Author: roovari

ಮುಲ್ಕಿ : ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ(ರಿ.) ಕನ್ನಡ ಭವನ ಪ್ರಕಾಶನ ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕ ಇದರ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ಏಕದಿನ ಸಾಹಿತ್ಯ ಅಭಿಯಾನ ಕಾರ್ಯಕ್ರಮ ‘ಕನ್ನಡದ ನಡಿಗೆ……ಶಾಲೆಯ ಕಡೆಗೆ’ ದಿನಾಂಕ 17 ಅಕ್ಟೋಬರ್ 2025ರ ಶುಕ್ರವಾರ ಪೂರ್ವಾಹ್ನ 11.00 ರಿಂದ ಸಿ. ಎಸ್. ಐ. ಇಂಗ್ಲಿಷ್ ಮೀಡಿಯಂ ಶಾಲೆ, ಕಾರ್ನಾಡ್, ಮುಲ್ಕಿ ಇಲ್ಲಿ ನಡೆಯಲಿದೆ. ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕ ಇದರ ಗೌರವಾಧ್ಯಕ್ಷರಾದ ಡಾ. ರವೀಂದ್ರ ಜೆಪ್ಪುಮಂಗಳೂರು ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಸಿ. ಎಸ್. ಐ. ಇಂಗ್ಲಿಷ್ ಮೀಡಿಯಂ ಶಾಲೆ ಕಾರ್ನಾಡ್ ಇಲ್ಲಿನ ಮುಖ್ಯ ಶಿಕ್ಷಕಿಯಾದ : ಶ್ರೀಮತಿ ಶಾಂತಿ ಸುಹಾಸಿನಿ ಕರ್ಕಡ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ದ. ಕ. ಜಿಲ್ಲೆ ಇದರ ಅಧ್ಯಕ್ಷರಾದ ಕೊಳ್ಚಪ್ಪೆ ಗೋವಿಂದ ಭಟ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಿಂದ…

Read More

ಬಂಟ್ವಾಳ : ಖ್ಯಾತ ಯಕ್ಷಗಾನ ಹಾಸ್ಯ ಕಲಾವಿದ ದಿ. ಬಂಟ್ವಾಳ ಜಯರಾಮ ಆಚಾರ್ಯ ಇವರ ಪ್ರಥಮ ವರ್ಷದ ಪುಣ್ಯತಿಥಿಯ ಅಂಗವಾಗಿ ಶ್ರೀ ಕೋದಂಡರಾಮ ಕೃಪಾ ಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಬಯಲಾಟ ‘ಸುದರ್ಶನ ವಿಜಯ – ಭಾರ್ಗವ ವಿಜಯ’ ದಿನಾಂಕ 19 ಅಕ್ಟೋಬರ್ 2025ರ ಆದಿತ್ಯವಾರದಂದು ಅಪರಾಹ್ನ ಘಂಟೆ 2.00ರಿಂದ ಬಿ. ಸಿ ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಲಿದೆ. ಕಾರ್ಯಕ್ರಮದ ಹಿಮ್ಮೇಳದಲ್ಲಿ ಭಾಗವತರಾಗಿ ರವಿಚಂದ್ರ ಕನ್ನಡಿಕಟ್ಟೆ, ಚಿನ್ಮಯ್ ಭಟ್ ಕಲ್ಲಡ್ಕ, ಡಾ. ಪ್ರಖ್ಯಾತ ಶೆಟ್ಟಿ ಅಳಕೆ. ಚಂಡೆ ಮದ್ದಾಳೆಯಲ್ಲಿ ಚೈತನ್ಯ ಕೃಷ್ಣ ಪದ್ಯಾಣ, ಶ್ರೀಧರ ವಿಟ್ಲ, ಕೌಶಿಕ್ ರಾವ್ ಪುತ್ತಿಗೆ, ಸತ್ಯಜೀತ್ ರಾವ್ ರಾಯಿ ಭಾಗವಹಿಸಲಿದ್ದಾರೆ. ಮುಮ್ಮೇಳದಲ್ಲಿ ಸದಾಶಿವ ಕುಲಾಲ್ ವೇಣೂರು, ದಿವಾಕರ ರೈ ಸಂಪಾಜೆ, ಶಶಿಧರ ಕುಲಾಲ್ ಕನ್ಯಾನ, ಪ್ರಸಾದ್ ಸವಣೂರು, ಸಂತೋಷ್ ಹಿಲಿಯಾಣ, ರಕ್ಷಿತ್ ಶೆಟ್ಟಿ ಪಡ್ರೆ, ಸತೀಶ್ ಗೌಡ ನೀರ್ಕೆರೆ, ಮುಖೇಶ್ ದೇವದರ್ ನಿಡ್ಲೆ, ಉಮೇಶ್ ಶೆಟ್ಟಿ ಉಬರಡ್ಕ,…

Read More

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಸ್ವಾತಂತ್ರ್ಯಪೂರ್ವದ ಮೊದಲ ಸಾಲಿನ ಲೇಖಕಿಯರಲ್ಲಿ ಒಬ್ಬರೆಂದು ಗುರುತಿಸಲ್ಪಡುವ ಹಾಗೂ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದ ಹಿರಿಯ ಲೇಖಕಿ ಲಲಿತಾ ರೈ ದಿನಾಂಕ 11 ಅಕ್ಟೋಬರ್ 2025ರಂದು ಮಂಗಳೂರಿನ ತನ್ನ ಸ್ವಗೃಹದಲ್ಲಿ ನಿಧನರಾದರು. ಇವರಿಗೆ 98 ವರ್ಷ ವಯಸ್ಸಾಗಿತ್ತು. ಮಂಗಳೂರಿನ ಬೆಸೆಂಟ್ ಪ್ರೌಢಶಾಲೆಯ ಮೆಟ್ರಿಕ್ ತರಗತಿಯ ಮೊದಲ ತಂಡದ ವಿದ್ಯಾರ್ಥಿನಿಯಾಗಿದ್ದ ಲಲಿತಾ ರೈ ಸೈಂಟ್ ಆಗ್ನೇಸ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದಿದ್ದರು. ಸೈಂಟ್ ಆನ್ಸ್ ಬಿ. ಎಡ್. ಕಾಲೇಜಿನಲ್ಲಿ ಶಿಕ್ಷಕ ತರಬೇತಿ ಅಧ್ಯಯನ ಮಾಡಿ ಕೆನರಾ ಪ್ರೌಢಶಾಲೆಯಲ್ಲಿ ಅಧ್ಯಾಪಕಿ ವೃತ್ತಿಯನ್ನು ಆರಂಭಿಸಿದ್ದರು. ಮಂಗಳೂರಿನ ಮಹಿಳಾ ಸಭಾ, ಭಗಿನಿ ಸಮಾಜ ಥಿಯೋಪಿಕಲ್ ಸೊಸೈಟಿಯ ಸ್ಥಾಪಕ ಸಂಸ್ಥೆಯಾಗಿದ್ದ ಲಲಿತಾ ರೈ ಮಹಿಳಾ ಸಬಲೀಕರಣದ ಅನೇಕ ಸೇವಾ ಕಾರ್ಯಗಳಲ್ಲಿ ಮಂಚೂಣಿಯಲ್ಲಿದ್ದರು. ವಿವಿಧ ಸಂದರ್ಭದಲ್ಲಿ ಮಹಿಳಾಪರ ಚಳವಳಿಯಲ್ಲಿಯೂ ಅವರು ಭಾಗಿಯಾಗಿದ್ದರು. ಕರಾವಳಿ ಲೇಖಕಿಯರ ಹಾಗೂ ವಾಚಕೀಯರ ಸಂಘದ ಸಕ್ರೀಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.

Read More

ಕಾರ್ಕಳ : ಕಾರ್ಕಳದ ಕೋಟಿ ಚೆನ್ನಯ್ಯ ಥೀಂ ಪಾರ್ಕ್ ಆವರಣದಲ್ಲಿ ದಿನಾಂಕ 12 ಅಕ್ಟೋಬರ್ 2025ರಂದು ಕಾರ್ಕಳ ಯಕ್ಷ ರಂಗಾಯಣ ಮತ್ತು ಉಡುಪಿ ಜಿಲ್ಲೆಯ ಡಾ. ಶಿವರಾಮ ಕಾರಂತ ಟ್ರಸ್ಟಿನ ಸಹಯೋಗದಲ್ಲಿ ಡಾ. ಶಿವರಾಮ ಕಾರಂತರ ಜನ್ಮ ದಿನಾಚರಣೆ ಪ್ರಯುಕ್ತ ಕಾರಂತ ಉಪನ್ಯಾಸ ಮತ್ತು ಕಾರಂತ ರಂಗಪ್ರದರ್ಶನ ಕಾರ್ಯಕ್ರಮವು ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾಸ ನೀಡಿದ ಖ್ಯಾತ ವಿಮರ್ಶಕ ಡಾ. ಎಸ್.ಆರ್. ವಿಜಯಶಂಕರ್ “ಡಾ. ಶಿವರಾಮ ಕಾರಂತರು ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ದಾರಿ. ಬುದ್ಧ ಮತ್ತು ಗಾಂಧೀಜಿಯಂತೆ ಪ್ರಯೋಗಗಳ ಮೂಲಕ ಕಲಿತು ವ್ಯಕ್ತಿತ್ವವನ್ನು ರೂಪಿಸಿಕೊಂಡವರು ಕಾರಂತರು. ಯುವ ಜನರ ವ್ಯಕ್ತಿತ್ವ ಬೆಳವಣಿಗೆಗೆ ಕಾರಂತರ ದಾರಿ ಮಾದರಿಯಾಗಿದೆ ಎಂದು ಹೇಳಿ ಕಾರಂತರ ಒಡನಾಟದ ತಮ್ಮ ಅನುಭವವನ್ನು ವಿವರಿಸಿದರು. ಆಶಯ ಮಾತನಾಡಿದ ಟ್ರಸ್ಟಿನ ಅಧ್ಯಕ್ಷ ಡಾ. ಗಣನಾಥ ಶೆಟ್ಟಿ ಎಕ್ಕಾರು ಟ್ರಸ್ಟಿನ ಉದ್ದೇಶಗಳನ್ನು ವಿವರಿಸಿದರು. ರಂಗಾಯಣದ ನಿರ್ದೇಶಕ ವೆಂಕಟರಮಣ ಐತಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಳಿಕ ಚರ್ಚೆ ಕಾರ್ಯಕ್ರಮ ನಡೆಯಿತು. ಭುವನೇಂದ್ರ ಕಾಲೇಜಿನ…

Read More

ಬೆಂಗಳೂರು : ಚಿಣ್ಣರಲೋಕ ಟ್ರಸ್ಟ್ (ರಿ.) ಬೆಂಗಳೂರು, ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘ (ರಿ.) ಕಮತಗಿ ಮತ್ತು ಭಾರತೀಯ ಸ್ತ್ರೀ ಶಕ್ತಿ ಸಂಘಟನಾ ಟ್ರಸ್ಟ್ (ರಿ.) ಬೆಂಗಳೂರು ಇವರ ಸಹಯೋಗದಲ್ಲಿ ‘ಕಲೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಉತ್ಸವ’ ಕಾರ್ಯಕ್ರಮವು ದಿನಾಂಕ 18 ಅಕ್ಟೋಬರ್ 2025ರಂದು ಬೆಳಗ್ಗೆ 10-00 ಗಂಟೆಗೆ ಬೆಂಗಳೂರು ಹೆಬ್ಬಾಳದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕವಿಗೋಷ್ಠಿ, ಉಪನ್ಯಾಸ, ಪುಸ್ತಕ ಬಿಡುಗಡೆ, ಕಲಾ ಪ್ರದರ್ಶನ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ.

Read More

ಭಾರತೀಯ ವಿದ್ಯಾಭವನದ ವೇದಿಕೆಯಲ್ಲಿ ನೃತ್ಯ ಕಲಾವಿದೆ ರಮ್ಯಾ ವರ್ಣ ತನ್ನ ಸೊಗಸಾದ, ಭಾವ ಪುರಸ್ಸರ ನೃತ್ಯಾಭಿನಯದಿಂದ ನೆರೆದ ಕಲಾರಸಿಕರ ಮನಸ್ಸನ್ನು ಸೆಳೆದಳು. ಐಸಿಸಿಆರ್ ಆಯೋಜನೆಯ ಪ್ರತಿ ಶುಕ್ರವಾರದ ಸಾಂಸ್ಕೃತಿಕ ಕಾರ್ಯಕ್ರಮ ಇದಾಗಿತ್ತು. ಗುರು ಗಾಯತ್ರಿ ಚಂದ್ರಶೇಖರ ಇವರ ನುರಿತ ಗರಡಿಯಲ್ಲಿ ತರಬೇತಿ ಪಡೆದ ರಮ್ಯಾ, ಲೀಲಾಜಾಲವಾಗಿ, ನಿರಾಯಾಸದಿಂದ ನರ್ತಿಸುತ್ತ, ಮೊದಲಿನಿಂದ ಕಡೆಯ ಕೃತಿಯವರೆಗೆ ಒಂದೇ ಚೈತನ್ಯ ಪ್ರದರ್ಶಿಸಿದ್ದು ನಿಜಕ್ಕೂ ಸ್ತುತ್ಯಾರ್ಹ. ಸಂಪ್ರದಾಯದಂತೆ ಕಲಾವಿದೆ ‘ಪುಷ್ಪಾಂಜಲಿ’ಯಿಂದ ಶುಭಾರಂಭಿಸಿ, ಗುರು-ಹಿರಿಯರಿಗೆ, ದೇವಾನುದೇವತೆಗಳಿಗೆ ಮತ್ತು ಪ್ರೇಕ್ಷಕರಿಗೆ ನೃತ್ಯ ನಮನಗಳ ಮೂಲಕ ವಂದನೆ ಸಲ್ಲಿಸಿ, ನಂತರ ‘ಗಜವದನ’ ಬೇಡುವೆ’ ಎಂದು ವಿಘ್ನ ನಿವಾರಕನ ವಿವಿಧ ರೂಪ-ವೈಶಿಷ್ಟ್ಯಗಳನ್ನು ತನ್ನ ಸುಂದರ ಆಂಗಿಕಾಭಿನಯದಿಂದ ಸಾಕ್ಷಾತ್ಕರಿಸಿದಳು. ಕಲಾವಿದೆಯ ಹಸನ್ಮುಖ, ಲವಲವಿಕೆಯ ಚಲನೆಗಳು, ತಾಳ-ಲಯಜ್ಞಾನದ ಹೆಜ್ಜೆಗಳು ಗಮನ ಸೆಳೆದವು. ಮುಂದೆ-ಚಾರುಕೇಶಿ ರಾಗದ ಲಾಲ್ಗುಡಿ ಜಯರಾಮನ್ ರಚನೆಯ ‘ಇನ್ನುಂ ಎನ್ ಮನಂ’ ಅರಿತುಕೊಂಡಿಲ್ಲವೇ ಕೃಷ್ಣಾ ಎಂದು ಅವನಲ್ಲಿ ಅನುರಕ್ತಳಾದ ನಾಯಕಿ, ಅವನ ಅಗಲಿಕೆಯ ವಿರಹ ವೇದನೆಯಿಂದ ಪರಿತಪಿಸುತ್ತ, ತನ್ನಿನಿಯ ಕೃಷ್ಣನಲ್ಲಿ ತನಗಿರುವ ಆಳವಾದ ಅನುರಾಗವನ್ನು…

Read More

ಬೆಂಗಳೂರು : ಕಲಾಮಾಧ್ಯಮ ಅಭಿನಯಿಸುವ ಕೆ.ಪಿ. ಪೂರ್ಣಚಂದ್ರ ತೇಜಸ್ವಿ-ರಾಜೇಶ್ವರಿಯವರ ಪ್ರೇಮ-ದಾಂಪತ್ಯ ಕುರಿತ ನಾಟಕ ‘ನನ್ನ ತೇಜಸ್ವಿ’ ಪ್ರದರ್ಶನವನ್ನು ದಿನಾಂಕ 16 ಅಕ್ಟೋಬರ್ 2025ರಂದು ಸಂಜೆ 7-00 ಗಂಟೆಗೆ ಬೆಂಗಳೂರು ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರ ಆವರಣದ ನಯನ ಸಭಾಂಗಣದಲ್ಲಿ ಆಯೋಜಿಸಲಾಗಿದೆ. 3 ಹೌಸ್ ಫುಲ್ ಪ್ರದರ್ಶನಗಳ ನಂತರ ಈಗ 4ನೇ ಪ್ರದರ್ಶನ ಬೆಂಗಳೂರಿನಲ್ಲಿ ನಡೆಯಲಿದ್ದು, ಟಿಕೆಟ್ ಬುಕ್ ಮಾಡಲು Book my show link: https://in.bookmyshow.com/plays/nanna-tejaswi/ET00464902 or Tele book on 9008099686 / 7975890213.

Read More

ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ ಪ್ರತಿಷ್ಠಿತ ‘ಗೌರಮ್ಮ ದತ್ತಿ ಪ್ರಶಸ್ತಿ’ಗೆ ಕೊಡಗು ಜಿಲ್ಲೆಯ ಮಹಿಳಾ ಲೇಖಕಿಯರು ಬರೆದು ಪ್ರಕಟಿಸಿದ ಕನ್ನಡ ಭಾಷೆಯ ಕೃತಿಗಳನ್ನು ಆಹ್ವಾನಿಸಲಾಗಿದೆ. 2025-26ನೇ ಸಾಲಿನ ಪ್ರಶಸ್ತಿ ಪುರಸ್ಕಾರ ಪಡೆಯಲು ಆಸಕ್ತ ಲೇಖಕಿಯರು ತಾವು ರಚಿಸಿದ ಪುಸ್ತಕದ ನಾಲ್ಕು ಪ್ರತಿಗಳನ್ನು ಅರ್ಜಿಯೊಂದಿಗೆ ಕಳುಹಿಸಿತಕ್ಕದ್ದು. 2020ರ ನಂತರ ಪ್ರಕಟಿತ ಪುಸ್ತಕಗಳನ್ನು ಮಾತ್ರ ಕಳುಹಿಸಿತಕ್ಕದ್ದು. ಸ್ಪರ್ಧೆಗೆ ಪುಸ್ತಕ ಕಳುಹಿಸುವ ಲೇಖಕಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿರಬೇಕು. ಓರ್ವ ಲೇಖಕಿ ಒಂದು ಕೃತಿಯನ್ನು ಮಾತ್ರ ಕಳುಹಿಸತಕ್ಕದ್ದು. ಲಕೊಟೆಯ ಮೇಲೆ ‘ಗೌರಮ್ಮ ದತ್ತಿ ಪ್ರಶಸ್ತಿ’ಗೆ ಎಂದು ಬರೆಯತಕ್ಕದ್ದು. ಕೊಡಗು ಜಿಲ್ಲೆಯ ಲೇಖಕಿಯರಿಗೆ ಮಾತ್ರ ಅವಕಾಶ. ಕಳುಹಿಸಬೇಕಾದ ವಿಳಾಸ : ಅಧ್ಯಕ್ಷರು, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಅಂಬೇಡ್ಕರ್ ಭವನದ ಬಳಿ, ಸುದರ್ಶನ ವೃತ್ತ, ಮಡಿಕೇರಿ. ಮೊಬೈಲ್ ಸಂಖ್ಯೆ : 94483 46276. ಇಲ್ಲಿಗೆ ದಿನಾಂಕ 30 ಅಕ್ಟೋಬರ್ 2025ರ ಒಳಗಾಗಿ ತಲುಪಿಸಬೇಕೆಂದು ಪರಿಷತ್ತಿನ ಅಧ್ಯಕ್ಷರಾದ ಎಂ.ಪಿ. ಕೇಶವ ಕಾಮತ್…

Read More

ಗುಜರಾತದಲ್ಲಿರುವ ದ್ವಾರಕೆ ಮತ್ತು ಸೋಮನಾಥದ ಪ್ರಥಮ ಜ್ಯೋತಿರ್ಲಿಂಗ ದರ್ಶನ ಮಾಡುವ ಅವಕಾಶ ಸಿಕ್ಕಿದ್ದು ತೀರಾ ಅನಿರೀಕ್ಷಿತವಾಗಿ.‌ ಬಾದಾಮಿಗೆ ಹೋದ ನಂತರ ಇನ್ನು ಈ ವರ್ಷ ಎಲ್ಲಿಗೂ ಹೋಗುವುದಿಲ್ಲವೆಂದು ತೀರ್ಮಾನಿಸಿದ್ದೆ. ಅಷ್ಟರಲ್ಲಿ ನನ್ನ ಸರಸ್ವತಿಯಕ್ಕ ಮತ್ತು ಶಂಕರಭಾವ ‘ಬರ್ತೀಯೇನೇ ನಮ್ಮ ಜತೆಗೆ ? ಮಂಗಳೂರಿನಿಂದ ನಮ್ಮದೊಂದು ತಂಡ ಹೋಗ್ತಾ ಇದೆ. ಒಟ್ಟಿಗೆ ಹೋಗಿ ಬರೋಣ” ಅಂದರು. ಯಾಕೋ ಇರಲಿ ಅನ್ನಿಸಿತು. ಹೊರಟು ಬಿಟ್ಟೆ. ಆದರೆ ಅಕ್ಟೋಬರ್ 4ರಂದು ಹೊರಡುವ ದಿನ ಬಂದಾಗ ಅಕ್ಕನ ಆರೋಗ್ಯದಲ್ಲಿ ಏರುಪೇರಾಗಿ ಅವರಿಬ್ಬರೂ ಬರಲಿಲ್ಲ. ನಾನೊಬ್ಬಳೇ ತಂಡವನ್ನು ಸೇರಿದೆ. ಸೇರಿದ ಕ್ಷಣದಿಂದ ಕೊನೆಯ ತನಕ ಅಕ್ಕ-ಭಾವ ಜತೆಗಿಲ್ಲದ ಕೊರತೆಯನ್ನು ತಂಡದಲ್ಲಿ ಸಿಕ್ಕಿದ ಅಣ್ಣ-ತಮ್ಮ-ತಂಗಿಯರೆಲ್ಲರೂ ತಮ್ಮ ಅಪಾರ ಪ್ರೀತಿಯಿಂದ ನೀಗಿಸಿದ್ದು ನನ್ನ ಅದೃಷ್ಟ. ಸಹಯಾತ್ರಿಗಳಾಗಿ ಸಾಹಿತಿಗಳಾದ ಶ್ರೀ ವಿ.ಬಿ. ಕುಳಮರ್ವ ಮತ್ತು ಲಕ್ಷ್ಮಿ ವಿ. ಭಟ್ ಸಿಕ್ಕಿದ್ದು ಒಂದು ಬೋನಸ್. 49 ಮಂದಿಯ ನಮ್ಮ ತಂಡವು ಶ್ರೀ ಮಾಧವ ಅವರ ನೇತೃತ್ವದಲ್ಲಿ 4ರಂದು ಬೆಳಗ್ಗೆ 4-00 ಗಂಟೆಗೆ ಹೊರಡುವ ಎರ್ನಾಕುಲಂ-ಓಖಾ…

Read More

ದೇವಲಕುಂದ : ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ (ರಿ.) ನಡೂರು ಮಂದಾರ್ತಿ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಪ್ರದರ್ಶನವನ್ನು ದಿನಾಂಕ 19 ಅಕ್ಟೋಬರ್ 2025ರಂದು ದೇವಲಕುಂದ ಬಗ್ವಾಡಿ ಕ್ರಾಸ್ ಶ್ರೀ ಬಟ್ಟೆ ವಿನಾಯಕ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ. ‘ಗದಾಯುದ್ಧ’ ಮತ್ತು ‘ರುದ್ರಕೋಪ’ ಎಂಬ ಪ್ರಸಂಗದ ಯಕ್ಷಗಾನ ಪ್ರದರ್ಶನಗೊಳ್ಳಲಿದ್ದು, ಕಲಾಭಿಮಾನಿಗಳ ಸಂಪೂರ್ಣ ಸಹಕಾರವನ್ನು ಬಯಸುವ ನಾಗರಾಜ ಪೂಜಾರಿ ದೇವಲ್ಕುಂದ ಇವರು ಸರ್ವರಿಗೂ ಆದರದ ಸ್ವಾಗತ ಬಯಸಿದ್ದಾರೆ.

Read More