Author: roovari

ಮಂಗಳೂರು: ಹಿರಿಯ ಯಕ್ಷಗಾನ ಕಲಾವಿದ ಹಾಗೂ ಮಾಜಿ ಶಾಸಕ ಕುಂಬ್ಳೆ ಸುಂದರರಾವ್ ಅವರ ಸಂಸ್ಮರಣಾ ಕಾರ್ಯಕ್ರಮ ದಿನಾಂಕ 10-12-2023 ರಂದು ಸಂಜೆ ಘಂಟೆ 4.00ಕ್ಕೆ ನಗರದ ಉರ್ವಸ್ಟೋರಿನಲ್ಲಿರುವ ದೇವಾಂಗ ಸಭಾಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದ ಬಗ್ಗೆ ವಿವರ ನೀಡಿದ ಕಲಾವಿದ ಭಾಸ್ಕರ ರೈ ಕುಕ್ಕುವಳ್ಳಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣಪ್ರಾಂತ ಸಹ ಕಾರ್ಯವಾಹ ಪಿ.ಎಸ್.ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಸಭಾ ಕಾರ್ಯಕ್ರಮದಲ್ಲಿ ತೆಂಕುತಿಟ್ಟಿನ ಮೇರು ಕಲಾವಿದ ಕೆ. ಗೋವಿಂದ ಭಟ್ ಇವರಿಗೆ ಕುಂಬ್ಳೆ ಸುಂದರ ರಾವ್ ಸಂಸ್ಕರಣಾ ಪ್ರಶಸ್ತಿ ಪ್ರದಾನದೊಂದಿಗೆ ಗೌರವಧನ 25,000 ರೂಪಾಯಿ ನೀಡಿ ಗೌರವಿಸಲಾಗುವುದು ಎಂದರು. ಉದ್ಯಮಿ ಎಂ. ಮುರಳೀದರ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಕಾರ್ಯಕ್ರಮದಲ್ಲಿ ಉಡುಪಿಯ ಯಕ್ಷಗಾನ ಕಲಾ ರಂಗದ ಕಾರ್ಯದರ್ಶಿ ಮುರಳಿ ಕಡೇಕಾರ್ ಸಂಸ್ಕರಣಾ ಹಾಗೂ ಅಭಿನಂದನಾ ಭಾಷಣ ಮಾಡಲಿರುವರು. ಸಂಜೆ ಘಂಟೆ 4.00ರಿಂದ ಜಿಲ್ಲೆಯ ಪ್ರಸಿದ್ಧ ಅರ್ಥಧಾರಿಗಳಿಂದ ‘ಭರತಾಗಮನ’ ಯಕ್ಷಗಾನ ತಾಳಮದ್ದಳೆ ನಡೆಯಲಿದ್ದು, ಹಿಮ್ಮೇಳದಲ್ಲಿ ಭಾಗವತರಾಗಿ ಸರ್ವಶ್ರೀ ಬಲಿಪ…

Read More

ಕುಂಬಳೆ : ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಹಾಗೂ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಜಂಟಿ ಆಶ್ರಯದಲ್ಲಿ ಕಾಸರಗೋಡಿನ ಹಿರಿಯ ಸಾಹಿತಿ, ಶಿಕ್ಷಣ ತಜ್ಞ, ಸಂಘಟಕ, ವಿಶ್ರಾಂತ ಅಧ್ಯಾಪಕ ವಿ.ಬಿ. ಕುಳಮರ್ವ ಇವರ 70ನೇ ವರ್ಷಾಚರಣೆಯ ಅಂಗವಾಗಿ ‘ವಿ.ಬಿ. ಕುಳಮರ್ವ-70’ ಸಾಹಿತೋತ್ಸವ ಕಾರ್ಯಕ್ರಮವು ದಿನಾಂಕ 10-12-2023ನೇ ಆದಿತ್ಯವಾರ ಬೆಳಿಗ್ಗೆ ಗಂಟೆ 9.30ಕ್ಕೆ ವಿ.ಬಿ. ಕುಳಮರ್ವರ ಸ್ವಗೃಹವಾದ ಕುಂಬಳೆ ನಾರಾಯಣ ಮಂಗಳದ ಶ್ರೀನಿಧಿಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಶ್ರೀ ವಿ.ಬಿ. ಕುಳಮರ್ವ ಮತ್ತು ಶ್ರೀಮತಿ ಲಲಿತಾಲಕ್ಷ್ಮೀ ದಂಪತಿಯರು ಉದ್ಘಾಟನೆ ಮಾಡಲಿದ್ದು, ‘ಗಡಿನಾಡ ಸಾಹಿತ್ಯ ಶ್ರೀನಿಧಿ – ವಿ.ಬಿ. ಕುಳಮರ್ವ’ ಕೃತಿ ಬಿಡುಗಡೆ, ಗುರು ನಮನ, ಸನ್ಮಾನ ಮತ್ತು ಕಾಸರಗೋಡು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಸುಮಾರು 70 ಕವಿ ಮನಸ್ಸುಗಳ ಕವಿಗೋಷ್ಠಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ವಿಶ್ರಾಂತ ಪ್ರಾಂಶುಪಾಲ ಪ್ರೊ. ಪಿ.ಎನ್. ಮೂಡಿತ್ತಾಯ, ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಶಿವರಾಮ ಕಾಸರಗೋಡು, ದ.ಕ. ಜಿಲ್ಲಾ…

Read More

ಬೆಂಗಳೂರು : ‘ಪದ’ ಬೆಂಗಳೂರು ಆಯೋಜಿಸುವ ‘ಶಿಶಿರ ರಂಗೋತ್ಸವ’ದಲ್ಲಿ ಮಹಿಳಾ ಏಕವ್ಯಕ್ತಿ ನಾಟಕಗಳ ಮೂರು ಪ್ರದರ್ಶನಗಳು ದಿನಾಂಕ 10-12-2023ರ ಭಾನುವಾರದಂದು ಬೆಂಗಳೂರಿನ ಜೆ.ಸಿ.ರಸ್ತೆಯಲ್ಲಿರುವ ನಯನ ರಂಗಮಂದಿರದಲ್ಲಿ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ನಡೆಯಲಿದೆ. ಬೆಳಿಗ್ಗೆ 10.30 ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಹಿರಿಯ ರಂಗಕಲಾವಿದೆಯಾದ ಡಾ. ಲಕ್ಷ್ಮೀ ಚಂದ್ರಶೇಖರ್, ಲೇಖಕರು ಮತ್ತು ಕವಿಯತ್ರಿಯಾದ ವಸುಂಧರ, ಅಧಿಕಾರಿ ಕರ್ನಾಟಕ ಆಡಳಿತ ಸೇವೆ ಹಾಗೂ ರಂಗ ನಿರ್ದೇಶಕಿಯಾದ ಡಾ. ಸುಷ್ಮ ಎಸ್.ವಿ. ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಮಹಿಳಾ ಏಕವ್ಯಕ್ತಿ ನಾಟಕಗಳಾದ ‘ಅಧಿನಾಯಕಿ’, ‘ತಾಯಿಯಾಗುವುದೆಂದರೆ’ ಹಾಗೂ ‘ಸಕುಬಾಯಿ’ ಪ್ರದರ್ಶನಗೊಳ್ಳಲಿದೆ. ಬೆಳಿಗ್ಗೆ ಘಂಟೆ 11.30 ರಿಂದ ಎಂ.ಎಸ್. ಲಕ್ಷ್ಮೀ ಕಾರಂತ ಅಭಿನಯಿಸುವ ‘ಅಧಿನಾಯಕಿ’ ನಾಟಕ ಪ್ರದರ್ಶನಗೊಳ್ಳಲಿದ್ದು, ನಾಟಕದ ರಚನೆ, ವಿನ್ಯಾಸ ಮತ್ತು ನಿರ್ದೇಶನ ಡಾ. ಬೇಲೂರು ರಘುನಂದನ್ ಅವರದ್ದು. ವೈಷ್ಣವ ರಾವ್ ಬಿ. ಎಸ್. ಸಂಗೀತ ನಿರ್ದೇಶನ ಮತ್ತು ಗಾಯನ ಮಾಡಲಿದ್ದು, ಬೆಳಕಿನ ವಿನ್ಯಾಸ ಮತ್ತು ನಿರ್ವಹಣೆ ರವಿಶಂಕರ್ ಬೆಳಕು ಅವರದ್ದು. ಅಧಿನಾಯಕಿ…

Read More

ಕೇರಳ : ದೇವ್ ದಕ್ಷ ಕಲಾಕ್ಷೇತ್ರ, ಪುಲ್ಪಲ್ಲಿ ನೃತ್ಯ ಸಂಸ್ಥೆಯ ಮುಖ್ಯಸ್ಥರಾದ ನೃತ್ಯ ಗುರು ಶ್ರೀಮತಿ ರೆಸ್ಮಿ ಬಾಬು ಇವರು ದಿನಾಂಕ 10-12-2023ರ ಭಾನುವಾರದಂದು ಒಂದು ದಿನದ ‘ಭರತನಾಟ್ಯ ಕಾರ್ಯಾಗಾರ’ವನ್ನು ಹಮ್ಮಿಕೊಂಡಿದ್ದಾರೆ. ಡಿಸೆಂಬರ್ 12 ಮತ್ತು 13ರಂದು ಕೇರಳ ನೃತ್ಯ ಕಲಾವಿದರ ಒಕ್ಕೂಟ ಮತ್ತು ದೇವ್ ದಕ್ಷ ಕಲಾಕ್ಷೇತ್ರದ ಜಂಟಿ ನೇತೃತ್ವದಲ್ಲಿ ಎರಡು ದಿನಗಳ ಅವಧಿಯ ‘ನಟ್ಟುವಾಂಗಂ ಕಾರ್ಯಾಗಾರ’ವು ನಡೆಯಲಿದೆ. ಈ ಎರಡೂ ಕಾರ್ಯಾಗಾರಗಳಲ್ಲಿ ಸೃಜನಶೀಲ ಯುವ ವಿದ್ವಾಂಸ ಹಾಗೂ ಪ್ರತಿಭಾವಂತರಾದ ವಿದ್ವಾನ್ ಮಂಜುನಾಥ ಎನ್. ಪುತ್ತೂರು ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ.

Read More

ಸಾಗರ : ನಾಟ್ಯ ತರಂಗ ಟ್ರಸ್ಟ್ (ರಿ.) ಸಾಗರ, ಇದರ ವತಿಯಿಂದ ‘ರಾಷ್ಟ್ರೀಯ ಸಂಸ್ಕೃತಿ ಸಪ್ತಾಹ 2023’ವು ದಿನಾಂಕ 09-12-2023ರಿಂದ 15-12-2023ರವರೆಗೆ ಪ್ರತೀ ದಿನ ಸಂಜೆ 5.30ಕ್ಕೆ ಸಾಗರ ಶ್ರೀನಗರದ ನೃತ್ಯ ಭಾಸ್ಕರದಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ‘ಸಾಂಸ್ಕೃತಿಕ ಸಾರಥಿ ಪ್ರಶಸ್ತಿ’ ಪ್ರದಾನ ಹಾಗೂ ನಾಟ್ಯ ತರಂಗ ನೃತ್ಯಾಭ್ಯಾಸಿಗಳಿಂದ ‘ನೃತ್ಯಾಂಕುರ’ ಪ್ರದರ್ಶನವಿದೆ. ದಿನಾಂಕ 09-12-2023ರಂದು ಸಾಗರ ಹೊಸನಗರದ ಶಾಸಕರಾದ ಶ್ರೀ ಗೋಪಾಲಕೃಷ್ಣ ಬೇಳೂರು ಇವರಿಂದ ಉದ್ಘಾಟನೆಗೊಳ್ಳಲಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಗರ ನಗರ ಸಭೆ ಸದಸ್ಯರಾದ ಶ್ರೀ ಗಣೇಶ್ ಪ್ರಸಾದ್ ವಹಿಸಲಿರುವರು. ಸಂಜೆ 6ರಿಂದ ಮುಂಬೈಯ ವೈಭವ ಆರೇಕರ್ ಇವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ. ದಿನಾಂಕ 10-12-2023ರಂದು ಅಂತರಾಷ್ಟ್ರೀಯ ನೃತ್ಯ ಕಲಾವಿದರು, ಪದ್ಮಾಭೂಷಣ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ. ಪದ್ಮಾ ಸುಬ್ರಮಣ್ಯಂ ಚೆನ್ನೈ ಇವರ ಘನ ಉಪಸಿತ್ಥಿಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶಿವ ಮೊಗ್ಗದ ವಿದ್ವಾನ್ ನಾರಾಯಣ ಭಟ್ ಮತ್ತು ಚೆನ್ನೈಯ ಡಾ. ಗಾಯತ್ರಿ ಕಣ್ಣನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ‘ಭರತ…

Read More

ಬೆಂಗಳೂರು: ಹಿರಿಯ ನಾಟ್ಯಗುರು ವಿದ್ವಾನ್ ಪುಲಿಕೇಶಿ ಕಸ್ತೂರಿ ಅವರ ನುರಿತ ಗರಡಿಯಲ್ಲಿ ರೂಹು ತಳೆದ ಕಲಾಶಿಲ್ಪ ಕು. ಜೆ. ಜಸ್ವಂತ್ ಉದಯೋನ್ಮುಖ ಭರವಸೆಯ ನೃತ್ಯಕಲಾವಿದ. ಕಳೆದ 12 ವರ್ಷಗಳಿಂದ ನಿಷ್ಠೆಯಿಂದ ನೃತ್ಯ ಕಲಿಯುತ್ತಿರುವ ಜಷ್ವಂತ್, ಅಷ್ಟೇ ಆಸಕ್ತಿಯಿಂದ ಮೃದಂಗವಾದನವನ್ನೂ ಅಭ್ಯಾಸ ಮಾಡುತ್ತಿರುವ ಬಹುಮುಖ ಪ್ರತಿಭೆ. ಶ್ರೀ ರಾಜೇಂದ್ರನ್ ಮತ್ತು ಜಯಕುಮಾರಿ ದಂಪತಿಗಳ ಪುತ್ರನಾದ ಇವರು ಈಗಾಗಲೇ ‘ಗೆಜ್ಜೆಪೂಜೆ’ಯನ್ನು ನೆರವೇರಿಸಿಕೊಂಡಿದ್ದು, ನಾಡಿನಾದ್ಯಂತ ನೃತ್ಯಪ್ರದರ್ಶನಗಳನ್ನು ನೀಡಿದ್ದಾರೆ. ಓದಿನಲ್ಲೂ ಸಮಾನ ಆಸಕ್ತಿ ಹೊಂದಿರುವ ಜಷ್ವಂತ್ ಎಂಜಿನಿಯರಿಂಗ್ ಅಂತಿಮ ವರ್ಷದ ವಿದ್ಯಾರ್ಥಿ. ಇದೀಗ ಇವರು ಕಲಾರಸಿಕರ ಸಮ್ಮುಖ ತನ್ನ ನೃತ್ಯ ನೈಪುಣ್ಯವನ್ನು ಪ್ರದರ್ಶಿಸಲು ಸಜ್ಜಾಗಿದ್ದಾರೆ. ದಿನಾಂಕ 09-12-2023ನೇ ಶನಿವಾರ ಸಂಜೆ 5 ಗಂಟೆಗೆ, ವೈಯಾಲಿಕಾವಲ್ಲಿನಲ್ಲಿರುವ ‘ಶ್ರೀ ಕೃಷ್ಣದೇವರಾಯ ರಂಗಮಂದಿರ’ದಲ್ಲಿ ವಿದ್ಯುಕ್ತವಾಗಿ ‘ರಂಗಪ್ರವೇಶ’ ಮಾಡಲಿದ್ದಾನೆ. ಈ ಪ್ರತಿಭಾನ್ವಿತ ಕಲಾವಿದ ಜಷ್ವಂತರ ಸುಮನೋಹರ ನೃತ್ಯವಲ್ಲರಿಯನ್ನು ವೀಕ್ಷಿಸಲು ಎಲ್ಲರಿಗೂ ಸುಸ್ವಾಗತ. ಜಷ್ವಂತ್ ತನ್ನ 9ನೆಯ ವಯಸ್ಸಿನಿಂದಲೇ ಭರತನಾಟ್ಯ ಮತ್ತು ಗುರು ಜಿ.ಎಸ್. ನಾಗರಾಜರ ಬಳಿ ಮೃದಂಗ ಕಲಿಯುತ್ತಿದ್ದು, ಕರ್ನಾಟಕ ಸರ್ಕಾರ ನಡೆಸುವ…

Read More

ಕುಂದಾಪುರ: “ಮಲ್ಯಾಡಿ ಯಕ್ಷೋತ್ಸವ” ಹಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಹಲವು ಜನರ what’s up ಸ್ಟೇಟಸ್ ನಲ್ಲಿ ರಾರಾಜಿಸುತ್ತಿರುವ ಯಕ್ಷಗಾನದ ಪೋಸ್ಟರ್. ಪ್ರಶಾಂತ ಮಲ್ಯಾಡಿ – ಇಂದು ಯಕ್ಷವಲಯದಲ್ಲಿ ಚಿರಪರಿಚಿತ ಹೆಸರು. ಮಲ್ಯಾಡಿ ಅವರ ಕ್ಯಾಮರಾ ಕಣ್ಣುಗಳು ಅದೆಷ್ಟೊ ವೇಷಗಳನ್ನು ರಂಗಸ್ಥಳದ ಹೊರಗೆ ನಿಂತು ಸೆರೆಹಿಡಿದಿವೆ ಹಾಗೂ ೨ ವರ್ಷಗಳಿಂದ ಮಲ್ಯಾಡಿ ಲೈವ್ ಎಂಬ ವಾಹಿನಿಯಿಂದ ಅನೇಕ ಯಕ್ಷಗಾನವನ್ನು ಲೈವ್ ಮೂಲಕ ನೀಡಿ ಯಕ್ಷಗಾನದ ಕಂಪನ್ನು ಪ್ರೇಕ್ಷಕರಿಗೆ ಇನ್ನೂ ಹತ್ತಿರದಿಂದ ನೋಡುವ ಹಾಗೆ ಮಾಡಿದ ಕೀರ್ತಿ ಪ್ರಶಾಂತ ಮಲ್ಯಾಡಿ ಅವರಿಗೆ ಸಲ್ಲುತ್ತದೆ. 2015ರಲ್ಲಿ ಪೆರ್ಡೂರು ಮೇಳದ ಯಕ್ಷಗಾನವನ್ನು ಪ್ರಥಮ ಬಾರಿಗೆ ಸಂಘಟನೆ ಮಾಡಿ, 2017ರಲ್ಲಿ ಸಾಲಿಗ್ರಾಮ ಮೇಳ ಹಾಗೂ ತೆಂಕು ಬಡಗಿನ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಸಂಘಟನೆ ಮಾಡಿ, ಇದೀಗ ತೃತೀಯ ಬಾರಿಗೆ ಸಾಲಿಗ್ರಾಮ ಮೇಳ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಪೌರಾಣಿಕ ಯಕ್ಷಗಾನವನ್ನು ಕಲಾರಸಿಕರಿಗೆ ಒಂದು ಸುಂದರ ಯಕ್ಷ ರಾತ್ರಿಯನ್ನು ಸವಿಯಲು ಮತ್ತೆ ನಿಮ್ಮ ಮುಂದೆ ಬಂದಿದ್ದಾರೆ.…

Read More

ಮಂಗಳೂರು: ನಗರದ ಸಂತ ಅಲೋಶಿಯಸ್ ಕಾಲೇಜಿನ ಯಲ್.ಸಿ.ಆರ್.ಐ. ರಂಗಮಂದಿರದಲ್ಲಿ ಪಾಂಡಿಚೇರಿಯ ಆದಿಶಕ್ತಿ ಜಗತ್ಪ್ರಸಿದ್ಧ ರಂಗತಂಡದ ‘ಭೂಮಿ’(ಇಂಗ್ಲೀಷ್) ನಾಟಕವು ದಿನಾಂಕ 08-12-2023 ಶುಕ್ರವಾರ ಸಂಜೆ 7.00ಕ್ಕೆ ಸರಿಯಾಗಿ ನಡೆಯಲಿದೆ. ಸಂತ ಅಲೋಶಿಯಸ್ ಕಾಲೇಜಿನ ರಂಗ ಅಧ್ಯಯನ ಕೇಂದ್ರದ ನೇತೃತ್ವದ ಜೊತೆಯಲ್ಲಿ ಕಾಲೇಜಿನ ಕನ್ನಡ ವಿಭಾಗ, ಅರೆಹೊಳೆ ಪ್ರತಿಷ್ಠಾನ ಮತ್ತು ಅಸ್ಥಿತ್ವ ಮಂಗಳೂರು ಸಂಸ್ಥೆಗಳು ಒಂದಾಗಿ ಸೇರಿಕೊಂಡಿವೆ. ದೇಶದ ಶ್ರೇಷ್ಠ ಸೃಜನಶೀಲ ರಂಗಚಿಂತಕಿ, ರಂಗಶೋಧಕಿ ಮತ್ತು ರಂಗನಿರ್ದೇಶಕಿ ವೀಣಾ ಪಾಣಿ ಚಾವ್ಲಾ ಅವರು ಪಾಂಡಿಚೇರಿಯಲ್ಲಿ ಬೆಳೆಸಿದ ಪ್ರಖ್ಯಾತ ರಂಗಸಂಸ್ಥೆ ಆದಿಶಕ್ತಿ. ಬಾಲಿ, ಗಣಪತಿ, ಬೃಹನ್ನಳ ಮೊದಲಾದ ಈ ತಂಡದ ನಾಟಕಗಳು ದೇಶ ವಿದೇಶಗಳಲ್ಲಿ ಮಹತ್ವದ ರಂಗಪ್ರಯೋಗಗಳಾಗಿ ರಂಗಾಸಕ್ತರನ್ನು ಅಚ್ಚರಿಗೊಳಿಸಿವೆ. ವೀಣಾಪಾಣಿ ಚಾವ್ಲಾ ಅವರ ಗುರುತನದಲ್ಲಿ ಸುದೀರ್ಘ ವರ್ಷಗಳಲ್ಲಿ ಪಳಗಿದ ಪ್ರಬುದ್ಧ ಕಲಾವಿದರ ತಂಡವೇ ಆದಿಶಕ್ತಿಯ ಭದ್ರಬುನಾದಿಯಾಗಿದೆ. ನಟನೆಯ ಕ್ರಮ, ರಂಗವಿನ್ಯಾಸ, ಹೊಸಬಗೆಯಲ್ಲಿ ಪ್ರೇಕ್ಷಕನಿಗೆ ಚಿಂತನೆಗಳನ್ನು ಉಣಬಡಿಸುವ ಬಗೆ, ವಿನೂತನ ರಂಗಕಲ್ಪನೆ, ಪ್ರಚಲಿತ ಕಥಾವಸ್ತುವಿಗೆ ಕೊಡುವ ಹೊಸ ರಂಗಸ್ಪರ್ಶ ಇತ್ಯಾದಿಗಳಲ್ಲಿ ಆದಿಶಕ್ತಿಯು ದೇಶವಿದೇಶಗಳ ರಂಗಚಿಂತಕರ ಗಮನ…

Read More

ಕಾಸರಗೋಡು: ಕಾಸರಗೋಡು ಸಾಂಸ್ಕೃತಿಕ -ಸಾಹಿತ್ಯಕ ಸಂಸ್ಥೆ ರಂಗ ಚಿನ್ನಾರಿ ಮತ್ತು ಅದರ ಸಹ ಘಟಕಗಳಾದ ನಾರಿ ಚಿನ್ನಾರಿ, ಸ್ವರ ಚಿನ್ನಾರಿ ಜೊತೆಗೆ ಕಾಸರಗೋಡಿನ ಕನ್ನಡ ಪರ ಸಂಘಟನೆಗಳ ಸಹಯೋಗದೊಂದಿಗೆ ಆಯೋಜಿಸಿದ 2021ನೇ ಸಾಲಿನ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ವಿಮರ್ಶಕ ಪ್ರಶಸ್ತಿಗೆ ಭಾಜನರಾದ ಸುಬ್ರಹ್ಮಣ್ಯ ನಾರಾಯಣ ಬಾಡೂರು (ಬಾನಾಸು) ಅವರಿಗೆ ಹುಟ್ಟೂರ ಗೌರವ ಪ್ರಶಸ್ತಿ ಕಾರ್ಯಕ್ರಮವು ದಿನಾಂಕ 01-12-2023 ರಂದು ಕಾಸರಗೋಡಿನ ಪದ್ಮಗಿರಿ ಕಲಾ ಕುಟೀರದಲ್ಲಿ ನಡೆಯಿತು. ಹುಟ್ಟೂರ ಗೌರವ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಎಡನೀರು ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರು ಮಾತನಾಡಿ “ಕಾಸರಗೋಡಿನ ಕನ್ನಡ ಪರ ಸಂಘಟನೆಗಳು ಕೈ ಜೋಡಿಸಿದರೆ ಕಾಸರಗೋಡಿನ ಕನ್ನಡಿಗರ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಬಹುದು. ಸುಬ್ರಹ್ಮಣ್ಯ ಬಾಡೂರು ಅವರ ರಾಷ್ಟ್ರ ಮಟ್ಟದ ಸಾಧನೆ ಕಾಸರಗೋಡಿನ ಕನ್ನಡಿಗರಿಗೆಲ್ಲ ಕೀರ್ತಿ ತಂದಿದೆ.” ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಖ್ಯಾತ ಚಲನಚಿತ್ರ ಹಾಗೂ ರಂಗಭೂಮಿ ನಟಿಯಾದ ಶಾಸಕಿ ಉಮಾಶ್ರೀ ಮಾತನಾಡಿ…

Read More

ಮಂಗಳೂರು: ಸಂಗೀತ ವಿದ್ಯಾನಿಲಯದ 30ನೇ ವಾರ್ಷಿಕೋತ್ಸವದ ಪ್ರಯುಕ್ತ ‘ಸಂಗೀತೋತ್ಸವ’ವು ದಿನಾಂಕ 03-12-2023ರಂದು ಡಾನ್ ಬೊಸ್ಕೋ ಹಾಲ್ ಮತ್ತು ಕದ್ರಿ ನೃತ್ಯ ವಿದ್ಯಾನಿಲಯ ಚಾರಿಟೇಬಲ್ ಟ್ರಸ್ಟ್ (ರಿ.) ಇದರ 88ನೇ ವಾರ್ಷಿಕೋತ್ಸವದ ಪ್ರಯುಕ್ತ ‘ನೃತ್ಯೋತ್ಸವ’ವು ದಿನಾಂಕ 10-12-2023ರಂದು ಕುದ್ಮುಲ್ ರಂಗರಾವ್ ಪುರಭವನದಲ್ಲಿ ಪ್ರಸ್ತುತಗೊಳ್ಳಲಿದೆ. ದಿನಾಂಕ 03-12-2023ರಂದು ಗಂಟೆ 2.30ಕ್ಕೆ ವಿದುಷಿ ಶ್ರೀಮತಿ ಉಷಾ ಪ್ರವೀಣ್ ಮತ್ತು ಶ್ರೀಮತಿ ನಿಶ್ವೀತಾ ಶರಣ್ ಇವರ ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ. ಮೃದಂಗದಲ್ಲಿ ಮಂಗಳೂರಿನ ವಿದ್ವಾನ್ ಶ್ರೀ ಮನೋಹರ್ ರಾವ್ ಮತ್ತು ವಯೋಲಿನ್ ನಲ್ಲಿ ಉಡುಪಿಯ ವಿದ್ವಾನ್ ಶ್ರೀಧರ್ ಅಚಾರ್ ಪಾಡಿಗಾರ ಸಾಥ್ ನೀಡಲಿದ್ದಾರೆ. ಗಂಟೆ 5ಕ್ಕೆ ಮೈಸೂರಿನ ವಿದುಷಿ ಡಾ. ಸುಕನ್ಯಾ ಪ್ರಭಾಕರ್ ಮತ್ತು ವಿದುಷಿ ನಿತ್ಯಶ್ರೀ ಆರ್. ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ. ವಿದ್ವಾನ್ ಕೆ.ಎಚ್. ರವಿಕುಮಾರ್ ಮೃದಂಗದಲ್ಲಿ ಮತ್ತು ಕಾಸರಗೋಡಿನ ವಿದ್ವಾನ್ ಗಣರಾಜ ಕಾರ್ಲೆ ವಯೋಲಿನ್ ಸಾಥ್ ನೀಡಲಿದ್ದಾರೆ. ಸಭಾ ಕಾರ್ಯಕ್ರಮದಲ್ಲಿ ಮೈಸೂರಿನ ನೂಪುರ ಕಲಾವಿದರು ಸಾಂಸ್ಕೃತಿಕ ಟ್ರಸ್ಟ್ ಇದರ ನಿರ್ದೇಶಕರಾದ ಪ್ರೊ.…

Read More