Subscribe to Updates
Get the latest creative news from FooBar about art, design and business.
Author: roovari
ಪುತ್ತೂರು : ಕರ್ನಾಟಕ ಭಾವೈಕ್ಯ ಪರಿಷತ್ ವತಿಯಿಂದ ‘ಮಾದಕತೆ ಮಾರಣಾಂತಿಕ’ ಪುಸ್ತಕ ಬಿಡುಗಡೆ ಅಂಗವಾಗಿ ಬಹುಭಾಷಾ ಕವಿಗೋಷ್ಠಿಯು ದಿನಾಂಕ 26 ಡಿಸೆಂಬರ್ 2024ರಂದು ಪುತ್ತೂರು ಸುದಾನ ಮೈದಾನದಲ್ಲಿ ನಡೆಯಿತು. ಈ ಸಮಾರಂಭದಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಖ್ಯಾತ ಸಾಹಿತಿ ಹೆಚ್. ಭೀಮರಾವ್ ವಾಷ್ಠರ್ ಸುಳ್ಯ ಮಾತನಾಡಿ “ಕಣ್ಣಾರೆ ಕಂಡ ವಿಷಯಗಳಿಗೆ ಮತ್ತು ಭಾವನೆಗಳಿಗೆ ಅಕ್ಷರ ರೂಪ ಕೊಡುವ ಮೂಲಕ ಕವಿಗಳು ಕ್ರಾಂತಿಕಾರಿ ಕವನಗಳನ್ನು ರಚಿಸಿ ಸಮಾಜವನ್ನು ಒಳಿತಿನ ಹಾದಿಗೆ ಸೇರಿಸುವ ದೇಶದ ಕಾವಲುಗಾರರು. ಸಾಹಿತ್ಯಕ್ಕೆ ಜನರ ಮನಸ್ಸನ್ನು ಒಗ್ಗೂಡಿಸುವ ಅಭೂತಪೂರ್ವ ಶಕ್ತಿಯಿದೆ. ಸಾಹಿತ್ಯವು ನಿರಂತರ ಹರಿಯುವ ತೊರೆಯಾಗಿದ್ದು, ಇಡೀ ಜಗತ್ತು ಈ ಶುದ್ಧ ತೊರೆಯನ್ನು ಪರಿವರ್ತನೆಗಾಗಿ ಬಳಸಿ ಅಮೂಲಾಗ್ರ ಬದಲಾವಣೆ ತರಬಹುದು” ಎಂದು ಹೇಳಿದರು. ಕವಿಗೋಷ್ಠಿ ಸಮಾರಂಭವನ್ನು ಹವ್ಯಾಸಿ ಪತ್ರಕರ್ತ ಕೆ.ಎ. ಅಬ್ದುಲ್ ಅಝೀಝ್ ಪುಣಚ ಉದ್ಘಾಟಿಸಿದರು. ಕೃತಿಯ ಕರ್ತೃ ನೂರೇ ಅಜ್ಮೀರ್, ಕಾರ್ಯಕ್ರಮದ ಆಯೋಜಕರಾದ ಕರ್ನಾಟಕ ಭಾವೈಕ್ಯ ಪರಿಷತ್ ಅಧ್ಯಕ್ಷ ಕೆ.ಎಂ. ಇಕ್ಬಾಲ್ ಬಾಳಿಲ, ಪುತ್ತೂರು ಪೊಲೀಸ್ ಠಾಣೆಯ ಉಪನಿರೀಕ್ಷಕ…
ಮಂಗಳೂರು : ನಿವೃತ್ತ ಬ್ಯಾಂಕ್ ಉದ್ಯೋಗಿ ಹಾಗೂ ಮಂಗಳೂರು ಸೀನಿಯರ್ ಸಿಟಿಜನ್ಸ್ ಇದರ ಸದಸ್ಯರಾದ ಕೆ. ರಾಧಾಕೃಷ್ಣ ರಾವ್ ಇವರ ಆಯ್ದ ಕಥೆಗಳನ್ನು ಶ್ರೀಮತಿ ರೋಹಿಣಿಯವರು ಸಂಪಾದಿಸಿದ್ದು, ಆಕೃತಿ ಆಶಯ ಪಬ್ಲಿಕೇಶನ್ಸ್ ವತಿಯಿಂದ “ರಾಯರ ಕಥೆಗಳು” ಎಂಬ ಕಥಾಸಂಕಲನವಾಗಿ ದಿನಾಂಕ 28 ಡಿಸೆಂಬರ್ 2024ರಂದು ಬಲ್ಮಠದ ಸಹೋದಯ ಸಭಾಂಗಣದಲ್ಲಿ ಲೋಕಾರ್ಪಣೆಗೊಂಡಿತು. ಕರ್ಣಾಟಕ ಬ್ಯಾಂಕ್ ಇದರ ಮಾಜಿ ಅಧ್ಯಕ್ಷರಾದ ಶ್ರೀ ಮಹಾಬಲೇಶ್ವರ ಭಟ್ ಕೃತಿ ಲೋಕಾರ್ಪಣೆಗೊಳಿಸಿದರು. ಕೃತಿಯ ಕುರಿತಾಗಿ ಪ್ರಕಾಶಕರಾದ ಕಲ್ಲೂರು ನಾಗೇಶ ಮಾತನಾಡಿ “ರಾಧಾಕೃಷ್ಣರು ಆಳವಾದ ಜೀವನಾನುಭವ ಉಳ್ಳವರು. ಅವರ ಕಥೆಗಳನ್ನು ಗಮನಿಸಿದರೆ ಅವರು ಕೇವಲ ಕಥೆಗಾಗಿ ಕಥೆ ಬರೆಯದೆ, ಅವರು ಕಂಡುಂಡ ಅನುಭವಗಳನ್ನು ಮುಂದಿನ ತಲೆಮಾರಿಗೆ ದಾಟಿಸಲು ಬರೆದಿದ್ದಾರೆ. ಅವರ ಕಥೆಗಳು ಹೆಚ್ಚಾಗಿ ಕುಟುಂಬ ಜೀವನದ ಆಗುಹೋಗುಗಳು, ಸಂಸಾರ ನಿರ್ವಹಣೆ, ಸಾಮಾಜಿಕ ಸಂಬಂಧಗಳು ಗಂಡು ಹೆಣ್ಣಿನ ಸಾಮರಸ್ಯ, ವೈರುಧ್ಯ, ಹೀಗೆ ಮಾನವೀಯ ಮೌಲ್ಯಗಳನ್ನು ತಿಳಿಹೇಳುವ ರೀತಿಯಲ್ಲೇ ಸಾಗುತ್ತವೆ. ವಿಜ್ಞಾನ ಪದವೀಧರರಾದರೂ ಅವರು ಸಾಹಿತ್ಯ, ಭಾಷಾ ಶಾಸ್ತ್ರ, ಶಿಕ್ಷಣ, ಸಂಗೀತ, ಕ್ರೀಡೆ…
ಬೆಂಗಳೂರಿನಲ್ಲಿ ನೃತ್ಯ ಚಟುವಟಿಕೆಗಳು ನಡೆಯುತ್ತಲೇ ಇರುತ್ತವೆ. ಕೇವಲ ವೇದಿಕೆಯ ಮೇಲೆ ನೃತ್ಯ ಪ್ರದರ್ಶನವೊಂದೇ ನೃತ್ಯಕಲಾವಿದರ ಗುರಿಯಾಗಿರಬಾರದು. ನೃತ್ಯ ಮಾಡಲು ತಕ್ಕ ಅಂಗಸೌಷ್ಟವ, ಪ್ರದರ್ಶನಕ್ಕೆ ಅಗತ್ಯವಾದ ಉತ್ತಮ ಶಿಕ್ಷಣ -ಅಭ್ಯಾಸವಷ್ಟೇ ಆಗದೇ, ಸಮಗ್ರ ಬೆಳವಣಿಗೆಯ ಕಡೆ ಆದ್ಯ ಗಮನ ನೀಡಬೇಕಾದ್ದು ಅವಶ್ಯ ಎಂಬುದನ್ನು ಮನಗಾಣಿಸಿದ್ದು, ಇತ್ತೀಚೆಗೆ ನಡೆದ ‘ಸಾಧನ ಸಂಗಮ ಡಾನ್ಸ್ ಸೆಂಟರ್’ ಇದರ ‘ಮುಕುಲ ನೃತ್ಯೋತ್ಸವ’. ಕಾಲ ಕಾಲಕ್ಕೆ ಹೊಸ ಚಿಂತನೆಗಳು, ಪ್ರಯೋಗ-ಪ್ರಯತ್ನಗಳಿಂದ ನೂತನ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಂಡು ಬರುತ್ತಿರುವ ಬಸವೇಶ್ವರ ನಗರದ ಖ್ಯಾತ ನೃತ್ಯ ಸಂಸ್ಥೆ ‘ಸಾಧನ ಸಂಗಮ’ದ ಹಿಂದಿನ ಧೀ ಶಕ್ತಿ, ಅನುಭವ ಭಂಡಾರ ಖ್ಯಾತ ನೃತ್ಯಜ್ಞೆ ವಿ. ಜ್ಯೋತಿ ಪಟ್ಟಾಭಿರಾಮ್. ಅವರದು ಸಮಗ್ರ ದೃಷ್ಟಿ. ಅಂತಸ್ಸತ್ವ ಬೆಳೆಸುವ ಸುತ್ಯಾರ್ಹ ಪ್ರಯತ್ನ- ಸಾಧನ ಸಂಗಮದ ‘ಮುಕುಲ ನೃತ್ಯೋತ್ಸವ’ ಇದಕ್ಕೆ ಸಾಕ್ಷಿ. ಉದಯೋನ್ಮುಖ ಕಲಾವಿದರಾಗಿದ್ದಾಗಲೇ ಅವರನ್ನು ಸಂಪೂರ್ಣ ಜ್ಞಾನಾರ್ಜನೆಯಿಂದ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸಂಸ್ಥೆ ಪ್ರತಿ ವರ್ಷ ಅನೇಕ ವಿಧವಾದ ಚಿಂತನೆಗಳಿಂದ ಹೂರಣಗೊಂಡ ನೃತ್ಯ ಕಾರ್ಯಕ್ರಮವನ್ನು ಕಳೆದ 23 ವರ್ಷಗಳಿಂದ ವಿಶಿಷ್ಟ…
ಮಂಗಳೂರು : ಅಕ್ಕ ಮಹಾದೇವಿ ವೀರಶೈವ ಮಹಿಳಾ ಸಂಘ (ರಿ.) ಇದರ ವತಿಯಿಂದ ‘ರಾಜ್ಯಮಟ್ಟದ ವಚನ ಸಾಹಿತ್ಯ ಸಮ್ಮೇಳನ’ವನ್ನು ದಿನಾಂಕ 04 ಜನವರಿ 2025ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದ್ದು, ಡಾ. ಅರವಿಂದ್ ಜತ್ತಿ ಇವರು ಸಮ್ಮೇಳನಾಧ್ಯಕ್ಷತೆ ವಹಿಸಲಿದ್ದಾರೆ. ‘ವಚನ ಸಾಹಿತ್ಯ ದಿಬ್ಬಣ’ವು ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ನಡೆಯಲಿದ್ದು, ಆಡಳಿತ ಮೊಕ್ತೇಸರರಾದ ಶ್ರೀ ರಾಘವೇಂದ್ರ ಶಾಸ್ತ್ರಿ ಉದ್ಘಾಟನೆ ಮಾಡಲಿರುವರು. ಅನುಭವ ಸಂಗಮ ವೇದಿಕೆಯಲ್ಲಿ ಬೆಳಿಗ್ಗೆ 9-30 ಗಂಟೆಗೆ ಶ್ರೀ ಸೂರ್ಯ ಬಸಪ್ಪಕಡಿ ಇವರಿಂದ ವಚನ ಗಾಯನ ಪ್ರಸ್ತುತಗೊಳ್ಳಲಿದೆ. ಅಲ್ಲಮಪ್ರಭು ವೇದಿಕೆಯಲ್ಲಿ ಸಮೂಹ ವಚನ ಗಾಯನ ಸ್ಪರ್ಧೆ ಮತ್ತು ಸಮೂಹ ವಚನ ನೃತ್ಯ ಸ್ಪರ್ಧೆ ನಡೆಯಲಿದೆ. ಕುದ್ಮುಲ್ ರಂಗರಾವ್ ಪುರಭವನದಲ್ಲಿ ಬೆಳಗ್ಗೆ 10-00 ಗಂಟೆಗೆ ಧ್ವಜಾರೋಹಣ ಮತ್ತು ಉದ್ಘಾಟನಾ ಸಮಾರಂಭದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ, ವಸ್ತು ಪ್ರದರ್ಶನ ಉದ್ಘಾಟನೆ, ವಸ್ತು ಮಾರಾಟ ಮಳಿಗೆ ಉದ್ಘಾಟನೆ, ಸಾಕ್ಷ್ಯ ಚಿತ್ರ ಉದ್ಘಾಟನೆ ನಡೆಯಲಿದೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಹಾಗೂ ಸಂಘಗಳನ್ನು…
ಮಂಗಳೂರು : ಎರಡು ವರ್ಷಗಳ ಹಿಂದೆ ಅಗಲಿದ ಯುವ ರಂಗಕರ್ಮಿ ಮತ್ತು ನಂದಗೋಕುಲದ ವ್ಯವಸ್ಥಾಪಕ ಕನಸು ಕಾರ್ತಿಕ್ ನೆನಪಿನಲ್ಲಿ ಅರೆಹೊಳೆ ಪ್ರತಿಷ್ಠಾನ ನೀಡುವ ‘ಕನಸು ಕಾರ್ತಿಕ್ ಯುವ ರಂಗ ಪುರಸ್ಕಾರ’ಕ್ಕೆ ನಿರ್ದೇಶಕ ಹಾಗೂ ನಟರಾದ ಭುವನ್ ಮಣಿಪಾಲ್ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ರೂಪಾಯಿ ಐದು ಸಾವಿರ ನಗದು ಬಹುಮಾನ ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ. ಶೀಘ್ರದಲ್ಲೇ ನಡೆಯಲಿರುವ ನಾಟಕೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅರೆಹೊಳೆ ಪ್ರತಿಷ್ಠಾನದ ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು ತಿಳಿಸಿದ್ದಾರೆ. ಭುವನ್ ಮಣಿಪಾಲ್ : ‘ನೀನಾಸಂ’ ಪದವೀಧರರಾದ ಭುವನ್ ಮಣಿಪಾಲ್ ಇವರು ರಂಗ ಅಧ್ಯಯನ ಕೇಂದ್ರ ಕುಂದಾಪುರ ಇಲ್ಲಿ ರಂಗ ಅಧ್ಯಾಪಕರಾಗಿ ಅನೇಕ ವಿದ್ಯಾರ್ಥಿಗಳಿಗೆ ರಂಗ ನಟನೆಯ ಅಭ್ಯಾಸ ನೀಡಿದ್ದಾರೆ. ಸಂಗಮ ಕಲಾವಿದರು (ರಿ.) ಮಣಿಪಾಲ, ರಥಬೀದಿ ಗೆಳೆಯರು (ರಿ.) ಉಡುಪಿ, ಚಿನ್ನಾರಿ ನಾಟಕ ತಂಡ ಮಣಿಪಾಲ, ಕುಸುಮ ಸಾರಂಗ ಸುಬ್ರಹ್ಮಣ್ಯ, ಸುರಭಿ ಬೈಂದೂರು, ನೃತ್ಯ ನಿಕೇತನ ಕೊಡವೂರು ಉಡುಪಿ ಮುಂತಾದ ಸಂಸ್ಥೆಗಳಲ್ಲಿ ನಟರಾಗಿ, ರಂಗ ವಿನ್ಯಾಸಕರಾಗಿ ಕಾರ್ಯ ನಿರ್ವಹಿಸಿದ…
ಮಂಗಳೂರು : ನೃತ್ಯಗುರು ಕಮಲಾ ಭಟ್ ಇವರ ಶಿಷ್ಯ ವರ್ಗದವರು ಹಮ್ಮಿಕೊಂಡಿದ್ದ ನುಡಿ ನಮನ ಕಾರ್ಯಕ್ರಮವು ದಿನಾಂಕ 29 ಡಿಸೆಂಬರ್ 2024ರಂದು ಉರ್ವದ ಗೋಕುಲ ಕಲ್ಯಾಣ ಮಂಟಪದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದ ಕಟೀಲಿನ ವೇದಮೂರ್ತಿ ಕಮಲಾದೇವಿ ಪ್ರಸಾದ್ ಆಸ್ರಣ್ಣ “ನಾಲ್ಕು ದಶಕದ ಹಿಂದೆ ನಗರದಲ್ಲಿ ನಾಟ್ಯದ ಮೂಲಕ ಕಲೆಯ ದೀಪ ಬೆಳಗಿಸಿ ಅಸಂಖ್ಯಾತ ಶಿಷ್ಯ ವರ್ಗವನ್ನು ಹೊಂದಿ, ಕಲಾ ಬದುಕಿನಲ್ಲಿ ಸಾರ್ಥಕ್ಯ ಕಂಡು ಇದೀಗ ದೇವರ ಪಾದ ಸೇರಿದ ಗುರು ಕಮಲ ಭಟ್ ಸದಾ ಸ್ಮರಣೀಯರು. ಹುಟ್ಟಿದ ಮನುಷ್ಯನಿಗೆ ಸಾವು ನಿಶ್ಚಿತ. ಆದರೆ ಇವೆರಡುಗಳ ಮಧ್ಯೆ ಬದುಕನ್ನು ಕಟ್ಟಿಕೊಂಡು ಕಲಾಮಾತೆಯ ಸೇವೆಯನ್ನು ಮಾಡುತ್ತ, ಶ್ರೀ ಕ್ಷೇತ್ರ ಕಟೀಲಿನ ಪರಮ ಭಕ್ತೆ ಕಮಲ ಭಟ್ ಅವರಿಗೆ ಜಗನ್ಮಾತೆಯು ಸದ್ಗತಿ ನೀಡಲಿ, ಅವರು ಹಾಕಿ ಕೊಟ್ಟ ದಾರಿಯಲ್ಲಿ ಅವರ ಶಿಷ್ಯರು ಮುನ್ನಡೆಯಲು ದೇವರ ಆಶೀರ್ವಾದ ಸದಾ ಇರಲಿ” ಎಂದು ನುಡಿದರು. ಪ್ರದೀಪ್ ಕುಮಾರ್’ ಕಲ್ಕೂರ ಮಾತನಾಡಿ, “ಕಲಾಸೇವೆ ತನ್ನ…
ಬೆಂಗಳೂರು: ‘ದ್ವಾರನಕುಂಟೆ ಪಾತಣ್ಣ ಪ್ರತಿಷ್ಠಾನ’ವು ರಾಜ್ಯಮಟ್ಟದ ಅತ್ಯುತ್ತಮ ಕಾದಂಬರಿ ಪ್ರಶಸ್ತಿಗಾಗಿ ಲೇಖಕರು ಮತ್ತು ಪ್ರಕಾಶಕರಿಂದ ಕಾದಂಬರಿಗಳನ್ನು ಆಹ್ವಾನಿಸಿದೆ. ಪ್ರಶಸ್ತಿಯು ರೂಪಾಯಿ ಇಪ್ಪತೈದು ಸಾವಿರ ನಗದು ಬಹುಮಾನ ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಕಾದಂಬರಿಯು 2024ರಲ್ಲಿ ಪ್ರಕಟವಾಗಿರಬೇಕು. ಕಾದಂಬರಿಯ ಮೂರು ಪ್ರತಿಗಳನ್ನು ದಿನಾಂಕ 30 ಜನವರಿ 2025ರ ಒಳಗಾಗಿ ಈ ಕೆಳಗೆ ನೀಡಿರುವ ವಿಳಾಸಕ್ಕೆ ಕಳುಹಿಸಬೇಕೆಂದು ಪ್ರತಿಷ್ಠಾನದ ಅಧ್ಯಕ್ಷರಾದ ಬಿ. ಎಂ. ಹನೀಫ್ ತಿಳಿಸಿದ್ದಾರೆ. ಪುಸ್ತಕ ಕಳುಹಿಸಬೇಕಾದ ವಿಳಾಸ: ಅಧ್ಯಕ್ಷರು, ದ್ವಾರನಕುಂಟೆ ಪಾತಣ್ಣ ಪ್ರತಿಷ್ಠಾನ, ನಂ. 118, ‘ಹೊಂಬೆಳಕು’, 5ನೇ ಕ್ರಾಸ್, 1ನೇ ಬ್ಲಾಕ್, ಎಚ್.ಎಂ.ಟಿ . ಲೇಔಟ್, ನಾಗಸಂದ್ರ ಅಂಚೆ, ಬೆಂಗಳೂರು 560073. ಹೆಚ್ಚಿನ ಮಾಹಿತಿಗಾಗಿ : 9686073837, 7760350244
ರಂಗಭೂಮಿಯ ಸೌಂದರ್ಯ ಇರುವುದು ಅದರೊಳಗಿನ ಭಾವಾಭಿವ್ಯಕ್ತಿ ಹಾಗೂ ಆಂಗಿಕ ಅಭಿನಯ ಚತುರತೆಯ ವೈವಿಧ್ಯತೆಗಳಲ್ಲಿ. ಈ ಕಲಾಪ್ರಕಾರದ ಅಂತಃಸತ್ವ ಅಡಗಿರುವುದು ಪ್ರಯೋಗಶೀಲತೆಯಲ್ಲಿ. ಈ ಮೂರೂ ಗುಣಲಕ್ಷಣಗಳನ್ನು ಮೈಗೂಡಿಸಿಕೊಳ್ಳುತ್ತಲೇ ಬೆಳೆಯುವ ರಂಗಭೂಮಿಗೆ ಚಲನಶೀಲತೆಯನ್ನು ಕಾಪಾಡಿಕೊಂಡು ಬರಲು ನೆರವಾಗುವುದು ರಂಗ ಕಲಾವಿದರ ಸೃಜನಶೀಲ ಪ್ರಯತ್ನಗಳು ಮತ್ತು ಹೊಸ ಹೊಸ ಪ್ರಯತ್ನಗಳು. ಕನ್ನಡ ರಂಗಭೂಮಿ ತನ್ನ ಈ ವೈವಿಧ್ಯತೆಗಳಿಂದಲೇ ಇಂದಿಗೂ ಸಹ ಸಾಂಸ್ಕೃತಿಕ ಜಗತ್ತಿನಲ್ಲಿ ಪ್ರಶಸ್ತ ಸ್ಥಾನವನ್ನು ಉಳಿಸಿಕೊಂಡಿದೆ, ಬೆಳೆಸುತ್ತಲೂ ಇದೆ. ಹವ್ಯಾಸಿ ರಂಗಭೂಮಿ ಉದಯಿಸಿದ ನಂತರದಲ್ಲಿ ರಂಗಕಲೆ ಎನ್ನುವುದು ತನ್ನ ಸಾಂಸ್ಥಿಕ ನೆಲೆಯಿಂದ ಸಾಂಘಿಕ ನೆಲೆಗೆ ರೂಪಾಂತರಗೊಂಡಿರುವುದು ಕಳೆದ ಐದಾರು ದಶಕಗಳಲ್ಲಿ ಅಸಂಖ್ಯಾತ ಕಲಾವಿದರನ್ನು ಹುಟ್ಟುಹಾಕಿದೆ. ಕನ್ನಡದ ಹವ್ಯಾಸಿ ರಂಗಭೂಮಿ ತನ್ನೊಳಗೆ ಸೃಜಿಸಿದ ಕಲಾರಾಧಕರ-ಕಲಾವಿದರ ಒಂದು ತಲೆಮಾರು ಇಂದು ರಂಗಭೂಮಿಯನ್ನು ವಿಭಿನ್ನ ಆಯಾಮಗಳಲ್ಲಿ, ವಿವಿಧ ಮಜಲುಗಳಲ್ಲಿ ಶ್ರೀಸಾಮಾನ್ಯನ ಬಳಿಗೆ ಕೊಂಡೊಯ್ದಿದೆ. ಹೊರ ಸಮಾಜದ ಒಂದು ಪ್ರತಿಬಿಂಬವನ್ನು ರಂಗದ ಮೇಲೆ ಕಾಣುವ ಪ್ರಯತ್ನದಲ್ಲಿ ಹಲವು ರಂಗತಂಡಗಳು ತಮ್ಮದೇ ಆದ ವೈವಿಧ್ಯತೆಗಳೊಂದಿಗೆ ಚಲನಶೀಲವಾಗಿವೆ. ತಾನು ಪ್ರತಿನಿಧಿಸುವ ಸಮಾಜಕ್ಕೆ ಅಗತ್ಯವಾದ…
ಬೆಳಗಾವಿ : ರಂಗ ಸಂಪದ (ರಿ.) ಬೆಳಗಾವಿ ಇದರ ವತಿಯಿಂದ ‘ರಂಗ ಸಂಕ್ರಮಣ ನಾಟಕೋತ್ಸವ’ವನ್ನು ದಿನಾಂಕ 11 ಜನವರಿ 2025ರಿಂದ 14 ಜನವರಿ 2025ರವರೆಗೆ ಬೆಳಗಾವಿಯ ಲೋಕಮಾನ್ಯ ರಂಗ ಮಂದಿರದಲ್ಲಿ ಆಯೋಜಿಸಲಾಗಿದೆ. ದಿನಾಂಕ 11 ಜನವರಿ 2025ರಂದು ಧಾರವಾಡದ ‘ಅಭಿನಯ ಭಾರತಿ’ ತಂಡದ ಏಕವ್ಯಕ್ತಿ ಪ್ರದರ್ಶನ ಶ್ರೀಪತಿ ಮಂಜನಬೈಲು ನಿರ್ದೇಶನದಲ್ಲಿ ‘ಉರಿಯ ಉಯ್ಯಾಲೆ’ ನಾಟಕವನ್ನು ಜ್ಯೋತಿ ದೀಕ್ಷಿತ ಪುರಾಣಿಕ ಇವರು ಪ್ರಸ್ತುತ ಪಡಿಸಲಿದ್ದಾರೆ. ದಿನಾಂಕ 12 ಜನವರಿ 2025ರಂದು ಬೆಳಗಾವಿಯ ‘ರಂಗಸಂಪದ’ ತಂಡದಿಂದ ವೈಭವ ಲೋಕೂರ ಇವರ ನಿರ್ದೇಶನದಲ್ಲಿ ‘ಡಿಯರ್ ಅಜ್ಜೋ’ ಎಂಬ ನಾಟಕವನ್ನು ಅರವಿಂದ ಕುಲಕರ್ಣಿ ಮತ್ತು ಸ್ನೇಹ ಕುಲಕರ್ಣಿ ಇವರುಗಳು ಅಭಿನಯಿಸಲಿದ್ದಾರೆ. ದಿನಾಂಕ 13 ಜನವರಿ 2025ರಂದು ಮಳವಳ್ಳಿಯ ‘ರಂಗಬಂಡಿ’ ತಂಡದ ಏಕವ್ಯಕ್ತಿ ಪ್ರದರ್ಶನ ಮಧು ಮಳವಳ್ಳಿ ಇವರ ನಿರ್ದೇಶನದಲ್ಲಿ ‘ಮಧುರ ಮಂಡೋಡರಿ’ ನಾಟಕವನ್ನು ವನೀತಾ ರಾಜೇಶ ಇವರು ಪ್ರಸ್ತುತ ಪಡಿಸಲಿದ್ದಾರೆ. ದಿನಾಂಕ 14 ಜನವರಿ 2025ರಂದು ಧಾರವಾಡದ ಆಟಮಾಟ ತಂಡದವರು ಮಹಾದೇವ ಹಡಪದ ಇವರ ನಿರ್ದೇಶನದಲ್ಲಿ ಬಸವರಾಜ…
ಉಡುಪಿ : ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿರುವ ಕುಮಾರಿ ಮನ್ವಿತಾ ಎಸ್. ಇವರು ಈ ಬಾರಿಯ ಉಡುಪಿ ಜಿಲ್ಲಾ 10ನೇ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ ಆಯ್ಕೆಯಾಗಿರುತ್ತಾರೆ. ಶ್ರೀ ಸೂರ್ಯಕಾಂತ ಬಿ. ಬಸ್ರೂರು ಹಾಗೂ ಶ್ರೀಮತಿ ಲತಾ ದಂಪತಿಗಳ ಹೆಮ್ಮೆಯ ಪುತ್ರಿಯಾದ ಮನ್ವಿತಾ ಎಸ್. ಚಿಕ್ಕ ವಯಸ್ಸಿನಲ್ಲೇ ಕಲೆಯಲ್ಲಿ ಆಸಕ್ತಿ ಹೊಂದಿದ್ದು, ತನ್ನ 4ನೇ ವಯಸ್ಸಿಗೆ ಯಕ್ಷಗಾನ ಗೆಜ್ಜೆ ಕಟ್ಟಿ ವೇದಿಕೆ ಏರಿ ನೃತ್ಯ ಪ್ರದರ್ಶನ ನೀಡಿರುತ್ತಾರೆ. ಭರತನಾಟ್ಯದಲ್ಲಿ ಜ್ಯೂನಿಯರ್ ವಿಭಾಗದಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಸೀನಿಯರ್ ವಿಭಾಗದಲ್ಲಿ ತರಬೇತಿ ಮುಂದುವರಿಸಿದ್ದಾರೆ. ಭಾಷಣ ಮತ್ತು ಕಾರ್ಯಕ್ರಮ ನಿರೂಪಣೆ ಈಕೆಯ ಪ್ರೀತಿಯ ಕ್ಷೇತ್ರವಾಗಿದ್ದು, ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನವನ್ನು ಗಿಟ್ಟಿಸಿಕೊಂಡು ಜಿಲ್ಲಾ ಮಟ್ಟಕ್ಕೂ ಆಯ್ಕೆಯಾಗಿತ್ತಾರೆ. ಅಲ್ಲದೇ 2023-24ನೇ ಸಾಲಿನ ಮಕ್ಕಳ ಜಿಲ್ಲಾ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದ ನಿರೂಪಣೆಗೆ ಆಯ್ಕೆಯಾಗಿ ಉತ್ತಮ ನಿರೂಪಣೆಯಿಂದ ಜನಮನ ಗೆದ್ದಿರುವ ಇವರು ಕುಂದಾಪುರ ತಾಲೂಕು 9ನೇ ಕನ್ನಡ…