಪ್ರದಾನ ಸಮಾರಂಭವು ಮಂಗಳೂರು ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ದಿನಾಂಕ 17-12-2023ರಂದು ನಡೆಯಿತು. ಪ್ರತಿ ವರ್ಷ ಕಥಾಕೀರ್ತನ ಕ್ಷೇತ್ರದಲ್ಲಿ ಸಾಧನೆಗೈದ ಮಹನೀಯರಿಗೆ ನೀಡಲಾಗುವ ‘ಅಚ್ಯುತಶ್ರೀ’ ರಾಷ್ಟ್ರೀಯ ಪುರಸ್ಕಾರವನ್ನು ಈ ಬಾರಿ ಮಹಾರಾಷ್ಟ್ರದ ಪುಣೆಯ ಹರಿದಾಸರಾದ ಚಾರುದತ್ತ ಆಫಳೆ ಬುವಾ ಅವರಿಗೆ ನೀಡಿ ಗೌರವಿಸಲಾಯಿತು. ಇದೇ ವೇಳೆ ನಾಡಿನ ಖ್ಯಾತ ಹರಿದಾಸರಾದ ಪೊಳಲಿ ಜಗದೀಶದಾಸರು ರಚಿಸಿದ “ಸುವರ್ಣ ಸಿರಿ – ದೃಷ್ಟಾಂತ ಕಥಾಕೀರ್ತನ” ಗ್ರಂಥದ ಲೋಕಾರ್ಪಣೆಗೊಳಿಸಲಾಯಿತು. ಬಳಿಕ ಹರಿಕಥಾ ಕ್ಷೇತ್ರದಲ್ಲಿ 50 ವಸಂತಗಳನ್ನು ಪೂರೈಸುತ್ತಿರುವ ಪೊಳಲಿ ಜಗದೀಶದಾಸರು ಹಾಗೂ ಹರಿಕಥಾ ಕಲಾ ಸೇವೆಗೈದ ಶ್ರೀ ಎಂ. ಲಕ್ಷ್ಮೀನಾರಾಯಣ ಭಟ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಈ…

Read More

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಟಿತ ಪ್ರಶಸ್ತಿಗಳಲ್ಲೊಂದಾದ ಅಭಯ ಲಕ್ಷ್ಮೀ ದತ್ತಿ ಪ್ರಶಸ್ತಿ ಸಮಾರಂಭವು ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ದಿನಾಂಕ 18-12-2023ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು “ಕನ್ನಡಿಗರೆಲ್ಲರ ಏಕೈಕ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು ನಿರಂತರವಾಗಿ ಹರಿಯುತ್ತಿರುವ ಅಷ್ಟೇ ಅಲ್ಲ ವಿಸ್ತಾರಗೊಳ್ಳುತ್ತಿರುವ ನದಿಯ ಹಾಗೆ. ಅತಿಹೆಚ್ಚು ದತ್ತಿ ಪ್ರಶಸ್ತಿಗಳು ಇಲ್ಲಿ ಸ್ಥಾಪನೆಗೊಂಡಿದ್ದು ಇದರ ಆರ್ಥಿಕ ಮೊತ್ತಕ್ಕಿಂತಲೂ ಅದನ್ನು ಸ್ಥಾಪಿಸಿದವರ ಭಾವನೆಗಳು ಮುಖ್ಯ, ಇಂತಹ ಭಾವನಾತ್ಮಕ ಬೆಂಬಲದಿಂದಲೇ ಕನ್ನಡ ಭಾಷೆ ಮತ್ತು ಸಂಸ್ಕೃತಿ ಉಳಿಯುವುದು ಸಾಧ್ಯ” ಎಂದರು. ಶ್ರೀಮತಿ ಪಿ. ಜಯ ಲಕ್ಷ್ಮೀಯವರು ಕನ್ನಡ ಸಾಹಿತ್ಯ ಪರಿಷತ್ತಿನ ಮೇಲಿನ ಅಭಿಮಾನದಿಂದ ತಮ್ಮ ಪತಿ ದಿವಂಗತ ಎಸ್.ಎ. ಅಭಯ ಕುಮಾರ್ ಅವರ ಹೆಸರಿನಲ್ಲಿ ಈ ದತ್ತಿಯನ್ನು ಸ್ಥಾಪಿಸಿದ್ದು, ಸಾಹಿತ್ಯ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಇಬ್ಬರು ಗಣ್ಯರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ರಾಷ್ಟ್ರಪತಿ ಭವನದ ಸೆಂಟ್ರಲ್…

Read More

ಕುಶಾಲನಗರ : ಕುಶಾಲನಗರ ಗೌಡ ಸಮಾಜ ಆಶ್ರಯದಲ್ಲಿ ಸಮಾಜದ ವಿವಿಧ ಸಂಘಗಳ ಸಹಯೋಗದಲ್ಲಿ ‘ಅರೆಭಾಷೆ ದಿನಾಚರಣೆ’ಯು ದಿನಾಂಕ 15-12-2023ರಂದು ನಡೆಯಿತು. ಕುಶಾಲನಗರ ಗೌಡ ಸಮಾಜ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರಾದ ಕಡ್ಲೇರ ತುಳಸಿ ಮೋಹನ್ ಮಾತನಾಡಿ “ಪುಸ್ತಕಗಳನ್ನು ಓದುವ ಮೂಲಕ ಜ್ಞಾನಾಭಿವೃದ್ಧಿ ಸಾಧ್ಯ. ಅರೆಭಾಷೆಯನ್ನು ನಿರಂತರ ಚಟುವಟಿಕೆಗಳ ಮೂಲಕ ಉಳಿಸಿ ಬೆಳೆಸಿಕೊಳ್ಳಬೇಕು. ಸಮುದಾಯದ ಉಡುಗೆ ತೊಡುಗೆಗಳಲ್ಲಿ ಗೊಂದಲ ಇರಬಾರದು. ಸಮಾಜದ ಸಂಘಟನೆಗಳ ಮೂಲಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಂಸ್ಕೃತಿ ಆಚಾರ-ವಿಚಾರಗಳ ಬಗ್ಗೆ ಯುವ ಪೀಳಿಗೆಗೆ ಅರಿವು ಜಾಗೃತಿ ಮೂಡಿಸಬೇಕು. ಪೂರ್ವಿಕರನ್ನು ಸ್ಮರಿಸಬೇಕು” ಎಂದು ತಿಳಿ ಹೇಳಿದರು. ಕುಶಾಲನಗರ ಗೌಡ ಸಮಾಜದ, ಮಹಿಳಾ ಸಮಾಜಗಳ ಶಿಸ್ತುಬದ್ಧ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅತಿಥಿಗಳಾಗಿ ಪಾಲ್ಗೊಂಡಿದ್ದ ಮಾಜಿ ಸೈನಿಕರಾದ ಕುದುಪಜೆ ಭೋಜಪ್ಪ ಮಾತನಾಡಿ “ಆಚಾರ ವಿಚಾರ ಸಂಸ್ಕೃತಿಗಳು ಮನೆಯಿಂದ ಆರಂಭಗೊಳ್ಳುತ್ತದೆ. ತಾಯಿ ಇದಕ್ಕೆ ಪ್ರಮುಖ ಕಾರಣರಾಗಿರುತ್ತಾರೆ.ಹುಟ್ಟು ಸಾವು ನಡುವೆ ಸಂಸ್ಕೃತಿ…

Read More

ಮಡಿಕೇರಿ : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಕೊಡಗು ಗೌಡ ಸಮಾಜಗಳ ಒಕ್ಕೂಟ ಮತ್ತು ಜಿಲ್ಲೆಯ ಗೌಡ ಸಮಾಜ-ಸಂಘಟನೆಗಳ ಸಹಯೋಗದಲ್ಲಿ ನಗರದ ಗೌಡ ಸಮಾಜದ ಸಭಾಂಗಣದಲ್ಲಿ ‘ಅರೆಭಾಷೆ ದಿನಾಚರಣೆ’ ಕಾರ್ಯಕ್ರಮವು ದಿನಾಂಕ 15-12-2023ರಂದು ನಡೆಯಿತು. ಈ ಕಾರ್ಯಕ್ರಮಕ್ಕೆ ಭಾಗಮಂಡಲ ಗ್ರಾ.ಪಂ.ಅಧ್ಯಕ್ಷರಾದ ಕಾಳನ ರವಿ ಇವರು ಚಾಲನೆ ನೀಡಿ ಮಾತನಾಡುತ್ತಾ “ಕೊಡಗು, ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಹಲವು ಭಾಗಗಳಲ್ಲಿ ಅರೆಭಾಷೆ ಮಾತನಾಡುವವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಗ್ರಾಮೀಣ ಪ್ರದೇಶದಲ್ಲಿಯೂ ‘ಅರೆಭಾಷೆ ದಿನಾಚರಣೆ’ಯನ್ನು ಆಯೋಜಿಸುವಂತಾಗಬೇಕು. ಕನ್ನಡ ಉಪ ಭಾಷೆಯಾದ ಅರೆಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮನೆಗಳಲ್ಲಿ ಅರೆಭಾಷೆಯನ್ನು ಮಾತನಾಡುವಂತಾಗಬೇಕು. ಇದರಿಂದ ಮಕ್ಕಳಿಗೆ ಭಾಷೆ ಕಲಿಸಲು ಸಾಧ್ಯವಾಗಲಿದೆ. ಭಾಗಮಂಡಲ ವ್ಯಾಪ್ತಿಯಲ್ಲಿ ಶೇ.75ಕ್ಕೂ ಹೆಚ್ಚು ಜನರು ಅರೆಭಾಷೆ ಮಾತನಾಡುವವರು ವಾಸಿಸುತ್ತಿದ್ದಾರೆ. ಅರೆಭಾಷೆ ದಿನಾಚರಣೆಯನ್ನು ಹಬ್ಬದ ರೀತಿಯಲ್ಲಿ ಆಚರಿಸುವಂತಾಗಬೇಕು” ಎಂದು ಅಭಿಪ್ರಾಯಪಟ್ಟರು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ನಿಕಟ ಪೂರ್ವ ಅಧ್ಯಕ್ಷರಾದ ಕೊಲ್ಯದ ಗಿರೀಶ್ ಅವರು ಮಾತನಾಡಿ “ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ…

Read More

ಬೆಳಗಾವಿ : ಈ ಹೊತ್ತಿಗೆ ಟ್ರಸ್ಟ್ ಇದರ ‘ದಶಮಾನೋತ್ಸವ ಸಂಭ್ರಮ’ದ ಪ್ರಯುಕ್ತ ‘ನಾಟಕ ರಚನಾ ಕಮ್ಮಟ’ವನ್ನು 2024ರ ಜನವರಿ 26,27 ಮತ್ತು 28ರವರೆಗೆ ಬೆಳಗಾವಿಯ ‘ನಮ್ಮವರೊಂದಿಗೆ’ ಬಳಗದ ಸಹಯೋಗದೊಂದಿಗೆ ನಡೆಸುತ್ತಿದೆ. ನಾಟಕ ರಚನೆಯಲ್ಲಿ ಉತ್ಸುಕರಾಗಿರುವವರಿಗೆ ಇದೊಂದು ಸುವರ್ಣಾವಕಾಶ. ಕನ್ನಡ ಸಾಹಿತ್ಯಲೋಕದ ಮಹತ್ವದ ವಿಮರ್ಶಕರಾದ ಡಾ. ಎಂ.ಎಸ್. ಆಶಾದೇವಿ ಕಮ್ಮಟದ ನಿರ್ದೇಶಕರು. ನಾಟಕವು ಅತ್ಯಂತ ಪ್ರಭಾವಶಾಲಿ ಸಾಹಿತ್ಯ ಪ್ರಕಾರ. ಸಮುದಾಯದ ಆಗುಹೋಗುಗಳಷ್ಟೇ ಅದರ ಚಲನೆಗಳನ್ನು ಮುನ್ನೋಟದಲ್ಲಿ ಕೊಡಬಲ್ಲ ಶಕ್ತಿಯೂ ಇದಕ್ಕಿದೆ. ಸಾಹಿತ್ಯ ಪ್ರಕಾರವಲ್ಲದೆ ಸಾಮಾಜಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ಹೋರಾಟಗಳ ಮಾಧ್ಯಮವಾಗಿಯೂ ನಾಟಕ ತನ್ನ ಬಹು ಪಾತ್ರಗಳನ್ನು ನಿಭಾಯಿಸುತ್ತಾ ಬಂದಿದೆ. ಆದ್ದರಿಂದಲೇ ಸಾಹಿತ್ಯ ಚರಿತ್ರೆಯಲ್ಲಿ ನಾಟಕಕ್ಕೆ ವಿಶಿಷ್ಟ ಮತ್ತು ಮಹತ್ವದ ಸ್ಥಾನವಿದೆ. ಈ ಹಿನ್ನೆಲೆಯಲ್ಲಿ ನಾಟಕ ರಚನೆಯ ತಾತ್ವಿಕ ತಾಂತ್ರಿಕ ಹಾಗೂ ಸೌಂದರ್ಯಾತ್ಮಕ ನೆಲೆಗಳನ್ನು ಪರಿಚಯಿಸುವ ಮತ್ತು ಕನ್ನಡದ ಸಮೃದ್ಧ ನಾಟಕ ಪರಂಪರೆಯನ್ನು ಅರಿಯುವ ಶಿಬಿರವನ್ನು ಈ ಹೊತ್ತಿಗೆಯಿಂದ ಬೆಳಗಾವಿಯಲ್ಲಿ ಆಯೋಜಿಸಲಾಗಿದೆ. ನಾಟಕ ರಚನೆಯ ಕುರಿತ ಸಂವಾದಗಳು ಹಾಗೂ ಕಮ್ಮಟದ ಮೊದಲ ಮತ್ತು…

Read More

ಮಂಗಳೂರು : ಶ್ರೀ ನಾಟ್ಯಾoಜಲಿ ಕಲಾ ಅಕಾಡೆಮಿ ಸುರತ್ಕಲ್ ಸಂಸ್ಥೆಯ ‘ನಾಟ್ಯಾಂಜಲಿ ಕಲೋತ್ಸವ’ವು ಮಂಗಳೂರು ಪುರಭವನದಲ್ಲಿ ದಿನಾಂಕ 16-12-2023 ಮತ್ತು 17-12-2023ರಂದು ಎರಡು ದಿನಗಳ ಕಾಲ ಸಂಭ್ರಮಿಸಿತು. ಹಿರಿಯ ನೃತ್ಯ ಗುರು ಉಳ್ಳಾಲ ಶ್ರೀ ಮೋಹನ್ ಕುಮಾರ್ ಇವರು ಎರಡೂ ದಿನಗಳ ಕಲೋತ್ಸವವನ್ನು ದೇವತಾ ಜ್ಯೋತಿ ಪ್ರಜ್ವಲನ ಮಾಡಿ ಉದ್ಘಾಟಿಸಿದರು. ಮೊದಲ ದಿನ ಹಿರಿಯ ಚಿತ್ರಕಲಾವಿದ ದಿ. ಪಿ. ಪುರುಷೋತ್ತಮ ಕಾರಂತರ ಸ್ಮರಣಾರ್ಥ ‘ವರ್ಣ ಕಾವ್ಯ ನರ್ತನ’ ಎಂಬ ಕಾರ್ಯಕ್ರಮದಲ್ಲಿ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರರು, ಚಿತ್ರ ಕಲಾವಿದ ಬಿ. ಗಣೇಶ್ ಸೋಮಯಾಜಿ ಉಪಸ್ಥಿತರಿದ್ದರು. ಚಿತ್ರ ಕಲಾವಿದೆ ಶ್ರೀಮತಿ ಕೆ. ಮನೋರಂಜನಿ ರಾವ್ ಇವರಿಗೆ ‘ಪುರುಷೋತ್ತಮ ವರ್ಣಾಂಜಲಿ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ವಿ. ಸುಮಂಗಲ ರತ್ನಾಕರ್ ರಾವ್, ವಿ. ವಿದ್ಯಾಶ್ರೀ ರಾಧಾಕೃಷ್ಣ, ಡಾ. ಶ್ರೀವಿದ್ಯಾ ಮುರಳೀಧರ್, ವಿದ್ವಾನ್ ಸೂರ್ಯ ಎನ್. ರಾವ್ ಇವರುಗಳ ಏಕವ್ಯಕ್ತಿ ಭರತನಾಟ್ಯ ಹಾಗೂ ಶ್ರೀ ನಾಟ್ಯಾoಜಲಿ ಕಲಾ ಅಕಾಡೆಮಿ, ಕಲಾವಟಿಕ ಡಾನ್ಸ್ ಅಕಾಡೆಮಿ ಬೆಂಗಳೂರು,…

Read More

ಬಂಟ್ವಾಳ : ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನ ಇದರ ವತಿಯಿಂದ ‘ವರ್ಣಾಂಜಲಿ’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯು ದಿನಾಂಕ 24-12-2023ರಂದು ಬೆಳಿಗ್ಗೆ 9.30ರಿಂದ ಫರಂಗಿಪೇಟೆಯ ಸೇವಾಂಜಲಿ ಸಭಾಗೃಹದಲ್ಲಿ ನಡೆಯಲಿದೆ. ಈ ಕಾರ್ಯಕ್ರಮವು ಶ್ರೀ ಏರ್ಯ ಬಾಲಕೃಷ್ಣ ಹೆಗ್ಡೆಯವರಿಂದ ಉದ್ಘಾಟನೆಗೊಳ್ಳಲಿದ್ದು, ಮಧ್ಯಾಹ್ನ ಗಂಟೆ 2.30ಕ್ಕೆ ಬಹುಮಾನ ವಿತರಣೆ ನಡೆಯಲಿದೆ. ಸ್ಪರ್ಧಾ ವಿಭಾಗ : 1ರಿಂದ 4ನೇ ತರಗತಿಯ ವಿದ್ಯಾರ್ಥಿಗಳಿಗೆ ವಿಷಯ : ಸುಂದರ ಪರಿಸರ ಬಹುಮಾನಗಳು ಪ್ರಥಮ ರೂ.1,000/-, ದ್ವಿತೀಯ ರೂ.750/- ಮತ್ತು ತೃತೀಯ ರೂ.500/- ಮತ್ತು ಪ್ರಶಸ್ತಿ ಪತ್ರ 5ರಿಂದ 7ನೇ ತರಗತಿಯ ವಿದ್ಯಾರ್ಥಿಗಳಿಗೆ ವಿಷಯ : ಹಳ್ಳಿಯ ಜೀವನ ಬಹುಮಾನಗಳು ಪ್ರಥಮ ರೂ.1,500/-, ದ್ವಿತೀಯ ರೂ.1,000/- ಮತ್ತು ತೃತೀಯ ರೂ.500/- ಮತ್ತು ಪ್ರಶಸ್ತಿ ಪತ್ರ 8ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ವಿಷಯ : ಸ್ವಚ್ಛ ಭಾರತ ಬಹುಮಾನಗಳು ಪ್ರಥಮ ರೂ.2,000/-, ದ್ವಿತೀಯ ರೂ.1,500/- ಮತ್ತು ತೃತೀಯ ರೂ.1,000/- ಮತ್ತು ಪ್ರಶಸ್ತಿ ಪತ್ರ ಪ್ರತೀ ವಿಭಾಗದಲ್ಲಿ ಎರಡು ಸಮಾಧಾನಕರ ಬಹುಮಾನವಿದ್ದು, ಭಾಗವಹಿಸಿದ ಎಲ್ಲಾ…

Read More

ಪುತ್ತೂರು : ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಗ್ರಾಮ ಪಂಚಾಯತ್ ಹಿರೇಬಂಡಾಡಿ ಹಾಗೂ ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಸಹಕಾರದಲ್ಲಿ ಮಿತ್ರಂಪಾಡಿ ಜಯರಾಮ ರೈ ಅವರ ಮಹಾ ಪೋಷಕತ್ವದಲ್ಲಿ ‘ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ’ ಎಂಬ ಘೋಷ ವಾಕ್ಯದಲ್ಲಿ ನಡೆಯುತ್ತಿರುವ ಗ್ರಾಮ ಸಾಹಿತ್ಯ ಸಂಭ್ರಮವು ಈಗಾಗಲೇ 10 ಸರಣಿ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಪೂರೈಸಿದ್ದು, 11ನೇ ಸರಣಿ ಕಾರ್ಯಕ್ರಮವು ಹಿರೇಬಂಡಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ದಿನಾಂಕ 23-12-2023ರ ಶನಿವಾರದಂದು ಬೆಳಿಗ್ಗೆ ಗಂಟೆ 10ಕ್ಕೆ ನಡೆಯಲಿದೆ. ಯುವಜನತೆಯನ್ನು ಸಾಹಿತ್ಯ ಲೋಕದತ್ತ ಬರಮಾಡಿಕೊಳ್ಳುವ ಹಾಗೂ ಅವರಿಗೆ ಸೂಕ್ತ ವೇದಿಕೆಯನ್ನು ನೀಡುವ ನಿಟ್ಟಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಉದ್ಘಾಟನಾ ಸಮಾರಂಭ, ಸಾಧಕರಿಗೆ ಸನ್ಮಾನ, ಬಾಲ ಕವಿಗೋಷ್ಠಿ, ಬಾಲ ಕಥಾಗೋಷ್ಠಿ, ಯುವ ಕವಿಗೋಷ್ಠಿ, ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದ್ದು, ಹಿರಿಯ ಸಾಹಿತಿಗಳಾದ ಶ್ರೀ ಎಸ್.ಜಿ. ಕೃಷ್ಣ ಅವರು ನೀಡಿದ ಸಲಹೆ ಮೇರೆಗೆ ಈ ಬಾರಿ ಗ್ರಾಮ ಸಾಹಿತ್ಯ ಸಂಭ್ರಮದಲ್ಲಿ ಸರ್ವಾಧ್ಯಕ್ಷೆಯಾಗಿ…

Read More