Author: roovari

ತೆಕ್ಕಟ್ಟೆ: ಯಶಸ್ವೀ ಕಲಾವೃಂದ (ರಿ.)ಕೊಮೆ ತೆಕ್ಕಟ್ಟೆ, ರಂಗಸಂಪದ ಕೋಟ, ಧಮನಿ ಟ್ರಸ್ಟ್ ತೆಕ್ಕಟ್ಟೆ ಇದರ ಸಂಯುಕ್ತ ಆಶ್ರಯದಲ್ಲಿ ‘ಸಿನ್ಸ್ 1999 ಶ್ವೇತಯಾನ-91’ ಕಾರ್ಯಕ್ರಮದಡಿಯಲ್ಲಿ ‘ನಾಟಕಾಷ್ಟಕ’ದ ಮೂರನೇ ದಿನದ ಕಾರ್ಯಕ್ರಮ ದಿನಾಂಕ 28 ಡಿಸೆಂಬರ್ 2024ರಂದು ತೆಕ್ಕಟ್ಟೆಯ ಹಯಗ್ರೀವದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕಲಾಪೋಷಕ ಡಾ. ಆದರ್ಶ ಹೆಬ್ಬಾರ್‌ ಇವರನ್ನು ಗೌರವಿಸಿದ ಗುರುರಾಜ್ ಮಾತನಾಡಿ “ಗಳಿಸಿದ ಒಂದಂಶವನ್ನು ಕಲೆಗಾಗಿ ಮುಡಿಪಾಗಿಡುವ ಗುಣ ಹಲವರಲ್ಲಿರುವುದಿಲ್ಲ. ಪ್ರತಿಭಾನ್ವಿತ ಯಕ್ಷಗಾನಾಸಕ್ತ ಹಾಗೂ ಸಂಗೀತಾಸಕ್ತ ಡಾ. ಆದರ್ಶ ಹೆಬ್ಬಾರ್ ಕಲಾ ಪೋಷಕರಾಗಿ ಹೆಸರಾದವರು. ಶ್ವೇತಯಾನದಲ್ಲಿ ‘ಭೀಷ್ಮ ವಿಜಯ’ ಪ್ರಸಂಗದಲ್ಲಿ ಸಾಲ್ವನ ಪಾತ್ರವನ್ನು ವಿಭಿನ್ನವಾಗಿ ರಂಗದಲ್ಲಿ ಕಟ್ಟಿಕೊಟ್ಟವರು. ಎಳವೆಯಲ್ಲಿ ಕಲಿತ ಹೆಜ್ಜೆಯನ್ನು ನಲವತ್ತು ವರ್ಷಗಳ ಬಳಿಕ ಮತ್ತೆ ಬಣ್ಣ ಹಚ್ಚಿ ರಂಗವೇರಿ ಸೈ ಎನಿಸಿಕೊಂಡವರು. ಅವರ ಕಲೋತ್ಸಾಹ ನಿಜಕ್ಕೂ ಕಲಾಪ್ರಪಂಚಕ್ಕೆ ಆಸ್ತಿ ಎಂಬುದು ಜನಜನಿತವಾಗಿದೆ.” ಎಂದರು. ಖ್ಯಾತ ರಂಗ ತಜ್ಞ ರಾಮಕೃಷ್ಣ ಹೇರ್ಳೆ, ನಟನ ರಂಗಶಾಲೆಯ ಚೇತನ್, ಬಿ. ವಿ. ಕಾರಂತ್ ಕೋಣಿ, ಸತ್ಯನಾರಾಯಣ ಅರಸರು, ರಂಗ ನಿರ್ದೇಶಕ ವಾಸು ಗಂಗೇರ…

Read More

ಉಡುಪಿ : ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಉಡುಪಿ ಇದರ ವತಿಯಿಂದ ಪ್ರಭಾವತಿ ಹಾಗೂ ಉಡುಪಿ ವಿಶ್ವನಾಥ್ ಶೆಣೈ ಪ್ರಾಯೋಜಿತ ‘ವಿಶ್ವಪ್ರಭಾ ಪುರಸ್ಕಾರ – 2025’ವನ್ನು ತುಳು ಹಾಗೂ ಕನ್ನಡ ಚಲನಚಿತ್ರ ಮತ್ತು ರಂಗಭೂಮಿಯ ಪ್ರಸಿದ್ಧ ಕಲಾವಿದ ನವೀನ್ ಡಿ. ಪಡೀಲ್ ಇವರಿಗೆ ನೀಡಿ ಪುರಸ್ಕರಿಸಲಾಗುವುದು. ಈ ಪುರಸ್ಕಾರವು ಪ್ರಶಸ್ತಿ ಪತ್ರ, ಫಲಕ ಹಾಗೂ ಒಂದು ಲಕ್ಷ ರೂಪಾಯಿ ನಗದು ಒಳಗೊಂಡಿರುತ್ತದೆ. ಉಡುಪಿಯ ಯಕ್ಷಗಾನ ಕಲಾರಂಗದ ಐ.ವೈ.ಸಿ. ಸಭಾಂಗಣದಲ್ಲಿ ಫೆಬ್ರವರಿ ತಿಂಗಳಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸದ್ರಿ ಪುರಸ್ಕಾರವನ್ನು ಪ್ರದಾನ ಮಾಡಲಾಗುವುದು. ನವೀನ್ ಡಿ. ಪಡೀಲ್ : ರಂಗಭೂಮಿ ಮತ್ತು ಚಲನಚಿತ್ರ ನಟರಾಗಿದ್ದು, ತುಳು ಭಾಷೆಯಲ್ಲಿ 15 ಸಾವಿರಕ್ಕೂ ಹೆಚ್ಚು ನಾಟಕ ಪ್ರದರ್ಶನಗಳಲ್ಲಿ ನಟಿಸಿದ್ದಾರೆ. ‘ಮಾಸ್ಟರ್ ಆಫ್ ಕಾಮೆಡಿ ಅಂಡ್ ಟ್ರಾಜಿಡಿ’ನಂತಹ ನಟನಾ ಪ್ರದರ್ಶನಗಳಿಂದ ತುಳು ರಂಗಭೂಮಿ ವಲಯಗಳಲ್ಲಿ ವ್ಯಾಪಕವಾಗಿ ಪ್ರಸಿದ್ಧರಾಗಿರುವ ಇವರನ್ನು ‘ಕುಸಲ್ದ ಅರಸೆ’ (ತಮಾಶೆಯ ರಾಜ) ಎಂದು ಕರೆಯುತ್ತಾರೆ. ಹಾಸ್ಯಮಯ ಪಾತ್ರಗಳಲ್ಲಿ ಮುಖ್ಯವಾಗಿ ಇವರು ನಟಿಸಿದ್ದು, ದೇವದಾಸ್ ಕಾಪಿಕಾಡ್ ಮತ್ತು…

Read More

ದೇವುಡು ನರಸಿಂಹ ಶಾಸ್ತ್ರಿಯವರು 1896 ಡಿಸೆಂಬರ್ 29 ರಂದು ಮೈಸೂರಿನಲ್ಲಿ ವೇದ ಶಾಸ್ತ್ರ ಪಾರಂಗತ ಮತ್ತು ಆಗರ್ಭ ಶ್ರೀಮಂತ ಕುಟುಂಬದಲ್ಲಿ ತಾಯಿ ಸುಬ್ಬಮ್ಮ ಮತ್ತು ತಂದೆ ಶ್ರೀ ಕೃಷ್ಣ ಶಾಸ್ತ್ರಿಯವರ ಪುತ್ರರಾಗಿ ಜನಿಸಿದರು. ದೇವುಡು ಎಂದೇ ಖ್ಯಾತರಾದ ಇವರು ಕನ್ನಡದ ಖ್ಯಾತ ವಿದ್ವಾಂಸ ಮತ್ತು ಸಾಹಿತಿಗಳಲ್ಲಿ ಒಬ್ಬರು. ತಮ್ಮ ಐದನೇ ವಯಸ್ಸಿನಲ್ಲಿ ತಂದೆಯನ್ನು ಕಳಕೊಂಡ ಇವರು ಆಗಲೇ ಸಂಸ್ಕೃತದ “ಅಮರ ಶಬ್ದ ಕೋಶ” ಮತ್ತು “ಶಬ್ದ ಮತ್ತು ರಘು ವಂಶ”ಗಳನ್ನು ಕಲಿತಿದ್ದರು. ಪ್ರಾಥಮಿಕ ಶಾಲೆಯಿಂದ ಮಾಧ್ಯಮಿಕ ಶಾಲೆಗೆ ಬರುವಾಗಲೇ ದೇವುಡು “ರಾಮಾಯಣ”, “ಮಹಾಭಾರತ”, “ಭಾಗವತ”, “ಬ್ರಹ್ಮಾಂಡ ಪುರಾಣ”ಗಳನ್ನು ಓದಿ ಮುಗಿಸಿದ್ದರು, ಮತ್ತು ಎಲ್ಲಾ ತರದ ಆಟಗಳಲ್ಲಿ ಭಾಗವಹಿಸಿ ದೇಹದಾರ್ಡ್ಯದ ಕಡೆಗೂ ಗಮನ ನೀಡಿದ್ದರು. ತಮ್ಮ ಪ್ರಾಥಮಿಕ, ಮಾಧ್ಯಮಿಕ ಮತ್ತು ಕಾಲೇಜು ಶಿಕ್ಷಣವನ್ನು ಮೈಸೂರಿನಲ್ಲಿ ಪೂರೈಸಿದ ಇವರು 1917 ರಿಂದ 1922ರವರೆಗೆ ಮೈಸೂರು ಮಹಾರಾಜ ಕಾಲೇಜು ಮತ್ತು ಮೈಸೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾಗಿದ್ದರು. ಖ್ಯಾತ ಸಾಹಿತಿ ವಿ.ಸೀತಾರಾಮಯ್ಯ ಮತ್ತು ದೇವುಡು ಇವರು ಮೈಸೂರಿನಲ್ಲಿ ಸಹಪಾಠಿಗಳಾಗಿದ್ದು,…

Read More

ಬೆಂಗಳೂರು: ಮಣೂರ ಪ್ರಕಾಶನ ಕಲಬುರಗಿ ಇವರ ವತಿಯಿಂದ ಮಕರ ಸಂಕ್ರಾ೦ತಿ ನಿಮಿತ್ತ ಚೆನ್ನಮ್ಮಾಜಿಯವರ ಐಕ್ಯ ಸ್ಥಳವಾದ ಬೈಲಹೊಂಗಲದಲ್ಲಿ 13 ಜನವರಿ 2024ರಂದು ರಾಜ್ಯಮಟ್ಟದ ಕವಿಗೋಷ್ಠಿ ಆಯೋಜಿಸಲಾಗಿದೆ. ಈ ನಿಮಿತ್ತ ಉದಯೋನ್ಮುಖ ಹಾಗೂ ಪ್ರತಿಭಾವಂತ ಕವಿಗಳಿಂದ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ, ವೀರರಾಣಿ ಕಿತ್ತೂರು ಚನ್ನಮ್ಮ, ಸ್ವಾತಂತ್ರ‍್ಯ ಹೋರಾಟಗಾರರು, ಕನ್ನಡ ನಾಡು, ನುಡಿ, ಇತಿಹಾಸ, ಸಂಸ್ಕೃತಿ, ಪರಂಪರೆ, ಪರಿಸರ ಪ್ರೇಮ, ರಾಷ್ಟ್ರಪ್ರೇಮ, ಮಾನವೀಯ ಮೌಲ್ಯಗಳು ಇತ್ಯಾದಿ ವಿಷಯಗಳಿಗೆ ಸಂಬ೦ಧಿಸಿದ೦ತೆ ಕವನಗಳನ್ನು ಆಹ್ವಾನಿಸಲಾಗಿದೆ. ಕವನವು 30 ಸಾಲುಗಳಿಗೆ ಮಿಕ್ಕದಂತೆ ಕಾಗದದ ಒಂದೇ ಮಗ್ಗುಲಲ್ಲಿ ಬರೆದು ಅಥವಾ ಡಿ. ಟಿ. ಪಿ. ಮಾಡಿಸಿರಬೇಕು. ಸ್ವವಿಳಾಸ, ಕಿರುಪರಿಚಯ, ಭಾವಚಿತ್ರ, ವಾಟ್ಸಪ್ ಮೊಬೈಲ್ ಸಂಖ್ಯೆಯೊ೦ದಿಗೆ 05 ಜನವರಿ 2025ರ ಒಳಗಾಗಿ ಮೋಹನ ಬಸನಗೌಡ ಪಾಟೀಲ, ಮಾಜಿ ಜಿಲ್ಲಾಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ‘ಬಸವ ನಿವಾಸ’, ಚನ್ನಮ್ಮನಗರ ಮೊದಲನೆಯ ಅಡ್ಡರಸ್ತೆ, ಬೈಲಹೊಂಗಲ- 591102, ಬೆಳಗಾವಿ ಜಿಲ್ಲೆ. ಈ ವಿಳಾಸಕ್ಕೆ ನೋಂದಾಯಿತ ಅಂಚೆ ಮೂಲಕ ಕಳಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ 94489…

Read More

ತೆಕ್ಕಟ್ಟೆ: ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ, ರಂಗ ಸಂಪದ ಕೋಟ, ಧಮನಿ ಟ್ರಸ್ಟ್ ತೆಕ್ಕಟ್ಟೆ ಸಂಯುಕ್ತ ಆಶ್ರಯದಲ್ಲಿ ‘ಸಿನ್ಸ್ 1999 ಶ್ವೇತಯಾನ-90’ ಕಾರ್ಯಕ್ರಮದಡಿಯಲ್ಲಿ ನೀನಾಸಂ ಹೆಗ್ಗೋಡು ತಿರುಗಾಟದ ನಾಟಕ ಪ್ರದರ್ಶನ ದಿನಾಂಕ 27 ಡಿಸೆಂಬರ್ 2024ರಂದು ತೆಕ್ಕಟ್ಟೆಯ ಹಯಗ್ರೀವದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಿಧನರಾದ ಭಾರತದ ಮಾಜಿ ಪ್ರಧಾನ ಮಂತ್ರಿ ಶ್ರೀ ಮನಮೋಹನ್ ಸಿಂಗ್ ಇವರಿಗೆ ಪುಷ್ಪನಮನ ಸಲ್ಲಿಸಿದ ಸಿನ್ಸ್ 1999 ಶ್ವೇತಯಾನದ ಕಾರ್ಯಾಧ್ಯಕ್ಷ ಸುಜಯ್ ಶೆಟ್ಟಿ ಮಾತನಾಡಿ “ಅರ್ಥಶಾಸ್ತ್ರಜ್ಞ, ಶಿಕ್ಷಣ ತಜ್ಞ ಹಾಗೂ ಅಧಿಕಾರಿಯಾಗಿದ್ದ ಮನಮೋಹನ್ ಸಿಂಗ್ 10 ವರ್ಷಗಳ ಕಾಲ ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸಿ, ದೇಶದ ಆರ್ಥಿಕ ವ್ಯವಸ್ಥೆಯನ್ನು ಸುವ್ಯವಸ್ಥಿತವಾಗಿಸಿದವರು. ಸಂಸತ್ತಿನಲ್ಲಿ ಅದ್ಭುತ ಮಧ್ಯಸ್ಥಿಕೆಯನ್ನು ವಹಿಸಿ, ಜನರ ಜೀವನವನ್ನು ಸುಧಾರಿಸಲು ವ್ಯಾಪಕ ಪ್ರಯತ್ನ ಮಾಡಿದವರು. ಭಾರತವನ್ನು ಅಪಾರ ಬುದ್ಧಿವಂತಿಕೆಯಿಂದ, ಸಮಗ್ರತೆಯಿಂದ ಮುನ್ನಡೆಸಿ ಇದೀಗ ಅಗಲಿರುವುದು ಅತೀವ ನೋವು ತಂದಿದೆ.” ಎಂದರು. ಉಪನ್ಯಾಸಕ ಮೋಹನ್‌ಚಂದ್ರ ಪಂಜಿಗಾರು, ಮುಖ್ಯೋಪಾಧ್ಯಾಯ ದಿವಾಕರ್ ರಾವ್, ಉಪನ್ಯಾಸಕ ಕಿಶೋರ್ ಹಂದೆ ಉಪಸ್ಥಿತರಿದ್ದರು. ಹೆರಿಯ ಮಾಸ್ಟರ್…

Read More

ಮಂಗಳೂರು : ಹರಿಕಥಾ ಪರಿಷತ್ ಮಂಗಳೂರು ಇವರು ಉಡುಪಿ, ದ. ಕ. ಹಾಗೂ ಕಾಸರಗೋಡು ಜಿಲ್ಲೆಗಳ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಹರಿಕಥಾ ಸ್ಪರ್ಧೆಯು ದಿನಾಂಕ 25 ಡಿಸೆಂಬರ್ 2024ದಂದು ಕದ್ರಿ ಮಲ್ಲಿಕಟ್ಟೆಯ ಶ್ರೀಕೃಷ್ಣ ಕಲ್ಯಾಣಮಂದಿರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಎಸ್. ಕೆ. ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್‌ ಸೊಸೈಟಿ ಇದರ ಅಧ್ಯಕ್ಷರಾದ ಪಿ. ಉಪೇಂದ ಆಚಾರ್ಯ ಮಾತನಾಡಿ “ಆಧ್ಯಾತ್ಮ, ಪುರಾಣ, ಸಂಗೀತ ಮತ್ತು ಶಾಸ್ತ್ರೀಯತೆಗಳಿಂದ ಕೂಡಿರುವ ಹರಿಕಥಾ ಕಲೆಯು ಅಂತಃ ಸತ್ವದಿಂದ ಶಾಶ್ವತವಾಗಿ ಉಳಿಯುವ ಕಲೆ. ಸರಕಾರ ಹಾಗೂ ಸಾರ್ವಜನಿಕ ಸಂಸ್ಥೆಗಳಿಂದ ಇಂತಹ ಕಲೆಗೆ ಇನ್ನಷ್ಟು ಪ್ರೋತ್ಸಾಹದ ಅಗತ್ಯವಿದೆ.” ಎಂದರು. ಹರಿಕಥಾ ಪರಿಷತ್ ಇದರ ಅಧ್ಯಕ್ಷರಾದ ಕೆ. ಮಹಾಬಲ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕ. ಸಾ. ಪ. ಮಾಜಿ ಅಧ್ಯಕ್ಷರಾದ ಡಾ. ಹರಿಕೃಷ್ಣ ಪುನರೂರು ಶುಭ ಹಾರೈಸಿದರು. ಬೆಂಗಳೂರಿನ ಷಡ್ಜ ಕಲಾಕೇಂದ್ರ ಟ್ರಸ್ಟ್‌ ಇದರ ಸಂಚಾಲಕ ಡಾ. ದತ್ತಾತ್ರೆಯ ಎಲ್. ವೇಲಣ್ಕರ್, ವಿಜಯ ಬ್ಯಾಂಕ್ ಇದರ ನಿವೃತ್ತ ಮ್ಯಾನೇಜರ್…

Read More

ತಿಮ್ಮಪ್ಪ ಮತ್ತು ರುಕ್ಮಿಣಿ ದಂಪತಿಯ ಸುಪುತ್ರರಾದ ಇವರು ವೈದ್ಯಕೀಯ ವ್ಯಕ್ತಿಯಲ್ಲಿದ್ದುಕೊಂಡು ಸಾಹಿತ್ಯ ಕೃಷಿ ಮಾಡಿದ ಸಾಧಕ. ತಾಯಿ ರುಕ್ಮಿಣಿಯ ಸಹೋದರ ಶಿವಮೊಗ್ಗ ಜಿಲ್ಲೆಯ ಕೆಳದಿಯ ನಾಡಿಗ ಲಕ್ಷ್ಮೀನಾರಾಯಣ ಇವರ ಮನೆಯಲ್ಲಿ 1913 ಡಿಸೆಂಬರ್ 28ಕ್ಕೆ ಇವರ ಜನನವಾಯಿತು. ಇವರು ಮೂಲತಃ ಸೊರಬ ತಾಲೂಕಿನ ದೊಡ್ಡೇರಿ ಎಂಬ ಹಳ್ಳಿಯವರು. ಸಾಗರದ ಪುರಸಭೆಯ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಇವರು ಬಾಲ್ಯದಲ್ಲಿಯೇ ಕವಿತೆ ಮತ್ತು ಕಥೆಗಳ ರಚನೆ ಮಾಡುತ್ತಿದ್ದ ಸಾಹಿತ್ಯ ಪ್ರೇಮಿ. ಇವರ ಸಾಹಿತ್ಯ ರಚನೆಗೆ ಪ್ರೋತ್ಸಾಹ ನೀಡಿದವರು ಇವರ ಗುರುಗಳಾದ ಅಳಸಿಂಗಾಚಾರ್ಯರು. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದ ವೆಂಕಟಗಿರಿ ರಾವ್ ರಾಯಚೂರು ಜಿಲ್ಲೆಯ ಪಂಡಿತ ತಾರಾನಾಥರ ‘ಪ್ರೇಮ ವಿದ್ಯಾಪೀಠ’ದಲ್ಲಿ ಅಧ್ಯಯನ ಮಾಡಿ “ಆಯುರ್ವೇದ ಶಿರೋಮಣಿ ” ಡಿಪ್ಲೋಮಾ ಪದವಿಯನ್ನು ಪಡೆದು ಸಾಗರದಲ್ಲಿ ವೈದ್ಯ ವೃತ್ತಿ ಜೀವನಕ್ಕೆ 1938ರಲ್ಲಿ ಪಾದಾರ್ಪಣೆ ಮಾಡಿದರು. ಕೊಡಗಿನ ಗಣಪಯ್ಯನವರ ಸುಪುತ್ರಿ ಸಾವಿತ್ರಮ್ಮನೊಂದಿಗೆ ವಿವಾಹವಾದ ಇವರು ಗೃಹಸ್ಥಾಶ್ರಮದ ಹೊಸಿಲನ್ನು ಮೆಟ್ಟಿ ಮೂರು ಮಂದಿ ಗಂಡು ಮತ್ತು ಇಬ್ಬರು ಹೆಣ್ಣುಮಕ್ಕಳೊಂದಿಗೆ ಬೆಂಗಳೂರು ಜಿಲ್ಲೆಯ…

Read More

ಕುಂದಾಪುರ : ಉಪ್ಪಿನಕುದ್ರು ಗೊಂಬೆಯಾಟ ಅಕಾಡಮಿಯ ವತಿಯಿಂದ ಉಪ್ಪಿನಕುದ್ರು ಗೊಂಬೆಯಾಟ ರಂಗಭೂಮಿಯ ಹರಿಕಾರ, ಸೂತ್ರ ಕ್ರೀಡೆಯ ಗಾರುಡಿಗ ಶ್ರೀ ಕೊಗ್ಗ ದೇವಣ್ಣ ಕಾಮತ್ ಇವರ ಹೆಸರಿನಲ್ಲಿ ನೀಡುವ ೨೦೨೪-೨೫ರ ಸಾಲಿನ “ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ -2025” ಪ್ರಶಸ್ತಿಗೆ ಖ್ಯಾತ ಜಾದೂ ಕಲಾವಿದ, ಲೇಖಕ, ರಂಗ ಕಲಾವಿದ, ಚಲನಚಿತ್ರ ನಟ ಶ್ರೀ ಓಂ ಗಣೇಶ್ ಉಪ್ಪುಂದ ಇವರು ಆಯ್ಕೆಯಾಗಿದ್ದಾರೆ. ಉಪ್ಪುಂದ ದಿ. ನಾರಾಯಣ ಕಾಮತ್ ಹಾಗೂ ದಿ. ಮನೋರಮಾ ಕಾಮತ್ ಇವರ ಸುಪುತ್ರರಾಗಿ 20 ಜನವರಿ 1965 ರಂದು ಜನಿಸಿದ ಓಂ ಗಣೇಶ್ ಉಪ್ಪುಂದ, ಬೈಂದೂರು ಹಾಗೂ ಕುಂದಾಪುರದಲ್ಲಿ ಬಿ.ಕಾಂ. ತನಕ ವಿದ್ಯಾಭ್ಯಾಸ ಪಡೆದರು. ನಂತರ ನಾಟಕದಲ್ಲಿ ಅಭಿನಯ, ತಬಲಾ ನುಡಿಸುವುದನ್ನು ಕಲಿತು ಆರ್ಕೆಸ್ಟ್ರಾ ತಂಡ ಕಟ್ಟಿ ನಾಟಕಕ್ಕೆ ಹಿನ್ನೆಲೆ ಸಂಗೀತ ನುಡಿಸಿದವರು. ವಿಶ್ವದಾದ್ಯಂತ ಜಾದೂ ಪ್ರದರ್ಶನ ನೀಡಿದ ಜಾದೂಗಾರರೂ ಹೌದು. ಶ್ರೀಯುತರು ಹಲವಾರು ಸಿನೆಮಾಗಳಲ್ಲಿ ನಟಿಸಿದ್ದಾರೆ. ಜಾದೂ ಪ್ರದರ್ಶನದೊಂದಿಗೆ ಬೆರಳ ನೆರಳಿನಾಟ ಪ್ರದರ್ಶನ ನೀಡಿದವರು. ಹಲವಾರು ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಸೇವೆ…

Read More

ತೆಕ್ಕಟ್ಟೆ: ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ, ರಂಗ ಸಂಪದ ಕೋಟ, ಧಮನಿ ಟ್ರಸ್ಟ್ ಇದರ ಸಂಯುಕ್ತ ಆಶ್ರಯದಲ್ಲಿ ‘ಸಿನ್ಸ್ 1999 ಶ್ವೇತಯಾನ-89’ ಕಾರ್ಯಕ್ರಮದಡಿಯಲ್ಲಿ “ನಾಟಕಾಷ್ಟಕ” ಇದರ ಉದ್ಘಾಟನಾ ಸಮಾರಂಭವು ದಿನಾಂಕ 26 ಡಿಸೆಂಬರ್ 2024ರಂದು ತೆಕ್ಕಟ್ಟೆಯ ಹಯಗ್ರೀವದಲ್ಲಿ ನಡೆಯಿತು. ಸಂಸ್ಥೆಯ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಗೀತಾನಂದ ಫೌಂಡೇಶನ್ ಇದರ ಪ್ರವರ್ತಕರಾದ ಆನಂದ ಸಿ. ಕುಂದರ್ ಮಾತನಾಡಿ “ಸಮಾಜದ ಕುಂದು ಕೊರತೆಗಳನ್ನು ಜನರಿಗೆ ಮನ ಮುಟ್ಟುವಂತೆ ರಂಗರೂಪಕ್ಕಿಳಿಸಿ ಅಭಿನಯಿಸುವ ಕಲೆಯೇ ರಂಗಭೂಮಿ ನಾಟಕ. ಹಲವಾರು ಕಲಾ ಪ್ರಕಾರಗಳನ್ನು ಮೈಗೂಡಿಸಿಕೊಂಡು ಯಶಸ್ವೀ ಕಲಾವೃಂದದ ವೇದಿಕೆಯಲ್ಲಿ ಅನಾವರಣಗೊಳಿಸುತ್ತಿರುವುದು ಈ ಭಾಗದ ಜನಕ್ಕೆ ಬಹಳ ಉಪಯುಕ್ತವಾಗಿದೆ. ಕಲಾಸಕ್ತ ಮನಸ್ಸುಗಳಿಗೆ ಹತ್ತಿರವಾಗಿ ಬೆಳಗುತ್ತಿರುವ ಸಂಸ್ಥೆ ನೂರು ವರ್ಷ ಬದುಕಿ ಬಾಳಲಿ.” ಎಂದು ಹಾರೈಸಿದರು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ವೀರಯೋಧ ಅನೂಪ್ ಪೂಜಾರಿ ಇವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಗಣಪತಿ…

Read More

ಮಂಗಳೂರು: ‘ನಿಲ್ಲದ ಮನವಲ್ಲಿ ಪೋಗದೆ ಕಳುಹಿಸಲಾಗದೆ…’ ಪ್ರಾಣವಲ್ಲಭ ಭಾಗವತೆ ಶಾಲಿನಿ ಹೆಬ್ಬಾರ್ ಮಧುರ ರಾಗ ಚಾರುಕೇಶಿಯಲ್ಲಿ ದಕ್ಷಾಧ್ವರ ಪ್ರಸಂಗದ ಈ ಪದವನ್ನು ಏರುಧ್ವನಿಯಲ್ಲಿ ಹಾಡುತ್ತಿದ್ದರೆ, ಅವರ ಗುರು ಲೀಲಾವತಿ ಬೈಪಾಡಿತ್ತಾಯ ಅವರ ಭಾವಚಿತ್ರದ ಮೇಲೆ ದೃಷ್ಟಿ ನೆಟ್ಟಿದ್ದ ಯಕ್ಷಗಾನಪ್ರಿಯರ ಕಣ್ಣುಗಳು ಮಂಜಾಗಿದ್ದವು. ಈಚೆಗೆ ನಿಧನರಾದ ಬಜಪೆ ಸಮೀಪದ ತಲಕಲ ನಿವಾಸಿ, ಯಕ್ಷಗಾನ ಕ್ಷೇತ್ರದಲ್ಲಿ ಮಹಿಳಾ ಕ್ರಾಂತಿಗೆ ಕಾರಣರಾದ ಲೀಲಾವತಿ ಬೈಪಾಡಿತ್ತಾಯ ಅವರ ಮನೆಯ ಸಮೀಪದ ಕಾಶಿ ವಿಶ್ವನಾಥೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ದಿನಾಂಕ 26 ಡಿಸೆಂಬರ್ 2024ರ ಗುರುವಾರ ನಡೆದ ‘ಗಾನ ನಮನ’ ಕಾರ್ಯಕ್ರಮದಲ್ಲಿ ಲೀಲಾವತಿ ಅವರ ಶಿಷ್ಯರು ಮತ್ತು ಅಭಿಮಾನಿಗಳು ಯಕ್ಷಗಾನದ ಪದಗಳನ್ನು ಹಾಡಿ ಅಗಲಿದ ಕಲಾವಿದೆಯನ್ನು ಸ್ಮರಿಸಿದರು. ‘ನಿಲ್ಲದ ಮನವಲ್ಲಿ ಪೋಗದೆ…’ ಹಾಡಿಗೂ ಮೊದಲು ‘ಕಾಮಿನಿ ಮಣಿ ಕೇಳು..’ ಹಾಡಿಗೆ ಸಭಿಕರ ಒತ್ತಾಯದ ಮೇರೆಗೆ ಲೀಲಾವತಿ ಅವರ ಪತಿ ಹರಿನಾರಾಯಣ ಬೈಪಾಡಿತ್ತಾಯರು ಮದ್ದಲೆ ನುಡಿಸಿದರೆ ಪುತ್ರ ಅವಿನಾಶ್ ಬೈಪಾಡಿತ್ತಾಯ ಚೆಂಡೆ ಸಹಕಾರ ನೀಡಿದರು. ವಾಲಿಮೋಕ್ಷ ಪ್ರಸಂಗದ ‘ಕರುಣವಿಷ್ಟೇ ಸಾಕು..’ ಹಾಡು…

Read More