Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದರ ವತಿಯಿಂದ ದಿನಾಂಕ 13 ಜುಲೈ 2025ರಂದು ಮಂಗಳೂರಿನ ಸಂದೇಶ ಸಭಾಭವನದಲ್ಲಿ ಆಯೋಜಿಸಿದ ಕೊಂಕಣಿ ಕನ್ನಡ ಲಿಪಿಯ ಪ್ರಥಮ ಕಾದಂಬರಿ ‘ಆಂಜೆಲ್’ ಇದರ 75ನೇ ಸಂಭ್ರಮಾಚರಣೆ ಜರಗಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾದಂಬರಿಯ ಸ್ವರೂಪದ ಬಗ್ಗೆ ಮಾತಾನಾಡಿದ ಡಾ. ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ್ ಡಾ. ಗಣನಾಥ ಶೆಟ್ಟಿ ಎಕ್ಕಾರು “ಕಾದಂಬರಿ ಚರಿತ್ರೆ ಅಲ್ಲ, ಆದರೆ ಕಾದಂಬರಿಯಲ್ಲಿ ಚರಿತ್ರೆ ಇರಬಹುದು. ಕಾದಂಬರಿ ಸವಿಸ್ತಾರವಾಗಿ ಜೀವನವನ್ನು ವಿಶ್ಲೇಷಣೆ ಮಾಡಬಲ್ಲುದು. ಆಂಜೆಲ್ 75 ವರ್ಷಗಳ ಹಿಂದಿನ ಜನಜೀವನವನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದೆ. ಕೊಂಕಣಿ ಅಕಾಡೆಮಿ ಒಂದು ಔಚಿತ್ಯಪೂರ್ಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದರಿಂದ ಮುಂದೆ ಸಾಹಿತ್ಯ ರಚಿಸುವವರಿಗೆ ಪ್ರೇರಣೆ ದೊರೆಯಲಿದೆ. ಅಕಾಡೆಮಿ ಸಾಹಿತ್ಯಾಸಕ್ತ ಯುವಜನತೆ ಹಾಗೂ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಕ್ರಮ ವಹಿಸಿದರೆ ಈ ಪರಂಪರೆ ಮುಂದುವರಿಯಲಿದೆ.” ಎಂದು ಅಭಿಪ್ರಾಯಪಟ್ಟರು. ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ…
ತೆಕ್ಕಟ್ಟೆ: ಶ್ರೀ ಕೈಲಾಸ ಕಲಾಕ್ಷೇತ್ರ ಟ್ರಸ್ಟ್ (ರಿ.) ತೆಕ್ಕಟ್ಟೆ ಆಶ್ರಯದಲ್ಲಿ ನಡೆಯುವ ವು ದಿನಾಂಕ 13 ಜುಲೈ 2025ರಂದು ತೆಕ್ಕಟ್ಟೆ ಹಯಗ್ರೀವದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಯಕ್ಷಗುರು ಕೃಷ್ಣಯ್ಯ ಆಚಾರ್ ಬಿದ್ಕಲ್ಕಟ್ಟೆ ಇವರು ಸಂಗೀತ ಗುರು ಶಾರದ ಹೊಳ್ಳ ಇವರನ್ನು ಗೌರವಿಸಿ ಮಾತನಾಡಿ “ಸಂಗೀತ ಕ್ಷೇತ್ರದ ಜ್ಞಾನಗಳು ಮಾನವನ ಬದುಕಿಗೆ ತೀರ ಅಗತ್ಯ. ಗುರುವಿನ ಗುಲಾಮನಾಗದೇ ಮುಕುತಿ ಇಲ್ಲ ಎಂದು ದಾಸರೇ ಉಲ್ಲೇಖಿಸಿದ್ದಾರೆ. ಮೊದಲು ಗುರುವಿನ ನಿರ್ದೇಶನಕ್ಕೊಳಪಡಬೇಕು. ಆಗಲೇ ಸಂಗೀತ ಅಭ್ಯಾಸಕ್ಕೆ ಪರಿಪೂರ್ಣತೆ ಸಾಧ್ಯ. ಗುರು ತಮ್ಮ ಅಮೂಲ್ಯ ಸಮಯವನ್ನು, ಕಲಿತ ಕಲೆಯನ್ನು ಕಲಿಸುವುದಕ್ಕಾಗಿ ಮೀಸಲಿಡುತ್ತಾರೆ. ಎಲ್ಲವೂ ಮೊಬೈಲ್ನಿಂದ ಸಾಧ್ಯವಿಲ್ಲ. ಆನ್ಲೈನ್ನಲ್ಲಿ ಕಲಿಕೆ ಪರಿಪೂರ್ಣತೆಯನ್ನು ಸಾಧಿಸುವುದಕ್ಕೆ ಸಾಧ್ಯವಿಲ್ಲ. ಗುರುವಿನ ಮಹತ್ವ ತಿಳಿಯಲೂ ಸಾಧ್ಯವಿಲ್ಲ” ಎಂದರು. . ರು ಶಾರದ ವಿ. ಹೊಳ್ಳ ಇವರನ್ನು ಶಿಷ್ಯರೊಂದಿಗೆ ಗೌರವಿಸಿ ಅಭಿನಂದನೆ ಸಲ್ಲಿಸಿದರು. ರಂಗ ನಿರ್ದೇಶಕಿ ಸುಧಾ ಮಣೂರು, ಪಾರ್ವತಿ ಮೈಯ್ಯ, ಭಾಗ್ಯಲಕ್ಷ್ಮೀ ವೈದ್ಯ, ರಾಹುಲ್ ಕುಂದರ್ ಕೋಡಿ, ಸುಕುಮಾರ ಶೆಟ್ಟಿ ಕಮಲಶಿಲೆ ಉಪಸ್ಥಿತರಿದ್ದರು.…
ಬೆಂಗಳೂರು : ಅಭಿನಯ ತರಂಗ ನಾಟಕ ಶಾಲೆ ಇದರ ವತಿಯಿಂದ ‘ಅಂತರಂಗದ ರಂಗ’ ಅಭಿನಯ ಶಿಬಿರವನ್ನು ದಿನಾಂಕ 01 ಆಗಸ್ಟ್ 2025ರಿಂದ 15 ಆಗಸ್ಟ್ 2025ರವರೆಗೆ ಬೆಂಗಳೂರಿನ ಹನುಮಂತ ನಗರದಲ್ಲಿರುವ ಶ್ರೀ ಬಾಲಾಜಿ ವಿದ್ಯಾ ನಿಕೇತನದಲ್ಲಿ ಹಮ್ಮಿಕೊಳ್ಳಲಾಗಿದೆ. ಪ್ರತಿದಿನ ಸಂಜೆ 6-00ರಿಂದ 9-00 ರ ತನಕ ಹಾಗೂ ಭಾನುವಾರ ಬೆಳಗ್ಗೆ 10-00 ರಿಂದ ಸಂಜೆ 5-00 ತನಕ ನಡೆಯಲಿರುವ ಈ ಶಿಬಿರದಲ್ಲಿ ಕಾನ್ಸ್ಟಾಂಟಿನ್ ಸ್ಟಾನಿಸ್ಲಾವಸ್ಕಿಯ ವಾಸ್ತವವಾದಿ ಅಭಿನಯ ಸಿದ್ಧಾಂತದ ಪ್ರಸಿದ್ಧ ಪುಸ್ತಕವನ್ನು ಆಧರಿಸಿದ ಪ್ರಾಯೋಗಿಕ ಅಭ್ಯಾಸ. ಮಂಜುನಾಥ್ ಎಲ್. ಬಡಿಗೇರ ಇವರು ಈ ಶಿಬಿರದ ನಿರ್ದೇಶಕರಾಗಿದ್ದು, ಹೆಚ್ಚಿನ ಮಾಹಿತಿಗಾಗಿ 9845825217 ಸಂಖ್ಯೆಯನ್ನು ಸಂಪರ್ಕಿಸಿರಿ.
ಮಂಗಳೂರು : ‘ಆಯನ ನಾಟಕದ ಮನೆ’ ತಂಡ ಮಂಗಳೂರಿನಲ್ಲಿ ಕಳೆದ ನಾಲ್ಕು ದಶಕಗಳಿಂದ ರಂಗಭೂಮಿ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಸದಭಿರುಚಿಯ, ವೈಚಾರಿಕ ನಾಟಕಗಳ ಪ್ರಯೋಗಗಳನ್ನು ನೀಡುತ್ತಾ ಬಂದಿರುತ್ತದೆ. ಈಗ ಮತೊಮ್ಮೆ ‘ಅಶ್ವತ್ಥಾಮ not out’ ಎಂಬ ಹೊಸ ವಿಭಿನ್ನ ನಾಟಕವನ್ನು ನಿರ್ಮಿಸಿದ್ದು, ಬೆಂಗಳೂರಿನ ವಿವಿಧೆಡೆಯಲ್ಲಿ ಇದರ ಪ್ರದರ್ಶನ ನಡೆದಿದ್ದು, ರಂಗ ವಿಮರ್ಶಕರಿಂದ ಭಾರೀ ಪ್ರಶಂಸೆಯನ್ನು ಪಡೆದಿದೆ. ಮಂಗಳೂರಿನಲ್ಲಿ ಮತ್ತೊಮ್ಮೆ ಬಹುಜನರ ಅಪೇಕ್ಷೆಯ ಮೇರೆಗೆ ದಿನಾಂಕ 18 ಜುಲೈ 2025ರ ಶುಕ್ರವಾರ ಸಂಜೆ ಗಂಟೆ 6-30ಕ್ಕೆ ಸರಿಯಾಗಿ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ರಂಗ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ಎಲ್.ಸಿ.ಆರ್.ಐ. ಸಭಾಂಗಣದಲ್ಲಿ ನಡೆಯಲಿದೆ. ಮಂಗಳೂರಿನ ಲೋಕಹಿತ ಸಾಂಸ್ಕೃತಿಕ ವೇದಿಕೆಯವರು ಈ ಪ್ರದರ್ಶನವನ್ನು ಆಯೋಜಿಸಿದ್ದಾರೆ. ಈ ನಾಟಕವನ್ನು ರಚಿಸಿ, ವಿನ್ಯಾಸ ಮತ್ತು ನಿರ್ದೇಶನ ಮಾಡಿದವರು ಮೋಹನಚಂದ್ರ ಉರ್ವ. ಚಂದ್ರಹಾಸ ಉಳ್ಳಾಲ್, ಪ್ರಭಾಕರ್ ಕಾಪಿಕಾಡ್ ಮತ್ತು ಡಾ. ದಿನೇಶ್ ನಾಯಕ್ ಇವರು ಈ ನಾಟಕದಲ್ಲಿ ಅಭಿನಯಿಸುತ್ತಾರೆ. ಉಚಿತ ಪ್ರವೇಶದೊಂದಿಗೆ ಯಾವುದೇ ಸಭಾ ಕಾರ್ಯಕ್ರಮವಿಲ್ಲದೆ 6-30 ಗಂಟೆಗೆ…
ಇಳಕಲ್ : ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘದ ವತಿಯಿಂದ ಭಾರತ ದೇಶದ ಇತಿಹಾಸದಲ್ಲಿಯೇ ಪ್ರಪ್ರಥಮವಾಗಿ ನಡೆಯಲಿರುವ ‘ಮೇಘಮೈತ್ರಿ ರಾಷ್ಟ್ರೀಯ ಚಿತ್ರಕಲಾ ಸಮ್ಮೇಳನ’ ಇಳಕಲ್ ನಲ್ಲಿ ನಡೆಯಲಿದ್ದು, ಈ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿ ಖ್ಯಾತ ಚಿತ್ರ ಕಲಾವಿದರು ಹಾಗೂ ಸಾಹಿತಿಗಳಾದ ಡಾ. ಬಸವರಾಜ ಗವಿಮಠ ಇವರನ್ನು ಇಲಕಲ್ಲ ಗುರು ಮಹಾಂತ ಶ್ರೀಮಠದಲ್ಲಿ ಶ್ರೀಗಳ ಅಧ್ಯಕ್ಷತೆಯಲ್ಲಿ ಹಾಗೂ ಗುರು ಹಿರಿಯರ ಸಮ್ಮುಖದಲ್ಲಿ ದಿನಾಂಕ 14 ಜುಲೈ 2025ರಂದು ನಡೆದ ಸಭೆಯಲ್ಲಿ ಸಂಘದ ಅಧ್ಯಕ್ಷ ರಮೇಶ ಕಮತಗಿ ತಿಳಿಸಿದರು. ಈ ಸಂಧರ್ಭದಲ್ಲಿ ಶ್ರೀಗಳು ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ವಿಶ್ವನಾಥ ವಂಶಾಕೃತ ಮಠ ಸನ್ಮಾನಿಸಿದರು. ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷ ಶ್ರೀ ಚನ್ನಪ್ಪ ಲೆಕ್ಕಿಹಾಳ, ಸಾಹಿತಿ ಸಿದ್ಧಲಿಂಗಪ್ಪ ಬೀಳಗಿ, ಪತ್ರಕರ್ತ ಪ್ರಕಾಶ ಗುಳೇದಗುಡ್ಡ, ಶ್ರೀನಿವಾಸ್ ಮಾರಾ, ಹೆಚ್.ಬಿ. ಕಂಬಳಿ, ಮಹಾಂತೇಶ್ ಬಂಡಿ, ಮಾನಪ್ಪ ಬಡಿಗೇರ ಇನ್ನಿತರರು ಉಪಸ್ಥಿತರಿದ್ದರು.
ಉಡುಪಿ : ಬೇಳಂಜೆ ಸಂಜೀವ ಹೆಗ್ಡೆ ಟ್ರಸ್ಟ್ (ರಿ.) ಉಡುಪಿ, ಯಕ್ಷಗಾನ ಕೇಂದ್ರ ಇಂದ್ರಾಳಿ ಉಡುಪಿ, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಉಡುಪಿ ಹಾಗೂ ಉಜ್ವಲ್ ಡೆವಲಪ್ಪರ್ಸ್ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಯಕ್ಷಗಾನ ಕಾರ್ಯಕ್ರಮವನ್ನು ದಿನಾಂಕ 19 ಜುಲೈ 2025ರಂದು ಸಂಜೆ 3-00 ಗಂಟೆಗೆ ಉಡುಪಿ ಅಜ್ಜರಕಾಡು ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ಬೇಳಂಜೆ ಸಂಜೀವ ಹೆಗ್ಡೆ ಟ್ರಸ್ಟ್ (ರಿ.) ಪ್ರಾಯೋಜಿತ ಗುರು ಮಟಪಾಡಿ ವೀರಭದ್ರ ನಾಯಕ್ ಸ್ಮಾರಕ ‘ಯಕ್ಷಸಾಧಕ’ ಪ್ರಶಸ್ತಿಯನ್ನು ಶ್ರೀ ವಿದ್ಯಾಧರ ರಾವ್ ಜಲವಳ್ಳಿ ಇವರಿಗೆ ಪ್ರದಾನ ಮಾಡಲಾಗುವುದು. ‘ಕೃಷ್ಣಾರ್ಜುನ ಕಾಳಗ’ ಮತ್ತು ‘ರಾಜಾ ಭದ್ರಸೇನ’ ಎಂಬ ಪ್ರಸಂಗದ ಯಕ್ಷಗಾನ ಕಾರ್ಯಕ್ರಮದ ಮುಮ್ಮೇಳದಲ್ಲಿ ಭಾಗವತರಾಗಿ ರಾಘವೇಂದ್ರ ಆಚಾರ್ ಜನ್ಸಾಲೆ, ಚೆಂಡೆಯಲ್ಲಿ ಪ್ರಜ್ವಲ್ ಮುಂಡಾಡಿ ಮತ್ತು ಮದ್ದಳೆಯಲ್ಲಿ ಶಶಾಂಕ ಆಚಾರ್ಯ ಕಿರಿಮಂಜೇಶ್ವರ ಸಹಕರಿಸಲಿದ್ದಾರೆ. ಮುಮ್ಮೇಳದಲ್ಲಿ ಕೊಂಡದಕುಳಿ ರಾಮಚಂದ್ರ ಹೆಗಡೆ, ನೀಲ್ಕೋಡು ಶಂಕರ ಹೆಗಡೆ, ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ, ರವೀಂದ್ರ ದೇವಾಡಿಗ ಕಮಲಶಿಲೆ, ಚಂದ್ರಹಾಸ ಗೌಡ ಹೊಸಪಟ್ನ, ಕೆ.ಜಿ.…
ಮಂಗಳೂರು : ಸಂಗೀತ ಭಾರತಿ ಪ್ರತಿಷ್ಠಾನವು ಮುಂಬಯಿನ ಪಂಚಮ ನಿಶಾದ್ನ ಸಹಯೋಗದೊಂದಿಗೆ `ಬೋಲಾವ ವಿಠಲ’ ಎಂಬ ಸಂಗೀತ ಕಾರ್ಯಕ್ರಮವನ್ನು ದಿನಾಂಕ 20 ಜುಲೈ 2025ರಂದು ಸಂಜೆ 5-30 ಗಂಟೆಗೆ ಮಂಗಳೂರಿನ ಪುರಭವನದಲ್ಲಿ ಆಯೋಜಿಸಿದೆ. ಹಿರಿಯ ಸಂಗೀತ ದಿಗ್ಗಜ ಕಲಾವಿದ ಸಂಜಯ್ ಅಭ್ಯಂಕರ್ ಹಾಗೂ ಶರಯೂ ದಾತೆ ಇವರಿಂದ ಅಭಂಗ ರೂಪದಲ್ಲಿ ಹಾಡುಗಾರಿಕೆ ನಡೆಯಲಿದೆ. ತಬ್ಲಾದಲ್ಲಿ ಪ್ರಸಾದ್ ಪಾದ್ಯೆ, ಪಕ್ವಾಜ್ನಲ್ಲಿ ಸುಖದ್ ಮುಂಡೆ, ರಿದಂನಲ್ಲಿ ಸೂರ್ಯಕಾಂತ್ ಸುರ್ವೆ, ಹಾರ್ಮೋನಿಯಂನಲ್ಲಿ ಅಭಿಷೇಕ್ ಶಿಂಕರ್, ಕೊಳಲಿನಲ್ಲಿ ಶಡಜ್ ಗೋಡ್ಕಿಂಡಿ ಸಾಥ್ ನೀಡಲಿದ್ದಾರೆ. ದೇಶ ವಿದೇಶದ ನಾನಾ ವೇದಿಕೆಯಲ್ಲಿ ಸಂಗೀತ ಪ್ರಸ್ತುತ ಪಡಿಸಿರುವ ಈ ಶ್ರೇಷ್ಠ ಕಲಾವಿದರ ಅಭಂಗ್ ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ಇದ್ದು, ಮಂಗಳೂರಿನ ಕೋಡಿಯಾಲ್ಬೈಲ್ನಲ್ಲಿರುವ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನಿಂದ ಪಾಸ್ ಪಡೆದುಕೊಳ್ಳಬಹುದಾಗಿದೆ. ದೇಶದ ಹಲವು ಶ್ರೇಷ್ಠ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿರುವ ಮುಂಬಯಿಯ ಪಂಚಮ್ ನಿಶಾದ್ ಸಂಸ್ಥೆಯ ಅಭೂತಪೂರ್ವ ಪರಿಕಲ್ಪನೆಯ ಕಾರ್ಯಕ್ರಮವಾಗಿರುವ ‘ಬೋಲಾವ ವಿಠಲ’ ವಿನೂತನ ಸಂತವಾಣಿ ಕಾರ್ಯಕ್ರಮವಾಗಿದೆ. ಈಗಾಗಲೇ ಬೆಂಗಳೂರು, ಮುಂಬಯಿ, ಹೈದರಾಬಾದ್…
ಬೆಂಗಳೂರು : ಜನಪದರು ಸಾಂಸ್ಕೃತಿಕ ವೇದಿಕೆ (ರಿ.) ಇವರ ವತಿಯಿಂದ ಪ್ರತಿ ತಿಂಗಳ 2ನೇ ಶನಿವಾರ ನಡೆಯುವ ಸರಣಿ ಕಾರ್ಯಕ್ರಮದ 96ನೇ ಕಾರ್ಯಕ್ರಮವು ದಿನಾಂಕ 12 ಜುಲೈ 2025ರ ಶನಿವಾರದಂದು ಬೆಂಗಳೂರಿನ ನಿಂಬೆಕಾಯಿಪುರದ ಶ್ರೀ ಅಭಯಾಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿರುವ ಜನಪದರು ರಂಗಮಂದಿರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಥೇಮಾ ಥಿಯೇಟರ್ ಬೆಂಗಳೂರು ತಂಡವು ಡಾ. ಎಸ್. ವಿ. ಕಶ್ಯಪ್ ಇವರ ರಚನೆಯನ್ನು ಡಾ. ಸುಷ್ಮಾ ಎಸ್. ವಿ. ನಿರ್ದೇಶಿಸಿದ ಎಲ್. ಎಸ್. ಡಿ. ನಾಟಕ ಪ್ರದರ್ಶನಗೊಂಡಿತು. ಕೇವಲ ಮೂರು ಜನ ಮಹಿಳಾ ಕಲಾವಿದರು ಅಭಿನಯಿಸಿದ ಈ ನಾಟಕ ಕಚಗುಳಿ ಇಡುವ ಸಂಭಾಷಣೆಯಿಂದ ಕಿಕ್ಕಿರಿದು ನೆರೆದಿದ್ದ ಪ್ರೇಕ್ಷಕರನ್ನು ನಗೆಗಡಲಲ್ಲಿ ಮುಳುಗಿಸಿತಾದರೂ ನಗೆಯ ಹೊಗೆಯ ಹಿಂದಿರುವ ನೋವಿನ, ವಿಷಾದದ ಛಾಯೆಯು ಚಿಂತನೆಗೆ ಗುರಿ ಮಾಡಿತು. ಗ್ಲೋಬಲೈಸೇಷನ್ನಿಂದಾಗಿ ಆದ ಆರ್ಥಿಕ ಪ್ರಗತಿ ಸಮಾಜದ ಒಂದು ವರ್ಗದವರನ್ನು ಸ್ಥಿತಿವಂತರಾಗಿಸುತ್ತಿರುವ ನಡುವೆ ಕಸ ಮುಸರೆ ತೊಳೆಯುವ ಮನೆ ಕೆಲಸ ಮಾಡುವ ಬಡ ಹೆಣೈಕಳ ಆಸೆ ಆಕಾಂಕ್ಷೆಗಳು ಕನಸು ಕನವರಿಕೆಗಳನ್ನು ಇರುವುದನ್ನು…
ತೆಕ್ಕಟ್ಟೆ: ತೆಕ್ಕಟ್ಟೆ ಹಯಗ್ರೀವದಲ್ಲಿ ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ ಸಹಯೋಗದೊಂದಿಗೆ ಭರತನಾಟ್ಯ ತರಗತಿಯ ಗುರು ಶ್ರೀಮತಿ ಅಮೃತಾ ಉಪಾಧ್ಯ ಇವರಿಗೆ ಗುರುವಂದನೆ ಕಾರ್ಯಕ್ರಮವು ದಿನಾಂಕ 12 ಜುಲೈ 2025ರಂದು ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಯಕ್ಷಗುರು ಲಂಬೋದರ ಹೆಗಡೆ ಮಾತನಾಡಿ “ಗುರಿ ಮುಂದಿರಬೇಕು, ಗುರು ಹಿಂದಿರಬೇಕು. ಗುರಿಯನ್ನು ನೆರವೇರಿಸುವಲ್ಲಿ ಗುರು ಮಹತ್ವದ ಪಾತ್ರ ವಹಿಸುತ್ತಾನೆ. ಭರತನಾಟ್ಯದಲ್ಲಿ ವೇದಿಕೆಯನ್ನು ಬಳಸಿಕೊಳ್ಳಬೇಕಾದರೆ ಗುರುವಿಗೆ ವಿಶೇಷ ಸ್ಥಾನವಿದೆ. ಶಿಷ್ಯರು ಗುರುವಿಗೆ ವಂದಿಸಿಯೇ, ಗುರುವನ್ನು ಅವಲಂಬಿಸಿಯೇ ವೇದಿಕೆಯಲ್ಲಿ ವಿಜೃಂಬಿಸುತ್ತಾರೆ. ಗುರು ದಿನವನ್ನು ಮಹತ್ವಪೂರ್ಣವಾಗಿಸಬೇಕಾದದ್ದು ಶಿಷ್ಯನ ಆದ್ಯ ಕರ್ತವ್ಯ” ಎಂದರು. ಕಾರ್ಯಕ್ರಮದಲ್ಲಿ ಶಿಷ್ಯರನೇಕರು ಗುರುವನ್ನು ಗೌರವಿಸಿ ವಂದಿಸಿದರು.
ಪುತ್ತೂರು: ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ನೇತೃತ್ವದಲ್ಲಿ, ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ ಸಹಕಾರದಲ್ಲಿ, ಪ್ರಗತಿ ಸ್ಟಡಿ ಸೆಂಟರ್ ಪುತ್ತೂರು ಇದರ ಆಶ್ರಯದಲ್ಲಿ, ದಿ. ಚಿದಾನಂದ ಕಾಮತ್ ಕಾಸರಗೋಡು ಇವರ ಸ್ಮರಣಾರ್ಥ ‘ಮುಂಗಾರು ಕವಿಗೋಷ್ಠಿ -2025’ ಕಾರ್ಯಕ್ರಮವು 13 ಜುಲೈ 2025ರಂದು ಪ್ರಗತಿ ಸ್ಟಡಿ ಸೆಂಟರ್ನಲ್ಲಿ ನಡೆಯಿತು. ಕಾರ್ಯಕ್ರಮವನ್ನು ರುದ್ರಾಕ್ಷಿ ಗಿಡಕ್ಕೆ ನೀರುಣಿಸುವ ಮೂಲಕ ಉದ್ಘಾಟಿಸಿದ ಪ್ರಗತಿ ಎಜುಕೇಶನಲ್ ಫೌಂಡೇಶನ್ (ರಿ.) ಪುತ್ತೂರು ಇದರ ಸ್ಥಾಪಕಾಧ್ಯಕ್ಷರಾದ ಗೋಕುಲ್ ನಾಥ್ ಪಿ. ವಿ. ಮಾತನಾಡಿ “ದಿ. ಚಿದಾನಂದ ಕಾಮತ್ ಇವರು ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಅವರ ಸ್ಮರಣಾರ್ಥವಾಗಿ ಕಾರ್ಯಕ್ರಮ ಆಯೋಜಿಸಿ ಹೊಸ ಕವಿಗಳಿಗೆ ವೇದಿಕೆಯನ್ನು ಕಲ್ಪಿಸಿರುವುದು ಶ್ಲಾಘನೀಯ. ವಿದ್ಯಾರ್ಥಿಗಳು ಸಾಹಿತ್ಯದ ಬಗ್ಗೆ ಇನ್ನಷ್ಟು ಒಲವು ತೋರಿಸಿ ಭಾಷಾ ವೈವಿಧ್ಯತೆಯನ್ನು ಹೆಚ್ಚಿಸಬೇಕು” ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ಘಟಕದ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಮಾತನಾಡಿ “ಚಿಗುರೆಲೆ ಸಾಹಿತ್ಯ ಬಳಗ…